"ಜನಪದ ಕಲೆಗಳ ವೈಭವ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೩೯ intermediate revisions by ೨ users not shown)
೩ ನೇ ಸಾಲು: ೩ ನೇ ಸಾಲು:
 
ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ.
 
ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ.
  
ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಇದಕ್ಕಾಗಿ ಸರಕಾರ ಪ್ರೋತ್ಸಾಹಕವಾಗಿ ಜಾನಪದ ಅಕಾಡೆಮಿ ಸ್ಥಾಪಿಸಿ ಲಕ್ಷಾಂತರ ರುಪಾಯಿ ಖರ್ಚಿಸುತ್ತಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸುತ್ತಿದೆ. ಕೆಲವು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಜನಪದ ಕಲೆಗಳನ್ನು ಪರಿಚಯಿಸುವ ಕೃತಿಯೊಂದನ್ನು ಹೊರತಂದಿದೆ. ಇದರ ಸಂಪಾದಕರು ಜಾನಪದ ಚಿಂತಕ ಗೊ. ರು. ಚನ್ನಬಸಪ್ಪ ಅವರು.
+
ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ.  
 
 
ಈ ಕೃತಿಯಲ್ಲಿ ಹತ್ತಾರು ವಿದ್ವಾಂಸರು ನಶಿಸುತ್ತಿರುವ ಜಾನಪದ ಕಲೆಗಳನ್ನು ಗುರ್ತಿಸಿ, ಮಾಹಿತಿ ಸಂಗ್ರಹಿಸಿದ್ದಾರೆ. ಹೀಗಾಗಿ ಕರ್ನಾಟಕದ ನೂರಾರು ಜನಪದ ಕಲೆಗಳ ಪರಿಚಯ ರೇಖಾಚಿತ್ರ ಹಾಗೂ ಛಾಯಾಚಿತ್ರಗಳಿಂದ ಸುಂದರವಾಗಿ ಮೂಡಿಬಂದಿದೆ. ಅಪರೂಪದ ದಾಖಲೆಗಳ ಈ ಕೃತಿಯನ್ನು ಹೊರತರಲು ಹಿರಿಯರಾದ ಗೊ. ರು. ಚನ್ನಬಸಪ್ಪ ಅವರು ಪಟ್ಟ ಶ್ರಮ ದಾಖಲಾರ್ಹ ಹಾಗೂ ಅಭಿನಂದನೀಯ. ಅಂಥ ಕಲೆಗಳಲ್ಲಿ ಕೆಲವು ಮಹತ್ವದ್ದನ್ನು ವಿಶ್ವಾದ್ಯಂತದ ಕನ್ನಡಿಗರಿಗೆ ಈ ಮೂಲಕ ಪ್ರತೀ ತಿಂಗಳು ಪರಿಚಯಿಸುತ್ತೇವೆ. ಆ ನಿಟ್ಟಿನಲ್ಲಿನ ಮೊದಲ ಭಾಗವಾಗಿ ಕಂಸಾಳೆ ಹಾಗೂ ಉಮ್ಮತ್ತಾಟ್ ಎಂಬ ಜಾನಪದ ಕಲೆಗಳು ಇಲ್ಲಿದೆ.
 
  
 
=ಕಲಿಕೋದ್ದೇಶಗಳು=
 
=ಕಲಿಕೋದ್ದೇಶಗಳು=
<nowiki>*</nowiki> ನಮ್ಮ ನಾಡಿನ ಜಾನಪದ ಕಲೆ ಉಳಿಸುವದು.
+
====ಪಾಠದ ಉದ್ದೇಶ====
 
+
#ಗ್ರಾಮೀಣ ಆಚರಣೆಗಳ ಪರಿಚಯ ಮತ್ತು ಅದರ ಮಹತ್ವವನ್ನು ತಿಳಿಯುವುದು
<nowiki>*</nowiki> ಜಾನಪದರ ಕಲೆಗಳಿಂದ ಪುರ್ವಜರನ್ನು ನೆನಸಿಕೊಳುವದು.
+
#ಜಾನಪದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅರ್ಥೈಸುವುದು
 
+
#ವೈವಿಧ್ಯಮಯ ಆಚರಣೆಗಳ ಹಿನ್ನಲೆ ಮತ್ತು ಪ್ರಸ್ತುತ ಸ್ಥಿತಿಯನ್ನು ತಿಳಿಯುವುದು
<nowiki>*</nowiki> ಈ ಕಲೆಗಳು ನಮ್ಮ ನಾಡಿನ ವ್ಯೆವಿದ್ಯತೆಯನ್ನು ತಿಳಿಸುವದು.
+
====ಭಾಷಾ ಕಲಿಕಾ ಗುರಿಗಳು====
 +
# ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಜಾನಪದ ಆಚರಣೆಯ ಮಹತ್ವವನ್ನು ತಿಳಿಯುವುದು
 +
# ಗ್ರಾಮೀಣ ಪದಗಳಿಗೆ ಅಥವ ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಅರ್ಥವನ್ನು ತಿಳಿಯುವುದು
 +
# ತಮ್ಮ ಊರಿನ ವಿಶೇಷ ಆಚರಣೆಯನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
 +
# ಗ್ರಾಮೀಣ ಸಂಪ್ರದಾಯಗಳನ್ನು ತಿಳಿಯುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
 +
# ಗ್ರಾಮೀಣ ಸಂಪ್ರದಾಯದ ವರದಿಯ ರೂಪದಲ್ಲಿ ಲೇಖನವನ್ನು ಮರುಸೃಷ್ಟಿಸುವುದು
  
 
=ಕವಿ ಪರಿಚಯ =
 
=ಕವಿ ಪರಿಚಯ =
 
=ಶಿಕ್ಷಕರಿಗೆ ಟಿಪ್ಪಣಿ=
 
=ಶಿಕ್ಷಕರಿಗೆ ಟಿಪ್ಪಣಿ=
ಕಂಸಾಳೆ :
+
'''ವೀರಗಾಸೆ'''
  
ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುತ್ತ ಒಂದು ವಿಶಿಷ್ಟ ಜಾನಪದ ಸಂಪ್ರದಾಯವನ್ನು ಬೆಳಸಿಕೊಂಡು ಬಂದಿದೆ ಕಂಸಾಳೆ ಪ್ರಾಕಾರ. ಕಂಸಾಳೆಯ ಕಲಾವಿದರು ಪ್ರಮುಖವಾಗಿ ಮೈಸೂರು ಜಿಲ್ಲೆಯ ಮಲೆ ಮಹದೇಶ್ವರನ ಭಕ್ತರು. ಮಂಡ್ಯ-ಬೆಂಗಳೂರು ಜಿಲ್ಲೆಗಳಲ್ಲೂ ವಿರಳವಾಗಿ ಕಾಣುತ್ತಾರೆ. ಜಾನಪದ ಸತ್ವವುಳ್ಳ ಕಥನಗೀತೆ, ಕಂಚಿನ ತಾಳಗಳ ವಿಶಿಷ್ಟವಾದ ಶಬ್ದ ಹಾಗೂ ಕಲಾವಿದರ ಕೈಚಳಕಗಳ ಸುಂದರ ಸಮ್ಮಿಳನದಿಂದಾಗಿ ಈ ಕಲೆ ವಿಸ್ಮಯಕಾರಕವಾಗಿ ಜನಮನವನ್ನು ತಣಿಸಿ ಶ್ರವಣಾನಂತವುಂಟುಮಾಡುತ್ತದೆ. `ಕಂಸಾಳೆ’ ಎನ್ನುವುದು ಕಲಾವಿದರು ಕೈಯಲ್ಲಿ ಹಿಡಿಯುವ ಒಂದು ಬಗೆಯ ವಾದ್ಯ ವಿಶೇಷ. ಭಿಕ್ಷಾಪಾತ್ರೆಯಂತಿರುವ, ಮಧ್ಯೆ ದಾರದ ಕುಚ್ಚು ಕಟ್ಟಿದ, ಅಂಗೈ ಅಗಲದ ಮಿಶ್ರಲೋಹದ ಒಂದು ಬಟ್ಟಲು ಎಡಗೈಯಲ್ಲಿದ್ದರೆ, ಬಲಗೈಯಲ್ಲಿ ಮಟ್ಟಸವಾದ ತಾಳವಿರುತ್ತದೆ. ಮುಚ್ಚಳದ ನಡುವಿನ ಹೊರಭಾಗ ಉಬ್ಬಿರುತ್ತದೆ. ಆ ಉಬ್ಬಿನ ರಂಧ್ರದಿಂದ ಬಿಗಿದ ನೀಳವಾದ ದಾರ ಗೊಂಡೆಗಳಿಂದ ಅಲಂಕೃತವಾಗಿ ಬಲಗೈ ಮೇಲಿಂದ ಇಳಿಬಿದ್ದಿರುತ್ತದೆ.ಸಾಮಾನ್ಯವಾಗಿ ಕಂಸಾಳೆಯ ಮೇಳದಲ್ಲಿ ಮೂರು ಜನರಿರುತ್ತಾರೆ. ವೃತ್ತಿ ಗಾಯಕರಾದ ಕಂಸಾಳೆಯವರಿಗೆ ವಿಶೇಷವಾದ ವೇಷಭೂಷಣಗಳೇನೂ ಇರುವುದಿಲ್ಲ. ಸಾಧಾರಣವಾಗಿ ಅಂಗಿ, ಪಂಚೆ, ಹೆಗಲಲ್ಲಿ ಜೋಳಿಗೆ, ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ, ಇವರಲ್ಲಿ ಇಬ್ಬರು ಏಕತಾರಿ ಕಂಜರ ಹಿಡಿದು ಹಿಮ್ಮೇಳದವರಾಗುತ್ತಾರೆ. ಇನ್ನೊಬ್ಬ ಮುಮ್ಮೇಳದವನಾಗಿ ನಡುವೆ ಕಂಸಾಳೆ ಹಿಡಿದು ಕುಳಿತಿರುತ್ತಾನೆ. ಎಡಗೈ ಬಟ್ಟಲನ್ನು ಮೇಲುಮುಖವಾಗಿ ಅಂಗೈ ಮೇಲೆ ಇರಿಸಿಕೊಂಡು. ಬಲಗೈಯ ಮೇಲು ತಾಳವನ್ನು ಕುಟ್ಟುವುದರಿಂದ ಕಂಚಿನ ಕಣಿ ಕಣಿ ನಾದ ಉಂಟಾಗುತ್ತದೆ. ವಿವಿಧ ಧಾಟಿಯ ವಿವಿಧ ತಾಳದ ಹಾಡುಗಳಿಗೆ ನಾದ ಮಧುರ ಹಿನ್ನಲೆಯಾಗುತ್ತದೆ. ಹಬ್ಬ ಹರಿದಿನಗಳಲ್ಲಿ, ಶಿವರಾತ್ರಿ-ನವರಾತ್ರಿ ಕಾಲದಲ್ಲಿ ಮಹದೇಶ್ವರನ ಜಾತ್ರೆ ಸಂದರ್ಭದಲ್ಲಿ ಕೈಯಲ್ಲಿ ಕಂಸಾಳೆ ಹಿಡಿದು, ಮಾದಯ್ಯನ ಕೋಲ (ನಾಗಬೆತ್ತ)ನ್ನು ಕಂಕುಳಲ್ಲಿಟ್ಟು ಕೊಂಡು, ಬುತ್ತಿಯ ಗಂಟನ್ನು ತಲೆಯ ಮೇಲಿಟ್ಟುಕೊಂಡು, ಯಾತ್ರೆ ಹೊರಡುವುದು ಮೈಸೂರು ಜಿಲ್ಲೆಯಲ್ಲಿ ಸಾಮಾನ್ಯ ದೃಶ್ಯ. ಮಲೆಯ ಮಹದೇಶನ ಜಾತ್ರೆಯಲ್ಲಿ ಕಂಸಾಳೆಯ ಪ್ರದರ್ಶನ ಕೇಂದ್ರವಾಗುತ್ತದೆ ಆ ಪ್ರದೇಶ. ಬೆಳದಿಂಗಳ ರಾತ್ರಿಯಲ್ಲಿ ಕಂಸಾಳೆಯ ಕಲಾವಿದರ ಹಲವಾರು ಗುಂಪುಗಳು ಅಲ್ಲಿ ಮೇಳ ನಡೆಸುತ್ತವೆ;
+
ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುವರು. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ನೃತ್ಯ ಪ್ರಚಲಿತವಿದೆ. ತಾಳ, ಶ್ರುತಿ, ಚಮಾಳ (ಸಮ್ಮೇಳ ಸಂಬಾಳ), ಓಲಗ ಅಥವಾ ಮೌರಿ, ಕರಡೆವಾದ್ಯ- ಈ ಪಂಚವಾದ್ಯಗಳು ಇಲ್ಲಿ ಬಳಕೆಯಾಗುತ್ತವೆ. ಕರಡೆ - ಈ ಕುಣಿತದಲ್ಲಿ ಅನಿವಾರ್ಯ ವಾದ್ಯ ಎನಿಸಿದೆ.
  
“ಕೂಗೋ ಕೂಗು ಮಾದೇವನ,
+
ಪೌರಾಣಿಕ ಹಿನ್ನೆಲೆ
  
ಕೂಗಿದರೆ ದುಂಡು ಮಾದೇವನ,
+
ಈ ಕಲೆಯ ಸೃಷ್ಟಿ ಹೇಗೆ ಬಂದಿತೆನ್ನುವುದಕ್ಕೆ ಜನಪದರ ಪೌರಾಣಿಕ ಕಥೆಯಿದೆ. ತಂದೆಯ ಮಾತನ್ನು ಮೀರಿ ಪಾರ್ವತಿ ಶಿವನನ್ನು ವರಿಸುತ್ತಾಳೆ. ಇದೇ ಕಾರಣವಾಗಿ ಪಾರ್ವತಿಯ ತಂದೆ ದಕ್ಷಬ್ರಹ್ಮ ಶಿವನನ್ನು ದ್ವೇಷಿಸತೊಡಗುತ್ತಾನೆ. ಹೀಗಿರುವಾಗ ದಕ್ಷಬ್ರಹ್ಮ ಆಚರಿಸಿದ ಯಾಗಕ್ಕೆ ಶಿವನೊಬ್ಬನನ್ನು ಹೊರತುಪಡಿಸಿ ಉಳಿದೆಲ್ಲ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ತನ್ನ ತಂದೆ ಉದ್ದೇಶಪೂರ್ವಕವಾಗಿ ಗಂಡನನ್ನು ಅವಮಾನಿಸಿದ್ದಾನೆಂದು ಭಾವಿಸಿದ ಪಾರ್ವತಿ ಉಗ್ರಳಾಗುವಳು. ನ್ಯಾಯ ಕೇಳುವ ಸಲುವಾಗಿ ಗಂಡನ ತಡೆಯನ್ನು ಉಲ್ಲಂಘಿಸಿ ತಂದೆಯ ಬಳಿಗೆ ಬರುತ್ತಾಳೆ. ಅಳಿಯನ ಮೇಲಿನ ಕೋಪದಿಂದ ಮಗಳೆಂಬ ಮಮತೆಯನ್ನೂ ತೊರೆದು ದಕ್ಷಬ್ರಹ್ಮ ಪಾರ್ವತಿಯನ್ನು ತಿರಸ್ಕಾರದಿಂದ ನಡೆಸಿಕೊಂಡದ್ದಲ್ಲದೆ ಅವಳೆದುರಿಗೆ ಶಿವನನ್ನು ನಿಂದಿಸುತ್ತಾನೆ; ಪತಿನಿಂದೆಯನ್ನು ಸಹಿಸಲಾಗದ ಪಾರ್ವತಿ ಅಗ್ನಿಕುಂಡದಲ್ಲಿ ಬಿದ್ದು ಪ್ರಾಣಾರ್ಪಣೆ ಮಾಡಿಕೊಳ್ಳುತ್ತಾಳೆ. ಈ ದುರ್ಘಟನೆಯಿಂದ ಕುಪಿತನಾದ ಶಿವ ಉಗ್ರನಾಗಿ ತಾಂಡವ ನೃತ್ಯದಲ್ಲಿ ತೊಡಗುತ್ತಾನೆ. ಕೋಪದಿಂದ ಹಣೆಯ ಬೆವರನ್ನು ಬೆರಳುಗಳಿಂದ ಬಾಚಿ ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದ ವೀರಭದ್ರನ ಅವತಾರವಾಗುತ್ತದೆ. ಮುಂದೆ ವೀರಭದ್ರ ದಕ್ಷಬ್ರಹ್ಮನ ಯಾಗಶಾಲೆಗೆ ಬಂದು ಅದನ್ನು ಹಾಳುಗೈಯುತ್ತಾನೆ. ಹೀಗೆ ವೀರಭದ್ರ ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಕುಣಿತ ಎಂದೂ ಅಂದಿನಿಂದ ಈ ಕಲೆ ಬೆಳೆದುಬಂದಿತೆಂದೂ ಕಲಾವಿದರ ಹೇಳಿಕೆ.
 +
[[File:Mahila Veeragase.jpg|thumb|right|200px|ಮಹಿಳಾ ವೀರಗಾಸೆ]]
  
ಕೂಗಿದರೆ ಕುಣಿಯುತ್ತ, ಬರುವನ ಮಾದೇವನ,
+
ಆಚರಣೆ
  
ಕೂಗಯ್ಯ ಮುದ್ದು ಮಾದೇವನ”
+
ಸಾಮಾನ್ಯವಾಗಿ ಜಾತ್ರೆ ದೇವರ ಮೆರವಣಿಗೆ, ಹಬ್ಬ, ಹುಣ್ಣೆಮೆ, ವೀರಶೈವರ ಮದುವೆ, ಗೃಹ ಪ್ರವೇಶ ಮೊದಲಾದ ಸಂದರ್ಭಗಳಲ್ಲಿ ವೀರಗಾಸೆ ನಡೆಯುತ್ತದೆ.ವೀರಶೈವರಲ್ಲಿ ವೀರಭದ್ರನನ್ನು ಮನೆ ದೇವರಾಗಿ ನಂಬುವವರು ವೀರಗಾಸೆ ಮಾಡಿದಾಗ ಅದನ್ನು 'ಆಡಣಿ' ಎಂದು ಕರೆಯಲಾಗುತ್ತದೆ.ಇದು ಒಂದು ರೀತಿಯ ವೈಶಿಷ್ಠ್ಯ ಪೂರ್ಣವಾದ ಆಚರಣೆಯೇ ಆಗಿರುತ್ತದೆ. ಸಾಮಾನ್ಯವಾಗಿ ವೀರಭದ್ರ ದೇವರ ಒಕ್ಕಲಿನವರು ತಮ್ಮ ಹಿರಿಯ ಮಗನ ಮದುವೆಯಲ್ಲಿ ಮಾತ್ರ ವೀರಗಾಸೆಯನ್ನು ಮಾಡುತ್ತಾರೆ. ಆ ದಿವಸ ಐದು ಜನ ಮುತ್ತೈದೆಯರು ಮತ್ತು ಐದು ಜನ ಗಂಡು ಮಕ್ಕಳು ಉಪವಾಸವಿರುತ್ತಾರೆ. ಆ ದಿವಸ ಐದು ಜನ ಹೆಣ್ಣು ಮಕ್ಕಳಿಗೆ ಮತ್ತು ಗಂಡಸರಿಗೆ ಶಸ್ತ್ರ ಹಾಕುತ್ತಾರೆ. ಇದರ ಮೇಲೆ ಮದುಮಗ ಹಾಗೂ ಮುತ್ತೈದೆಯರು ಕೊಂಬಿ ದೇವರನ್ನು ತೆಗೆದುಕೊಂಡು ನಡೆಯುತ್ತಿರುತ್ತಾರೆ. ಹಾಗೆ ಹೋಗುವಾಗ ವೀರಭದ್ರ ದೇವರ ಹಾಗೂ ಹಲವು ದೇವರುಗಳ ಒಡಬುಗಳನ್ನು ಹೇಳುತ್ತಾರೆ. ದೇವಸ್ಥಾನ ಮುಂಬಾಗದಲ್ಲಿ ಒಂದು ಅಡಿ ಆಳ. ಒಂದು ಅಡಿ ಉದ್ದ ಹಾಗೂ ಎರಡು ಅಡಿ ಅಗಲದ ಗುಂಡಿಯನ್ನು ತೆಗೆದು ಅತ್ತಿ, ಆಲ, ಶ್ರೀಗಂಧ ಮರದ (ಪ್ರಸ್ತುತದಲ್ಲಿ ಗಂಧದ ಮರ ಇರುವುದಿಲ್ಲ) ಹತ್ತು ಹೊರೆ ಕಟ್ಟಿಗೆಗಳನ್ನು ಗುಂಡಿಗೆ ಹಾಕಿ ವೀರಗಾಸೆಯವರಿಂದ ಬೆಂಕಿಯನ್ನು ಹಚ್ಚಿಸುತ್ತಾರೆ, ಈ ಯಜ್ಞಕುಂಡದಲ್ಲಿ ಹಾಲುಕ್ಕಿಸಿ ಎಡೆಕೊಡುತ್ತಾರೆ. ಸ್ವಾಮಿಗಳು, ಪುರವಂತರು, ಮದುಮಕ್ಕಳು, ಮುತ್ತೈದೆಯರು ಯಜ್ಞಕುಂಡವನ್ನು ಹಾಯ‍್ದು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಕೊಂಬಿ ದೇವರು ಈ ಆಚರಣೆಯಲ್ಲಿ ಬಹುಮುಖ್ಯವಾದುದು.
  
ಎಂಬತಹ ಸೊಲ್ಲುಗಳ ಹಿನ್ನಲೆಯಲ್ಲಿ ಕಂಚಿನ ತಾಳದ ಶಬ್ದ ಕರ್ಣಾನಂದವನ್ನುಂಟುಮಾಡುತ್ತದೆ.
+
[[ಚಿತ್ರ:Viragase 01.jpg|thumb|ವೀರಗಾಸೆ]]
  
ಕಂಸಾಳೆಯ ಕಲಾವಿದರಲ್ಲಿ ಮಹದೇಶ್ವರನ ಹುಟ್ಟು, ಬಾಲ್ಯ, ಬಾಲಲೀಲೆ, ಯೌವನ, ವಿನೋದ, ವಿರಸ, ಮುಪ್ಪು, ಮಹಿಮೆಗಳು ಕಂಠಸ್ಥವಾಗಿ ನಿಂತಿವೆ. ಈ ಕಾವ್ಯವನ್ನು ಇಡೀ ರಾತ್ರಿ ಹಾಡಿ ತಣಿಸುವ ಅವರ ಕಲೆಗಾರಿಕೆ ಮೆಚ್ಚುವಂತಹುದು, ಇದಲ್ಲದೆ ಕಲಾವಿದರು ಪಿರಿಯಾಪಟ್ಟಣದ ಲಾವಣಿ, ಸಾರಂಗಧರ, ಚೆನ್ನಿಗರಾಮ, ಘನಪತಿರಾಯ, ಬಾಲನಾಗಮ್ಮ, ಅರ್ಜುನ ಜೋಗಿ ಮುಂತಾದ ಜನಪದ ಕಥಾ ಪ್ರಸಂಗಗಳನ್ನೂ ಹಾಡುತ್ತಾರೆ. ಜನಪದ ಬೆಳಸಿಕೊಂಡು ಬರುತ್ತಿರುವ ಇವರ ಕಲೆ ಜಾನಪದ ಕ್ಷೇತ್ರದ ದೊಡ್ಡ ನಿಧಿಗಳಲ್ಲೊಂದಾಗಿದೆ.
+
ವೇಷಭೂಷಣ
  
ಕಂಸಾಳೆಯ ಕಲಾಪ್ರಕಾರಗಳಲ್ಲಿ `ಬೀಸುಕಂಸಾಳೆ’ಯು ವಿಶಿಷ್ಟ ಶೈಲಿಯದು. ಚಮತ್ಕಾರ, ಶ್ರಮ ಎರಡೂ ಒಟ್ಟಿಗೆ ಸೇರಿ ಅಭಿವ್ಯಕ್ತವಾಗುವ ಪ್ರದರ್ಶನಕ್ಕೆ ನಾಲ್ಕು ಜನ ಬೇಕು, ಒಬ್ಬಾತ ಮಧ್ಯೆ ಇದ್ದು ತಾಳಕ್ಕೆ ತಕ್ಕಂತೆ ತಲೆಯ ಮೇಲೆ, ಬೆನ್ನ ಹಿಂದೆ, ಕಾಲು ಕೆಳಗೆ, ಕುಳಿತು, ನಿಂತು, ಬಾಗಿ ಬಳುಕಿ, ಉರುಳಾಡಿ, ಸುತ್ತ ನಿಂತ ಮೂವರಿಗೆ ತಾಳಗಳನ್ನು ಕೊಡುತ್ತ, ನಿರ್ದಿಷ್ಟ ಲಯದಲ್ಲಿ ಬೀಸು ಕಂಸಾಳೆಯನ್ನು ಪ್ರದರ್ಶಿಸುತ್ತಾನೆ. ಹೀಗೆ ಆರಂಭವಾದ ಪ್ರದರ್ಶನ ಪರಾಕಾಷ್ಠೆಗೆ ಹೋದಾಗ ನಾಲ್ಕು ಜೊತೆ ಕಂಸಾಳೆಗಳ ತಾಳದ ಕಂಚಿನ ಸ್ವರ, ಮಿಂಚಿನ ವೇಗದ ಕೈ ಚಳಕ ನೋಟಕರನ್ನು ಮೂಕವಿಸ್ಮಯರನ್ನಾಗಿ ಮಾಡುತ್ತದೆ. ಎಷ್ಟೇ ಚುರುಕಿನಿಂದ ಕಲೆ ನಡೆದರೂ ಎಲ್ಲೂ ತಾಳ ತಪ್ಪದಂತೆ ಎಚ್ಚರ ವಹಿಸುವ ಕಲಾವಿದರ ಪರಿಪೂರ್ಣ ಕುಶಲತೆ ನಿಜಕ್ಕೂ ಸೋಜಿಗ ಪಡುವಂಥದು. ಗಾಯಕರು `ಲಿಂಗ ಬಾ, ಮುದ್ದು ಲಿಂಗ ಬಾ, ನಮ್ಮ ಮುದ್ದು ಮಾದಯ್ಯನ ಲಿಂಗ ಬಾ’-ಎಂಬ ಹಾಡನ್ನು ಲಯಬದ್ಧವಾಗಿ ತಾಳದೊಂದಿಗೆ ಹೊಂದಿಸಿಕೊಂಡೇ ಹಾಡುತ್ತಾರೆ.
+
ವೀರಗಾಸೆ ಕುಣಿತದವರ ವೇಷ ಭೂಷಣಗಳು ಕಾಲಕಾಲಕ್ಕೆ ಬದಲಾಗುತ್ತಾ ಬಂದಿವೆ, ಕನಿಷ್ಠ ಎಂಟು ಅಥವಾ ಅದಕ್ಕೆ ಮೇಲ್ಪಟ್ಟ ಸಮ ಸಂಖ್ಯೆಯ ಕಲಾವಿದರು ತಲೆಗೆ ಪೇಟ, ಕಿವಿಗೆ ಕಡಕು,ಹಣೆಗೆ ವಿಭೂತಿ, ಕೊರಳಿಗೆ ರುದ್ರಾಕ್ಷಿ ಹಾಗೂ ನಾಗಾಭರಣ, ಎದೆಗೆ ವೀರಭದ್ರ ಸ್ವಾಮಿಯ ಹಲಗೆ, ಸೊಂಟಕ್ಕೆ ದಕ್ಷಬ್ರಹ್ಮನ ಶಿರ ಕಟ್ಟಿಕೊಳ್ಳುತ್ತಾರೆ. ಕೈಯಲ್ಲಿ ಕತ್ತಿ, ಕಾಲಿಗೆ ಕಡಗ ಮತ್ತು ಗೆಜ್ಜೆ ಮೈಗೆ ಕಾವಿ ಜುಬ್ಬ ಮತ್ತು ಕಾವಿಯ ಕಾಸೆಗಳಿರುತ್ತವೆ. ವೀರಶೈವರಿಗೆ ಮಾತ್ರ ವಿಶಿಷ್ಟವಾದ ಈ ಕಲೆ ಅವರ ವೇಷಭೂಷಣದಿಂದಲೇ ಈ ಹೆಸರು ಪಡೆದುಕೊಂಡಿದೇ ಎನಿಸುತ್ತದೆ. (ವೀರ+ಕಾಸೆ=ವೀರಗಾಸೆಯಾಗಿರುತ್ತದೆ) ಕಾಸೆ ಕಟ್ಟಿದವರೇ ಕಲೆಯ ಪ್ರಮುಖ ಕಲಾವಿದರು. ವೀರಗಚ್ಚೆಯೇ, ವೀರಕಾಸೆಯಾಗಿ ನಂತರ ವೀರಗಾಸೆಯಾಗಿರಬಹುದು ಎಂಬ ಅಭಿಪ್ರಾಯವೂ ಇದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಂಡುಬರುವ ಈ ವೀರಗಾಸೆಯ ವೇಷಭೂಷಣಗಳು ಪ್ರಾದೇಶಿಕತೆಗೆ ತಕ್ಕಂತೆ ಕೆಲವು ವ್ಯತ್ಯಾಸಗಳನ್ನು ಪಡೆದುಕೊಂಡಿವೆ. ಹಲವು ಕಡೆ ತಲೆಗೆ ಕೂದಲು ಮತ್ತು ರೇಷ್ಮೆದಾರದಿಂದ ತಯಾರಿಸಿದ ಚೌಲಿಯನ್ನು ಧರಿಸಲಾಗುತ್ತದೆ. ಕಾವಿ ಬಣ್ಣದ ಗರಿ ಅಂಚಿನ ಪೇಟವನ್ನು ತಲೆಗೆ ಸುತ್ತಿ, ಅದರ ಮುಂಭಾಗಕ್ಕೆ ಜಯ ಪಟ್ಟಿಯನ್ನು ಕಟ್ಟುತ್ತಾರೆ. ಸೊಂಟಕ್ಕೆ ಕಸೂತಿಗಳಿಂದ ಕೂಡಿದ ಕೆಂಪು ಬಣ್ಣದ ಜೊಲುಗಳಿದ್ದು, ಸೊಂಟದ ಎರಡು ಕಡೆ ಕಪ್ಪು ಬಣ್ಣದ ಚವರಿ ಕುಚ್ಚುಗಳಿರುತ್ತವೆ. ಸೊಂಟಕ್ಕೆ ಬಿಳಿ ಪಂಚೆಯನ್ನು ವೀರಗಚ್ಚೆಯಾಗಿ ತೊಡುತ್ತಾರೆ. ಕೆಂಪು ಬಣ್ಣದ ಪೈಜಾಮ, ಕಾಲಿಗೆ ಗೆಜ್ಜೆ, ಬಲಗೈಯಲ್ಲಿ ಮರದ ಖಡ್ಗ, ಕೊರಳಲ್ಲಿ ಬೆಳ್ಳಿಯ ಲಿಂಗದಕಾಯಿ (ಅಡ್ಗಾಯಿ) ಎಡಗೈಯಲ್ಲಿ ಕರವಸ್ತ್ರಗಳಿರುತ್ತವೆ. ಹಾಗೆಯೇ ಕೆಲವರ ಕೈಯಲ್ಲಿ ತ್ರಿಶೂಲಾಕಾರದ ಶಸ್ತ್ರಗಳಿರುವುದು ಉಂಟು. ಸಮಾಳೆ, ಮುಖವೀಣೆ, ಕಂಚಿನ ತಾಳಗಳು ಈ ಕಲೆಗೆ ಬೇಕಾದ ಮುಖ್ಯ ವಾದ್ಯ ಪರಿಕರಗಳು, ಕಾಸೆ ಕಟ್ಟುವವರು, ಎದೆಯ ಮೇಲೆ ಲಿಂಗಧಾರಣೆ ಮಾಡಬೇಕು. ಹೀಗೆ ವೇಷ-ಭೂಷಣವನ್ನು ಕಲಾವಿದರು ಧರಿಸಿಕೊಂಡು ಸಾಮೂಹಿಕ ನೃತ್ಯವನ್ನು ಅಟ್ಟಹಾಸದಲ್ಲಿ ಕೊಡಬಲ್ಲರು, ಹೀಗಾಗಿ ಈ ಕಲೆಯನ್ನು ಜನರು ಇದೊಂದು ಗಂಡು ಕಲೆ ಎಂದು ಗುರುತಿಸಿರುವರು. ಇತ್ತೀಚಿನ ದಿನಗಳಲ್ಲಿ ರಾಜ್ಯದ ಹೆಣ್ಣುಮಕ್ಕಳೂ ಈ ಕಲೆಯನ್ನು ಕರಗತಮಾಡಿಕೊಂಡು ಪ್ರದರ್ಶನ ನೀಡುವಲ್ಲಿ ಯಶಸ್ಸನ್ನು ಸಾಧಿಸಿರುವರು.
 +
[[ಚಿತ್ರ:Viragase 02.jpg|thumb|ವೀರಗಾಸೆಯ ಒಂದು ದೃಶ್ಯ]]
  
ಕಲಾವಿದರು ಕಂಸಾಳೆಗೆ ಕಟ್ಟಿದ ದಾರದ ತುದಿಯನ್ನು ಹಿಡಿದುಕೊಂಡು ಬೀಸಿ ತಾಳ ಹಾಕುವುದರಿಂದ ಇದು `ಬೀಸು ಕಂಸಾಳೆ’ ಯಾಗಿದೆ. ಈ ದಾರ ಸುಮಾರು ಒಂದೊವರೆ ಅಥವಾ ಎರಡು ಅಡಿ ಉದ್ದವಿರುವುದರಿಂದ ಕಲಾವಿದ ದೇಹದ ಸುತ್ತಮುತ್ತ ಯಾವ ಭಾಗಕ್ಕಾದರೂ ತಿರುಗಿಸಿ ತಾಳ ಬಡಿಯಲು ಅವಕಾಶವಾಗುತ್ತದೆ. ಆದರೂ ಇದಕ್ಕೆ ಅತ್ಯಂತ ಕುಶಲತೆ ಹಾಗೂ ಅಭ್ಯಾಸ ಬೇಕಾಗುತ್ತದೆ. ವಿವಿಧ ಭಂಗಿಗಳಲ್ಲಿ ತಿರುಗುತ್ತ ಕಂಸಾಳೆಯನ್ನು ಬೀಸುತ್ತಿರುವಾಗ ಸ್ವಲ್ಪ ಲೆಕ್ಕಾಚಾರ ತಪ್ಪಿದರೂ ತಾಳ ತಪ್ಪಿ ಮೈಗೆ ಏಟು ಬೀಳುವ ಸಂಭವವುಂಟು. ಆದ್ದರಿಂದ ಕುಂತಾಡುವ ಅಥವಾ ನಿಂತಾಡುವ ಕಂಸಾಳೆಗಿಂತ ಬೀಸುಕಂಸಾಳೆ ಕ್ಲಿಷ್ಟವಾದ ಕಲೆ; ಅಷ್ಟೇ ರೋಮಾಂಚಕಾರಿ!
+
'''ಪ್ರದರ್ಶನ'''
  
ಕಲಾವಿದರು ಬಿಗಿ ಕಸೆ ಅಂಗಿ, ಮೊಳಕಾಲಿನವರೆಗೆ ಬಿಗಿ ಕಾಸೆ ಕಟ್ಟಿದ ಪಂಚೆ ಧರಿಸಿರುತ್ತಾರ್‍ಹೆ;. ಕೆಲವು ಕಡೆ ಬರಿ ಮೈಯಲ್ಲಿದ್ದು ಚಡ್ಡಿ ಮಾತ್ರ ಧರಿಸಿರುವುದುಂಟು. ಉಳಿದಂತೆ ಮೈಕೈಗೆ ಅಲ್ಲಲ್ಲಿ ವಿಭೂತಿ ಧರಿಸಿರುತ್ತಾರೆ. ಕಿವಿಗೆ ರುದ್ರಾಕ್ಷಿಯಿರುತ್ತದೆ.
+
ವೀರಗಾಸೆಯ ಪ್ರಕಾರದಲ್ಲಿ ಹಿರಿಯ ಕಲಾವಿದರು ಗಂಡಕ್ಷರಗಳಿಂದ ಕೂಡಿದ ಕನ್ನಡದ ಗದ್ಯ ಸಾಹಿತ್ಯದ ನುಡಿಗಟ್ಟನ್ನು ಆವೇಶಭರಿತರಾಗಿ ನುಡಿಯುತ್ತಾರೆ, ಇಂತಹ ಆವೇಶಭರಿತ ನುಡಿಗಟ್ಟುಗಳನ್ನು 'ಒಡಪು' ಅಥವಾ 'ಒಡಬು' ಗಳೆಂದು ಕರೆಯಲಾಗಿದೆ. ಇಂತಹ ಒಡಪು ಅಥವಾ ಒಡಬು ಸಾಹಿತ್ಯ ಹೇಗಿರುತ್ತದೆ ಎಂದರೆ
  
ಕಂಸಾಳೆಯವರನ್ನು `ದೇವರ ಗುಡ್ಡ’ ರೆಂದೂ ಕರೆಯುತ್ತಾರೆ. `ಗುಡ್ಡ’ ನೆಂಈಟPS;ದರೆ ಮಹದೇಶ್ವರನ `ಭಕ್ತ’, ಗುಡ್ಡನನ್ನು ಬಿಡುವುದು ಕಂಸಾಳೆ ಮನೆತನದ ವಿಶಿಷ್ಟ ಸಂಪ್ರದಾಯ. ವಂಶ ಪಾರಂಪರ್‍ಯವಾಗಿ ಬಂದ ಪದ್ಧತಿಯಂತೆ ಮನೆಗೊಬ್ಬ ಗುಡ್ಡನನ್ನು ಬಿಡುವುದು ಮಹದೇಶ್ವರನ ಒಕ್ಕಲಲ್ಲಿ ಕಡ್ಡಾಯ. ಅಲ್ಲದೆ ಕಂಟಕ ನಿವಾರಣೆ, ಕಷ್ಟ ಪರಿಹಾರದ ದೆಸೆಯಿಂದ ಮಾಡಿಕೊಂಡ ಹರಕೆಯಂತೆ ಗುಡ್ಡನನ್ನು ಬಿಡುವುದೂ ಉಂಟು. ಮಕ್ಕಳಾಗದವರು ಹೊತ್ತ ಹರಕೆಯ ಪರಿಣಾಮವಾಗಿ ಹುಟ್ಟಿದ ಹಿರಿಯ ಹೆಣ್ಣು-ಗಂಡು ಮಕ್ಕಳನ್ನು `ಗುಡ್ಡಿ’-`ಗುಡ್ಡ’ ರಾಗಿ ಬಿಡುವುದೂ ಉಂಟು. ಗುಡ್ಡಿ ಬಿಡುವ ಸಂಪ್ರದಾಯ ಇತ್ತೀಚೆಗೆ ಕಡಿಮೆಯಾಗಿದೆ. ಆಕೆ ಗುಡ್ಡಿಯಾದ ಮೇಲೆ ವಿವಾಹವಾಗುವಂತಿಲ್ಲ. ಇಷ್ಟಪಟ್ಟಲ್ಲಿ ಗುಡ್ಡನೊಬ್ಬನನ್ನು ಆಕೆ `ಸ್ವೀಕರಿ’ಸಬಹುದು.
+
ಉದಾಹರಣೆಗೆ:- ಉಲ್ಲಾಸಭರಿತರಾಗಿ ಕುಳಿತಿರುವ ಎಲ್ಲಾ ಜನಗಳು ಸುಲಲಿತವಾಗಿ ಗುಲ್ಲುಮಾಡದೆ ನೀವು ಕೇಳಿರಿ,  
  
ಗಂಡಸರನ್ನು`ಗುಡ್ಡ’ರಾಗಿ ಬಿಡುವ ಸಂಪ್ರದಾಯ ಈಗಲೂ ಇದೆ. ಗುಡ್ಡರಾದ ಮೇಲೆ ಕಂಸಾಳೆ ವಾದ್ಯ ಮತ್ತು ಪದಗಳನ್ನು ಕಲಿತು ಹಾಡುವ ಕಲೆಯನ್ನು ಬೆಳಸಿಕೊಂಡು ಕ್ರಮವಾಗಿ ಮಹದೇಶ್ವರನ ಸೇವೆ ಸಲ್ಲಿಸಬೇಕು.
+
ಅಹಹ ರುದ್ರಾ ಅಹಹಾ ದೇವಾ....... ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ.  
  
ಉಮ್ಮತ್ತಾಟ್ :
+
ಈ ಕುಣಿತದಲ್ಲಿ ವೀರಭದ್ರನ ವರ್ಣನೆಯೇ ಪ್ರಧಾನವಾಗಿರುತ್ತದೆ. ವೀರಭದ್ರ ಹುಟ್ಟಿದ ಸಂದರ್ಭದ
  
ಕೊಡಗು ಜಿಲ್ಲೆಗೇ ಸೀಮಿತವಾದ ವಿಶಿಷ್ಟ ಕಲೆ `ಉಮ್ಮತ್ತಾಟ್’. ಪೌರಾಣಿಕ ಹಿನ್ನಲೆಯ ಈ ಕಲೆಯಲ್ಲಿ ಪಾಲುಗೊಳ್ಳುವವರೆಲ್ಲ ಮಹಿಳೆಯರೇ. ಸಮುದ್ರ ಮಥನ ಕಾಲದಲ್ಲಿ ವಿಷ್ಣು ಮೋಹಿನಿ ರೂಪ ತಾಳಿ ಉಮಾದೇವಿಯ ನಾನಾ ರೀತಿಯ ನೃತ್ಯಗಳಿಂದ ಸುರಾಸುರರ ಮನವೊಲಿಸಿ ಅವರನ್ನೆಲ್ಲ ಬೆರಗು ಮಾಡಿ ಅಮೃತವನ್ನು ಹಂಚಿದ ಸಂಕೇತವೇ `ಉಮ್ಮತ್ತಾಟ್’ ಎಂದು ಕೊಡವರ ನಂಬಿಕೆ.
+
ಒಂದು ವರ್ಣನೆ ಹೀಗಿದೆ:
  
`ಉಮ್ಮತ್ತಾಟ್’ ಒಂದು ಸೌಮ್ಯ ಕಲೆ. ಕೊಡಗಿನ ಮಹಿಳೆಯರು ತಮ್ಮ ವಿಶಿಷ್ಟ ಉಡುಪು ಧರಿಸಿ ಷಷ್ಠಿ, ದೀಪಾವಳಿ, ಸಂಕ್ರಾಂತಿ, ಯುಗಾದಿ ಹಬ್ಬಗಳಲ್ಲಿ ಈ ಕಲೆಯನ್ನು ಪ್ರದರ್ಶಿಸುತ್ತಾರೆ. ತಲೆಗೆ ವಸ್ತ್ರ, ತುಂಬು ತೋಳಿನ ಜಾಕೆಟ್, ಹಿಂದಕ್ಕೆ ನೆರಿಗೆ ಬಿಟ್ಟು ಉಟ್ಟ ಸೀರೆ, ಮಂಗಳಕರವಾದ ಬಳೆ, ಮಣಿಮಾಲೆ, ಹಣೆಗೆ ಕುಂಕುಮದ ಬೊಟ್ಟು -ಇದು ಉಮ್ಮತ್ತಾಟ್ ಕಲಾವಿದೆಯರ ವೇಷ. ತಲೆಗೆ ಕಟ್ಟುವ ವಸ್ತ್ರಗಳು ಸಾಮಾನ್ಯವಾಗಿ ಕೆಂಪು ಬಣ್ಣದ್ದಿರುತ್ತವೆ.
+
"ವೀರಭದ್ರದೇವರು ಹುಟ್ಟಿದ ರೂಪೆಂತೆಂದೊಡೆ, ಹುಟ್ಟಿದಾಗಲೆ ಹೂವಿನಗಾಸೆ, ಮಂಜುಳಗಾಸೆ, ಬ್ರಹ್ಮಗಾಸೆ, ವಿಷ್ಣುಗಾಸೆ, ರುದ್ರಗಾಸೆ, ಮೆಟ್ಟಿದ ಹೊನ್ನಾವಿಗೆ, ಸಾವಿರ ಶಿರ, ಮೂರು ಸಾವಿರ ನಯನ, ಎರಡು ಸಾವಿರ ಭುಜ, ಕೆಕ್ಕರಿಸಿದ ಕಣ್ಣು, ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರ ದೇವರು ಹೋಮದ ಕುಂಡದ ಬಳಿಗೆ ಹೇಗೆ ಬರುತ್ತಾರೆಂದರೆ .........."
  
ಕಲಾವಿದೆಯರು ಮಧ್ಯಭಾಗದಲ್ಲಿ `ಕುತ್ತ ದೀಪ ತಳಿಯ ತಕ್ಕೆ ಬೊಳಕು ಮಡಗಿ’ ಅದರ ಸುತ್ತ ವೃತ್ತಾಕಾರದಲ್ಲಿ ಹಾಡಿಕೊಂಡು ಸುತ್ತುತ್ತಾರೆ. ಪ್ರತಿಯೊಬ್ಬ ಕಲಾವಿದೆಯೂ ಕೈಯಲ್ಲಿ ಕಂಚಿನ ತಾಳ ಹಿಡಿದಿರುತ್ತಾಳೆ. (ಕಂಚಿನ ಬಗ್ಗೆ ಅವರಿಗೆ ಪವಿತ್ರ ಭಾವನೆ. ಕೊಡವರಲ್ಲಿ ಗಂಡು ಮಗು ಹುಟ್ಟಿದರೆ ಅವನು ಶೂರ ಮತ್ತು ಧೀರನೆಂಬ ಸಂಕೇತಕ್ಕೆ ಗುಂಡು ಹಾರಿಸಿ ಸದ್ದು ಮಾಡಿದರೆ, ಹೆಣ್ಣು ಹುಟ್ಟಿದಾಗ ಕಂಚಿನ ಬಟ್ಟಲು ಬಡಿದು ಸದ್ದು ಮಾಡುತ್ತಾರೆ. ಕಂಚಿನ ದನಿ `ಓಂಕಾರ’ದ ಸ್ವರೂಪವಾದ್ದರಿಂದ ಅದು ಕುಲದೇವಿಯ ಆರಾಧನೆಯ ಸಂಕೇತವೆಂದು ಅವರ ನಂಬಿಕೆ. ಉಮ್ಮತ್ತಾಟ್ ಕೊಡವರ ಕುಲದೇವತೆ ಕಾವೇರಮ್ಮನ ಆರಾಧನೆಯೂ ಹೌದೆಂದು ಅವರು ಹೇಳುತ್ತಾರೆ) ಉಮ್ಮತ್ತಾಟ್‌ದಲ್ಲಿ ಜೋಡಿಗೂಡುವಂತೆ ಎಷ್ಟು ಜನರಾದರೂ ಭಾಗವಹಿಸಬಹುದು. ಹಾಡು ಹೇಳಿಕೊಡುವವರು ಪ್ರತ್ಯೇಕವಾಗಿ ಒಂದು ಕಡೆ ನಿಂತು ಪೌರಾಣಿಕ ಪ್ರಸಂಗಗಳೇ ಅಲ್ಲದೆ ಕಾವೇರಿಯ ವರ್ಣನೆ ಕುರಿತು ನೂರಾರು ಹಾಡು ಹೇಳುತ್ತಾರೆ. ಆಗ ದೀಪದ ಸುತ್ತ ನಿಂತ ಕಲಾವಿದೆಯರು ಆ ಹಾಡನ್ನು ಪುನರುಚ್ಚರಿಸುತ್ತಾ ತಾಳ ಹಾಕಿಕೊಂಡು ಸುತ್ತುತ್ತಾರೆ.  
+
ಇಂತಹ ಒಡಪು-ಒಡಬುಗಳನ್ನು ಹೇಳಿದ ಬಳಿಕ ಸಮ್ಮಾಳದ (ಚರ್ಮ ವಾದ್ಯದ) ಹಾಗೂ ಕರಡೆಯ (ಚರ್ಮ ವಾದ್ಯ) ನುಡಿತಗಳು ಕಲಾವಿದರ ಕುಣಿತಕ್ಕೆ ಸ್ಪೂರ್ತಿ ನೀಡುತ್ತವೆ. ನಾಲ್ಕೈದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಅನಂತರ ಯಾರಾದರೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋರ್ಗರೆತದೊಂದಿಗೆ ಮತ್ತೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಗತಿಯಿಂದ ಗತಿಗೆ ಕುಣಿತ, ಬಡಿತಗಳ ವೇಗ ಹೆಚ್ಚುತ್ತಾ ಹೋಗುತ್ತದೆ.
  
ಪ್ರತಿ ಹಾಡಿಗೂ ಅವರು ಸುತ್ತುವ, ತಾಳ ಹಾಕುವ ಮತ್ತು ಕುಣಿಯುವ ಗತ್ತು ಭಂಗಿಗಳು ವ್ಯತ್ಯಾಸಗೊಳ್ಳುತ್ತವೆ. ಒಮ್ಮೆ ತಮ್ಮಷ್ಟಕ್ಕೆ ತಾವೇ ತಾಳ ಹಾಕಿದರೆ, ಇನ್ನೊಮ್ಮೆ ಇಬ್ಬಿಬ್ಬರು ಎದುರಾಗಿ ತಾಳ ಕೊಡುತ್ತಾರೆ. ಮತ್ತೊಮ್ಮೆ ಎಡಕ್ಕೊಮ್ಮೆ ಬಲಕ್ಕೊಮ್ಮೆ ತಿರುಗಿ ಎದುರು ಬದುರು ತಾಳ ಕೊಡುತ್ತಾರೆ. ತಾಳ ಹಾಕಿಕೊಂಡು ಹಾಡುತ್ತಾರೆ. ಯಾವ ಭಂಗಿಯಲ್ಲಿದ್ದರೂ ವೃತ್ತಚಲನೆ ನಿಧಾನವಾಗಿ ಸಾಗುತ್ತಲೇ ಇರುತ್ತದೆ. ತಾಳದ ಗತ್ತು ಮಾತ್ರ ಎಲ್ಲೂ ಕುಂಠಿತವಾಗುವುದಿಲ್ಲ. ತಾಳದ ಗತಿ ತ್ವರಿತವಾದಾಗ ಮಾತ್ರ ಕಲಾವಿದರ ಚಲನೆಯೂ ತ್ವರಿತಗೊಂಡು ಪ್ರದರ್ಶನ ಕಳೆಗೂಡುತ್ತದೆ.
+
ಉಲ್ಲೇಖ:
 +
# `ಸಂಪಾದಕರು: ಗೊ.ರು.ಚನ್ನಬಸಪ್ಪ, ಕರ್ನಾಟಕದ ಜನಪದ ಕಲೆಗಳು, ಕನ್ನಡ ಸಾಹಿತ್ಯಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು, ಪುಟ: ೭೭-೭೮.
  
ಉಮ್ಮತ್ತಾಟ್ ಹಾಡುಗಳಲ್ಲಿ ಕಾವೇರಿಯ ಸ್ತುತಿಗೀತೆಗಳೇ ಹೆಚ್ಚು. ಅಂತಹ ಒಂದು ಸ್ತುತಿಯ ನಾಲ್ಕು ಸಾಲುಗಳು ಹೀಗಿವೆ:
+
'''ಕಂಸಾಳೆ :'''
 +
[[File:Beesu Kamsale 01.JPG|thumb|ಬೀಸು ಕಂಸಾಳೆ]]
 +
ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುತ್ತ ಒಂದು ವಿಶಿಷ್ಟ ಜಾನಪದ ಸಂಪ್ರದಾಯವನ್ನು ಬೆಳಸಿಕೊಂಡು ಬಂದಿದೆ ಕಂಸಾಳೆ ಪ್ರಾಕಾರ. ಕಂಸಾಳೆಯ ಕಲಾವಿದರು ಪ್ರಮುಖವಾಗಿ ಮೈಸೂರು ಜಿಲ್ಲೆಯ ಮಲೆ ಮಹದೇಶ್ವರನ ಭಕ್ತರು. ಮಂಡ್ಯ-ಬೆಂಗಳೂರು ಜಿಲ್ಲೆಗಳಲ್ಲೂ ವಿರಳವಾಗಿ ಕಾಣುತ್ತಾರೆ. ಜಾನಪದ ಸತ್ವವುಳ್ಳ ಕಥನಗೀತೆ, ಕಂಚಿನ ತಾಳಗಳ ವಿಶಿಷ್ಟವಾದ ಶಬ್ದ ಹಾಗೂ ಕಲಾವಿದರ ಕೈಚಳಕಗಳ ಸುಂದರ ಸಮ್ಮಿಳನದಿಂದಾಗಿ ಈ ಕಲೆ ವಿಸ್ಮಯಕಾರಕವಾಗಿ ಜನಮನವನ್ನು ತಣಿಸಿ ಶ್ರವಣಾನಂತವುಂಟುಮಾಡುತ್ತದೆ.
  
“ಕಾವೇರಮ್ಮ ದೇವಿ ತಾಯಿ ಕಾಪಾಡೆಂಗಳಾ,
+
`ಕಂಸಾಳೆ’ ಎನ್ನುವುದು ಕಲಾವಿದರು ಕೈಯಲ್ಲಿ ಹಿಡಿಯುವ ಒಂದು ಬಗೆಯ ವಾದ್ಯ ವಿಶೇಷ. ಭಿಕ್ಷಾಪಾತ್ರೆಯಂತಿರುವ, ಮಧ್ಯೆ ದಾರದ ಕುಚ್ಚು ಕಟ್ಟಿದ, ಅಂಗೈ ಅಗಲದ ಮಿಶ್ರಲೋಹದ ಒಂದು ಬಟ್ಟಲು ಎಡಗೈಯಲ್ಲಿದ್ದರೆ, ಬಲಗೈಯಲ್ಲಿ ಮಟ್ಟಸವಾದ ತಾಳವಿರುತ್ತದೆ. ಮುಚ್ಚಳದ ನಡುವಿನ ಹೊರಭಾಗ ಉಬ್ಬಿರುತ್ತದೆ. ಆ ಉಬ್ಬಿನ ರಂಧ್ರದಿಂದ ಬಿಗಿದ ನೀಳವಾದ ದಾರ ಗೊಂಡೆಗಳಿಂದ ಅಲಂಕೃತವಾಗಿ ಬಲಗೈ ಮೇಲಿಂದ ಇಳಿಬಿದ್ದಿರುತ್ತದೆ.ಸಾಮಾನ್ಯವಾಗಿ ಕಂಸಾಳೆಯ ಮೇಳದಲ್ಲಿ ಮೂರು ಜನರಿರುತ್ತಾರೆ. ವೃತ್ತಿ ಗಾಯಕರಾದ ಕಂಸಾಳೆಯವರಿಗೆ ವಿಶೇಷವಾದ ವೇಷಭೂಷಣಗಳೇನೂ ಇರುವುದಿಲ್ಲ. ಸಾಧಾರಣವಾಗಿ ಅಂಗಿ, ಪಂಚೆ, ಹೆಗಲಲ್ಲಿ ಜೋಳಿಗೆ, ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ, ಇವರಲ್ಲಿ ಇಬ್ಬರು ಏಕತಾರಿ ಕಂಜರ ಹಿಡಿದು ಹಿಮ್ಮೇಳದವರಾಗುತ್ತಾರೆ. ಇನ್ನೊಬ್ಬ ಮುಮ್ಮೇಳದವನಾಗಿ ನಡುವೆ ಕಂಸಾಳೆ ಹಿಡಿದು ಕುಳಿತಿರುತ್ತಾನೆ. ಎಡಗೈ ಬಟ್ಟಲನ್ನು ಮೇಲುಮುಖವಾಗಿ ಅಂಗೈ ಮೇಲೆ ಇರಿಸಿಕೊಂಡು. ಬಲಗೈಯ ಮೇಲು ತಾಳವನ್ನು ಕುಟ್ಟುವುದರಿಂದ ಕಂಚಿನ ಕಣಿ ಕಣಿ ನಾದ ಉಂಟಾಗುತ್ತದೆ. ವಿವಿಧ ಧಾಟಿಯ ವಿವಿಧ ತಾಳದ ಹಾಡುಗಳಿಗೆ ಈ ನಾದ ಮಧುರ ಹಿನ್ನಲೆಯಾಗುತ್ತದೆ. ಹಬ್ಬ ಹರಿದಿನಗಳಲ್ಲಿ, ಶಿವರಾತ್ರಿ-ನವರಾತ್ರಿ ಕಾಲದಲ್ಲಿ ಮಹದೇಶ್ವರನ ಜಾತ್ರೆ ಸಂದರ್ಭದಲ್ಲಿ ಕೈಯಲ್ಲಿ ಕಂಸಾಳೆ ಹಿಡಿದು, ಮಾದಯ್ಯನ ಕೋಲ (ನಾಗಬೆತ್ತ)ನ್ನು ಕಂಕುಳಲ್ಲಿಟ್ಟು ಕೊಂಡು, ಬುತ್ತಿಯ ಗಂಟನ್ನು ತಲೆಯ ಮೇಲಿಟ್ಟುಕೊಂಡು, ಯಾತ್ರೆ ಹೊರಡುವುದು ಮೈಸೂರು ಜಿಲ್ಲೆಯಲ್ಲಿ ಸಾಮಾನ್ಯ ದೃಶ್ಯ. ಮಲೆಯ ಮಹದೇಶನ ಜಾತ್ರೆಯಲ್ಲಿ ಕಂಸಾಳೆಯ ಪ್ರದರ್ಶನ ಕೇಂದ್ರವಾಗುತ್ತದೆ ಆ ಪ್ರದೇಶ. ಬೆಳದಿಂಗಳ ರಾತ್ರಿಯಲ್ಲಿ ಕಂಸಾಳೆಯ ಕಲಾವಿದರ ಹಲವಾರು ಗುಂಪುಗಳು ಅಲ್ಲಿ ಮೇಳ ನಡೆಸುತ್ತವೆ;
  
ಭಾವ ಬಟ್ಟೆ ಕಾಟಿ ತಂದ್ ಚಾಕ್ ದೇವಿ ನೀ,
+
“ಕೂಗೋ ಕೂಗು ಮಾದೇವನ,
  
ದತ್ತ್ ಮೋವಳಾಯಿತ್ ನೀ ಬ್ರಹ ದೇವಂಗೇ,
+
ಕೂಗಿದರೆ ದುಂಡು ಮಾದೇವನ,
  
ಗೊತ್ತಿಲ್ಲತೆ ಅಗಸ್ತ್ಯ ಋಷಿ ಬುಟ್ ಪೊರಟಯಾ.”
+
ಕೂಗಿದರೆ ಕುಣಿಯುತ್ತ, ಬರುವನ ಮಾದೇವನ,
  
ಹೀಗೆ ಹೇಳಿಕೊಂಡು ನಿಧಾನವಾಗಿ ಕಲಾವಿದೆಯರು ಚಲಿಸುತ್ತಿದ್ದರೆ, ಕಾವೇರಿ ನದಿಯ ಗಂಭೀರ ಗಮನದ ಸಂಕೇತವೋ ಎಂದೆನಿಸುತ್ತದೆ!
+
ಕೂಗಯ್ಯ ಮುದ್ದು ಮಾದೇವನ”
  
‘ಉಮ್ಮತ್ತಾಟ್’ ದೈವೀ ಆರಾಧನೆಯ ಕಲೆ. ಅಂತೇ ಮ್ಮ ಸ್ವಸಂತೋಷಕ್ಕಾಗಿ ಸುಗ್ಗಿ ಮತ್ತು ವಸಂತ ಕಾಲದಲ್ಲಿ, ದೇವರ ಉತ್ಸವ ಮೊದಲಾದ ಸಮಾರಂಭಗಳಲ್ಲಿ ಕುಣಿದು ನಲಿಯುತ್ತಾರೆ. ಇತ್ತೀಚೆಗೆ ಉಮ್ಮತ್ತಾಟ್ ಹಾಡುಗಳಲ್ಲಿ ಸಮಕಾಲೀನ ವಿಷಯಗಳೆಲ್ಲ ಇರುತ್ತವೆ. ಈ ಕಲೆಯಲ್ಲಿ ಪಾಲುಕೊಳ್ಳುವರಲ್ಲಿ ಅವಿವಾಹಿತ ಯುವತಿಯರೇ ಹೆಚ್ಚು. ಮದುವೆಯಾದವರು ಸಂಕೋಚದಿಂದಾಗಿ ಪ್ರದರ್ಶನದಲ್ಲಿ ಸೇರಿಕೊಳ್ಳುವುದು ಕಡಮೆ.
+
ಎಂಬತಹ ಸೊಲ್ಲುಗಳ ಹಿನ್ನಲೆಯಲ್ಲಿ ಕಂಚಿನ ತಾಳದ ಶಬ್ದ ಕರ್ಣಾನಂದವನ್ನುಂಟುಮಾಡುತ್ತದೆ.
  
ಜನಪದ ವಾದ್ಯಗಳು:ಚರ್ಮ-ಕಾಷ್ಠ ವಾದ್ಯಗಳು:
+
ಕಂಸಾಳೆಯ ಕಲಾವಿದರಲ್ಲಿ ಮಹದೇಶ್ವರನ ಹುಟ್ಟು, ಬಾಲ್ಯ, ಬಾಲಲೀಲೆ, ಯೌವನ, ವಿನೋದ, ವಿರಸ, ಮುಪ್ಪು, ಮಹಿಮೆಗಳು ಕಂಠಸ್ಥವಾಗಿ ನಿಂತಿವೆ. ಈ ಕಾವ್ಯವನ್ನು ಇಡೀ ರಾತ್ರಿ ಹಾಡಿ ತಣಿಸುವ ಅವರ ಕಲೆಗಾರಿಕೆ ಮೆಚ್ಚುವಂತಹುದು, ಇದಲ್ಲದೆ ಕಲಾವಿದರು ಪಿರಿಯಾಪಟ್ಟಣದ ಲಾವಣಿ, ಸಾರಂಗಧರ, ಚೆನ್ನಿಗರಾಮ, ಘನಪತಿರಾಯ, ಬಾಲನಾಗಮ್ಮ, ಅರ್ಜುನ ಜೋಗಿ ಮುಂತಾದ ಜನಪದ ಕಥಾ ಪ್ರಸಂಗಗಳನ್ನೂ ಹಾಡುತ್ತಾರೆ. ಜನಪದ ಬೆಳಸಿಕೊಂಡು ಬರುತ್ತಿರುವ ಇವರ ಕಲೆ ಜಾನಪದ ಕ್ಷೇತ್ರದ ದೊಡ್ಡ ನಿಧಿಗಳಲ್ಲೊಂದಾಗಿದೆ.
  
ಅನುಕರಣ ಮತ್ತು ಪ್ರಯೋಗಶೀಲಸ್ವಭಾವದ ಮಾನವ ಏನೆಲ್ಲ ಕಲೆಗಳ ಸೃಷ್ಟಿಗೆ ಕಾರಣನಾಗಿದ್ದಾನೆ. ಸಂಗೀತಕಲೆಯನ್ನೂ ಅನುಕರಣೆಯಿಂದ ಕಲಿತು ವೈವಿಧ್ಯತೆಯನ್ನು ತಂದಿದ್ದಾನೆ. ನಿಸರ್ಗದ ಕೂಸಾಗಿ ಬೆಳೆದ ಮಾನವ ಅದರ ವಿವಿಧ ಲಯ, ಸಡಗರ, ಆರ್ಭಟಕ್ಕೆ ಸ್ಪಂದಿಸಿ, ಹಾಡಿ ಕುಣಿದಿದ್ದಾನೆ. ತನಗೆ ಸುಲಭ ಸಾಧ್ಯವಾದ ವಸ್ತುಗಳಿಂದ ವಾದ್ಯಗಳ ನಿರ್ಮಾಣಕ್ಕೆ ಕೈಹಾಕಿದ್ದಾನೆ. ಆದಿಮಾನವನು ಪ್ರಾಣಿಗಳನ್ನು ಬೇಟೆಯಾಡುವ ದಿನಗಳಲ್ಲಿಯೇ ಚರ್ಮವಾದ್ಯಗಳ ಕಲ್ಪನೆ ಮೂಡಿರಬೇಕು. ಇವುಗಳ ಉಗಮ ಕುರಿತು ನಿರ್ದಿಷ್ಟವಾಗಿ ಹೇಳಲಿಕ್ಕಾಗದು.
+
ಕಂಸಾಳೆಯ ಕಲಾಪ್ರಕಾರಗಳಲ್ಲಿ `ಬೀಸುಕಂಸಾಳೆ’ಯು ವಿಶಿಷ್ಟ ಶೈಲಿಯದು. ಚಮತ್ಕಾರ, ಶ್ರಮ ಎರಡೂ ಒಟ್ಟಿಗೆ ಸೇರಿ ಅಭಿವ್ಯಕ್ತವಾಗುವ ಈ ಪ್ರದರ್ಶನಕ್ಕೆ ನಾಲ್ಕು ಜನ ಬೇಕು, ಒಬ್ಬಾತ ಮಧ್ಯೆ ಇದ್ದು ತಾಳಕ್ಕೆ ತಕ್ಕಂತೆ ತಲೆಯ ಮೇಲೆ, ಬೆನ್ನ ಹಿಂದೆ, ಕಾಲು ಕೆಳಗೆ, ಕುಳಿತು, ನಿಂತು, ಬಾಗಿ ಬಳುಕಿ, ಉರುಳಾಡಿ, ಸುತ್ತ ನಿಂತ ಮೂವರಿಗೆ ತಾಳಗಳನ್ನು ಕೊಡುತ್ತ, ನಿರ್ದಿಷ್ಟ ಲಯದಲ್ಲಿ ಬೀಸು ಕಂಸಾಳೆಯನ್ನು ಪ್ರದರ್ಶಿಸುತ್ತಾನೆ. ಹೀಗೆ ಆರಂಭವಾದ ಪ್ರದರ್ಶನ ಪರಾಕಾಷ್ಠೆಗೆ ಹೋದಾಗ ನಾಲ್ಕು ಜೊತೆ ಕಂಸಾಳೆಗಳ ತಾಳದ ಕಂಚಿನ ಸ್ವರ, ಮಿಂಚಿನ ವೇಗದ ಕೈ ಚಳಕ ನೋಟಕರನ್ನು ಮೂಕವಿಸ್ಮಯರನ್ನಾಗಿ ಮಾಡುತ್ತದೆ. ಎಷ್ಟೇ ಚುರುಕಿನಿಂದ ಕಲೆ ನಡೆದರೂ ಎಲ್ಲೂ ತಾಳ ತಪ್ಪದಂತೆ ಎಚ್ಚರ ವಹಿಸುವ ಕಲಾವಿದರ ಪರಿಪೂರ್ಣ ಕುಶಲತೆ ನಿಜಕ್ಕೂ ಸೋಜಿಗ ಪಡುವಂಥದು. ಗಾಯಕರು `ಲಿಂಗ ಬಾ, ಮುದ್ದು ಲಿಂಗ ಬಾ, ನಮ್ಮ ಮುದ್ದು ಮಾದಯ್ಯನ ಲಿಂಗ ಬಾ’-ಎಂಬ ಹಾಡನ್ನು ಲಯಬದ್ಧವಾಗಿ ತಾಳದೊಂದಿಗೆ ಹೊಂದಿಸಿಕೊಂಡೇ ಹಾಡುತ್ತಾರೆ.
 +
<gallery>
 +
File:Beesu Kamsale 01.JPG|ಬೀಸು ಕಂಸಾಳೆ
 +
File:Beesu Kamsale 02.JPG|ಬೀಸು ಕಂಸಾಳೆ
 +
File:Beesu Kamsale 03.JPG|ಬೀಸು ಕಂಸಾಳೆ
 +
</gallery>
 +
ಡೊಳ್ಳುಕುಣಿತವು ಶಕ್ತಶಾಲಿಗಳ ಕಲೆ. ಅಪಾರವಾದ ದೈಹಿಕಬಲ, ಪ್ರತಿಭೆ ಮತ್ತು ಪರಿಶ್ರಮಗಳನ್ನು ಬಯಸುವ ಕಲೆಯು, ಮೊದಲಿನಿಂದಲೂ ಗಂಡಸರಿಗೆ ಮೀಸಲಾಗಿತ್ತು. (ಈಚೆಗೆ ಕೆಲವು ಮಹಿಳೆಯರು ಧಾರ್ಮಿಕ ಆಚರಣೆಯೆನ್ನುವುದಕ್ಕಿಂತ ಹೆಚ್ಚಾಗಿ, ಆಕರ್ಷಕವಾದ ಕಲೆಯೆಂದು ಇದರಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಡೊಳ್ಳುಕುಣಿತವು ಕರ್ನಾಟಕದ ಅತ್ಯಂತ ಜನಪ್ರಿಯವೂ ಪ್ರಸಿದ್ಧವೂ ಆದ ಕಲೆಗಳಲ್ಲಿ ಒಂದು. ಡೊಳ್ಳುಕುಣಿತ ಮತ್ತು ಅದರ ಸಂಗಾತಿಕಲೆಗಳು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಆಚರಣೆಯಲ್ಲಿವೆ. ಬಿಜಾಪುರ, ಬಾಗಲಕೋಟೆ, ಬೆಳಗಾಂ, ರಾಯಚೂರು, ಬಳ್ಳಾರಿ, ಗುಲ್ಬರ್ಗ, ಶಿವಮೊಗ್ಗ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಈ ಕಲೆಗಾಗಿ ಹೆಸರುವಾಸಿಯಾಗಿವೆ. ಈ ಕಲೆಯನ್ನು ಸಾಂಪ್ರದಾಯಿಕವಾಗಿ ಕುರುಬರ ಸಮುದಾಯದೊಂದಿಗೆ ಗುರುತಿಸುತ್ತಾರೆ. ಆದರೆ, ಉಪ್ಪಾರರು ಮತ್ತು ಪರಿವಾರ ನಾಯಕರು ಕೂಡ ಇದರಲ್ಲಿ ಭಾಗವಹಿಸುತ್ತಾರೆ. (ಕಡಿಮೆ ಪ್ರಮಾಣದಲ್ಲಿ) ಡೊಳ್ಳುಕುಣಿತವು ನರ್ತನ, ಸಂಗೀತ ಮತ್ತು ಕುರುಬರ ಸಮುದಾಯ ಹಾಗೂ ಅವರ ದೇವರುಗಳಿಗೆ ಸಂಬಂಧಿಸಿದ ಕಥೆಗಳ ಹಾಡುವಿಕೆಗೆ ಮೀಸಲಾದ ಸಂಯೋಜಿತ ಕಲೆ. ಡೊಳ್ಳುಗಳನ್ನು ಬಡಿಯುವುದು ಇದರ ಮುಖ್ಯವಾದ ಭಾಗ.
  
ಚರ್ಮವಾದ್ಯಗಳಿಗೆ ಅತೀ ಪ್ರಾಚೀನ ಇತಿಹಾಸವಿದೆ. ಹರಪ್ಪಾ ಉತ್ಖನನದಲ್ಲಿ ಡೋಲು ಬಾರಿಸುತ್ತಿರುವ ಚಿತ್ರ ಮುದ್ರೆಗಳಿವೆ. ಋಗ್ವೇದದಲ್ಲಿಯೂ ವಾದ್ಯಗಳ ಪ್ರಸ್ತಾಪ ಬಂದಿದೆ. ಭರತಮುನಿ ವಿವಿಧ ವಾದ್ಯಗಳ ಉಲ್ಲೇಖ ಮಾಡಿದ್ದಾನೆ. ಕನ್ನಡ ನಾಡಿನ ಕಾವ್ಯ ಶಾಸನ ಶಿಲ್ಪಗಳಲ್ಲಿ ವಾದ್ಯಗಳ ಪ್ರಸ್ತಾಪವಿದೆ. ಜನಪದ ಜೀವನದಲ್ಲಿಯಂತೂ ಇನ್ನೂ ಈ ವಾದ್ಯಗಳು ತಮ್ಮ ಜೀವಂತಿಕೆಯನ್ನು ಮೇರೆಯುತ್ತವೆ.  
+
ಹಳ್ಳಿಗಳಲ್ಲಿ ಹಬ್ಬಹರಿದಿನಗಳಲ್ಲಿ ಹಾಗೂ ವಾರ್ಷಿಕ ಜಾತ್ರೆಗಳಲ್ಲಿ ಡೊಳ್ಳುಕುಣಿತವನ್ನು ಪ್ರದರ್ಶಿಸುತ್ತಾರೆ. ಇದು ಹಲವು ಪೀಳಿಗೆಗಳಿಂದ ಆಚರಣಾತ್ಮಕ ಕಲೆಯಾಗಿ ಬೆಳೆದುಬಂದಿದೆ. ಕನ್ನಡದ ಹತ್ತು ಹಲವು ಪ್ರಾಚೀನ ಸಾಹಿತ್ಯಕೃತಿಗಳು ಮತ್ತು ಇತರ ಗ್ರಂಥಗಳಲ್ಲಿ ಈ ಕಲೆಯ ಪ್ರಸ್ತಾಪವಿದೆ.
  
ಜನಪದವಾದ್ಯಗಳನ್ನು ಸಾಮಾನ್ಯವಾಗಿ ಚರ್ಮವಾದ್ಯ, ತಂತಿವಾದ್ಯ, ಉಸಿರುವಾದ್ಯ ಹಾಗೂ ಲೋಹವಾದ್ಯಗಳೆಂದು ಅವುಗಳ ಸ್ವರೂಪ ವ್ಯತ್ಯಾಸಗಳಿಂದ ವಿಭಾಗಿಸಿ ಹೆಸರಿಸುತ್ತಾರೆ. ಇವೆಲ್ಲವುಗಳಲ್ಲಿ ಚರ್ಮವಾದ್ಯಗಳಿಗೆ ತುಂಬಾ ಪ್ರಾಚೀನತೆ ಇದೆ. ಚರ್ಮವಾದ್ಯಗಳನ್ನು ಏಕಮುಖ ಚರ್ಮವಾದ್ಯ ದ್ವಿಮುಖ ಚರ್ಮವಾದ್ಯಗಳೆಂದು ವಿಂಗಡಿಸಬಹುದು. ಏಕಮುಖ ಚರ್ಮವಾದ್ಯಗಳಲ್ಲಿ ಒಂದು ಭಾಗಕ್ಕೆ ಚರ್ಮ ಬಿಗಿದಿರುತ್ತಾರೆ. ಇನ್ನೊಂದು ಭಾಗ ಖುಲ್ಲಾ ಆಗಿರುತ್ತದೆ. ಅವು ದಪ್ಪು, ಹಲಗೆ, ದಮ್ಮಡಿ ಮುಂತಾದವುಗಳಾದರೆ, ವಾದ್ಯದ ಒಂದು ಭಾಗಕ್ಕೆ ಚರ್ಮದ ಹೊದಿಕೆಯಿದ್ದು ಇನ್ನೊಂದು ಭಾಗ ಮುಚ್ಚಿರುತ್ತವೆ. ಅವು; ನಗಾರಿ, ತಾಸೆ, ಸಂಬಾಳ, ಚೌಗಡೆ ಮುಂತಾದವುಗಳು. ಇನ್ನು ದ್ವಿಮುಖ ಚರ್ಮವಾದ್ಯಗಳು ಎರಡೂ ಭಾಗಕ್ಕೆ ಚರ್ಮ ಬಿಗಿದವುಗಳು. ಅವು: ಕರಡೆ, ಡೋಲು, ಡೊಳ್ಳು, ಡಮರುಗ, ದುರಗಮುರಗಿವಾದ್ಯ ಬುಡಬುಡಕಿವಾದ್ಯ ಮುಂತಾದವುಗಳು. ಅಲ್ಲದೆ
+
'''ಡೊಳ್ಳು ಕುಣಿತ'''
  
ಡಮರು ಆಕಾರದ ವಾದ್ಯಗಳು, ಹಲಗೆ ಆಕಾರದ ವಾದ್ಯಗಳು, ನಗಾರಿ ಆಕಾರದ ವಾದ್ಯಗಳು ಹಾಗೂ ಡೋಲು ಆಕಾರದ ವಾದ್ಯಗಳೆಂದೂ ವಿಭಾಗಿಸಿ ಹೇಳಲಾಗುತ್ತದೆ. ಈ ಎಲ್ಲ ವಿಂಗಡನೆಗಳು ಚರ್ಮವಾದ್ಯಗಳ ಆಕಾರ, ನುಡಿಸುವ ಕ್ರಮ, ರೂಪವೈವಿಧ್ಯ ಹಾಗೂ ಚರ್ಮ ಮುಖಗಳನ್ನು ಅವಲಂಬಿಸಿವೆ.  
+
ಈ ಕಲಾಪ್ರದರ್ಶನದಲ್ಲಿ ಮುಖ್ಯ ಪಾತ್ರವನ್ನು ವಹಿಸುವ ಚರ್ಮವಾದ್ಯ. ಅವುಗಳನ್ನು ಬೇರೆ ಬೇರೆ ಆಕೃತಿಗಳು ಮತ್ತು ಗಾತ್ರಗಳಲ್ಲಿ ತಯಾರಿಸುತ್ತಾರೆ. ಕುರುಬರು ಬಳಸುವ ಡೊಳ್ಳುಗಳು ಬಹಳ ದೊಡ್ಡವು. ಅದನ್ನು ತಾಳೆ, ಸುರಹೊನ್ನೆ, ಬೇವು, ಬೈನೆ, ಮಾವು ಮುಂತಾದ ಗಟ್ಟಿಯಿಲ್ಲದ ಮರಗಳ  ಕಾಂಡದಿಂದ ತಯಾರಿಸುತ್ತಾರೆ. ಕೊಳವೆಯಾಕಾರದ (ಸಿಲಿಂಡರ್) ಟೊಳ್ಳು ಕಾಂಡವನ್ನು ಸಂಪೂರ್ಣವಾಗಿ ತೆಗೆದುಕೊಂಡು ಅದರೊಳಗಿನ ಅಳಿದುಳಿದ ತಿರುಳನ್ನು ತೆಗೆದುಹಾಕುತ್ತಾರೆ. ಈ ಕೊಳವೆಯು ಸುಮಾರು 24-30 ಅಂಗುಲ ಉದ್ದ ಮತ್ತು 18 ಅಂಗುಲ ವ್ಯಾಸವನ್ನು ಹೊಂದಿರುತ್ತದೆ. ಈ ಡ್ರಮ್ಮಿನ ಎಡ ಮತ್ತು ಬಲ ಬದಿಗಳನ್ನು ಅನುಕ್ರಮವಾಗಿ ಮೇಕೆ ಮತ್ತು ಕುರಿಗಳ ಚರ್ಮದಿಂದ ಗಟ್ಟಿಯಾಗಿ ಕಣಿಕಣಿ ಎನ್ನುವಂತೆ ಮುಚ್ಚುತ್ತಾರೆ. ಈ ಡೊಳ್ಳನ್ನು ಹಗ್ಗ ಅಥವಾ ಕಂಬಳಿಗಳ ನೆರವಿನಿಂದ ಬಾರಿಸುವವನ ಸೊಂಟಕ್ಕೆ ಕಟ್ಟಲಾಗುತ್ತದೆ. ಡೊಳ್ಳಿನ ಬಲಬದಿಗೆ ಔಡಲೆಣ್ಣೆಯ ಲೇಪನವನ್ನು ಮಾಡುವುದರಿಂದ ವಿಶಿಷ್ಟವೂ ನಾದಮಯವೂ ಆದ ಧ್ವನಿ ಬರುತ್ತದೆ. ಡೊಳ್ಳಿನ ಬಲಬದಿಯನ್ನು ಬಡಿಯಲು ಗುಣಿ ಎಂಬ ಕೋಲನ್ನು ಬಳಸಿದರೆ, ಎಡಬದಿಯನ್ನು ಎಡಗೈಯಿಂದಲೇ ಬಡಿಯುತ್ತಾರೆ. ಸುಮಾರು ಹದಿನೆಂಟು ಅಂಗುಲ ಇರುವ ಗುಣಿಯನ್ನು ಸಾಮಾನ್ಯವಾಗಿ ಬಿದಿರಿನಿಂದ ಮಾಡಿರುತ್ತಾರೆ. ಕುರುಬರ ದೇವರಾದ ಬೀರೇದೇವರನ್ನು ಪೂಜಿಸುವಾಗ ಬಳಸುವ ಡೊಳ್ಳು ಇನ್ನೂ ಡೊಡ್ಡದಾಗಿರುತ್ತದೆ.  
  
ಹಾಡುಸಹಿತ ಮತ್ತು ಹಾಡುರಹಿತವಾದ ಚರ್ಮವಾದ್ಯಗಳಲ್ಲಿ ಒಳಗೆ ಪೊಳ್ಳಾಗಿರುವ ಸಿಲಿಂಡರಾಕಾರ ವೃತ್ತಾಕಾರವಾದ ಬಳೆ ಮತ್ತು ಬೋಗಾಣಿ ಆಕಾರದ ಮಣ್ಣಿನ, ಕಟ್ಟಿಗೆಯ, ಇಲ್ಲವೆ ಲೋಹದ “ಪಡಗ” ಪ್ರಮುಖವಾಗಿರುವದು. ಅವುಗಳ ಮುಖಕ್ಕೆ ತೊಗಲನ್ನು ಹೊಂದಿಸಿ ಕಂಪಿತ ಧ್ವನಿ ಹೊರಡಿಸಲು ಕೈ, ಕಟ್ಟಿಗೆಯ ಗುಣಿ, ಬಿದಿರು ಬೆತ್ತಗಳನ್ನು ಬಳಸುತ್ತಾರೆ. ಇವೆಲ್ಲ ವಸ್ತುಗಳೂ ಸುಲಭ ಸಾಧ್ಯವಾದವುಗಳು.
+
ಡೊಳ್ಳುಕುಣಿತದಲ್ಲಿ ಭಾಗವಹಿಸುವ ಕಲಾವಿದರ ಸಂಖ್ಯೆಯು ಹತ್ತರಿಂದ ಇಪ್ಪತ್ತರವರೆಗೆ ಇರುತ್ತದೆ. ಡೊಳ್ಳು ಬಾರಿಸುವವರ ಸಂಖ್ಯೆಗೆ ಯಾವ ಮಿತಿಯೂ ಇಲ್ಲ. ಡೊಳ್ಳುಗಳಲ್ಲದೆ ತಾಳ ಮತ್ತು ಕೊಳಲುಗಳನ್ನೂ ಬಳಸುತ್ತಾರೆ. ತಾಳ-ಕೊಳಲುಗಳನ್ನು ನುಡಿಸುವವರು ಒಟ್ಟು ಪ್ರದರ್ಶನದ ಲಯವನ್ನು ನಿಯಂತ್ರಿಸುತ್ತಾರೆ. ಪ್ರದರ್ಶನದ ಪ್ರಾರಂಭದಲ್ಲಿ ಡೊಳ್ಳುವಾದಕರು ವೃತ್ತಾಕಾರದಲ್ಲಿ ಸಮಾನವಾದ ಶೈಲಿ ಮತ್ತು ಎತ್ತರಗಳಲ್ಲಿ (ಪಿಚ್) ಬಾರಿಸತೊಡಗುತ್ತಾರೆ. ಕ್ರಮೇಣ ಡೊಳ್ಳುಬಡಿತದ ಶಬ್ದವು ತಾರಕಕ್ಕೆ ಏರುತ್ತದೆ. ಡೊಳ್ಳುವಾದಕರು ನಿಧಾನವಾಗಿ ಕುಣಿತದ ಇನ್ನೊಂದು ಹಂತವನ್ನು ತಲುಪುತ್ತಾರೆ. ಕುಣಿತದಲ್ಲಿ ವೈವಿಧ್ಯವು ಕಾಣಿಸಿಕೊಳ್ಳುತ್ತದೆ. ಕುಣಿತ-ಬಡಿತಗಳ ಬಗೆಗಳು ಮುಗಿದ ನಂತರ, ಡೊಳ್ಳುಬಡಿತವು ನಿಂತು ಹಾಡುವಿಕೆಯು ಮೊದಲಾಗುತ್ತದೆ. ತಂಡದ ನಾಯಕನು ಕೈಯಲ್ಲಿ ತಾಳಗಳನ್ನು ಹಿಡಿದು ವರ್ತುಲದ ಮಧ್ಯೆ ನಿಲ್ಲುತ್ತಾನೆ. ಅವನು ಹಾಡುವಿಕೆಯನ್ನು ನಿಯಂತ್ರಿಸುತ್ತಾನೆ.
  
ನಗಾರಿ :
+
ಸಂಗೀತಗಾರರ ತಂಡದಲ್ಲಿ ಗಾಯಕನ ಸಂಗಡ ಡೊಳ್ಳು, ತಾಳ ಮತ್ತು ಚೌಗಡಿಗಳನ್ನು ನುಡಿಸುವ ವಾದಕರಿರುತ್ತಾರೆ. ಉಳಿದವರು ಹಾಡುವಿಕೆಯಲ್ಲಿ ನೆರವಾಗುತ್ತಾರೆ. ಈ ಹಾಡುಗಳು ಪೌರಾಣಿಕವಾದ ಕಥನವೋ ಅಥವಾ ದೇವರನ್ನು ಹೊಗಳುವ ಗೀತೆಗಳೋ ಆಗಿರುತ್ತವೆ. ಅವುಗಳಲ್ಲಿ ಕೆಲವಕ್ಕೆ ನೀತಿಕಥೆಯ ನೆಲೆಗಳೂ ಇರುತ್ತವೆ. ‘ಹಾಲುಮತ ಪುರಾಣ’, ‘ಅನಸೂಯ ಪುರಾಣ’, ‘ಪಾಂಡವರ ಪದ’, ‘ಮಾರ್ಕಂಡೇಯ ಚರಿತೆ’ ಮತ್ತು ‘ನಿಂಬೆಕ್ಕನ ಪದ’ಗಳು ಈ ಗಾಯಕರು ಹಾಡುವ ಪದಗಳಲ್ಲಿ ಕೆಲವು. ಅವೆಲ್ಲವನ್ನೂ ‘ಡೊಳ್ಳಿನ ಪದಗಳು’ ಎಂದೇ ಕರೆಯುತ್ತಾರೆ. ‘ಬೀರಲಿಂಗೇಶ್ವರನ ಪದ’ವು ಬಹಳ ಜನಪ್ರಿಯವಾದ ಹಾಡು. ಈಚೆಗೆ ಡೊಳ್ಳುಕುಣಿತದ ಪ್ರದರ್ಶನಗಳನ್ನು ಸಾಕ್ಷರತಾಪ್ರಚಾರ ಮುಂತಾದ ಸರ್ಕಾರೀ ಕಾರ್ಯಕ್ರಮಗಳ ಪ್ರಚಾರಕ್ಕಾಗಿಯೂ ಬಳಸಿಕೊಳ್ಳುತ್ತಿದ್ದಾರೆ.      
 
+
[[File:Dollu-kunitha.jpg|thumb|ಡೊಳ್ಳುಕುಣಿತ]]
ನಗಾರಿ ಎತ್ತ ಮುಂದ ಮುಂದ
 
 
 
ಪರಸಿ ಹೊಂಟೈತಿ ಹಿಂದ ಹಿಂದ.
 
 
 
ಎಂಬ ಮಾತಿನಲ್ಲಿ ಮೇಳವಾದ್ಯಗಳಲ್ಲಿ ನಗಾರಿಯ ಸ್ಥಾನ ನಿರ್ದೇಶಿತವಾಗಿದೆ. ಉತ್ಸವ ಹೊರಡುವ ಕಾಲದಲ್ಲಿ ನಗಾರಿಗಳನ್ನು ಎತ್ತುಗಳ ಮೇಲೆ ಹೇರಿಕೊಂಡು ನುಡಿಸುತ್ತಾ ಉತ್ಸವದ ಮುಂಚೂಣಿಯಲ್ಲಿರುತ್ತಿದ್ದರು. ಪ್ರಾಚೀನ ಕಾಲದ ಯುದ್ಧಗಳಲ್ಲಿ ಸೈನಿಕರನ್ನು ಹುರಿದುಂಬಿಸಲು, ವೈರಿಗಳ ಆಗಮನವನ್ನು ಸೂಚಿಸಲು, ಮಹತ್ವದ ಸುದ್ದಿ ಸಾರಲು ಈ ವಾದ್ಯವನ್ನು ಬಳಸಿಕೊಳ್ಳುತ್ತಿದುದ್ದು ತಿಳಿದು ಬರುತ್ತದೆ. ತಮ್ಮಟೆ ಮುಂತಾದ ಪಂಚಮಹಾವಾದ್ಯಗಳಲ್ಲಿ ನಗಾರಿಯೂ ಒಂದು. ಇದನ್ನು ಸೌಬತ್ತು, ಭೇರಿ, ದುಂದುಭಿ ಎಂಬ ಉಪನಾಮಗಳಿಂದಲೂ ಕರೆಯುತ್ತಾರೆ. ಸದ್ಯ ಈ ವಾದ್ಯದ ಉಪಯೋಗ ಕೆಲವು ಪ್ರಾಚೀನ ಪರಂಪರೆಯುಳ್ಳ ದೊಡ್ಡ ಮಠ ಮಂದಿರಗಳ ಪೂಜೆ ಸಮಯದಲ್ಲಿ ಮಾತ್ರ ಬಳಕೆಯಾಗುತ್ತದೆ. ಚರ್ಮವಾದ್ಯಗಳಲ್ಲಿ ಗಾತ್ರ ಮತ್ತು ನಾದಗಳಲ್ಲಿ ಡೊಳ್ಳನ್ನು ಬಿಟ್ಟರೆ ನಗಾರಿಯೇ ಅತ್ಯಂತ ದೊಡ್ಡ ವಾದ್ಯ. ಕಬ್ಬಿಣ, ಹಿತ್ತಾಳೆ ಮತ್ತು ತಾಮ್ರದ ಲೋಹದಿಂದ ಮಾಡಿದ ಐದು ಅಡಿಗೂ ಹೆಚ್ಚು ವ್ಯಾಸ ಬಾಯುಳ್ಳ ಪಡಗ ಎಮ್ಮೆಯ ಚರ್ಮವನ್ನು ಬಾರುಗಳಿಂದ ಬಿಗಿದಿರುತ್ತಾರೆ. ಇದನ್ನು ಗಟ್ಟಿಕೋಲು (ಗುಣಿ)ಯಿಂದ ಬಾರಿಸಿದಾಗ ಗಂಭೀರವಾದ ಶಬ್ದ ಹೊರಡುತ್ತದೆ. ಜೀವನಸಂಗೀತವೆಂಬ ಲಾವಣಿ ಸಂಕಲನದಲ್ಲಿ “ಗೋಕುಲಾಷ್ಟಮಿ” ಎಂಬ ಲಾವಣಿಯೊಂದಿದೆ. ಅಲ್ಲಿ ಪಗುಡಿಯಾಡಿದ ಪ್ರಸಂಗವನ್ನು ನಗಾರಿ ನುಡಿತಕ್ಕೆ ಅನ್ವಯಿಸಿ ಕಿವಿ ಹೀಗೆ ಹಾಡುತ್ತಾನೆ :
 
 
 
ತಾಳಗತ್ತ ಮಾಡಿದಂಗ | ನಗಾರಿ ನುಡಿದಂಗ
 
 
 
ದುಮದುಮ ಹೊಡೆದಂಗ | ಚಿಟ್ಟೆ ಔಡಲ ಸಿಡಿದಂಗ
 
 
 
ಸಿಡ್ಲ ಮಿಂಚ ಕಡಿದಂಗ | ಮಗ್ಗಿ ಪಾಟ್ಲಿ ಹೆಣೆದಂಗ
 
 
 
ಸುದ್ದಾ ನವಿಲು ಕುಣಿದಂಗ | ತಿಪ್ಪರಲಾಗ ಹೋಡಿದಂಗ
 
 
 
ಹೀಗೆ ನವಿಲಿನ ಕುಣಿತಕ್ಕೆ ಬೇಕಾದ ಗುಡುಗು ಸಿಡಿಲು ಗಂಭೀರ ಧ್ವನಿಗಳಿಗೆ ನಗಾರಿಯ ಮೊಳಗನ್ನು ಉದಾಹರಿಸುತ್ತಾನೆ ಜನಪದಕವಿ.
 
 
 
ಸಂಬಾಳ :
 
 
 
ಇದು ಜೋಡು ಬೋಗಾಣಿಯುಳ್ಳ ಚರ್ಮವಾದ್ಯ ಬೋಗಾಣಿಲೋಹ, ಕಟ್ಟಿಗೆ ಇಲ್ಲವೇ ಮಣ್ಣಿನಿಂದ ತಯಾರಿಸುತ್ತಾರೆ. ಈ ಎರಡೂ ಬೊಗಾಣಿಗಳ ಬಾಯಿ ಸುಮಾರು ೧೦ ಅಂಗುಲ ವ್ಯಾಸವುಳ್ಳದ್ದಾಗಿರುತ್ತದೆ. ಬೊಗಾಣಿಗಳ ಬಾಯಿಗೆ ಆಡಿನ ಚರ್ಮ ಬಿಗಿದಿರುತ್ತಾರೆ. ಬಲಭಾಗದ್ದು ದಪ್ಪಚರ್ಮ ಎಡಭಾಗದ್ದು ತಿಳುಚರ್ಮವುಳ್ಳದ್ದಾಗಿರುತ್ತದೆ. ಬಲಭಾಗದ ಚರ್ಮಕ್ಕೆ ಕರಣಿಯನ್ನು ಮೇಲ್ಭಾಗ ಇಲ್ಲವೆ ಒಳಭಾಗದಲ್ಲಿ ಲೇಪಿಸಿರುತ್ತಾರೆ. ಗೊಂದಲಿಗರು ವಿಶೇಷವಾಗಿ ವಾದ್ಯವನ್ನು ಬಳಸುತ್ತಾರೆ. ಪುರವಂತರಕುಣಿತ, ಕಂಬಿ ಹಾಡುಗಳಲ್ಲಿ ಈ ವಾದ್ಯವೇ ಪ್ರಧಾನವಾಗಿರುತ್ತದೆ. ಹಾಡಿನ ಸ್ವರಕ್ಕನುಗುಣವಾಗಿ ಹಗ್ಗಗಳನ್ನು ಬಿಗಿ ಅಥವಾ ಸಡಿಲುಮಾಡಿಕೊಂಡು ಕೊರಳಿಗೆ ತೂಗಿಹಾಕಿಕೊಂಡು ಒಂದು ಬೊಗಾಣಿಯಾಕಾರದ ವಾದ್ಯವನ್ನು ವಾದನಕಾರ ತನ್ನ ಎರಡೂ ತೊಡೆಗಳ ಸಂದಿನಲ್ಲಿಟ್ಟು ಬಿಗಿದ ಹಗ್ಗಕ್ಕೆ ಒತ್ತು ಕೊಡುತ್ತಾ ಬಾರಿಸುವಾಗ ಒಂದು ರೀತಿಯ ವಿಲಕ್ಷಣ ಧ್ವನಿ ಹೊರಡುತ್ತದೆ. ಶ್ರೋತೃಗಳನ್ನು ರಂಜಿಸುತ್ತದೆ. ನಾದದ ಇಂಪು ಹೆಚ್ಚಾಗಲು ಇದನ್ನು ಕಾಸಲಾಗುತ್ತದೆ. ಹೆಚ್ಚಾಗಿ ಇದರಲ್ಲಿ ಚೌತಾಳ, ತ್ರಿತಾಳಗಳನ್ನು ಬಳಸುತ್ತಾರೆ. ನಾನು ಒಬ್ಬ ವಾದನಕಾರನಿಗೆ ಕೇಳಿದ್ದೆ. ಅದು ಪುರವಂತರ ಕುಣಿತದ ಸಮಯದಲ್ಲಿ-ಸದ್ಯ ಬಾರಿಸುವ ತಾಳ ಯಾವುದು ಎಂದು ಪ್ರಶ್ನಿಸಿದಾಗ ಆ ವಾದನಕಾರ ಇದು ಅಡತಾಳರಿ ಎಂದು ಹೇಳಿದ. ಬಹುಶಃ ಇದು ಅರ್ಧತಾಳ ಇಲ್ಲವೇ ಅಟತಾಳ ಆಗರಿಬೇಕು.
 
 
 
ತಾಸೆ :
 
 
 
ತಾಯಿ ಮಕ್ಕಳ ಧ್ವನಿಯು ತಾಳ ಬಾರಿಸಿದಾಂಗ
 
 
 
ಜೋಡ ಕಿನ್ನುರಿ ನುಡಿದಂಗ | ಹಲಸಂಗಿ
 
 
 
ಹೊತ್ತೇರಿ ತಾಸೆ ಬಡಿದಾಂಗ.
 
 
 
ಮಕ್ಕಳ ಧ್ವನಿಯನ್ನು ತಾಸೆಯಿಂದ ಹೊರಡುವ ವಾದನದ ನಾದಕ್ಕೆ ಇಲ್ಲಿ ಉಪಮಿಸಲಾಗಿದೆ. ಸರ್ಕಸ್ಸು, ಡಂಬರಾಟ ಮುಂತಾದ ಪ್ರಚಾರ ಮಾಧ್ಯಮಕ್ಕೆ ಮಂದಿರ ಮಸೀದಿಗಳಲ್ಲಿಯೂ ಈ ವಾದ್ಯದ ಉಪಯೋಗವಾಗುತ್ತದೆ. ಒಂದು ಅಡಿ ವ್ಯಾಸ ಬಾಯಿಯಿರುವ ಕಂಚಿನ ಬೊಗಾಣಿಗೆ ಆಡಿನ ಚರ್ಮವನ್ನು ಉಂಗರುಗಳ ಮೂಲಕ ಹಾದು ಬರುವ ಹಗ್ಗಗಳಿಂದ ಬಿಗಿದಿರುತ್ತಾರೆ. ಸುತ್ತ ನಾಲ್ಕೂ ಕಡೆ ಸಿಲೆಂಡರಿನ ಆಕಾರವಿರುವ ಮರದ ಚೂರುಗಳನ್ನು ಹಗ್ಗಕ್ಕೆ ಬರುವಂತೆ ಜೋಡಿಸಿರುತ್ತಾರೆ. ಈ ವಾದ್ಯವನ್ನು ಕತ್ತಿನಿಂದ ಇಳಿಬಿಟ್ಟು ಇಲ್ಲವೇ ನೆಲದ ಮೇಲಿಟ್ಟು ಎರಡೂ ಕೈಯಿಂದ ಬಿದಿರುಕಡ್ಡಿಗಳಿಂದ ಟಪ-ಟಪ ಟಪವೆಂದು ಬಾರಿಸುತ್ತಾರೆ.
 
 
 
ಗುಮಟೆ :
 
 
 
ಸುಮಾರು ಎರಡುವರೆ ಅಡಿ ಉದ್ದದ ಹೂಜಿಯಾಕಾರದ ಮಣ್ಣಿನ ಕಲಸದ ಒಂದು ಕಡೆ ಬಾಯಿ ಚಿಕ್ಕದಾಗಿದ್ದು ಮತ್ತೊಂದು ಕಡೆಯ ಬಾಯಿ ದೊಡ್ಡದಾಗಿ ಇರುವ ಚರ್ಮವಾದ್ಯ. ಅಗಲವಾದ ಚಾಪ(ಉಡ)ದ ಇಲ್ಲವೇ ಕುರಿಯ ಚರ್ಮವನ್ನು ಬಿಗಿಯಾಗಿ ಕಟ್ಟುತ್ತಾರೆ. ಎಡಗಡೆಯ ಕಿರಿಯಗಲದ ಬಾಯಿಮಾತ್ರ ತೆರೆದೇ ಇರುತ್ತದೆ. ಬೇರೆ ಬೇರೆ ಪ್ರಸಂಗ ಉದ್ದೇಶಗಳಿಗೆ ಬಳಸುವಲ್ಲಿ ಇದರಲ್ಲಿ ಮೂರು ಪ್ರಕಾರಗಳನ್ನು ಗುರುತಿಸಲಾಗುವುದು, (೧) ಪಾಂಗು ಪಾಕು-ಇದು ಕೊಡದಾಕಾರದಲ್ಲಿದ್ದು ಒಂದುವರೆ ಫೂಟಿನಷ್ಟು ಉದ್ದವಾಗಿರುವದು. (೨) ಕೋಲು ಗುಮಟೆ- ಇದು ಹೂಜಿಯಾಕಾರದಲ್ಲಿದ್ದು ಸುಮಾರು ಮೂರು ಫೂಟು ಉದ್ದವಾಗಿರುವದು. (೩) ಸಾದಾ ಗುಮಟೆ- ಕೋಲು ಗುಮಟೆಯಂತಿದ್ದರೂ ಸ್ವಲ್ಪ ಚಿಕ್ಕದಾಗಿ ಎರಡರಿಂದ ಎರಡುವರೆ ಫೂಟಿನಷ್ಟು ಉದ್ದವಾಗಿರುವದು. ಕುತ್ತಿಗೆಗೆ ತೂಗು ಹಾಕಿಕೊಂಡು, ಸೊಂಟಕ್ಕೆ ಕಟ್ಟಿಕೊಂಡು, ನೆಲದ ಮೇಲೆ ಇಟ್ಟುಕೊಂಡು ಬಲ ಅಂಗೈ ಮತ್ತು ಬೆರಳುಗಳನ್ನು ಚರ್ಮದ ಹೊದಿಕೆಯ ಮೇಲೆ ಆಡಿಸುತ್ತಲೂ ಅದೇ ಕಾಲಕ್ಕೆ ಎಡಗೈಯನ್ನು ತೆರೆದ ಬಾಯಿಯ ಮೇಲೆ ಇಟ್ಟು ಮುಚ್ಚಿ ತೆಗೆಯುತ್ತಲೂ ನುಡಿಸುವರು. ಹಾಡಿನ ಲಯಕ್ಕನುಗುಣವಾಗಿ ಅದರ ಧ್ವನಿಯ ಏರಿಳಿತಗಳನ್ನು ನಿಯಂತ್ರಿಸುತ್ತಾರೆ. ಇದಕ್ಕೆ ವಿಶೇಷ ತರಬೇತಿ ಬೇಕಾಗುವದು, ಕರಾವಳಿ ಪ್ರದೇಶದ ಹಾಲಕ್ಕಿ, ನಾಮಧಾರಿ, ಅಂಬಿಗ, ಉಪ್ಪಾರ ಮುಂತಾದವರ ಗಂಡು ಚರ್ಮವಾದ್ಯವೆಂದೇ ಇದು ಪ್ರಸಿದ್ಧ. ಉತ್ಸಾಹ, ಆವೇಶ ಹುಟ್ಟಿಸುವ ಗುಮಟೆಯ ವಾದನಕ್ಕೆ ತುಂಬಾ ರಟ್ಟೆಬಲ ಮತ್ತು ಅವಶ್ಯಕವಾದ ಗತ್ತಿನ ಜ್ಞಾನವಿರಬೇಕಾಗುತ್ತದೆ. ನಾದದ ಇಂಪು ಹೆಚ್ಚಾಗಬೇಕಾದರೆ ಇದನ್ನು ಕಾಸಲಾಗುತ್ತದೆ. ಇದು ಹಾಡುರಹಿತ ವಾದ್ಯವೂ ಹೌದು, ಹಾಡುಸಹಿತ ವಾದ್ಯವೂ ಹೌದು.
 
 
 
ಚೌಗಡ :
 
 
 
ಇದನ್ನು ಹಲಿಗೆ ಮಜಲಿನಲ್ಲಿ ಪಕ್ಕವಾದ್ಯವಾಗಿ ಬಳಸುತ್ತಾರೆ. ಇದರ ಆಕಾರ ಡಗ್ಗಾದಂತೆ ಇರುತ್ತದೆ. ಕೆಲವು ಭಾಗದಲ್ಲಿ ಇದಕ್ಕೆ ದಿಮ್ಮಿಯೆಂದು ಕರೆಯುತ್ತಾರೆ. ಕುರಿ ಅಥವಾ ಆಡಿನ ದಪ್ಪವಾದ ಚರ್ಮದಿಂದ ಸಿದ್ಧಪಡಿಸಿರುತ್ತಾರೆ. ಒಂದು ಅಡಿ ವ್ಯಾಸವುಳ್ಳ ಮಣ್ಣಿನ ಇಲ್ಲವೇ ಕಟ್ಟಿಗೆಯ ಬೊಗಾಣಿಗೆ ಈ ತೊಗಲನ್ನು ಬಿಗಿದಿರುತ್ತಾರೆ. ತೊಗಲು ನಾದದ ಹದಕ್ಕೆ ಬರಬೇಕಾದರೆ ಅದರಲ್ಲಿ ಕುರಿಯ ಇಲ್ಲವೆ ಎಮ್ಮಿಯ ಹಾಲನ್ನು ಹಾಕಿ ಅಂತರದಲ್ಲಿ ಗೂಟಕ್ಕೋ ಕಂಬಕ್ಕೋ ಕಟ್ಟುತ್ತಾರೆ. ನಂತರ ಇದನ್ನು ಬಿಗಿದಾದ ಬಳಿಕ ಒಣಗಿದಾಗ ವಿಶಿಷ್ಟವಾದ ಧ್ವನಿ ಬರುತ್ತದೆ. ಚೌಗಡಕ್ಕೆ ಹಗ್ಗವೊಂದನ್ನು ಕಟ್ಟಿ ಕೊರಳಿಗೋ ಹೆಗಲಿಗೋ ಹಾಕಿಕೊಳ್ಳುತ್ತಾರೆ. ಬಲಗೈಯಲ್ಲಿ ಕಟ್ಟಿಗೆಯ ಗುಣಿ ಇರುತ್ತದೆ. ಗುಣಿಯ ಮುಂದಿನ ಭಾಗವನ್ನು ಅರಿವೆ ಸುತ್ತಿ ಒಂದು ತರದ ಜಿಡ್ಡನ್ನು ಆ ಭಾಗಕ್ಕೆ ಲೇಪಿಸಿರುತ್ತಾರೆ. ಚೌಗಡದ ಮಧ್ಯ ಭಾಗಕ್ಕೆ ಅದನ್ನು ತಟ್ಟುತ್ತಾರೆ. ಹಾಗೆಯೇ ಎಡಗೈ ತುದಿಯ ಬೆರಳನ್ನು ವಾದನಕ್ಕೆ ಬಳಸುತ್ತಾರೆ. ಹಲಗೆಯ ಮಜಲಿಗೆ ಬೇಕಾದ ವಿವಿಧ ತಾಳಗಳನ್ನು ಆದಿ, ಮಿಶ್ರ ಮುಂತಾದ ಬೇರೆ ಬೇರೆ ತಾಳಗಳಲ್ಲಿ ನುಡಿಸುತ್ತಾರೆ.  
 
 
 
ಡೊಳ್ಳು :
 
  
 
ಜನಪದ ವಾದ್ಯಸಮುದಾಯದಲ್ಲಿ ಚಕ್ರವರ್ತಿಯೆನ್ನಬಹುದಾದ ದೊಡ್ಡ ಗಾತ್ರದ ಒಂದು ಚರ್ಮವಾದ್ಯ. ಡೊಳ್ಳು ವಾದನದ ಈ ಕಲೆ ಗಂಡು ಕಲೆಯೇ ಆಗಿದೆ. ಈ ಕಲೆಯ ಆರಾಧಕರು ಬೀರ ಭಕ್ತರಾದ ಕುರುಬರು. “ಕುರಿಯ ಮೇಲೆ ಕಣ್ಣೀರಲೆಪ್ಪಾ ಡೊಳ್ಳಿನ ಮೇಲೆ ಒಂದು ಕೈಯಿರಲಿ” ಎಂದು ಹಾಡಿನಲ್ಲಿ ಹೇಳಿಕೊಂಡಿದ್ದಾರೆ. ಕುರುಬ ಕುರಿಗಳೊಂದಿಗೆ ಕಾಡಿನಲ್ಲಿರುವಾಗ ಕಾಡಿನ ಕ್ರೂರ ಮೃಗಗಳ ಕಾಟ ತಪ್ಪಿಸಿಕೊಳ್ಳುವದಕ್ಕಾಗಿ ಈ ವಾದ್ಯವನ್ನು ನಿರ್ಮಿಸಿಕೊಂಡಿದ್ದಾನೆಂದು ಹೇಳಲಾಗುತ್ತದೆ.
 
ಜನಪದ ವಾದ್ಯಸಮುದಾಯದಲ್ಲಿ ಚಕ್ರವರ್ತಿಯೆನ್ನಬಹುದಾದ ದೊಡ್ಡ ಗಾತ್ರದ ಒಂದು ಚರ್ಮವಾದ್ಯ. ಡೊಳ್ಳು ವಾದನದ ಈ ಕಲೆ ಗಂಡು ಕಲೆಯೇ ಆಗಿದೆ. ಈ ಕಲೆಯ ಆರಾಧಕರು ಬೀರ ಭಕ್ತರಾದ ಕುರುಬರು. “ಕುರಿಯ ಮೇಲೆ ಕಣ್ಣೀರಲೆಪ್ಪಾ ಡೊಳ್ಳಿನ ಮೇಲೆ ಒಂದು ಕೈಯಿರಲಿ” ಎಂದು ಹಾಡಿನಲ್ಲಿ ಹೇಳಿಕೊಂಡಿದ್ದಾರೆ. ಕುರುಬ ಕುರಿಗಳೊಂದಿಗೆ ಕಾಡಿನಲ್ಲಿರುವಾಗ ಕಾಡಿನ ಕ್ರೂರ ಮೃಗಗಳ ಕಾಟ ತಪ್ಪಿಸಿಕೊಳ್ಳುವದಕ್ಕಾಗಿ ಈ ವಾದ್ಯವನ್ನು ನಿರ್ಮಿಸಿಕೊಂಡಿದ್ದಾನೆಂದು ಹೇಳಲಾಗುತ್ತದೆ.
೧೩೨ ನೇ ಸಾಲು: ೧೦೭ ನೇ ಸಾಲು:
 
ಎಂಬುದು ಅದರ ನಾದ. ಇದಾದ ನಂತರ ಹಾಡುಗಳು ಪ್ರಾರಂಭ. “ದಿಲ್ಲಿಗೆ ಹೋದರೂ ಡೊಳ್ಳಿಗೆ ಒಂದೇ ಪೆಟ್ಟು” ಎಂಬ ಮಾತಿನ ಹಿನ್ನೆಲೆಯಲ್ಲಿ ಬಾರಿಸುವ ವಿಧಾನ ಎಲ್ಲ ಗತ್ತುಗಳಲ್ಲಿಯೂ ಒಂದೇ ರೀತಿಯಿರುತ್ತದೆ. ಒಂದು ಗುಣಿಗೆ ಮೊದಲು ಹೆಜ್ಜೆ ಎಂದು ಕರೆಯುತ್ತಾರೆ. ಅಂದರೆ ಒಂದು ಗುಣಿ ಪೆಟ್ಟ, ಬಳಿಕ ಒಂದು ಕೈಪೆಟ್ಟ – ಇದೇ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಹೀಗೆ ಐದು ಗುಣಿ ಪೆಟ್ಟನವರೆಗೂ ಬಡಿಯುತ್ತಾರೆ. ಇದು ಹಾಡುರಹಿತ ಮತ್ತು ಹಾಡುಸಹಿತವಾದ ವಾದ್ಯ.
 
ಎಂಬುದು ಅದರ ನಾದ. ಇದಾದ ನಂತರ ಹಾಡುಗಳು ಪ್ರಾರಂಭ. “ದಿಲ್ಲಿಗೆ ಹೋದರೂ ಡೊಳ್ಳಿಗೆ ಒಂದೇ ಪೆಟ್ಟು” ಎಂಬ ಮಾತಿನ ಹಿನ್ನೆಲೆಯಲ್ಲಿ ಬಾರಿಸುವ ವಿಧಾನ ಎಲ್ಲ ಗತ್ತುಗಳಲ್ಲಿಯೂ ಒಂದೇ ರೀತಿಯಿರುತ್ತದೆ. ಒಂದು ಗುಣಿಗೆ ಮೊದಲು ಹೆಜ್ಜೆ ಎಂದು ಕರೆಯುತ್ತಾರೆ. ಅಂದರೆ ಒಂದು ಗುಣಿ ಪೆಟ್ಟ, ಬಳಿಕ ಒಂದು ಕೈಪೆಟ್ಟ – ಇದೇ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಹೀಗೆ ಐದು ಗುಣಿ ಪೆಟ್ಟನವರೆಗೂ ಬಡಿಯುತ್ತಾರೆ. ಇದು ಹಾಡುರಹಿತ ಮತ್ತು ಹಾಡುಸಹಿತವಾದ ವಾದ್ಯ.
  
ದುರುಗಮುರಗಿ ವಾದ್ಯ :
+
'''ಯಕ್ಷಗಾನ'''
 
 
ಇದಕ್ಕೆ ಬುರಬುರಕಿ ಎಂಬ ಡೋಲು, ಡೊಳ್ಳು ಎಂದು ಕರೆಯುತ್ತಾರೆ. ದುರಗವ್ವ-ಮುರಗವ್ವ ಉರಿಮಾರವ್ವಾ ಎಂಬ ಮುಂತಾದ ಹೆಸರುಗಳಿಂದ ಕರೆಯಿಸಿಕೊಳ್ಳುವ ಉಗ್ರದೇವತೆಯನ್ನು ಹೊತ್ತಾಡುವ ಅಲೆಮಾರಿ ಪೂಜಾರಿವರ್ಗ ಈ ವಾದ್ಯವನ್ನು ಉಪಯೋಗಿಸುತ್ತಾರೆ. ಸುಮಾರು ೧೫ ಅಂಗುಲ ವ್ಯಾಸವಿರುವ ೩೦ ಅಂಗುಲ ಉದ್ದವಿರುವ ಕಂಚು ಅಥವಾ ಹಿತ್ತಾಳೆಯ ಪಡಗಕ್ಕೆ ಎರಡೂ ಕಡೆ ಹದಮಾಡಿದ ಆಡಿನ, ಜಿಂಕೆಯ ಚರ್ಮವನ್ನು ಬಿಗಿದು ಕಟ್ಟಿರುತ್ತಾರೆ. ಬಡಿಯಲು ಎರಡು ಗಟ್ಟಿಯಾದ ತೆಂಗಿನ ಅಥವಾ ಈಚಲು ಮರದ ಗರಿಗಳ ಕಡ್ಡಿಗಳನ್ನು ಬಳಸುತ್ತಾರೆ. ಬಡಿಯುವ ಕೋಲು ಬಲಗೈಯಲ್ಲಿರುತ್ತದೆ. ಎಡಗೈ ಕೋಲು ಬಡಿಯುವ ಕೋಲಿಗಿಂತಾ ಗಾತ್ರದಲ್ಲಿ ಸಣ್ಣದಾಗಿದ್ದು ಕಮಾನಿನಂತೆ ಬಾಗಿರುತ್ತದೆ. ಈ ಬಾಗಿದ ಕೋಲನ್ನು ಚರ್ಮದ ಮೇಲೆ ತಿಕ್ಕುವದರಿಂದ ಬುರು ಬುರು ; ಡರ ಡರ ನಾದ ಹೊರಡುತ್ತದೆ. ಇದು ತುಂಬಾ ಕರ್ಕಶವಾಗಿ ಕಿವಿಗೆ ಒಂದು ತರಹ ಹಿಂಸೆಯನ್ನು ಕೊಡುವುದಾಗಿರುತ್ತದೆ. ತಿಕ್ಕುವ ಸ್ಥಳದಲ್ಲಿ ಔಡಲ ಬೀಜಗಳನ್ನು ಕುಟ್ಟಿ ತೆಗೆದ ಜಿಡ್ಡನ್ನು (ದ್ರವವನ್ನು) ಹಚ್ಚುತ್ತಾರೆ. ಹೀಗೆ ಲೇಪಿಸಿದ ಭಾಗದಲ್ಲಿ ತಿಕ್ಕುವುದರಿಂದ ಒಂದು ವಿಲಕ್ಷಣ ಧ್ವನಿ ಹೊರಡುತ್ತದೆ. ಇದಕ್ಕೆ ಉರಮೆ ವಾದ್ಯ ಎಂದೂ ಕರೆಯಲಾಗುತ್ತದೆ. ಉರಿ ಮಾರೆಮ್ಮನನ್ನು ಹೊತ್ತಾಡುವ ಜನರ ವಾದ್ಯವಾದುದರಿಂದ ಮೇಲಿನ ಈ ಹೆಸರು ಬಂದಿರಬೇಕು.
 
 
 
ಢಕ್ಕೆ :
 
 
 
ವೃತ್ತಿ ಗಾಯಕರಾದ ನೀಲಗಾರರು ತಂಬೂರಿಯ ಜೊತೆಗೆ ಢಕ್ಕೆಯೆಂಬ ವಾದ್ಯವನ್ನು ಬಳಸುತ್ತಾರೆ. ೧೨ ನೇಯ ಶತಮಾನದ ವಚನಕಾರರಲ್ಲಿ ಢಕ್ಕೆಯ ಮಾರಯ್ಯ ಢಕ್ಕೆಯ ಬೊಮ್ಮಣ್ಣರೆಂಬ ಜನಪದ ಕಲಾವಿದರಿದ್ದಾರೆ. ಢಕ್ಕೆಯ ವಾದನವೇ ಅವರ ವೃತ್ತಿಯಾಗಿದ್ದರಿಂದ ಈ ಹೆಸರು ಬಂದಿರಬೇಕು, ಮೊರದಲ್ಲಿ ಮಾರಿಯನ್ನಿಟ್ಟುಕೊಂಡು ತನ್ನ ಕೈಯಲ್ಲಿ ಬಳೆ ಧರಿಸಿ, ಕತ್ತಿ ಬಟ್ಟಲು ಹಿಡಿದು ಮನೆ ಮನೆಗೆ ಢಕ್ಕೆಯನ್ನು ಬಾರಿಸುತ್ತ ಬರುತ್ತಿದ್ದಾನೆಂಬುದು ಅವನ ಒಂದು ವಚನದಿಂದ ತಿಳಿದು ಬರುತ್ತದೆ. ಢಕ್ಕೆಯ ಉದ್ದ ಸುಮಾರು ೧೦ ಅಂಗುಲ ಇರುತ್ತದೆ. ಚರ್ಮದ ಹೊದಿಕೆಯ ಎರಡೂ ಮುಖಗಳು ಸುಮಾರು ನಾಲ್ಕು ಅಂಗುಲ ವ್ಯಾಸವಿರುತ್ತದೆ. ಇದಕ್ಕೆ ದನದ ಚರ್ಮವನ್ನು ಬಳಸುತ್ತಾರೆ. ಕಟ್ಟಿಗೆ ಹಲಸಿನ ಮರದ್ದು. ಚರ್ಮದ ಹೊದಿಕೆಯನ್ನು ಕೈಯಿಂದ ಅಥವಾ ನಯವಾದ ಕೋಲಿನಿಂದ ಬಡಿದು ಶಬ್ದ ಹೊರಡಿಸುತ್ತಾರೆ. ವಾದ್ಯಕ್ಕೆ ಬಿಗಿದಿರುವ ದಾರಗಳನ್ನು ಧ್ವನಿ ಬದಲಾವಣೆಗಾಗಿ ಆಗಾಗ್ಗೆ ಅದುಮಿ ತ್ವರಿತವಾಗಿ ಕೈಯ್ಯನ್ನು ಹಿಂದೆಳೆದುಕೊಳ್ಳುತ್ತಾರೆ. ಹೀಗೆ ಮಾಡುವದರಿಂದ ನಾದ ವೈವಿಧ್ಯ ಏರ್ಪಡುತ್ತದೆ. ಇದು ಡಮರುಗಾಕಾರವನ್ನು ಹೋಲುತ್ತದೆ. ಶಾಸನಗಳಲ್ಲಿ “ಢಕ್ಕೆಯ ಕೇರಿ” ಎಂಬ ಉಲ್ಲೇಖಗಳೂ ಬರುತ್ತವೆ. ಆದ್ದರಿಂದ ಇದು ಜನಪ್ರಿಯ ವಾದ್ಯವೇ ಸರಿ.
 
 
 
ಡಮರುಗ :
 
 
 
ರಚನೆಯಲ್ಲಿ ಢಕ್ಕೆಯನ್ನೇ ಹೋಲುವ ಡಮರುಗದ ನಡುವೆ ಎರಡು ದಾರದ ಗಂಟುಗಳನ್ನು ಕಟ್ಟಿರುತ್ತಾರೆ. ಈ ಗಂಟುಗಳು ಡಮರುಗವನ್ನು ಹದವರಿತು ಅಲುಗಾಡಿಸುವದರಿಂದ ಎರಡೂ ಗಂಟುಗಳು ಎರಡೂ ಕಡೆಯ ಚರ್ಮದ ಹೊದಿಕೆಗೆ ಬಡಿದು ಢಮ ಢಮ ಧ್ವನಿ ಹೊರಡುತ್ತದೆ. ಈ ಢಮ ಢಮ ನಾದದಿಂದಲೇ ಇದಕ್ಕೆ ಡಮರುಗವೆಂದು ಕರೆದಿರಬೇಕು. ಇದು ಶಿವನ ವಾದ್ಯವೆಂದು ತಿಳಿದು ಶಿವಭಕ್ತರಾದ ಗೊರವರು ಈ ವಾದ್ಯವನ್ನು ಪೂಜಿಸಿ ಉಪಯೋಗಿಸುತ್ತಾರೆ. ಗೊರವರ ಕಲಾಪ್ರದರ್ಶನಕ್ಕೆ ಈ ವಾದ್ಯದಿಂದಾಗಿ ಎಲ್ಲಿಲ್ಲದ ಕಳೆಕಟ್ಟುತ್ತದೆ. ೪-೫ ಜನ ಗೊರವಯ್ಯಗಳು ವಿಶಿಷ್ಟವಾದ ತಾಳ ಲಯಗಳೊಂದಿಗೆ ಡಮರುಗದ ನಾದದೊಡನೆ ಸ್ತುತಿಪದಗಳನ್ನು ಹೇಳುತ್ತಾ ಕುಣಿಯುತ್ತಾರೆ. ಕುಣಿತ ಪರಾಕಾಷ್ಠೆಯನ್ನು ಮುಟ್ಟಿದಾಗ ಡಮರುಗದ ನಾದದೊಂದಿಗೆ ಅವರ ಕುಣಿತ ರುದ್ರಸ್ವರೂಪವನ್ನು ತಾಳುತ್ತದೆ. ಮಹಾಕವಿ ಹರಿಹರ ತನ್ನ ಕಾರಿಕಾಲಮ್ಮೆ ರಗಳೆಯಲ್ಲಿ ಡಮರುಗದ ನಾದದೊಂದಿಗೆ ಶಿವನರ್ತನದ ದರ್ಶನ ಹೀಗೆ ಮಾಡಿಸುತ್ತಾನೆ :
 
 
 
‘ಡಮರುಗದ ನಾದಮುಂ ಢಣಢಣವೆನುತ್ತಿರಲ್……
 
  
…………ತಾನಾಡೆ ಜಗವಾಡೆ ಜೀವರಾಶಿಗಳಾಡೆ’
+
ಯಕ್ಷಗಾನ - ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.
  
ಎಂದು ಹೇಳುವ ಮಾತಿನಲ್ಲಿ ಈ ವಾದ್ಯದ ನಾದಕ್ಕೆ ಜಗವೇ ಸ್ಪಂದಿಸುತ್ತದೆಂದು ಹೇಳಿದ ಈ ಕವಿ, ಗುಂಡಯ್ಯನ ರಗಳೆಯಲ್ಲಿಯೂ ಶಿವನರ್ತನದ ವೇಳೆಯಲ್ಲಿ ಡಮರುಗದ ಪ್ರಸ್ತಾಪ ಮಾಡುತ್ತಾನೆ :
+
'''ಯಕ್ಷಗಾನದ ಪ್ರಮುಖ ಅಂಶಗಳು'''
  
“ಮಿಸುಗುವ ಡಮರುಗ ಢಂ ಢಂ ಢಣಲನೆ
+
ಯಕ್ಷಗಾನದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಕಾಣಬಹುದು.
 +
# '''ಪ್ರಸಂಗ''': ಯಕ್ಷಗಾನದಲ್ಲಿ ಯಾವುದಾದರೊಂದು ಕಥಾನಕವನ್ನು ಆಯ್ದುಕೊಂಡು ಅದನ್ನು ಜನರಿಗೆ ಹಾಡು, ಅಭಿನಯ, ನೃತ್ಯಗಳೊಂದಿಗೆ ತೋರಿಸಲಾಗುತ್ತದೆ. ಹೀಗೆ ಆಯ್ದುಕೊಂಡ ಕಥಾನಕವನ್ನು '''ಪ್ರಸಂಗ''' ಎಂದು ಕರೆಯುತ್ತಾರೆ. ಉದಾಹರಣೆಗೆ ಮಹಾಭಾರತದಲ್ಲಿ ಭೀಮ ಮತ್ತು ದುರ್ಯೋಧನರ ನಡುವೆ ನಡೆಯುವ ಗದಾಯುದ್ಧದ ಕಥೆಯನ್ನು ಆಯ್ದುಕೊಂಡರೆ ಆಗ ಅದನ್ನು "ಗದಾಯುದ್ದ ಪ್ರಸಂಗ" ಎಂಬುದಾಗಿ ಕರೆಯುತ್ತಾರೆ. ಹೆಚ್ಚಾಗಿ ಪೌರಾಣಿಕ ಪ್ರಸಂಗಗಳನ್ನೇ ಆಯ್ದು ಕೊಳ್ಳುವುದು ಯಕ್ಷಗಾನದ ವಾಡಿಕೆಯಾದರೂ ಪ್ರಸಂಗವು ಪೌರಾಣಿಕವೇ ಆಗಬೇಕು ಎಂಬ ನಿಯಮವೇನೂ ಇಲ್ಲ. ಇದು ಐತಿಹಾಸಿಕವೂ, ಸಾಮಾಜಿಕವೂ ಆಗಿರಬಹುದು.
 +
# '''ಪಾತ್ರಧಾರಿಗಳು''':ಪ್ರಸಂಗದಲ್ಲಿ ಬರುವ ಕಥೆಯನ್ನು ಅಭಿನಯಿಸುವವರೇ ಪಾತ್ರಧಾರಿಗಳು. ಸ್ತ್ರೀ ಪಾತ್ರ, ಖಳ ನಟನ ಪಾತ್ರ, ಹಾಸ್ಯ ಕಲಾವಿದನ ಪಾತ್ರ, ನಾಯಕನ ಪತ್ರ - ಹೀಗೆ ಪ್ರಸಂಗಕ್ಕೆ ಅನುಗುಣವಾಗಿ ಪಾತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ನೃತ್ಯ, ಅಭಿನಯ ಹಾಗೂ ಮಾತುಗಾರಿಕೆಗಳೊಂದಿಗೆ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಪಾತ್ರಧಾರಿಗಳ ಮೇಲಿರುತ್ತದೆ.
 +
# '''ವೇಷಭೂಷಣ''':ಯಕ್ಷಗಾನದ ಪ್ರಮುಖ ಪ್ರಭೇದವಾದ ಬಯಲಾಟಗಳಲ್ಲಿ ವೇಷಭೂಷಣಗಳು ಪ್ರಮುಖವಾದದ್ದು. ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳಿರುತ್ತವೆ. ಉದಾಹರಣೆಗೆ ಪ್ರಮುಖ ಖಳನಟ ಮತ್ತು ರಾಜ (ನಾಯಕ)ನ ಪಾತ್ರಕ್ಕೆ ಬಳಸುವ ಕಿರೀಟವು ಸಾಮಾನ್ಯ ಪಾತ್ರಧಾರಿಗೆ ಬಳಸುವ ಕಿರೀಟಗಳಿಗಿಂತ ವಿಭಿನ್ನ ವಿನ್ಯಾಸ ದ್ದಾಗಿರುತ್ತದೆ. ಹಾಗೆಯೇ ಸ್ತ್ರೀ ಪಾತ್ರಗಳಿಗೆ ಬಳಸುವ ಕಿರೀಟವು ತುಂಬಾ ಚಿಕ್ಕದಾಗಿರುತ್ತದೆ. ಅಲ್ಲದೇ ತೆಂಕತಿಟ್ಟು ಶೈಲಿಯ ಯಕ್ಷಗಾನದಲ್ಲಿ ಉಪಯೋಗಿಸುವ ವೇಷಭೂಷಣ ಗಳು ಬಡಗತಿಟ್ಟಿನಲ್ಲಿ ಉಪಯೋಗಿಸುವ ವೇಷ ಭೂಷಣಗಳಿಗಿಂತ ಭಿನ್ನವಾಗಿರುತ್ತವೆ.
 +
# '''ಭಾಗವತಿಕೆ''': ಯಕ್ಷಗಾನದ ಜೀವಾಳವೇ ಭಾಗವತಿಕೆ ಅಥವಾ ಹಾಡುಗಾರಿಕೆ. ಅವರು ಈ ರಂಗ ಪ್ರಕಾರದ ನಿರ್ದೇಶಕರಿದ್ದಂತೆ. ಇಲ್ಲಿ ಪಾತ್ರಧಾರಿಗಳು ಅಭಿನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ. ಹೀಗೆ ಹಾಡುವವರನ್ನು '''ಭಾಗವತರು''' ಎಂದು ಕರೆಯುತ್ತಾರೆ. ಭಾಗವತರು ಹಾಡುವ ಪದಗಳಿಗೆ ತಕ್ಕಂತೆ ಪಾತ್ರಧಾರಿಗಳು ನೃತ್ಯದ ಮೂಲಕ ಅಭಿನಯಿಸುತ್ತಾರೆ. ನೃತ್ಯದೊಂದಿಗೆ ಹಾಡಿನಲ್ಲಿ ಬರುವ ಕಥಾನಕದ ಸಂದರ್ಭಕ್ಕನುಗುಣವಾಗಿ ಭಾವಾಭಿನಯವೂ ಸಹ ಅತ್ಯಂತ ಅಗತ್ಯವಾದುದು.
 +
# '''ಮಾತುಗಾರಿಕೆ''': ಹಾಡುವುದನ್ನು ಪೂರ್ಣಗೊಳಿಸಿದ ಕೂಡಲೇ ಆ ಹಾಡಿನ ಸಾರಾಂಶವನ್ನು ಪಾತ್ರಧಾರಿಗಳು ಚರ್ಚಿಸುತ್ತಾರೆ. ಹಾಡಿನಲ್ಲಿ ಕಥಾನಕದ ಯಾವ ಭಾಗವನ್ನು ಪ್ರಸ್ತುತ ಪಡಿಸಲಾಗುತ್ತದೋ ಅದೇ ಭಾಗದ ಅರ್ಥವನ್ನು ಜನ ಸಾಮಾನ್ಯರೆಲ್ಲರಿಗೂ ಸ್ಪಷ್ಟವಾಗುವಂತೆ ಆಡುಮಾತಿನಲ್ಲಿ ಪಾತ್ರಧಾರಿಗಳು ಸಂಭಾಷಿಸುತ್ತಾರೆ.
 +
[[Image:Yakshagana1.jpg|thumb|ಬಡಗು ತಿಟ್ಟು ಯಕ್ಷಗಾನ ವೇಷದ ಒಂದು ಮಾದರಿ]]
 +
[[Image:Yakshagana2.jpg|thumb|ತೆಂಕು ತಿಟ್ಟು ಯಕ್ಷಗಾನ ವೇಷದ ಒಂದು ಮಾದರಿ]]
  
ತಿಸುಳದಿ ಹರಿಯುವ ತಾರಂ ತಿರ‍್ರನೇ”
+
'''ಉಗಮ'''
  
ಎಂದು ಹೇಳುತ್ತಾ ‘ಆಡಿದ ನಾಡಿದ ನಾಹಾ ಶಂಕರಾ ! ಆಡಿದನಾ ಗುಂಡನ ಮುಂದೀಶ್ವರ’ ಹೀಗೆ ಕುಣಿತ ಪರಾಕಾಷ್ಠೆ ಮುಟ್ಟಲು ಡಮರುಗದ ಸ್ಫೂರ್ತಿ ಮರೆಯಲಿಕ್ಕಾಗದು. ಗೊರವರಲ್ಲದೇ ಕೆಲವು ಭಾಗದಲ್ಲಿ ಹಾವಾಡಿಗರು, ಮಂಗನಾಡಿಸುವವರು ಈ ವಾದ್ಯವನ್ನು ತಮ್ಮ ಕಲೆಯಲ್ಲಿ ಬಳಸಿಕೊಳ್ಳುತ್ತಾರೆ.
+
ಯಕ್ಷಗಾನದ ಮೊದಲ ಉಲ್ಲೇಖ ಸಾರ್ಣದೇವನ "ಸಂಗೀತ ರತ್ನಾಕರ"ದಲ್ಲಿ (೧೨೧೦ ಕ್ರಿಶ) "ಜಕ್ಕ" ಎಂದು ಆಗಿದ್ದು ಮುಂದೆ "ಯಕ್ಕಲಗಾನ" ಎಂದು ಕರೆಯಲ್ಪಟ್ಟಿತ್ತು ಎಂಬುದು ಒಂದು ಅಭಿಪ್ರಾಯ. ಗಂಧರ್ವ ಗ್ರಾಮ ಎಂಬ ಈಗ ನಶಿಸಿ ಹೋಗಿರುವ ಗಾನ ಪದ್ದತಿಯಿಂದ ಗಾನ ಮತ್ತು ಸ್ವತಂತ್ರ ಜಾನಪದ ಶೈಲಿಗಳಿಂದ ನೃತ್ಯ ರೂಪು ಗೊಂಡಿತೆಂದು ಶಿವರಾಮ ಕಾರಂತರ "ಯಕ್ಷಗಾನ ಬಯಲಾಟ" ಎಂಬ ಸಂಶೋಧನಾ ಪ್ರಬಂಧಗಳ ಸಂಕಲನದಲ್ಲಿ ಹೇಳಿದೆ. ೧೫೦೦ ರಷ್ಟರಲ್ಲಿ ವ್ಯವಸ್ತಿತವಾಗಿ ಯಕ್ಷಗಾನ ರೂಢಿಯಲ್ಲಿತ್ತು ಎಂಬುದು ಬಹಳ ವಿದ್ವಾಂಸರು ಒಪ್ಪುವ ವಿಚಾರ.  
  
ಬುಡಬುಡಕಿಯ ವಾದ್ಯ :
+
'''ಯಕ್ಷಗಾನದ ಪ್ರಭೇದಗಳು'''
 +
* ಯಕ್ಷಗಾನದಲ್ಲಿ ಅನೇಕ ರೀತಿಯ ಪ್ರಭೇದಗಳಿದ್ದು ಅವುಗಳಲ್ಲಿ '''ಯಕ್ಷಗಾನ ಬಯಲಾಟ'''ವು ಅತ್ಯಂತ ಜನಪ್ರಿಯವಾದುದು. ಬಯಲಾಟವೆಂದರೆ ವೇಷಭೂಷಣಗಳೊಂದಿಗೆ ರಂಗಭೂಮಿಯಲ್ಲಿ ಆಡುವ ಯಕ್ಷಗಾನ ಪ್ರಭೇದ. ಕುಣಿತ ಎಂಬ ಹೆಸರು ಇದಕ್ಕಿದೆ. ಮೊದ ಮೊದಲು ಹಬ್ಬ ಹರಿದಿನಗಳಂದು ಊರಿನ ಬಯಲಿನಲ್ಲಿ ರಾತ್ರಿಯಿಡೀ ಈ ಬಯಲಾಟ ಹೆಚ್ಚಾಗಿ ನಡೆಯುತ್ತಿದ್ದ ಕಾರಣ "ಬಯಲಾಟ" ಎಂಬ ಹೆಸರು ರೂಢಿಯಲ್ಲಿದೆ. ಜನರು ಇದನ್ನು ಸರಳವಾಗಿ  "ಆಟ" ಎಂದೂ ಕರೆಯುತ್ತಾರೆ. 
  
ಚರ್ಮವಾದ್ಯಗಳಲ್ಲಿ ಅತೀ ಚಿಕ್ಕದಾದ ವಾದ್ಯ ಈ ಬುಡಬುಡಕಿಯ ವಾದ್ಯ. ಇದನ್ನು ಕಿರುಡಮರುಗವಾದ್ಯವೆಂದು ಕರೆಯಬಹುದು. ಈ ವಾದ್ಯದ ಉಗಮದ ಬಗ್ಗೆ ದಂತಕಥೆಗಳಿವೆ. [ಶ್ರೀ ಕೃಷ್ಣನು ತಾರಕಾಸುರ-ಮಾರಕಾಸುರರನ್ನು ಸಂಹಾರ ಮಾಡಲು ಹೋದಾಗ ಬುಡಬುಡಕಿಯ ವಾದ್ಯ ಹಿಡಿದು ವೇಷ ಮರೆಸಿಕೊಂಡು ಹೋಗಿದ್ದನಂತೆ ಶ್ರೀಕೃಷ್ಣನಿಂದ ಬಳುವಳಿಯಾಗಿ ಈ ಕಲೆ ತಮಗೆ ಬಂದಿದೆಯೆಂದು ಹೇಳುತ್ತಾರೆ.] ಗೊಂದಲಿಗರ ಸಮೀಪಜಾತಿಯವರಾದ ಇವರಿಗೆ ಬುಡಬುಡಕಿಗಳೆಂದೇ ಕರೆಯುತ್ತಾರೆ. “ಕಿಡಬುಡ” ಈ ನಾದದ ಕಾರಣವಾಗಿಯೇ ಈ ವಾದ್ಯ ಹೀಗೆ ಕರೆಸಿಕೊಳ್ಳುತ್ತಿರಬೇಕು. ಮೂಡಲದ ಹಣೆಯಲ್ಲಿ ಬೆಳ್ಳಿ ಮೂಡುವ ಮುನ್ನ ಪ್ರಶಾಂತ ನಿಶೆಯೊಳಗೆ ಊರಲ್ಲಿ ತನ್ನ ಮಧುರ ಕಂಠದಿಂದ ಹಾಡುತ್ತ ತಿರುಗುವ ಬುಡಬುಡಕನಿಗೆ ಅವನ ವಾದ್ಯದ ರಮ್ಯನಿನಾದವು ಜೊತೆಗೂಡಿ ಮೇಳ ನಿದ್ದೆಯಲ್ಲಿ ಇದ್ದವರನ್ನು ಸುಖನಿದ್ದೆಯಲ್ಲಿ ತೂಗುತ್ತದೆ. ಈತ ಹೇಳುವ ಶಕುನದ ವಿಫಲತೆಯಿಂದಾಗಿ ; ‘ಬುಡಬುಡಕ್ಯಾನ ಮಾತ ಬುಡುತನಕ ಸುಳ್ಳ’ ಎಂಬ ಗಾದೆ ಹುಟ್ಟಿಕೊಂಡಿದೆ. ಸು ೮ ಅಂಗುಲ ಉದ್ದವಿರುವ ಕಳಸಿನ ಎರಡೂ ಬಾಯಿಗಳಿಗೂ ಕಪ್ಪೆ ಚರ್ಮ ಇಲ್ಲವೆ ಆಡಿನ ಜಠರದ ಚರ್ಮವನ್ನು ದಾರಗಳ ಸಹಾಯದಿಂದ ಬಿಗಿದಿರುತ್ತಾರೆ. ಬಿಗಿಯುವ ದಾರಕ್ಕೆ ಬದ್ದೆ ದಾರವೆಂದು ಕರೆಯುತ್ತಾರೆ. ಬದ್ದೆಯ ಭಾಗದಲ್ಲಿ ಎರಡೂ ಮಗ್ಗಲು ತದ್ವಿರುದ್ಧವಾಗಿ ಎರಡು ದಾರದ ತುಂಡುಗಳನ್ನು ಕಟ್ಟಿರುತ್ತಾರೆ. ಈ ದಾರದ ತುಂಡುಗಳ ಬಡಿಯುವ ತುದಿಗೆ ಮೇಣವನ್ನಂಟಿಸಿ ಸಣ್ಣ ಗಂಟುಗಳನ್ನಾಗಿ ಮಾಡಿ ಬಡಿಯುತ್ತಾರೆ. ಈ ಗಂಟುಗಳು ಎರಡೂ ಮುಖದ ಮಧ್ಯದಲ್ಲಿ ಬಂದು ಇನ್ನೊಂದು ಬುಡಬುಡಕೆಯ ಎರಡೂ ಮುಖದ ಬದಿ ಬಡಿಯುವಂತೆ ಕಟ್ಟಿರುತ್ತಾರೆ, ಇವುಗಳಿಗೆ ತಾಳುಗಳೆಂದು ಹೆಸರು. ಕಳಸಿನ ನಡುವೆ ಬೆರಳುಗಳಿಂದ ಹಿಡಿದು ಕೈಚಳಕದಿಂದ ತ್ವರಿತವಾಗಿ ಈ ವಾದ್ಯವನ್ನು ಅಲುಗಿಸಿದಾಗ ಗಂಟುಹಾಕಿದ ದಾರಗಳು ಚರ್ಮದ ಭಾಗಗಳಿಗೆ ಬಡಿದು ‘ಕಿಡಬುಡ’ ನಾದ ಕೊಡುತ್ತದೆ. ವಾದ್ಯದ ನಡುವೆ ಬಣ್ಣ-ಬಣ್ಣದ ಬಟ್ಟೆಗಳನ್ನು ಕಟ್ಟಿ ಆ ಬಟ್ಟೆಗಳಿಂದ ಬಿಗಿಯಾಗಿ ಹಿಡಿದು ನುಡಿಸುತ್ತಾರೆ.
+
* ಆದರೆ ಈಗೀಗ ರಾತ್ರಿಯಿಡೀ ನಡೆಯುವ ಬಯಲಾಟದೊಂದಿಗೆ ೨-೩ ಘಂಟೆಗಳ ಕಾಲ ನಡೆಯುವ ಯಕ್ಷಗಾನವೂ ಬಳಕೆಯಲ್ಲಿದೆ. ಬಯಲಾಟದಲ್ಲಿ ವೇಷಭೂಷಣ, ರಂಗಸ್ಥಳ, ಭಾಗವಂತಿಕೆ (ಹಾಡುಗಾರಿಕೆ), ಅಭಿನಯ, ಮಾತುಗಾರಿಕೆ, ನೃತ್ಯ - ಹೀಗೆ ಸಾಂಪ್ರದಾಯಿಕ ಯಕ್ಷಗಾನದ ಎಲ್ಲ ಮಜಲುಗಳನ್ನೂ ಕಾಣಬಹುದು. ಯಕ್ಷಗಾನದಲ್ಲಿ ಮೂಡಲಪಾಯ ಮತ್ತು ಪಡುವಲಪಾಯ ಎಂಬ ಎರಡು ಮ್ರಮುಖ ಪ್ರಭೇದಗಳಿವೆ. ಪಶ್ಚಿಮ ಘಟ್ಟದ ಪೂರ್ವಕ್ಕೆ  ಪ್ರಚಲಿತವಿರುವದು ಮೂಡಲಪಾಯ.  
 
+
* ಉತ್ತರ ಕರ್ನಾಟಕದಲ್ಲಿ ಬಹು ಜನಪ್ರಿಯವಾಗಿರುವ ಶ್ರೀಕೃಷ್ಣ ಪಾರಿಜಾತ ಮೂಡಲ ಪಾಯದಲ್ಲಿ ಗಮನಾರ್ಹ. ಮಲೆನಾಡು ಮತ್ತು ಕರಾವಳಿಯಲ್ಲಿ ಪ್ರಚಲಿತವಿರುವುದು ಪಡುವಲಪಾಯ. ಪಡುವಲಪಾಯದಲ್ಲಿ ೩ ವಿಭಾಗಗಳಿವೆ.ಅವು '''ತೆಂಕುತಿಟ್ಟು''','''ಬಡಗುತಿಟ್ಟು''' ಮತ್ತು ಉತ್ತರದ ತಿಟ್ಟು ('''ಬಡಾಬಡಗು''').
ದುಡಿ :
+
* ಉತ್ತರ ಕನ್ನಡ, ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತರದ ತಿಟ್ಟು ಶೈಲಿಯ ಬಯಲಾಟಗಳು ಕಂಡು ಬಂದರೆ ಉಡುಪಿಯಲ್ಲಿ ಬಡಗುತಿಟ್ಟು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ತೆಂಕುತಿಟ್ಟು ಶೈಲಿಯ ಯಕ್ಷಗಾನವನ್ನು ಕಾಣಬಹುದು. ವೇಷಭೂಷಣಗಳ ವಿನ್ಯಾಸ, ನೃತ್ಯದ ಶೈಲಿ, ಭಾಗವತಿಕೆ ಮತ್ತು ಹಿಮ್ಮೇಳಗಳಲ್ಲಿ ಕಂಡುಬರುವ ಕೆಲವು ವ್ಯತ್ಯಾಸಗಳ ಆಧಾರದ ಮೇಲೆ ವಿಂಗಡಣೆಯನ್ನು ಮಾಡಲಾಗಿದೆಯೇ ಹೊರತು ಯಕ್ಷಗಾನದ ಮೂಲ ತತ್ವ, ಆಶಯಗಳು ೩ ಶೈಲಿಗಳಲ್ಲಿಯೂ ಒಂದೇ ಆಗಿರುತ್ತದೆ.
 
 
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಡಿವಾದ್ಯ ವಿಶೇಷವಾಗಿದೆ. ಅಲ್ಲಿಯ ಮೇರ ಜನಾಂಗ ಗುಡ್ಡಗಾಡಿನಲ್ಲಿ ವಾಸಮಾಡುವ ಕುಡಿಯರು, ಕಾಪಾಳರು ಹೆಚ್ಚಾಗಿ ಈ ವಾದ್ಯದ ಉಪಯೋಗಮಾಡುತ್ತಾರೆ. ಸುಗ್ಗಿ ಮುಗಿದ ಸಂತೋಷದಲ್ಲಿ ಈ ವಾದ್ಯವನ್ನು ಬಳಸಿಕೊಂಡು ಕುಣಿಯುತ್ತಾರೆ. ಇದಕ್ಕೆ ದುಡಿಕುಣಿತವೆಂದೇ ಹೆಸರಿದೆ. ಮದುವೆ ನಾಮಕರಣ, ಮಂಗಲ ಉತ್ಸವಗಳಲ್ಲಿ ಈ ದುಡಿ ಬಡಿಯುವ ಕಲೆಯನ್ನು ಪ್ರದರ್ಶಿಸುತ್ತಾರೆ. ರಾತ್ರಿ ಹೊತ್ತು ಗದ್ದೆಯ ಬಯಲಿನ ಗುಡಿಸಲುಗಳ ಮುಂದೆ ಕುಳಿತು, ಕುಣಿದು ದುಡಿ ಬಾರಿಸಲು ಪ್ರಾರಂಭಿಸಿದರೆ ಶ್ರೋತೃಗಳಿಗೆ ಅನಿರ್ವಚನೀಯವಾದ ಆನಂದದ ಅನುಭವ ಸಿಗುತ್ತದೆ. ದುಡಿ ಡಮರುಗವನ್ನೇ ಹೋಲುವ ವಾದ್ಯ. ಅದಕ್ಕಿಂತ ಉದ್ದದಲ್ಲಿ ಸ್ವಲ್ಪ ದೊಡ್ಡದು. ಹಲಸು ಮುಂತಾದ ಮರವನ್ನು ಕೊರೆದು ಮಾಡಿದ ಕಳಸದ ಬಲಬಾಯಿಗೆ ದನದ ಚರ್ಮ, ಎಡಬಾಯಿಗೆ ಆಡಿನ ಚರ್ಮವನ್ನು ಚರ್ಮದ ಬಾರುಗಳಿಂದಲೇ ಬಿಗಿದಿರುತ್ತಾರೆ. ಎರಡೂ ಬದಿಯ ಬಾಯಿಗಳು ಅಗಲವಾಗಿರುತ್ತವೆ. ಬಡಿಯುವ ಜಾಗಕ್ಕೆ ದುಡಿಯ ಕರಣೆಯೆಂದು ಕರೆಯುತ್ತಾರೆ. ನಾದವೈಖರಿಗೆ ತಕ್ಕಂತೆ ದುಡಿಯ ಸುತ್ತ ಬಾರನ್ನು ಬಿಗಿಗೊಳಿಸುವದು ಸಡಿಲಿಸುವದು ಮಾಡುತ್ತಾರೆ. ದುಡಿಯ ವಾದನಕಾರ ಈ ಕಲೆಗೆ ತನ್ನನ್ನು ಅರ್ಪಿಸಿಕೊಂಡಿರುತ್ತಾನೆ. ಬಡಿಯುವಾಗ ಬಾಹ್ಯ ಪ್ರಪಂಚದ ಎಲ್ಲ ವ್ಯವಹಾರಗಳನ್ನು ಮರೆತಿರುತ್ತಾನೆ. ದುಡಿ ಬಾರಿಸುವ ಕಲಾವಿದನು ಅದನ್ನು ಸೊಂಟಕ್ಕೆ ಕಟ್ಟಿಕೊಂಡು ಇಲ್ಲವೆ ಕೊರಳಿಗೆ ಹಾಕಿಕೊಂಡು ಒಂದು ಕೈಯಲ್ಲಿ ಹಿಡಿದು ಮತ್ತೊಂದು ಕೈಯಿಂದ ಬಡಿಯುತ್ತಾನೆ. ಬಡಿತದಲ್ಲಿ ಅನೇಕ ಗತ್ತುಗಳಿವೆ. ಸೂಕ್ಷ್ಮವಾಗಿ ಗಮನಿಸಿದರೆ ಆ ಗತ್ತುಗಳ ವೈವಿಧ್ಯತೆ ಅರ್ಥವಾಗಬಹುದು. ಹಾಡಿನ ದನಿ ಮಂದ್ರದಿಂದ ತಾರಕಕ್ಕೆ ಹೋಗುವಂತೆ ದುಡಿಯ ಧನಿಯಲ್ಲೂ ಇಂಥ ಬೆಡಗಿದೆ. ಅದು ವಾದನಕಾರನ ಕುಶಲತೆಯನ್ನು ಅವಲಂಬಿಸಿದೆ.
 
 
 
ಕರಡಿ :
 
 
 
ಉತ್ತರ ಕರ್ನಾಟಕದಲ್ಲಿ ‘ಕರಡಿಮಜಲು’ ಎಂದೇ ಕರೆಯಿಸಿಕೊಂಡಿರುವ ಈ ವಾದ್ಯದ ವಾದನದ ಕಲೆ ತುಂಬಾ ಜನಪ್ರಿಯವಾದುದು. ಇದನ್ನು ದಕ್ಷಿಣ ಕರ್ನಾಟಕದಲ್ಲಿ ಕರಡಿಮೇಳ ಎಂದು ಕರೆಯುತ್ತಾರೆ. ಜಾತ್ರೆ ಉತ್ಸವಗಳಲ್ಲಿ ಧರ್ಮಗುರುಗಳನ್ನು ಊರೊಳಗೆ ಬರಮಾಡಿಕೊಳ್ಳುವಲ್ಲಿ ಮದುವೆ ಮೆರವಣಿಗೆಯಲ್ಲಿ ಈ ವಾದ್ಯದ ಮಜಲು ನಡೆಯುತ್ತದೆ. ಕರಡಿವಾದ್ಯ ಇತರ ಪಕ್ಕವಾದ್ಯಗಳ ಸಹಕಾರದಿಂದ ವಿಜೃಂಭಿಸುತ್ತದೆ. ೮ ಅಂಗುಲ ವ್ಯಾಸವುಳ್ಳ ೨೪ ಅಂಗುಲ ಉದ್ದವಿರುವ ಮರದ ಪಡಗಕ್ಕೆ ಆಡಿನ ಇಲ್ಲವೆ ಚಿಗರೆಯ ಚರ್ಮವನ್ನು ಎರಡೂ ಬಾಯಿಗೂ ಅಳವಡಿಸುತ್ತಾರೆ. ನಯವಾದ ಎರಡು ಗುಣಿಗಳಿಂದ ಒಳ್ಳೇ ಗತ್ತಿನಿಂದ ಬಾರಿಸುತ್ತಾರೆ. ಇದನ್ನು ಸೊಂಟಕ್ಕೆ ಇಲ್ಲವೆ ಕುತ್ತಿಗೆಗೆ ತೂಗು ಹಾಕಿಕೊಂಡಿರುತ್ತಾರೆ. ಬಡಿತದಲ್ಲಿ ಆದಿತಾಳ, ಏಕತಾಳ, ಝಂಪತಾಳ ಚೌತಾಳ ಚಾಲು ಮುಂತಾಗಿ ಬಾರಿಸುವದು ಮಿಶ್ರತಾಳ ಮುಂತಾದ ತಾಳಗಳನ್ನು ಹೆಸರಿಸುತ್ತಾರೆ.
 
 
 
ನಿಧಾನವಾಗಿ ಪ್ರಾರಂಭವಾದ ಕರಡಿಮಜಲಿನ ಗತ್ತು ಗತಿಗಳು ಹಂತ-ಹಂತವಾಗಿ ಏರಿ ಕ್ರಮೇಣ ಅದೇ ಗತಿಯಲ್ಲಿ ನಿಧಾನವಾಗಿ ಮುಕ್ತಾಯವಾಗುತ್ತವೆ. ‘ಕರಡಿವಾದ್ಯವು ಗುಡುಗುಡುತ್ತ ಸಾಗಿದಂಗೆ ಹಿಂಡುವ ದನಗಳು ತೊರವು ಬಿಡುವುದನ್ನು ಕಂಡಿದ್ದೇವೆ’ ಎಂಬುದಾಗಿ ಒಂದು ಕಡೆ ಶ್ರೀ ಸಿಂಪಿಲಿಂಗಣ್ಣನವರು ನೆನೆಸಿಕೊಂಡಿದ್ದಾರೆ. (ಆ ಕರಡಿ ವಾದಕನ ಹೆಸರು ಚಡಚಣದ ಸಿದರಾಯ ಎಂದು) ಶೃತಿಕಷ್ಟ ಸಂಧಿಯ ವಿಷಯವಾಗಿ ಈ ವಾದ್ಯದ ಧ್ವನಿಯನ್ನು ಕೇಶಿರಾಜನು ಹೆಸರಿಸುತ್ತಾನೆ. ಶಾಸನಗಳಲ್ಲಿ ಭೂಮಿದಾನದಲ್ಲಿ “ಕರಡಿಮಾನ್ಯದ ಹೊಲ” ಎಂಬ ಪ್ರಸ್ತಾಪ ಬರುತ್ತದೆ. ಕರಡಿ ಮೇಳಕ್ಕೆ ಕೊಟ್ಟ ಹೊಲ ಎಂಬ ಮಾತು ಶಾಸನಗಳಲ್ಲಿ ಬರುವದರಿಂದ ಇದರ ಪ್ರಾಮುಖ್ಯತೆಯ ಅರಿವು ನಮಗಾಗದೇ ಇರದು.
 
 
 
ಮದ್ದಳೆ :
 
 
 
ಜನಪದ ಆಟಗಳಾದ ಯಕ್ಷಗಾನ ದೊಡ್ಡಾಟಗಳಲ್ಲಿ ಈ ವಾದ್ಯಕ್ಕೆ ಅತ್ಯಂತ ಪ್ರಾಧಾನ್ಯತೆ ಇದೆ. ಕನ್ನಡದ ಪ್ರಾಚೀನ ಕಾವ್ಯಗಳಲ್ಲಿಯೂ ಮದ್ದಳೆಯ ಪ್ರಸ್ತಾಪವಿರುತ್ತದೆ. ಅಲ್ಲಮಪ್ರಭು ಮದ್ದಳೆಯನ್ನು ನುಡಿಸುತ್ತ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಮಾಯೆಯನ್ನು ಕುಣಿಸಿದ ಉಲ್ಲೇಖ ಪ್ರಭುಲಿಂಗ ಲೀಲೆಯಲ್ಲಿದೆ. “ಭರತೇಶ ವೈಭವ”ದಲ್ಲಿಯೂ ತೆರೆಯ ಮುಂಗಡೆಯೊಳು ನಿಂದು ಮದ್ದಳಿಗರು ಭರತಚಕ್ರಿಗೆ ಕೈ ಮುಗಿದು ಏರಿಕಟ ತದಿಕಟ ರಿಕ್ಕಾರಿಕ್ಕಟ, ದಿಮಿ ದಿರುದಿಮಿಕೆಂದು ಕೇಳಿಸಿದ….ಎಂಬ ಮಾತು ಬರುತ್ತದೆ. ‘ಮದ್ದಳೆಕಾರ'; ‘ಮದ್ದಳೆಯ ಕಲ್ಲಯ’ ಎಂದು ಮುಂತಾದ ಪದಪ್ರಯೋಗಗಳು ಶಾಸನದಲ್ಲೂ ಉಂಟು. ಹೀಗಾಗಿ ಈ ವಾದ್ಯ ಜನಪದ ಆಟಗಳಲ್ಲಿಯೂ ಮಾರ್ಗ ಕೃತಿಗಳಲ್ಲಿಯೂ ಉಪಯೋಗವಾಗಿದೆ. ಮದ್ದಳೆಯು ಮೃದಂಗದ ಮತ್ತೊಂದು ರೂಪವೆಂದರೂ, ಇದು ಮೃದಂಗಕ್ಕಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದು. ಕೇರಳದ ಕಥಕ್ಕಳಿ ನೃತ್ಯದಲ್ಲಿ ಕೆಲವು ದೇವಾಲಯಗಳಲ್ಲಿ ಪೂಜಾ ಸಮಯಕ್ಕೆ ಈ ವಾದ್ಯವನ್ನು ನುಡಿಸುವ ರೂಢಿಯಿದೆ.
 
 
 
ಹಲಗೆ :
 
 
 
ಹಲಗೆಗಳಲ್ಲಿ ಹಲವು ಪ್ರಕಾರಗಳಿವೆ. ಚಿಟ್ಟಹಲಗೆ, ರಣಹಲಗೆ, ಜಗ್ಗಲಗೆ, ಕಣಿಹಲಗೆ. ತಮಟೆ, ಪರೆ, ಸಂಪರದಾನಿ ಎಂದು ಮುಂತಾಗಿ ಕರೆಯುತ್ತಾರೆ. ‘ಹಲಗೆಯಿಲ್ಲದ ಊರಿಲ್ಲ ಒಲೆಯಿಲ್ಲದ ಓಣಿಯಿಲ್ಲ’ ಎಂಬ ಗಾದೆ ಇದೆ. ಗ್ರಾಮ ದೇವತೆಗಳ ಉತ್ಸವ ಜಾತ್ರೆ ವಿವಿಧ ಎತ್ತುಗಳ ಹಾಗೂ ವ್ಯಕ್ತಿಗಳ ಮೆರವಣಿಗೆ, ಮದುವೆ, ಮರಣ, ಡಂಗುರ ಮುಂತಾದ ಪ್ರಚಾರ ಮಾಧ್ಯಮಕ್ಕಾಗಿ- ಹೀಗೆ ವಿವಿಧ ಸಂದರ್ಭಗಳಲ್ಲಿ ಪ್ರಾದೇಶಿಕ ಭಿನ್ನತೆಯೊಂದಿಗೆ ಈ ವಾದ್ಯ ಉಪಯೋಗ ಬೀಳುತ್ತದೆ. ಪೋತರಾಜನಿಗಂತೂ ಇದು ವೃತ್ತಿವಾದ್ಯವಾಗಿದೆ. ಹಲಗೆ ಬಾರಿಸುವ ಮತ್ತು ತಯಾರಿಸುವ ಕಸುಬು ಹೊಲೆಮಾದಿಗರಲ್ಲಿದೆ. ಈ ವಾದ್ಯದ ರಚನೆ ಸರಳವಾಗಿದೆ. ವೃತ್ತಾಕಾರವಾಗಿ ಸಿದ್ಧಗೊಳಿಸಿದ ಒಂದು ಮರದ ಬಳೆ ; ವ್ಯಾಸ ಸು. 1½  2½  3 1/3 ಅಡಿ ಹೀಗೆ ವಿವಿಧ ಪ್ರಮಾಣದ್ದಾಗಿರುತ್ತದೆ. ಬಳೆಗೆ ಚೆನ್ನಾಗಿ ಹದಗೊಳಿಸಿದ ಕೋಣನ ಚರ್ಮವನ್ನು ಬಿಗಿದು ಕಟ್ಟಿರುತ್ತಾರೆ. ಕಟ್ಟಲು ಚರ್ಮದ ದಾರಗಳನ್ನು ಬಳಸುತ್ತಾರೆ. ಹಲಗೆ ಚರ್ಮವನ್ನು ಮೊದಲು ಸುಣ್ಣದಲ್ಲಿ ಇಟ್ಟಿರುತ್ತಾರೆ. ಅದು ಸುಣ್ಣ ಮೇದಷ್ಟು ಧ್ವನಿ ‘ತಾರ’ ಬರುತ್ತದೆಂದು ಹೇಳುತ್ತಾರೆ. ಹೆಗಲಿಗೆ ತೂಗುಹಾಕಲು ಅನೂಕೂಲವಾಗುವಂತೆ ಹೆಗಲುಪಟ್ಟಿ ಜೋಡಿಸಿ ಬಾರಿಸಲು ಒಂದು ಕಟಿಗೆ ಗುಣಿಯನ್ನು, ಇನ್ನೊಂದು ತಿಳುವಾದ ಕಡ್ಡಿಯನ್ನು ಉಪಯೋಗಿಸುತ್ತಾರೆ. ಏರು ಧ್ವನಿ ಬರುವಂತೆ ಹಲಗೆಯನ್ನು ಬಿಸಿಲು ಇಲ್ಲವೆ ಬೆಂಕಿಯಲ್ಲಿ ಕಾಯಿಸಿ ಕಣ ಕಣ ನಾದ ಹೊರಡಿಸುತ್ತಾರೆ. ಹಲಗೆಯ ಬಡಿದಲ್ಲಿ ನಾನಾ ರೀತಿಗಳಿವೆ. ಇದೊಂದು ವಿಶಿಷ್ಟ ಕಲೆಯಾಗಿಯೇ ಗ್ರಾಮಗಳಲ್ಲಿ ಬೆಳೆದಿದೆ. ವಿವಿಧ ಬಗೆಯ ಧ್ವನಿಗಳನ್ನು ಹಲಗೆಯಲ್ಲಿಯೇ ಬಡಿ 
 
  
 
=ಹೆಚ್ಚುವರಿ ಸಂಪನ್ಮೂಲ=
 
=ಹೆಚ್ಚುವರಿ ಸಂಪನ್ಮೂಲ=
೧೮೩ ನೇ ಸಾಲು: ೧೩೮ ನೇ ಸಾಲು:
 
#
 
#
 
{| class="wikitable"
 
{| class="wikitable"
!{{Youtube|iv__LWOhMfA}} ಕಂಸಾಳೆ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ
+
!{{Youtube|ZGja0OT0Jlk}} ವೀರಗಾಸೆ
!
+
!{{Youtube|iv__LWOhMfA}} ಕಂಸಾಳೆ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ
{{Youtube|jeOq98qcczM&nohtml5}} ನಂದಿ ಕುಣಿತ
+
!{{Youtube| TiBpqD9NSLs}}
![ {{Youtube|ZGja0OT0Jlk}} ವೀರಗಾಸೆ
 
 
|}
 
|}
{{Youtube|MzojtRNzSa8&nohtml5}}  
+
{{Youtube|ApcyPbN2YsE}}ಯಕ್ಷಗಾನ
{{Youtube|jeOq98qcczM&nohtml}}  
+
{{Youtube|w3rptxHOI7c}}
{{Youtube| TiBpqD9NSLs}}
+
ನಂದಿ ಕುಣಿತ
 
+
{{Youtube|5FCDUJVjCk4}}ಬುಡುಬುಡಿಕೆ
 
=ಸಾರಾಂಶ=
 
=ಸಾರಾಂಶ=
 
==ಪರಿಕಲ್ಪನೆ ೧ ==
 
==ಪರಿಕಲ್ಪನೆ ೧ ==
೨೨೦ ನೇ ಸಾಲು: ೧೭೪ ನೇ ಸಾಲು:
 
# ಜಾನಪದ ಕಲೆಗಳು ಉಳಿಸುವದು ಅವಶ್ಯಕವೆ ?
 
# ಜಾನಪದ ಕಲೆಗಳು ಉಳಿಸುವದು ಅವಶ್ಯಕವೆ ?
 
# ಜಾನಪದ ಕಲೆ ಉಳಿಸಲು ಏನು ಮಾಡಬೇಕು?
 
# ಜಾನಪದ ಕಲೆ ಉಳಿಸಲು ಏನು ಮಾಡಬೇಕು?
# ಜಾನಪದ ಕಲೆಗಳಿಂದ ಕಲಿಯುವ ಪಾಠವೇನು ?
+
# ಜಾನಪದ ಕಲೆಗಳಿಂದ ಕಲಿಯುವ ಪಾಠವೇನು ?  
  
 
=ಭಾಷಾ ಚಟುವಟಿಕೆಗಳು/ ಯೋಜನೆಗಳು=
 
=ಭಾಷಾ ಚಟುವಟಿಕೆಗಳು/ ಯೋಜನೆಗಳು=
 
=ಪಠ್ಯ ಬಗ್ಗೆ ಹಿಮ್ಮಾಹಿತಿ=
 
=ಪಠ್ಯ ಬಗ್ಗೆ ಹಿಮ್ಮಾಹಿತಿ=
  
[[ವರ್ಗ:ಗದ್ಯ]]
+
[[ವರ್ಗ:ಜನಪದ ಕಲೆಗಳ ವೈಭವ]]
[[ವರ್ಗ:೯ನೇ ತರಗತಿ]]
 

೦೮:೧೨, ೨೭ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ.

ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ.

ಕಲಿಕೋದ್ದೇಶಗಳು

ಪಾಠದ ಉದ್ದೇಶ

  1. ಗ್ರಾಮೀಣ ಆಚರಣೆಗಳ ಪರಿಚಯ ಮತ್ತು ಅದರ ಮಹತ್ವವನ್ನು ತಿಳಿಯುವುದು
  2. ಜಾನಪದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅರ್ಥೈಸುವುದು
  3. ವೈವಿಧ್ಯಮಯ ಆಚರಣೆಗಳ ಹಿನ್ನಲೆ ಮತ್ತು ಪ್ರಸ್ತುತ ಸ್ಥಿತಿಯನ್ನು ತಿಳಿಯುವುದು

ಭಾಷಾ ಕಲಿಕಾ ಗುರಿಗಳು

  1. ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಜಾನಪದ ಆಚರಣೆಯ ಮಹತ್ವವನ್ನು ತಿಳಿಯುವುದು
  2. ಗ್ರಾಮೀಣ ಪದಗಳಿಗೆ ಅಥವ ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಅರ್ಥವನ್ನು ತಿಳಿಯುವುದು
  3. ತಮ್ಮ ಊರಿನ ವಿಶೇಷ ಆಚರಣೆಯನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
  4. ಗ್ರಾಮೀಣ ಸಂಪ್ರದಾಯಗಳನ್ನು ತಿಳಿಯುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
  5. ಗ್ರಾಮೀಣ ಸಂಪ್ರದಾಯದ ವರದಿಯ ರೂಪದಲ್ಲಿ ಲೇಖನವನ್ನು ಮರುಸೃಷ್ಟಿಸುವುದು

ಕವಿ ಪರಿಚಯ

ಶಿಕ್ಷಕರಿಗೆ ಟಿಪ್ಪಣಿ

ವೀರಗಾಸೆ

ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುವರು. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಈ ನೃತ್ಯ ಪ್ರಚಲಿತವಿದೆ. ತಾಳ, ಶ್ರುತಿ, ಚಮಾಳ (ಸಮ್ಮೇಳ ಸಂಬಾಳ), ಓಲಗ ಅಥವಾ ಮೌರಿ, ಕರಡೆವಾದ್ಯ- ಈ ಪಂಚವಾದ್ಯಗಳು ಇಲ್ಲಿ ಬಳಕೆಯಾಗುತ್ತವೆ. ಕರಡೆ - ಈ ಕುಣಿತದಲ್ಲಿ ಅನಿವಾರ್ಯ ವಾದ್ಯ ಎನಿಸಿದೆ.

ಪೌರಾಣಿಕ ಹಿನ್ನೆಲೆ

ಈ ಕಲೆಯ ಸೃಷ್ಟಿ ಹೇಗೆ ಬಂದಿತೆನ್ನುವುದಕ್ಕೆ ಜನಪದರ ಪೌರಾಣಿಕ ಕಥೆಯಿದೆ. ತಂದೆಯ ಮಾತನ್ನು ಮೀರಿ ಪಾರ್ವತಿ ಶಿವನನ್ನು ವರಿಸುತ್ತಾಳೆ. ಇದೇ ಕಾರಣವಾಗಿ ಪಾರ್ವತಿಯ ತಂದೆ ದಕ್ಷಬ್ರಹ್ಮ ಶಿವನನ್ನು ದ್ವೇಷಿಸತೊಡಗುತ್ತಾನೆ. ಹೀಗಿರುವಾಗ ದಕ್ಷಬ್ರಹ್ಮ ಆಚರಿಸಿದ ಯಾಗಕ್ಕೆ ಶಿವನೊಬ್ಬನನ್ನು ಹೊರತುಪಡಿಸಿ ಉಳಿದೆಲ್ಲ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ತನ್ನ ತಂದೆ ಉದ್ದೇಶಪೂರ್ವಕವಾಗಿ ಗಂಡನನ್ನು ಅವಮಾನಿಸಿದ್ದಾನೆಂದು ಭಾವಿಸಿದ ಪಾರ್ವತಿ ಉಗ್ರಳಾಗುವಳು. ನ್ಯಾಯ ಕೇಳುವ ಸಲುವಾಗಿ ಗಂಡನ ತಡೆಯನ್ನು ಉಲ್ಲಂಘಿಸಿ ತಂದೆಯ ಬಳಿಗೆ ಬರುತ್ತಾಳೆ. ಅಳಿಯನ ಮೇಲಿನ ಕೋಪದಿಂದ ಮಗಳೆಂಬ ಮಮತೆಯನ್ನೂ ತೊರೆದು ದಕ್ಷಬ್ರಹ್ಮ ಪಾರ್ವತಿಯನ್ನು ತಿರಸ್ಕಾರದಿಂದ ನಡೆಸಿಕೊಂಡದ್ದಲ್ಲದೆ ಅವಳೆದುರಿಗೆ ಶಿವನನ್ನು ನಿಂದಿಸುತ್ತಾನೆ; ಪತಿನಿಂದೆಯನ್ನು ಸಹಿಸಲಾಗದ ಪಾರ್ವತಿ ಅಗ್ನಿಕುಂಡದಲ್ಲಿ ಬಿದ್ದು ಪ್ರಾಣಾರ್ಪಣೆ ಮಾಡಿಕೊಳ್ಳುತ್ತಾಳೆ. ಈ ದುರ್ಘಟನೆಯಿಂದ ಕುಪಿತನಾದ ಶಿವ ಉಗ್ರನಾಗಿ ತಾಂಡವ ನೃತ್ಯದಲ್ಲಿ ತೊಡಗುತ್ತಾನೆ. ಕೋಪದಿಂದ ಹಣೆಯ ಬೆವರನ್ನು ಬೆರಳುಗಳಿಂದ ಬಾಚಿ ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದ ವೀರಭದ್ರನ ಅವತಾರವಾಗುತ್ತದೆ. ಮುಂದೆ ವೀರಭದ್ರ ದಕ್ಷಬ್ರಹ್ಮನ ಯಾಗಶಾಲೆಗೆ ಬಂದು ಅದನ್ನು ಹಾಳುಗೈಯುತ್ತಾನೆ. ಹೀಗೆ ವೀರಭದ್ರ ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಕುಣಿತ ಎಂದೂ ಅಂದಿನಿಂದ ಈ ಕಲೆ ಬೆಳೆದುಬಂದಿತೆಂದೂ ಕಲಾವಿದರ ಹೇಳಿಕೆ.

ಮಹಿಳಾ ವೀರಗಾಸೆ

ಆಚರಣೆ

ಸಾಮಾನ್ಯವಾಗಿ ಜಾತ್ರೆ ದೇವರ ಮೆರವಣಿಗೆ, ಹಬ್ಬ, ಹುಣ್ಣೆಮೆ, ವೀರಶೈವರ ಮದುವೆ, ಗೃಹ ಪ್ರವೇಶ ಮೊದಲಾದ ಸಂದರ್ಭಗಳಲ್ಲಿ ವೀರಗಾಸೆ ನಡೆಯುತ್ತದೆ.ವೀರಶೈವರಲ್ಲಿ ವೀರಭದ್ರನನ್ನು ಮನೆ ದೇವರಾಗಿ ನಂಬುವವರು ವೀರಗಾಸೆ ಮಾಡಿದಾಗ ಅದನ್ನು 'ಆಡಣಿ' ಎಂದು ಕರೆಯಲಾಗುತ್ತದೆ.ಇದು ಒಂದು ರೀತಿಯ ವೈಶಿಷ್ಠ್ಯ ಪೂರ್ಣವಾದ ಆಚರಣೆಯೇ ಆಗಿರುತ್ತದೆ. ಸಾಮಾನ್ಯವಾಗಿ ವೀರಭದ್ರ ದೇವರ ಒಕ್ಕಲಿನವರು ತಮ್ಮ ಹಿರಿಯ ಮಗನ ಮದುವೆಯಲ್ಲಿ ಮಾತ್ರ ವೀರಗಾಸೆಯನ್ನು ಮಾಡುತ್ತಾರೆ. ಆ ದಿವಸ ಐದು ಜನ ಮುತ್ತೈದೆಯರು ಮತ್ತು ಐದು ಜನ ಗಂಡು ಮಕ್ಕಳು ಉಪವಾಸವಿರುತ್ತಾರೆ. ಆ ದಿವಸ ಐದು ಜನ ಹೆಣ್ಣು ಮಕ್ಕಳಿಗೆ ಮತ್ತು ಗಂಡಸರಿಗೆ ಶಸ್ತ್ರ ಹಾಕುತ್ತಾರೆ. ಇದರ ಮೇಲೆ ಮದುಮಗ ಹಾಗೂ ಮುತ್ತೈದೆಯರು ಕೊಂಬಿ ದೇವರನ್ನು ತೆಗೆದುಕೊಂಡು ನಡೆಯುತ್ತಿರುತ್ತಾರೆ. ಹಾಗೆ ಹೋಗುವಾಗ ವೀರಭದ್ರ ದೇವರ ಹಾಗೂ ಹಲವು ದೇವರುಗಳ ಒಡಬುಗಳನ್ನು ಹೇಳುತ್ತಾರೆ. ದೇವಸ್ಥಾನ ಮುಂಬಾಗದಲ್ಲಿ ಒಂದು ಅಡಿ ಆಳ. ಒಂದು ಅಡಿ ಉದ್ದ ಹಾಗೂ ಎರಡು ಅಡಿ ಅಗಲದ ಗುಂಡಿಯನ್ನು ತೆಗೆದು ಅತ್ತಿ, ಆಲ, ಶ್ರೀಗಂಧ ಮರದ (ಪ್ರಸ್ತುತದಲ್ಲಿ ಗಂಧದ ಮರ ಇರುವುದಿಲ್ಲ) ಹತ್ತು ಹೊರೆ ಕಟ್ಟಿಗೆಗಳನ್ನು ಗುಂಡಿಗೆ ಹಾಕಿ ವೀರಗಾಸೆಯವರಿಂದ ಬೆಂಕಿಯನ್ನು ಹಚ್ಚಿಸುತ್ತಾರೆ, ಈ ಯಜ್ಞಕುಂಡದಲ್ಲಿ ಹಾಲುಕ್ಕಿಸಿ ಎಡೆಕೊಡುತ್ತಾರೆ. ಸ್ವಾಮಿಗಳು, ಪುರವಂತರು, ಮದುಮಕ್ಕಳು, ಮುತ್ತೈದೆಯರು ಯಜ್ಞಕುಂಡವನ್ನು ಹಾಯ‍್ದು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಕೊಂಬಿ ದೇವರು ಈ ಆಚರಣೆಯಲ್ಲಿ ಬಹುಮುಖ್ಯವಾದುದು.

ವೀರಗಾಸೆ

ವೇಷಭೂಷಣ

ವೀರಗಾಸೆ ಕುಣಿತದವರ ವೇಷ ಭೂಷಣಗಳು ಕಾಲಕಾಲಕ್ಕೆ ಬದಲಾಗುತ್ತಾ ಬಂದಿವೆ, ಕನಿಷ್ಠ ಎಂಟು ಅಥವಾ ಅದಕ್ಕೆ ಮೇಲ್ಪಟ್ಟ ಸಮ ಸಂಖ್ಯೆಯ ಕಲಾವಿದರು ತಲೆಗೆ ಪೇಟ, ಕಿವಿಗೆ ಕಡಕು,ಹಣೆಗೆ ವಿಭೂತಿ, ಕೊರಳಿಗೆ ರುದ್ರಾಕ್ಷಿ ಹಾಗೂ ನಾಗಾಭರಣ, ಎದೆಗೆ ವೀರಭದ್ರ ಸ್ವಾಮಿಯ ಹಲಗೆ, ಸೊಂಟಕ್ಕೆ ದಕ್ಷಬ್ರಹ್ಮನ ಶಿರ ಕಟ್ಟಿಕೊಳ್ಳುತ್ತಾರೆ. ಕೈಯಲ್ಲಿ ಕತ್ತಿ, ಕಾಲಿಗೆ ಕಡಗ ಮತ್ತು ಗೆಜ್ಜೆ ಮೈಗೆ ಕಾವಿ ಜುಬ್ಬ ಮತ್ತು ಕಾವಿಯ ಕಾಸೆಗಳಿರುತ್ತವೆ. ವೀರಶೈವರಿಗೆ ಮಾತ್ರ ವಿಶಿಷ್ಟವಾದ ಈ ಕಲೆ ಅವರ ವೇಷಭೂಷಣದಿಂದಲೇ ಈ ಹೆಸರು ಪಡೆದುಕೊಂಡಿದೇ ಎನಿಸುತ್ತದೆ. (ವೀರ+ಕಾಸೆ=ವೀರಗಾಸೆಯಾಗಿರುತ್ತದೆ) ಕಾಸೆ ಕಟ್ಟಿದವರೇ ಈ ಕಲೆಯ ಪ್ರಮುಖ ಕಲಾವಿದರು. ವೀರಗಚ್ಚೆಯೇ, ವೀರಕಾಸೆಯಾಗಿ ನಂತರ ವೀರಗಾಸೆಯಾಗಿರಬಹುದು ಎಂಬ ಅಭಿಪ್ರಾಯವೂ ಇದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಂಡುಬರುವ ಈ ವೀರಗಾಸೆಯ ವೇಷಭೂಷಣಗಳು ಪ್ರಾದೇಶಿಕತೆಗೆ ತಕ್ಕಂತೆ ಕೆಲವು ವ್ಯತ್ಯಾಸಗಳನ್ನು ಪಡೆದುಕೊಂಡಿವೆ. ಹಲವು ಕಡೆ ತಲೆಗೆ ಕೂದಲು ಮತ್ತು ರೇಷ್ಮೆದಾರದಿಂದ ತಯಾರಿಸಿದ ಚೌಲಿಯನ್ನು ಧರಿಸಲಾಗುತ್ತದೆ. ಕಾವಿ ಬಣ್ಣದ ಗರಿ ಅಂಚಿನ ಪೇಟವನ್ನು ತಲೆಗೆ ಸುತ್ತಿ, ಅದರ ಮುಂಭಾಗಕ್ಕೆ ಜಯ ಪಟ್ಟಿಯನ್ನು ಕಟ್ಟುತ್ತಾರೆ. ಸೊಂಟಕ್ಕೆ ಕಸೂತಿಗಳಿಂದ ಕೂಡಿದ ಕೆಂಪು ಬಣ್ಣದ ಜೊಲುಗಳಿದ್ದು, ಸೊಂಟದ ಎರಡು ಕಡೆ ಕಪ್ಪು ಬಣ್ಣದ ಚವರಿ ಕುಚ್ಚುಗಳಿರುತ್ತವೆ. ಸೊಂಟಕ್ಕೆ ಬಿಳಿ ಪಂಚೆಯನ್ನು ವೀರಗಚ್ಚೆಯಾಗಿ ತೊಡುತ್ತಾರೆ. ಕೆಂಪು ಬಣ್ಣದ ಪೈಜಾಮ, ಕಾಲಿಗೆ ಗೆಜ್ಜೆ, ಬಲಗೈಯಲ್ಲಿ ಮರದ ಖಡ್ಗ, ಕೊರಳಲ್ಲಿ ಬೆಳ್ಳಿಯ ಲಿಂಗದಕಾಯಿ (ಅಡ್ಗಾಯಿ) ಎಡಗೈಯಲ್ಲಿ ಕರವಸ್ತ್ರಗಳಿರುತ್ತವೆ. ಹಾಗೆಯೇ ಕೆಲವರ ಕೈಯಲ್ಲಿ ತ್ರಿಶೂಲಾಕಾರದ ಶಸ್ತ್ರಗಳಿರುವುದು ಉಂಟು. ಸಮಾಳೆ, ಮುಖವೀಣೆ, ಕಂಚಿನ ತಾಳಗಳು ಈ ಕಲೆಗೆ ಬೇಕಾದ ಮುಖ್ಯ ವಾದ್ಯ ಪರಿಕರಗಳು, ಕಾಸೆ ಕಟ್ಟುವವರು, ಎದೆಯ ಮೇಲೆ ಲಿಂಗಧಾರಣೆ ಮಾಡಬೇಕು. ಹೀಗೆ ವೇಷ-ಭೂಷಣವನ್ನು ಕಲಾವಿದರು ಧರಿಸಿಕೊಂಡು ಸಾಮೂಹಿಕ ನೃತ್ಯವನ್ನು ಅಟ್ಟಹಾಸದಲ್ಲಿ ಕೊಡಬಲ್ಲರು, ಹೀಗಾಗಿ ಈ ಕಲೆಯನ್ನು ಜನರು ಇದೊಂದು ಗಂಡು ಕಲೆ ಎಂದು ಗುರುತಿಸಿರುವರು. ಇತ್ತೀಚಿನ ದಿನಗಳಲ್ಲಿ ರಾಜ್ಯದ ಹೆಣ್ಣುಮಕ್ಕಳೂ ಈ ಕಲೆಯನ್ನು ಕರಗತಮಾಡಿಕೊಂಡು ಪ್ರದರ್ಶನ ನೀಡುವಲ್ಲಿ ಯಶಸ್ಸನ್ನು ಸಾಧಿಸಿರುವರು.

ವೀರಗಾಸೆಯ ಒಂದು ದೃಶ್ಯ

ಪ್ರದರ್ಶನ

ವೀರಗಾಸೆಯ ಪ್ರಕಾರದಲ್ಲಿ ಹಿರಿಯ ಕಲಾವಿದರು ಗಂಡಕ್ಷರಗಳಿಂದ ಕೂಡಿದ ಕನ್ನಡದ ಗದ್ಯ ಸಾಹಿತ್ಯದ ನುಡಿಗಟ್ಟನ್ನು ಆವೇಶಭರಿತರಾಗಿ ನುಡಿಯುತ್ತಾರೆ, ಇಂತಹ ಆವೇಶಭರಿತ ನುಡಿಗಟ್ಟುಗಳನ್ನು 'ಒಡಪು' ಅಥವಾ 'ಒಡಬು' ಗಳೆಂದು ಕರೆಯಲಾಗಿದೆ. ಇಂತಹ ಒಡಪು ಅಥವಾ ಒಡಬು ಸಾಹಿತ್ಯ ಹೇಗಿರುತ್ತದೆ ಎಂದರೆ

ಉದಾಹರಣೆಗೆ:- ಉಲ್ಲಾಸಭರಿತರಾಗಿ ಕುಳಿತಿರುವ ಎಲ್ಲಾ ಜನಗಳು ಸುಲಲಿತವಾಗಿ ಗುಲ್ಲುಮಾಡದೆ ನೀವು ಕೇಳಿರಿ,

ಅಹಹ ರುದ್ರಾ ಅಹಹಾ ದೇವಾ....... ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ.

ಈ ಕುಣಿತದಲ್ಲಿ ವೀರಭದ್ರನ ವರ್ಣನೆಯೇ ಪ್ರಧಾನವಾಗಿರುತ್ತದೆ. ವೀರಭದ್ರ ಹುಟ್ಟಿದ ಸಂದರ್ಭದ

ಒಂದು ವರ್ಣನೆ ಹೀಗಿದೆ:

"ವೀರಭದ್ರದೇವರು ಹುಟ್ಟಿದ ರೂಪೆಂತೆಂದೊಡೆ, ಹುಟ್ಟಿದಾಗಲೆ ಹೂವಿನಗಾಸೆ, ಮಂಜುಳಗಾಸೆ, ಬ್ರಹ್ಮಗಾಸೆ, ವಿಷ್ಣುಗಾಸೆ, ರುದ್ರಗಾಸೆ, ಮೆಟ್ಟಿದ ಹೊನ್ನಾವಿಗೆ, ಸಾವಿರ ಶಿರ, ಮೂರು ಸಾವಿರ ನಯನ, ಎರಡು ಸಾವಿರ ಭುಜ, ಕೆಕ್ಕರಿಸಿದ ಕಣ್ಣು, ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರ ದೇವರು ಹೋಮದ ಕುಂಡದ ಬಳಿಗೆ ಹೇಗೆ ಬರುತ್ತಾರೆಂದರೆ .........."

ಇಂತಹ ಒಡಪು-ಒಡಬುಗಳನ್ನು ಹೇಳಿದ ಬಳಿಕ ಸಮ್ಮಾಳದ (ಚರ್ಮ ವಾದ್ಯದ) ಹಾಗೂ ಕರಡೆಯ (ಚರ್ಮ ವಾದ್ಯ) ನುಡಿತಗಳು ಕಲಾವಿದರ ಕುಣಿತಕ್ಕೆ ಸ್ಪೂರ್ತಿ ನೀಡುತ್ತವೆ. ನಾಲ್ಕೈದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಅನಂತರ ಯಾರಾದರೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋರ್ಗರೆತದೊಂದಿಗೆ ಮತ್ತೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಗತಿಯಿಂದ ಗತಿಗೆ ಕುಣಿತ, ಬಡಿತಗಳ ವೇಗ ಹೆಚ್ಚುತ್ತಾ ಹೋಗುತ್ತದೆ.

ಉಲ್ಲೇಖ:

  1. `ಸಂಪಾದಕರು: ಗೊ.ರು.ಚನ್ನಬಸಪ್ಪ, ಕರ್ನಾಟಕದ ಜನಪದ ಕಲೆಗಳು, ಕನ್ನಡ ಸಾಹಿತ್ಯಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು, ಪುಟ: ೭೭-೭೮.

ಕಂಸಾಳೆ :

ಬೀಸು ಕಂಸಾಳೆ

ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುತ್ತ ಒಂದು ವಿಶಿಷ್ಟ ಜಾನಪದ ಸಂಪ್ರದಾಯವನ್ನು ಬೆಳಸಿಕೊಂಡು ಬಂದಿದೆ ಕಂಸಾಳೆ ಪ್ರಾಕಾರ. ಕಂಸಾಳೆಯ ಕಲಾವಿದರು ಪ್ರಮುಖವಾಗಿ ಮೈಸೂರು ಜಿಲ್ಲೆಯ ಮಲೆ ಮಹದೇಶ್ವರನ ಭಕ್ತರು. ಮಂಡ್ಯ-ಬೆಂಗಳೂರು ಜಿಲ್ಲೆಗಳಲ್ಲೂ ವಿರಳವಾಗಿ ಕಾಣುತ್ತಾರೆ. ಜಾನಪದ ಸತ್ವವುಳ್ಳ ಕಥನಗೀತೆ, ಕಂಚಿನ ತಾಳಗಳ ವಿಶಿಷ್ಟವಾದ ಶಬ್ದ ಹಾಗೂ ಕಲಾವಿದರ ಕೈಚಳಕಗಳ ಸುಂದರ ಸಮ್ಮಿಳನದಿಂದಾಗಿ ಈ ಕಲೆ ವಿಸ್ಮಯಕಾರಕವಾಗಿ ಜನಮನವನ್ನು ತಣಿಸಿ ಶ್ರವಣಾನಂತವುಂಟುಮಾಡುತ್ತದೆ.

`ಕಂಸಾಳೆ’ ಎನ್ನುವುದು ಕಲಾವಿದರು ಕೈಯಲ್ಲಿ ಹಿಡಿಯುವ ಒಂದು ಬಗೆಯ ವಾದ್ಯ ವಿಶೇಷ. ಭಿಕ್ಷಾಪಾತ್ರೆಯಂತಿರುವ, ಮಧ್ಯೆ ದಾರದ ಕುಚ್ಚು ಕಟ್ಟಿದ, ಅಂಗೈ ಅಗಲದ ಮಿಶ್ರಲೋಹದ ಒಂದು ಬಟ್ಟಲು ಎಡಗೈಯಲ್ಲಿದ್ದರೆ, ಬಲಗೈಯಲ್ಲಿ ಮಟ್ಟಸವಾದ ತಾಳವಿರುತ್ತದೆ. ಮುಚ್ಚಳದ ನಡುವಿನ ಹೊರಭಾಗ ಉಬ್ಬಿರುತ್ತದೆ. ಆ ಉಬ್ಬಿನ ರಂಧ್ರದಿಂದ ಬಿಗಿದ ನೀಳವಾದ ದಾರ ಗೊಂಡೆಗಳಿಂದ ಅಲಂಕೃತವಾಗಿ ಬಲಗೈ ಮೇಲಿಂದ ಇಳಿಬಿದ್ದಿರುತ್ತದೆ.ಸಾಮಾನ್ಯವಾಗಿ ಕಂಸಾಳೆಯ ಮೇಳದಲ್ಲಿ ಮೂರು ಜನರಿರುತ್ತಾರೆ. ವೃತ್ತಿ ಗಾಯಕರಾದ ಕಂಸಾಳೆಯವರಿಗೆ ವಿಶೇಷವಾದ ವೇಷಭೂಷಣಗಳೇನೂ ಇರುವುದಿಲ್ಲ. ಸಾಧಾರಣವಾಗಿ ಅಂಗಿ, ಪಂಚೆ, ಹೆಗಲಲ್ಲಿ ಜೋಳಿಗೆ, ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ, ಇವರಲ್ಲಿ ಇಬ್ಬರು ಏಕತಾರಿ ಕಂಜರ ಹಿಡಿದು ಹಿಮ್ಮೇಳದವರಾಗುತ್ತಾರೆ. ಇನ್ನೊಬ್ಬ ಮುಮ್ಮೇಳದವನಾಗಿ ನಡುವೆ ಕಂಸಾಳೆ ಹಿಡಿದು ಕುಳಿತಿರುತ್ತಾನೆ. ಎಡಗೈ ಬಟ್ಟಲನ್ನು ಮೇಲುಮುಖವಾಗಿ ಅಂಗೈ ಮೇಲೆ ಇರಿಸಿಕೊಂಡು. ಬಲಗೈಯ ಮೇಲು ತಾಳವನ್ನು ಕುಟ್ಟುವುದರಿಂದ ಕಂಚಿನ ಕಣಿ ಕಣಿ ನಾದ ಉಂಟಾಗುತ್ತದೆ. ವಿವಿಧ ಧಾಟಿಯ ವಿವಿಧ ತಾಳದ ಹಾಡುಗಳಿಗೆ ಈ ನಾದ ಮಧುರ ಹಿನ್ನಲೆಯಾಗುತ್ತದೆ. ಹಬ್ಬ ಹರಿದಿನಗಳಲ್ಲಿ, ಶಿವರಾತ್ರಿ-ನವರಾತ್ರಿ ಕಾಲದಲ್ಲಿ ಮಹದೇಶ್ವರನ ಜಾತ್ರೆ ಸಂದರ್ಭದಲ್ಲಿ ಕೈಯಲ್ಲಿ ಕಂಸಾಳೆ ಹಿಡಿದು, ಮಾದಯ್ಯನ ಕೋಲ (ನಾಗಬೆತ್ತ)ನ್ನು ಕಂಕುಳಲ್ಲಿಟ್ಟು ಕೊಂಡು, ಬುತ್ತಿಯ ಗಂಟನ್ನು ತಲೆಯ ಮೇಲಿಟ್ಟುಕೊಂಡು, ಯಾತ್ರೆ ಹೊರಡುವುದು ಮೈಸೂರು ಜಿಲ್ಲೆಯಲ್ಲಿ ಸಾಮಾನ್ಯ ದೃಶ್ಯ. ಮಲೆಯ ಮಹದೇಶನ ಜಾತ್ರೆಯಲ್ಲಿ ಕಂಸಾಳೆಯ ಪ್ರದರ್ಶನ ಕೇಂದ್ರವಾಗುತ್ತದೆ ಆ ಪ್ರದೇಶ. ಬೆಳದಿಂಗಳ ರಾತ್ರಿಯಲ್ಲಿ ಕಂಸಾಳೆಯ ಕಲಾವಿದರ ಹಲವಾರು ಗುಂಪುಗಳು ಅಲ್ಲಿ ಮೇಳ ನಡೆಸುತ್ತವೆ;

“ಕೂಗೋ ಕೂಗು ಮಾದೇವನ,

ಕೂಗಿದರೆ ದುಂಡು ಮಾದೇವನ,

ಕೂಗಿದರೆ ಕುಣಿಯುತ್ತ, ಬರುವನ ಮಾದೇವನ,

ಕೂಗಯ್ಯ ಮುದ್ದು ಮಾದೇವನ”

ಎಂಬತಹ ಸೊಲ್ಲುಗಳ ಹಿನ್ನಲೆಯಲ್ಲಿ ಕಂಚಿನ ತಾಳದ ಶಬ್ದ ಕರ್ಣಾನಂದವನ್ನುಂಟುಮಾಡುತ್ತದೆ.

ಕಂಸಾಳೆಯ ಕಲಾವಿದರಲ್ಲಿ ಮಹದೇಶ್ವರನ ಹುಟ್ಟು, ಬಾಲ್ಯ, ಬಾಲಲೀಲೆ, ಯೌವನ, ವಿನೋದ, ವಿರಸ, ಮುಪ್ಪು, ಮಹಿಮೆಗಳು ಕಂಠಸ್ಥವಾಗಿ ನಿಂತಿವೆ. ಈ ಕಾವ್ಯವನ್ನು ಇಡೀ ರಾತ್ರಿ ಹಾಡಿ ತಣಿಸುವ ಅವರ ಕಲೆಗಾರಿಕೆ ಮೆಚ್ಚುವಂತಹುದು, ಇದಲ್ಲದೆ ಕಲಾವಿದರು ಪಿರಿಯಾಪಟ್ಟಣದ ಲಾವಣಿ, ಸಾರಂಗಧರ, ಚೆನ್ನಿಗರಾಮ, ಘನಪತಿರಾಯ, ಬಾಲನಾಗಮ್ಮ, ಅರ್ಜುನ ಜೋಗಿ ಮುಂತಾದ ಜನಪದ ಕಥಾ ಪ್ರಸಂಗಗಳನ್ನೂ ಹಾಡುತ್ತಾರೆ. ಜನಪದ ಬೆಳಸಿಕೊಂಡು ಬರುತ್ತಿರುವ ಇವರ ಕಲೆ ಜಾನಪದ ಕ್ಷೇತ್ರದ ದೊಡ್ಡ ನಿಧಿಗಳಲ್ಲೊಂದಾಗಿದೆ.

ಕಂಸಾಳೆಯ ಕಲಾಪ್ರಕಾರಗಳಲ್ಲಿ `ಬೀಸುಕಂಸಾಳೆ’ಯು ವಿಶಿಷ್ಟ ಶೈಲಿಯದು. ಚಮತ್ಕಾರ, ಶ್ರಮ ಎರಡೂ ಒಟ್ಟಿಗೆ ಸೇರಿ ಅಭಿವ್ಯಕ್ತವಾಗುವ ಈ ಪ್ರದರ್ಶನಕ್ಕೆ ನಾಲ್ಕು ಜನ ಬೇಕು, ಒಬ್ಬಾತ ಮಧ್ಯೆ ಇದ್ದು ತಾಳಕ್ಕೆ ತಕ್ಕಂತೆ ತಲೆಯ ಮೇಲೆ, ಬೆನ್ನ ಹಿಂದೆ, ಕಾಲು ಕೆಳಗೆ, ಕುಳಿತು, ನಿಂತು, ಬಾಗಿ ಬಳುಕಿ, ಉರುಳಾಡಿ, ಸುತ್ತ ನಿಂತ ಮೂವರಿಗೆ ತಾಳಗಳನ್ನು ಕೊಡುತ್ತ, ನಿರ್ದಿಷ್ಟ ಲಯದಲ್ಲಿ ಬೀಸು ಕಂಸಾಳೆಯನ್ನು ಪ್ರದರ್ಶಿಸುತ್ತಾನೆ. ಹೀಗೆ ಆರಂಭವಾದ ಪ್ರದರ್ಶನ ಪರಾಕಾಷ್ಠೆಗೆ ಹೋದಾಗ ನಾಲ್ಕು ಜೊತೆ ಕಂಸಾಳೆಗಳ ತಾಳದ ಕಂಚಿನ ಸ್ವರ, ಮಿಂಚಿನ ವೇಗದ ಕೈ ಚಳಕ ನೋಟಕರನ್ನು ಮೂಕವಿಸ್ಮಯರನ್ನಾಗಿ ಮಾಡುತ್ತದೆ. ಎಷ್ಟೇ ಚುರುಕಿನಿಂದ ಕಲೆ ನಡೆದರೂ ಎಲ್ಲೂ ತಾಳ ತಪ್ಪದಂತೆ ಎಚ್ಚರ ವಹಿಸುವ ಕಲಾವಿದರ ಪರಿಪೂರ್ಣ ಕುಶಲತೆ ನಿಜಕ್ಕೂ ಸೋಜಿಗ ಪಡುವಂಥದು. ಗಾಯಕರು `ಲಿಂಗ ಬಾ, ಮುದ್ದು ಲಿಂಗ ಬಾ, ನಮ್ಮ ಮುದ್ದು ಮಾದಯ್ಯನ ಲಿಂಗ ಬಾ’-ಎಂಬ ಹಾಡನ್ನು ಲಯಬದ್ಧವಾಗಿ ತಾಳದೊಂದಿಗೆ ಹೊಂದಿಸಿಕೊಂಡೇ ಹಾಡುತ್ತಾರೆ.

ಡೊಳ್ಳುಕುಣಿತವು ಶಕ್ತಶಾಲಿಗಳ ಕಲೆ. ಅಪಾರವಾದ ದೈಹಿಕಬಲ, ಪ್ರತಿಭೆ ಮತ್ತು ಪರಿಶ್ರಮಗಳನ್ನು ಬಯಸುವ ಕಲೆಯು, ಮೊದಲಿನಿಂದಲೂ ಗಂಡಸರಿಗೆ ಮೀಸಲಾಗಿತ್ತು. (ಈಚೆಗೆ ಕೆಲವು ಮಹಿಳೆಯರು ಧಾರ್ಮಿಕ ಆಚರಣೆಯೆನ್ನುವುದಕ್ಕಿಂತ ಹೆಚ್ಚಾಗಿ, ಆಕರ್ಷಕವಾದ ಕಲೆಯೆಂದು ಇದರಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಡೊಳ್ಳುಕುಣಿತವು ಕರ್ನಾಟಕದ ಅತ್ಯಂತ ಜನಪ್ರಿಯವೂ ಪ್ರಸಿದ್ಧವೂ ಆದ ಕಲೆಗಳಲ್ಲಿ ಒಂದು. ಡೊಳ್ಳುಕುಣಿತ ಮತ್ತು ಅದರ ಸಂಗಾತಿಕಲೆಗಳು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಆಚರಣೆಯಲ್ಲಿವೆ. ಬಿಜಾಪುರ, ಬಾಗಲಕೋಟೆ, ಬೆಳಗಾಂ, ರಾಯಚೂರು, ಬಳ್ಳಾರಿ, ಗುಲ್ಬರ್ಗ, ಶಿವಮೊಗ್ಗ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಈ ಕಲೆಗಾಗಿ ಹೆಸರುವಾಸಿಯಾಗಿವೆ. ಈ ಕಲೆಯನ್ನು ಸಾಂಪ್ರದಾಯಿಕವಾಗಿ ಕುರುಬರ ಸಮುದಾಯದೊಂದಿಗೆ ಗುರುತಿಸುತ್ತಾರೆ. ಆದರೆ, ಉಪ್ಪಾರರು ಮತ್ತು ಪರಿವಾರ ನಾಯಕರು ಕೂಡ ಇದರಲ್ಲಿ ಭಾಗವಹಿಸುತ್ತಾರೆ. (ಕಡಿಮೆ ಪ್ರಮಾಣದಲ್ಲಿ) ಡೊಳ್ಳುಕುಣಿತವು ನರ್ತನ, ಸಂಗೀತ ಮತ್ತು ಕುರುಬರ ಸಮುದಾಯ ಹಾಗೂ ಅವರ ದೇವರುಗಳಿಗೆ ಸಂಬಂಧಿಸಿದ ಕಥೆಗಳ ಹಾಡುವಿಕೆಗೆ ಮೀಸಲಾದ ಸಂಯೋಜಿತ ಕಲೆ. ಡೊಳ್ಳುಗಳನ್ನು ಬಡಿಯುವುದು ಇದರ ಮುಖ್ಯವಾದ ಭಾಗ.

ಹಳ್ಳಿಗಳಲ್ಲಿ ಹಬ್ಬಹರಿದಿನಗಳಲ್ಲಿ ಹಾಗೂ ವಾರ್ಷಿಕ ಜಾತ್ರೆಗಳಲ್ಲಿ ಡೊಳ್ಳುಕುಣಿತವನ್ನು ಪ್ರದರ್ಶಿಸುತ್ತಾರೆ. ಇದು ಹಲವು ಪೀಳಿಗೆಗಳಿಂದ ಆಚರಣಾತ್ಮಕ ಕಲೆಯಾಗಿ ಬೆಳೆದುಬಂದಿದೆ. ಕನ್ನಡದ ಹತ್ತು ಹಲವು ಪ್ರಾಚೀನ ಸಾಹಿತ್ಯಕೃತಿಗಳು ಮತ್ತು ಇತರ ಗ್ರಂಥಗಳಲ್ಲಿ ಈ ಕಲೆಯ ಪ್ರಸ್ತಾಪವಿದೆ.

ಡೊಳ್ಳು ಕುಣಿತ

ಈ ಕಲಾಪ್ರದರ್ಶನದಲ್ಲಿ ಮುಖ್ಯ ಪಾತ್ರವನ್ನು ವಹಿಸುವ ಚರ್ಮವಾದ್ಯ. ಅವುಗಳನ್ನು ಬೇರೆ ಬೇರೆ ಆಕೃತಿಗಳು ಮತ್ತು ಗಾತ್ರಗಳಲ್ಲಿ ತಯಾರಿಸುತ್ತಾರೆ. ಕುರುಬರು ಬಳಸುವ ಡೊಳ್ಳುಗಳು ಬಹಳ ದೊಡ್ಡವು. ಅದನ್ನು ತಾಳೆ, ಸುರಹೊನ್ನೆ, ಬೇವು, ಬೈನೆ, ಮಾವು ಮುಂತಾದ ಗಟ್ಟಿಯಿಲ್ಲದ ಮರಗಳ ಕಾಂಡದಿಂದ ತಯಾರಿಸುತ್ತಾರೆ. ಕೊಳವೆಯಾಕಾರದ (ಸಿಲಿಂಡರ್) ಟೊಳ್ಳು ಕಾಂಡವನ್ನು ಸಂಪೂರ್ಣವಾಗಿ ತೆಗೆದುಕೊಂಡು ಅದರೊಳಗಿನ ಅಳಿದುಳಿದ ತಿರುಳನ್ನು ತೆಗೆದುಹಾಕುತ್ತಾರೆ. ಈ ಕೊಳವೆಯು ಸುಮಾರು 24-30 ಅಂಗುಲ ಉದ್ದ ಮತ್ತು 18 ಅಂಗುಲ ವ್ಯಾಸವನ್ನು ಹೊಂದಿರುತ್ತದೆ. ಈ ಡ್ರಮ್ಮಿನ ಎಡ ಮತ್ತು ಬಲ ಬದಿಗಳನ್ನು ಅನುಕ್ರಮವಾಗಿ ಮೇಕೆ ಮತ್ತು ಕುರಿಗಳ ಚರ್ಮದಿಂದ ಗಟ್ಟಿಯಾಗಿ ಕಣಿಕಣಿ ಎನ್ನುವಂತೆ ಮುಚ್ಚುತ್ತಾರೆ. ಈ ಡೊಳ್ಳನ್ನು ಹಗ್ಗ ಅಥವಾ ಕಂಬಳಿಗಳ ನೆರವಿನಿಂದ ಬಾರಿಸುವವನ ಸೊಂಟಕ್ಕೆ ಕಟ್ಟಲಾಗುತ್ತದೆ. ಡೊಳ್ಳಿನ ಬಲಬದಿಗೆ ಔಡಲೆಣ್ಣೆಯ ಲೇಪನವನ್ನು ಮಾಡುವುದರಿಂದ ವಿಶಿಷ್ಟವೂ ನಾದಮಯವೂ ಆದ ಧ್ವನಿ ಬರುತ್ತದೆ. ಡೊಳ್ಳಿನ ಬಲಬದಿಯನ್ನು ಬಡಿಯಲು ಗುಣಿ ಎಂಬ ಕೋಲನ್ನು ಬಳಸಿದರೆ, ಎಡಬದಿಯನ್ನು ಎಡಗೈಯಿಂದಲೇ ಬಡಿಯುತ್ತಾರೆ. ಸುಮಾರು ಹದಿನೆಂಟು ಅಂಗುಲ ಇರುವ ಗುಣಿಯನ್ನು ಸಾಮಾನ್ಯವಾಗಿ ಬಿದಿರಿನಿಂದ ಮಾಡಿರುತ್ತಾರೆ. ಕುರುಬರ ದೇವರಾದ ಬೀರೇದೇವರನ್ನು ಪೂಜಿಸುವಾಗ ಬಳಸುವ ಡೊಳ್ಳು ಇನ್ನೂ ಡೊಡ್ಡದಾಗಿರುತ್ತದೆ.

ಡೊಳ್ಳುಕುಣಿತದಲ್ಲಿ ಭಾಗವಹಿಸುವ ಕಲಾವಿದರ ಸಂಖ್ಯೆಯು ಹತ್ತರಿಂದ ಇಪ್ಪತ್ತರವರೆಗೆ ಇರುತ್ತದೆ. ಡೊಳ್ಳು ಬಾರಿಸುವವರ ಸಂಖ್ಯೆಗೆ ಯಾವ ಮಿತಿಯೂ ಇಲ್ಲ. ಡೊಳ್ಳುಗಳಲ್ಲದೆ ತಾಳ ಮತ್ತು ಕೊಳಲುಗಳನ್ನೂ ಬಳಸುತ್ತಾರೆ. ತಾಳ-ಕೊಳಲುಗಳನ್ನು ನುಡಿಸುವವರು ಒಟ್ಟು ಪ್ರದರ್ಶನದ ಲಯವನ್ನು ನಿಯಂತ್ರಿಸುತ್ತಾರೆ. ಪ್ರದರ್ಶನದ ಪ್ರಾರಂಭದಲ್ಲಿ ಡೊಳ್ಳುವಾದಕರು ವೃತ್ತಾಕಾರದಲ್ಲಿ ಸಮಾನವಾದ ಶೈಲಿ ಮತ್ತು ಎತ್ತರಗಳಲ್ಲಿ (ಪಿಚ್) ಬಾರಿಸತೊಡಗುತ್ತಾರೆ. ಕ್ರಮೇಣ ಡೊಳ್ಳುಬಡಿತದ ಶಬ್ದವು ತಾರಕಕ್ಕೆ ಏರುತ್ತದೆ. ಡೊಳ್ಳುವಾದಕರು ನಿಧಾನವಾಗಿ ಕುಣಿತದ ಇನ್ನೊಂದು ಹಂತವನ್ನು ತಲುಪುತ್ತಾರೆ. ಕುಣಿತದಲ್ಲಿ ವೈವಿಧ್ಯವು ಕಾಣಿಸಿಕೊಳ್ಳುತ್ತದೆ. ಕುಣಿತ-ಬಡಿತಗಳ ಬಗೆಗಳು ಮುಗಿದ ನಂತರ, ಡೊಳ್ಳುಬಡಿತವು ನಿಂತು ಹಾಡುವಿಕೆಯು ಮೊದಲಾಗುತ್ತದೆ. ತಂಡದ ನಾಯಕನು ಕೈಯಲ್ಲಿ ತಾಳಗಳನ್ನು ಹಿಡಿದು ವರ್ತುಲದ ಮಧ್ಯೆ ನಿಲ್ಲುತ್ತಾನೆ. ಅವನು ಹಾಡುವಿಕೆಯನ್ನು ನಿಯಂತ್ರಿಸುತ್ತಾನೆ.

ಸಂಗೀತಗಾರರ ತಂಡದಲ್ಲಿ ಗಾಯಕನ ಸಂಗಡ ಡೊಳ್ಳು, ತಾಳ ಮತ್ತು ಚೌಗಡಿಗಳನ್ನು ನುಡಿಸುವ ವಾದಕರಿರುತ್ತಾರೆ. ಉಳಿದವರು ಹಾಡುವಿಕೆಯಲ್ಲಿ ನೆರವಾಗುತ್ತಾರೆ. ಈ ಹಾಡುಗಳು ಪೌರಾಣಿಕವಾದ ಕಥನವೋ ಅಥವಾ ದೇವರನ್ನು ಹೊಗಳುವ ಗೀತೆಗಳೋ ಆಗಿರುತ್ತವೆ. ಅವುಗಳಲ್ಲಿ ಕೆಲವಕ್ಕೆ ನೀತಿಕಥೆಯ ನೆಲೆಗಳೂ ಇರುತ್ತವೆ. ‘ಹಾಲುಮತ ಪುರಾಣ’, ‘ಅನಸೂಯ ಪುರಾಣ’, ‘ಪಾಂಡವರ ಪದ’, ‘ಮಾರ್ಕಂಡೇಯ ಚರಿತೆ’ ಮತ್ತು ‘ನಿಂಬೆಕ್ಕನ ಪದ’ಗಳು ಈ ಗಾಯಕರು ಹಾಡುವ ಪದಗಳಲ್ಲಿ ಕೆಲವು. ಅವೆಲ್ಲವನ್ನೂ ‘ಡೊಳ್ಳಿನ ಪದಗಳು’ ಎಂದೇ ಕರೆಯುತ್ತಾರೆ. ‘ಬೀರಲಿಂಗೇಶ್ವರನ ಪದ’ವು ಬಹಳ ಜನಪ್ರಿಯವಾದ ಹಾಡು. ಈಚೆಗೆ ಡೊಳ್ಳುಕುಣಿತದ ಪ್ರದರ್ಶನಗಳನ್ನು ಸಾಕ್ಷರತಾಪ್ರಚಾರ ಮುಂತಾದ ಸರ್ಕಾರೀ ಕಾರ್ಯಕ್ರಮಗಳ ಪ್ರಚಾರಕ್ಕಾಗಿಯೂ ಬಳಸಿಕೊಳ್ಳುತ್ತಿದ್ದಾರೆ.

ಡೊಳ್ಳುಕುಣಿತ

ಜನಪದ ವಾದ್ಯಸಮುದಾಯದಲ್ಲಿ ಚಕ್ರವರ್ತಿಯೆನ್ನಬಹುದಾದ ದೊಡ್ಡ ಗಾತ್ರದ ಒಂದು ಚರ್ಮವಾದ್ಯ. ಡೊಳ್ಳು ವಾದನದ ಈ ಕಲೆ ಗಂಡು ಕಲೆಯೇ ಆಗಿದೆ. ಈ ಕಲೆಯ ಆರಾಧಕರು ಬೀರ ಭಕ್ತರಾದ ಕುರುಬರು. “ಕುರಿಯ ಮೇಲೆ ಕಣ್ಣೀರಲೆಪ್ಪಾ ಡೊಳ್ಳಿನ ಮೇಲೆ ಒಂದು ಕೈಯಿರಲಿ” ಎಂದು ಹಾಡಿನಲ್ಲಿ ಹೇಳಿಕೊಂಡಿದ್ದಾರೆ. ಕುರುಬ ಕುರಿಗಳೊಂದಿಗೆ ಕಾಡಿನಲ್ಲಿರುವಾಗ ಕಾಡಿನ ಕ್ರೂರ ಮೃಗಗಳ ಕಾಟ ತಪ್ಪಿಸಿಕೊಳ್ಳುವದಕ್ಕಾಗಿ ಈ ವಾದ್ಯವನ್ನು ನಿರ್ಮಿಸಿಕೊಂಡಿದ್ದಾನೆಂದು ಹೇಳಲಾಗುತ್ತದೆ.

ಡೊಳ್ಳಿನ ಉಗಮ ಕುರಿತು ಪೌರಾಣಿಕ ಕಥೆಯೊಂದನ್ನು ತಮ್ಮ ಹಾಡಿನಲ್ಲಿ ಹಾಡಿಕೊಳ್ಳುತ್ತಾರೆ. ಡೊಳ್ಳಾಸುರನೆಂಬ ರಾಕ್ಷಸನು ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ಪರಶಿವನನ್ನೇ ನುಂಗುವ ವರ ಬೇಡಿದನಂತೆ. ರಕ್ಕಸನ ಭಕ್ತಿಗೆ ಮೆಚ್ಚಿದ ಶಿವನು ತಥಾಸ್ತು ಎಂದು ಹೇಳಿ, ತನ್ನ ಬಿಡುಗಡೆಯ ಅವಧಿ ಕೇಳಿದಾಗ ಪಂಚರಾತ್ರಿಗಳು ಸಂದಿಸಿದಾಗ ನಿನ್ನ ಬಿಡುಗಡೆಯೆಂದು ಹೇಳಿ ಶಿವನನ್ನು ನುಂಗುತ್ತಾನೆ. ರಾಕ್ಷಸ ಪಂಚರಾತ್ರಿಗಳು ಸಂದಿಸಿದಾಗ ವಚನ ಕೊಟ್ಟಂತೆ ಶಿವನನ್ನು ಡೊಳ್ಳಾಸುರನು ಬಿಡುಗಡೆ ಮಾಡದಾಗುತ್ತಾನೆ. ಆಗ ಸಾಕ್ಷಾತ್ ವಿಷ್ಣು ಪರಮಾತ್ಮನೇ ಈ ದೈತ್ಯನನ್ನು ಸಂಹರಿಸಿ ಪರಶಿವನ ಬಿಡುಗಡೆ ಮಾಡುತ್ತಾನೆ. ಆಗ ಪರಶಿವನು ಯೋಗನಾದದಲ್ಲಿ ಲೀನವಾಗಿರುತ್ತಾನೆ. ಶಿವನನ್ನು ಎಚ್ಚರಿಸಲು ವಿಷ್ಣು ರಕ್ಕಸನ ಪಕ್ಕೆಲುಬುಗಳನ್ನು ಪಡಗವನ್ನಾಗಿ ಮಾಡಿ ಅದಕ್ಕೆ ಚರ್ಮವನ್ನು ಬಿಗಿದು ಅವನ ಕೋರೆ ಹಲ್ಲುಗಳಿಂದ ಈ ಚರ್ಮವಾದ್ಯವನ್ನು ಬಡಿಯಲು ಪ್ರಾರಂಭಿಸಿದಾಗ ಶಿವ ನಾಟ್ಯವಾಡುತ್ತ ಕಣ್ಣು ತೆರೆಯುತ್ತಾನಂತೆ. ಈ ಕಥೆಯ ಸಂಕೇತ ದೇವರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುವುದೇ ಆಗಿರಬಹುದು.

ಯಾವ ಬದಲಾವಣೆಗೂ ಒಳಪಡದೇ ತನ್ನ ಮೂಲರೂಪದಲ್ಲಿಯೇ ಉಳಿದುಕೊಂಡು ಬಂದಿರುವ ಈ ವಾದ್ಯದ ರಚನೆ ಸರಳ ವಿಧಾನದಿಂದ ಕೂಡಿದೆ. ಪೊಳ್ಳಾಗಿರುವ ಸಿಲೆಂಡರ ಆಕಾರದ ಅರ್ಧ ಅಂಗುಲ ದಪ್ಪಗಿನ ಅಂಬುಳ್ಳ ಕಟ್ಟಿಗೆಯ ಪಡಗದ ಎರಡೂ ಮಗ್ಗುಲಿಗೆ ಚರ್ಮದ ಹೊದಿಕೆ ಹಾಕಿ ತಯಾರಿಸಲಾಗುತ್ತದೆ. ಪಡಗದ ಕಟ್ಟಿಗೆ ಮಾವಿನ, ಬೇವಿನ ಇಲ್ಲವೆ ಸುರಹೊನ್ನೆಯ ಮರದ್ದು ಇರುತ್ತದೆ. ಇದರ ಎಡಭಾಗಕ್ಕೆ ಆಡಿನ ಚರ್ಮ, ಬಲಭಾಗಕ್ಕೆ ಹೋತಿನ ಚರ್ಮವನ್ನು ಬಿಗಿಯುತ್ತಾರೆ. ಹೊದಿಕೆಯ ಹೊರಭಾಗದ ತುಂಬೆಲ್ಲಾ ಬಾಳೆಯ ಸೊಪ್ಪಿನ ಬೂದಿ ಹಾಗೂ ಎಣ್ಣೆಯಲ್ಲಿ ತಯಾರಿಸಿದ ಜಿಗಿಯನ್ನು ತೆಳ್ಳಗೆ ಲೇಪಿಸಲಾಗುತ್ತದೆ. ಇದರಿಂದಾಗಿ ಆ ಭಾಗ ದಪ್ಪಗಿನ “ಮಂದ್ರನಾದ” ಕೊಡುವದು. ಆಡಿನ ಚರ್ಮದ ಭಾಗ ಸಾಮಾನ್ಯವಾಗಿ ಬೆಳ್ಳಗಿರುತ್ತದೆ. ಅದು ತೆಳುವಾದ “ತಾರನಾದ” ಕೊಡುವದು. ಮಂದ್ರನಾದದ ಭಾಗವನ್ನು ಗಟ್ಟಿಗೆಯ ಗುಣಿಯಿಂದ ಬಾರಿಸಿದರೆ, ಇನ್ನೊಂದು ಭಾಗವನ್ನು ನಾಲ್ಕು ಬೆರಳು ಏಕ ಕಾಲಕ್ಕೆ ಪೆಟ್ಟು ಹಾಕುವಂತೆ ಕೈಯಿಂದ ಬಡಿಯಲಾಗುತ್ತದೆ. ಚರ್ಮದ ಹೊದಿಕೆಯನ್ನು ಪಡಗಕ್ಕೆ ಹೊಂದಿಸಿ ಗಟ್ಟಿಯಾಗಿ ಹಿಡಿದಿಟ್ಟಿರಲು ಅವುಗಳ ಮೇಲೆ ಪಡಗದ ಅಂಚಿನ ಸುತ್ತಲು ಪ್ರತಿಯೊಂದು ಹೊದಿಕೆಗೂ ಒಂದೊಂದು ಕಟ್ಟಿಗೆಯ ಉಲುಪಿಯ ಕಂಕಣವನ್ನು ಹಾಕಲಾಗುತ್ತದೆ. ಎರಡೂ ಕಂಕಣಗಳನ್ನು ನೂಲಿನ ಇಲ್ಲವೆ ನಾರಿನ ಹಗ್ಗದಿಂದ ಜಗ್ಗಿ ಕಟ್ಟಿ ಬಿಗಿಗೊಳಿಸಲಾಗುತ್ತದೆ. ಡೊಳ್ಳಿನ ಗಾತ್ರ ಉದ್ದದಲ್ಲಿ ಒಂದೂವರೆ ಅಡಿಯಿಂದ ಎರಡಡಿಯವರೆಗೆ ಮತ್ತು ವ್ಯಾಸದಲ್ಲಿ ೧೮ ಅಂಗುಲದಿಂದ ೨೪ ಅಂಗುಲದವರೆಗೆ ವಿವಿಧ ಪ್ರಮಾಣದ ನಾದ ಹೊರಡುವ ಗಾತ್ರದ್ದಿರುತ್ತದೆ. ಇಬ್ಬರು ವಾದನಕಾರರಿಂದ ಪ್ರಾರಂಭವಾಗಿ ಹತ್ತಾರು ವಾದನಕಾರರವರೆಗೂ ಸಂಖ್ಯೆ ಬೆಳೆಯುತ್ತದೆ. ಈ ಮೇಳಕ್ಕೆ ಡೊಳ್ಳಿನ ವಾಲಗ, ಬಡ್ಡಿ ವಾಲಗ ಎಂದು ಮುಂತಾಗಿ ಕರೆಯುತ್ತಾರೆ. ಬಾರಿಸುವವರು ಡೊಳ್ಳನ್ನು ಕಂಠಕ್ಕೆ ತೂಗು ಹಾಕಿಕೊಳ್ಳುತ್ತಾರೆ. ಇಲ್ಲವೇ ಸೊಂಟಕ್ಕೆ ಕಟ್ಟಿಕೊಳ್ಳುತ್ತಾರೆ. ದೇವರ ರಥೋತ್ಸವ, ಪಲ್ಲಕ್ಕೋತ್ಸವ, ಮುಂತಾದ ಸಾಂಸ್ಕೃತಿಕ ಉತ್ಸವಗಳ ಮುಂಚೂಣಿಯಲ್ಲಿ ಎರಡು ಸಾಲಾಗಿ “ಡಗಂ ಪಟದಾ” ಎಂದು ತಾಳ ಹಾಕುತ್ತ ನಡೆಯುತ್ತಾರೆ. ಮೆರವಣಿಗೆಯ ಮುಂದೆ ಡೊಳ್ಳು ಬಾರಿಸುತ್ತಾ ಮಾರ್ಗದಲ್ಲಿರುವ ದೇವಾಲಯಗಳ ಮುಂದೆ ಕೆಲ ನಿಮಿಷ ನಿಂತು ವಾದ್ಯ ಸೇವೆ ಸಲ್ಲಿಸಿ ಮುಂದುವರೆಯುವರು. ಆವೇಶಪೂರಿತರಾಗಿ ಕುಣಿಯುತ್ತಾರೆ. ಲಾಗ ಹಾಕುತ್ತಾರೆ. ಬಾರಿಸುವ ವೇಗ ಕ್ರಮೇಣ ಬೆಳೆದು ಕೊನೆಯಲ್ಲಿ ಗಂಭೀರ ಧ್ವನಿಯಿಂದ ಇಡೀ ವಾತಾವರಣವೇ ಭಾವೋನ್ಮಾದಕ್ಕೆ ಮುಟ್ಟುತ್ತದೆ. ಆಗ “ಡೊಳ್ಳು ಬಡಿದು ಸಾಕಾಯಿತು | ಹುಗ್ಗಿ ಪರಿಯಾಣ ಬೇಕಾಯಿತು” ಎಂಬಂತೆ ಹಸಿದು ಊಟಕ್ಕೆ ಕೂಕಡುತ್ತಾರೆ. ಆಮೇಲೆ ಗೀತಗೋಷ್ಠಿ ನಡೆಸುತ್ತಾರೆ. ಹಾಡುವ ಬೈಟಕಕ್ಕೆ ಮೊದಲು ಕೆಲ ನಿಮಿಷ ಬಾರಿಸುವದಕ್ಕೆ ಸರಿಪಟ್ಟವೆಂದು ಕರೆಯುವರು.

ದುಮ್ ತಂಗ ತಂಗ ತಂಗ | ದುಮ್ ತಂಗ ತಂಗ ತಂಗ

ದುಮ್ ತಂಗ ತಂಗ ತಂಗ | ದುಮ್ ತಂಗ ತಂಗ ತಂಗ

ಎಂಬುದು ಅದರ ನಾದ. ಇದಾದ ನಂತರ ಹಾಡುಗಳು ಪ್ರಾರಂಭ. “ದಿಲ್ಲಿಗೆ ಹೋದರೂ ಡೊಳ್ಳಿಗೆ ಒಂದೇ ಪೆಟ್ಟು” ಎಂಬ ಮಾತಿನ ಹಿನ್ನೆಲೆಯಲ್ಲಿ ಬಾರಿಸುವ ವಿಧಾನ ಎಲ್ಲ ಗತ್ತುಗಳಲ್ಲಿಯೂ ಒಂದೇ ರೀತಿಯಿರುತ್ತದೆ. ಒಂದು ಗುಣಿಗೆ ಮೊದಲು ಹೆಜ್ಜೆ ಎಂದು ಕರೆಯುತ್ತಾರೆ. ಅಂದರೆ ಒಂದು ಗುಣಿ ಪೆಟ್ಟ, ಬಳಿಕ ಒಂದು ಕೈಪೆಟ್ಟ – ಇದೇ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಹೀಗೆ ಐದು ಗುಣಿ ಪೆಟ್ಟನವರೆಗೂ ಬಡಿಯುತ್ತಾರೆ. ಇದು ಹಾಡುರಹಿತ ಮತ್ತು ಹಾಡುಸಹಿತವಾದ ವಾದ್ಯ.

ಯಕ್ಷಗಾನ

ಯಕ್ಷಗಾನ - ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.

ಯಕ್ಷಗಾನದ ಪ್ರಮುಖ ಅಂಶಗಳು

ಯಕ್ಷಗಾನದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಕಾಣಬಹುದು.

  1. ಪ್ರಸಂಗ: ಯಕ್ಷಗಾನದಲ್ಲಿ ಯಾವುದಾದರೊಂದು ಕಥಾನಕವನ್ನು ಆಯ್ದುಕೊಂಡು ಅದನ್ನು ಜನರಿಗೆ ಹಾಡು, ಅಭಿನಯ, ನೃತ್ಯಗಳೊಂದಿಗೆ ತೋರಿಸಲಾಗುತ್ತದೆ. ಹೀಗೆ ಆಯ್ದುಕೊಂಡ ಕಥಾನಕವನ್ನು ಪ್ರಸಂಗ ಎಂದು ಕರೆಯುತ್ತಾರೆ. ಉದಾಹರಣೆಗೆ ಮಹಾಭಾರತದಲ್ಲಿ ಭೀಮ ಮತ್ತು ದುರ್ಯೋಧನರ ನಡುವೆ ನಡೆಯುವ ಗದಾಯುದ್ಧದ ಕಥೆಯನ್ನು ಆಯ್ದುಕೊಂಡರೆ ಆಗ ಅದನ್ನು "ಗದಾಯುದ್ದ ಪ್ರಸಂಗ" ಎಂಬುದಾಗಿ ಕರೆಯುತ್ತಾರೆ. ಹೆಚ್ಚಾಗಿ ಪೌರಾಣಿಕ ಪ್ರಸಂಗಗಳನ್ನೇ ಆಯ್ದು ಕೊಳ್ಳುವುದು ಯಕ್ಷಗಾನದ ವಾಡಿಕೆಯಾದರೂ ಪ್ರಸಂಗವು ಪೌರಾಣಿಕವೇ ಆಗಬೇಕು ಎಂಬ ನಿಯಮವೇನೂ ಇಲ್ಲ. ಇದು ಐತಿಹಾಸಿಕವೂ, ಸಾಮಾಜಿಕವೂ ಆಗಿರಬಹುದು.
  2. ಪಾತ್ರಧಾರಿಗಳು:ಪ್ರಸಂಗದಲ್ಲಿ ಬರುವ ಕಥೆಯನ್ನು ಅಭಿನಯಿಸುವವರೇ ಪಾತ್ರಧಾರಿಗಳು. ಸ್ತ್ರೀ ಪಾತ್ರ, ಖಳ ನಟನ ಪಾತ್ರ, ಹಾಸ್ಯ ಕಲಾವಿದನ ಪಾತ್ರ, ನಾಯಕನ ಪತ್ರ - ಹೀಗೆ ಪ್ರಸಂಗಕ್ಕೆ ಅನುಗುಣವಾಗಿ ಪಾತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ನೃತ್ಯ, ಅಭಿನಯ ಹಾಗೂ ಮಾತುಗಾರಿಕೆಗಳೊಂದಿಗೆ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಪಾತ್ರಧಾರಿಗಳ ಮೇಲಿರುತ್ತದೆ.
  3. ವೇಷಭೂಷಣ:ಯಕ್ಷಗಾನದ ಪ್ರಮುಖ ಪ್ರಭೇದವಾದ ಬಯಲಾಟಗಳಲ್ಲಿ ವೇಷಭೂಷಣಗಳು ಪ್ರಮುಖವಾದದ್ದು. ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳಿರುತ್ತವೆ. ಉದಾಹರಣೆಗೆ ಪ್ರಮುಖ ಖಳನಟ ಮತ್ತು ರಾಜ (ನಾಯಕ)ನ ಪಾತ್ರಕ್ಕೆ ಬಳಸುವ ಕಿರೀಟವು ಸಾಮಾನ್ಯ ಪಾತ್ರಧಾರಿಗೆ ಬಳಸುವ ಕಿರೀಟಗಳಿಗಿಂತ ವಿಭಿನ್ನ ವಿನ್ಯಾಸ ದ್ದಾಗಿರುತ್ತದೆ. ಹಾಗೆಯೇ ಸ್ತ್ರೀ ಪಾತ್ರಗಳಿಗೆ ಬಳಸುವ ಕಿರೀಟವು ತುಂಬಾ ಚಿಕ್ಕದಾಗಿರುತ್ತದೆ. ಅಲ್ಲದೇ ತೆಂಕತಿಟ್ಟು ಶೈಲಿಯ ಯಕ್ಷಗಾನದಲ್ಲಿ ಉಪಯೋಗಿಸುವ ವೇಷಭೂಷಣ ಗಳು ಬಡಗತಿಟ್ಟಿನಲ್ಲಿ ಉಪಯೋಗಿಸುವ ವೇಷ ಭೂಷಣಗಳಿಗಿಂತ ಭಿನ್ನವಾಗಿರುತ್ತವೆ.
  4. ಭಾಗವತಿಕೆ: ಯಕ್ಷಗಾನದ ಜೀವಾಳವೇ ಭಾಗವತಿಕೆ ಅಥವಾ ಹಾಡುಗಾರಿಕೆ. ಅವರು ಈ ರಂಗ ಪ್ರಕಾರದ ನಿರ್ದೇಶಕರಿದ್ದಂತೆ. ಇಲ್ಲಿ ಪಾತ್ರಧಾರಿಗಳು ಅಭಿನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ. ಹೀಗೆ ಹಾಡುವವರನ್ನು ಭಾಗವತರು ಎಂದು ಕರೆಯುತ್ತಾರೆ. ಭಾಗವತರು ಹಾಡುವ ಪದಗಳಿಗೆ ತಕ್ಕಂತೆ ಪಾತ್ರಧಾರಿಗಳು ನೃತ್ಯದ ಮೂಲಕ ಅಭಿನಯಿಸುತ್ತಾರೆ. ನೃತ್ಯದೊಂದಿಗೆ ಹಾಡಿನಲ್ಲಿ ಬರುವ ಕಥಾನಕದ ಸಂದರ್ಭಕ್ಕನುಗುಣವಾಗಿ ಭಾವಾಭಿನಯವೂ ಸಹ ಅತ್ಯಂತ ಅಗತ್ಯವಾದುದು.
  5. ಮಾತುಗಾರಿಕೆ: ಹಾಡುವುದನ್ನು ಪೂರ್ಣಗೊಳಿಸಿದ ಕೂಡಲೇ ಆ ಹಾಡಿನ ಸಾರಾಂಶವನ್ನು ಪಾತ್ರಧಾರಿಗಳು ಚರ್ಚಿಸುತ್ತಾರೆ. ಹಾಡಿನಲ್ಲಿ ಕಥಾನಕದ ಯಾವ ಭಾಗವನ್ನು ಪ್ರಸ್ತುತ ಪಡಿಸಲಾಗುತ್ತದೋ ಅದೇ ಭಾಗದ ಅರ್ಥವನ್ನು ಜನ ಸಾಮಾನ್ಯರೆಲ್ಲರಿಗೂ ಸ್ಪಷ್ಟವಾಗುವಂತೆ ಆಡುಮಾತಿನಲ್ಲಿ ಪಾತ್ರಧಾರಿಗಳು ಸಂಭಾಷಿಸುತ್ತಾರೆ.
ಬಡಗು ತಿಟ್ಟು ಯಕ್ಷಗಾನ ವೇಷದ ಒಂದು ಮಾದರಿ
ತೆಂಕು ತಿಟ್ಟು ಯಕ್ಷಗಾನ ವೇಷದ ಒಂದು ಮಾದರಿ

ಉಗಮ

ಯಕ್ಷಗಾನದ ಮೊದಲ ಉಲ್ಲೇಖ ಸಾರ್ಣದೇವನ "ಸಂಗೀತ ರತ್ನಾಕರ"ದಲ್ಲಿ (೧೨೧೦ ಕ್ರಿಶ) "ಜಕ್ಕ" ಎಂದು ಆಗಿದ್ದು ಮುಂದೆ "ಯಕ್ಕಲಗಾನ" ಎಂದು ಕರೆಯಲ್ಪಟ್ಟಿತ್ತು ಎಂಬುದು ಒಂದು ಅಭಿಪ್ರಾಯ. ಗಂಧರ್ವ ಗ್ರಾಮ ಎಂಬ ಈಗ ನಶಿಸಿ ಹೋಗಿರುವ ಗಾನ ಪದ್ದತಿಯಿಂದ ಗಾನ ಮತ್ತು ಸ್ವತಂತ್ರ ಜಾನಪದ ಶೈಲಿಗಳಿಂದ ನೃತ್ಯ ರೂಪು ಗೊಂಡಿತೆಂದು ಶಿವರಾಮ ಕಾರಂತರ "ಯಕ್ಷಗಾನ ಬಯಲಾಟ" ಎಂಬ ಸಂಶೋಧನಾ ಪ್ರಬಂಧಗಳ ಸಂಕಲನದಲ್ಲಿ ಹೇಳಿದೆ. ೧೫೦೦ ರಷ್ಟರಲ್ಲಿ ವ್ಯವಸ್ತಿತವಾಗಿ ಯಕ್ಷಗಾನ ರೂಢಿಯಲ್ಲಿತ್ತು ಎಂಬುದು ಬಹಳ ವಿದ್ವಾಂಸರು ಒಪ್ಪುವ ವಿಚಾರ.

ಯಕ್ಷಗಾನದ ಪ್ರಭೇದಗಳು

  • ಯಕ್ಷಗಾನದಲ್ಲಿ ಅನೇಕ ರೀತಿಯ ಪ್ರಭೇದಗಳಿದ್ದು ಅವುಗಳಲ್ಲಿ ಯಕ್ಷಗಾನ ಬಯಲಾಟವು ಅತ್ಯಂತ ಜನಪ್ರಿಯವಾದುದು. ಬಯಲಾಟವೆಂದರೆ ವೇಷಭೂಷಣಗಳೊಂದಿಗೆ ರಂಗಭೂಮಿಯಲ್ಲಿ ಆಡುವ ಯಕ್ಷಗಾನ ಪ್ರಭೇದ. ಕುಣಿತ ಎಂಬ ಹೆಸರು ಇದಕ್ಕಿದೆ. ಮೊದ ಮೊದಲು ಹಬ್ಬ ಹರಿದಿನಗಳಂದು ಊರಿನ ಬಯಲಿನಲ್ಲಿ ರಾತ್ರಿಯಿಡೀ ಈ ಬಯಲಾಟ ಹೆಚ್ಚಾಗಿ ನಡೆಯುತ್ತಿದ್ದ ಕಾರಣ "ಬಯಲಾಟ" ಎಂಬ ಹೆಸರು ರೂಢಿಯಲ್ಲಿದೆ. ಜನರು ಇದನ್ನು ಸರಳವಾಗಿ "ಆಟ" ಎಂದೂ ಕರೆಯುತ್ತಾರೆ.
  • ಆದರೆ ಈಗೀಗ ರಾತ್ರಿಯಿಡೀ ನಡೆಯುವ ಬಯಲಾಟದೊಂದಿಗೆ ೨-೩ ಘಂಟೆಗಳ ಕಾಲ ನಡೆಯುವ ಯಕ್ಷಗಾನವೂ ಬಳಕೆಯಲ್ಲಿದೆ. ಬಯಲಾಟದಲ್ಲಿ ವೇಷಭೂಷಣ, ರಂಗಸ್ಥಳ, ಭಾಗವಂತಿಕೆ (ಹಾಡುಗಾರಿಕೆ), ಅಭಿನಯ, ಮಾತುಗಾರಿಕೆ, ನೃತ್ಯ - ಹೀಗೆ ಸಾಂಪ್ರದಾಯಿಕ ಯಕ್ಷಗಾನದ ಎಲ್ಲ ಮಜಲುಗಳನ್ನೂ ಕಾಣಬಹುದು. ಯಕ್ಷಗಾನದಲ್ಲಿ ಮೂಡಲಪಾಯ ಮತ್ತು ಪಡುವಲಪಾಯ ಎಂಬ ಎರಡು ಮ್ರಮುಖ ಪ್ರಭೇದಗಳಿವೆ. ಪಶ್ಚಿಮ ಘಟ್ಟದ ಪೂರ್ವಕ್ಕೆ ಪ್ರಚಲಿತವಿರುವದು ಮೂಡಲಪಾಯ.
  • ಉತ್ತರ ಕರ್ನಾಟಕದಲ್ಲಿ ಬಹು ಜನಪ್ರಿಯವಾಗಿರುವ ಶ್ರೀಕೃಷ್ಣ ಪಾರಿಜಾತ ಮೂಡಲ ಪಾಯದಲ್ಲಿ ಗಮನಾರ್ಹ. ಮಲೆನಾಡು ಮತ್ತು ಕರಾವಳಿಯಲ್ಲಿ ಪ್ರಚಲಿತವಿರುವುದು ಪಡುವಲಪಾಯ. ಪಡುವಲಪಾಯದಲ್ಲಿ ೩ ವಿಭಾಗಗಳಿವೆ.ಅವು ತೆಂಕುತಿಟ್ಟು,ಬಡಗುತಿಟ್ಟು ಮತ್ತು ಉತ್ತರದ ತಿಟ್ಟು (ಬಡಾಬಡಗು).
  • ಉತ್ತರ ಕನ್ನಡ, ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತರದ ತಿಟ್ಟು ಶೈಲಿಯ ಬಯಲಾಟಗಳು ಕಂಡು ಬಂದರೆ ಉಡುಪಿಯಲ್ಲಿ ಬಡಗುತಿಟ್ಟು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ತೆಂಕುತಿಟ್ಟು ಶೈಲಿಯ ಯಕ್ಷಗಾನವನ್ನು ಕಾಣಬಹುದು. ವೇಷಭೂಷಣಗಳ ವಿನ್ಯಾಸ, ನೃತ್ಯದ ಶೈಲಿ, ಭಾಗವತಿಕೆ ಮತ್ತು ಹಿಮ್ಮೇಳಗಳಲ್ಲಿ ಕಂಡುಬರುವ ಕೆಲವು ವ್ಯತ್ಯಾಸಗಳ ಆಧಾರದ ಮೇಲೆ ಈ ವಿಂಗಡಣೆಯನ್ನು ಮಾಡಲಾಗಿದೆಯೇ ಹೊರತು ಯಕ್ಷಗಾನದ ಮೂಲ ತತ್ವ, ಆಶಯಗಳು ೩ ಶೈಲಿಗಳಲ್ಲಿಯೂ ಒಂದೇ ಆಗಿರುತ್ತದೆ.

ಹೆಚ್ಚುವರಿ ಸಂಪನ್ಮೂಲ

  1. ಯಕ್ಷಗಾನ ವಿಕಿಪೀಡಿಯ
  2. ಕಂಸಾಳೆ ಕೈಸಾಲೆ ಚಲನ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ
ವೀರಗಾಸೆ
ಕಂಸಾಳೆ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ 


ಯಕ್ಷಗಾನ


ನಂದಿ ಕುಣಿತ

ಬುಡುಬುಡಿಕೆ

ಸಾರಾಂಶ

ಪರಿಕಲ್ಪನೆ ೧

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುಟವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ

ಮೌಲ್ಯಮಾಪನ

ಚರ್ಚಾ ಕೂಟ

  1. ಜಾನಪದ ಕಲೆಗಳು ಉಳಿಸುವದು ಅವಶ್ಯಕವೆ ?
  2. ಜಾನಪದ ಕಲೆ ಉಳಿಸಲು ಏನು ಮಾಡಬೇಕು?
  3. ಜಾನಪದ ಕಲೆಗಳಿಂದ ಕಲಿಯುವ ಪಾಠವೇನು ?

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ