೧ ನೇ ಸಾಲು: |
೧ ನೇ ಸಾಲು: |
| =ಪರಿಕಲ್ಪನಾ ನಕ್ಷೆ= | | =ಪರಿಕಲ್ಪನಾ ನಕ್ಷೆ= |
− | <mm>[[ajjanaabhyanjana.mm|Flash]]</mm>
| + | [[File:ajjanaabhyanjana.mm]] |
| | | |
| =ಹಿನ್ನೆಲೆ/ಸಂದರ್ಭ= | | =ಹಿನ್ನೆಲೆ/ಸಂದರ್ಭ= |
| + | 'ಮಲೆನಾಡಿನ ಚಿತ್ರಗಳು' ಕಥಾ ಸರಣಿಯ ಮುನ್ನುಡಿಯಿಂದ<br> |
| + | ಒಂದು ದಿನ ಸಾಯಂಕಾಲ ನಾನು ಶ್ರೀಮಾನ್ ವೆಂಕಣ್ಣಯ್ಯನವರೊಡನೆ ಕುಕ್ಕನಹಳ್ಳಿ ಕರೆಯ ಮೇಲೆ ವಾಯು ವಿಹಾರಕ್ಕಾಗಿ ಹೋಗಿದ್ದಾಗ ಯಾವುದೋ ಮಾತು ಬಂದು ಮಲೆನಾಡಿನ ಕೆಲವು ಅನುಭವಗಳನ್ನು ಹೇಳತೊಡಗಿದೆ. ಜೊತೆಯಲ್ಲಿ ತೀ.ನಂ.ಶ್ರೀ., ಡಿ.ಎಲ್.ನ, ಮೊದಲಾದ ಮಿತ್ರರೂ ಇದ್ದರು. ನಾವೆಲ್ಲರೂ ಹುಲುಸಾಗಿ ಹಸುರು ಹೊಮ್ಮಿ ಬೈಗುಗೆಂಪಿನ ಬಿಸಿಲಿನಲ್ಲಿ ಸುಮನೋಹರವಾಗಿದ್ದ ಕೆರೆಯಂಚನ ಬಯಲಿನಲ್ಲಿ ಕುಳಿತಿದ್ದೆವು. ಮೆಲ್ಲೆಲರು ಸುಖದಾಯಕವಾಗಿ ತೀಡುತ್ತಿತ್ತು. ಬಹಳ ಹೊತ್ತು ಕತೆ ಹೇಳಿದೆ. ಅವರೂ ಸಾವಧಾನದಿಂಧ, ಅದಕ್ಕಿಂತಲೂ ಹೆಚ್ಚಾಗಿ ವಿಶ್ವಾಸದಿಂದ ಆಲಿಸಿದರು. ಎಲ್ಲ ಮುಗಿದ ಮೇಲೆ ವೆಂಕಣ್ಣಯ್ಯನವರು ಆ ಅನುಭವಗಳನ್ನು ಬರೆದರೆ ಚೆನ್ನಾಗಿರುತ್ತದೆ ಎಂದು ಸೂಚನೆ ಕೊಟ್ಟರು. ಚಿತ್ರಗಳನ್ನು ‘ಪ್ರಬುದ್ಧ ಕರ್ಣಾಟಕ’ದಲ್ಲಿ ಅಚ್ಚು ಹಾಕಿಸಬಹುದೆಂದೂ ಉತ್ತೇಜನ ಕೊಟ್ಟರು. ನಾನು ಒಪ್ಪಿಕೊಂಡು ಕೆಲವು ಚಿತ್ರಗಳನ್ನು ಬರೆದು ಅವರಿಗೆ ಓದಿದೆ. “ನೀವು ಬಾಯಲ್ಲಿ ಹೇಳುತ್ತಿದ್ದಾಗ ಇದ್ದ ಸ್ವಾರಸ್ಯ ಈ ಚಿತ್ರಗಳಲ್ಲಿ ಇಲ್ಲ” ಎಂದರು. ನನಗೂ ಹಾಗೆಯೆ ತೋರಿತು. ಸಜೀವವಾದ ವಾಣಿಯೂ ಮುಖ ನಯನ ಅಂಗಗಳ ಅಭಿನಯವೂ ಮಾಡುವ ಕೆಲಸವನ್ನು ನಿರ್ಜೀವವಾದ ಲೇಖಣಿ ಮಾಡಬಲ್ಲುದೆ? ಆದರೆ ಆಲಿಸುವವರಲ್ಲಿ ವಿಶ್ವಾಸವಿದ್ದರೆ ಮೃದಲ್ಲಿಯೂ ಶ್ವಾಸವಾಡುತ್ತದೆ!<br> |
| + | ಕುವೆಂಪು ೧೯ – ೬ – ೭೭<br> |
| + | ಮೈಸೂರು,<br> |
| + | 'ಅನ್ನಕ್ಕಿಂತಲೂ ಅಭ್ಯಂಜನವೇ ಶ್ರೇಷ್ಠ' ಎನ್ನುವುದು ನಮ್ಮ ಹಿರಿಯರ ಧ್ಯೇಯೋಕ್ತಿಯಾಗಿತ್ತು. ಅಭ್ಯಂಜನ ಮಾಡಿ ಮಾಡಿ ದೇಹ ಸ್ವಲ್ಪ ಸ್ಥೂಲತೆಯ ಕಡೆಗೆ ಒಲೆದಿತ್ತು. ವಾರಕ್ಕೊಂದು ಅಭ್ಯಂಜನ ಮಾಡುತ್ತಿದ್ದರೆ ಅಮೃತತ್ವ ಲಭಿಸುವುದೆಂದು ಅವರು ತಿಳಿದಿದ್ದಂತೆ ತೋರುತ್ತದೆ.ಅಂತಹ ಒಂದು ವಿಷಯವನ್ನು ಕುವೆಂಪುರವರು ತಮ್ಮ ಲಲಿತ ಪ್ರಬಂಧದ ಒಂದು ಉದಾಹರಣೆಯೊಂದಿಗೆ ಸುಲಲಿತವಾಗಿ ವಿವರಿಸಿದ್ದಾರೆ. |
| + | |
| + | ಅತ್ತ ಆಳುಗಳು ಅಭ್ಯಂಜನದ ನಾಟಕಕ್ಕೆ ಬೇಕಾದ ಸಲಕರಣೆಗಳನ್ನು ಸಿದ್ಧ ಮಾಡುತ್ತಿರಲು, ಇತ್ತ ಪಾತ್ರದಾರರು ಎಣ್ಣೆ ಹಚ್ಚಿಕೊಳ್ಳುತ್ತಿರುವುದೊಂದು ಸುಮನೋಹರ ದೃಶ್ಯ. ಮಸಿಯಲ್ಲಲ್ಲ, ಹರಳೆಣ್ಣೆಯಲ್ಲಿ ಅದನ್ನು ಬರೆದರೂ ಆ ವರ್ಣನೆ ಸರಿಯಾಗಿ ಆವಿರ್ಭವಿಸುವುದು ಅಸಾಧ್ಯ. ಪ್ರಿನ್ಸಿಪಾಲರಾದ ನಮ್ಮ ಐಗಳು ಕಿರಿಯರಿಗೆ ಎಣ್ಣೆ ಹಚ್ಚಿ ಹಚ್ಚಿ ಬಿಡುತ್ತಿರುವರು. ಹುಡುಗರ ಗುಂಪಿನಲ್ಲಿ ಹೀಗೆ ಘಟನೆಗಳ ಮೇಲೆ ಘಟನೆಗಳು ಪ್ರಾಪ್ತವಾಗುತ್ತಿರಲಾಗಿ ದೊಡ್ಡವರ ಮೈಗೆ ಆಳುಗಳು ಎಣ್ಣೆ ಉಜ್ಜುತ್ತಿದ್ದಾರೆ. ಕೆಲವರು ಗರಡಿಯಲ್ಲಿ ಕಸರತ್ತು ಮಾಡುವವರಂತೆ ಹುಂ!,ಉಸ್!, ಹುಂ!, ಉಸ್!, ಎನ್ನುತ್ತಿದ್ದಾರೆ. ಅಜ್ಜಯ್ಯ ದೂರದಲ್ಲಿ ಕುಳಿತು ಎಣ್ಣೆ ಉಜ್ಜಿಸಿಕೊಳ್ಳುತ್ತಿದ್ದಾರೆ. ಅವರ ಮೈಯೆಲ್ಲ ತೈಲಮಯ. ಆಳು ತಲೆಗೆ ಎಣ್ಣೆ ಹಾಕಿ ಪಟ್ ಪಟ್ ಎಂದು ಮದ್ದಲೆ ಬಡಿಯುವಂತೆ ಬಿಡುವಿಲ್ಲದೆ ಬಡಿಯುತ್ತಿದ್ದಾನೆ. ಆ ಏಟಿಗೆ ಅಭ್ಯಾಸವಿಲ್ಲದವರಾಗಿದ್ದರೆ ಮೆದುಳು ಕದಡಿ ಹೋಗುತ್ತಿದ್ದರು ಆದರೆ ಅಜ್ಜಯ್ಯ ಅಚಲದಂತೆ ಧೀರವಾಗಿ ಕುಳಿತಿದ್ದಾರೆ. |
| + | |
| =ಕಲಿಕೋದ್ದೇಶಗಳು= | | =ಕಲಿಕೋದ್ದೇಶಗಳು= |
| + | *ಅಭ್ಯಂಜನ ಪದದ ಅರ್ಥ ತಿಳಿಯುವನು |
| + | *ಮಲೆನಾಡಿನ ಸ್ನಾನಕ್ಕೂ ಬಯಲು ಸೀಮೆಯ ಸ್ನಾನದ ಮಾದರಿಗೂ |
| + | *”ಆರೋಗ್ಯವೇ ಭಾಗ್ಯ” ಎಂಬ ನಾಣ್ನುಡಿಗೆ ಅಭ್ಯಂಜನ ಸ್ನಾನದ ಪ್ರಾಮುಖ್ಯತೆ ಎಂತಹುದು ಎಂಬುದನ್ನು ಅರಿಯುವನು. |
| + | *ಹೊಸ ಪದಗಳ ಅರ್ಥ ತಿಳಿದು ,ಅರ್ಥೈಸುವನು. |
| + | *ಆರೋಗ್ಯದ ಕಡೆ ಗಮನ ನೀಡುವನು. |
| + | *ಅವಿಭಕ್ತ ಪದ್ಧತಿಯ ಸಾಧಕ-ಬಾಧಕಗಳ ಬಗ್ಗೆ ಅರಿಯುವನು. |
| + | *ಜ್ಞಾನಪೀಠ ಪ್ರಶಸ್ತಿ ವಿಜೇತರ ಚಿತ್ರಗಳ ಪಟ್ಟಿಯಲ್ಲಿ ಕುವೆಂಪುರವರ ಭಾವಚಿತ್ರವನ್ನು ಗುರುತಿಸುವನು. |
| + | *ಕುವೆಂಪುರವರ ಜೀವನ ಹಾಗೂ ಸಾಹಿತ್ಯ ಸೇವೆಯ ಬಗ್ಗೆ ಅರಿತುಕೊಳ್ಳುವನು |
| + | |
| =ಕವಿ ಪರಿಚಯ = | | =ಕವಿ ಪರಿಚಯ = |
| + | *'ಕುವೆಂಪು'ರವರ ಪೂರ್ಣ ಹೆಸರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ.ಕುವೆಂಪು ಎಂಬುದು ಇವರ ಕಾವ್ಯನಾಮ. |
| + | *ಕಾಲ:- (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪) |
| + | *ಕುವೆಂಪುರವರ ಮೊದಲ ಕಾವ್ಯನಾಮ"ಕಿಶೋರ ಚಂದ್ರವಾಣಿ". |
| + | *ಕನ್ನಡದ ಎರಡನೆ ರಾಷ್ಟ್ರಕವಿ.*ಕನ್ನಡದ ಶ್ರೇಷ್ಠ ಕವಿ. |
| + | *ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದ ಪ್ರ ಪ್ರಥಮ ವ್ಯಕ್ತಿ. |
| + | *'ವಿಶ್ವ ಮಾನವ' ಪರಿಕಲ್ಪನೆಯನ್ನೂ ಸಾಹಿತ್ಯದ ಮೂಲಕ ಸಮಾಜಕ್ಕೆ ತಲುಪಿಸಿದವರು. |
| + | *ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇವರ ಕಾಣಿಕೆ ಅಪಾರ. |
| + | *ಕುವೆಂಪುರವರ ಸಂಪೂರ್ಣ ಮಾಹಿತಿಯ ಡಾಕ್ಯೂಮೆಂಟರಿ ಚಿತ್ರವನ್ನು ವೀಕ್ಷಿಸಲು [https://www.youtube.com/watch?v=TEzJGnDBQcQ ಇಲ್ಲಿ ಕ್ಲಿಕ್ಕಿಸಿರಿ] |
| + | *ಕುವೆಂಪುರವರ ಡಾಕ್ಯೂಮೆಂಟರಿ ಚಿತ್ರವನ್ನು ವೀಕ್ಷಿಸಲು [https://www.youtube.com/watch?v=HLnc1XgywWA ಇಲ್ಲಿ ಕ್ಲಿಕ್ಕಿಸಿರಿ] |
| + | *ಕುವೆಂಪುರವರ ಮನೆ ಕವಿಶೈಲದ ಡಾಕ್ಯೂಮೆಂಟರಿ ಚಿತ್ರವನ್ನು ವೀಕ್ಷಿಸಲು [https://www.youtube.com/watch?v=of6C1AqHjgI ಇಲ್ಲಿ ಕ್ಲಿಕ್ಕಿಸಿರಿ] |
| + | |
| =ಶಿಕ್ಷಕರಿಗೆ ಟಿಪ್ಪಣಿ= | | =ಶಿಕ್ಷಕರಿಗೆ ಟಿಪ್ಪಣಿ= |
| + | =ಹೆಚ್ಚುವರಿ ಸಂಪನ್ಮೂಲ= |
| + | 'ಕನ್ನಡ ದೀವಿಗೆ'ಯಲ್ಲಿನ 'ಅಜ್ಜಯ್ಯನ ಅಭ್ಯಂಜನ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ [http://kannadadeevige.blogspot.in/2013/11/7.html ಇಲ್ಲಿ ಕ್ಲಿಕ್ ಮಾಡಿರಿ] |
| + | |
| =ಸಾರಾಂಶ= | | =ಸಾರಾಂಶ= |
| ==ಪರಿಕಲ್ಪನೆ ೧== | | ==ಪರಿಕಲ್ಪನೆ ೧== |
೨೯ ನೇ ಸಾಲು: |
೬೦ ನೇ ಸಾಲು: |
| =ಭಾಷಾ ವೈವಿಧ್ಯತೆಗಳು = | | =ಭಾಷಾ ವೈವಿಧ್ಯತೆಗಳು = |
| ==ಶಬ್ದಕೋಶ == | | ==ಶಬ್ದಕೋಶ == |
| + | #ಅಭ್ಯಂಜನ -ಎಣ್ಣೆ ಸ್ನಾನ |
| + | #ಸುಡು ನೀರು -ಬಿಸಿಯಾದ ನೀರು |
| + | #ಕಢಾಯಿ - ಅಗಲ ಬಾಯಿಯ ಪಾತ್ರೆ |
| + | #ಲಲಾಟ - ಹಣೆ |
| + | #ಐಗಳು -ಪಾಠ ಹೇಳು ವ ಗು ರು ಗಳು |
| + | #ಉಚ್ಚಳಿಸು -ಚಿಮ್ಮು |
| + | |
| ==ವ್ಯಾಕರಣ== | | ==ವ್ಯಾಕರಣ== |
| + | ಅನುಕರಣಾವ್ಯಯ ,ಜೋಡಿಪದ ಮತ್ತು ದ್ವಿರುಕ್ತಿಗಳ ವ್ಯತ್ಯಾಸದ ಬಗ್ಗೆ ತಿಳಿ ಹೇಳುತ್ತಾ ಮಾಹಿತಿ ನೀಡುವುದು. |
| + | #ಅನುಕರಣಾವ್ಯಯːಪಟ-ಪಟ, ರಫ್-ರಫ್, ಸರ-ಸರ |
| + | #ಜೋಡಿಪದː ಹಣ್ಣು-ಹಂಪಲು,ಕಸ-ಕಡ್ಡಿ, ತೀರ್ಥ-ಪ್ರಸಾದ |
| + | #ದ್ವಿರುಕ್ತಿ ː ಮುಂದೆ-ಮುಂದೆ, ಹೌದು- ಹೌದು, ತುತ್ತ ತುದಿ |
| + | |
| =ಮೌಲ್ಯಮಾಪನ = | | =ಮೌಲ್ಯಮಾಪನ = |
| =ಭಾಷಾ ಚಟುವಟಿಕೆಗಳು/ ಯೋಜನೆಗಳು= | | =ಭಾಷಾ ಚಟುವಟಿಕೆಗಳು/ ಯೋಜನೆಗಳು= |
| + | * ವಿಭಕ್ತ ಮತ್ತು ಅವಿಭಕ್ತ ಕುಟುಂಬಗಳಲ್ಲಿ ಹಬ್ಬಗಳ ಆಚರಣೆಯ ಕುರಿತಾದ ಚರ್ಚೆ. |
| + | * ಆರೋಗ್ಯದ ಗುಟ್ಟೇ ಅಭ್ಯಂಜನ ಸ್ನಾನ ಎಂಬ ವಿಷಯದ ಕುರಿತು ಭಾಷಣ ಏರ್ಪಡಿಸುವುದು. |
| + | |
| =ಪಠ್ಯ ಬಗ್ಗೆ ಹಿಮ್ಮಾಹಿತಿ= | | =ಪಠ್ಯ ಬಗ್ಗೆ ಹಿಮ್ಮಾಹಿತಿ= |
| + | |
| + | [[ವರ್ಗ:ಅಜ್ಜಯ್ಯನ ಅಭ್ಯಂಜನ]] |