Test ಬೆಡಗಿನ ತಾಣ ಜಯಪುರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಕಲ್ಪನಾ ನಕ್ಷೆ

<mm>Flash</mm>

ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರ ಪರಿಚಯ

ಕನ್ನಡ ವಿಷಯ ವಿಶ್ವಕೋಶದಲ್ಲಿನ ಪ್ರವಾಸ ಕಥನ ಲೇಖನವನ್ನು ಓದಲು ಇಲ್ಲಿ ಕಿಕ್ಕಿಸಿರಿ

ಲೇಖಕರ ಪರಿಚಯ

  • ಪೂರ್ಣ ಹೆಸರು: ಕೋಟ ಶಿವರಾಮ ಕಾರಂತ
    ಕೋಟ ಶಿವರಾಮ ಕಾರಂತ
  • ಕಾರಂತರ ವಿವಿಧ ಚಿತ್ರಗಳನ್ನು ಇಲ್ಲಿ ವೀಕ್ಷಿಸಿರಿ
  • ಜನನ:ಅಕ್ಟೋಬರ್ ೧೦, ೧೯೦೨
  • ಜನನ ಸ್ಥಳ:ಸಾಲಿಗ್ರಾಮ, ಉಡುಪಿ ಜಿಲ್ಲೆ
  • ನಿಧನ:ಡಿಸೆಂಬರ್ ೯,೧೯೯೭ (ಮಣಿಪಾಲ, ಉಡುಪಿ)
  • ವೃತ್ತಿ:ಲೇಖಕಕರು
  • ಸಾಹಿತ್ಯ ಪ್ರಕಾರಗಳು:ಕಥೆ, ಕವನ, ಕಾದಂಬರಿ, ನಾಟಕ, ಯಕ್ಷಗಾನ
  • ಸಾಹಿತ್ಯ ಶೈಲಿ:ನವೋದಯ
  • ಆಕರ ಗ್ರಂಥ :-ಅಬೂವಿನಿಂದ ಬರಾಮಕ್ಕೆ
  • ಪ್ರಕಟಿತ ಕೃತಿಗಳು
    ಕಾರಂತರ ಉಚಿತ ಪುಸ್ತಕಗಳನ್ನು ನೋಡಲು ಮತ್ತು ಡೌನ್‌ಲೋಡ್ ಮಾಡಲು ಇಲ್ಲ ನೋಡಿರಿ

ಅಬೂವಿನಿಂದ ಬರಾಮಕ್ಕೆ
ಪಾತಾಳಕ್ಕೆ ಪಯಣ
ಅಪೂರ್ವ ಪಶ್ಚಿಮ
ಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨-ಸೆಪ್ಟೆಂಬರ್ ೧೨ ೧೯೯೭)- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.
ಜ್ಞಾನ ಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿ, ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಇವರನ್ನು ಅಲಂಕರಿಸಿರುವುದು ಇವರ ಬಹುಮುಖ ಪ್ರತಿಭೆಯನ್ನು ತೋರಿಸುತ್ತವೆ.

ಕಾರಂತರ ಹೆಚ್ಚಿನ ಮಾಹಿತಿಯ ವೀಡಿಯೋಗಳು

ನೀಡಿರುವ ಗದ್ಯಭಾಗದ ಹಿನ್ನಲೆ

`ದೇಶ ̧ಸುತ್ತು, ಕೋಶ ಓದು' ಎಂಬ ಗಾದೆಯನ್ನು ಕಾರಂತರಂಥವರನ್ನು ಗಮನಿಸಿಯೇ ಕಟ್ಟಿದ್ದಾರೋ ಏನೋ, ಕಾರಂತರ ವ್ಯಕ್ತಿತ್ವದ ಬಹು ವಿಶಿಷ್ಟ ಅಂಶವೇ ಇದೆಂದು ತೋರುತ್ತದೆ. ಅವರಿಗೆ ಬದುಕಿನೊಂದಿಗೆ ಇಂದ್ರಿಯ ಗ್ರಾಹ್ಯ ನಿಕಟ ̧ಸಂಪರ್ಕವೂ ಬೇಕು;ಅದನ್ನು ವೈಜ್ಞಾನಿಕವಾಗಿ,ಬೌದ್ಧಿಕವಾಗಿ ನಿಜಗೊಳಿಸುವ ಆಳವಾದ ಓದೂ ಬೇಕು. ಕಾರಂತರ ಪ್ರವಾಸ ಗ್ರಂಥಗಳು ಕನ್ನಡ ಗದ್ಯದಲ್ಲಿ ಪ್ರಮುಖ ಆಕರ್ಷಣೆಗಳು.`ಅಬೂವಿನಿಂದ ಬರಾಮಕ್ಕೆ',`ಅಪೂರ್ವ ಪಶ್ಚಿಮ', ಪೂರ್ವದಿಂದ ಅತ್ಯಪೂರ್ವಕ್ಕೆ' ಮುಂತಾದ ಕೃತಿಗಳು ನಮಗೆ ನೀಡುವ ಮಾಹಿತಿ, ಆ ಮಾಹಿತಿಯ ಬಗ್ಗೆ ಹುಟ್ಟಿಸುವ ಕುತೂಹಲ ಮುಖ್ಯವಾದದ್ದು. ಕಾರಂತರ ಪ್ರವಾಸ ಕಥನಗಳನ್ನು ಓದುವುದೆಂದರೆ ಅವರೊಂದಿಗೆ ಪ್ರವಾಸ ಮಾಡಿದಂತೆಯೇ, ಒಂದು ಪ್ರದೇಶದ ಚಾರಿತ್ರಿಕ, ಭೌಗೋಳಿಕ ̧ಸಾಂಸ್ಕೃತಿಕ ವಿವರಗಳು, ಅಲ್ಲಿನ ̧ಸಸ್ಯ, ಪ್ರಾಣಿ ಜಗತ್ತು, ಜನಜೀವನ ಯಾವುದೂ ಕಾರಂತರ ಕಣ್ಣು ತಪ್ಪಿಸಿಕೊಳ್ಳುವುದಿಲ್ಲ. ಕಾರಂತರ ಕೃತಿಗಳಲ್ಲಿ ಈ ಮಾಹಿತಿಗಳಿದ್ದರೂ ಕೇವಲ ದಾಖಲೆಗಳಾಗಿ ಮೂಡಿ ಬರದೆ ಒಟ್ಟು ಜೀವನಕ್ಕೆ ಅನ್ವಯವಾಗುವಂತೆಂಯೇ ಮೂಡಿಬರುವುದರಿಂದ ಮಹತ್ತ್ವಪೂರ್ಣವೆನಿಸುತ್ತದೆ. ಕಾರಂತರು ಪ್ರತ್ಯಕ್ಷ ಕಂಡಿದ್ದನ್ನು ಪ್ರಾಮಾಣಿಸಿ ನೋಡುವಂಥವರು. ಆದ್ದರಿಂದಲೇ ಅವರಿಗೆ ಗಾಸಿಪ್ಪುಗಳೂ, ಕಾಡು ಹರಟೆಗಳೂ ̧ಸೇರುವುದಿಲ್ಲ. ಅವರಿಗೆ ಹಾಸ್ಯಪ್ರಜ್ಞೆ ಇಲ್ಲವೆಂದಲ್ಲ. ಆದರೆ ಅದು ಕೇವಲ ಜೋಕುಗಳಲ್ಲಿ ಪರ್ಯವಸಾನಗೊಳ್ಳುವ ಹಾಗೆ ಪ್ರಜ್ಞೆಯಲ್ಲ. ಕಾರಂತರ ಹಾಸ್ಯಕ್ಕಿಂತ ವ್ಯಂಗ್ಯವೇ ಅತ್ಯಂತ ಕಟುವಾದದ್ದು. ಸಮಾಜದ ಮೌಢ್ಯವನ್ನು ಬಯಲಿಗೆಳೆಯಲು ಕಾರಂತರ ವ್ಯಂಗ್ಯ, ಚಾಟಿ ಏಟಿನಂತೆ ಬಳಕೆಯಾಗುತ್ತದೆ. ತಾವೇ ಹೊರಡಿಸುತ್ತಿದ್ದ `ವಸಂತ' ಪತ್ರಿಕೆಯಲ್ಲಿ, `ಗ್ನಾನ',`ದೇವದೂತರು', ಮೊದಲಾದ ಕೃತಿಗಳಲ್ಲಿ ಇದನ್ನು ಗಮನಿಸಬಹುದು. ಆದರೆ ಕಾರಂತರದು ಕೇವಲ ಮೂರ್ತಿಬಂಜಕ ಪ್ರವೃತ್ತಿ ಅಲ್ಲವಾದ್ದರಿಂದ ಅವರಿಗೆ ವ್ಯಂಗ್ಯವೇ ಒಂದು ಮೌಲ್ಯವಾಗಲಿಲ್ಲ.`ಹಳ್ಳಿಯ ಹತ್ತು ಸಮಸ್ತರು',`ಮೈಲಿಕಲ್ಲಿನೊಡನೆ ಮಾತುಕತೆಗಳು' ಕೃತಿಗಳಲ್ಲಿ ಕಾರಂತರ ವ್ಯಕ್ತಿತ್ವದ ಮತ್ತೊಂದು ಪದರ ವ್ಯಕ್ತವಾಗುವುದನ್ನು ಕಂಡಾಗ `ಕಾರಂತರು ಇದೇ' ಎಂದು ಹಣೆಪಟ್ಟಿ ಹಚ್ಚಾಗುವುದಿಲ್ಲ ಎಂಬುದನ್ನು ಗುರುತಿಸಿಕೊಳ್ಳುತ್ತೇವೆ.

ಪ್ರಸ್ತುತ ಗದ್ಯ ಪೀಠಿಕೆ

ಈ ಪಠ್ಯ ಭಾಗದಲ್ಲಿ ಲೇಖಕರು ರಾಜಸ್ಥಾನದ ತಮ್ಮ ಪ್ರವಾಸದ ಅನುಭವವನ್ನು ತಮ್ಮ ಸ್ವ ಅನುಭವದಂತೆ ಪಠ್ಯದ ಮೂಲಕ ತಿಳಿಸಿದ್ದಾರೆ? . ಭಾರತದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ನಗರಗಳಲ್ಲಿ ಒಂದಾದ ಜಯಪುರದ ಅಂದ ಚಂದ,ಅಲ್ಲಿನ ಜನರ ಉಡುಗೆ-ತೊಡುಗೆ,ಐತಿಹಾಸಿಕ ವೈಭವ ಜಾನಪದ ಕಲೆಗಳ ಸೊಗಸು,ಮೊದಲಾದ ವಿಚಾರಗಳ ಬಗ್ಗೆ ಲೇಖಕರು ತಿಳಿಸಿದ್ದಾರೆ. ಹಾಗೆಯೇ ಜಯಪುರದ ರಾಜರ ವೈಜ್ಞಾನಿಕತೆಗೆ ಸಾಕ್ಷಿಯಾದ ಜಂತ್ರ-ಮಂತ್ರ ಬಯಲು ಪ್ರಯೋಗಾಲಯದ ಬಗ್ಗೆ ವಿಶೇಷ ಉಲ್ಲೇಖವಿದೆ.

ಪ್ರಸ್ತುತ ಮಾಡಬೇಕಾದ ಪಾಠದ ವಿವರ

ಹಿನ್ನಲೆ>ಪ್ರಸ್ತುತ>ನಂತರ ಕ್ಷೇತ್ರ ಪರಿಚಯ ಗ್ರಂಥಗಳಲ್ಲಿ ಶಿವರಾಮ ಕಾರಂತರ ಅಬುವಿನಿಂದ ಬರಾಮಕ್ಕೆ ಒಂದು ಅಪೂರ್ವ ಕೃತಿ. ಅಬು, ಅಜ್ಮೀರ, ಪುಷ್ಕರ, ಜಯಪುರ, ಸಿಮ್ಲಾ, ಆಗ್ರ, ಕಾಶಿ, ಡಾಲ್ಮಿಯಾ, ಕಲ್ಕತ್ತ ಮತ್ತು ಬರಾಮಗಳಲ್ಲಿ ಸಂಚರಿಸಿ ಅಲ್ಲಿನ ನಿಸರ್ಗ ಮತ್ತು ಸಂಗೀತ, ಸಾಹಿತ್ಯ, ಜನಜೀವನಾದಿಗಳನ್ನು ಈ ಗ್ರಂಥದಲ್ಲಿ ಕಂಡರಿಸಿದ್ದಾರೆ. ಡಾ.ಕೋಟ ಶಿವರಾಮ ಕಾರಂತರು ತಮ್ಮ ಸ್ನೇಹಿತರ ಜೊತೆ ರಾಜಸ್ಥಾನದ ರಾಜಧಾನಿ ಜಯಪುರದ ಐತಿಹಾಸಿಕ ಸ್ಥಳಗಳಿಗೆ ಭೇಟಿಕೊಟ್ಟು ಪಡೆದ ಅನುಭವವನ್ನು ಈ 'ಅಬೂವಿನಿಂದ ಬರಾಮಕ್ಕೆ' ಪ್ರವಾಸ ಕಥನದಲ್ಲಿ ಸವಿವರವಾಗಿ ವಿವರಿಸಿದ್ದಾರೆ (ಪುಟದ ಸಂಖ್ಯೆ, ವಿಭಾಗ ಮತ್ತು ಪ್ರಾಮುಖ್ಯತೆ ಇತ್ಯಾದಿ)

ಪಾಠದ ಬೆಳವಣಿಗೆ

ಪಾಠದ ಅವದಿ ಸರ್ಕಾರ ನೀಡಿದೆ ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-1
ಜಯಪುರ ನನ್ನ ಪಾಲಿಗೆ ಹೊಸತಾಗಿರಲಿಲ್ಲ. ಹದಿನೈದು ವರ್ಷಗಳ ಹಿಂದೊಮ್ಮೆ ಹೋಗಿದ್ದೆ. ಈ ಬಾರಿ ನಾನು ಶ್ರೀಪತಿಯೂ ರೈಲಿನಿಂದ ಇಳಿದಾಗ ಬೆಳಗಿನ ಹನ್ನೊಂದು ಗಂಟೆಯ ಬಿಸಿಲು ಬಡಿಯುತ್ತಿತ್ತು.ಮಿತ್ರರಾದ ರೈ ಗಳು ನಿಲ್ದಾಣಕ್ಕೆ ಬಂದು ನಮಗಾಗಿ ಕಾದಿದ್ದರು. ನಮ್ಮನ್ನು ಊರ ಹೊರಗಿನ ಅವರ ಮನೆಗೆ ಕರೆದುಕೊಂಡುಹೋದರು. ಹೊರಗಡೆ ನಾಲ್ಕು ಸುತ್ತಲೂ ಉಸುಬು ಹರಡಿದ್ದ ಮರಿಭೂಮಿಯಲ್ಲಿ ಅವರ ಮನೆಯಿತ್ತು. ಅಲ್ಲಿ ಮಧ್ಯಾಹ್ನದ ವೇಳೆ ಸ್ನಾನಕ್ಕೆ ನೀರುಕಾಯಿಸುವ ಅಗತ್ಯವಿರಲಿಲ್ಲ, ಉಸುಬಿನ ಕಾವಿನಿಂದ ನಲ್ಲಿಯ ನೀರು ಕಾದೇ ಬರಿತ್ತಿತ್ತು. ನಾನೇನೋ ಬಿಸಿನೀರು ಸ್ನಾನ ಮಾಡುವವ. ಆದರೆ ನನಗೆ ಆದದ್ದು ಶ್ರೀಪತಿಗೆ ಆಗದು. ಶ್ರೀಪತಿ ತಣ್ಣೀರು ಮೀಯುತ್ತಿದ್ದ. ನೀರನ್ನು ಆರಿಸಿ ತಣ್ಣೀರಿನ ಸ್ನಾನ ಮಾಡಿದ. ಅನಂತರ ಊಟ ಮಾಡಿ ಒಂದೆರಡುತಾಸು ವಿಶ್ರಾಂತಿ ಪಡೆದೆವು. ನಮ್ಮ ಮೊದಲ ಕಾರ್ಯಕ್ರಮವೆಂದರೆ ಅಂಬೇರಕ್ಕೆ ಹೋಗುವುದು, ಊರ ಹೊರಗಿರುವ ನಮ್ಮ ಮಿತ್ರ ರೈಗಳಿಗೆ, ಅಂಬೇರಕ್ಕೂ,ಜಯಪುರಕ್ಕೂ ನಡುವೆ ಸಿಟಿ ಬಸ್ ನಡೆಯುತ್ತಿತ್ತೆಂದು ಸಹ ಗೊತ್ತಿರಲಿಲ್ಲ. ಹೀಗಾಗಿ ಟಾಂಗಾವನ್ನು ಗೊತ್ತುಮಾಡಿಕೊಂಡು,ನಗರದ ಮದ್ಯಭಾಗದಿಂದ ಹಾದು ಹೋದೆವು.
ವಿವರಣೆ
ಬಳಸಬಹುದಾದ ಬೋಧನೋಪಕರಣಗಳು ತಮಗೆ ಸರಿತೋರಿದ ಕಡೆ ಬಳಸಬಹುದು
ಶಬ್ದಕೋಶ/ಪದ ವಿಶೇಷತೆ
ವ್ಯಾಕರಣಾಂಶ
ಚಟುವಟಿಕೆ
ಮೌಲ್ಯಮಾಪನ
ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-2

ವ್ಯಾಕರಣ/ಛಂದಸ್ಸು/ಅಲಂಕಾರ

ಉಪಸಂಹಾರ

ಮೌಲ್ಯಮಾಪನ