"ಶಿಕ್ಷಕರ ಲೇಖನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೬ ನೇ ಸಾಲು: ೧೬ ನೇ ಸಾಲು:
 
==ರವಿ ಆಹೇರಿ,(GHS ಕೊಣನಕೇರಿ,ಹಾವೇರಿ ಜಿಲ್ಲೆ ) ಬ್ಲಾಗ್ ನ ಸಂಪನ್ಮೂಲಗಳು ==
 
==ರವಿ ಆಹೇರಿ,(GHS ಕೊಣನಕೇರಿ,ಹಾವೇರಿ ಜಿಲ್ಲೆ ) ಬ್ಲಾಗ್ ನ ಸಂಪನ್ಮೂಲಗಳು ==
  
# ಬ್ಲಾಗ್ ನಿಂದ ಇತಿಹಾಸ ಸಂಪನ್ಮೂಲವನ್ನುವೀಕ್ಷಿಸಲು [http://history8-12.blogspot.in ಈ ಲಿಂಕನ್ನು ಕ್ಲಿಕ್ಕಿಸಿ]<br>
+
 
# ಬ್ಲಾಗ್ ನಿಂದ CCE ಸಂಪನ್ಮೂಲವನ್ನುವೀಕ್ಷಿಸಲು [http://socialsciencecce.blogspot.com ಈ ಲಿಂಕನ್ನು ಕ್ಲಿಕ್ಕಿಸಿ]<br>
+
# [http://socialsciencecce.blogspot.com/ '''CCE''']<br>
# ಬ್ಲಾಗ್ ನಿಂದ ರಾಜ್ಯ ಶಾಸ್ತ್ರ ಸಂಪನ್ಮೂಲವನ್ನು ವೀಕ್ಷಿಸಲು [http://polscience8-12.blogspot.in/ ಈ ಲಿಂಕನ್ನು ಕ್ಲಿಕ್ಕಿಸಿ]<br>
+
# [http://history8-12.blogspot.in/ '''ಇತಿಹಾಸ''']<br>
 +
# [http://polscience8-12.blogspot.in/ '''ರಾಜ್ಯಶಾಸ್ತ್ರ''']<br>
 +
# [http://sociology8-12.blogspot.in '''ಸಮಾಜಶಾಸ್ತ್ರ''']<br>
 +
# [http://geography8-12.blogspot.in/ '''ಭೂಗೋಳಶಾಸ್ತ್ರ''']<br>
 +
# [http://economics8-12.blogspot.in/ '''ಅರ್ಥಶಾಸ್ತ್ರ''']<br>
 +
# [http://commerce8-12.blogspot.in '''ವ್ಯವಹಾರ ಅಧ್ಯಯನ''']<br>
 +
# [http://socialscienceview.blogspot.com/'''ಚಿಂತಕರ ಚಾವಡಿ'''ಕ್ಲಿಕ್ಕಿಸಿ] <br>
  
 
==ಬಿ.ಎಮ್.ತಿಪ್ಪೇಸ್ವಾಮಿ  (ಸರಕಾರಿ ಪ್ರೌಢಶಾಲೆ ಜಿ.ಆರ್.ಹಳ್ಳಿ, ಚಿತ್ರದುರ್ಗ) ಇವರು ಹಂಚಿಕೊಂಡಿರುವ ಸಮೂಹ ಗೀತೆ==
 
==ಬಿ.ಎಮ್.ತಿಪ್ಪೇಸ್ವಾಮಿ  (ಸರಕಾರಿ ಪ್ರೌಢಶಾಲೆ ಜಿ.ಆರ್.ಹಳ್ಳಿ, ಚಿತ್ರದುರ್ಗ) ಇವರು ಹಂಚಿಕೊಂಡಿರುವ ಸಮೂಹ ಗೀತೆ==

೧೧:೪೧, ೬ ಮಾರ್ಚ್ ೨೦೧೪ ನಂತೆ ಪರಿಷ್ಕರಣೆ

ಮಹಾಬಲೇಶ್ವರ ಭಾಗ್ವತ್,GHS ಕೆದೂರ್ , ಉಡುಪಿ ರಾಷ್ಟ್ರದ ಶೈಕ್ಷಣಿಕ ಮಂದಿರದಲ್ಲಿ ಎರಡು ದಿನ (ಡಿಸೆಂಬರ್ 30-31,2013)

  1. ಮಹಾಬಲೇಶ್ವರ ಭಾಗ್ವತ್ ರವರು ತಮಗಾದ ಎರಡು ದಿನದ ಅನುಭವವನ್ನು ತಮ್ಮ ಬ್ಲಾಗ್ ನಲ್ಲಿ ಹಂಚಿಕೊಂಡಿದ್ದಾರೆ,ಬ್ಲಾಗ್ ಅನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ
  2. ಉಡುಪಿ ಜಿಲ್ಲೆಯ ಸಹಶಿಕ್ಷಕರಾದ"ಮಹಾಬಲೇಶ್ವರ ಭಾಗ್ವತ್" ರವರು ದೇಶದ ರಾಜಧಾನಿಯಲ್ಲಿನ ಶೈಕ್ಷಣಿಕ ಮಂದಿರವನ್ನು ಹೊಕ್ಕಿ ಬಂದಿದ್ದಾರೆ,ಪ್ರತಿ ವರ್ಷ ICT ಯನ್ನು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಅಳವಡಿಸುವ ಬಗ್ಗೆ, ಇದರ ಬಗೆಗಿನ ಸಂಪೂರ್ಣವಾದ ವಿವರವನ್ನು ಓದಲು ಲಿಂಕನ್ನು ಕ್ಲಿಕ್ಕಿಸಿ

ರವಿ ಆಹೇರಿ,(GHS ಕೊಣನಕೇರಿ,ಹಾವೇರಿ ಜಿಲ್ಲೆ ) ಬ್ಲಾಗ್ ನ ಸಂಪನ್ಮೂಲಗಳು

  1. CCE
  2. ಇತಿಹಾಸ
  3. ರಾಜ್ಯಶಾಸ್ತ್ರ
  4. ಸಮಾಜಶಾಸ್ತ್ರ
  5. ಭೂಗೋಳಶಾಸ್ತ್ರ
  6. ಅರ್ಥಶಾಸ್ತ್ರ
  7. ವ್ಯವಹಾರ ಅಧ್ಯಯನ
  8. ಚಿಂತಕರ ಚಾವಡಿಕ್ಲಿಕ್ಕಿಸಿ

ಬಿ.ಎಮ್.ತಿಪ್ಪೇಸ್ವಾಮಿ (ಸರಕಾರಿ ಪ್ರೌಢಶಾಲೆ ಜಿ.ಆರ್.ಹಳ್ಳಿ, ಚಿತ್ರದುರ್ಗ) ಇವರು ಹಂಚಿಕೊಂಡಿರುವ ಸಮೂಹ ಗೀತೆ

ಬನ್ನೀರೋ ... ಬನ್ನಿರೋ ... ಬನ್ನಿರೋ...

ಹೊಸನಾಡ ಕಟ್ಟೋಣ ಬನ್ನಿರೋ

ಈ ನೆಲದ ಋಣವ ತೀರಿಸೋಣ ಬನ್ನಿರೋ !ಪ!

ಸ್ವಾತಂತ್ರ್ಯಕೆ ನೇಣುಗಂಬ ಏರಿದವರ

ನೆಲಕಾಗಿ ನೆತ್ತರವ ಸುರಿಸಿದವರ

ಕನಸುಗಳ ಕೆಂಪಾಗಿ ಮಾಡಿರೋ

ಈ ತ್ಯಾಗ ಬಲಿದಾನಗಳ ತಿಳಿಯಿರೋ !ಪ!

ಮೋಸ ಜಾಲದಲ್ಲಿ ಸಿಕ್ಕಿ ಸೋತವರ

ಮತನೀಡಿ ಮತಿಹೀನರಾದವರ

ಕೈ ಹಿಡಿದು ನೀವು ಮೇಲಕೆತ್ತಿರೋ

ಹೆಗಲಿಗೆ ಹೆಗಲ ಕೊಟ್ಟು ನಡೆಯಿರೋ !ಪ!

ಮಣ್ಣಲ್ಲಿ ಮಣ್ಣಾಗಿ ಹಣ್ಣಾದವರ

ಕಸವನ್ನೇ ಹೊತ್ತು ತಿಂದು ಬೆಳದವರವ

ಬೆವರಿನ ಬೆಲೆಯ ನೀವು ಕಾಣರೋ

ದುಡಿಯುವವರ ದ್ವನಿಯಾಗಿ ನಿಲ್ಲಿರೋ !ಪ!

ಬನ್ನೀರೋ ... ಬನ್ನಿರೋ ... ಬನ್ನಿರೋ...

ಹೊಸನಾಡ ಕಟ್ಟೋಣ ಬನ್ನಿರೋ

ಈ ನೆಲದ ಋಣವ ತೀರಿಸೋಣ ಬನ್ನಿರೋ !ಪ!


ವಿಜ್ಞಾನವೆಂಬ ದೈತ್ಯಶಕ್ತಿ

ದೊಡ್ಡಮಲ್ಲಪ್ಪ. ಎಸ್, ಪ್ರಾಚಾರ್ಯರು, ಡಯಟ್ - ಕೂಡಿಗೆ

ವಿಜ್ಞಾನವೆಂಬುದೊಂದು ವರಪ್ರಸಾದ, ಇದನು ಬಳಸಬೇಕು, ಮನುಕುಲನ ಉದ್ಧಾರಕೆ, ಒಳ್ಳೆಯ ಮನಸಿನಲಿ.

ವಿಜ್ಞಾನವಿಲ್ಲದೇ ಜೀವನವಿಲ್ಲ, ಬೆಳಗಿನಿಂದ ರಾತ್ರಿಯವರೆಗೆ, ವಿಜ್ಞಾನದ ಬಳಕೆಯ ಮೇಲೆ, ನಿಂತಿದೆ ಮಾನವನ ಜೀವನ.

ಒಂದು ಸೂಜಿಯಂದ ಹಿಡಿದು, ದೊಡ್ಡ ಕಾರ್ಖಾನೆಯ ವಸ್ತುಗಳವರೆಗೆ, ಬರುವವು ವಿಜ್ಞಾನದ ಪರಧಿಯೊಳಗೆ, ಆದಕಾರಣ ವಿಜಾ Ð ನ ಅನಿವಾರ್ಯ ನಮಗೆ.

ವಿಜ್ಞಾನದಿಂದ ಹಲವು ಸಮಸ್ಯೆಗಳಿಗೆ, ಪರಿಹಾರ ಹುಡುಕಬೇಕು, ಪರ್ಯಾಯವಾಗಿ ವಿದ್ಯುತ್ಛ್ಕ್ತಿ ತಯಾರಿಸುವ ಕೌಶಲ ಬೇಕು.

ಪುನರ್ ಇಂಧನ ಬಳಕೆಗೆ, ಪರ್ಯಾಯ ದಾರಿ ಹುಡುಕಬೇಕು, ಪೆಟ್ರೋಲ್ ಡೀಸೆಲ್ ದ್ರವಗಳಿಗೆ, ಪರ್ಯಾಯ ವ್ಯವಸ್ಥೆ ಹುಡುಕಬೇಕು.

ಶಕ್ತಿ ಹುಡುಕಿ ಶಕ್ತಿ ಬಳಸಿ, ಶಕ್ತಿಯನು ಮುಮದುವರೆಸಬೇಕು, ಶಕ್ತಿ ತಯಾರಿಸುವ ಮೂಲಗಳನು, ಹುಡುಕಬೇಕು ಕುತೂಹಲದಿ.

ಹಲವು ದಿನಗಳಿಂದ, ಹಲವು ವರ್ಷಗಳವರೆಗೆ, ಹುಡುಕಿ ಶೋಧಿಸಿ, ಪ್ರಕೃತಿಯ ಬೇದಿಸಿ, ಹೊರತೆಗೆಯಬೇಕು ಹೊಸ ಅವಿಷ್ಕಾರವ.

ವಿಜ್ಞಾನವೆಂಬುದೊಂದು, ಕ್ರಮವರಿತ ಜ್ಞಾನ, ವಿಶಿಷ್ಠವಾದ ಜ್ಞಾನ, ಇದರ ಜಾಡು ಹಿಡಿದು ಸಾಗಬೇಕು.

ವಿಜ್ಞಾನ ಯಾರ ಸ್ವತ್ತಲ್ಲ, ಇದುವೇ ಸಂಶೋದನಾ ಪ್ರವೃತ್ತಿ ಹೊಂದಿದ, ಕುತೂಹಲ ಅನ್ವೇಷಣೆಯ ಹಾದಿಯಲಿ, ಸಾಗಿದ ಜನಾಂಗದ ಆಸ್ತಿ.

ವಿಜ್ಞಾನ ಬಳಸಬೇಕು, ಇತಿಮಿತಿ ಎ ಯೊಳಗೆ, ತಪ್ಪಿದಲ್ಲಿ ಅವಘಡ - ಅನಾ ಎ ಹುತ, ಕಟ್ಟಟ್ಟ ಬುತ್ತಿ ಮಾನವನ ಜೀವಕೆ.

ವಿಜ್ಞಾನ ಅಜ್ಞಾನಕೆ ದಾರಿಯಾಗದೇ, ಸೋಮಾರಿಗಳಿಗೆ ಅಯುಧ ಎ ವಾಗದೇ, ಮಾನವನ ಜೀವನ ಸುಧಾರಣೆಗೆ, ಆಗಬೇಕು ಜೀವನ ಸಂಜೀವಿನಿ.

ವಿಜ್ಞಾನ ಬೇಕು ಎಲ್ಲರಿಗೂ, ಇದರ ಸದ್ಭಳಕೆಯಿಂದ, ಮನುಕುಲ ಉದ್ಧಾರವಾಗಬೇಕು, ಮನುಕುಲ ಅಭಿವೃದ್ದಿಯಾಗಬೇಕು.

ವಿದ್ಯಾರ್ಥಿಗಳು ಮರಿವಿಜ್ಞಾನಿಗಳಾಗಬೇಕು, ವಿದ್ಯಾರ್ಥಿಗಳು ಬಾಲವಿಜ್ಞಾನಿಗಳಾಗಬೇಕು, ಇವರುಗಳು ಮುಂದೆ ನಾಡಿನ, ಪ್ರಸಿದ್ಧ ನಾಗರಿಕರಾಗಿ ನಾಡಿಗೆ ಹೆಸರು ತರಬೇಕು.

ವಿಜ್ಞಾನ ª ಂಬುದೊಂದು ದೈತ್ಯ ಶಕ್ತಿ, ಇದನು ಬಳಸಬೇಕು, ಮನುಕುಲದ ಉದ್ಧಾರಕೆ, ಮಾನವನ ಇತಿಮಿತಿಯೊಳಗೆ.

ವಿಜ್ಞಾನದಿಂದ ಕೃಷಿ ಉತ್ಪನ್ನ ಹೆಚ್ಚಿ, ಅಹಾರ ಸಮಸ್ಯೆ ನೀಗಬೇಕು, ನಿರುದ್ಯೋಗ ಸಮಸ್ಯೆ ಪರಿಹಾರಕೆ, ದೊರಕಬೇಕು ಹಲವು ಅವಕಾಶಗಳು.

ಪರಿಸರ ಅಬಿವೃದಿಯಾಗಿ, ಹಸಿರುಕ್ರಾಂತಿಯಾಗಬೇಕು, ನಾಡಿನ - ಹಿರಿಮೆಗರಿಮೆ, ಬೆಳಗಬೆಕು ವಿದೇಶಗಳಲಿ.