ಅರ್ಥವ್ಯವಸ್ಥೆ ಮತ್ತು ಸರ್ಕಾರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Economy & government .mm

ಪಠ್ಯಪುಸ್ತಕ

  1. ಕರ್ನಾಟಕ ರಾಜ್ಯದ ಪಠ್ಯಪುಸ್ತಕದಲ್ಲಿನ ಅರ್ಥವ್ಯವಸ್ಥೆ ಮತ್ತು ಸರ್ಕಾರ

ಮತ್ತಷ್ಟು ಮಾಹಿತಿ

ಇದು ಭಾರತೀಯ ಆರ್ಥ ವ್ಯವಸ್ಥೆಯ ಸರಳ ಅವಲೋಕನವಾಗಿದೆ ಮತ್ತು ಸರ್ಕಾರದ ಅಥವಾ ಸಾರ್ವಜನಿಕ ಕ್ಷೇತ್ರದ ಪಾತ್ರಕ್ಕೆ ಸಂಬಂಧಿಸಿದಂತೆ ವಿವಿಧ ಪರಿಕಲ್ಪನೆಗಳನ್ನು ಇದು ಒಳಗೊಳ್ಳುತ್ತದೆ.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಈ ಅಧ್ಯಾಯವು ಕೆಲವು ವಿಭಿನ್ನ ಅಂಶಗಳನ್ನು ಒಳಗೊಂಡಿದೆ.

  1. ಆರ್ಥಿಕತೆಯಲ್ಲಿ ಸರ್ಕಾರದ ಪಾತ್ರ (ಸ್ಪಷ್ಟವಾಗಿದೆ ಮತ್ತು ಸುಲಭವಾಗಿ ಓದಿ ಅರ್ಥೈಸಿಕೊಳ್ಳಬಹುದಾಗಿದೆ)
  2. ಹಸಿರು ಕ್ರಾಂತಿ
  3. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ

NCERT ಪುಸ್ತಕದಲ್ಲಿ ಈ ಅಧ್ಯಾಯಕ್ಕೆ ಸಂಬಂಧಿಸಿದಂತೆ ಒಂದೇ ಅಧ್ಯಾಯವಿಲ್ಲ.

  1. Karnataka Text Book Class X - Economics - Chapter 2 - Economy and Government => NCERT Text Book - Class 10, Chapter 4 - Globalisation and the Indian Economyಜಾಗತೀಕರಣದ ಬಗ್ಗೆ ವಿಸ್ತ್ರತವಾದ ಚರ್ಚೆಯನ್ನು ಮಾಡಲಾಗಿದೆ ಮತ್ತು ಓದಲು ಯೋಗ್ಯವಾಗಿದೆ, ಜಾಗತೀಕರಣದ ಅನುಕೂಲತೆಗಳು ಮತ್ತು ಅದರ ಹಾನಿಕಾರಕ ಪರಿಣಾಮಗಳನ್ನು ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಇರುವ ಸಾಧ್ಯತೆಯ ಬಗ್ಗೆ ಕುರಿತು ಚರ್ಚಿಸಲಾಗುತ್ತಿದೆ.ಅನೇಕ ಉದಾಹರಣೆಗಳನ್ನು ದಿನನಿತ್ಯ ಜೀವನಕ್ಕೆ ಸಂಬಂಧಿಸಿದಂತೆ ನೀಡಲಾಗಿದೆ.ಜಾಗತೀಕರಣ ಕಾರಣ ಐಟಿ ಉದ್ಯಮವು ಬಹಳ ಉಚ್ಛ್ರಾಯ ಸ್ಥಿತಿಯಲ್ಲಿದೆ, ಭಾರತೀಯ ಬಹುರಾಷ್ಟ್ರೀಯ ಕಂಪನಿಗಳಾದ ಟಾಟಾ,ಬಿರ್ಲಾ,ರಿಲಯನ್ಸ್ ಗುಂಪುಗಳು ಇದರ ಬಗ್ಗೆ ಚರ್ಚಿ ನಡೆಸುತ್ತಿದ್ದಾರೆ.ಈ ಅಧ್ಯಾಯದಲ್ಲಿ ಅನೇಕ ಛಾಯಾಚಿತ್ರಗಳು ಮತ್ತು ಕಾರ್ಟೂನ್ ಗಳನ್ನು ನೀಡಲಾಗಿದೆ, ಅನೇಕ ಚರ್ಚೆಯ ಅಂಶಗಳನ್ನು ಈ ಅಧ್ಯಾಯದಲ್ಲಿ ನೀಡಲಾಗಿದೆ ಇವುಗಳು CCE ಮಾಡುವಲ್ಲಿ ಸಹಾಯಕವಾಗಿದೆ, ಈ ಅಧ್ಯಾಯ ಓದುವುದು ನಮಗೆ ತುಂಬಾ ಉಪಯುಕ್ತವಾಗಿದೆ.
  2. Karnataka Text Book Class X - Economics - Chapter 2 - Economy and Government => NCERT Text Book - => NCERT Text Book - Class 12th, Chapter 5 - The Government - Budget and Economy for a discussion on Government role in economy ಆರ್ಥಿಕತೆಯಲ್ಲಿ ಸರ್ಕಾರದ ಪಾತ್ರ ಇದರ ಬಗ್ಗೆ ಒಂದು ಸಂಕ್ಷಿಪ್ತ ಚರ್ಚೆಯನ್ನು ಈ ಅಧ್ಯಾಯದಲ್ಲಿ ಮಾಡಲಾಗಿದೆ.

ಉಪಯುಕ್ತ ವೆಬ್ ಸೈಟ್ ಗಳು

ಈ ಅಧ್ಯಾಯಕ್ಕೆ ಸಂಬಂಧಿಸಿದಂತೆ ಅನೇಕ ವಿಕಿಪಿಡಿಯ ಪುಟಗಳನ್ನು ನೋಡಬಹುದು, ವಿಷಯ ಮತ್ತು ಉಪವಿಷಯಗಳಿಗೆ ಸಂಬಂಧಿಸಿದಂತೆ ವಿವರವಾದ ಅವಲೋಕನವನ್ನು ನೀಡುತ್ತವೆ.ಇದು ಮಾತ್ರವಲ್ಲದೆ ಇನ್ನು ಅನೇಕ ವೆಬ್ ತಾಣಗಳನ್ನು ಉಪವಿಷಯಗಳಿಗೆ ಸಂಬಂಧಿಸಿದಂತೆ ನೋಡಬಹುದು,ಕೆಳಗಿನ ವೆಬ್ ಪುಟಗಳನ್ನು ನೋಡುತ್ತಾ ಹೋದಂತೆ ನಿಮಗೆ ಪಾಠದ ಬಗ್ಗೆ ಒಳ್ಳೆಯ ಆಲೋಚನೆಗಳು ಬರುತ್ತವೆ ಮತ್ತು ಭಾಷೆ ಅನುಸರಿಸಲು ತುಂಬಾ ಸರಳವಾಗಿದೆ.

  1. http://kn.wikipedia.org/wiki/ಅರ್ಥ_ವ್ಯವಸ್ಥೆ
  2. http://kn.wikipedia.org/wiki/ಭಾರತದ_ಆರ್ಥಿಕ_ವ್ಯವಸ್ಥೆ
  3. http://en.wikipedia.org/wiki/Welfare_state
  4. http://en.wikipedia.org/wiki/Economic_system
  5. http://kn.wikipedia.org/wiki/ಮೋಕ್ಷಗುಂಡಂ_ವಿಶ್ವೇಶ್ವರಯ್ಯ

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1 ಸರ್ಕಾರದ ಪಾತ್ರ

ನೂರು ವರ್ಷಗಳ ಹಿಂದೆ ಒಂದು ನಂಬಿಕೆಯಿತ್ತು ಸರ್ಕಾರವು ಆರ್ಥಿಕ ಚಟುವಟಿಕೆಗಳ ಕಡೆ ಗಮನ ಕೊಡುವುದಿಲ್ಲ ಕೇವಲ ಪ್ರಧಾನ ಕಾರ್ಯಗಳಾದ ಭದ್ರತಾ(ಕಾನೂನು ಮತ್ತು ಸುವ್ಯವಸ್ಥೆ, ರಕ್ಷಣಾ)ಕಡೆ ಹೆಚ್ಚು ಗಮನ ಕೊಡುತ್ತದೆ ಎಂದು,'Laissez Faire'(ಸರಕಾರದ ಕಡಿಮೆ ಹಸ್ತಕ್ಷೇಪ)ಮತ್ತು ಶಾಸ್ತ್ರೀಯ ಅರ್ಥಶಾಸ್ತ್ರಜ್ಞ ಪ್ರೋತ್ಸಾಹಿಸಿದರು, ಡಮ್ ಸ್ಮಿತ್, ಆಧುನಿಕ ಅರ್ಥಶಾಸ್ತ್ರದ ಪಿತಾಮಹ ಎಂದು ಕರೆಯಲಾಗಿದೆ. Adam Smith ೧೯೩೦ ರಲ್ಲಿ ಆದ ಮಹಾ ಆರ್ಥಿಕ ಕುಸಿತgreat depression ಮತ್ತು ಮೊದಲ ಮತ್ತು ಎರಡನೇ ಮಹಾಯುದ್ಧದ ಅನುಭವದ ಆಧಾರದ ಮೇಲೆ ಸರ್ಕಾರವು ಆರ್ಥಿಕ ಚಟುವಟಿಕೆಗಳನ್ನು ಮಹತ್ವದ ಪಾತ್ರವನ್ನು ವಹಿಸುತ್ತಾ ಬಂದಿದೆ. John Maynard Keynes ಒಬ್ಬ ಪ್ರಭಾವಿ ಅರ್ಥಶಾಸ್ತ್ರಜ್ಞರು ಸರ್ಕಾರ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ಹೊಂದಿದ್ದ ಎಂದು ಹೇಳಿದರುargued that Government had an important role in the economyಆರ್ಥಿಕ ಬೆಳವಣಿಗೆ, ಆದಾಯ ಹಾಗೂ ಉದ್ಯೋಗದ ಮತ್ತು ಕೌಂಟರ್ ವ್ಯಾಪಾರ ಆವರ್ತಗಳ ಉತ್ತೇಜಿಸಲು ಹೇಳಿದರು, 'http://en.wikipedia.org/wiki/We_are_all_Keynesians_now "We are all Keynesians now"] ಎಂದು ಇದು ಸಾಮಾನ್ಯವಾಗಿ ಹೇಳಲಾಗುತ್ತದೆ, ನಂತರ ಅನೇಕ ಜನರು ಆರ್ಥಿಕ ಚಟುವಟಿಕೆಯಲ್ಲಿ ಸರ್ಕಾರದ ಪಾತ್ರ ಇರಬೇಕು ಎಂಬ ಬೆಂಬಲವನ್ನು ವ್ಯಕ್ತಪಡಿಸಿದರು,ಈಗ ಸರ್ಕಾರದ ಪಾತ್ರ ಅನೇಕ ಅಂಶಗಳಲ್ಲಿ ಕಾಣುತ್ತಿದ್ದೇವೆ.

  1. ಕಾನೂನು ಸುವ್ಯವಸ್ಥೆ,ರಕ್ಷಣೆ,ಶಿಕ್ಷಣ,ಆರೋಗ್ಯ,ಸಾರಿಗೆ,ಸಾರ್ವಜನಿಕ ಸರಕುಗಳನ್ನು ಒದಗಿಸುವುದು
  2. ಆರ್ಥಿಕ ಕ್ರಮಗಳಾದ ತೆರಿಗೆಯನ್ನು ಕಟ್ಟುವ ಮೂಲಕ ರಾಷ್ಟ್ರೀಯ ಆದಾಯ ಮರು ಹಂಚಿಕೆ ಮಾಡುವುದು.
  3. ಸಾಮಾಜಿಕ ನ್ಯಾಯ ಮತ್ತು ಷೇರುಗಳ ಪ್ರಚಾರ
  4. ಮೂಲಭೂತ ಆರ್ಥಿಕ ಚಟುವಟಿಕೆಗಳನ್ನು ರಚಿಸುವುದು ಮತ್ತು ನಿರ್ವಹಿಸುವುದು.
  5. ಹಣಕಾಸಿನ ಕ್ರಮಗಳಿಂದ ವ್ಯಾಪಾರ ಆವರ್ತಗಳ(ಹಣದುಬ್ಬರ ಮತ್ತು ಖಿನ್ನತೆ)ಎದುರಿಸುವುದು
  6. ಖಾಸಗಿ ವಲಯದ ಆರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸುವುದು,ಕೆಲವು ಚಟುವಟಿಕೆಗಳು ಪ್ರೋತ್ಸಾಹ ಮತ್ತು ವಿರೋಧ ಎರಡನ್ನು ಒಳಗೊಂಡಿವೆ.

ಕಲಿಕೆಯ ಉದ್ದೇಶಗಳು

  1. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸರ್ಕಾರದ ಪಾತ್ರವನ್ನು ಅರ್ಥ ಮಾಡಿಕೊಳ್ಳುವುದು.
  2. ಆರ್ಥಿಕ ವ್ಯವಸ್ಥೆಯಲ್ಲಿ ಸರ್ಕಾರದ ಪಾತ್ರದ ಅಗತ್ಯತೆಯನ್ನು ಅರ್ಥ ಮಾಡಿಕೊಳ್ಳುವುದು.
  3. ಯಾವ ಭಾರತೀಯ ಆರ್ಥಿಕ ಕ್ಷೇತ್ರದಲ್ಲಿ ಭಾರತ ಸರ್ಕಾರ ತನ್ನ ಪಾತ್ರವನ್ನು ವಹಿಸಿದೆ ಎಂದು ತಿಳಿದುಕೊಳ್ಳುವುದು.

ಶಿಕ್ಷಕರಿಗೆ ಟಿಪ್ಪಣಿ

ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರದ ಪಾತ್ರದ ಬಗ್ಗೆ ತಿಳಿದುಕೊಳ್ಳುವುದು ಪ್ರಮುಖವಾದ ಅಂಶವಾಗಿದೆ, ಕೆಲವು ಪ್ರದೇಶಗಳಲ್ಲಿ ಸರ್ಕಾರ ತನ್ನ ಸ್ಥಾನವನ್ನು ಖಾಸಗಿ ವಲಯಗಳಿಗೆ ಅವಕಾಶಗಲನ್ನು ನೀಡುತ್ತಿದೆ, ಆಧೇ ರೀತಿ ಇದು ಕೆಲವು ವಲಯಗಳಲ್ಲಿರುವ ವಿಸ್ತರಿಸುತ್ತಿದೆ,ಇತರ ದೇಶಗಳೊಂದಿಗೆ ಭಾರತದ ಪಾತ್ರವು ಹೋಲಿಸುವುದು ನಮ್ಮ ತಿಳುವಳಿಕೆಯನ್ನು ವಿಸ್ತರಿಸುವ ಸಹಾಯ ಮಾಡಬಹುದು,ಇದಕ್ಕೆ ಸಂಬಂಧಿಸಿದಂತೆ ಅನೇಕ ಲೇಖನಗಳನ್ನು ವಿಕಿಪಿಡಿಯದಲ್ಲಿ ನೋಡಬಹುದು,ಈ ವಿಷಯದಲ್ಲಿ ಹೆಚ್ಚಿನ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ.

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಆರ್ಥಿಕತೆ ಮತ್ತು ಸರ್ಕಾರದ ಪಾತ್ರ ಚಟುವಟಿಕೆ ಸಂ 1
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಆರ್ಥಿಕತೆ ಮತ್ತು ಸರ್ಕಾರದ ಪಾತ್ರ ಚಟುವಟಿಕೆ ಸಂ 2

ಪರಿಕಲ್ಪನೆ #2 ಆರ್ಥಿಕ ಯೋಜನೆಗಳು

ಒಂದು ಸಿದ್ಧಾಂತದ ಪ್ರಕಾರ ಉಚಿತ ಮಾರಕಟ್ಟೆ ಮತ್ತು ಬಂಡವಾಳಶಾಹಿ ಪದ್ಧತಿಯ ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರವು ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ, ಸೇವೆಗಳ ನಿರ್ವಹಣೆ ಮತ್ತು ಉತ್ಪಾದನೆ ಪ್ರಮಾಣಕ್ಕೆ ಅನುಸಾರವಾಗಿ ಸಮಾಜವಾದ ಆಧಾರದ ಮೇಲೆ ರಾಜ್ಯದ ಯೋಜನೆಯನ್ನು ಮಾಡಲಾಗುತ್ತಿದೆ. ಭಾರತವು ಸೋವಿಯೆಟ್ ಒಕ್ಕೂಟದ ರಾಷ್ಟ್ರೀಯ ಆರ್ಥಿಕ ಐದು ವರ್ಷದ ಯೋಜನೆSoviet Union model of five year plansಅಳವಡಿಸಿಕೊಂಡಿದೆ, ಮತ್ತು ಶೀಘ್ರ ಕೈಗಾರಿಕೀಕರಣವನ್ನು ಬೆಂಬಲಿಸುವುದೇ ಅರ್ಥವ್ಯವಸ್ಥೆಯ ಆರಂಭಿಕ ಗಮನವಾಗಿದೆ. ಈ ವಿಧಾನವು ಅಡಿಯಲ್ಲಿ,ಸಾರ್ವಜನಿಕ ವಲಯದ ಸಾಕಷ್ಟು ಪ್ರಾಬಲ್ಯ ಪಡೆಯುತ್ತಿದೆ,ಭಾರತದ ಮೊದಲ ಪ್ರಧಾನ ಮಂತ್ರಿ ಜವಹಾರ ಲಾಲ್ ನೆಹರು ಅವರು ದಶಕಗಳಿಂದ ಆರ್ಥಿಕ ಉತ್ತುಂಗದ ಅಧಿಪತ್ಯವು ಸಾರ್ವಜನಿಕ ವಲಯದಿಂದ ಸಾಧ್ಯವಾಗುತ್ತದೆ ಅದಕ್ಕೆ ಅವರು ಬೆಂಬಲವನ್ನು ವ್ಯಕ್ತಪಡಿಸಿದರು. ಅದಕ್ಕಾಗಿ ಮಿಶ್ರ ಆರ್ಥಿಕ ಚಳುವಳಿ ಪ್ರಬಲವಾಯಿತು,ಭಾರತದ ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಮಾರ್ಗದರ್ಶಿಯಲ್ಲಿ ಪಂಚವಾರ್ಷಿಕ ಯೋಜನೆಗಳು ಆರ್ಥಿಕ ಕ್ಷೇತ್ರದಲ್ಲಿ ಮಹತ್ವಪೂರ್ಣ ಪಾತ್ರವನ್ನು ವಹಿಸಿವೆ.

ಕಲಿಕೆಯ ಉದ್ದೇಶಗಳು

  1. ಆರ್ಥಿಕ ಯೋಜನೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊ‍ಳ್ಳುವುದು.
  2. ಭಾರತದ ಪಂಚವಾರ್ಷಿಕ ಯೋಜನೆಯ ಬಗ್ಗೆ ಅರಿವು ಮೂಡಿಸುವುದು.
  3. ಭಾರತದ ಪಂಚವಾರ್ಷಿಕ ಯೋಜನೆಗಳ ಲಾಭಗಳು ಹಾಗೂ ಮಿತಿಗಳನ್ನು ಅರ್ಥಮಾಡಿಕೊಳುವುದು.

ಶಿಕ್ಷಕರಿಗೆ ಟಿಪ್ಪಣಿ

ಭಾರತದ ಪಂಚವಾರ್ಷಿಕ ಯೋಜನೆಯ ಇತಿಹಾಸದ ವಿವರವನ್ನು ನಾವು ವಿಕಿಪಿಡಿಯದಲ್ಲಿ ನೋಡಬಹುದು, Wikipedia ಭಾರತದ ಇತಿಹಾಸದಲ್ಲಿ ಯೋಜನೆಗಳು ಕಾಲಕ್ಕೆ ಅನುಗುಣವಾಗಿ ಅದರ ಆದ್ಯತೆ ಮತ್ತು ಕ್ಷೇತ್ರಕ್ಕ ಅನುಗುಣವಾಗಿ ಯಾವ ತರಹದ ಬದಲಾವಣೆಗಳು ಆಗಿವೆ ಎಂದು ನಾವು ನೋಡಬಹುದು, ಆರಂಭದಲ್ಲಿ ಪ್ರಾಥಮಿಕ ಕ್ಷೇತ್ರಗಳಾದ ಕೈಗಾರಿಕರಣದ ಬಗ್ಗೆ ಹೆಚ್ಚು ಗಮನವನ್ನು ನೀಡಲಾಯಿತು, ಇದು ಈಗ ಬೇರೆ ಕಡೆ ಯೋಜನೆಗಳಲ್ಲಿ ಗಮನ ಕೊಡಲಾಗುತ್ತದೆ ಮತ್ತು ಈಗ ಸೇವಾ ಕ್ಷೇತ್ರದ ಕಡೆ ಗಮನವನ್ನು ನೀಡಲಾಗುತ್ತಿದೆ, ಸಾರ್ವಜನಿಕ ವಲಯಗಳಲ್ಲಿ ನೇರ ಹಸ್ತಕ್ಷೇಪವನ್ನು ಮಾಡಲಾಗುತ್ತಿದೆ ಮತ್ತು ಖಾಸಗಿ ವಲಯಯಗಳ ಪಾತ್ರವನ್ನು ಕಡಿಮೆ ಆಗುತ್ತಿದೆ ಆದ ಕಾರಣ ಭಾರತದಲ್ಲಿ ಉದಾರೀಕರಣ ಹೆಚ್ಚಾಗುತ್ತಾ ಬರುತ್ತಿದೆ.ಉದಾರೀಕರಣ ಪ್ರಕ್ರಿಯೆ ಹೆಚ್ಚಾಗುತ್ತಾ ಬಂದಿರುವುದರಿಂದ ಇತ್ತೀಚಿನ ಪಂಚವಾರ್ಷಿಕ ಯೋಜನೆಯಲ್ಲಿ "ಜಾಗತೀಕರಣದಲ್ಲಿ ಮಾನವನ ಮುಖ" ಮತ್ತು 'ಸುಸ್ಥಿರ ಅಭಿವೃದ್ಧಿ"ಕಡೆಗೆ ಹೆಚ್ಚು ಗಮನವನ್ನು ನೀಡಲಾಗಿದೆ.ಇದರ ಜೊತೆ ಆರ್ಥಿಕ ಚಟುವಟಿಕೆಗಳಿಂದ ಪರಿಸರದಲ್ಲಿ ಆಗುವ ಪರಿಣಾಮಗಳ ಬಗ್ಗೆ ಗಮನವನ್ನು ನೀಡಲಾಗುತ್ತಿದೆ,ವಾಸ್ತವವಾದ ಕಲಿಕಾರ್ಥಿಗಳಿಗೆ ಈ ಐತಿಹಾಸಿಕ ನಿರೂಪಣೆಗಳಾದ ಯೋಜನೆ ಪ್ರಕ್ರಿಯೆಗಳ ವಿವರಗಳು ಸಹಾಯ ಮಾಡುತ್ತವೆ.

ಚಟುವಟಿಕೆಗಳು

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಆರ್ಥಿಕ ಮತ್ತು ಸರ್ಕಾರದ ಆರ್ಥಿಕ ಯೋಜನೆ ಚಟುವಟಿಕೆ ಸಂ 1
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಆರ್ಥಿಕ ಮತ್ತು ಸರ್ಕಾರದ ಆರ್ಥಿಕ ಯೋಜನೆ ಚಟುವಟಿಕೆ ಸಂ 2

CCE ಚಟುವಟಿಕೆಗಳನ್ನು ಸಾಮಾನ್ಯವಾಗಿ ದಿನಪತ್ರಿಕೆ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುವ ನಿರ್ದಿಷ್ಟ ಸರ್ಕಾರಿ ಯೋಜನೆಗಳು, ಚಟುವಟಿಕೆಗಳು, ಪ್ರಕಟಣೆಗಳು ಕುರಿತಾದ ಹಲವಾರು ಬರುತ್ತಿವೆ,

ವಿದ್ಯಾರ್ಥಿಗಳನ್ನು ತಮಗೆ ಆಸಕ್ತಿಯಿರುವ ವಿಷಯಗಳನ್ನು ಆಯ್ಕೆ ಮಾಡಿಕೊಂಡು ತಾವು ಮಂಡಣೆ ಮಾಡಲು ತಿಳಿಸುವುದು(ಪ್ರತಿ ವಿಷಯಕ್ಕೂ ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ಮಾಡುವುದು)ಚರ್ಚೆಯ ನಂತರ ವಿದ್ತಾರ್ಥಿಗಳಿಗೆ ಆರ್ಥಿಕ ಸಮಸ್ಯೆಗಳ ಬಗ್ಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರದ ಪಾತ್ರವನ್ನು ತಿಳಿಯುವರು.ಉದಾಹರಣೆಗೆ ಸರ್ಕಾರದಿಂದ ಬರುತ್ತಿರುವ ಸಾರ್ವಜನಿಕ ಸರಕುಗಳ ಬಗ್ಗೆ ತಿಳಿಯುವರು, SSA, RMSAಶಾಲಾ ಶಿಕ್ಷಣಕ್ಕೆ Mid day mealsಗಳ ಬಗ್ಗೆ ಮಕ್ಕಳ ಜೊತೆ ಚರ್ಚೆಯನ್ನು ಮಾಡಬಹುದು. ಅನುದಾನದ ಮಂಜೂರಾತಿಗಳು ಏನಿದೆ?ಯಾವ ರೀತಿ ಸರ್ಕಾರಕ್ಕೆ ಇದಕ್ಕೆ ಹಣವನ್ನು ಒದಗಿಸುತ್ತದೆ?ಇದಕ್ಕೆ ಹಣಕಾಸಿನ ಅಗತ್ಯವಿದೆನಾ?ಆರೋಗ್ಯ ಕ್ಕೆ ಸಂಬಂಧಿಸಿದಂತಾ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಮೂಖಾಂತರ ನಡೆಯುತ್ತದೆ.

ಎರಡನೇ ಉದಾಹರಣೆ: ಅದೇ ರೀತಿ ಸರ್ಕಾರವು ಬಡತನ ಮತ್ತು ನಿರುದ್ಯೋಗ ಕಡಿಮೆ ಮಾಡುವಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯನ್ನು ಜಾರಿಗೆ ತಂದಿದೆ,Mahatma Gandhi National Rural Employment Guarantee Act (MGNREGA)ಮತ್ತು ಜೀವನೋಪಾಯಕ್ಕೆ ಜೀವನೋಪಾಯಕ್ಕೆ ಸಂಬಂಧಿಸಿದಂತೆ ಚರ್ಚೆಯನ್ನು ಮಾಡಲಾಗುವುದು.

ಮೂರನೇ ಉದಾಹರಣೆ ಆರ್ಥಿಕ ಒತ್ತಡಗಳು ಹಣದುಬ್ಬರದ ಮೂಲಕ ಕೌಂಟರ್ ವ್ಯವಹಾರ ಆವರ್ತಗಳಿಗೆ ಪ್ರತಿಕ್ರಿಯಿಸುವ ಕೆಲಸ ಸರಕಾರ ಮಾಡುತ್ತದೆ ಮತ್ತು ಹಣಕಾಸು ಕೊರತೆ ಕಡಿಮೆ ಮಾಡುವುದು. balancing the budget.

ಇಂತಹ ಸ್ಥೂಲ ಆರ್ಥಿಕ ವಿಷಯಗಳ ಚರ್ಚೆಯಿಂದ ಶಿಕ್ಷಕರಿಗೆ ಈ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರಿಗೆ ಸುಲಭವಾಗುತ್ತದೆ.

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ನಿಮ್ಮ ಶಾಲೆಯ ಶೈಕ್ಷಣಿಕ ಯೋಜನೆ ವಿಮರ್ಶೆ (ಸ್ಯಾಪ್)ಹಣದ ಖರ್ಚು ಮತ್ತು ರಸೀದಿಗಳಿಗೆ ಯಾವ ವಿಧದ ಘಟಕಗಳನ್ನು ಅಳವಡಿಸಿಕೊಳ್ಳುತ್ತೀರಾ?ಈ ವರ್ಷದ ಯೋಜನೆಯನ್ನು ಕಳೆದ ಐದು ವರ್ಷದ ಯೋಜನೆಗೆ ಹೋಲಿಕೆ ಮಾಡಿ, ನಿಮ್ಮ ಶಾಲೆಯ ಸರ್ವತೋಮುಖ ಬೆಳವಣಿಗೆ ಮತ್ತು ಆಡಳಿತ್ಮಾತಕ ಬೆಳವಣಿಗೆಯನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಮುಂದಿನ ಐದು ವರ್ಷದ ಯೋಜನೆಯನ್ನು ಮಾಡಿ,ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೀವು ಯೋಜನೆ ಮಾಡುವಿರಿ? ಈ ಎಲ್ಲಾ ಯೋಜನೆಯನ್ನು ಯಾರು ಒಂದುಗೂಡಿಸಿ ಒಂದು ಹಂತಕ್ಕೆ ತರುತ್ತಾರೆ?

ಸಮುದಾಯ ಆಧಾರಿತ ಯೋಜನೆಗಳು

ನಿಮ್ಮ ಸ್ಥಳೀಯ ಅಂಗಡಿ ವ್ಯಾಪಾರಿ ಜೊತೆ ಸಂದರ್ಶನ ಮಾಡಿ, ಮತ್ತು ಭಾರತದ ಆರ್ಥಿಕತೆಯಲ್ಲಿ ಪಂಚಾಯಿತ ಅಧಿಕಾರದ ಪಾತ್ರವೇನು ಎಂಬುದನ್ನು ಚರ್ಚಿಸುವುದು ಮತ್ತು ಸರಕಾರದ ಪಾತ್ರ ಹೆಚ್ಚಾಗಿದೆ ಅಥಾವ ಕಡಿಮೆ ಆಗಿದೆ ಮತ್ತು ಕೆಲಸದ ಸ್ವರೂಪದ ಹೇಗಿರುತ್ತದೆ.

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು