ಇತಿಹಾಸದ ಚಕ್ಕಡಿ ಅರವಿಂದ ಮಾಲಗತ್ತಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪಠ್ಯದ ಗುರಿ ಮತ್ತು ಉದ್ದೇಶ

  • ಜೀವನ ಕೌಶಲಗಳು
  1. ಬಡ ವಿದ್ಯಾರ್ಥಿಗಳ ಓದಿನ ಹಂಬಲ ಮತ್ತು ಯಶಸ್ಸು
  2. ಗ್ರಾಮೀಣ ಕಲಿಕಾ ಪರಿಸರ
  3. ಓದುವ ಮಕ್ಕಳಿಗೆ ಗಾಮೀಣ ಪರಿಸರದ ಸಹಾಯ
  • ಭಾಷಾ ಕೌಶಲಗಳು
  1. ಸರಳ ಚಂಪು ಸಾಹಿತ್ಯ ಪರಿಚಯ
  2. ಉತ್ತರ ಕರ್ನಾಟಕದ ಭಾಷೆಯ ಪರಿಚಯ
  3. ಸ್ವ ನಿರೂಪಣೆಯ ಮಾದರಿ
  4. ದಲಿತ ಸಾಹಿತ್ಯದ ಮಹತ್ವ

<mm>Flash</mm>

ಘಟಕ -1

ಪರಿಕಲ್ಪನೆ

ಗದ್ಯ ಭಾಗದ ಪೂರ್ವ ಪೀಠಿಕೆ

ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರ ಪರಿಚಯ

  1. ದಲಿತ ಸಾಹಿತ್ಯ

ದಲಿತ ಸಂವೇದನೆಯ ಸಾಹಿತ್ಯ ಪ್ರಕಾರವೇ ದಲಿತ ಸಾಹಿತ್ಯ. ದಲಿತಸಾಹಿತ್ಯ ಎಂಬುದು ಕೇವಲ ನಮ್ಮ ಪರಿಸರದಲ್ಲಿ ಮಾತ್ರ ಕಾಣಿಸಿಕೊಂಡದ್ದಲ್ಲ, ಈಚೀಚೆಗೆ ಭಾರತದಲ್ಲಿ ಸ್ಪಷ್ಟವಾಗಿ ರೂಪುತಾಳುತ್ತಿರುವ ಒಂದು ಜಾಗತಿಕ ಸಾಹಿತ್ಯಪ್ರಭೇದ. ಜಗತ್ತಿನಾದ್ಯಂತ, ಎಚ್ಚರುತ್ತಿರುವ, ಶತಶತಮಾನಗಳ ಕಾಲ ದಮನಕ್ಕೆ ಒಳಗಾದ, ಕೆಳಪದರದ ವಿಶಿಷ್ಟ ದನಿ ಇದು.ನವೋದಯ, ಪ್ರಗತಿಶೀಲ, ನವ್ಯ ಇತ್ಯಾದಿಗಳಿಗೆ ಹೇಗೆ ಗುರುತಿಸಬಲ್ಲ ನಿಲುವುಗಳಿವೆಯೋ ಹಾಗೆಯೇ ದಲಿತ ಸಾಹಿತ್ಯಕ್ಕೆ ವಿಶಿಷ್ಟವಾದ ಗುಣ-ಲಕ್ಷಣ ಧೋರಣೆಗಳಿವೆ. ಯಾವುದೇ ಸಾಹಿತ್ಯಕ ಆಂದೋಲನಗಳಿಗಿರುವಂತೆ ಇಲ್ಲಿಯೂ ರಭಸ, ಘೋಷಣೆಗಳಿವೆ. ಆದರೆ ಕೇವಲ ಘೋಷಣೆಗಳನ್ನು ಕೂಗಿದಷ್ಟಕ್ಕೆ ಯಾವುದೇ ಸಾಹಿತ್ಯ ಚಳುವಳಿ ಮೌಲಿಕವಾಗುವುದಿಲ್ಲ. ಘೋಷಣೆಯಿಂದಾಚೆಗೆ ಅಥವಾ ಹಿನ್ನೆಲೆಗೆ ಯಾವ ಸೈದ್ಧಾಂತಿಕ ನಿಲುವುಗಳಿವೆ ಎನ್ನುವುದು ಮುಖ್ಯ. ಹಾಗೆಂದು, ಈ ಸೈದ್ಧಾಂತಿಕ ನಿಲುವುಗಳೂ ಸಹ, ಪರಿಸ್ಥಿತಿಯ ಅನಿವಾರ‍್ಯತೆಯಿಂದ, ತಕ್ಕಷ್ಟು ಚಿಂತನೆಯಿಂದ ನಿಷ್ಪನ್ನಗೊಂಡವುಗಳಾಗದೆ, ಯಾವ್ಯಾವೋ ರಾಜಕೀಯ ಪಕ್ಷಗಳ ವಿವಿಧೋದ್ದೇಶ ಮೂಲವಾದ ತಂತ್ರಗಳಾಗಿದ್ದರಂತೂ, ಅಲ್ಲಿ ಸಾಹಿತ್ಯಕ್ಕೆ ಅಪಾಯ ತಪ್ಪಿದ್ದಲ್ಲ. ಯಾವುದೇ ಸಾಹಿತ್ಯ ನಿರ್ಮಿತಿ ಸಿದ್ಧಾಂತಗಳನ್ನು ಮೀರಿ ನಿಲ್ಲುವುದರಿಂದ ಮಾತ್ರ ನಿಜವಾಗಿಯೂ ಮೌಲಿಕವಾಗಬಲ್ಲದು.(ಸಂಗ್ರಹ:ಕಣಜ)

  1. ಆತ್ಮ ಕಥೆ

ಜೀವನ ಚರಿತ್ರೆಯ ಒಂದು ವಿಶಿಷ್ಟ ಪ್ರಕಾರದ ಆತ್ಮಕಥೆ.ವ್ಯಕ್ತಿ ತನ್ನ ಜೀವನ ವಿವರವನ್ನು ಸ್ವತಃ ಬರೆದು ಧಾಖಲಿಸುವುದೇ ಆತ್ಮಕತೆ.ಬದುಕಿನ ಸಿಹಿ ಕಹಿಗಳೆರಡನ್ನೂ ಸ್ವತಂತ್ರವಾಗಿ ಮನಬಿಚ್ಚಿ ಹೇಳುವ ಅನುಭವ ನಿರೂಪಣೆ.ಸಿಂಹಾವಲೋಕನ ಕ್ರಮದಲ್ಲಿ ಸಾದರಪಡಿಸುವ ಸ್ಮೃತಿ ಚಿತ್ರಗಳೇ ಆತ್ಮಕಥೆ.
ಹೆಚ್ಚಿನ ಮಾಹಿತಿ

ಲೇಖಕರ ಪರಿಚಯ

ಈ ಆತ್ಮಕಥೆಯ ಲೇಖಕರಾದ ಶ್ರೀ ಅರವಿಂದ ಮಾಲಗತ್ತಿರವರು ಕ್ರಿ.ಶ 1956 ರಲ್ಲಿ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು.ಕರ್ನಾಟಕ ವಿವಿ ಇಂದ ಎಮ್ ಎ ಪಿ ಎಚ್ ಡಿ ಪದವಿ ಪಡೆದು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಇವರ

  • ಕವನ ಸಂಕಲನಗಳು - ಮೂಕನಿಗೆ ಬಾಯಿ ಬಂದಾಗ,ಕಪ್ಪು ಕಾವ್ಯ,ಮೂರನೇ ಕಣ್ಣು
  • ಕಥಾ ಸಂಕಲನಗಳು - ಮುಗಿಯದ ಕಥೆಗಳು
  • ಕಾದಂಬರಿ -ಕಾರ್ಯ
  • ಆತ್ಮ ಕಥೆ - ಗೌರ್ಮೆಂಟ್ ಬ್ರಾಹ್ಮಣ
  • ವಿಮರ್ಶಾಕೃತಿಗಳು - ಜಾನಪದ ಶೋಧ,ಭೂತಾರಾಧನೆ
  • ಪ್ರಶಸ್ತಿ/ಪುರಸ್ಕಾರ -ಮೂಕನಿಕೆ ಬಾಯಿ ಬಂದಾಗ ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ,ಗೌರ್ಮೆಂಟ್ ಬ್ರಾಹ್ಮಣ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ

ಹೆಚ್ಚಿನ ವಿವರಗಳಿಗಾಗಿ

  1. ಮಾಲಗತ್ತಿರವರ ಭಾವಚಿತ್ರವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿರಿ
  2. ಕನ್ನಡ ವಿಕಿಪೀಡೀಯಾದಲ್ಲಿನ ಅರವಿಂದ ಮಾಲಗತ್ತಿರವರ ವಿಚಾರವನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ
  3. ಕ ಸಾ ಅಕಾಡೆಮಿಯ ಸ್ವಂತ ಕವಿಯ ಓದು ವೀಕ್ಷಸಲು ಇಲ್ಲಿ ಕ್ಲಿಕ್ಕಿಸಿರಿ
  4. ಕನ್ನಡ ಸಂಸ್ಕೃತಿ ಇಲಾಖೆಯ ಅರವಿಂದ ಮಾಲಗತ್ತಿರವರ ಕಿರುಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ

ಚಟುವಟಿಕೆ - 01

  • ಚಟುವಟಿಕೆಯ ಹೆಸರು;ಅರವಿಂದ ಮಾಲಗತ್ತಿಯವರ ಪರಿಚಯ
  • ಚಟುವಟಿಕೆಯ ಗುರಿ ಮತ್ತು ಉದ್ದೇಶ"

ಜೀವನ ಕೌಶಲ ;
ಉತ್ತಮ ಹವ್ಯಾಸ ಬೆಳೆಸಿಕೊಳ್ಳಲು ಹವ್ಯಾಸದ ವಿಮರ್ಶೆ
ಭಾಷಾ ಕೌಶಲ ;
ಆಲಿಸುವುದು ಆಲೋವನೆ ಮತ್ತು ಬರವಣಿಗೆ ದಾಖಲೆ ಇಡುವ ಬಗ್ಗೆ

  • ಸಮಯ:15ನಿಮಿಷಗಳು
  • ಸಾಮಗ್ರಿಗಳು/ಸಂಪನ್ಮೂಲಗಳು; ಭಾವಚಿತ್ರ, ವೀಡಿಯೋ,ಪುಸ್ತಕಗಳು
  • ವಿಧಾನ/ಪ್ರಕ್ರಿಯೆಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು.ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು ಮತ್ತು ಬೋರ್ಡ್ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ ,ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.
  • ಚರ್ಚಾ ಪ್ರಶ್ನೆಗಳು;

೧. ಕನ್ನಡ ಸಾಹಿತ್ಯಕ್ಕೆ ಮಾಲಗತ್ತಿಯವರ ಕೊಡುಗೆ ಏನು?
೨. ಮಾಲಗತ್ತಿಯವರ ಇತರೇ ಆಸಕ್ತಿ ತಿಳಿಸಿರಿ?

  • ಮೌಲ್ಯಮಾಪನ ಪ್ರಶ್ನೆಗಳು

ನೀಡಿರುವ ಗದ್ಯಭಾಗದ ಹಿನ್ನಲೆ

ಅರವಿಂದ ಮಾಲಗತ್ತಿಯವರ ಸುಪ್ರಸಿದ್ದ ಆತ್ಮಕಥೆ 'ಗೌರ್ಮಟ್ ಬ್ರಾಹ್ಮಣ'ಕೃತಿಯ ಕೆಲವು ಮಹತ್ವದ ಘಟನೆಗಳಿಂದ ಈ ಭಾಗವನ್ನು ಆಯ್ಕೆಮಾಡಿಕೊಳ್ಳಲಾಗಿದೆ.

ಪ್ರಸ್ತುತ ಗದ್ಯ ಪೀಠಿಕೆ

ಅವರ ಬಾಲ್ಯದ ಓದು ಮತ್ತು ಕಲಿಕಾ ಪರಿಸರವನ್ನು ಉಲ್ಲೇಖಿಸುವಾಗ ಈ ಸನ್ನಿವೇಗಳು ಬಂದಿವೆ

ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು ಮತ್ತು ವಿವರ

  • ಜೀವನ ವಿಚಾರಗಳು

ದಲಿತ ಮಕ್ಕಳ ಓದು,ಶಾಲಾ ಪರಿಸರ ,ಶಿಕ್ಷಕರ ಸಹಾಯ, ಕೇರಿಯವರ ಗೇಲಿ,ಸ್ನೇಹಿತನನ್ನು ನೋಡಿ ಓದಲು ಕಲಿತ್ತದ್ದು

  • ಭಾಷಾ ವಿಚಾರಗಳು

ಉತ್ತರ ಕರ್ನಾಟಕದ ಭಾಷೆ,ನಿರೂಪಣಾ ಶೈಲಿ,

ಘಟಕ - 1 ರ ಮೌಲ್ಯಮಾಪನ

  • ಆತ್ಮ ಕಥೆ ಎಂದರೇನು? ನಮಗೆ ಯಾರ ಆತ್ಮ ಕಥೆ ಓದಬೇಕೆಂದು ಆಸೆ ಇದೆ.
  • ಲೇಖಕರ ಸಂಪೂರ್ಣ ಸಾಹಿತ್ಯ ಪ್ರಕಾರಗಳನ್ನು ಪಟ್ಟಿಮಾಡಿ

ಘಟಕ-2

ಪರಿಕಲ್ಪನೆ

ಮೊಳಕೆಯೊಡೆದ ಓದಿನ ಹವ್ಯಾಸ

ಪೀಠಿಕೆ

ಪ್ರತಿಯೊಬ್ಬರ ಜೀವನದಲ್ಲೂ ತೀರುವೊಂದು ಬಂದು ತಮ್ಮ ಜೀವನದ ದಿಕ್ಕನ್ನೇ ಬದಲಿಸಿ ಮತ್ತೆಲ್ಲಿಗೋ ಕರೆದೊಯ್ಯುತ್ತದೆ. ಕೆಲವರಿಗೆ ಇದು ಒಳಿತಾದರೆ ಮತ್ತೆ ಕೆಲವರಿಗೆ ಇದು ಮಾರಕವಾಗುತ್ತದೆ. ಅದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು. ಉದಾ;ಗಾಂಧಿಜೀಯವರ ರೈಲು ಪ್ರಯಾಣ.

ವಿವರಣೆ

ಚರ್ಚಿಸಬೇಕು ತಿಳಿಸಬೇಕಾದ ಪ್ರಮುಖ ಅಂಶ

ವ್ಯಾಕರಣಾಂಶ/ಛಂದಸ್ಸು

ಶಬ್ದಕೋಶ/ಪದ ವಿಶೇಷತೆ

  • ಮೀ= ಸ್ನಾನ ಮಾಡು

ಚಟುವಟಿಕೆ 3

ಘಟಕ 2ರ ಮೌಲ್ಯಮಾಪನ

ಘಟಕ -3

ಪರಿಕಲ್ಪನೆ

ಮಾಲಗತ್ತಿಯವರ ಪರೀಕ್ಷಾ ತಯಾರಿ

ವಿವರಣೆ

ಚಟುವಟಿಕೆ-4

  1. ಚಟುವಟಿಕೆ; ಹಾಸ್ಯ ಅನುಭವದ ಲೇಖನ ರಚನೆ
  2. ವಿಧಾನ/ಪ್ರಕ್ರಿಯೆ ;ಬರವಣಿಗೆ ಮತ್ತು ಚರ್ಚೆ
  3. ಸಮಯ ;೨೦ ನಿಮಿಷ
  4. ಸಾಮಗ್ರಿಗಳು/ಸಂಪನ್ಮೂಲಗಳು:ಪುಸ್ತಕದಲ್ಲಿ ಬರೆಯುವುದು
  5. ಹಂತಗಳು ;ಮಕ್ಕಳಿಗೆ ತಾವು ಆಸಕ್ತಿ ಯಿಂದ ಓದುವ ಸಂದರ್ಭದಲ್ಲಿ ಸಂಭವಿಸಿದ ಹಾಸ್ಯ ಪ್ರಸಂಗ ತೊಂದರೆ ಮತ್ತು ಅದಕ್ಕೆ ತಾವು ಕೈಗೊಂಡ ಕ್ರಮದ ಬಗ್ಗೆ ಲಘು ಅನುಭವ ಲೇಖನ ಬರೆಯಿರಿ
  6. ಚರ್ಚಾ ಪ್ರಶ್ನೆಗಳು;
  • ಮಕ್ಕಳ ಅನುಭವ ಹಂಚಿಕೆಯ ನಂತರ ಅದಕ್ಕೆ ತಕ್ಕಂತೆ ಪೂರಕ ಪ್ರಶ್ನೆಗಳನ್ನು ಕೇಳಬಹುದು

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

ಚಟುವಟಿಕೆ- 5

ಘಟಕ 3ರ ಮೌಲ್ಯಮಾಪನ

ಘಟಕ -4

ಪರಿಕಲ್ಪನೆ

ಬಲ್ಬ ಬದಲಾವಣೆಯ ಪ್ರಸಂಗ

ವಿವರಣೆ

File:ಚಟುವಟಿಕೆಯ ಮಾದರಿ ರೂಪುರೇಷೆ.odt

ಚಟುವಟಿಕೆ

  1. ಚಟುವಟಿಕೆಯ ಹೆಸರು; ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು
  2. ವಿಧಾನ/ಪ್ರಕ್ರಿಯೆ: ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು
  3. ಸಮಯ: 15ನಿಮಿಷಗಳು
  4. ವೃದ್ದಿಗೊಳ್ಳುವ ಸಾಮರ್ಥ್ಯಗಳು ; ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
  5. ಹಂತಗಳು: ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15 -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆಹೇಳಲು ತಿಳಿಸುವುದು ,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಕತೆ ಹೇಳಬೇಕು . ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,
  6. ಸಾಮಗ್ರಿಗಳು/ಸಂಪನ್ಮೂಲಗಳು; 10-15 ಭಾವಚಿತ್ರಗಳು, ಮಾದರಿ ಕತೆ (ಮಕ್ಕಳಿಗೆ ಮಾದರಿ ತೋರಿಸಿದರೆ ಬೇಗನೇ ಸಿದ್ದರಾಗುತ್ತಾರೆ)
  7. ಚರ್ಚಾ ಪ್ರಶ್ನೆಗಳು;
  • ಈ ಕಥೆಯಿಂದ ಏನನ್ನು ಕಲಿತುಕೊಂಡಿರಿ ? (ನೀತಿ,ಮೌಲ್ಯ)
  • ಕತೆ ಹೇಳುವಾಗಿನ ತಪ್ಪು ಉಚ್ಚಾರಣೆಯ ಪದಗಳಾವುವು ?
  • ಈ ಕತೆಯನ್ನು ಬದಲಿಸಿ ಹೇಗೆ ಹೇಳ ಬಹುದಿತ್ತು?

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

  1. ಶಿಕ್ಷಕರು ದ್ವಿರುಕ್ತಿ ,ಅನುಕರಣಾವ್ಯಯ ಮತ್ತು ಜೋಡುನುಡಿ ಪದಗೊಂಚಲುಗಳ ಮಿಶ್ರಣ ಮಾಡಿ ಪ್ರದರ್ಶಿಸುವುದು.
  2. ವಿದ್ಯಾರ್ಥಿಗಳು ಪರಸ್ಪರ ಚರ್ಚಿಸಿ ವಿಭಾಗೀಕರಿಸುವುದು.
  3. ವಿದ್ಯಾರ್ಥಿಗಳ ಅನುಮಾನವನ್ನು ಪರಿಹರಿಸುವುದು ಮತ್ತು ತಾವೇ ಅಂತಹ ಪದಗಳನ್ನು ಪಟ್ಟಿ ಮಾಡುವಂತೆ ಪ್ರೇರೇಪಿಸುವುದು.
  4. ಕರ್ತರಿ-ಕರ್ಮಣಿ ವಾಕ್ಯವನ್ನು ಕರಿಹಲಗೆಯ ಮೇಲೆ ಬರೆದು ವಿದ್ಯಾರ್ಥಿಗಳು ಅವುಗಳ ವ್ಯತ್ಯಾಸವನ್ನು ಗುರುತಿಸುವಂತೆ ಮಾಡುವುದು. ಅವುಗಳ ಬಗ್ಗೆ ಅರಿಯುವುದು.
  5. ಬೇರೆ ಬೇರೆ ಕ್ರಿಯಾಪದಗಳನ್ನು ನೀಡಿ , ವುಗಳ ಅರ್ಥವ್ಯತ್ಯಾಸಗಳನ್ನು ಚರ್ಚಿಸಿ ಅರಿತುಕೊಳ್ಳುವುದು.


ಚಟುವಟಿಕೆ

  1. ಚಟುವಟಿಕೆಯ ಹೆಸರು ;ಉತ್ತರ ಕರ್ನಾಟಕದ ಜಾನಪದ ಕುಣಿತಗಳ ಪರಿಚಯ
  2. ಸಮಯ ;15 ನಿಮಿಷಗಳು
  3. ಸಾಮಗ್ರಿಗಳು/ಸಂಪನ್ಮೂಲಗಳು ; ಪೇಪರ್ ಮತ್ತು ಪೆನ್
  4. ವಿಧಾನ/ಪ್ರಕ್ರಿಯೆ ; ಕೆಲವು ಜಾನಪದ ಕುಣಿತಗಳನ್ನು ಪಟ್ಟಿಮಾಡಲು ತಿಳಿಸುವುದು . ಪ್ರತಿ ತಂಡಕ್ಕೂ ಯಾವುದಾದರು ಒಂದು ಜಾನಪದ ಕುಣಿತವನ್ನು ನೀಡಿ ಚರ್ಚೆ ಮಾಡಿ ಪ್ರಬಂಧ ಬರೆದು ಮಂಡಿಸಲು ತಿಳಿಸುವುದು. (ಒಂದು ಕುಣಿತ ಮಾತ್ರ ನೀಡುವುದು ಹಾಗು ತಂಡದ ನಾಯಕ ಮಂಡನೆ ಮಾಡಬಹುದು). ಮೂರನೇ ಗುಂಪಿನ ಮಕ್ಕಳಿಗೆ ಪಾಠದ ಯಾವುದಾದರು ಪುಟವನ್ನು ನೀಡಿ ಸ್ವರಾಕ್ಷರ ಪದಗಳು ಅಥವ ವ್ಯಂಜನಾಕ್ಷರ ಪದ ಗುರ್ತಿಸಿ ಬರೆಯಲು ತಿಳಿಸುವುದು (ಪಠ್ಯಪುಸ್ತಕದ ಪರಿಚಯವಾಗುತ್ತದೆ).
  5. ಚರ್ಚಾ ಪ್ರಶ್ನೆಗಳು ;
  6. ವೃದ್ದಿಗೊಳ್ಳುವ ಸಾಮರ್ಥ್ಯಗಳು ;ಮಾತನಾಡುವುದು,ಆಲಿಸುವುದು,ಓದುವುದು,ಸಾಮಾಜಿಕ ಹೊಂದಾಣಿಕೆ,ಅಕ್ಷರ ಪರಿಚಯ,ಬರವಣಿಗೆ
  7. ಮೌಲ್ಯಮಾಪನ ಪ್ರಶ್ನೆಗಳು ;
  • ನಿಮಗೆ ಇಷ್ಟವಾದ ಜಾನಪದ ಕುಣಿತ ಯಾವುದು? ಏಕೆ ?
  • ಜಾನಪದ ಕಲೆಗಳನ್ನು ಉಳಿಸಬೇಕು,ಏಕೆ?

ಘಟಕ 4ರ ಮೌಲ್ಯಮಾಪನ

ಉಪಸಂಹಾರ

ಪಠ್ಯದ ಮೌಲ್ಯಮಾಪನ

  1. ಹತ್ತಿರದ ಯಾವುದಾದರೂ ಒಂದು ಪ್ರವಾಸಿ ತಾಣಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ,ಪಡೆದ ಅನುಭವವನ್ನು ಕುರಿತು ಬರೆಯುವಂತೆ ಹೇಳುವುದು.
  2. ಕರ್ನಾಟಕದ ಪ್ರಸಿದ್ದ ಕವಿಗಳ ಪಟ್ಟಿಯನ್ನು ತಯಾರಿಸಿಕೊಂಡು ಬರುವಂತೆ ಮಾಡುವುದು.
  3. ಕೆಲವು ಐತಿಹಾಸಿಕ , ಪೌರಾಣಿಕ ಸ್ಥಳಗಳನ್ನು ಕುರಿತು ರಸಪ್ರಶ್ನೆಯನ್ನು ನಡೆಸುವುದು.
  4. ಕನ್ನಡದ ೧೦ ಪ್ರಮುಖ ಆತ್ಮಕಥೆಗಳನ್ನು ಪಟ್ಟಿಮಾಡಿ

ಶಿಕ್ಷಕರಿಗೆ ಸಂಪನ್ಮೂಲ

ಮಕ್ಕಳಿಗೂ ಕೇಳಿಸಬಹದೇ? 2. ಅರವಿಂದ ಮಾಲಗತ್ತಿಯವರ ಸಂಭಾಷಣೆಯನ್ನು

   ಕೇಳಿಸಿಕೊಂಡು ನಂತರ ಚರ್ಚಿಸಿರಿ

ಮಕ್ಕಳ ಚಟುವಟಿಕೆ

ಯಾವುದು ಎಂಬುದರ ಬಗ್ಗೆ ಗೊಂದಲವಿದೆ. [೧].
[೨]

ಆಕರ ಸೂಚಿ

  • ಕಣಜ
  • ಲೇಖಕರ ಗರ್ನಮೆಂಟ್ ಬ್ರಾಹ್ಮಣ ಕೃತಿ
  • ವಿಕಿಪೀಡಿಯಾ

ಪ್ರಸ್ತುತ ಮಾಡಬೇಕಾದ ಪಾಠದ ವಿವರ

ಹಿನ್ನಲೆ>ಪ್ರಸ್ತುತ>ನಂತರ ಅಮ್ಮನ ಗುಡ್ಡಕ್ಕೆ ಹೋಗಿ ಓದಿತ್ತಿದ್ದದ್ದು.ಅವರ ಓದಿನ ಪರಿ

ಪಾಠದ ಬೆಳವಣಿಗೆ

  1. 'ಜಯಪುರದೊಳಗೊಂದು ಸುತ್ತು 'ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ
  2. 'ಜಯಪುರ ಬಣ್ಣಗಾರರ ತವರೂರು' ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ