ಭಾರತೀಯತೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಹಿನ್ನಲೆ ಸ್ವಾತಂತ್ರದ ನಂತರ ತನ್ನ ಬಂಧು-ಬಳಗವನ್ನು ಅರಸಿ ಹೊರಟವರ ತುಮುಲವನ್ನು ಬಿಂಬಿಸುವ ಗೀತೆ.”ಕತ್ತಲೆ ತುಂಬಿದ ಬಾನ್ದಳದಂಚಿಗೆ,ಕಾದಿದೆ ಚಂದ್ರಿಕೆ ಬಿಡುಗಡೆಗೆ” – ಇಲ್ಲಿ ತನ್ನ ಪ್ರೀತಿಪಾತ್ರರನ್ನು ಸೇರುವ ತವಕ ವ್ಯಕ್ತನಾಗಿದೆ. ಸ್ವಾತಂತ್ರದ ನಂತರ ದೇಶದ ಪ್ರಜೆಗಳು ಸಂಭ್ರಮಿಸುವ ಗೀತೆ. ತಮ್ಮ ಗೆಲುವನ್ನು ಆಚರಿಸಿದರೂ “ಭಾಷೆ ಬೇರೆ , ಭಾವವೊಂದು ನಾವು ಭಾರತೀಯರು” ಎಂಬ ಸಂದೇಶ ಸಾರುವ ಗೀತೆ.ಇಲ್ಲಿನ ಗೀತೆಗಳ ವಿಸ್ತಾರ ಅಪಾರ - ಸ್ವಾತಂತ್ರ ಪೂರ್ವದಲ್ಲಿನ ಯುವಜನತೆಯ ಕನಸು,ನೋವು-ನಲಿವು, ಸ್ವಾತಂತ್ರದ ಹೋರಾಟ, ಸ್ವಾತಂತ್ರದ ನಂತರದ ಸಂದರ್ಭ

ಈ ಪದ್ಯವನ್ನು ಹಾಡಿನ ರೂಪದಲ್ಲಿ ಕೇಳಿ

ಸಂಪನ್ಮೂಲಗಳು

  1. ನರಸಿಂಹಸ್ವಾಮಿ ಅವರ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.
  2. ದೇಶಭಕ್ತಿಗೀತೆಗಳಿಗೆ ಇಲ್ಲಿ ಕ್ಲಿಕ್ ಮಾಡಿ
  3. ದೇಶಭಕ್ತಿಗೀತೆಗಳ ಕವನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
  4. ಐದು ಬೆರಳು ಕೂಡಿ ಒಂದು ಮುಷ್ಠಿ ಎಂಬ ದೇಶ ಭಕ್ತಗೀತೆಗಾಗಿ ಇಲ್ಲಿ ಕ್ಕಿಕ್ ಮಾಡಿ
  5. [hp://ushabhat.blogspot.in/2011_08_01_archive.html ಹಲವು ದೇಶ ಭಕ್ತಿ ಗೀತೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ]
  6. ಬಾರತೀಯ ಪ್ರವಾಸೋದ್ಯಮ ದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
  7. ಭಾರತೀಯ ಸಂಸ್ಕೃತಿ ಯ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಪಾಠ ಯೋಜನೆ ಅವಧಿ: ೧ ಶಿಕ್ಷಕರು ಭಾರತೀಯತೆ ಪಧ್ಯ ಇರುವುದು ಭಾರತದ ಏಕತೆಯ ಕುರಿತು ಆಗಿರುವುದರಿಂದ, ಆ ಪದ್ಯ ಮಾಡುವ ಮುಂಚೆ ಅವರು ಈ ತಿಂಗಳು ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಿದ್ದರಿಂದ ಅದಕ್ಕೆ ಸಂಬಂಧಿಸಿಂದ ಪ್ರಶ್ನೆಗಳನ್ನು ಕೇಳುವುರು.

  • ನಾವು ಯಾವೆಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತೇವೆ
  • ಆಗಸ್ಟ್ ಮಾಹೆಯಲ್ಲಿ ಯಾವ ಹಬ್ಬವನ್ನು ಆಚರಿಸುತ್ತೇವೆ
  • ಸ್ವತಂತ್ರ ಯಾವ ದಿನದಂದು ಸಿಕ್ಕಿತ್ತು?
  • ಅದಕ್ಕೂ ಮುಂಚೆ ನಾವು ಸ್ವತಂತ್ರ ರಾಗಿರಲಿಲ್ಲ ಎಂದು ಹೇಗೆ ಹೇಳುವಿರಿ ?
  • ಅವರು ನಮ್ಮ ಮೇಲೆ ದಬ್ಬಳಿಕೆ ಮಾಡಲು ಏಕೆ ಅವಕಾಶ ಮಾಡಿಕೊಡಲಾಯಿತು?
  • ಬ್ರಿಟಿಷರು ಬಂದ ನಂತರ ಆದ ಪರಿಣಾಮಗಳೇನು?

ನಾವೆಲ್ಲಾ ಒಟ್ಟಾಗಿ ಸೇರಿ ಹೋರಾಡಿದ ಕಾರಣ ನಮಗೆ ಸ್ವತಂತ್ರ್ಯ ಸಿಕ್ಕಿತು ನಮ್ಮಲ್ಲಿ ಎಷ್ಟೇ ಬೇದ ಭಾವ ಇದ್ದರು ನಾವೆಲ್ಲಾ ಒಂದು , ಅದೇ ರೀತಿ ನ್ಮಮ ಬಾವನೆಗಳು ಕೂಡ ಒಂದು ಎಂದು ಹೇಳುವ ಕೆ.ಎಸ್.ನರಸಿಂಹಸ್ವಾಮಿ ಅವರು ಬರೆದ ಭಾರತೀಯತೆ ಪದ್ಯವನ್ನು ನೋಡೋಣ ಎಂದು ತರಗತಿ ಪ್ರಾರಂಭಿಸುವುದು. ಪದ್ಯವನ್ನು ವಾಚಿಸಿದ ನಂತರ ಶಿಕ್ಷಕರು ಮಕ್ಕಳಿಗೆ ಈ ಪದ್ಯವನ್ನು ಹಾಡಿನ ರೂಪದಲ್ಲಿ ಹಾಡಲು ಕೇಳುವುರು. ಈ ಮೊದಲು ಮಕ್ಕಳು ಎಲ್ಲಿಯಾದರು ಈ ಪದ್ಯದ ಹಾಡಿನ ರೂಪವನ್ನು ಕೇಳಿದ್ದರೆ ಹಾಡಬಹುದು. ಮಕ್ಕಳು ಹಾಡಿದ ನಂತರ ಅಥವಾ ಯಾರು ಹಾಡದಿದ್ದರೆ, ಶಿಕ್ಷಕರು " ಮೈಸೂರು ಮಲ್ಲಿಗೆ" ಎಂಬ ಸಿನಿಮಾದಲ್ಲಿ ಈ ಪದ್ಯದ ಸಾಲಿಗಳನ್ನು ಹಾಡಿನ ರೂಪದಲ್ಲಿ ಬಳಸಿರುವುದನ್ನು ಮಕ್ಕಳಿಗೆ ತಿಳಿಸಿ ಅದನ್ನು ಕೇಳಿಸಬಹುದು. ಮಕ್ಕಳು ಸಹ ಇದಕ್ಕೆ ದನಿಗೂಡಿಸುವರು. ಈ ಪದ್ಯದ ಸಾಲುಗಳಲ್ಲಿ ಭಾರತದ ಪ್ರಾಕೃತಿಕ ಸೌಂದರ್ಯ, ಭಾರತದ ಮೇಲ್ಭಾಗದಲ್ಲಿನ ಹಿಮಾಲಯ ಪರ್ವತ, ಕಾಲ್ದಡಿಯಲ್ಲಿ ಮುತ್ತನಿಡುವಂತೆ ಇರುವ ಸರೋವರಗಳು, ಗಡಿಭಾಗದ ಸೈನಿಕರು, ರಾಷ್ಟ್ರ ಧ್ವಜ , ಭಾವೈಕ್ಯತೆ, ಪ್ರೀತಿ ಭಾವನಗೆಳ ಬಗ್ಗೆ ತಿಳಿಸಲಾಗಿದೆ. ಈ ವಿವರಣೆಗಳಿಗೆ ಸಂಬಂಧಿಸಿದ ವೀಡಿಯೋಗಳನ್ನು ಚಿತ್ರಗಳನ್ನು ಮಕ್ಕಳಿಗೆ ತೋರಿಸುವುದು. ಪದ್ಯದ ಸಾಲುಗಳಲನ್ನು ವಿವರಿಸುವಾಗ ಅಲ್ಲಿನ ಪದಗಳಿಗೆ ಸೂಕ್ತವಾದ ಚಿತ್ರಗಳನ್ನು , ವೀಡಿಯೋಗಳ ನ್ನು ಪ್ರದರ್ಶಿಸುವ ಮೂಲಕ ಮಕ್ಕಳನ್ನು ಆಕರ್ಷಿಸಬಹದು. ನಂತರ ಶಿಕ್ಷಕರು ಪದ್ಯದ ವಿವರಣೆಯನ್ನು ಮಕ್ಕಳಿಗೆ ತಿಳಿಸುವರು, ಮತ್ತು ಅದರಲ್ಲಿ ಬರುವ ಅರ್ಥೈಸಿ ಓದಿ ಪದಗಳ ವಿವರವನ್ನು ಚಿತ್ರಸಹಿತ ಉದಾಹರಣೆಗಳ ಮೂಲಕ ವಿವರರಿಸಬಹುದು.

ಕವಿ ಪರಿಚಯ ನಂತರ ಶಿಕ್ಷಕರು ಕೆ ಎಸ್ ನರಸಿಂಹಸ್ವಾಮಿ ಅವರ ಪರಿಚಯವನ್ನು ಮಾಡಿಕೊಡುವರು. ನರಸಿಂಹಸ್ವಾಮಿಯವರ ಕಾಲ, ಪ್ರಶಸ್ತಿಗಳ ಬಗ್ಗೆ ವಿವರಿಸಿ, ಈ ಕವಿಗಳ ವಿಶೇಷತೆಯ ಬಗ್ಗೆ ತಿಳಿಸುವರು. ಈ ಕವಿಗಳನ್ನು "ಮಲ್ಲಿಗೆಯ ಕವಿ" ಎಂದು ಕರೆಯಲು ಕಾರಣವೇನು ಎಂಬುದನ್ನು ತಿಳಿಸಬೇಕು. ಈ ಕವಿಗಳ ಇತರೇ ಪ್ರಮುಕ ಕೃತಿಗಳು ಹಾಗು ಆ ಕೃತಿಗಳಲ್ಲಿನ ಪ್ರಮುಖ ಸಾರಾಂಶಗಳೇನು ಎಂಬುದನ್ನು ತಿಳಿಸಬಹದು.

ಮೌಲ್ಯ ಮಾಪನ ಪ್ರಶ್ನೆಗಳು ಶಿಕ್ಷಕರು ಪಧ್ಯವನ್ನು ಮಾಡಿದ ನಂತರ ಅದರಲ್ಲಿ ಕೆಲವು ವಿಷಯಗಳನ್ನು ತೆಗೆದುಕೊಂಡು ಪದ್ಯದ ಸಾರಾಂಶವನ್ನು ಹೇಳುವುದು. ಅದರಲ್ಲಿ ಹಿಮಾಲಯ ಮತ್ತು ಕಡಲು ತೀರ , ಮಿಲಿಟರಿ ಪದ್ದತಿ, ಮತ್ತು ಬಯಲು ಸೀಮೆ ಪ್ರದೇಶ ಇವುಗಳ ವೀಡಿಯೋವನ್ನು ತೋರಿಸಿ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು.

  1. ಪದ್ಯದಲ್ಲಿ ಹಿಮಾಲಯವನ್ನು ಏಕೆ ಆಕಾಶಕ್ಕೆ ಎಂದು ನಿಂತಿದೆ ಎಂಬ ಹೊಲಿಕೆಯ್ನು ಮಾಡಿದ್ದಾರೆ?
  2. ಪದ್ಯದಲ್ಲಿ ಭಾರತದ ಪ್ರಾಕೃತಿಕ ಸೌಂದರ್ಯ ವನ್ನು ಹೇಗೆ ವರ್ಣಿಸಿದ್ದಾರೆ?
  3. ನಮ್ಮ ದೇಶದಲ್ಲಿ ಸೈನಿಕರು ಇರದೆ ಹೊದರೆ ಏನಾಗುತ್ತಿತ್ತು?
  4. ಪದ್ಯದಲ್ಲಿ ಭಾರತದ ವೈವಿಧ್ಯತೆಯನ್ನು ಹೇಗೆ ವರ್ಣಿಸಿದ್ದಾರೆ?

ಪದದಗಳ ಅರ್ಥವಿವರಣೆ ಈ ಪದ್ಯದಲ್ಲಿ ಬರುವ ಕೆಲವು ವಿಶೇಷಾರ್ಥಗಳನ್ನು ಆಯ್ದುಕೊಂಡು ಅವುಗಳನ್ನು ವಾಕ್ಯ ಸಹಿತವಾಗಿ ವಿವರಸಿವುದು.
ಉದಾ: ಕವನ ಸಂಕಲನ - ಕವನ ಸಂಕಲನವೆಂದರೆ ಒಂದೇ ಕವಿಯ ಹಲವು ಕವಿತೆಗಳನ್ನು ಒಂದುಗೂಡಿಸಿ ಪುಸ್ತಕರೂಪದಲ್ಲಿ ಹೊರತರುವುದು

ಮನೆಗೆಲಸ:

  • ಭಾರತದ ಏಕತೆಯಮೇಲೆ ಬರೆದಿರುವ ಕವನಗಳನ್ನು ಸಂಗ್ರಹಿಸಿ.
  • ಈ ಪದ್ಯವನ್ನು ಆಧಾರವಾಗಿಟ್ಟು ಕೊಂಡು ಕವನ, ಚಿತ್ರ ಮತ್ತು ಕಥೆಗಳನ್ನು ಬರೆಯಿರಿ.