STF 2014-15 Udupi

From Karnataka Open Educational Resources
Jump to navigation Jump to search

19 districts

Mathematics

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop

Workshop short report

4th Day

"ಕಂಪ್ಯೂಟರ್ ಕಲಿಯುವುದು ಕಷ್ಟ,ಕಲಿತ ಮೇಲೆ ಇಷ್ಟ,ಕಲಿಯದಿದ್ದರೆ ನಷ್ಟ"ಎನ್ನುವ ಪರಿಜ್ಞಾನದ ಹಿನ್ನಲೆಯಲ್ಲಿ ೧೯-೧೨-೨೦೧೪ ರ ನಾಲ್ಕನೇದಿನದ ಪ್ರಥಮ ಅವಧಿಯಲ್ಲಿ  ಶ್ರೀ ವಿಶ್ವನಾಥ ಶೆಟ್ಟಿಯವರು ತರಗತಿ ಕೋಣೆಯಲ್ಲಿ ಪರಿಣಾಮಕಾರಿಯಾದ ಬೋಧನೆಯಲ್ಲಿ ಅಂತರ್  ಜಾಲ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಗದ್ಯ ಮತ್ತು ಪದ್ಯ ಬೋಧನೆಯ ಹಂತಗಳನ್ನು ವಿವರಿಸುತ್ತಾ ಚರ್ಚೆಗೆ ಅವಕಾಶ  ನೀಡಿದರು.ಚಹಾ ವಿರಾಮದ ನಂತರ ೩ ನೇ ಅವಧಿಯಲ್ಲಿ  ಗದ್ಯಭಾಗದಲ್ಲಿ "ಎದೆಗೆ ಬಿದ್ದ ಅಕ್ಷರ" ಆಯ್ಕೆ ಮಾಡಿಕೊಂಡು ತಂತ್ರಜ್ಞಾನವನ್ನು ವಿವಿಧ ಹಂತಗಳಲ್ಲಿ  ಹೇಗೆ ಬಳಸಿಕೊಳ್ಳಬಹುದೆಂದು ವಸ್ತುನಿಷ್ಠವಾಗಿ ವಿವರಣೆ ನೀಡಿದರು. ಇದರೊಂದಿಗೆ ಶಿಬಿರಾರ್ಥಿಗಳ  ಹೊಸ ಯೋಜನೆ- ಯೋಚನೆಗಳಿಗೆ  ಅವಕಾಶವನ್ನು ಕೊಟ್ಟು ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆಯಲ್ಲಿ ನಾವು  ಪಾಲುದಾರರಾದೆವು.ಪದ್ಯಭಾಗದಲ್ಲಿ  "ಹಕ್ಕಿ ಹಾರುತಿದೆ ನೋಡಿದಿರಾ " ಇದಕ್ಕೆ ಸಂಬಂದಿಸಿದ ಪದ್ಯಭಾಗದ ವಿವಿಧ ಹಂತವನ್ನು ತಲುಪಿದ್ದಲ್ಲದೇ ಪದಕ್ಕೆ ಬೇಕಾದ ಭಾವ ,ಅದಕ್ಕೆ ಸಂಬಂಧಿಸಿದ ಚಿತ್ತವನ್ನು  ಕ್ಷಣಾರ್ಧಾದಲ್ಲಿ ಒದಗಿಸಿ ಬೆರಗುಗಣ್ಣಿನ ಭಾವ ನಮ್ಮದಾಯಿತು ನಂತರ ಶಿಬಿರಾರ್ಥಿಗಳು ಮೊದಲೇ ಹಂಚಿಕೊಂಡಂತೆ  ಗದ್ಯ ಮತ್ತು ಪದ್ಯಕ್ಕೆ ವಿವಿಧ ಹಂತಗಳಲ್ಲಿ ತಂತ್ರಜ್ಞಾನವನ್ನು ಬಳಸಿ ೫ ನೇ  ದಿನದ ಪ್ರಾತ್ಯಕ್ಷಿತೆಗೆ ತಯಾರಿಯನ್ನು ಮಾಡುವುದರಲ್ಲಿ ತನ್ಮಯರಾದರು. ಊಟದ ವಿರಾಮದ  ನಂತರ ಮೊದಲ ಅವಧಿಯಲ್ಲಿ ಮಂಗಳೂರಿನ  ಸಿ .ಟಿ.ಇ ನ ಹಿರಿಯ ಉಪನ್ಯಾಸಕರಾದ ಡಾ,ಕುಮಾರಸ್ವಾಮಿಯವರ  ಜೊತೆ  ವಿಡಿಯೋ  ಕಾನ್ಪರೆನ್ಸನಲ್ಲಿ ಮಾತನಾಡಿ ಇಂಥಹದೊಂದುರ ತಂತ್ರಜ್ಞಾನ ಬಳಸಿ ತರಗತಿ ಕೋಣೆಯಲ್ಲಿ ಅಗತ್ಯ ಬಿದ್ದಾಗ ಸಂಬಂಧಪಟ್ಟ  ಸಂಪನ್ಮೂಲವನ್ನು ಹೇಗೆ  ಬಳಕೆಮಾಡಬಹುದು ಎನ್ನುವುದನ್ನು ಕಾಣಿಸಲಾಯಿತು. ನಂತರದ ಅವಧಿಯಲ್ಲಿ ಶಿಬಿರಾರ್ಥಿಗಳು ೫ ನೇ ದಿನದ ಅವಧಿಗೆ  ನೀಡಬೇಕಾದ ಪಾಠದ ತಯಾರಿಯಲ್ಲಿ  ಮಗ್ನರಾದಂತೆ  ಕಂಡು ಬಂದರೂ ಅದರ ಸಾರ್ಥಕತೆಯ ಭಾವ  ೫ ನೇ ದಿನಕ್ಕೆ ಎನ್ನುವ ತವಕ ಕಾಣುವಂತಿತ್ತು. ಕೊನೆಯ ಅವಧಿಯನ್ನು ಶಶಾಂಕರವರು  ಕ್ರೋಢಿಕ್ರತ ದಾಖಲೆ ನಿರ್ವಹಣೆಯ(spread sheet)ನ ಬಗೆಗೆ ಹೇಳಿದಾಗ ಪೆನ್ನು ,ಪೇಪರಿಗೆ ಎಳ್ಳುನೀರು ಬಿಡಬಹುದೆನೋ.......! ಎನಿಸಿತು.ಸಂಜೆಯ  ಸಾಂಸ್ರ್ಕತಿಕ ಕಾರ್ಯಕ್ರಮ ವಿಭಿನ್ನವಾಗಿ ಮೂಡಿಬಂತು. ಕಗ್ಗದ ಈ ಸಾಲುಗಳನ್ನು ಹೇಳಿ ನಮ್ಮ ತಂಡದ ವರದಿಯನ್ನು ಮುಗಿಸುತ್ತಿದ್ದೆವೆ.

"ಹಳೇಬೇರು ಹೊಸಚಿಗುರು ಕೂಡಿರಲು ಮರ ಸೊಬಗು

ಹಳೇತತ್ವ ಹೊಸಯುಕ್ತಿ ಒಡಗೂಡೆ ಧರ್ಮ

ಋಷಿವಾಕ್ಯದೊಡನೆ ವಿಜ್ಞಾನಮೇಳೈಸೆ

ಜಸವು ಜನಜೀವನಕ್ಕೆ ಮಂಕುತಿಮ್ಮ ||


5th Day

ಎಂಬ ಡಿ.ವಿ. ಜಿ. ಯವರ ಕಗ್ಗದ ಸಾಲು ಕೆ.ಎಸ್.ಟಿ.ಎ ಫ್ ತರಭೇತಿಗೆ ಪ್ರಸ್ತುತ ವೆನಿಸುತ್ತದೆ. ಯಾಕೆಂದರೆ ಇದುವರೆಗೆ ಪಾಠದ ಪುಸ್ತಕದ ಸುತ್ತಲು ತಿರುಗುವ ನಮ್ಮನ್ನು ಈ ತರಬೇತಿ ತಂತ್ರ ಜ್ಞಾನದತ್ತ ಮುಖ ತಿರುಗಿಸುವಂತೆ ಮಾಡಿದೆ. ಇಂತಹ ದಿಟ್ಟ ಹೆಜ್ಜೆಯ ೫ ನೇ ದಿನದ ವರದಿಯನ್ನು ತಮ್ಮ ಮುಂದೆ ಇಡುತ್ತಿದ್ದೇವೆ. ಶ್ರೀ ಪ್ರೇಮಾನಂದರವರ ೪ ನೇ ದಿನದ ವರದಿ ವಾಚನದೊಂದಿಗೆ ಈ ದಿನವು ಶುಭಾರಂಭಗೊಂಡಿ ತು. ಶಿಬಿರದ ವ್ಯವಸ್ಥಾಪಕರಾದ ಶ್ರೀ ಜಾಹ್ನವಿ ಸಿ. ಮತ್ತು ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ನಾವು ಪಡೆದ ಜ್ಞಾನವನ್ನು ಹಂಚಿಕೊಳ್ಳುವುದರೊಂದಿಗೆ ತಂತ್ರ ಜ್ಞಾನವನ್ನು ಸತತ ಅಧ್ಯಯನ ಹಾಗೂ ಅಭ್ಯಾಸದೊಂದಿಗೆ ಬಳಸಿಕೊಳ್ಳುವ ಬಗ್ಗೆ ಕಿವಿ ಮಾತು ಹೇಳಿದ್ದನ್ನು ನಾವು ೫ ತಂಡದವರು ಶಿರಸಾ ಪಾಲಿಸಿದೆವು. ಈ ಮೊದಲೇ ತಂಡಕ್ಕೆ ಹಂಚಿದ ಪಾಠ, ಪದ್ಯ ಭಾಗಗಳನ್ನು ನಾವು ಕಲಿತ ಮೈಂಡ್ ಮ್ಯಾಪ್, ಲಿಂಕ್ , ಟೆಕ್ಷ್ಟ್ ಟೈಪಿಂಗ್, ಅಂತರ್ಜಾಲ , ಗೂಗಲ್ ಮ್ಯಾಪ್, ಕೋಪಿ, ಪೇಸ್ಟ್ ಈ ಮೊದಲಾದ ತಂತ್ರ ಜ್ಞಾನವನ್ನು ಬಳಸಿಕೊಂಡು ಲಿಬ್ರ ಆಫೀಸ್ ರೈಟರ್ ನಲ್ಲಿ ಪಾಠಯೋಜನೆಯನ್ನು ತಂಡದ ಎಲ್ಲಾ ಸ್ಯರು ಸೇರಿ ಬಹಳ ಉತ್ಸುಕತೆಯಿಂದ ತಯಾರಿಸಿದೆವು. ಶ್ರೀ ವಿಶ್ವನಾಥ ಶೆಟ್ಟಿಯವರು ಹಾಕಿ ಕೊಟ್ಟ ಎಲ್ಲಾ ಹಂತಗಳನ್ನು ನಮ್ಮ ಪಾಠದಲ್ಲಿ ಸಮರ್ಪಕವಾಗಿ ಹೊಂದಿಸಿಕೊಂಡೆವು. ಎಷ್ಟುದಿನ ಬಾಳುವುದು ಕಾಗದದ ಕೋಟು ? ಎಂಬ ದಿನಕರ ದೇಸಾಯಿ ಯವರ ಚುಟಿಕಿನ ಸಾಲು ಅರ್ಥಪೂರ್ಣವೆನಿಸುವಂತೆ ಪೆನ್ನು, ಪುಸ್ತಕಗಳಿಲ್ಲದೆ ಮೊದಲ ತಂಡದಿಂದ ಹಕ್ಕಿ ಹಾರುತ್ತಿದೆ ನೋಡಿದಿರಾ ಎಂಬ ಪದ್ಯವನ್ನು, ೨ನೇ ತಂಡದಿಂದ ಅಮೇರಿಕಾದಲ್ಲಿ ಗೊರೂರು ಎಂಬ ಗದ್ಯವನ್ನು , ೩ನೇ ತಂಡದಿಂದ ಶಬರಿ ಎಂಬ ಗೀತ ನಾಟಕವನ್ನು , ೪ನೇ ತಂಡದಿಂದ ವಚನ ಸೌರಭ ಎಂಬ ಪದ್ಯವನ್ನು, ೫ನೇ ತಂಡದಿಂದ ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯವನ್ನು ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಮಂಡಿಸಿದರು. ಈ ನಡುವೆ ಚಹಾ ವಿರಾಮವನ್ನು ಮುಗಿಸಿದೆವು. ತದ ನಂತರ ಪ್ರತಿ ಪಾಠ ಮತ್ತು ಪದ್ಯದ ಕುರಿತು ಶಿಬಿರಾರ್ಥಿಗಳು ಚರ್ಚಿಸಿದರು. ಪ್ರತೀ ತಂಡದವರಿಗೆ ತಮ್ಮ ಯೋಜನೆಯನ್ನು ಮಿಂಚಂಚೆಯ ಮೂಲಕ ಕಳುಹಿಸಲು ಹೇಳಿದರು. ಅದರಂತೆ ಕೆಲವರು ಪಾಠವನ್ನು, ಕೆಲವರು ಮೈಂಡ್ ಮ್ಯಾಪ್ ನ್ನು ಸಂದೇಶ ರವಾನೆ ಮಾಡಿದರು. ಈ ತನ್ಮಧ್ಯೆ ಶಿಬಿರಾರ್ಥಿಗಳ ಗುಂಪು ಫೋಟೊ ವನ್ನು ಕ್ಲಿಕ್ಕಿಸಲಾಯಿತು. ಊಟದ ವಿರಾಮದ ನಂತರ ಶ್ರೀ ಚಂದ್ರಶೇಖರ್ ಶೆಟ್ಟಿಯವರು ಸ್ಕ್ರೀನ್ ಶೊಟ್ ಅಥವಾ ತೆರೆ ಚಿತ್ರದ ಬಗ್ಗೆ ತಿಳಿಸಿದರು.. ನಾವು ಕೆಲವು ಚಿತ್ರಗಳನ್ನು, ಬರಹಗಳನ್ನು ,ತೆರೆಚಿಲ್ರದ ಮೂಲಕ ಉಳಿಸಿ ಹೆಸರು ಕೊಟ್ಟೆವು. ಅನಂತರ ಅವರು ರೆಕಾರ್ಡ್ , ಮೈ ಡೆಸ್ಕ್ ಟೊಪ್ ಬಗ್ಗೆ ಕಲಿಸಿದರು. ಅನ್ವಯಕ್ಕೆ ಹೋಗಿ ವೀಡಿಯೋಗಳಿಗೆ ಬೇರೆ ಆಡಿಯೋ ಮುದ್ರಿಸುವುದನ್ನು ತಿಳಿದೆವು. ಮುಂದುವರಿಸುತ್ತಾ ಪೆನ್ ಡ್ರೈವ್ ಮತ್ತು ಮೆಮೊರಿ ಕಾರ್ಡ್ ನಲ್ಲಿರುವ ಮಾಹಿತಿಯನ್ನು ನಮ್ಮ ಕಂಪ್ಯೂಟರ್ರಮತ್ತು ಕಂಪ್ಯೂಟರ್ ನಿಂದ ಪೆನ್ ಡ್ರೈವ್ ಗೆ ವರ್ಗಾಯಿಸುವ ರೀತಿಯನ್ನು ಕಲಿಸಿ ಸಹಕರಿಸಿದರು. ಚಹಾ ವಿರಾಮದ ನಂತರ ಚಂದ್ರಶೇಖರ್ ಶೆಡ್ಡಿಯವರು ತಮ್ಮ ಅಗಾಧವಾದ ಕಂಪ್ಯೂಟರ್ ಜ್ಞಾನವನ್ನು ಹಂಚಿಕೊಳ್ಲುತ್ತಾ ಗೂಗಲ್ ಡ್ರೈವ್ ಬಗ್ಗೆ ತಿಳಿಸಿದರು. ಈ ನಡುವೆ ಜಾಹ್ನವಿ ಮೇಡಮ್ ರವರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತದ್ದರು. ಶ್ರೀ ಫಕೀರಪ್ಪರವರು ಕೊಯರ್ ನಲ್ಲಿ ಶಿಕ್ಷಕರ ಇತ್ತೀಚಿನ ಶ್ಯೆಕ್ಷಣಿಕ ಕಾರ್ಯಕ್ರಮದಲ್ಲಿ ನಮ್ಮ ಅಭಿಪ್ರಾಯ ಅನಿಸಿಕೆಯನ್ನು ತುಂಬಲು ಮಾರ್ಗದರ್ಶನ ಮಾಡಿದರು. ಸಂಪನ್ಮೂಲ ವ್ಯಕ್ತಿಗಳ ಪಾದರಸದಂತಹ ಓಡಾಟ, ಉತ್ಸಾಹ ನಮ್ಮ ಕಲಿಕೆಯಲ್ನು ವೇಗಗೊಳಿಸಿತು. ಅನಿಸಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ತರಬೇತಿ ಮುಕ್ತಾಯವಾಯಿತು. ವಂದನೆಗಳೊಂದಿಗೆ

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4