"Test ಬೆಡಗಿನ ತಾಣ ಜಯಪುರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೧೬ ನೇ ಸಾಲು: ೧೧೬ ನೇ ಸಾಲು:
 
===ಚಟುವಟಿಕೆ===
 
===ಚಟುವಟಿಕೆ===
 
#'''ಚಟುವಟಿಕೆಯ ಹೆಸರು;'''ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು  
 
#'''ಚಟುವಟಿಕೆಯ ಹೆಸರು;'''ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು  
2. ವಿಧಾನ/ಪ್ರಕ್ರಿಯೆ: ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು  
+
#''' ವಿಧಾನ/ಪ್ರಕ್ರಿಯೆ:''' ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು  
3. ಸಮಯ:15ನಿಮಿಷಗಳು  
+
#'''ಸಮಯ:'''15ನಿಮಿಷಗಳು  
4. ವೃದ್ದಿಗೊಳ್ಳುವ ಸಾಮರ್ಥ್ಯಗಳು ; ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
+
#'''ವೃದ್ದಿಗೊಳ್ಳುವ ;''' ಸಾಮರ್ಥ್ಯಗಳು ; ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
5. ಹಂತಗಳು:ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ  ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15  -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆಹೇಳಲು ತಿಳಿಸುವುದು  ,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ  ಪುನಃ ತರಗತಿಯಲ್ಲಿ ಕತೆ ಹೇಳಬೇಕು . ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,  
+
#'''ಹಂತಗಳು:'''ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ  ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15  -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆಹೇಳಲು ತಿಳಿಸುವುದು  ,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ  ಪುನಃ ತರಗತಿಯಲ್ಲಿ ಕತೆ ಹೇಳಬೇಕು . ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,  
6. ಸಾಮಗ್ರಿಗಳು/ಸಂಪನ್ಮೂಲಗಳು; 10-15 ಭಾವಚಿತ್ರಗಳು, ಮಾದರಿ ಕತೆ (ಮಕ್ಕಳಿಗೆ ಮಾದರಿ ತೋರಿಸಿದರೆ ಬೇಗನೇ ಸಿದ್ದರಾಗುತ್ತಾರೆ)  
+
#'''ಸಾಮಗ್ರಿಗಳು/ಸಂಪನ್ಮೂಲಗಳು;''' 10-15 ಭಾವಚಿತ್ರಗಳು, ಮಾದರಿ ಕತೆ (ಮಕ್ಕಳಿಗೆ ಮಾದರಿ ತೋರಿಸಿದರೆ ಬೇಗನೇ ಸಿದ್ದರಾಗುತ್ತಾರೆ)  
7. ಚರ್ಚಾ ಪ್ರಶ್ನೆಗಳು;
+
#'''ಚರ್ಚಾ ಪ್ರಶ್ನೆಗಳು;'''
 
1. ಈ ಕಥೆಯಿಂದ ಏನನ್ನು ಕಲಿತುಕೊಂಡಿರಿ ? (ನೀತಿ,ಮೌಲ್ಯ)
 
1. ಈ ಕಥೆಯಿಂದ ಏನನ್ನು ಕಲಿತುಕೊಂಡಿರಿ ? (ನೀತಿ,ಮೌಲ್ಯ)
 
2. ಕತೆ ಹೇಳುವಾಗಿನ ತಪ್ಪು ಉಚ್ಚಾರಣೆಯ ಪದಗಳಾವುವು ?  
 
2. ಕತೆ ಹೇಳುವಾಗಿನ ತಪ್ಪು ಉಚ್ಚಾರಣೆಯ ಪದಗಳಾವುವು ?  

೦೬:೦೨, ೭ ಅಕ್ಟೋಬರ್ ೨೦೧೬ ನಂತೆ ಪರಿಷ್ಕರಣೆ

ಪಠ್ಯದ ಗುರಿ ಮತ್ತು ಉದ್ದೇಶ

  • ಪ್ರವಾಸ ಸಾಹಿತ್ಯದ ಪರಿಚಯ
  • ಭಾರತೀಯ ವಿವಿಧ ಸಂಸ್ಕೃತಿಯ ಪರಿಚಯ
  • ಮೇರು ಕವಿಯ ಪರಿಚಯ
  • ಸ್ಥಳ ಪರಿಚಯದ ಮೂಲಕ ಭಾಷೆ ಬರವಣಿಗೆ ಮತ್ತು ಓದು
  • ಪ್ರಾದೇಶಿಕ ಭಾಷೆಯ ಪರಿಚಯ

ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರ ಪರಿಚಯ

ಕನ್ನಡ ವಿಷಯ ವಿಶ್ವಕೋಶದಲ್ಲಿನ ಪ್ರವಾಸ ಕಥನ ಲೇಖನವನ್ನು ಓದಲು ಇಲ್ಲಿ ಕಿಕ್ಕಿಸಿರಿ

ಲೇಖಕರ ಪರಿಚಯ

  • ಪೂರ್ಣ ಹೆಸರು: ಕೋಟ ಶಿವರಾಮ ಕಾರಂತ
  • ಜನನ:ಅಕ್ಟೋಬರ್ ೧೦, ೧೯೦೨,ಸಾಲಿಗ್ರಾಮ, ಉಡುಪಿ ಜಿಲ್ಲೆ
  • ನಿಧನ:ಡಿಸೆಂಬರ್ ೯,೧೯೯೭ (ಮಣಿಪಾಲ, ಉಡುಪಿ)
  • ವೃತ್ತಿ:ಲೇಖಕರು
  • ಸಾಹಿತ್ಯ ಪ್ರಕಾರಗಳು:ಕಥೆ, ಕವನ, ಕಾದಂಬರಿ, ನಾಟಕ, ಯಕ್ಷಗಾನ
  • ಸಾಹಿತ್ಯ ಶೈಲಿ:ನವೋದಯ
  • ಆಕರ ಗ್ರಂಥ :-ಅಬೂವಿನಿಂದ ಬರಾಮಕ್ಕೆ
  • ಪ್ರಕಟಿತ ಕೃತಿಗಳು
  • ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಪ್ರಕಟಿಸಿರುವ 'ಸಾಲುದೀಪಗಳು' ಕೃತಿಯಲ್ಲಿನ ಕಾರಂತರ ಮಾಹಿತಿ ಮತ್ತು ಸಂಪೂರ್ಣ ಕೃತಿಯ ಪಟ್ಟಿಯನ್ನು ವೀಕ್ಷಿಸಲು (ಸಾಹಿತ್ಯ ಪಥ) ಇಲ್ಲಿ ಕ್ಲಿಕ್ಕಿಸಿರಿ
  • ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಪ್ರಕಟಿಸಿರುವ 'ಸಾಲುದೀಪಗಳು' ಕೃತಿಯಲ್ಲಿನ ಕಾರಂತರ ಮಾಹಿತಿ ಮತ್ತು ಸಂಪೂರ್ಣ ಜೀವನ ಪಥದ ಮಾಹಿತಿಯ ಬಗ್ಗೆ ತಿಳಿಯಲು ಕ್ಲಿಕ್ಕಿಸಿರಿ
  • ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಪ್ರಕಟಿಸಿರುವ 'ಸಾಲುದೀಪಗಳು' ಕೃತಿಯಲ್ಲಿನ ಕಾರಂತರ ಮಾಹಿತಿ ಮತ್ತು ಸಂಪೂರ್ಣ ಜೀವನದ ಬಗ್ಗೆ ಟಿ ಪಿ ಅಶೋಕ ರವರ ಲೇಖನವನ್ನು ಓದಲು ಇಲ್ಲಿ ಕ್ಲಿಕ್ಕಿಸಿರಿ
  • ಕಾರಂತರ ವಿವಿಧ ಚಿತ್ರಗಳನ್ನು ಇಲ್ಲಿ ವೀಕ್ಷಿಸಿರಿ
  • ಕಾರಂತರ ಉಚಿತ ಪುಸ್ತಕಗಳನ್ನು ನೋಡಲು ಮತ್ತು ಡೌನ್‌ಲೋಡ್ ಮಾಡಲು ಇಲ್ಲ ನೋಡಿರಿ
  • ಕಾರಂತರ ವಿಶೇಷ ಮಾಹಿತಿಯ ಒಪ್ಪಣನ ಒಪ್ಪಂಗೊ ಗಾಗಿ ಇಲ್ಲಿ ಕ್ಲಿಕ್ಕಿಸಿರಿ

ಕಾರಂತರ ಹೆಚ್ಚಿನ ಮಾಹಿತಿಯ ವೀಡಿಯೋಗಳು

ನೀಡಿರುವ ಗದ್ಯಭಾಗದ ಹಿನ್ನಲೆ

`ದೇಶ ̧ಸುತ್ತು, ಕೋಶ ಓದು' ಎಂಬ ಗಾದೆಯನ್ನು ಕಾರಂತರಂಥವರನ್ನು ಗಮನಿಸಿಯೇ ಕಟ್ಟಿದ್ದಾರೋ ಏನೋ, ಕಾರಂತರ ವ್ಯಕ್ತಿತ್ವದ ಬಹು ವಿಶಿಷ್ಟ ಅಂಶವೇ ಇದೆಂದು ತೋರುತ್ತದೆ. ಅವರಿಗೆ ಬದುಕಿನೊಂದಿಗೆ ಇಂದ್ರಿಯ ಗ್ರಾಹ್ಯ ನಿಕಟ ̧ಸಂಪರ್ಕವೂ ಬೇಕು;ಅದನ್ನು ವೈಜ್ಞಾನಿಕವಾಗಿ,ಬೌದ್ಧಿಕವಾಗಿ ನಿಜಗೊಳಿಸುವ ಆಳವಾದ ಓದೂ ಬೇಕು. ಕಾರಂತರ ಪ್ರವಾಸ ಗ್ರಂಥಗಳು ಕನ್ನಡ ಗದ್ಯದಲ್ಲಿ ಪ್ರಮುಖ ಆಕರ್ಷಣೆಗಳು.`ಅಬೂವಿನಿಂದ ಬರಾಮಕ್ಕೆ',`ಅಪೂರ್ವ ಪಶ್ಚಿಮ', ಪೂರ್ವದಿಂದ ಅತ್ಯಪೂರ್ವಕ್ಕೆ' ಮುಂತಾದ ಕೃತಿಗಳು ನಮಗೆ ನೀಡುವ ಮಾಹಿತಿ, ಆ ಮಾಹಿತಿಯ ಬಗ್ಗೆ ಹುಟ್ಟಿಸುವ ಕುತೂಹಲ ಮುಖ್ಯವಾದದ್ದು. ಕಾರಂತರ ಪ್ರವಾಸ ಕಥನಗಳನ್ನು ಓದುವುದೆಂದರೆ ಅವರೊಂದಿಗೆ ಪ್ರವಾಸ ಮಾಡಿದಂತೆಯೇ, ಒಂದು ಪ್ರದೇಶದ ಚಾರಿತ್ರಿಕ, ಭೌಗೋಳಿಕ ̧ಸಾಂಸ್ಕೃತಿಕ ವಿವರಗಳು, ಅಲ್ಲಿನ ̧ಸಸ್ಯ, ಪ್ರಾಣಿ ಜಗತ್ತು, ಜನಜೀವನ ಯಾವುದೂ ಕಾರಂತರ ಕಣ್ಣು ತಪ್ಪಿಸಿಕೊಳ್ಳುವುದಿಲ್ಲ. ಕಾರಂತರ ಕೃತಿಗಳಲ್ಲಿ ಈ ಮಾಹಿತಿಗಳಿದ್ದರೂ ಕೇವಲ ದಾಖಲೆಗಳಾಗಿ ಮೂಡಿ ಬರದೆ ಒಟ್ಟು ಜೀವನಕ್ಕೆ ಅನ್ವಯವಾಗುವಂತೆಂಯೇ ಮೂಡಿಬರುವುದರಿಂದ ಮಹತ್ತ್ವಪೂರ್ಣವೆನಿಸುತ್ತದೆ. ಕಾರಂತರು ಪ್ರತ್ಯಕ್ಷ ಕಂಡಿದ್ದನ್ನು ಪ್ರಾಮಾಣಿಸಿ ನೋಡುವಂಥವರು. ಆದ್ದರಿಂದಲೇ ಅವರಿಗೆ ಗಾಸಿಪ್ಪುಗಳೂ, ಕಾಡು ಹರಟೆಗಳೂ ̧ಸೇರುವುದಿಲ್ಲ. ಅವರಿಗೆ ಹಾಸ್ಯಪ್ರಜ್ಞೆ ಇಲ್ಲವೆಂದಲ್ಲ. ಆದರೆ ಅದು ಕೇವಲ ಜೋಕುಗಳಲ್ಲಿ ಪರ್ಯವಸಾನಗೊಳ್ಳುವ ಹಾಗೆ ಪ್ರಜ್ಞೆಯಲ್ಲ. ಕಾರಂತರ ಹಾಸ್ಯಕ್ಕಿಂತ ವ್ಯಂಗ್ಯವೇ ಅತ್ಯಂತ ಕಟುವಾದದ್ದು. ಸಮಾಜದ ಮೌಢ್ಯವನ್ನು ಬಯಲಿಗೆಳೆಯಲು ಕಾರಂತರ ವ್ಯಂಗ್ಯ, ಚಾಟಿ ಏಟಿನಂತೆ ಬಳಕೆಯಾಗುತ್ತದೆ. ತಾವೇ ಹೊರಡಿಸುತ್ತಿದ್ದ `ವಸಂತ' ಪತ್ರಿಕೆಯಲ್ಲಿ, `ಗ್ನಾನ',`ದೇವದೂತರು', ಮೊದಲಾದ ಕೃತಿಗಳಲ್ಲಿ ಇದನ್ನು ಗಮನಿಸಬಹುದು. ಆದರೆ ಕಾರಂತರದು ಕೇವಲ ಮೂರ್ತಿಬಂಜಕ ಪ್ರವೃತ್ತಿ ಅಲ್ಲವಾದ್ದರಿಂದ ಅವರಿಗೆ ವ್ಯಂಗ್ಯವೇ ಒಂದು ಮೌಲ್ಯವಾಗಲಿಲ್ಲ.`ಹಳ್ಳಿಯ ಹತ್ತು ಸಮಸ್ತರು',`ಮೈಲಿಕಲ್ಲಿನೊಡನೆ ಮಾತುಕತೆಗಳು' ಕೃತಿಗಳಲ್ಲಿ ಕಾರಂತರ ವ್ಯಕ್ತಿತ್ವದ ಮತ್ತೊಂದು ಪದರ ವ್ಯಕ್ತವಾಗುವುದನ್ನು ಕಂಡಾಗ `ಕಾರಂತರು ಇದೇ' ಎಂದು ಹಣೆಪಟ್ಟಿ ಹಚ್ಚಾಗುವುದಿಲ್ಲ ಎಂಬುದನ್ನು ಗುರುತಿಸಿಕೊಳ್ಳುತ್ತೇವೆ.

ಪ್ರಸ್ತುತ ಗದ್ಯ ಪೀಠಿಕೆ

ಈ ಪಠ್ಯ ಭಾಗದಲ್ಲಿ ಲೇಖಕರು ರಾಜಸ್ಥಾನದ ತಮ್ಮ ಪ್ರವಾಸದ ಅನುಭವವನ್ನು ತಮ್ಮ ಸ್ವ ಅನುಭವದಂತೆ ಪಠ್ಯದ ಮೂಲಕ ತಿಳಿಸಿದ್ದಾರೆ? . ಭಾರತದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ನಗರಗಳಲ್ಲಿ ಒಂದಾದ ಜಯಪುರದ ಅಂದ ಚಂದ,ಅಲ್ಲಿನ ಜನರ ಉಡುಗೆ-ತೊಡುಗೆ,ಐತಿಹಾಸಿಕ ವೈಭವ ಜಾನಪದ ಕಲೆಗಳ ಸೊಗಸು,ಮೊದಲಾದ ವಿಚಾರಗಳ ಬಗ್ಗೆ ಲೇಖಕರು ತಿಳಿಸಿದ್ದಾರೆ. ಹಾಗೆಯೇ ಜಯಪುರದ ರಾಜರ ವೈಜ್ಞಾನಿಕತೆಗೆ ಸಾಕ್ಷಿಯಾದ ಜಂತ್ರ-ಮಂತ್ರ ಬಯಲು ಪ್ರಯೋಗಾಲಯದ ಬಗ್ಗೆ ವಿಶೇಷ ಉಲ್ಲೇಖವಿದೆ.

ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

ಜಯಪುರ ಭಾರತದ ಉಳಿದ ನಗರಗಳಿಗಿಂತ ಸಾಂಸ್ಕೃತಿಕ ಹಾಗೂ ರಾಜಕೀಯ ಕಾರಣಗಳಿಂದಾಗಿ ವಿಶ್ವದ ಗಮನ ಸೆಳೆದ ನಗರವಾಗಿದೆ. ಕಲೆಯ ಆಗರವಾದ ಜಯಪುರ ಪ್ರವಾಸಿಗರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ. ಅಲ್ಲಿನ ಜನರ ಉಡುಗೆ-ತೊಡಿಗೆ,ಸಂಪ್ರದಾಯಗಳು , ಕಲಾಸಕ್ತಿ ಹಾಗೂ ಜಯಪುರದ ಪ್ರಾಕೃತಿಕ ಸೌಂದರ್ಯ ಮತ್ತು ವಾಸ್ತುಶಿಲ್ಪ,ಐತಿಹಾಸಿಕ ಮಹತ್ವವನ್ನು ತಿಳಿಸುತ್ತವೆ. ಹಾಗೆಯೇ ಜಯಪುರದ ರಾಜರ ವೈಜ್ಞಾನಿಕತೆಗೆ ಸಾಕ್ಷಿಯಾದ ಜಂತ್ರ-ಮಂತ್ರ ಬಯಲು ಪ್ರಯೋಗಾಲಯದ ಬಗ್ಗೆ ವಿಶೇಷ ಉಲ್ಲೇಖವಿದೆ. ಪ್ರವಾಸ ಸಾಹಿತ್ಯದ ಬಗ್ಗೆ ಅರಿವನ್ನು ಮೂಡಿಸುವುದು ತಿಳಿಸಿಕೊಡುವುದೇ ಪ್ರಕೃತ ಗದ್ಯ ಭಾಗದ ಮುಖ್ಯ ಉದ್ದೇಶವಾಗಿದೆ. <mm>Flash</mm>

ಶಿಕ್ಷಕರಿಗೆ ಸಂಪನ್ಮೂಲ

ಪ್ರಸ್ತುತ ಮಾಡಬೇಕಾದ ಪಾಠದ ವಿವರ

ಹಿನ್ನಲೆ>ಪ್ರಸ್ತುತ>ನಂತರ ಕ್ಷೇತ್ರ ಪರಿಚಯ ಗ್ರಂಥಗಳಲ್ಲಿ ಶಿವರಾಮ ಕಾರಂತರ ಅಬುವಿನಿಂದ ಬರಾಮಕ್ಕೆ ಒಂದು ಅಪೂರ್ವ ಕೃತಿ. ಅಬು, ಅಜ್ಮೀರ, ಪುಷ್ಕರ, ಜಯಪುರ, ಸಿಮ್ಲಾ, ಆಗ್ರ, ಕಾಶಿ, ಡಾಲ್ಮಿಯಾ, ಕಲ್ಕತ್ತ ಮತ್ತು ಬರಾಮಗಳಲ್ಲಿ ಸಂಚರಿಸಿ ಅಲ್ಲಿನ ನಿಸರ್ಗ ಮತ್ತು ಸಂಗೀತ, ಸಾಹಿತ್ಯ, ಜನಜೀವನಾದಿಗಳನ್ನು ಈ ಗ್ರಂಥದಲ್ಲಿ ಕಂಡರಿಸಿದ್ದಾರೆ. ಡಾ.ಕೋಟ ಶಿವರಾಮ ಕಾರಂತರು ತಮ್ಮ ಸ್ನೇಹಿತರ ಜೊತೆ ರಾಜಸ್ಥಾನದ ರಾಜಧಾನಿ ಜಯಪುರದ ಐತಿಹಾಸಿಕ ಸ್ಥಳಗಳಿಗೆ ಭೇಟಿಕೊಟ್ಟು ಪಡೆದ ಅನುಭವವನ್ನು ಈ 'ಅಬೂವಿನಿಂದ ಬರಾಮಕ್ಕೆ' ಪ್ರವಾಸ ಕಥನದಲ್ಲಿ ಸವಿವರವಾಗಿ ವಿವರಿಸಿದ್ದಾರೆ (ಪುಟದ ಸಂಖ್ಯೆ, ವಿಭಾಗ ಮತ್ತು ಪ್ರಾಮುಖ್ಯತೆ ಇತ್ಯಾದಿ)

ಪಾಠದ ಬೆಳವಣಿಗೆ

ಅವಧಿ-೧

ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-1

ಗದ್ಯ ಭಾಗದ ಲಿಂಕ್ ನೀಡಬಹುದು?

ವಿವರಣೆ

ಜಯಪುರ ಲೇಖಕರ ಪಾಲಿಗೆ ಹೊಸತಾಗಿರಲಿಲ್ಲ. ಹದಿನೈದು ವರ್ಷಗಳ ಹಿಂದೊಮ್ಮೆ ಹೋಗಿದ್ದರು. ಈ ಬಾರಿ ಲೇಖಕರು ಮತ್ತು ಶ್ರೀಪತಿಯೂ ರೈಲಿನಿಂದ ಇಳಿದಾಗ ಬೆಳಗಿನ ಹನ್ನೊಂದು ಗಂಟೆಯ ಬಿಸಿಲು ಬಡಿಯುತ್ತಿತ್ತು. ಅವರ ಮಿತ್ರರಾದ ರೈ ಗಳು ನಿಲ್ದಾಣಕ್ಕೆ ಬಂದು ಅವರಿಗಾಗಿ ಕಾದಿದ್ದರು. ಅವರನ್ನು ಊರ ಹೊರಗಿನ ಅವರ ಮನೆಗೆ ಕರೆದುಕೊಂಡುಹೋದರು. ಹೊರಗಡೆ ನಾಲ್ಕು ಸುತ್ತಲೂ ಉಸುಬು ಹರಡಿದ್ದ ಮರಿಭೂಮಿಯಲ್ಲಿ ಅವರ ಮನೆಯಿತ್ತು. ಅಲ್ಲಿ ಮಧ್ಯಾಹ್ನದ ವೇಳೆ ಸ್ನಾನಕ್ಕೆ ನೀರುಕಾಯಿಸುವ ಅಗತ್ಯವಿರಲಿಲ್ಲ, ಉಸುಬಿನ ಕಾವಿನಿಂದ ನಲ್ಲಿಯ ನೀರು ಕಾದೇ ಬರಿತ್ತಿತ್ತು. ಲೇಖಕರೇನೋ ಬಿಸಿನೀರು ಸ್ನಾನ ಮಾಡುವವರು. ಆದರೆ ಅವರಿಗೆ ಆದದ್ದು ಶ್ರೀಪತಿಗೆ ಆಗದು. ಶ್ರೀಪತಿ ತಣ್ಣೀರು ಮೀಯುತ್ತಿದ್ದರು. ನೀರನ್ನು ಆರಿಸಿ ತಣ್ಣೀರಿನ ಸ್ನಾನ ಮಾಡಿದರು. ಅನಂತರ ಊಟ ಮಾಡಿ ಒಂದೆರಡುತಾಸು ವಿಶ್ರಾಂತಿ ಪಡೆದರು. ಅವರ ಮೊದಲ ಕಾರ್ಯಕ್ರಮವೆಂದರೆ ಅಂಬೇರಕ್ಕೆ ಹೋಗುವುದು, ಊರ ಹೊರಗಿರುವ ಅವರ ಮಿತ್ರ ರೈಗಳಿಗೆ, ಅಂಬೇರಕ್ಕೂ,ಜಯಪುರಕ್ಕೂ ನಡುವೆ ಸಿಟಿ ಬಸ್ ನಡೆಯುತ್ತಿತ್ತೆಂದು ಸಹ ಗೊತ್ತಿರಲಿಲ್ಲ. ಹೀಗಾಗಿ ಟಾಂಗಾವನ್ನು ಗೊತ್ತುಮಾಡಿಕೊಂಡು ನಗರದ ಮದ್ಯಭಾಗದಿಂದ ಹಾದು ಹೋದರು[೧].
ಜಯಪುರದ ಮುಖ್ಯಬೀದಿಗಳು ನನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮವನ್ನು ಬೀರಿದವು. ಒಂದು ಶತಮಾನದ ಹಿಂದೆ ಆ ನಗರದ ಬೀದಿಗಳು ನಿರ್ಮಾಣವಾಗಿದ್ದರೂ ಬಹಳ ಅಗಲವಾದ ಬೀದಿಗಳವು; ನೇರವಾದವುಗಳು.ಬಹು ದೂಪದಿಂದ ಕಾಣಿಸುವ ಅಂಗಡಿ- ಮನೆಗಳ ದೇಶೀವಾಸ್ತುರಚನೆ ಚೆನ್ನಾಗಿ ಶೋಭಿಸುತ್ತಿತ್ತು.ಇಲ್ಲಿನ ಒಂದೊಂದು ಮನೆಯೂ ಒಂದೊಂದು ಶೈಲಿಯದೂ, ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ. ಆದುದರಿಂದಲೇ ನನಗೆ ಅವುಗಳ ಮೇಲೆ ಮೋಹ.ಇಲ್ಲಿನ ಮುಖ್ಯ ಬೀದಿಗಳು ಸಂಧಿಸುವಲ್ಲಿ ಸುಂದರವಾದ ಚೌಕಗಳಿವೆ.ಕೆಲವೊಂದು ಕಡೆಯಲ್ಲಿ ಭವ್ಯವಾದ ಮಹಾದ್ವಾರಗಳಿವೆ. ಅಲ್ಲದೆ ಜಯಪುರ ಬಣ್ಣಗಾರರ ತವರೂರು[೨].ಬಣ್ಣ ಹಾಕುವ ಕುಶಲಿಗರು ಬಹಳಮಂದಿ ಇದ್ದಾರೆ.ಬಣ್ಣದ ಮೋಹವಿರುವ ಜನರೂ ಬಹಳ ಇದ್ದಾರೆ.ಗಿಡಮರಗಳಿಲ್ಲದ ಸ್ಥಳಗಳಲ್ಲಿ ವಾಸಿಸುವ ಜನರಿಗೆ ಕಣ್ಣಿನ ತಣಿವು ಹೇಗೆ ಬರಬೇಕು? ಹಾಗೆಂದೋ ಏನೋ, ಇಲ್ಲಿನ ಜನರು ಅದರಲ್ಲೂ ಹೆಂಗಸರು ರಂಗು ರಂಗಿನ ಲಂಗ ಪಾಯಿಜಾಮಾ,ಸೀರೆ,ರವಿಕೆ,ಮೇಲುದೆ ತೊಡುವ ಅಭ್ಯಾಸದವರು. ಅದರಲ್ಲೂ ಕೆಂಪು,ಕಿತ್ತಳೆ, ಹಳದಿ ಎಂದರೆ ಪ್ರಾಣ ನಿತ್ಯವೂ ಹೋಳಿ ಹುಣ್ಣಿಮೆ ಮಾಡುವವರಂತೆ ಬಣ್ಣದ ಚೆಲ್ಲಾಟ ಅವರ ಬಟ್ಟೆಗಳಲ್ಲಿ. ಗಂಡಸರೂ ರಂಗುಗಾರರೇ. ಅವರ ಪಂಚೆ, ಅಂಗಿಗಳಲ್ಲಿ ರಂಗು ಕಾಣಿಸದೇ ಇದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಸುವುದುಂಟು. ಸುತ್ತು ಸುತ್ತಿನ ಅವರ ದೇಶೀ ಮುಂಡಾಸನ್ನು ಚನ್ನಾಗಿ ಬಿಗಿದು ಕೊಂಡಾಗ ಬಲು ಗಂಭೀರವಾಗಿಯೇ ಕಾಣಿಸುತ್ತದೆ.

ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿ ತೋರಿದ ಕಡೆ ಬಳಸಬಹುದು)

ಶಬ್ದಕೋಶ/ಪದ ವಿಶೇಷತೆ

  • ಮೀ= ಸ್ನಾನ ಮಾಡು

ವ್ಯಾಕರಣಾಂಶ

ಚಟುವಟಿಕೆ

  • ಚಟುವಟಿಕೆಯ ಹೆಸರು;ಶಿವರಾಮ ಕಾರಂತರ ಪರಿಚಯ
  • ವಿಧಾನ/ಪ್ರಕ್ರಿಯೆ:ಗುಂಪು ಚಟುವಟಿಕೆ/ವೀಡಿಯೋ ವೀಕ್ಷಣೆ
  • ಸಮಯ:15ನಿಮಿಷಗಳು
  • ಹಂತಗಳು:ಮಕ್ಕಳಿಗೆ ಪ್ರಮುಖ ಜ್ಞಾನಪೀಠ ಪುಸ್ಕೃತರ ಕವಿಗಳ ಭಾವಚಿತ್ರವನ್ನು ತೋರಿಸುವುದು,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು.ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು ಮತ್ತು ಬೋರ್ಡ್ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ ,ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.
  • ಸಾಮಗ್ರಿಗಳು/ಸಂಪನ್ಮೂಲಗಳು; ಭಾವಚಿತ್ರ, ವೀಡಿಯೋ,ಪುಸ್ತಕಗಳು
  • ಚರ್ಚಾ ಪ್ರಶ್ನೆಗಳು;

೧. ಮಕ್ಕಳ ಸಾಹಿತ್ಯಕ್ಕೆ ಕಾರಂತರ ಕೊಡುಗೆ ಏನು?
೨.ಜಾನಪದದಲ್ಲಿದ್ದ ಕಾರಂತರ ಆಸಕ್ತಿ ತಿಳಿಸಿರಿ?

ಮೌಲ್ಯಮಾಪನ

ಅವದಿ -೨

ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-೨

ವಿವರಣೆ

ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು)

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

ಚಟುವಟಿಕೆ

  1. ಚಟುವಟಿಕೆ; ಪ್ರವಾಸಾನುಭವದ ಪ್ರಬಂಧ ರಚನೆ
  2. ವಿಧಾನ/ಪ್ರಕ್ರಿಯೆ ;ಬರವಣಿಗೆ ಮತ್ತು ಚರ್ಚೆ
  3. ಸಮಯ ;೨೦ ನಿಮಿಷ
  4. ಸಾಮಗ್ರಿಗಳು/ಸಂಪನ್ಮೂಲಗಳು:ಪುಸ್ತಕದಲ್ಲಿ ಬರೆಯುವುದು
  5. ಹಂತಗಳು ;ಮಕ್ಕಳಿಗೆ ಈ ಮೊದಲೇ ಭೇಟಿ ನೀಡಿರುವ ಪ್ರೇಕ್ಷಣೀಯ ಸ್ಥಳದ ಭೇಟಿ ಮತ್ತು ಅನುಭವವನ್ನು ದಾಖಲಿಸುವಂತೆ ತಿಳಿಸುವುದು .ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಬರೆಯುವರು . ಮೂರನೇ ಗುಂಪಿನ ಮಕ್ಕಳಿಗೆ ಅವರಿಗೆ ತಿಳಿದಿರುವ ಕರ್ನಾಟಕದ ವಿವಿಧ ಪ್ರೇಕ್ಷಣೀಯ ಸ್ಥಳದ ಹೆಸರನ್ನು ಪುಸ್ತಕದಲ್ಲಿ ಬರೆಯಲು ತಿಳಿಸುವುದು
  6. ಚರ್ಚಾ ಪ್ರಶ್ನೆಗಳು;
  • ಪ್ರವಾಸದ ಅನುಭವವನ್ನು ಏಕೆ ಬರೆದಿದಬೇಕು?
  • ಎಷ್ಟು ದಿನದ ಪ್ರವಾಸಗಳು ಹೆಚ್ಚು ಉಪಯೋಗಕಾರಿ?

ಮೌಲ್ಯಮಾಪನ

ಅವದಿ -೩

ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-೩

ವಿವರಣೆ

ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು)

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

  1. ಶಿಕ್ಷಕರು ದ್ವಿರುಕ್ತಿ ,ಅನುಕರಣಾವ್ಯಯ ಮತ್ತು ಜೋಡುನುಡಿ ಪದಗೊಂಚಲುಗಳ ಮಿಶ್ರಣ ಮಾಡಿ ಪ್ರದರ್ಶಿಸುವುದು.
  2. ವಿದ್ಯಾರ್ಥಿಗಳು ಪರಸ್ಪರ ಚರ್ಚಿಸಿ ವಿಭಾಗೀಕರಿಸುವುದು.
  3. ವಿದ್ಯಾರ್ಥಿಗಳ ಅನುಮಾನವನ್ನು ಪರಿಹರಿಸುವುದು ಮತ್ತು ತಾವೇ ಅಂತಹ ಪದಗಳನ್ನು ಪಟ್ಟಿ ಮಾಡುವಂತೆ ಪ್ರೇರೇಪಿಸುವುದು.
  4. ಕರ್ತರಿ-ಕರ್ಮಣಿ ವಾಕ್ಯವನ್ನು ಕರಿಹಲಗೆಯ ಮೇಲೆ ಬರೆದು ವಿದ್ಯಾರ್ಥಿಗಳು ಅವುಗಳ ವ್ಯತ್ಯಾಸವನ್ನು ಗುರುತಿಸುವಂತೆ ಮಾಡುವುದು. ಅವುಗಳ ಬಗ್ಗೆ ಅರಿಯುವುದು.
  5. ಬೇರೆ ಬೇರೆ ಕ್ರಿಯಾಪದಗಳನ್ನು ನೀಡಿ , ವುಗಳ ಅರ್ಥವ್ಯತ್ಯಾಸಗಳನ್ನು ಚರ್ಚಿಸಿ ಅರಿತುಕೊಳ್ಳುವುದು.

ಚಟುವಟಿಕೆ

  1. ಚಟುವಟಿಕೆಯ ಹೆಸರು;ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು
  2. ವಿಧಾನ/ಪ್ರಕ್ರಿಯೆ: ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು
  3. ಸಮಯ:15ನಿಮಿಷಗಳು
  4. ವೃದ್ದಿಗೊಳ್ಳುವ ; ಸಾಮರ್ಥ್ಯಗಳು ; ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
  5. ಹಂತಗಳು:ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15 -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆಹೇಳಲು ತಿಳಿಸುವುದು ,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಕತೆ ಹೇಳಬೇಕು . ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,
  6. ಸಾಮಗ್ರಿಗಳು/ಸಂಪನ್ಮೂಲಗಳು; 10-15 ಭಾವಚಿತ್ರಗಳು, ಮಾದರಿ ಕತೆ (ಮಕ್ಕಳಿಗೆ ಮಾದರಿ ತೋರಿಸಿದರೆ ಬೇಗನೇ ಸಿದ್ದರಾಗುತ್ತಾರೆ)
  7. ಚರ್ಚಾ ಪ್ರಶ್ನೆಗಳು;

1. ಈ ಕಥೆಯಿಂದ ಏನನ್ನು ಕಲಿತುಕೊಂಡಿರಿ ? (ನೀತಿ,ಮೌಲ್ಯ) 2. ಕತೆ ಹೇಳುವಾಗಿನ ತಪ್ಪು ಉಚ್ಚಾರಣೆಯ ಪದಗಳಾವುವು ? 3. ಈ ಕತೆಯನ್ನು ಬದಲಿಸಿ ಹೇಗೆ ಹೇಳ ಬಹುದಿತ್ತು?

ಚಟುವಟಿಕೆ- ಜಾನಪದ ಕುಣಿತಗಳನ್ನು ಪರಿಚಯಿಸುವುದು ವಿಧಾನ/ಪ್ರಕ್ರಿಯೆ ;ಕೆಲವು ಜಾನಪದ ಕುಣಿತಗಳನ್ನು ಪಟ್ಟಿಮಾಡಲು ತಿಳಿಸುವುದು . ಪ್ರತಿ ತಂಡಕ್ಕೂ ಯಾವುದಾದರು ಒಂದು ಜಾನಪದ ಕುಣಿತವನ್ನು ನೀಡಿ ಚರ್ಚೆ ಮಾಡಿ ಪ್ರಬಂಧ ಬರೆದು ಮಂಡಿಸಲು ತಿಳಿಸುವುದು.(ಒಂದು ಕುಣಿತ ಮಾತ್ರ ನೀಡುವುದು ಹಾಗು ತಂಡದ ನಾಯಕ ಮಂಡನೆ ಮಾಡ ಬಹುದು ) . ಮೂರನೇ ಗುಂಪಿನ ಮಕ್ಕಳಿಗೆ ಪಾಠದ ಯಾವುದಾದರು ಪುಟವನ್ನು ನೀಡಿ ಸ್ವರಾಕ್ಷರ ಪದಗಳು ಅಥವ ವ್ಯಂಜನಾಕ್ಷರ ಪದ ಗುರ್ತಿಸಿ ಬರೆಯಲು ತಿಳಿಸುವುದು (ಪಠ್ಯಪುಸ್ತಕದ ಪರಿಚಯವಾಗುತ್ತದೆ) 2. ಸಮಯ ೨೦ ನಿಮಿಷ

ಮೌಲ್ಯಮಾಪನ

  • ಪ್ರವಾಸದ ದಾಖಲೀಕರಣ ಏಕೆ ಅಗತ್ಯ?
  • ಪ್ರವಾಸಕ್ಕೂ ಮೊದಲಿನ ಮುನ್ತಯಾರಿಯನ್ನು ಪಟ್ಟಿಮಾಡಿರಿ?

ಉಪಸಂಹಾರ

ಮೌಲ್ಯಮಾಪನ

  1. ಯಾವುದಾದರೂ ಒಂದು ಪ್ರವಾಸಿ ತಾಣದ ವಿಡಿಯೋ ಕ್ಲಿಪ್ಪಿಂಗನ್ನು ತೋರಿಸಿ, ಆ ತಾಣದ ಕುರಿತು ಒಂದು ಪ್ರವಾಸ ಕಥನವನ್ನು ಬರೆಯುವಂತೆ ಮಾಡುವುದು.
  2. ಹತ್ತಿರದ ಯಾವುದಾದರೂ ಒಂದು ಪ್ರವಾಸಿ ತಾಣಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ,ಪಡೆದ ಅನುಭವವನ್ನು ಕುರಿತು ಬರೆಯುವಂತೆ ಹೇಳುವುದು.
  3. ಕರ್ನಾಟಕದ ಪ್ರವಾಸಿ ತಾಣಗಳ ಪಟ್ಟಿಯನ್ನು ತಯಾರಿಸಿಕೊಂಡು ಬರುವಂತೆ ಮಾಡುವುದು.
  4. ಕೆಲವು ಐತಿಹಾಸಿಕ , ಪೌರಾಣಿಕ ಸ್ಥಳಗಳನ್ನು ಕುರಿತು ರಸಪ್ರಶ್ನೆಯನ್ನು ನಡೆಸುವುದು.
  5. ಕರ್ನಾಟಕದೊಳಗಿನ ಸ್ಥಳಗಳ ಬಗ್ಗೆ ಇರುವ ಪ್ರವಾಸಿ ಕಥನ ಗ್ರಂಥಗಳ ಪಟ್ಟಿಯನ್ನು ತಯಾರಿಸುವುದು. ಹಾಗೂ ಓದಲು ತಿಳಿಸುವುದು.

ಮಕ್ಕಳ ಚಟುವಟಿಕೆ

Videos

  1. 'ಜಯಪುರದೊಳಗೊಂದು ಸುತ್ತು'ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ
  2. 'ಜಯಪುರ ಬಣ್ಣಗಾರರ ತವರೂರು' ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ