"ಎಮ್ಮನುಡಿಗೇಳ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೭೫ ನೇ ಸಾಲು: ೭೫ ನೇ ಸಾಲು:
 
=ಸಾರಾಂಶ=
 
=ಸಾರಾಂಶ=
 
ಪದ್ಯದ ಸಾರಾಂಶ (ಪಂಪಭಾರತಂ ಗದ್ಯಾನುವಾದ -ಎನ್. ಅನಂತರಂಗಾಚಾರ್)
 
ಪದ್ಯದ ಸಾರಾಂಶ (ಪಂಪಭಾರತಂ ಗದ್ಯಾನುವಾದ -ಎನ್. ಅನಂತರಂಗಾಚಾರ್)
ವ|| ಎಂಬೆನ್ನಗಮೆಯ್ದೆ  ವಂದ ಪಿತೃದ್ವಂದ್ವ ಚರಣಕ್ಕೆ ವಿನಯವಿನಮಿತೋತ್ತಮಾಂಗ
+
ವ|| ಎಂಬೆನ್ನಗಮೆಯ್ದೆ  ವಂದ ಪಿತೃದ್ವಂದ್ವ ಚರಣಕ್ಕೆ ವಿನಯವಿನಮಿತೋತ್ತಮಾಂಗ<br>
ನಾದನರ್ವರುಂಪರಸಿತಡವರಿಸಿಯುಂ ತೆಬ್ಬರಿಸಿಯುಮಳ್ಕಿರೊಳಪ್ಪಿಕೊಂಡಮೃತವರ್ಷಿ  ಕರ  
+
ನಾದನರ್ವರುಂಪರಸಿತಡವರಿಸಿಯುಂ ತೆಬ್ಬರಿಸಿಯುಮಳ್ಕಿರೊಳಪ್ಪಿಕೊಂಡಮೃತವರ್ಷಿ  ಕರ<br>
  ಪರಿಷೇಕದಿಂದೆ ಪುತ್ರಸ್ಪರ್ಷನಮಾಪ್ಯಾಯನಕೋಟಿಯಾಗೆ ಪುಳಕಿತ ಗಾತ್ರರುಮಾನಂದ ಬಾಷ್ಪವಾರಿ  
+
  ಪರಿಷೇಕದಿಂದೆ ಪುತ್ರಸ್ಪರ್ಷನಮಾಪ್ಯಾಯನಕೋಟಿಯಾಗೆ ಪುಳಕಿತ ಗಾತ್ರರುಮಾನಂದ ಬಾಷ್ಪವಾರಿ <br>
ಧಾರಾಪರಿಕಲಿತನೇತ್ರರುಮಾಗಿ ಕಿರಿದಾನುಂ ಬೇಗಮಿರ್ದಲ್ಲಿ ಕಾರ್ಯವ್ಯಗ್ರ ಪಾಪಿಪಾಶಾಶ್ರಿತರೆಲ್ಲರುಂ
+
ಧಾರಾಪರಿಕಲಿತನೇತ್ರರುಮಾಗಿ ಕಿರಿದಾನುಂ ಬೇಗಮಿರ್ದಲ್ಲಿ ಕಾರ್ಯವ್ಯಗ್ರ ಪಾಪಿಪಾಶಾಶ್ರಿತರೆಲ್ಲರುಂ<br>
ಕೇಳಲೆಂದು ಮಹೀಭುಜನಿಂತೆಂದಂ-  
+
ಕೇಳಲೆಂದು ಮಹೀಭುಜನಿಂತೆಂದಂ- <br>
ಎನ್ನುವಷ್ಟರಲ್ಲಿ ಸಮೀಪಕ್ಕೆ ಬಂದ ತಂದೆತಾಯಿಗಳ ಚರಣಕ್ಕೆ (ಪಾದಕ್ಕೆ ) ವಿನಯದಿಂದ ತಲೆಬಗ್ಗಿಸಿ ನಮಸ್ಕರಿಸಿದ(ದುರ್ಯೋಧನನು ತನ್ನ ತಂದೆತಾಯಿಗಳಾದ ಧೃತರಾಷ್ಟ್ರ ಗಾಂಧಾರಿಯರಿಗೆ ) ದುರ್ಯೋಧನನ್ನು ಇಬ್ಬರೂ ಹರಸಿದರು.ಮೈಯನ್ನು ಮುಟ್ಟಿ ನೋಡಿ ಯೂ ,ಸಮಾಧಾನ ಮಾಡಿಯೂ ಪ್ರೀತಿಯಿಂದ ಮಗನನ್ನು  ಆಲಂಗಿಸಿದ ಅವರಿಗೆ ಅಮೃತವನ್ನು ಸುರಿಸುವ ಅಭಿಷೇಕಕ್ಕಿಂತ ಮಗನ ಸ್ಪರ್ಷವು ಅತಿಯಾದ ಆನಂದವನ್ನು ಉಂಟುಮಾಡಿತು.ರೋಮಾಂಚಿತವಾದ ಶರೀರವುಳ್ಳವರೂ ಸಂತೋಷದ,  ಕಣ್ಣೀರಿನ ಪ್ರವಾಹದಿಂದ ತುಂಬಿದ  ಕಣ್ಣುಳ್ಳವರೂ ಆದ ಅವರು ಸ್ವಲ್ಪ ಕಾಲ  ಮೌನವಾಗಿದ್ದು ,ಮುಂದಿನ ಕಾರ್ಯದಲ್ಲಿ ಆಸಕ್ತನಾದ ಪಾಪಿ ದುರ್ಯೋಧನನ ಪಾಶಕ್ಕೆ ಒಳಗಾದವರೆಲ್ಲರೂ ಕೇಳಲೆಂದು ಧೃತರಾಷ್ಟ್ರನು ಹೀಗೆಂದನು.  
+
ಎನ್ನುವಷ್ಟರಲ್ಲಿ ಸಮೀಪಕ್ಕೆ ಬಂದ ತಂದೆತಾಯಿಗಳ ಚರಣಕ್ಕೆ (ಪಾದಕ್ಕೆ ) ವಿನಯದಿಂದ ತಲೆಬಗ್ಗಿಸಿ ನಮಸ್ಕರಿಸಿದ(ದುರ್ಯೋಧನನು ತನ್ನ ತಂದೆತಾಯಿಗಳಾದ ಧೃತರಾಷ್ಟ್ರ ಗಾಂಧಾರಿಯರಿಗೆ ) ದುರ್ಯೋಧನನ್ನು ಇಬ್ಬರೂ ಹರಸಿದರು.ಮೈಯನ್ನು ಮುಟ್ಟಿ ನೋಡಿ ಯೂ ,ಸಮಾಧಾನ ಮಾಡಿಯೂ ಪ್ರೀತಿಯಿಂದ ಮಗನನ್ನು  ಆಲಂಗಿಸಿದ ಅವರಿಗೆ ಅಮೃತವನ್ನು ಸುರಿಸುವ ಅಭಿಷೇಕಕ್ಕಿಂತ ಮಗನ ಸ್ಪರ್ಷವು ಅತಿಯಾದ ಆನಂದವನ್ನು ಉಂಟುಮಾಡಿತು.ರೋಮಾಂಚಿತವಾದ ಶರೀರವುಳ್ಳವರೂ ಸಂತೋಷದ,  ಕಣ್ಣೀರಿನ ಪ್ರವಾಹದಿಂದ ತುಂಬಿದ  ಕಣ್ಣುಳ್ಳವರೂ ಆದ ಅವರು ಸ್ವಲ್ಪ ಕಾಲ  ಮೌನವಾಗಿದ್ದು ,ಮುಂದಿನ ಕಾರ್ಯದಲ್ಲಿ ಆಸಕ್ತನಾದ ಪಾಪಿ ದುರ್ಯೋಧನನ ಪಾಶಕ್ಕೆ ಒಳಗಾದವರೆಲ್ಲರೂ ಕೇಳಲೆಂದು ಧೃತರಾಷ್ಟ್ರನು ಹೀಗೆಂದನು.  
 
ಮ ||  ಎನಗಂ ಪಾಂಡುಗಮಿಲ್ಲ ಭೇದಮಿಳೆಯಂ ಪಚ್ಛಾಳ್ವಮಾ ಪಾಂಡುನಂದನಂ
 
ಮ ||  ಎನಗಂ ಪಾಂಡುಗಮಿಲ್ಲ ಭೇದಮಿಳೆಯಂ ಪಚ್ಛಾಳ್ವಮಾ ಪಾಂಡುನಂದನಂ
        ದನರುಂ ಸೈದರೆ ನಿನ್ನೊಳೀ ಕಲಹಮುಂ ನಿನ್ನಿಂದಮಾಯ್ತೆಂದೊಡಿಂ |
+
ದನರುಂ ಸೈದರೆ ನಿನ್ನೊಳೀ ಕಲಹಮುಂ ನಿನ್ನಿಂದಮಾಯ್ತೆಂದೊಡಿಂ |
        ಮುನಿವೈ ಗಂಗೆಯ  ಪೆರ್ಮಗಂಗೆ ಘಟಸಂಭೂತಂಗೆ  ಕರ್ಣಾಂಗಸಾ
+
ಮುನಿವೈ ಗಂಗೆಯ  ಪೆರ್ಮಗಂಗೆ ಘಟಸಂಭೂತಂಗೆ  ಕರ್ಣಾಂಗಸಾ
      ಧ್ಯನೊಳಾ ಗಾಂಡಿವಿಯೊಳ್ ಕರುತ್ತಿರಿವರಾರಿಂ ಮಾಡುವಂ ಸಂಧಿಯುಂ ||  
+
ಧ್ಯನೊಳಾ ಗಾಂಡಿವಿಯೊಳ್ ಕರುತ್ತಿರಿವರಾರಿಂ ಮಾಡುವಂ ಸಂಧಿಯುಂ ||  
 
ನನಗೂ ಪಾಂಡುವಿಗೂ ಭೇದವಿಲ್ಲ;  ಈ ಭೂಮಿಯನ್ನು(ರಾಜ್ಯವನ್ನು) ಭಾಗ ಮಾಡಿಕೊಂಡು ಆಳೋಣ.ಆ ಪಾಂಡುವಿನ ಮಕ್ಕಳು (ಪಾಂಡವರು)ನಿನ್ನೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳುವವರೇ ಆಗಿದ್ದಾರೆ.ನಿನ್ನಿಂದಲೇ  ಈ ಕಲಹವು  ಸಂಭವಿಸಿತು ಎಂದರೆ ನೀನು ಇನ್ನೂ ಕೋಪಿಸಿಕೊಳ್ಳುತ್ತೀಯೆ.ಭೀಷ್ಮ,ದ್ರೋಣ, ಕರ್ಣರಿಗೂ ಅಸಾಧ್ಯವಾದ (ಸೋಲಿಸಲು ಸಾಧ್ಯವಿಲ್ಲದ) ಆ ಆರ್ಜುನ(ಗಾಂಡೀವಿ) ನೊಂದಿಗೆ ಕೋಪದಿಂದ ಯುದ್ಧ ಮಾಡುವವರು  ಯಾರಿದ್ದಾರೆ?ಆದ್ದರಿಂದ ಅವರೊಂದಿಗೆ (ಪಾಂಡವರೊಂದಿಗೆ ) ಸಂಧಿ ಮಾಡಿಕೊಳ್ಳುವುದೇ ಉಚಿತವಾದುದುಎಂದು ಧೃತರಾಷ್ಟ್ರನು ದುರ್ಯೋಧನನಿಗೆ ಹೇಳಿದನು.
 
ನನಗೂ ಪಾಂಡುವಿಗೂ ಭೇದವಿಲ್ಲ;  ಈ ಭೂಮಿಯನ್ನು(ರಾಜ್ಯವನ್ನು) ಭಾಗ ಮಾಡಿಕೊಂಡು ಆಳೋಣ.ಆ ಪಾಂಡುವಿನ ಮಕ್ಕಳು (ಪಾಂಡವರು)ನಿನ್ನೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳುವವರೇ ಆಗಿದ್ದಾರೆ.ನಿನ್ನಿಂದಲೇ  ಈ ಕಲಹವು  ಸಂಭವಿಸಿತು ಎಂದರೆ ನೀನು ಇನ್ನೂ ಕೋಪಿಸಿಕೊಳ್ಳುತ್ತೀಯೆ.ಭೀಷ್ಮ,ದ್ರೋಣ, ಕರ್ಣರಿಗೂ ಅಸಾಧ್ಯವಾದ (ಸೋಲಿಸಲು ಸಾಧ್ಯವಿಲ್ಲದ) ಆ ಆರ್ಜುನ(ಗಾಂಡೀವಿ) ನೊಂದಿಗೆ ಕೋಪದಿಂದ ಯುದ್ಧ ಮಾಡುವವರು  ಯಾರಿದ್ದಾರೆ?ಆದ್ದರಿಂದ ಅವರೊಂದಿಗೆ (ಪಾಂಡವರೊಂದಿಗೆ ) ಸಂಧಿ ಮಾಡಿಕೊಳ್ಳುವುದೇ ಉಚಿತವಾದುದುಎಂದು ಧೃತರಾಷ್ಟ್ರನು ದುರ್ಯೋಧನನಿಗೆ ಹೇಳಿದನು.
 
ಹರಿಣಿ ||  ಪಗೆಗೆ ಕಣಿಯೊಂದುಂಟೇ ನಣ್ಪಿಂಗಾಮಾಗರಮುಂಟೆ  ನೀಂ
 
ಹರಿಣಿ ||  ಪಗೆಗೆ ಕಣಿಯೊಂದುಂಟೇ ನಣ್ಪಿಂಗಾಮಾಗರಮುಂಟೆ  ನೀಂ

೦೬:೧೩, ೨೦ ಫೆಬ್ರುವರಿ ೨೦೧೫ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

ಪದ್ಯಭಾಗ ಎಮ್ಮ ನುಡಿಗೇಳ್

ಮುನ್ನ ತಯಾರಿ

ಹಳಗನ್ನಡ ಕವಿಗಳನ್ನು ಪಟ್ಟಿ ಮಾಡುವುದು.ಐಚ್ಛಿಕವಾಗಿ ಚಂಪೂಕವಿಗಳ ಬಗ್ಗೆ ತಿಳಿದುಕೊಳ್ಳಲು ಸೂಕ್ತ ಸನ್ನಿವೇಶ ರೂಪಿಸುವುದು .ಕವಿಗಳ ಹೆಸರನ್ನು ಚೀಟಿಯಲ್ಲಿ ಬರೆದು ಹಳಗನ್ನಡ ಕವಿಗಳನ್ನು ಬೇರ್ಪಡಿಸಲು ಹೇಳುವುದು. ಹಳಗನ್ನಡ ಗದ್ಯ ಪದ್ಯಗಳ ಶೀರ್ಷಿಕೆಗೆ ಸಂಬಂಧಿಸಿದಂತೆ ಹೊಸಗನ್ನಡಕ್ಕೆ ಪರಿವರ್ತಿಸಿ ನಾಟಕ ರೂಪಕ್ಕೆ ತಂದು ವಿದ್ಯಾರ್ಥಿಗಳಿಂದ ಅಭಿನಯಿಸಿ ತೋರಿಸುವುದು.ಗಮಕ ಶೈಲಿಯ ಅಥವಾ ಕಾವ್ಯವಾಚನ ಪದ್ಯಗಳನ್ನು ಧ್ವನಿಸುರುಳಿಗೆ ಅಳವಡಿಸಿ ವಿದ್ಯಾರ್ಥಿಗಳಿಗೆ ಪರಿಚಯಿಸುವದು .ಮಹಾಭಾರತ ರಾಮಾಯಣ ಪುರಾಣಗಳಿಗೆ ಸಂಬಂಧಿಸಿದಂತೆ ಚಿತ್ರಪಟಗಳನ್ನು ತಯಾರಿಸಿ ಪ್ರದರ್ಶಿಸುವುದು .ಕವಿ ಪಂಪನ ಭಾವಚಿತ್ರ ಅಥವಾ ದೃಶ್ಯಾವಳಿಯ ಮೂಲಕ ಪಂಪನನ್ನು ಪರಿಚಯಿಸುತ್ತ ಮುಖ್ಯಾಂಶಗಳನ್ನು ದಾಖಲಿಸಿಕೊಳ್ಳುವಂತೆ ಮಾಡುವುದು.

ಕಲಿಕೋದ್ದೇಶಗಳು

  • ಭಾಷೆಯನ್ನು ದೋಷ ರಹಿತ ಮತ್ತು ಪರಿಣಾಮಕಾರಿಯಾಗಿ ಬಳಸುವ ಪ್ರೌಢಿಮೆ ಬೆಳೆಸುವುದು.
  • ಭಾಷಾ ಸ್ಪಷ್ಟತೆ ಹಾಗೂ ತಾತ್ವಿಕವಾಗಿ ಗ್ರಹಿಸುವ ಹಿನ್ನೆಲೆಯಲ್ಲಿ ಭಾಷಾಂಶ ,ಛಂದಸ್ಸು ಅಲಂಕಾರಗಳನ್ನು ಕ್ರಿಯಾತ್ಮಕವಾಗಿ ಬೆಳೆಸುವುದು.
  • ಸಾಮಾಜಿಕ ನ್ಯಾಯ ,ಸಹಬಾಳ್ವೆ ,ಸ್ವಾವಲಂಬನೆ ,ಆತ್ಮಗೌರವ,ವಿಶ್ವಶಾಂತಿ, ಮೊದಲಾದ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಪ್ರೇರೇಪಿಸುವುದು.
  • ಹಳಗನ್ನಡ ಕಾವ್ಯವನ್ನು ಸ್ಪಷ್ಟವಾಗಿ ಓದುವ ಸಾಮರ್ಥ್ಯ ಬೆಳೆಸುವುದು.
  • ಕೃತಿ ಕರ್ತೃವಿನ ವೈಶಿಷ್ಟ್ಯ ಪರಿಚಯವಾಗುವ ರೀತಿಯಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಪರಿಚಯಿಸುವುದು.
  • ಚಂಪೂ ಕಾವ್ಯದ ಬಗ್ಗೆ ತಿಳಿಸುವುದು.

ಕವಿ ಪರಿಚಯ

ಪಂಪನ ಕುರಿತು ಹೆಚ್ಚಿನ ಮಾಹಿತಿಗೆ - ವಿಕಿ ಮಾಹಿತಿ [೧] [೨]

http://www.kannadakavi.com/kavikoota/1halekannada/pampa.htm http://www.kannadakavi.com/kavikoota/1halekannada/pampa.htm [೩] [೪]

ನಿರೀಕ್ಷಿತ ಭಾಷಾ ಕೌಶಲ

  • ಹಳಗನ್ನಡ ಪದ್ಯವನ್ನು ಪದವಿಂಗಡಿಸಿ ಅರ್ಥಬದ್ಧವಾಗಿ ಓದುವರು .
  • ರಳ,ಕುಳ ಗಳ ಪರಿಚಯ ಹೊಂದುವರು.
  • ಪದ್ಯದ ಭಾವಾರ್ಥವನ್ನು ಹೇಳುವರು ಮತ್ತು ಸಂಗ್ರಹಿಸಿ ಬರೆಯುವರು.
  • ನಿಗದಿತ ಪದ್ಯದ ನುಡಿಯನ್ನು ಕಂಠಪಾಠ ಮಾಡಿ ಒಪ್ಪಿಸುವರು.

ಭಾಷಾ ವೈವಿಧ್ಯತೆಗಳು ಅಥವಾ ಸಾಹಿತ್ಯ ಪ್ರಕಾರಗಳು

 ಹಳಗನ್ನಡ ಸಾಹಿತ್ಯ , 

ಶಬ್ದಕೋಶ

ವಿನಮಿತ,ತೆಬ್ಬರಿಸಿಯುಂ,ಮಹೀಭುಜ , ದೀವಿಗೆ, ಪೆರ್ಮರ ,ಒಡಂಬಡಿಸಿ ,ಪಡಲಿಡು,


ಛಂಧಸ್ಸು /ಅಲಂಕಾರ

ಛಂದಸ್ಸಿನ ಮಾಹಿತಿಗೆ ಕೆಳಗಿರುವ ಕೊಂಡಿಗಳನ್ನು ಒತ್ತಿ [೫]

"ಚಂಪಕಮಾಲಾವೃತ್ತ"

[೬]

[೭]

ಬೋಧನಾ ವಿಧಾನ

ಕಥನ ಪದ್ಧತಿ ,ಪ್ರಶ್ನೋತ್ತರ ವಿಧಾನ, ನಾಟಕ ಪದ್ಧತಿ

ತರಗತಿ ಪಾಠ ಯೋಜನೆ

  • ಪದ್ಯ ವಿಂಗಡನೆ
  • ಮುನ್ತಯಾರಿ ಮತ್ತು ಕವಿ ಪರಿಚಯ
  • ಯುದ್ಧಭೂಮಿಗೆ ಧೃತರಾಷ್ಟ್ರ ಮತ್ತು ಗಾಂಧಾರಿಯರ ಆಗಮನ
  • ದುರ್ಯೋಧನನ್ನು ನೋಡಿ ಆನಂದಿಸಿದ ಅವನ ತಂದೆ ತಾಯಿಗಳು
  • ಧೃತರಾಷ್ಟ್ರನ ಬುದ್ಧಿ ಮಾತುಗಳು
  • ಪಗೆ ನಣ್ಪುಗಳಿಗೆ ಕಾರಣ (ಅರ್ಥಶಾಸ್ತ್ರದಲ್ಲಿ ಹೇಳಿದಂತೆ )
  • ಗಾಂಧಾರಿಯ ಅಳಲು ಮತ್ತು ಹಿತೋಪದೇಶ
  • ಅವಧಿ

೭ ಅವಧಿಗಳು

  • ಪ್ರಕ್ರಿಯೆ

ಮಹಾಭಾರತದ ಕಥೆಯನ್ನು ದೃಶ್ಯಾವಳಿ ಬಳಸಿ ಹೇಳುವುದು ಮಾದರಿ ವಾಚನ ವಿದ್ಯಾರ್ಥಿ ವಾಚನ ಮೌನ ಓದು ಕೇಂದ್ರ ಪ್ರಶ್ನೆಗಳು ವಿವರಣೆ ಸಾರಾಂಶ

ಸಾರಾಂಶ

ಪದ್ಯದ ಸಾರಾಂಶ (ಪಂಪಭಾರತಂ ಗದ್ಯಾನುವಾದ -ಎನ್. ಅನಂತರಂಗಾಚಾರ್) ವ|| ಎಂಬೆನ್ನಗಮೆಯ್ದೆ ವಂದ ಪಿತೃದ್ವಂದ್ವ ಚರಣಕ್ಕೆ ವಿನಯವಿನಮಿತೋತ್ತಮಾಂಗ
ನಾದನರ್ವರುಂಪರಸಿತಡವರಿಸಿಯುಂ ತೆಬ್ಬರಿಸಿಯುಮಳ್ಕಿರೊಳಪ್ಪಿಕೊಂಡಮೃತವರ್ಷಿ ಕರ

ಪರಿಷೇಕದಿಂದೆ ಪುತ್ರಸ್ಪರ್ಷನಮಾಪ್ಯಾಯನಕೋಟಿಯಾಗೆ ಪುಳಕಿತ ಗಾತ್ರರುಮಾನಂದ ಬಾಷ್ಪವಾರಿ 

ಧಾರಾಪರಿಕಲಿತನೇತ್ರರುಮಾಗಿ ಕಿರಿದಾನುಂ ಬೇಗಮಿರ್ದಲ್ಲಿ ಕಾರ್ಯವ್ಯಗ್ರ ಪಾಪಿಪಾಶಾಶ್ರಿತರೆಲ್ಲರುಂ
ಕೇಳಲೆಂದು ಮಹೀಭುಜನಿಂತೆಂದಂ-
ಎನ್ನುವಷ್ಟರಲ್ಲಿ ಸಮೀಪಕ್ಕೆ ಬಂದ ತಂದೆತಾಯಿಗಳ ಚರಣಕ್ಕೆ (ಪಾದಕ್ಕೆ ) ವಿನಯದಿಂದ ತಲೆಬಗ್ಗಿಸಿ ನಮಸ್ಕರಿಸಿದ(ದುರ್ಯೋಧನನು ತನ್ನ ತಂದೆತಾಯಿಗಳಾದ ಧೃತರಾಷ್ಟ್ರ ಗಾಂಧಾರಿಯರಿಗೆ ) ದುರ್ಯೋಧನನ್ನು ಇಬ್ಬರೂ ಹರಸಿದರು.ಮೈಯನ್ನು ಮುಟ್ಟಿ ನೋಡಿ ಯೂ ,ಸಮಾಧಾನ ಮಾಡಿಯೂ ಪ್ರೀತಿಯಿಂದ ಮಗನನ್ನು ಆಲಂಗಿಸಿದ ಅವರಿಗೆ ಅಮೃತವನ್ನು ಸುರಿಸುವ ಅಭಿಷೇಕಕ್ಕಿಂತ ಮಗನ ಸ್ಪರ್ಷವು ಅತಿಯಾದ ಆನಂದವನ್ನು ಉಂಟುಮಾಡಿತು.ರೋಮಾಂಚಿತವಾದ ಶರೀರವುಳ್ಳವರೂ ಸಂತೋಷದ, ಕಣ್ಣೀರಿನ ಪ್ರವಾಹದಿಂದ ತುಂಬಿದ ಕಣ್ಣುಳ್ಳವರೂ ಆದ ಅವರು ಸ್ವಲ್ಪ ಕಾಲ ಮೌನವಾಗಿದ್ದು ,ಮುಂದಿನ ಕಾರ್ಯದಲ್ಲಿ ಆಸಕ್ತನಾದ ಪಾಪಿ ದುರ್ಯೋಧನನ ಪಾಶಕ್ಕೆ ಒಳಗಾದವರೆಲ್ಲರೂ ಕೇಳಲೆಂದು ಧೃತರಾಷ್ಟ್ರನು ಹೀಗೆಂದನು. ಮ || ಎನಗಂ ಪಾಂಡುಗಮಿಲ್ಲ ಭೇದಮಿಳೆಯಂ ಪಚ್ಛಾಳ್ವಮಾ ಪಾಂಡುನಂದನಂ ದನರುಂ ಸೈದರೆ ನಿನ್ನೊಳೀ ಕಲಹಮುಂ ನಿನ್ನಿಂದಮಾಯ್ತೆಂದೊಡಿಂ | ಮುನಿವೈ ಗಂಗೆಯ ಪೆರ್ಮಗಂಗೆ ಘಟಸಂಭೂತಂಗೆ ಕರ್ಣಾಂಗಸಾ ಧ್ಯನೊಳಾ ಗಾಂಡಿವಿಯೊಳ್ ಕರುತ್ತಿರಿವರಾರಿಂ ಮಾಡುವಂ ಸಂಧಿಯುಂ || ನನಗೂ ಪಾಂಡುವಿಗೂ ಭೇದವಿಲ್ಲ; ಈ ಭೂಮಿಯನ್ನು(ರಾಜ್ಯವನ್ನು) ಭಾಗ ಮಾಡಿಕೊಂಡು ಆಳೋಣ.ಆ ಪಾಂಡುವಿನ ಮಕ್ಕಳು (ಪಾಂಡವರು)ನಿನ್ನೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳುವವರೇ ಆಗಿದ್ದಾರೆ.ನಿನ್ನಿಂದಲೇ ಈ ಕಲಹವು ಸಂಭವಿಸಿತು ಎಂದರೆ ನೀನು ಇನ್ನೂ ಕೋಪಿಸಿಕೊಳ್ಳುತ್ತೀಯೆ.ಭೀಷ್ಮ,ದ್ರೋಣ, ಕರ್ಣರಿಗೂ ಅಸಾಧ್ಯವಾದ (ಸೋಲಿಸಲು ಸಾಧ್ಯವಿಲ್ಲದ) ಆ ಆರ್ಜುನ(ಗಾಂಡೀವಿ) ನೊಂದಿಗೆ ಕೋಪದಿಂದ ಯುದ್ಧ ಮಾಡುವವರು ಯಾರಿದ್ದಾರೆ?ಆದ್ದರಿಂದ ಅವರೊಂದಿಗೆ (ಪಾಂಡವರೊಂದಿಗೆ ) ಸಂಧಿ ಮಾಡಿಕೊಳ್ಳುವುದೇ ಉಚಿತವಾದುದುಎಂದು ಧೃತರಾಷ್ಟ್ರನು ದುರ್ಯೋಧನನಿಗೆ ಹೇಳಿದನು. ಹರಿಣಿ || ಪಗೆಗೆ ಕಣಿಯೊಂದುಂಟೇ ನಣ್ಪಿಂಗಾಮಾಗರಮುಂಟೆ ನೀಂ

          ಬಗೆಯೆ ಪಗೆಯುಂ ನಣ್ಪುಂ ಕಯ್ಕೊಂಡ ಕಜ್ಜದಿನಲ್ತೆ ಪು  |
           ಟ್ಟುಗುಮರಸುಗಳ್ಗೆಂದೀ ಸಂದರ್ಥಶಾಸ್ರದೊಳೇಕೆ ಪೇಳ್ 
           ಮಗನೆ ನೆಗಳ್ದೈ ಕಾರ್ಯಂ ಮಿತ್ರಾದಿ ಕಾರಕಮೆಂಬುದಂ  ||

ಹಗೆತನಕ್ಕೆ ಒಂದು ಗಣಿಯಿದೆಯೆ? ಸ್ನೇಹಕ್ಕೆ ಒಂದು ಮನೆಯಿದೆಯೆ?ನೀನೇ ಆಲೋಚಿಸು.ಅರಸರಿಗೆ ಶತ್ರುತ್ವ ಮತ್ತು ಮಿತ್ರತ್ವಗಳೆರಡೂ ಅವರು ಕೈಗೊಳ್ಳುವ ಕಾರ್ಯದಿಂದಲ್ಲವೇ ಹುಟ್ಟುವುದು ಎಂದು ರಾಜರಿಗೆ ಯೋಗ್ಯವಾದ ಅರ್ಥಶಾಸ್ರ್ತದಲ್ಲಿ ಹೇಳಿಲ್ಲವೇ?ಅರ್ಥಶಾಸ್ತ್ರದಲ್ಲಿ ಹೇಳಿರುವ ಕೈಗೊಂಡ ಕಾರ್ಯವೇ ಸ್ನೇಹದ್ವೇಷಗಳಿಗೆ ಕಾರಣವೆಂಬ ನೀತಿ ವಾಕ್ಯದಂತೆ ನೀನೇಕೆ ಮಾಡುವುದಿಲ್ಲ ? ಎಂದು ಧೃತರಾಷ್ಟ್ರನು ಮಗನಿಗೆ ಬುದ್ಧಿವಾದ ಹೇಳಿದನು. ಕಂ || ನೀನುಳ್ಳೊಡೆಲ್ಲರೊಳರೆಮೆ

       ಗೇನುಮಳಲ್ ಮನದೊಳಿಲ್ಲದೆಂತೆನೆ ಮಗನೇ  |
      ಭಾನುವೆ ಸಾಲದೆ ಪಗಲೆನಿ
      ತಾನುಂ ದೀವಿಗೆಗಳುರಿದೊಡೇಂ ನಂದಿದೊಡೇಂ ||

ನೀನಿದ್ದರೆ ಎಲ್ಲರೂ ಇದ್ದ ಹಾಗೆ .ಮಗನೆ ನೀನೊಬ್ಬನುಳಿದರೆ ನಮಗೆ ಮನದಲ್ಲಿ ಯಾವ ಚಿಂತೆಯೂ ಇಲ್ಲ.ಅದು ಹೇಗೆಂದರೆ ಸೂರ್ಯನೊಬ್ಬನೇ ಸಾಲದೇ?ಹಗಲಿನಲ್ಲಿ ಎಷ್ಟು ದೀವಿಗೆಗಳು ಉರಿದರೇನು? ಆರಿದರೇನು? (ಹಗಲಿನಲ್ಲಿ ಎಷ್ಟು ದೀವಿಗೆಗಳು ಉರಿದರೂ ಸೂರ್ಯನ ಮಹತ್ವ ಅವುಗಳಿಗೆ ದೊರೆಯುವುದಿಲ್ಲ.ಸೂರ್ಯನ ಪ್ರಭೆಯ ಮುಂದೆ ದೀವಿಗೆಳ ಬೆಳಕು ಕಂದಿ ಹೋಗುತ್ತದೆ.ಅಷ್ಟು ಪ್ರಾಮುಖ್ಯತೆ ಪಡೆಯುವುದಿಲ್ಲ. ಹಾಗೆಯೇ ದುರ್ಯೋಧನನೊಬ್ಬನು ಉಳಿದರೆ ಅವನ ತಂದೆ ತಾಯಿಗಳಿಗೆ ಉಳಿದ ಮಕ್ಕಳನ್ನು ಕಳೆದುಕೊಂಡ ದುಃಖ ಅಷ್ಟಾಗಿ ಕಾಡಲಾರದೇನೋ) ವ|| ಅದಲ್ಲೆದೆಯುಂ ಪಾಂಡವರಪ್ಪೊಡೆನಗೆ ಪಾಂಡುರಾಜಂಗೆ ಬೆಸಕೈಯ್ದುದೆನೆ ಬೆಸಕೈವರೆಂದುದಂ

        ಮೀರುವವರಲ್ಲರವರನಾನೆಂತುಮೊಡಂಬಡಿಸಿ ನೀನೆಂದುದನೆನಿಸುವೆನಿದರ್ಕೆ  ಮಾರ್ಕೊಳ್ಳದೊಡಂಬಡು 
       ನಿನ್ನಂ ಕಯ್ಯನೊಡ್ಡಿ ಬೇಡಿದಪ್ಪೆನೆಂದ ಧೃತರಾಷ್ಟ್ರನ ನುಡಿಗನುಬಲಮಾಗಿ ಗಾಂಧಾರಿಯಿಂತೆಂದಳ್-

ಅದಲ್ಲದೆಯೂ ಪಾಂಡವರಾದರೊ ನನ್ನೊಡನೆ ಪಾಂಡುರಾಜನೊಂದಿಗೆ ಹೇಗೆ ವಿಧೇಯರಾಗಿದ್ದರೋ ಅಷ್ಟೇ ವಿಧೆಯರಾಗಿದ್ದಾರೆ.ಅವನೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದರೋ ಹಾಗೆಯೇ ನಡೆದುಕೊಳ್ಳುವವರು.ನಾನು ಹೇಳಿದುದನ್ನು ಅವರು ಮೀರುವುದಿಲ್ಲ.ಅವರನ್ನು ನಾನು ಹೇಗಾದರೂ ಒಪ್ಪಿಸಿ ನೀನು ಹೇಳಿದುದಕ್ಕೆ ಒಪ್ಪಿಕೊಳ್ಳುವ ಹಾಗೆ ಮಾಡುವೆನು.ಇದಕ್ಕೆ ನೀನು ಪ್ರತಿಯಾಡದೆ ಒಪ್ಪಿಕೊ.ನಿನ್ನನ್ನು ಕೈಯೊಡ್ಡಿ ಬೇಡಿಕೊಳ್ಳುವೆನು ಎಂದು ಧೃತರಾಷ್ಟ್ರನು ದುರ್ಯೋಧನನಿಗೆ ಹೇಳಿದಾಗ ಅವನ ಮಾತನ್ನು ಬೆಂಬಲವಾಗಿ (ಅನುಮೋದಿಸಿ) ಗಾಂಧಾರಿಯು ಹೀಗೆ ಹೇಳಿದಳು. ಚಂ || ಕುರುಕುಳನಂದನಂ ಪವನನಂದನನೆಂಬ ಮದಾಂಧಗಂಧಸಿಂ

    ಧುರಮೆ     ಕರುತ್ತು ಪಾಯೆ ಪಡಲಿಟ್ಟವೊಲಾದುದು ಪುಣ್ಯದೊಂದು ಪೆ|
    ರ್ಮರನುಳಿವಂತೆ ನೀನುಳಿದೆಯಿನ್ನಿರಿವನ್ನರುಮಿಲ್ಲ ಮುತ್ತರುಂ
    ಕುರುಡರುಮೆನ್ನದೆಮ್ಮ ನುಡಿಗೇಳ್ ಮಗನೇ ಬಗೆ ತಂದೆಗಿಂಬುಕೆಯ್  ||

ಕುರುಕುಲವೆನ್ನುವ ನಂದನವನವು ಪವನನಂದನನೆಂಬ (ಭೀಮ)ಮದದಿಂದ ಅಂಧನಾದ ಆನೆಯ ಕೋಪದ ದಾಳಿಗೆ ತುತ್ತಾಗಿ ಧ್ವಂಸವಾಯಿತು.ಪುಣ್ಯದಿಂದ ಒಂದು ದೊಡ್ಡ ಮರವು ಉಳಿವ ಹಾಗೆ ನೀನೊಬ್ಬನು ನಮ್ಮ ಪಾಲಿಗೆ ಉಳಿದಿದ್ದೀಯೆ.ಇನ್ನು ಯುದ್ಧ ಮಾಡಿವವರು ಯಾರೂ ಇಲ್ಲ.ಮುದುಕರು ,ಕುರುಡರು ಎನ್ನದೆ ನಮ್ಮ ಮಾತನ್ನು ಕೇಳು ಮಗನೆ.ತಂದೆಯ ಮಾತನ್ನು ಒಪ್ಪಿಕೋ. ಎಂದು ಗಾಂಧಾರಿಯು ದುರ್ಯೋಧನನಿಗೆ ಹೇಳಿದಳು.

ಮೌಲ್ಯಮಾಪನ

ಭಾರತದ ಎರಡು ಮಹಾಕಾವ್ಯಗಳು ಯಾವುವು ? ಮೂಲ ಮಹಾಭಾರತವನ್ನು ಬರೆದವರು ಯಾರು ? ಮಹಾಭಾರತವನ್ನು ಕನ್ನಡದಲ್ಲಿ ಯಾರು ಯಾರು ಬರೆದಿದ್ದಾರೆ ? ಮಹಾಭಾರತದ ಮುಖ್ಯ ಪಾತ್ರಗಳು ಯಾವುವು ? ಪವನನಂದನ ಯಾರು ? ಘಟ ಸಂಭೂತ ಯಾರು ? ಮಹಾಭಾರತ ಯುದ್ಧಕ್ಕೆ ಯಾರು ಕಾರಣ ಎಂದು ಧೃತರಾಷ್ಟ್ರನು ಹೇಳುವನು ? ಹಗೆ ನಂಟಿನ ಕುರಿತು ಅರ್ಥಶಾಸ್ತ್ರದಲ್ಲಿ ಏನು ಹೇಳಿದೆ ?








ಹೆಚ್ಚುವರಿ ಸಂಪನ್ಮೂಲಗಳು

ವಿಕ್ರಮಾರ್ಜುನ ವಿಜಯ : ಒಂದು ಸಮೀಕ್ಷೆ [೮]

[೯]

-೧-

ಉಪಯುಕ್ತ ವೆಬ್ ಪುಟಗಳು

[೧೦] [೧೧]

[೧೨]


[೧೩] ಒಂದು ಚಿಂತನೆ

ಆಡಿಯೋ

ವಿಡಿಯೋ

ಪಂಪನ ಕುರಿತಾದ ವಿಡಿಯೋ ವೀಕ್ಷಣೆಗೆ ಕೆಳಗಿನ ಕೊಂಡಿ ಒತ್ತಿ . [೧೪]

[೧೫]

ಸಾಹಿತ್ಯ ಪೂರಕ ಪುಸ್ತಕಗಳು

ಪಂಪನ ವಿಕ್ರಮಾರ್ಜುನ ವಿಜಯ , ರನ್ನನ ಗದಾ ಯುದ್ಧ ,ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ,ಡಿ.ವಿ.ಜಿ.ಯವರ ಶ್ರೀಮದ್ಭಗವದ್ಗೀತಾ ತಾತ್ಪರ್ಯ, [1] ಸುಜನಾ : ಪಂಪಭಾರತದ ವಸ್ತುವಿನ್ಯಾಸ : ಪಂಪ : ಒಂದು ಅಧ್ಯಯನ, (೧೯೭೪) ಬೆಂಗಳೂರು ವಿಶ್ವವಿದ್ಯಾಲಯ, ಪು. ೧೧೯ [2] ಅಲ್ಲೇ, ಪು. ೧೧೯ [3] ಪಂಪನಿಗಿಂತ ಹಿಂದೆಯೆ ಮಹಾಭಾರತವನ್ನು ಕುರಿತು ಕನ್ನಡದಲ್ಲಿ ಕಾವ್ಯರಚನೆಯಾದ ಸಾಧ್ಯತೆಯನ್ನು, ಕವಿರಾಜಮಾರ್ಗದಲ್ಲಿ ಮತ್ತು ಮುಂದಿನ ಕೆಲವು ಲಕ್ಷಣ ಹಾಗೂ ಸಂಗ್ರಹ ಕೃತಿಗಳಲ್ಲಿ, ಮಹಾಭಾರತ ಕತೆಗೆ ಸಂಬಂಧಿಸಿದ ಬಿಡಿ ಪದ್ಯಗಳು ಸಮರ್ಥಿಸುತ್ತವೆಯಾದರೂ, ನಮ್ಮ ಮಟ್ಟಿಗೆ ಪಂಪ ಭಾರತವೇ ಕನ್ನಡದ ಆದಿಕಾವ್ಯವಾಗಿದೆ. [4] ಈ ತಂತ್ರ ಪಂಪನದೇನೂ ಅಲ್ಲ, ಅದು ಅವನಿಗಿಂತ ಹಿಂದೆ ಗುಣವರ್ಮನ ಶೂದ್ರಕದಲ್ಲಿಯೆ ಇತ್ತು ಎನ್ನುವ ಭಾವನೆಗೆ ಆಧಾರವಿದ್ದರೂ, ಗುಣವರ್ಮನ ಶೂದ್ರಕ ದೊರೆಯುವ ತನಕ, ಪಂಪನೆ ಈ ಹೊಸ ತಂತ್ರದ ನಿರ್ಮಾಪಕ ಎಂದು ಇಟ್ಟುಕೊಳ್ಳಬೇಕಾಗಿದೆ. [5] ಎಂ. ಚಿದಾನಂದ ಮೂರ್ತಿ : ಪಂಪಕವಿ ಮತ್ತು ಯುಗಧರ್ಮ : ಪಂಪ : ಒಂದು ಅಧ್ಯಯನ ಪು. ೨೬೯. [6] ನೋಡಿ-ಪಂಪ : ಒಂದು ಅಧ್ಯಯನ ಪು.೨೩೧, ೨೭೧, ೨೮೬ [7] ಕೆ.ವಿ. ಸುಬ್ಬಣ್ಣ : ಪಂಪನ ಕವಿತೆ : ಅನುಸಂಧಾನಕ್ಕೆ ಹೊಸಮಾರ್ಗ, ಪಂಪ : ಒಂದು ಅಧ್ಯಯನ,  ಪು. ೩೦೮. [8] ಪಂಪ : ಒಂದು ಅಧ್ಯಯನ : ಸುಜನಾ ಅವರ ಲೇಖನ : ಪಂಪಭಾರತದ ವಸ್ತು ವಿನ್ಯಾಸ, ಈ ಬಗೆಯ ದೃಷ್ಟಿಯಿಂದ ರಚಿತವಾಗಿದೆ. [9] ಎಂ. ಚಿದಾನಂದಮೂರ್ತಿ : ‘ಪಂಪಕವಿ ಮತ್ತು ಯುಗಧರ್ಮ’ ಅಲ್ಲೇ, ಪು.೨೭೫. [10] ಕೆ.ವಿ. ಸುಬ್ಬಣ್ಣ : ಪಂಪನ ಕವಿತೆ : ಅನುಸಂಧಾನಕ್ಕೆ ಹೊಸಮಾರ್ಗ, ಅಲ್ಲೇ, ಪು. ೩೧೪-೧೫. [11] ಟಿ.ಎಸ್. ವೆಂಕಣ್ಣಯ್ಯ : ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಇತರ ಲೇಖನಗಳು, ಪು. ೬೧. [12] ಜಿ.ಎಚ್. ನಾಯಕ: ಪಂಪನ ಅಭಿವ್ಯಕ್ತಿ. ಪಂಪ: ಒಂದು ಅಧ್ಯಯನ, ಪು. ೨೧೪. [13] ಎಚ್.ಎಮ್. ಚನ್ನಯ್ಯ : ಪಂಪನಲ್ಲಿ ಸಾಮಾಜಿಕತೆಯ ಅರಿವು. ಅಲ್ಲೇ, ಪು. ೨೩೨, ೨೩೩ ಮತ್ತು ೨೪೧. [14] ಎಲ್. ಬಸವರಾಜು : ಅಲ್ಲೇ, ಪು. ೩೧೭. [15] I.A. Richards: Principles of Literary criticism p. 27. [16] ರಂ.ಶ್ರೀ. ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ, ಪು. ೯೮ [17] ರಂ.ಶ್ರೀ. ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ, ಪು. ೯೬.

ಭಾಷಾ ಚಟುವಟಿಕೆಗಳು/ ಯೋಜನೆಗಳು

ಮಹಾಭಾರತದ ವಿಭಿನ್ನ ಪಾತ್ರಗಳ ಅಭಿನಯ , ಪಾತ್ರಗಳ ವಿಮರ್ಶೆ, ಮಹಾಭಾರತದ ಪ್ರಸಂಗಗಳನ್ನು ಚಿತ್ರರೂಪದಲ್ಲಿ ಬಿಡಿಸುವುದು,ಮಹಾಭಾರತದ ಕಥೆ ಸಂಗ್ರಹ , ಪಂಪನ ಸಮಕಾಲೀನ ಕವಿಗಳ ಮಾಹಿತಿ ಸಂಗ್ರಹ ,

ಪದ್ಯ ಬಗ್ಗೆ ಹಿಮ್ಮಾಹಿತಿ