ಇತರೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

[ಹಾಸಿಗೆ ಇದ್ದಷ್ಟು ಕಾಲು ಚಾಚು ]

ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ. ಮೇಲಿನ ಗಾದೆ ಮಾತು ಜೀವನದ ಇತಿಮಿತಿಯನ್ನು ಸೂಚಿಸುತ್ತದೆ. ಹಾಸಿಗೆಯ ಅಳತೆಗೆ ತಕ್ಕಂತೆ ಕಾಲು ಚಾಚಿ ಮಲಗಬೇಕು .ಇಲ್ಲವಾದರೆ ಕಾಲು ಹಾಸಿಗೆಯಿಂದ ಆಚೆ ಬಂದು ನೆಲ ಮುಟ್ಟಿ ಶೀತ ಬಾಧೆ ಬಂದೀತು . ಹಾಗಾಗಿ ಹಾಸಿಗೆ ಅಷ್ಟು ಉದ್ದವಿಲ್ಲದಿದ್ದರೆ ,ಮೊಟಕಾಗಿದ್ದರೆ ಕಾಲನ್ನು ಮಡಚಿಕೊಳ್ಳುತ್ತೇವೆ. ಹಾಗೆಯೇ ನಮ್ಮ ಮಿತಿಯನ್ನು ಅರಿತು ಬಾಳಬೇಕು .ಯಾವುದೇ ಕೆಲಸಕ್ಕೆ ಕೈ ಹಾಕಿದರೂ ನಮ್ಮ ಶಕ್ತಿ,ಸಾಮರ್ಥ್ಯ ,ಸೌಕರ್ಯಗಳನ್ನು ಗಮನಿಸಬೇಕು. ಅದಕ್ಕೆ ತಕ್ಕಂತೆ ಖರ್ಚು ಮಾಡಬೇಕು. ಸಾಲ ಮಾಡಿ ತುಪ್ಪ ತಿನ್ನುವ ಜಾಯಮಾನ ನಮ್ಮದಾಗಬಾರದು. ನಮ್ಮ ಆದಾಯಕ್ಕೆ ತಕ್ಕ ಹಾಗೆ ಖರ್ಚು ಮಾಡಬೇಕು. ಆದಾಯ ಕಡಿಮೆ ಖರ್ಚು ಅತಿಯಾದರೆ ಜೀವನದಲ್ಲಿ ನಾವೇ ಸಂಕಟಪಡಬೇಕಾಗುತ್ತದೆ. ದುಃಖ ,ಗೊಂದಲ ನಮ್ಮನ್ನು ಅವಲಂಬಿಸಿರುವವರಿಗೂ ಸಮಸ್ಯೆಗಳುಂಟಾಗುತ್ತವೆ. ಬುದ್ಧ ಹೇಳುವಂತೆ ಆಸೆಯೇ ದುಃಖಕ್ಕೆ ಮೂಲ; ಆಸೆಯ ನಾಶವೇ ಸಂತೋಷದ ಮೂಲವಾಗಿದೆ. ಆದ್ದರಿಂದ ಇರುವುದರಲ್ಲಿ ತೃಪ್ತಿಕರವಾದ ,ಆರೋಗ್ಯಕರವಾದ ಜೀವನವನ್ನು ನಡೆಸಬೇಕು.ಮಿತಿಯನ್ನು ಅರಿತು ಬಾಳು ಎಂಬುದು ಮೇಲಿನ ಗಾದೆ ಮಾತಿನ ಸಂದೇಶವಾಗಿದೆ.

[ಕೈ ಕೆಸರಾದರೆ ಬಾಯಿ ಮೊಸರು] ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ ಈ ಗಾದೆಯ ಮಾತಿನ ಅರ್ಥವೆಂದರೆ ಕಷ್ಟ ಪಟ್ಟರೆ ಸುಖ ಎಂಬುದನ್ನು ಸೂಚಿಸುತ್ತದೆ. ಕನಕದಾಸರು ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಪ್ರತಿಯೊಬ್ಬರೂ ಜೀವನೋಪಾಯಕ್ಕಾಗಿ ಒಂದೊಂದು ಕೆಲಸವನ್ನು ಅವಲಂಬಿಸಬೇಕಾಗುತ್ತದೆ. ಉಳುವ ಕೆಲಸವನ್ನು ರೈತರು, ನೆಯ್ಯುವ ಕಾರ್ಯವನ್ನು ನೇಕಾರರು ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಜೀವನ ನಿರ್ವಹಣೆಗೆ ಒಂದೊಂದು ಕೆಲಸವನ್ನು ಮಾಡುವಾಗ ಆ ಕೆಲಸದಲ್ಲಿ ಪ್ರತಿಫಲ ಇರುವ ಹಾಗೆಯೇ ಸಾಕಷ್ಟು ಕಷ್ಟ ನಷ್ಟಗಳೂ ಇರುತ್ತವೆ. ಆದರೆ ಕಷ್ಟಗಳು ಬರುವವೆಂದು ಕೆಲಸ ಮಾಡದೇ ಬದುಕಲಾಗದು. ಕೈ ಕೆಸರಾಗುವುದೆಂದು ರೈತ ಬೆಳೆಯನ್ನು ಬೆಳೆಯದಿರಲಾದೀತೇ ? ಬೆಳೆ ಇಲ್ಲದೇ ಊಟ ಮಾಡುವುದು ಹೇಗೆ ? ರೈತ ಕೈ ಕೆಸರನ್ನು ಗಮನಿಸದೇ ಮುಂದೆ ಸಿಗುವ ಪ್ರತಿಫಲದ ನಿರೀಕ್ಷೆಯು ಅವನನ್ನು ಕಷ್ಟ ಪಡಲು ಪ್ರೇರೇಪಿಸುತ್ತದೆ. ಬಸವಣ್ಣನವರು ಹೇಳುವಂತೆ ಕಾಯಕವೇ ಕೈಲಾಸವಾಗಿದೆ. ಪರಿಶ್ರಮದಿಂದ ಮಾತ್ರವೇ ವಿದ್ಯೆ ಎಂದು ಸಂತ ಕಬೀರದಾಸರು ಹೇಳಿದ್ದಾರೆ. ದುಡಿತವೇ ದುಡ್ಡಿನ ತಾಯಿ ಆದ್ದರಿಂದ ಪ್ರತಿಯೊಬ್ಬರೂ ಕಷ್ಟಪಟ್ಟು ದುಡಿಯಬೇಕು .ಉದ್ಯೋಗಿಯಾದರೆ ಮಾತ್ರ ಸಂಪತ್ತು ದೊರೆಯಲು ಸಾಧ್ಯ . ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಕಾರ್ಯವನ್ನು ನಿಷ್ಠೆಯಿಂದ ಮಾಡಿದರೆ ಫಲ ದೊರೆಯಲು ಸಾಧ್ಯ .

[ತುಂಬಿದ ಕೊಡ ತುಳುಕುವುದಿಲ್ಲ ] ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ. ಕೊಡ ತುಂಬಿದ್ದರೆ ಸಾಧಾರಣಕ್ಕೆ ತುಳುಕುವ ಕಾರಣವಿಲ್ಲ . ಅರ್ಧಮರ್ಧ ಇರುವಾಗ ನಾವು ಸಹಜವಾಗಿ ಎತ್ತಿದರೆ ನೀರು ಮೇಲೆ ಚಿಮ್ಮಿ ನಮ್ಮ ಮುಖಕ್ಕೆ ಸಿಂಪಡಿಸಿದಂತಾಗುವುದು. ಈ ಗಾದೆಯನ್ನು ಜ್ಞಾನಿಗೂ ಅರೆಬರೆ ತಿಳಿದವನಿಗೂ ಇರುವ ವ್ಯತ್ಯಾಸ ತಿಳಿಸಲು ಬಳಸುತ್ತಾರೆ. ನಿಜವಾದ ಜ್ಞಾನಿಯಾದವನು ತನ್ನ ಜ್ಞಾನ ,ಹೆಸರು ,ಗೌರವವನ್ನು ತಾನೇ ಪ್ರಚಾರ ಮಾಡಿಕೊಳ್ಳಲು ಹೋಗುವುದಿಲ್ಲ . ಆದರೆ ಅರೆಬರೆ ಕಲಿತ ವ್ಯಕ್ತಿಗಳು ತಮ್ಮನ್ನು ಮಾಹಾ ಜ್ಞಾನಿಗಳು .ತಾನೇ ಸರ್ವ ಶ್ರೇಷ್ಠ ಎಂಬಂತೆ ಸಮಾಜದಲ್ಲಿ ವರ್ತಿಸುತ್ತಾರೆ. ರಾಮಕೃಷ್ಣ ಪರಹಂಸರಂತವರು ಆಲ್ಬರ್ಟ್ ಐನ್ ಸ್ಟೈನ್ ನಂತಹ ಮಹಾನ್ ವ್ಯಕ್ತಿಗಳಿಗೆ ತಮ್ಮನ್ನು ಪ್ರಚಾರಕ್ಕೆ ಒಳಪಡಿಸಿಕೊಳ್ಳಬೇಕಾದ ಆವಶ್ಯಕತೆಯೇ ಇರುವುದಿಲ್ಲ.ಸಂದರ್ಭ ಬಂದಾಗಲೆಲ್ಲ ಮಹಾತ್ಮರ ವ್ಯಕ್ತಿತ್ವ ತಾನೇ ತಾನಾಗಿ ವ್ಯಕ್ತವಾಗುತ್ತದೆ. ಅಲ್ಪವಿದ್ಯಾ ಮಹಾಗರ್ವಿಗಳು ಅರ್ಧ ತುಂಬಿದ ಕೊಡದ ಹಾಗೆ ಕೊಡವನ್ನೆತ್ತಿದ್ದರೆ ನೀರು ತುಳುಕುವಂತೆ ಆವಶ್ಯಕತೆ ಇಲ್ಲದಿದ್ದರೂ ತಮ್ಮನ್ನು ಪ್ರಚಾರಕ್ಕೆ ಒಳಪಡಿಸಿಕೊಳ್ಳುತ್ತಾರೆ. ಯಾವುದೇ ವಿಷಯದಲ್ಲಿ ಪೂರ್ಣ ಜ್ಞಾನ ಪಡೆಯಲು ಪ್ರಯತ್ನಿಸಬೇಕು .ಅರ್ಧ ಬೆಂದ ಇಟ್ಟಿಗೆಯಾಗಬಾರದು .ಸ್ವ ಪ್ರದರ್ಶನ ಮಾಡಿಕೊಳ್ಳುವುದು ,ಆತ್ಮ ಪ್ರಶಂಸೆ ಮಾಡಿಕೊಳ್ಳುವುದು ದೊಡ್ಡಸ್ತಿಕೆಯ ಲಕ್ಷಣವಲ್ಲ. ಪೂರ್ಣ ವಿಚಾರವನ್ನು ಅರಿತವರು ಪ್ರಚಾರಪ್ರಿಯರಾಗಿರುವುದಿಲ್ಲ.ಸಂಯುಮ ವುಳ್ಳವರಾಗಿರುತ್ತಾರೆ. ಆದರ್ಶಪ್ರಾಯರಾಗಿರುತ್ತಾರೆ.ಅರ್ಧ ತಿಳಿದುಕೊಂಡವರ ಮಾತಿನಲ್ಲಿ,ನಡೆನುಡಿಗಳಲ್ಲಿ ಸಂಯುಮವಿರಲಾರದು. ಈ ಗಾದೆ ಮಾತಿನಲ್ಲಿ ಜ್ಞಾನಿಗಳನ್ನು, ತುಂಬಿದ ಕೊಡಕ್ಕೂ ಅರ್ಧ ತಿಳಿದು ಪ್ರಚಾರ ಪ್ರಿಯರಾಗಿರುವವರನ್ನು ಅರ್ಧ ತುಂಬಿದ ಕೊಡಕ್ಕೂ ಹೋಲಿಸಲಾಗಿದೆ.

[ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ? ] ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ. ಗಿಡ ಚಿಕ್ಕದಾಗಿರುವಾಗ ಅದನ್ನು ಬಾಗಿಸಬಹುದು .ಅದೇ ಅದು ಬೆಳೆದು ಗಟ್ಟಿಯಾಗಿ ಮರವಾದ ಮೇಲೆ ಅದನ್ನು ಬಗ್ಗಿಸಲು ಸಾಧ್ಯವಾಗುವುದಿಲ್ಲ.ಮನೆಯ ಮುಂದೆ ಅಲಂಕಾರಿಕವಾಗಿ ಬೆಳೆಸಬೇಕಾದ ಗಿಡವನ್ನು ಅದು ಚಿಕ್ಕದಿರುವಾಗಲೇ ನಮಗೆ ಬೇಕಾದ ಆಕಾರಕ್ಕೆ ಬಗ್ಗಿಸಬೇಕು .ಅದು ದೊಡ್ಡದಾದ ಮೇಲೆ ನಮಗೆ ಬೇಕಾದ ಆಕಾರಕ್ಕೆ ತರಲು ಆಗುವುದಿಲ್ಲ. ಹಾಗೆಯೇ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕಾದ ಮಕ್ಕಳಿಗೆ ಚಿಕ್ಕವರಿರುವಾಗಲೇ ಜೀವನ ಮೌಲ್ಯಗಳನ್ನು ರೂಢಿಸುವ ಕಾರ್ಯವಾಗಬೇಕು. ಅವರಿಗೆ ಚಿಕ್ಕವರಿರುವಾಗಲೇ ಬುದ್ಧಿ ಹೇಳಬೇಕು ,ತಪ್ಪು ಮಾಡಿದರೆ ತಿದ್ದಿ ತಿಳುವಳಿಕೆ ನೀಡಬೇಕು. ಆದರೆ ಅವರು ಚಿಕ್ಕವರು ಎನ್ನುವ ಕಾರಣಕ್ಕೆ ಅವರ ತಪ್ಪುಗಳನ್ನು ತಿದ್ದದೇ ಹಾಗೆ ಬೆಳೆಯಲು ಬಿಟ್ಟರೆ ಮುಂದೆ ದೊಡ್ಡವರಾದಂತೆ ಅದೇ ತಪ್ಪುಗಳೇ ಅವರ ಪಾಲಿಗೆ ಒಪ್ಪುಗಳಾಗಿ ಮಾರ್ಪಟ್ಟು ಮುಂದೆ ತಿದ್ದ ಹೊರಟರೂ ಪ್ರಯೋಜನವಾಗುವುದಿಲ್ಲ. ಮನೆಯಲ್ಲಿ ಮಕ್ಕಳನ್ನು ಎಷ್ಟು ಪ್ರೀತಿಸಿದರೂ ಮುದ್ದಿಸಿದರೂ ಸರಿ ತಪ್ಪುಗಳ ಪ್ರಶ್ನೆ ಬಂದಾಗ ಅವರಿಗೆ ಅವರ ತಪ್ಪುಗಳನ್ನು ಮನಗಾಣಿಸಿ ಅವರನ್ನು ತಿದ್ದುವುದು ದೊಡ್ಡವರ ಆದ್ಯ ಕರ್ತವ್ಯವಾಗಿದೆ. ಮಗುವಿನ ತಪ್ಪುನಡುವಳಿಕೆಯನ್ನು , ಕೆಟ್ಟ ಸಹವಾಸಗಳನ್ನು ಬಾಲ್ಯದಿಂದಲೇ ತಿಳಿಸಿ ಸರಿಪಡಿಸಬೇಕು .ಇಲ್ಲವಾದರೆ ದೊಡ್ಡವರಾದ ಮೇಲೆ ಅವರು ಸಮಾಜದಲ್ಲಿ ಯಾವುದೇ ಪ್ರಯೋಜನಕ್ಕೆ ಬಾರದವರಾಗಿ ಬಾಳಬೇಕಾಗುತ್ತದೆ ಆಮೇಲೆ ಅವರನ್ನು ಸರಿ ಪಡಿಸಲು ಸಾದ್ಯವಾಗದೇ ಪಶ್ಚಾತ್ತಾಪ ಪಡುವ ಕಷ್ಟ ದೊಡ್ಡವರದಾಗುತ್ತದೆ ಎನ್ನುವುದು ಮೇಲಿನ ಗಾದೆ ಮಾತಿನ ಅರ್ಥವಾಗಿದೆ.


[ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ] ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ. ಬೆಟ್ಟವನ್ನು ದೂರದಿಂದ ನೋಡಿದಾಗ ಅಲ್ಲಿರುವ ಕಲ್ಲು ಮುಳ್ಳುಗಳಾಗಲೀ ಏರು ತಗ್ಗುಗಳಾಗಲೀ ಓರೆ ಕೋರೆಗಳಾಗಲೀ ಯಾವುದೂ ನಮ್ಮ ಗಮನಕ್ಕೆ ಬರಲಾರದು .ದೂರದಿಂದ ಕಾಣುವ ಅದರ ಸೌಂದರ್ಯ ಮಾತ್ರ ನಮ್ಮ ಗಮನವನ್ನು ಸೆಳೆಯುತ್ತದೆ. ದೂರದಿಂದ ವರ್ಣರಂಜಿತವಾಗಿ ,ನುಣುಪಾಗಿ ,ಆಕರ್ಷಕವಾಗಿ ಕಾಣುವ ಬೆಟ್ಟವು ತನ್ನೊಳಗೆ ಕಲ್ಲು ಮುಳ್ಳುಗಳನ್ನು ,ಬಂಡಗಳನ್ನು ಹೊಂದಿರುತ್ತದೆ. ಬೆಟ್ಟದ ದೂರದ ಸೌಂದರ್ಯಕ್ಕೆ ಮರುಳಾಗಿ ಹತ್ತಿರ ಹೋಗಿ ನೋಡಿದಾಗ ಅಲ್ಲಿರುವ ಬೆಟ್ಟದ ನಿಜವಾದ ಚಿತ್ರಣವು ನಮ್ಮಲ್ಲಿ ನಿರಾಸೆಯನ್ನು , ಅಲ್ಲಿನ ಕಲ್ಲುಮುಳ್ಳುಗಳಲ್ಲಿ ನಡೆದಾಡುವಾ ಗ ಆಗುವ ಸಮಸ್ಯೆಯನ್ನು, ಏರು ತಗ್ಗುಗಳು ಎದುರಾದಾಗ ನಡೆದಾಡಬೇಕಾದ ಎಚ್ಚರಿಕೆಯನ್ನು ಸೂಚಿಸಿ ದೂರದಿಂದ ನೋಡಿ ತೀರ್ಮಾನಿಸಿದುದರ ಬಗ್ಗೆ ನಮಗೇ ನಾಚಿಕೆಯನ್ನು ಮೂಡಿಸಬಹುದು. ಅಂತೆಯೇ ಜೀವನದಲ್ಲಿ ನಮಗೆ ಬೇರೆ ಬೇರೆ ಮನೋಭಾವದ ಜನರು ಪರಿಚಿತರಾಗಬಹುದು . ಅವರ ಬಾಹ್ಯವಾದ ಸೌಂದರ್ಯಕ್ಕೆ ಮರುಳಾಗಿ ಗೆಳೆತನ ಮಾಡಬಾರದು ಅಥವಾ ಹೊರನೋಟದಿಂದ ಮಾತ್ರವೇ ವ್ಯಕ್ತಿಯನ್ನು ಅಳೆಯಲಾಗದು . ಅವರೊಂದಿಗಿನ ಒಡನಾಟದಿಂದ ಹಲವು ದಿನಗಳ ಪರಿಚಯಾತ್ಮಕ ಅಧ್ಯಯನದಿಂದ ಮಾತ್ರ ಅವರು ಹೇಗೆ ಎಂದು ಹೇಳಲು ಸಾದ್ಯ .ಬೆಟ್ಟದ ನಿಜವಾದ ಸೌಂದರ್ಯ ಅಥವಾ ನ್ಯೂನತೆ ಅದನ್ನು ಒಳ ಹೊಕ್ಕು ನೋಡಿದಾಗ ಮಾತ್ರವೇ ಗೊತ್ತಾಗುವಂತೆ ಯಾರನ್ನೇ ಆಗಲಿ ಒಮ್ಮೆ ನೋಡಿ ತೀರ್ಮಾನಕ್ಕೆ ಬರದೇ ಅಧ್ಯಯನದಿಂದ ಮಾತ್ರವೇ ಅವರ ಕುರಿತು ತೀರ್ಮಾನಿಸಬೇಕು .ಇದು ಕೇವಲ ವ್ಯಕ್ತಿಗಳ ಸ್ನೇಹ ವಿಚಾರಕ್ಕೆ ಅಷ್ಟೇ ಸೀಮಿತವಾಗಿರದೇ ನಾವು ಯೋಚಿಸದೇ ತೆಗೆದುಕೊಳ್ಳುವ ತೀರ್ಮಾನಕ್ಕೂ ಅನ್ವಯವಾಗುತ್ತದೆ.

[ಕುಂಬಾರನಿಗೆ ವರುಷ ,ದೊಣ್ಣೆಗೆ ನಿಮಿಷ]

ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನುಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ. ಕಟ್ಟುವುದು ಕಠಿಣ ಕೆಡಿಸುವುದು ಸುಲಭ ಎಂಬ ಇನ್ನೊಂದು ಗಾದೆಯ ಮಾತನ್ನು ಈ ಗಾದೆಯ ಮಾತು ಪ್ರತಿನಿಧಿಸುತ್ತದೆ. ಕುಂಬಾರನು ಬಹಳ ಶ್ರಮ ವಹಿಸಿ ಒಂದು ಮಡಿಕೆಯನ್ನು ಮಾಡುವನು .ಈ ಗಡಿಗೆ ಮಾಡಲು ಅವನು ಎರೆಮಣ್ಣನ್ನು ತಂದು ಅದರಲ್ಲಿರುವ ಕಲ್ಲು ಮರಳುಗಳನ್ನು ಬೇರ್ಪಡಿಸಿ ಮತ್ತೆ ಅದಕ್ಕೆ ನೀರು ಬೆರೆಸಿ ಕಲಸಿ ತುಳಿದು ಹದ ಮಾಡಿ ಕೈ ಕಾಲುಗಳಿಗೆ ಕೆಸರು ಮೆತ್ತಿಸಿಕೊಂಡು ಹದಗೊಂಡ ಮಣ್ಣನ್ನು ತಿಗುರಿಯ ಮೇಲಿಟ್ಟು ತಿರುಗಿಸಿ ಮಡಿಕೆಯ ಆಕಾರಕ್ಕೆ ತರಬೇಕಾಗುತ್ತದೆ. ಮತ್ತೆ ನೀರಿನ ಪಸೆ ಆರಿದ ಮೇಲೆ ಬಿಸಿಲಲ್ಲಿಟ್ಟು ಒಣಗಿಸಬೇಕು .ಮತ್ತೆ ಜೋಡಿಸಿಡಬೇಕು . ಇಷ್ಟೆಲ್ಲ ಕಷ್ಟಪಟ್ಟು ತಯಾರಿಸಿದ

 ಮಡಿಕೆಯನ್ನು  ಒಡೆದು ಹಾಕಲು ಒಂದು ಕ್ಷಣ ಸಾಕು .ದೊಣ್ಣೆಯನ್ನು  ಬಳಸಿ ಮಡಿಕೆಯನ್ನು ಒಂದೇ ಕ್ಷಣದಲ್ಲಿ ಹಾಳುಗೆಡವಬಹುದು 

ಎತ್ತರವಾಗಿ ಬೆಳೆದ ಮರವನ್ನು ಒಂದೆರಡು ಗಂಟೆಗಳಲ್ಲಿ ಕೊಡಲಿಯಿಂದ ಉರುಳಿಸಬಹುದು. ಉತ್ತಮ ಗುಣಗಳು ದುರ್ಜನರ ಸಹವಾಸದಿಂದ ಮರೆಯಾಗಬಹುದು. ಅದರಂತೆಯೇ ಯಾವುದೇ ಮಹತ್ಕಾರ್ಯದ ಈಡೇರಿಕೆಗೆ ನಿರಂತರ ಪರಿಶ್ರಮ ಅಗತ್ಯ .ಆದರೆ ಸ್ವಲ್ಪ ನಿರ್ಲಕ್ಷ ತೋರಿದರೂ ಮಾಡಿದ ಕಾರ್ಯವು ಹೊಳೆಯಲ್ಲಿ ಹೋಮ ಮಾಡಿದಷ್ಟೇ ನಿರರ್ಥಕವಾಗಿ ಬಿಡಬಹುದು. ಯಾವುದನ್ನೇ ಆಗಲಿ ಹಾಳುಗೆಡವುವುದು ತುಂಬಾ ಸುಲಭ ,ರೂಪಿಸುವುದು ಕಷ್ಟ ; ಹಾಳು ಮಾಡಿದ್ದನ್ನು ಮತ್ತೆ ಸರಿಪಡಿಸುವುದೂ ಅಷ್ಟು ಸುಲಭವಲ್ಲ. ಆದ್ದರಿಂದ ಯೋಚಿಸಿ ಕಾರ್ಯ ಮಾಡಬೇಕು ಎಂಬುದು ಮೇಲಿನ ಗಾದೆಯ ಅರ್ಥವಾಗಿದೆ. .

[ತಾಳಿದವನು ಬಾಳಿಯಾನು] ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನುಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.