ಸಣ್ಣ ಸಂಗತಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಕಲ್ಪನಾ ನಕ್ಷೆ

ಚಿತ್ರ:ಸಣ್ಣ ಸಂಗತಿ.mm

ಕಲಿಕೋದ್ದೇಶಗಳು

ಪದ್ಯದ ಉದ್ದೇಶ

  1. ಪದ್ಯ/ಕವನ ಸಾಹಿತ್ಯವನ್ನು ಅರ್ಥೈಸುವುದು
  2. ಕವನ ಸಾಹಿತ್ಯ ಪರಿಚಯದ ಮೂಲಕ ತಾಯಿಯ ಮಮತೆ ಮತ್ತು ಆರೈಕೆ ಅರ್ಥೈಸುವುದು
  3. ಮಾನವನ ನೈಜ ಜೀವನವನ್ನು ಪರಿಸರಕ್ಕೆ ಹೋಲಿಸಿ ಪರಿಚಯಿಸುವುದು
  4. ಪದ್ಯದ ತಿರುಳನ್ನು ಶ್ಲಾಘಿಸುವುದು
  5. ಪದ್ಯದ  ಗುಣಲಕ್ಷಣವನ್ನು ಅರ್ಥೈಸುವುದು
  6. ಅರ್ಥೈಸಿಕೊಂಡ ಪದ್ಯದ ಗೂಡಾರ್ಥವನ್ನು ತಿಳಿಯುವುದು

ಭಾಷಾ ಕಲಿಕಾ ಗುರಿಗಳು

  1. ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಪದ್ಯದ ಅರ್ಥವನ್ನು ತಿಳಿಯುವುದು
  2. ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಒಳ ಅರ್ಥವನ್ನು ತಿಳಿಯುವುದು
  3. ಅರ್ಥೈಸಿಕೊಂ ಡ ಕವನವನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
  4. ಕವನವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
  5. ಕಥನ ಕವನದ ರೂಪದಲ್ಲಿ ಕವನದ ಮರುಸೃಷ್ಟಿಸುವುದು
  6. ಪದ್ಯದ ಪ್ರಕಾರವನ್ನು /ಪದ ಬಳಕೆ ಅರ್ಥೈಸುವುದು

ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ/ಸಾಹಿತ್ಯ ಘಟ್ಟ ಪರಿಚಯ

ನವೋದಯ ಕಾವ್ಯವು ಮುಖ್ಯವಾಗಿ ಭಾವಗಳ ತೀವ್ರತೆಯ ಅಭಿವ್ಯಕಿಗೆ ಪ್ರಾಮುಖ್ಯತೆ ಕೊಟ್ಟಿತು. ಭಾವುಕತೆ, ಉತ್ಸಾಹ, ಸಮೃದ್ಧಿ ಆ ಕಾವ್ಯಗಳ ಪ್ರಮುಖ ಲಕ್ಷಣ. ಹಿಂದಿನ ಕಾವ್ಯ ಪರಂಪರೆಗೆ ಬೇರೆಯಾದ ಲಕ್ಷಣ, ಛಂದಸ್ಸು ಮತ್ತು ಶೈಲಿಯಿಂದ ಹೊಸಬಗೆಯ ಕಾವ್ಯದ ಪ್ರಕಾರ ವಾದ ಭಾವಗೀತೆ, ಕವನಗಳು ೨೦ನೇ ಶತಮಾನದ ಆದಿಯಿಂದ ಇಲ್ಲಿಯವರೆಗೂ ಕಾಲಕ್ಕೆ ತಕ್ಕಂತೆ ಶೈಲಿ, ಭಾವನೆ, ಚಿಂತನೆ, ಅಭಿವ್ಯಕ್ತಿಗಳಲ್ಲಿ ಬದಲಾವಣೆ ಹೊಂದುತ್ತಾ ಸಮೃದ್ಧವಾಗಿ ಬೆಳೆಯಿತು.

ಈ ಸಾಹಿತ್ಯ ಘಟ್ಟದ ಪ್ರಮುಖ ಕವಿಗಳೆಂದರೆ

ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ

ಒಂದು ರಾತ್ರಿ ಸೋನೆ ಮಳೆಯ ದಿನ ತಾಯಿ ತನ್ನ ಪುಟ್ಟ ಕಂದಮ್ಮನ ಜೊತೆ ಮಲಗಿರುವಳು. ಇಬ್ಬರಿಗೂ ತುಂಬು ನಿದ್ರೆ. ತಾಯಿ ನಿದ್ರೆಯಲ್ಲೂ ಎಚ್ಚರ. ಮಗು ಅರೆಗಣ್ಣಿನಲ್ಲೂ ನಿದ್ರಿಸುತ್ತಿದೆ. ಮಳೆಯ ರಾತ್ರಿ ತಾಯಿ ಮಗುವಿನ ಜೊತೆಗಿನ ಮಮತೆಯ ಸಂಬಂಧ ಇಲ್ಲಿ ವ್ಯಕ್ತವಾಗಿದೆ. ಇಲ್ಲಿ ಮಾನವ ಮತ್ತು ಪ್ರಕೃತಿಯನ್ನು ತಾಯಿ ಮಗುವಿಗೆ ಹೋಲಿಸಲಾಗಿದೆ.

ಕವಿ ಪರಿಚಯ

K S Narasimha Swamy photo of portrait from his home .jpeg

‘ಮೈಸೂರು ಮಲ್ಲಿಗೆ’ ಪದ ಕೇಳಿದ ತಕ್ಷಣ ನಮ್ಮ ಸ್ಮೃತಿಪಟಲದಲ್ಲಿ ಮೂಡುವ ಹೆಸರು ಕೆ. ಎಸ್. ನರಸಿಂಹಸ್ವಾಮಿಯವರು. ಕನ್ನಡದ ಕವಿಯೊಬ್ಬರು ಕಡಿಮೆ ಕಲಿತು ತಮ್ಮ ಕೃತಿಗಳ ಮೂಲಕ ಮಾತ್ರ ಆತ್ಮೀಯವಾಗಿ ಸೆಳೆದ ಒಂದು ಉದಾಹರಣೆ ಇದ್ದರೆ ಅದು ಕೆ. ಎಸ್. ನ. 1943ರಲ್ಲಿ ಕೆ. ಎಸ್. ನರಸಿಂಹ ಸ್ವಾಮಿಗಳ ಮೊದಲ ಕವಿತಾ ಸಂಗ್ರಹ ‘ಮೈಸೂರು ಮಲ್ಲಿಗೆ’ ಪ್ರಕಟವಾಯಿತು.

ಮಧುರವಾದ, ಅನನ್ಯವಾದ, ತಮ್ಮ ಪ್ರೇಮ-ದಾಂಪತ್ಯದ ಕಾವ್ಯದ ನೆಲೆಯಿಂದ, ಬದುಕಿನ ನಿಷ್ಠುರ ವಿನ್ಯಾಸಗಳನ್ನು ಗುರುತಿಸುವ ‘ತೆರೆದ ಬಾಗಿಲು’ಮೊದಲಾದ ಕವನಗಳವರೆಗೆ ಕೆ.ಎಸ್.ನ ಅವರು ನಡೆದ ಕಾವ್ಯದ ಒಡೆದು ತೋರುವ ಬೆಳವಣಿಗೆ ಬೆರಗು ಹುಟ್ಟಿಸುವಂಥದ್ದು.

ಇವರು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ 26-1-1915ರಂದು ಜನಿಸಿದರು. ತಂದೆ ಹೆಸರು ಕಿಕ್ಕೇರಿ ಸುಬ್ಬರಾಯರು.  ತಾಯಿಯವರು ಹೊಸ ಹೊಳಲು ನಾಗಮ್ಮನವರು. ಮೈಸೂರು, ಬೆಂಗಳೂರುಗಳಲ್ಲಿ ಅವರ ವಿದ್ಯಾಭ್ಯಾಸ ನಡೆದು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಜೂನಿಯರ್‌ ಬಿ.ಎ ಮುಗಿಸುವಲ್ಲಿ ಅವರ ಓದು (ಅಪೂರ್ಣ) ಮುಕ್ತಾಯವಾಯಿತು.  1936ರಲ್ಲಿ ವೆಂಕಮ್ಮನವರೊಂದಿಗೆ ವಿವಾಹವಾಯಿತು. ಈ ದಂಪತಿಗಳಿಗೆ ನಾಲ್ಕು ಗಂಡು ಮಕ್ಕಳು, ನಾಲ್ವರು ಹೆಣ್ಣುಮಕ್ಕಳು. 1937ರಲ್ಲಿ ಸರ್ಕಾರಿ ನೌಕರಿ ಸೇರಿ ಮೈಸೂರು, ನಂಜನಗೂಡು, ಬೆಂಗಳೂರಿನಲ್ಲಿ ತಮ್ಮ ಸೇವಾವಧಿ ಮುಗಿಸಿ 1970ರಲ್ಲಿ ನೌಕರಿಯಿಂದ ನಿವೃತ್ತರಾದರು. ಜೀವನದ ಉದ್ದಕ್ಕೂ ಆರ್ಥಿಕ ಕ್ಲೇಶ, ಸಾಂಸಾರಿಕ ತಾಪತ್ರಯಗಳಲ್ಲಿ ಬದುಕನ್ನು ತೇಯುತ್ತಾ ಬಂದರೂ ಅದರ ಚೆಲುವನ್ನು ತೆರೆದು ತೋರುತ್ತಾ, ಜೀವನ ಮುಖಿಯಾದ ಕಾವ್ಯವನ್ನು ತಮ್ಮ ವೈಯಕ್ತಿಕ ಬದುಕಿನ ನೆಲೆಯಿಂದಲೇ ಹೆಕ್ಕುತ್ತಾ ಹೋದದ್ದು ಈ ಕವಿಯ ವೈಶಿಷ್ಟ್ಯ.

ಅರಸಿ ಬಂದ ಪ್ರಶಸ್ತಿಗಳು ಹಲವಾರು. ದೇವರಾಜ ಬಹದ್ದೂರ್ ಬಹುಮಾನ, ರಾಜ್ಯ ಸಂಸ್ಕೃತಿ ಶಾಖೆ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ೧೯೯೦ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಾಸ್ತಿ ಪ್ರಶಸ್ತಿ, ಪಂಪ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿಗಳಿಗೆ ಭಾಜನರಾದವರು. ೧೯೭೦ರಲ್ಲಿ ಪ್ರೀತಿಯಿಂದ ಅರ್ಪಿಸಿದ ಗೌರವ ಗ್ರಂಥ ‘ಚಂದನ.’ ನಿಧನರಾದದ್ದು ೨೮.೧೨.೨೦೦೩ರಲ್ಲಿ.

ಕೆ ಎಸ್‌ ನರಸಿಂಹಸ್ವಾಮಿರವರ ವಿಕಿಪೀಡಿಯಾದಲ್ಲಿನ ಮಾಹಿತಿ

ಕೆ ಎಸ್‌ ನರಸಿಂಹಸ್ವಾಮಿ ಜೀವನಾಧಾರಿತ ಸಾಕ್ಷ್ಯಚಿತ್ರ

ಪಾಠದ ಬೆಳವಣಿಗೆ

ಘಟಕ - ೧ - ನಟ್ಟಿರುಳ ಕರಿಮುಗಿಲು

ಪಠ್ಯಭಾಗ - 1 - ಪರಿಕಲ್ಪನಾ ನಕ್ಷೆ

ವಿವರಣೆ

ನಟ್ಟಿರುಳ ಕರಿಮುಗಿಲ್ಲಿ ನೀರು - ತುಂಬಿಗಳ ನಡಿವೆ ಹುಣ್ಣಿಮೆಯು ತನ್ನ ಕಣ್ಣ ತೆರೆದಿದೆ. ತಾರೆಯು ಬಾನ ಬೀದಿಗೆ ಬಂದಿದೆ. ಅತ್ತ ಹಿಡಿದ ಸೋನೆಮಳೆಯ ಶೃತಿಗೆ ಗಾಳಿಯು ಜೊತೆಗೆ ಧನಿಗೂಡಿಸಿ ಹಾಡುತ್ತಿದೆ.

ಇದೇ ಸಮಯದಲ್ಲಿ ಪುಟ್ಟ ಮಗು ಒಂದು ತೊಟ್ಟಿಲ್ಲಿ ಅರ್ಧಕಣ್ಣು ಮುಚ್ಚಿ ಮಲಗಿದೆ. ಅದೂ ಬರಿ ಮೈಯಲ್ಲಿ. ಅದನ್ನು ನೋಡಿದ ಅರ್ಧ ಕಣ್ಣು ಮುಚ್ಚಿದ ತಾಯಿ ತನ್ನ ನಿದ್ದೆಗಣ್ಣಿನಲ್ಲಿಯೇ ತಡವರಿಸಿ ಹೊದಿಕೆಯನ್ನು ತನ್ನ ಮಗುವಿಗೆ ಮುಚ್ಚುತ್ತಾಳೆ.

ಚಟುವಟಿಕೆಗಳು

ಸಮಗ್ರ ಚಟುವಟಿಕೆಗಳ ಪಟ್ಟಿ

ಚಟುವಟಿಕೆ - ೧

ಸಣ್ಣ ಸಂಗತಿ ಚಟುವಟಿಕೆ ೧ ಪದ್ಯದ ಧ್ವನಿಯನ್ನು ಆಲಿಸಿ

ಸಣ್ಣ ಸಂಗತಿ ಪದ್ಯವಾಚನದ ಧ್ವನಿ ಮುದ್ರಿಕೆ

ಸಣ್ಣ ಸಂಗತಿ ಪದ್ಯದ ಚಿತ್ರಕ್ಕೆ ಪದಗಳನ್ನು ಹೊಂದಿಸಿ

ಚಟುವಟಿಕೆ - ೨
  • ರಾತ್ರಿಯಲ್ಲಿ ವಸ್ತುಗಳನ್ನು ಪರಿಲ್ಪನಾನಕ್ಷಯಲ್ಲಿ ಬರೆಯಿರಿ
  • ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು -

ಶಬ್ದಕೋಶ / ಪದ ವಿಶೇಷತೆ

ತಾಯಿಪ್ರೀತಿ ಎಲ್ಲಿರಿಗಿಂತ ಮಿಗಿಲಾದ ಪ್ರೀತಿ
ದೀಪದಬೆಳಕು ದೀಪದಿಂದ ಬರುವ ಬೆಳಕು
ಸೋನೆಮಳೆ ಮಳೆ ಹನಿ ಹನಿಯಾಗಿ ಜಿನುಗುವುದು
ಕರಿಮುಗಿಲು ಕಪ್ಪು ಆಗಸ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

1 ಪದ್ಯದ ಗಟ್ಟಿ ವಾಚನ ಪದ್ಯದ ಓದನ್ನು ಕೇಳುವರು ಆಲಿಸುವುದು
2 ಚಿತ್ರಗಳನ್ನು ಹೊಂದಿಸಿ ಮಾತನಾಡುವುದು
3 ರಾತ್ರಿಯಲ್ಲಿ ವಸ್ತುಗಳನ್ನು ಪರಿಲ್ಪನಾನಕ್ಷಯಲ್ಲಿ ಬರೆಯಿರಿ ಮಳೆ ಚಳಿ ನಿದ್ರೆ ಬಗ್ಗೆ ವಿವರಣೆ ಮಾತನಾಡುವುದು
4 ವೀಡಿಯ ಪುಸ್ತಕವನ್ನು ನೋಡಿ ವೀಡಿಯೋ ವೀಕ್ಷಣೆ ಆಲಿಸುವುದು / ಓದು
5 ಪರಿಕಲ್ಪನಾ ನಕ್ಷೆಯಲ್ಲಿ ಮಕ್ಕಳು ಸೇರಿಸುವ ಹೆಚ್ಚಿನ ವಿಷಯವನ್ನು ಸೇರಿಸಿ ಮಾತನಾಡುವುದು
6 Picture stories - ಮನೆ ಮತ್ತು ಪರಿಸರ ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು - ಬರಹ/ಅಭಿವ್ಯಕ್ತಿ
7 ಭಾಷಾ ಸಮೃದ್ಧಿ ಶಬ್ಧಕೋಶ - ಇಂಡಿಕ್‌ ಅನಾಗ್ರಾಮ್ ಬಳಸಿ ಕೇಳುವುದು / ಮಾತನಾಡುವುದು
ಪ್ರಾಸ ಪದ ವಿಶೇಷತೆ – h5p ಒತ್ತಕ್ಷರ ಸರಿಪಡಿಸಿ ಬರೆಯಿರಿ
8 ಭಾಷಾ ಸಮೃದ್ಧಿ About the poet – images, wikipedia page bio, ಪ್ರೇಮಕವಿಯ ಪರಿಚಯ
ಇದೇ ಕವಿಯ ಪ್ರಕೃತಿಯ ಗೀತೆಗಳು
This poem has been used by Lewis Carrol
9 ಸಮನಾಂತರ ಪದ್ಯವನ್ನು ಓದಿ ತಿಳಿಮುಗಿಲ ತೊಟ್ಟಿಲಿ ಮಲಗಿರುವ ಹಾಡು ಕೇಳುವುದು /ಮಾತನಾಡುವುದು/ ಓದುವುದು

೧ನೇ ಅವಧಿ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ


ಘಟಕ ೨ - ದೀಪ ಸಣ್ಣಗಿದೆ

ಪಠ್ಯಭಾಗ -೨ - ಪರಿಕಲ್ಪನಾ ನಕ್ಷೆ

ವಿವರಣೆ

ಚಟುವಟಿಕೆಗಳು

ಚಟುವಟಿಕೆ-೧

ಅದಲು ಬದಲಾದ ಪದಗಳನ್ನು ಗುರುತಿಸಿ ಹೇಳಿ

ಇಂಡಿಕ್‌ ಅನಾಗ್ರಾಮ್

ಚಟುವಟಿಕೆ ೨

ಚಿತ್ರಕ್ಕೆ ಪದಗಳನ್ನು ಹೊಂದಿಸಿ

ಶಬ್ದಕೋಶ / ಪದ ವಿಶೇಷತೆ

ವ್ಯಾಕರಣಾಂಶ

ಬಾನು ಸೂರ್ಯ ಚಂದ್ರ
ಭೂಮಿ ನೀರು ಆಕಾಶ
ಕಾಡು ಮರ ಪ್ರಾಣಿ
ಸಮುದ್ರ ಮೀನು ಶಂಕ

ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

೨ನೇ ಪರಿಕಲ್ಪನೆಯ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಹಾಡು ಹೇಳಿ ತಿಳಿಮುಗಿಲ ತೊಟ್ಟಿಲಲಿ

ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ

ಗಾಳಿ ಜೋಗುಳ ಹಾಡಿ ತೂಗುತಿತ್ತು |

ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ

ಇರುಳು ಹೊಂಗನಸೂಡಿ ಸಾಗುತಿತ್ತು|

ಮುಗುಳಿರುವ ಹೊದರಿನಲಿ ನರುಗಂಪಿನುದರದಲಿ

ಜೇನುಗನಸಿನ ಹಾಡು ಕೇಳುತಿತ್ತು |

ತುಂಬು ನೀರಿನ ಹೊಳೆಯೊಳ್ ಅಂಬಿಗನ ಕಿರುದೋಣಿ

ಪ್ರಸ್ಥಾನ ಗೀತೆಯನು ಹೇಳುತಿತ್ತು |

ಬರುವ ಮುಂದಿನ ದಿನದ ನವ ನವೋದಯಕ್ಕಾಗಿ

ಪ್ರಕೃತಿ ತಪವಿರುವಂತೆ ತೋರುತಿತ್ತು |

ಶಾಂತ ರೀತಿಯಲಿರುಳು ಮೆಲ್ಲ ಮೆಲ್ಲನೆ ಉರುಳಿ

ನಾಳಿನ ಶುಭೋದಯ ಸಾರುತಿತ್ತು |

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಪೂರ್ಣ ಪಾಠದ ಉಪಸಂಹಾರ

ಪೂರ್ಣ ಪಾಠದ ಮೌಲ್ಯಮಾಪನ

ಮಕ್ಕಳ ಚಟುವಟಿಕೆ

ಸೂಚನೆ: