ರಾಜಕುಮಾರಿಯ ಜಾಣ್ಮೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಪರಿಕಲ್ಪನಾ ನಕ್ಷೆ

<mm>Flash</mm>

ಹಿನ್ನೆಲೆ/ಸಂದರ್ಭ

ಜಾನಪದ ಗೀತೆಗಳಂತೆ ಜಾನಪದ ಕಥೆಗಳು ಸಹ ಜನರಿಂದ ಜನರಿಗೆ ಮೌಖಿಕ ಮಾಧ್ಯಮದ ಮೂಲಕ ಪ್ರಸಾರವಾದುದ್ದಾಗಿದೆ. ಇಂತಹ ಕಥೆಗಳಿಂದ ಮಕ್ಕಳಲ್ಲಿ ಕಲ್ಪನಾ ಲೋಕ ವಿಸ್ತಾರವಾಗುತ್ತದೆ.ಅತಿ ಮಾನಿಷ ಶಕ್ತಿಗಳು,ರಾಜ,ಬಡವ,ದೇವರು. ಸತ್ಯ. ಮೋಸ ಜಾಣತನ,ಪ್ರಾಣಿಗಳ ರೂಪಕಗಳು ಮೊದಲಾದವು ಮಕ್ಕಳ ಕಲ್ಪನಾ ಲೋಕವನ್ನು ವರ್ಣಮಯ ಗೊಳಿಸುವುದರ ಜೊತೆಗೆ ಶಕ್ತ ಗೊಳಿಸುತ್ತದೆ. ಇದರಲ್ಲಿ ಸಂಸ್ಕೃತಿ ಸೊಗಡು,ಆಚರಣೆ ನಂಬಿಕೆಗಳಂತಹ ಅನೇಕ ಅಂಶಗಳು ಅಡಕವಾಗಿರುತ್ತವೆ.ಇದರಿಂದ ಮಕ್ಕಳಲ್ಲಿ ಭಾಷಾ ಕೌಶಲ ಮತ್ತು ಶಬ್ಧ ಬಂಡಾರ ವೃದ್ದಿಯಾಗುತ್ತದೆ. ರಾಜಕುಮಾರಿಯ ಜಾಣ್ಮೆ ಜಾನಪದ ಕಥೆಯಾಗಿದ್ದು,ಜಾನಪದ ಸಾಹಿತ್ಯದ ಪರಿಚಯ ನೀಡುವುದರ ಜೊತೆಗೆ ಹೆಣ್ಣೋಬ್ಬಳ ಸಾಹಸ ಮತ್ತು ಬುದ್ದಿವಂತಿಕೆಯ ಮೂಲಕ ಈ ಎಲ್ಲಾ ಅಂಶಗಳು ಬಿಂಬಿತವಾಗಿವೆ.

ಕಲಿಕೋದ್ದೇಶಗಳು

  • ಜಾನಪದ ಕಥಾ ಸಾಹಿತ್ಯವನ್ನು ಪರಿಚಯಿಸುವುದು.
  • ಜನಪದ ಸಾಹಿತ್ಯ ಹಿರಿಮೆಯನ್ನು ಪರಿಚಯಿಸುವುದು (ಕಥೆ,ಲಾವಣಿ,ಕಲೆ,ಗೀತೆ,ಪರಿಚಯ.)
  • ಜನಪದ ಸಾಹಿತ್ಯ ಅರಿವನ್ನು ಮೂಡಿಸುವುದು,ಅಭಿಮಾನ ಮೂಡಿಸುವುದು.
  • ಜನಪದ ಸಾಹಿತ್ಯ ರಕ್ಷಣೆಯ ಹಾಗೂ ಸಂಗ್ರಹಕಾರಕ ಮನೋಭಾವ ಬೆಳೆಸುವುದು.
  • ಜನಪದ ಕಥೆಯನ್ನು ಆಲಿಸುವ,ಅರ್ಥೈಸುವ,ರಾಗಬದ್ಧವಾಗಿ ಹೇಳುವ ಕಲೆ ಬೆಳೆಸುವುದು.

ಕವಿ ಪರಿಚಯ

ಕಣಜದಲ್ಲಿನ ಡಿ ಕೆ ರಾಜೇಂದ್ರ ರವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ

ಶಿಕ್ಷಕರಿಗೆ ಟಿಪ್ಪಣಿ

ಶಿಕ್ಷಕರು ಈ ಕಥೆನ್ನು ೫ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಜಾನಪದ ಸಾಹಿತ್ಯದ ಹಿನ್ನೆಲೆ, ಸಂಗ್ರಹಾಕಾರ ಪರಿಚಯ ಹಾಗು ಕಥೆಗೆ ಪೂರಕವಾದ ಮಾಹಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಮಕ್ಕಳು ಬರುವಾಗ ತಾವು ಕೇಳಿರುವ ಜಾನಪದ ಕಥೆಯನ್ನು ಅಥವಾ ಇತರ ಜಾನಪದೀಯ ಅಂಶಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರ ತಿಳಿಸಬಹುದು. ಎರನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು. ೩ಅವಧಿಯಲ್ಲಿ ಮಕ್ಕಳಿಗೆ ಗ್ರಾಂಥಿಕ ಭಾಷಾ ರೀತಿಯನ್ನು ಪರಿಚಯಿಸಿ,ವಿವರಿಸುವುದು. ೪ನೇ ಅವಧಿಯಲ್ಲಿ ಕಥೆಯ ಕುರಿತು ಚರ್ಚೆ. ೫ನೇ ಅವಧಿಯಲ್ಲಿ ವ್ಯಾಕರಣಾಂಶದ ಬಗ್ಗೆ ಮಾಹಿತಿ ನೀಡಬಹುದು.

ಈ ಜಾನಪದಸಾಹಿತ್ಯ ಪೂರಕವಾದ ಕೆಲವು ಮಾಹಿತಿಗಳನ್ನು ಶಿಕ್ಷಕರು ತಿಳಿದುಕೊಳ್ಳಬೇಕಿದ್ದು. ಜಾನಪದದಲ್ಲಿ ಕಥಾಸಾಹಿತ್ಯ ಪೂರಕವಾದ ಮಾಹಿತಿಗಳನ್ನು ಸಂಗ್ರಹಿಸಬೇಕು.

ಹೆಚ್ಚುವರಿ ಸಂಪನ್ಮೂಲ

  1. 'ಕನ್ನಡ ದೀವಿಗೆ'ಯಲ್ಲಿನ 'ರಾಜಕುಮಾರಿಯ ಜಾಣ್ಮೆ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
  2. ಮಕ್ಕಳಿಗಾಗಿನ ರಾಜಕುಮಾರಿಯ ಕಥೆಗಾಗಿ ಇಲ್ಲಿ ಕ್ಲಿಕ್ಕಿಸಿರಿ
  3. ಜನಪ್ರಿಯ 'ಸಿಂಡ್ರಲಾ'ಮಕ್ಕಳ ಕಥೆಗಾಗಿ ಇಲ್ಲಿ ಕ್ಲಿಕ್ಕಿಸಿರಿ
  4. ಈಜೀಪುರ ಶಾಲೆಯ ವಿದ್ಯಾರ್ಥಿ ಭಾಸ್ಕರ್ ನ ಧ್ವನಿ ಮುದ್ರಿತ ಜಾನಪದ ಕಥೆ ಕೇಳಲು ಇಲ್ಲಿ ಕ್ಲಿಕ್ಕಿಸಿರಿ

ಸಾರಾಂಶ

ಪರಿಕಲ್ಪನೆ ೧

ಚಟುಟವಟಿಕೆ-೧

1. ವಿಧಾನ/ಪ್ರಕ್ರಿಯೆ;

  • ಜಾನಪದ ಸಾಹಿತ್ಯ ಪರಿಚಯವನ್ನು ಎಲ್ಲಾ ಮಕ್ಕಳಿಗೂ ಮಾಡಿಸಲೇಬೇಕಿರುವುದರಿಂದ, ಶಿಕ್ಷಕರು ಕತೆ ವಿವರಿಸುವ ಮಾದರಿಯಲ್ಲಿ ಮಕ್ಕಳಿಗೆ ಜಾನಪದ ಸಾಹಿತ್ಯ ಬಗ್ಗೆ ಪರಿಚಯಿಸುವರು.
  • ಸ್ತ್ರೀ ಯರಿಗಿದ್ದ ಸ್ವಾತಂತ್ರ್ಯ ಮನೋಭಾವವನ್ನು ಕುರಿತು ವಿಶ್ಲೇಷಣೆ.
  • ರಾಜಕುಮಾರಿ ಧೈರ್ಯದ ಆತ್ಮವಿಶ್ವಾಸದ ವಿಮರ್ಶೆ.
  • ರಾಜರ ಸಾಮರ್ಥ್ಯ ಕುರಿತು ಚಿಂತನೆ

2. ಸಮಯ;20 ನಿಮಿಷಗಳು
3. ಸಾಮಗ್ರಿಗಳು/ಸಂಪನ್ಮೂಲಗಳು

  • ಸಂಗ್ರಹಕಾರರಾದ ಡಿ.ಕೆ.ರಾಜೇಂದ್ರರವರ ಭಾವಚಿತ್ರ.
  • ರಾಜಕುಮಾರಿಯ ಭಾವ ಚಿತ್ರಗಳು
  • ಮಾತನಾಡುವ ಗಿಳಿ ಚಿತ್ರ ಮತ್ತು ವಿಡಿಯೋ

4. ಹಂತಗಳು; ಕಥೆ ಹೇಳುವುದು

  • ಸಂಗ್ರಹಿಸಿದ ಜಾನಪದ ಕಥೆ ಹೇಳುವುದು.

5. ಚರ್ಚಾ ಪ್ರಶ್ನೆಗಳು;

  • ಸ್ರ್ತೀ ಸ್ವಾತಂತ್ರ್ಯ ದ ಬಗ್ಗೆ ಚರ್ಚೆ.

ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಚಟುಟವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

1.ಗ್ರಂಥಸ್ಥ ಭಾಷೆಗೂ ಜನಪದ ಭಾಷೆಗೂ ಇರುವ ವ್ಯತ್ಯಾಸ
2.ತಮ್ಮ ಸುತ್ತಮುತ್ತಲಿನ ಭಾಷಾವೈವಿಧ್ಯತೆಗಳ ಅರಿವು.

ಶಬ್ದಕೋಶ

ಅಕ್ಕಸಾಲಿಗ =ಚಿನ್ನದ ಕೆಲಸ ಮಾಡುವವನು
ಸೂತ್ಕ =ಮೈಲಿಗೆ
ಜರಿ =ಹೀಯಾಳಿಸು

ವ್ಯಾಕರಣ

ನಾಮವಾಚಕಗಳು:ನಾಮವಾಚಕ ಪ್ರಕೃತಿಗಳನ್ನು ವಸ್ತುವಾಚಕ, ಗುಣವಾಚಕ, ಸಂಖ್ಯಾವಾಚಕ,ದಿಗ್ವಾಚಕ ಎಂಬುದಾಗಿ ಅನೇಕ ಗುಂಪುಗಳಾಗಿ ವಿಂಗಡಿಸಬಹುದು. ಇದರಲ್ಲಿ ವಸ್ತುವಾಚಕವೂ ಸಹ ಒಂದು. ವಸ್ತುವಾಚಕಗಳನ್ನು ರೂಢನಾಮ , ಅಂಕಿತನಾಮ, ಅನ್ವರ್ಥನಾಮಗಳೆಂದು ಮೂರು ವಿಭಾಗ ಮಾಡಲಾಗಿದೆ.

  • ರೂಢನಾಮ: ನದಿ , ಮೇಜು, ದೇಶ.
  • ಅಂಕಿತನಾಮ: ರಮೇಶ,ಉಡುಪಿ,ಹಿಮಾಲಯ.
  • ಅನ್ವರ್ಥನಾಮ: ವ್ಯಾಪಾರಿ,ವಿದ್ಯಾರ್ಥಿ,ಶಿಕ್ಷಕ.

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ