ಆ ಮಕ್ಕಳು ತಮ್ಮ ಗುರು ಸುದತ್ತಾಚಾರ್ಯರ ಅಪ್ಪಣೆಯಂತೆ ಭಿಕ್ಷೆಗೆ ಹೊರಟವರು. ಬಾಲಕನ ಹೆಸರು ಅಭಯರುಚಿ, ಬಾಲಕಿಯ ಹೆಸರು ಅಭಯಮತಿ. ಅವರಿಬ್ಬರೂ ಯಶೋಮತಿ ಎಂಬ ಅರಸನ ಮಕ್ಕಳು. ಅವರು ಚಿಕ್ಕ ವಯಸ್ಸಿನಲ್ಲಿಯೇ ಜೈನದೀಕ್ಷೆ ಪಡೆದಿದ್ದರು. ಬಲಿಕೊಡುತ್ತಾರೆ ಎಂದರೆ ಎಷ್ಟು ಹೆದರಿಕೆ ಆಗಬೇಕು, ಅಲ್ಲವೆ? ದೊಡ್ಡವರೇ ನಡುಗಿ ಅತ್ತು ‘ನಮ್ಮನ್ನು ಉಳಿಸಿ’ ಎಂದು ಬೇಡುವ ಸನ್ನಿವೇಶ. ಆದರೆ ತಳವಾರನು ಆ ಇಬ್ಬರು ಮಕ್ಕಳನ್ನು ಹಿಡಿದು ತರುತ್ತಿದ್ದರೂ ಅವರು ಅಂಜದೆ ಒಬ್ಬರನ್ನೊಬ್ಬರು ಸಮಾಧಾನ ಪಡಿಸುತ್ತಿದ್ದರು. ತಳವಾರ ಅವರನ್ನು ಮಾರಿಗುಡಿಯ ಬಳಿಗೆ ಕರೆತಂದ. | ಆ ಮಕ್ಕಳು ತಮ್ಮ ಗುರು ಸುದತ್ತಾಚಾರ್ಯರ ಅಪ್ಪಣೆಯಂತೆ ಭಿಕ್ಷೆಗೆ ಹೊರಟವರು. ಬಾಲಕನ ಹೆಸರು ಅಭಯರುಚಿ, ಬಾಲಕಿಯ ಹೆಸರು ಅಭಯಮತಿ. ಅವರಿಬ್ಬರೂ ಯಶೋಮತಿ ಎಂಬ ಅರಸನ ಮಕ್ಕಳು. ಅವರು ಚಿಕ್ಕ ವಯಸ್ಸಿನಲ್ಲಿಯೇ ಜೈನದೀಕ್ಷೆ ಪಡೆದಿದ್ದರು. ಬಲಿಕೊಡುತ್ತಾರೆ ಎಂದರೆ ಎಷ್ಟು ಹೆದರಿಕೆ ಆಗಬೇಕು, ಅಲ್ಲವೆ? ದೊಡ್ಡವರೇ ನಡುಗಿ ಅತ್ತು ‘ನಮ್ಮನ್ನು ಉಳಿಸಿ’ ಎಂದು ಬೇಡುವ ಸನ್ನಿವೇಶ. ಆದರೆ ತಳವಾರನು ಆ ಇಬ್ಬರು ಮಕ್ಕಳನ್ನು ಹಿಡಿದು ತರುತ್ತಿದ್ದರೂ ಅವರು ಅಂಜದೆ ಒಬ್ಬರನ್ನೊಬ್ಬರು ಸಮಾಧಾನ ಪಡಿಸುತ್ತಿದ್ದರು. ತಳವಾರ ಅವರನ್ನು ಮಾರಿಗುಡಿಯ ಬಳಿಗೆ ಕರೆತಂದ. |