ಜನಪದ ಚರಿತ್ರೆಯ ಸ್ವರೂಪ ಮತ್ತು ಲಕ್ಷಣಗಳು ಚಟುವಟಿಕೆ 1

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೦:೧೯, ೧೮ ಜುಲೈ ೨೦೧೪ ರಂತೆ Sathish mr (ಚರ್ಚೆ | ಕಾಣಿಕೆಗಳು) ಇವರಿಂದ (→‎ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಚಟುವಟಿಕೆ ಹೆಸರು:ಜನಪದ ಗೀತೆಗಳಿಂದ ಚರಿತ್ರೆ ರಚನೆ

ಅಂದಾಜು ಸಮಯ

೨೦ ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಜನಪದ ಗೀತೆಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಜನಪದ ಗೀತೆಗಳನ್ನು ಹಾಡುವುದು ಮತ್ತು ಅರ್ಥಪೂರ್ಣವಾಗಿ ಓದುವುದು.

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)


ಹೊಸ ಬಂಡಿಯ ಮೇಲೆ ಹಸುವಿನ ಗೊಬ್ಬರ ತಂದು
ಹಸಿದ ಭೂದೇವಿಗೆ ಹಾಕಿ | ಹಸಿದ
ಮಕ್ಕಳ ಕಾಯವ್ವ ನನ ತಂದೆಯೇ ||


ಕಸವ ಹೊಡೆಯುವ ಕೈ ಕಸ್ತೂರಿ ನಾತಾವ
ಬಸವಣ್ಣ ನಿನ್ನ ಸಗಣೀಯ ಬಳಿದ ಕೈ
ಎಸಳ ಯಾಲಕ್ಕಿ ಗೊನಿನಾತ


ಬಂಗಾರದ ಕೊಳಗ ಬಲಗೈಲಿ ತಕ್ಕೊಂಡು
ಬತ್ತ ಅಳೆದನೋ ಬಡವರಿಗೆ | ಅಣ್ಣಯ್ಯ
ರಾಶಿ ಅಳೆಯೋದು ಬೆಳಗಾದೊ


ಭೂಮಿ ಹುಟ್ಟಿದ ಮೊದಲು | ಭೂಮಿ ಕಟ್ಟಿದ ಮೊದಲು
ಭೂಪ ಹುಟ್ಟಿದ ಬಸವಯ್ಯ | ಮ್ಯಾಗಿನ
ಶಿವಗೇಳು ದಿನಕೆ ಹಿರಿಯನ

ಈ ಗೀತೆಗಳನ್ನು ಓದಿ ಅದರಲ್ಲಿ ಎಲ್ಲಾ ಗೀತೆಗಳಲ್ಲಿ ಯಾವ ವಿಷಯಕ್ಕೆ ಪ್ರಾಮುಖ್ಯತೆ ನೀಡಿದೆ?

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಈ ಜನಪದ ಗೀತೆಗಳು ಯಾವ ವಿಷಯ ಕುರಿತು ತಿಳಿಸುತ್ತವೆ?
  2. ಜನಪದ ಗೀತೆಗಳಲ್ಲಿ ಸೂಚಿಸಿರುವಂತೆ ರೈತನ ಕಾರ್ಯಗಳು ಯಾವುವು?
  3. ಜನಪದ ಗೀತೆಗಳಲ್ಲಿ ಕೃಷಿ ಮತ್ತು ರೈತನಿಗೆ ಪ್ರಾಮುಖ್ಯತೆ ನೀಡಲು ಕಾರಣವೇನು?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಜನಪದ ಗೀತೆಗಳು ಜನಸಾಮಾನ್ಯರ ಚರಿತ್ರೆ ರಚನೆಯಲ್ಲಿ ಹೇಗೆ ಸಹಾಯಕವಾಗಿವೆ?

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ_ಚರಿತ್ರೆ