ಬಾದಾಮಿಯ ಚಾಲುಕ್ಯರು ಮತ್ತು ಕಂಚಿಯ ಪಲ್ಲವರು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Badami chalukyaru.mm

ಪಠ್ಯಪುಸ್ತಕ

NCERT & CBSE


ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಬಾದಾಮಿ ಚಾಲುಕ್ಯರ ಆಡಳಿತ ನಕಾಶೆ

ಬಾದಾಮಿ ಚಾಲುಕ್ಯರ ಬಗ್ಗೆ ಹೆಚ್ಚಿನದಾಗಿ ತಿಳಿಯಲು ಈ ಲಿಂಕನ್ನುಸಂಪರ್ಕಿಸಿ

ಬಾದಾಮಿ ಚಾಲುಕ್ಯರ ಕಾಲದ ನಕಾಶೆಯನ್ನುವೀಕ್ಷಿಸಲು ಈ ಲಿಂಕನ್ನುಕ್ಲಿಕ್ಕಿಸಿ

ಬಾದಾಮಿ ಚಾಲುಕ್ಯರ ಕಾಲದ ವಾಸ್ತುಶಿಲ್ಪಕಲೆಗಳನ್ನುವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ

ಬಾದಾಮಿ ಚಾಲುಕ್ಯರ ಸಂಪೂರ್ಣ ವಾಸ್ತುಶಿಲ್ಪಕಲೆಗಳನ್ನು ಯೂಟೂಬ್ ನಲ್ಲಿ ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ


ಬಾದಾಮಿ ಚಾಲುಕ್ಯರ ಸಂಪೂರ್ಣವಾಸ್ತುಶಿಲ್ಪಕಲೆಗಳ ಮಾಹಿತಿಯನ್ನು ಹಚ್ಚಿನದಾಗಿ ತಿಳಿಯಲು ಈ ಲಿಂಕನ್ನುಕ್ಲಿಕ್ಕಿಸಿ

ಸಂಬಂಧ ಪುಸ್ತಕಗಳು

ಕನ್ನಡ ವಿಶ್ವಕೋಶ "ಚರಿತ್ರೆ"- ಕನ್ನಡ ವಿಶ್ವವಿದ್ಯಾನಿಲಯ ಹಂಪಿ.

ಭಾರತದ ಇತಿಹಾಸ ಭಾಗ-೧ -- ಪ್ರೊ.ಗಿಲ್ಬರ್ಟ್ ಸಿಕ್ವೇರ & ಪ್ರೊ.ಸ್ಟೀವನ್ ಕ್ವಾಡ್ರಸ್.

ಭಾರತದ ಪೌಢ ಇತಿಹಾಸ- ಆರ್ .ಸಿ ಮಜುಂದಾರ್.

History of Ancient India _ Kundra and Kundra.

ಬೋಧನೆಯ ರೂಪರೇಶಗಳು

ದಕ್ಷಿಣ ಭಾರತವನ್ನು ಆಳಿದ ಪ್ರಮುಖ ರಾಜವಂಶ ಬಾದಾಮಿ ಚಾಲುಕ್ಯ ವಂಶದ ಸ್ಥಾಪನೆ ,ಪ್ರಮುಖ ಅರಸರು,ವಂಶಾವಳಿ,ಅವಧಿ, ಕೇಂದ್ರಾಡಳಿತ, ಸ್ಥಳೀಯ ಆಡಳಿತ ,ಕಂದಾಯ ವ್ಯವಸ್ಥೆ ,ಸೇನಾಡಳಿತ ಹಾಗೂ ಸಾಮಾಜಿಕ, ಧಾರ್ಮಿಕ,ಕಲೆ ಮತ್ತು ವಾಸ್ತುಶಿಲ್ಪ ಮುಂತಾದ ಕ್ಷೇತ್ರಗಳಿಗೆ ಚಾಲುಕ್ಯರ ಕೊಡುಗೆಗಳನ್ನು ಸವಿಸ್ತಾರವಾಗಿ ತಿಳಿಯುವುದು..

ಪ್ರಮುಖ ಪರಿಕಲ್ಪನೆಗಳು #

ಆಳ್ವಿಕೆಯ ಅವಧಿ

ಸಾಮ್ರಾಜ್ಯದ ವಿಸ್ತಾರ

ಸ್ಥಾಪಕರು

ಪ್ರಮುಖ ಅರಸರು

ಆಡಳಿತ

ಕೊಡುಗೆಗಳು-ಕಲೆ,ವಾಸ್ತುಶಿಲ್ಪ,ಆಡಳಿತ,ಧರ್ಮ

ವಂಶಾವಳಿ

ಅವನತಿ-ಚಾಲುಕ್ಯ -ಪಲ್ಲವ ಸಂಘರ್ಷ

ಕಲಿಕೆಯ ಉದ್ದೇಶಗಳು

೧)ಬಾದಾಮಿ ಚಾಲುಕ್ಯರ ಸ್ಥಾಪನೆ,ಪ್ರಸಿದ್ಧ ದೊರೆ ಇಮ್ಮಡಿ ಪುಲಕೇಶಿ ಕಾಲದ ಸಾಮ್ರಾಜ್ಯ ವಿಸ್ತರಣೆಯನ್ನು ತಿಳಿಯುವುದು

೨)ಧಾರ್ಮಿಕ,ಸಾಮಾಜಿಕ,ಸೈನ್ಯ,ನ್ಯಾಯಾಡಳಿತ ವ್ಯವಸ್ಥೆಗಳನ್ನು ತಿಳಿವುದು.

೩)ದಕ್ಷಿಣಭಾರತದ ಭೂಪಟದಲ್ಲಿ ಬಾದಾಮಿ.ಐಹೊಳೆ,ಪಟ್ಟದಕಲ್ಲುಗಳನ್ನು ಗುರುತಿಸುವುದು

೪)” ಸಂಘರ್ಷವೇ ಪಲ್ಲವ-ಚಾಲುಕ್ಯ ವಂಶಗಳ ಅವನತಿಗೆ ಕಾರಣವಾಯಿತು ಎಂಬ ವಿಷಯ ಮನದಟ್ಟು ಮಾಡಿಸುವುದು

ಶಿಕ್ಷಕರ ಟಿಪ್ಪಣಿ

ವಂಶಗಳು: ಚಾಲುಕ್ಯರು ದಕ್ಷಿಣ ಪ್ರಸ್ಥಭೂಮಿಯ ಪ್ರದೇಶವನ್ನು ೬೦೦ ವರ್ಷಗಳಷ್ಟು ದೀರ್ಘ ಕಾಲ ಆಳಿದರು. ಈ ಅವಧಿಯಲ್ಲಿ ಮೂರು, ಸ್ವತಂತ್ರ ಆದರೆ ನಿಕಟ ಸಂಬಂಧದ, ರಾಜ್ಯಗಳಾಗಿ ಮೆರೆದಿದ್ದವು. ಇವು ಬಾದಾಮಿಯ ಚಾಲುಕ್ಯರು, (ಕ್ರಿ.ಶ. ೬ - ೮ನೆಯ ಶತಮಾನ) ಮತ್ತು ಅವರದೇ ಸೋದರ ಸಾಮ್ರಾಜ್ಯಗಳಾದ ಕಲ್ಯಾಣಿಯ ( ಪಶ್ಚಿಮ) ಚಾಲುಕ್ಯರು ಮತ್ತು ವೆಂಗಿಯ (ಪೂರ್ವ) ಚಾಲುಕ್ಯರು.

ಸ್ಥಾಪನೆ: ಜಯಸಿಂಹ

ಪ್ರಮುಖ ಆರಸರು

ಚಾಲುಕ್ಯ ಸಾಮ್ರಾಜ್ಯವನ್ನು ಕಟ್ಟಿದವನು ಒಂದನೆಯ ಪುಲಿಕೇಶಿ (ಕ್ರಿ.ಶ. ೫೫೦). ವಾತಾಪಿಯನ್ನುವಶಪಡಿಸಿಕೊಂಡು ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ.ಈ ಚಾಲುಕ್ಯರು ಮುಂದೆ ಬಾದಾಮಿಯ ಚಾಲುಕ್ಯರು ಎಂದು ಪ್ರಸಿದ್ಧರಾದರು.ಪುಲಿಕೇಶಿ ಹಾಗೂ ಆತನ ವಂಶಸ್ಥರು ಆಳಿದ ರಾಜ್ಯ ಇಂದಿನ ಸಂಪೂರ್ಣ ಕರ್ನಾಟಕ ರಾಜ್ಯ ಮತ್ತು ಆಂಧ್ರ ಪ್ರದೇಶದ ಬಹುತೇಕ ಭಾಗಗಳನ್ನೊಳಗೊಂಡಿತ್ತು. ಇಮ್ಮಡಿ ಪುಲಕೇಶಿಬಾದಾಮಿ ಚಾಲುಕ್ಯರ ಅತಿ ದೊಡ್ಡ ಚಕ್ರವರ್ತಿ ಎನ್ನಲು ಅಡ್ಡಿಯಿಲ್ಲ.

ಒಂದನೆಯ ಪುಲಿಕೇಶಿ (ಕ್ರಿ.ಶ. ೫೪೩ – ೫೬ ೬ )

ಒಂದನೆಯ ಕೀರ್ತಿವರ್ಮ (ಕ್ರಿ.ಶ. ೫೬ ೬ – ೫೯ ೭ )

ಮಂಗಳೇಶ (ಕ್ರಿ.ಶ. ೫೯ ೭ – ೬ ೦೯ )

ಇಮ್ಮಡಿ ಪುಲಿಕೇಶಿ (ಕ್ರಿ.ಶ. ೬ ೦೯ – ೬ ೪೨ )

ಒಂದನೆಯ ವಿಕ್ರಮಾದಿತ್ಯ (ಕ್ರಿ.ಶ. ೬ ೫೫ – ೬ ೮೦ )

ವಿನಯಾದಿತ್ಯ (ಕ್ರಿ.ಶ. ೬ ೮೦ – ೬ ೯ ೬ )

ವಿಜಯಾದಿತ್ಯ (ಕ್ರಿ.ಶ. ೬ ೯ ೬ – ೭೩೩ )

ಎರಡನೆಯ ವಿಕ್ರಮಾದಿತ್ಯ (ಕ್ರಿ.ಶ. ೭೩೩ – ೭೪೬ )

ಎರಡನೆಯ ಕೀರ್ತಿವರ್ಮ (ಕ್ರಿ.ಶ. ೭೪೬ – ೭೫೩ )

ಕ್ರಿ.ಶ. ೭೫೩ರಲ್ಲಿ ರಾಷ್ಟ್ರಕೂಟರ ದಂತಿದುರ್ಗನು ಕೀರ್ತಿವರ್ಮನ್ನು ಸೋಲಿಸುವುದರೊಂದಿಗೆ ಈ ಚಾಲುಕ್ಯ ಸಾಮ್ರಾಜ್ಯಕ್ಕೆ ತೆರೆ ಬಿದ್ದಿತು.

ಬಾದಾಮಿ ಚಾಲುಕ್ಯರ ಕೊಡುಗೆಗಳು

ವಾಸ್ತುಶಿಲ್ಪ ಮತ್ತು ಕಲೆ ಚಾಲುಕ್ಯ ಸಾಮ್ರಾಜ್ಯದ ಶಾಶ್ವತ ಕೊಡುಗೆಗಳು. ಪಟ್ಟದಕಲ್ಲು , ಬಾದಾಮಿ,ಐಹೊಳೆಗಳಲ್ಲಿನ ಬಂಡೆಗಳಲ್ಲಿ ಕಡೆದ ದೇವಾಲಯಗಳು, ಅಜಂತಾ, ಎಲ್ಲೋರಾಗಳಲ್ಲಿನ ಸುಪ್ರಸಿದ್ಧ ಶಿಲ್ಪಕೃತಿಗಳು ಮತ್ತು ಭಿತ್ತಿಚಿತ್ರಗಳು ಚಾಲುಕ್ಯರ ಕಲಾಭಿರುಚಿಗೆ ಸಾಕ್ಷಿಯಾಗಿವೆ. ಈ ಕಾಲವನ್ನು ಚಾಲುಕ್ಯ ಶೈಲಿಯ ವಾಸ್ತುಶಿಲ್ಪದ ಆರಂಭಕಾಲವನ್ನಾಗಿ ಪರಿಗಣಿಸಲಾಗಿದೆ. ಕ್ರಿ.ಶ. ೪೫೦ - ೭೫೦ ರ ನಡುವೆ ಬರಿಯ ಐಹೊಳೆ ಒಂದರಲ್ಲಿಯೇ ನೂರೈವತ್ತಕ್ಕೂ ಹೆಚ್ಚು ದೇವಾಲಯಗಳನ್ನು ಬಾದಾಮಿ ಚಾಲುಕ್ಯರು ಕಟ್ಟಿಸಿದರು. ಈ ಆರಂಭ ಕಾಲದ ಕಲೆಯ ಉದಾಹರಣೆಯಾಗಿ ಐಹೊಳೆಯ ದುರ್ಗಾ (ಕ್ರಿ.ಶ.೬ ನೆಯ ಶತಮಾನ),ಲಾಡ್ ಖಾನ್ (ಕ್ರಿ.ಶ. ೪೫೦),ಮೇಗುತಿ (ಕ್ರಿ.ಶ.೬೩೪),ಹುಚ್ಚಿಮಲ್ಲಿ ಮತ್ತು ಹುಚ್ಚಪ್ಪಯ್ಯ (ಕ್ರಿ.ಶ. ೫ನೆಯ ಶತಮಾನ) ದೇವಾಲಯಗಳು, ಬಾದಾಮಿಯ ಗುಹಾ ದೇವಾಲಯಗಳನ್ನು ನೋಡಬಹುದು.ಪಟ್ಟದಕಲ್ಲಿನ ಅದ್ಭುತ ದೇವಾಲಯಗಳನ್ನು ಕಟ್ಟಿಸಿದವನು ಎರಡನೆಯ ವಿಕ್ರಮಾದಿತ್ಯ. (ಕ್ರಿ.ಶ.೭೪೦) ಇಲ್ಲಿನ ವಿರೂಪಾಕ್ಷ,ಮಲ್ಲಿಕಾರ್ಜುನ,ಸಂಗಮೇಶ್ವರ ಮತ್ತು ಒಂದು ಜೈನ ದೇವಾಲಯ ದ್ರಾವಿಡ ಶೈಲಿಯಲ್ಲಿದ್ದರೆ, ಜಂಬುಲಿಂಗ,ಕಾಶಿವಿಶ್ವೇಶ್ವರ ಮತ್ತು ಗಳಗನಾಥ ದೇವಾಲಯಗಳು ಉತ್ತರ ಭಾರತೀಯ ನಾಗರ ಶೈಲಿಯಲ್ಲಿವೆ .ಪಾಪನಾಥ ದೇವಾಲಯದಲ್ಲಿ ದಕ್ಷಿಣ ಮತ್ತು ಉತ್ತರದ ಶೈಲಿಗಳ ಸಮ್ಮಿಶ್ರಣದ( ವೇಸರ ಶೈಲಿ) ಪ್ರಯತ್ನ ಕಾಣುತ್ತದೆ.

===ಚಟುವಟಿಕೆಗಳು #=== 1 ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯಗಳು ನಿಮ್ಮ ಊರಿನ ಸಮೀಪದಲ್ಲಿದ್ದರೆ ಬೇಟಿ ನೀಡಿ ಅದರ ಲಕ್ಷಣಗಳನ್ನು ಪಟ್ಟಿ ಮಾಡಿ

  • ಅಂದಾಜು ಸಮಯ - ೩ ಗಂ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು - ನೋಟ್ ಬುಕ್,ಪೆನ್ನು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ - ವಿದ್ಯಾರ್ಥಿಗಳಿಗೆ ತಮ್ಮ ಊರಿನ ದೇವಾಲಯಗಳು ಯಾವ ರಾಜರ ಕಾಲದಲ್ಲಿ ನಿರ್ಮಾಣಗೊಂಡಿವೆ ಎಂಬುದನ್ನು ಊರಿನ ಹಿರಿಯರನ್ನು ಕೇಳಿ ತಿಳಿಯಲು ಹೇಳುವುದು
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು,ಶಾಲಾ ಗ್ರಂಥಾಲಯ
  • ಅಂತರ್ಜಾಲದ ಸಹವರ್ತನೆಗಳು,
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

ನಿಮ್ಮ ಊರಿನ ದೇವಾಲಯಗಳಿಗೆ ಹಾಗೂ ಚಾಲುಕ್ಯ ದೇವಾಲಯಗಳಿಗೆ ಇರುವ ವ್ಯತ್ಯಾಸಗಳನ್ನು ಚರ್ಚಿಸಿ,ನಿಮ್ಮ ಊರಿನ ದೇವಾಲಯಗಳು ಯಾವ ಶೈಲಿಯಲ್ಲಿ ಎಂಬುದನ್ನು ಊಹಿಸಿ.

  • ಅಂದಾಜು ಸಮಯ - ೪೫ ನಿ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು - ಚಾರ್ಟುಗಳು.ಫೋಟೋಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ - ಗ್ರಂಥಾಲಯಕ್ಕೆ ಬೇಟಿ ನೀಡಿ ಆಕರ ಗ್ರಂಥ ಗಳನ್ನುಪರಾಮರ್ಶಿಸಿ ಚಾಲುಕ್ಯ ವಾಸ್ತುಶಿಲ್ಪದ ಲಕ್ಷಣಗಳನ್ನು ಪಟ್ಟಿ ಮಾಡಿ
  • ಬಹುಮಾಧ್ಯಮ ಸಂಪನ್ಮೂಲಗಳು - ಅಂತರ್ಜಾಲದಿಂದ ಪಡೆದ ಫೋಟೋಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? - ಚಾಲುಕ್ಯರ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ತೋರಿಸುವುದು. ಅದರ ಲಕ್ಷಣಗಳೊಂದಿಗೆ ತಮ್ಮ ಊರಿನ ದೇವಾಲಯಗಳನ್ನು ಹೋಲಿಸುವುದು ಪ್ರಶ್ನೆಗಳು

ಮಕ್ಕಳು ಮಾಡಿಕೊಂಡು ಬಂದಿರುವ ತಯಾರಿಯ ಬಗ್ಗೆ ಪ್ರಶ್ನೆ ಪ್ರಾರಂಬಿಸುವುದು?ನೀವು ಗಮನಿಸಿದಂತೆ ಚಾಲುಕ್ಯ ಶೈಲಿಯ ದೇವಾಲಯಗಳನ್ನು ನಿಮ್ಮ ಊರಿನಲ್ಲಿ ಗಮನಿಸಿದಿರಾ ?ಯಾವ ವ್ಯತ್ಯಾಸ ಗಮನಿಸಿದಿರಿ?

  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

ಚಾಲುಕ್ಯ ಶೈಲಿ ದೇವಾಲಯದ ಚಿತ್ರ ಬಿಡಿಸಿ , ಅದರಲ್ಲಿ ಗೋಪುರ, ಮಂಟಪ, ಪ್ರದಕ್ಷಿಣಾ ಪಥ, ಗರ್ಭಗೃಹ ,ಜಗತಿಗಳನ್ನು ಗುರುತಿಸಿ

  • ಅಂದಾಜು ಸಮಯ - ಒಂದು ತರಗತಿ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು - ಪೇಪರ್,ವಾಟರ್ ಕಲರ್,ಕ್ರೆಯಾನ್ಪೆನ್ಸಿಲ್ ಗಳು,ಚಾರ್ಟ್ ಗಳು.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು - ಆಂತರ್ಜಾಲದ ಚಿತ್ರಗಳು
  • ವಿಧಾನ - ಮಕ್ಕಳಿಗೆ ಬಾದಾಮಿ ಚಾಲುಕ್ಯರ ವಿವಿಧ ದೇವಾಲಯಳ ಚಿತ್ರಗಳನ್ನು ಅಂತರ್ಜಾಲ ಬಳಸಿ ವೀಕ್ಷಿಸಲು ಅವಕಾಶ ಮಾಡಿ ಕೊಡುವುದು.ಅದರಲ್ಲಿ ಗೋಪುರ,ಮಂಟಪ, ಪ್ರದಕ್ಷಿಣಾ ಪಥ, ಗರ್ಭ ಗ್ರಹ ಗಳನ್ನು ಪರಿಚಯಿಸಿ ಸ್ವತಃ ಬಿಡಿಸಲು ಸೂಚಿಸುವುದು
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? - ಮಕ್ಕಳಿಗೆ ನೀವು ಅವರ ವಾಸ್ಥುಶಿಲ್ಪ ಶೈಲಿಯಲ್ಲಿ ಗಮನಿಸಿದ ವಿಶೇಷತೆಯೇನು ? ಎಂದು ಪ್ರಶ್ನಿಸುವುದು.ನಿಮಗೆ ಇಷ್ಟವಾದ ಕಲಾಕೃತಿ ಯಾವುದು ? ಇಂದಿನ ಕಾಲದಲ್ಲಿ ದೇವಾಲಯಗಳ ರಚನೆ ಸಾಧ್ಯ ವಿದೆ? ಇಲ್ಲವಾದರೆ ಕಾರಣವೇನು ?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು - ಮಗು ಚಟುವಟಿಕೆಯಲ್ಲಿ ಭಾಗವಹಿಸುತ್ತಿದೆಯೇ 2. ಮಗು ತಾನು ಗಮನಿಸಿ ಅಂಶಗಳನ್ನು ಇತರರೊಡನೆ ಹಂಚಿಕೊಂಡು ವಿಶ್ಲೇಷಿಸುತ್ತಿದೆಯ? 3.ಮಗು ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದ ವಿಶೇಷತೆಯನ್ನು ಗಮನಿಸಿದೆಯೇ? 4. ಮಗು ತನ್ನ ಅಲೋಚನೆಯನ್ನು ಚಿತ್ರದಲ್ಲಿ ಅಭಿವ್ಯಕ್ತಪಡಿಸಿದೆಯೇ ಎಂಬುದನ್ನು ತಿಳಿಯುವುದು.

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಹಾಳಾಗುತ್ತಿರುವ ಐತಿಹಾಸಿಕ ಪಾರಂಪಾರಿಕ ಕಟ್ಟಡಗಳನ್ನು ಸಂರಕ್ಷಿಸುವ ಕ್ರಮಗಳನ್ನು ಪಟ್ಟಿ ಮಾಡಿ

ಸಮುದಾಯ ಆಧಾರಿತ ಯೋಜನೆಗಳು

೧)ನಿಮ್ಮ ಊರಿನ ಗ್ರಾಮಲೆಕ್ಕಿಗರನ್ನು ಭೇಟಿ ಮಾಡಿ ಆಗಿನ ಕಾಲದ ಹಾಗೂ ಈಗಿನ ಕಾಲದ ಕಂದಾಯ ವ್ಯವಸ್ಥೆ ಗಿರುವ ವ್ಯತ್ಯಾಸಗಳನ್ನು ತಿಳಿಯಿರಿ.

೨)ಐತಿಹಾಸಿಕ ಪರಂಪರೆಯನ್ನು ಉಳಿಸುವ ಬಗ್ಗೆ ಜಾಗೃತಿ ಮೂಡಿಸಲು ಜಾಥಾ ನಡೆಸುವುದು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ