STF 2013-14 Koppala

From Karnataka Open Educational Resources
Jump to navigation Jump to search


All documents can be uploaded or entered on this page if you have a KOER id.

Head Teachers

Agenda

If district has prepared new agenda then it can be shared here

See us at the Workshop

1st Batch HTF workshop

2nd Batch HTF workshop

Workshop short report

HTF 1st batch Workshop Report ದಿನಾಂಕ 30 December to 03 January 2013 - 14

ಮೊದಲನೇ ದಿನದ ವರದಿ

ದಿನಾಂಕ 30/12/2013 ರಂದು ಆರ್.ಎಂ.ಎಸ್.ಎ. ಕಾರ್ಯಕ್ರಮದಡಿಯಲ್ಲಿ ಪ್ರಥಮ ತಂಡದ HTF ಕಾರ್ಯಾಗಾರವನ್ನು ಡಯಟ್‌ನ ಪ್ರಾಂಶುಪಾಲರಾದ ಶ್ರೀ ಶ್ಯಾಮಸುಂದರ್‌ ರವರು ಬೆಳಿಗ್ಗೆ 9.30 ಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಯಟ್‌ನ ಹಿರಿಯ ಉಪನ್ಯಾಸಕರಾದ ಶ್ರೀಮತಿ ಉಮಾದೇವಿ ಸೊನ್ನದ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿದರು.ಮೊದಲಿಗೆ ಶಿಬಿರಾರ್ಥಿಗಳ ಪರಿಚಯವನ್ನು ಮಾಡಿಕೊಳ್ಳಲಾಯಿತು.ನಂತರ ಶಿಬಿರಾರ್ಥಿಗಳು ಕನಸಿನ ಶಾಲೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಬೆಳಗಿನ ಅವಧಿಯಲ್ಲಿ ಶಿಬಿರಾರ್ಥಿಗಳಿಗೆ HTF ಏಕೆ? ಗುರಿ ಮತ್ತು ಉದ್ದೇಶಗಳನ್ನು ಶ್ರೀ ರಾಘವೇಂದ್ರ ರವರು ತಿಳಿಸಿಕೊಟ್ಟರು.

ನಂತರ ಶ್ರೀ ಭೂಷಣ ಪತ್ತಾರರವರು ಉಬುಂಟು ಪರಿಚಯ ಹಾಗೂ ಸಾರ್ವಜನಿಕ ತಂತ್ರಾಶದ ಅನುಕೂಲತೆಗಳನ್ನು ವಿವರಿಸಿದರು. ನಂತರ ಶ್ರೀ ಮುತ್ತಣ್ಣ ಅವರು ಟಕ್ಸ ಟೈಪಿಂಗ್ ನ್ನು ಹೇಳಿಕೊಟ್ಟರು.ಊಟದ ವಿರಾಮದ ನಂತರ ಭೂಷಣ ರವರು ಈಮೇಲ್ ಅಕೌಂಟ್ ರಚಿಸುವುದನ್ನು ತಿಳಿಸಿಕೊಟ್ಟರು. ನಂತರ ಶಿಬಿರಾರ್ಥಿಗಳಿಗೆ ತಮ್ಮ ಈ ಮೇಲ್ ಅಕೌಂಟ್‌ಗಳನ್ನು ರಚಿಸಲು ಬಿಡಲಾಯಿತು.ನಂತರ ತಂಡವಾರು ಶಾಲಾ ಅಭಿವೃದ್ಧಿ ಅಂಶಗಳನ್ನು ಪಟ್ಟಿ ಮಾಡಲು ತಿಳಿಸಲಾಯಿತು.

ಎರಡನೇ ದಿನದ ವರದಿ

ಎರಡನೇ ದಿನವನ್ನು ಶಿಬಿರಾರ್ಥಿಗಳ ಮಾಹಿತಿಯನ್ನು ಗೂಗಲ್ ಡಾಕ್‌ನಲ್ಲಿ ತುಂಬುವುದರೊಂದಿಗೆ ಪ್ರಾರಂಭಿಸಲಾಯಿತು.ನಂತರ ಶಿಕ್ಷಣದ ಗುರಿಗಳು ಹಾಗೂ ಶಾಲಾ ಅಭಿವೃದ್ಧಿ ಅಂಶಗಳ ಬಗ್ಗೆ ಚರ್ಚಿಸುತ್ತಾ ಮೈಂಡ್ ಮ್ಯಾಪ್‌ನ ಅನ್ವಯನ್ನು ಶ್ರೀ ರಾಘವೇಂದ್ರ ಅವರು ತಿಳಿಸಿಕೊಟ್ಟರು.ನಂತರ ಶ್ರೀ ಮುತ್ತಣ್ಣ ಅವರು ಪ್ರಭಾವ ವಲಯ ಹಾಗೂ ಕಾಳಜಿ ವಲಯಗಳ ಬಗ್ಗೆ ಚರ್ಚಿಸಿದರು.ಚಹಾ ವಿರಾಮದ ನಂತರ ಭೂಷಣ ಅವರು ಈ ಮೇಲ್‌ನಲ್ಲಿ ಫೈಲ್ ಅಟ್ಯಾಚ್‌ ಮಾಡುವುದು ಹಾಗೂ ಡೌನ್‌ಲೋಡ್‌ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿದರು.ಊಟದ ವಿರಾಮದ ನಂತರ ಲಿಬ್ರೆ ಅಫಿಸ್, ಲೆಟರ್ ಟೈಪಿಂಗ್ , ಕನ್ನಡ ಟೈಪಿಂಗ್ ಬಗ್ಗೆ ರಾಘವೇಂದ್ರರವರು ತಿಳಿಸಿ ಶಿಬಿರಾರ್ಥಿಗಳನ್ನು ಪ್ರಾಯೋಗಿಕ ಅಭ್ಯಾಸಕ್ಕೆ ಬಿಡಲಾಯಿತು.

ಮೂರನೇ ದಿನದ ವರದಿ

ದಿನಾಂಕ 1/1/2014 ರಂದು ಬೆಳಗಿನ ಅವಧಿಯಲ್ಲಿ ಶ್ರೀ ಮು ತ್ತಣ್ಣ ಅವರು SWOT ಬಗ್ಗೆ ಚರ್ಚೆ ನಡೆಸಿದರು . ಶಾಲೆಗೆ ಸಂಬಂಧಪಟ್ಟಂತೆ ಎದುರಾಗು ವ ಸಮಸ್ಯೆಗಳಿಗೆ ಹೇಗೆ SWOT ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಶಿಬಿರಾರ್ಥಿಗಳೊಂದಿಗೆ ಚರ್ಚಿಸಿದರು .ಚಹಾ ವಿರಾಮದ ನಂತರ ಶ್ರೀ ಭೂಷಣ ಪತ್ತಾರ ಇವರು ಮೈಂಡಮ್ಯಾಪ್‌ನಲ್ಲಿ ಕನ್ನಡವನ್ನು ಹೇಗೆ ಟೈಪ್ ಮಾಡುವುದು ಎಂಬುದನ್ನು ತಿಳಿಸಿಕೊಟ್ಟರು.ಇದಾದ ನಂತರ ಶ್ರೀ ರಾಘವೇಂದ್ರ ಇವರು KOER ಬಗ್ಗೆ ಪರಿಚಯ ಮಾಡಿಕೊಟ್ಟರು. KOER ನಲ್ಲಿ ಮಾಹಿತಿ ಹುಡುಕುವುದು ಮತ್ತು ಹೇಗೆ ಸಂಪನ್ಮೂ ಲವನ್ನು ಅಭಿವೃದ್ದಿಪಡಿಸಬೇಕೆಂಬುದನ್ನು ತಿಳಿಸಿದರು.ಊಟದ ವಿರಾಮದ ನಂತರ ಶಿಬಿರಾರ್ಥಿಗಳಿಗೆ ಅಂತರ್ಜಾಲದ ಮೂ ಲಕ ಶಾಲಾ ನಾಯಕತ್ವದ ಬಗ್ಗೆ ಸಂಪನ್ಮೂ ಲ ಕ್ರೋಢೀಕರಿಸಲು ಹೇಳಲಾಯಿತು .ಅದರಂತೆ ಶಿಬಿರಾರ್ಥಿಗಳು ಉತ್ಸಾಹದಿಂದ ಅಂತರ್ಜಾಲದಲ್ಲಿ ಮಾಹಿತಿಯನ್ನು ಹುಡುಕಿ ತಮ್ಮ ಫೋಲ್ಡರ್‌ಗಳಲ್ಲಿ ಸಂಗ್ರಹ ಮಾಡಿದರು.ಚಹಾವಿರಾಮದ ನಂತರ ಸಿ.ಸಿ.ಇ. ( CCE) ಬಗ್ಗೆ ವಿಸ್ತಾರವಾಗಿ ಭೂಷಣ ಪತ್ತಾರ ಅವರು ತಿಳಿಸಿಕೊಟ್ಟರು. ಇದರ ಬಗ್ಗೆ ಶಿಬಿರಾರ್ಥಿಗಳೊಂದಿಗೆ ಚರ್ಚಿಸಲಾಯಿತು ..

ನಾಲ್ಕನೇ ದಿನದ ವರದಿ

ನಾಲ್ಕನೇ ದಿನ ಬೆಳಗಿನ ಅವಧಿಯಲ್ಲಿ ಲಿಬ್ರೆ ಆಫೀಸ್ ಕ್ಯಾ ಲ್ಕ (spreadsheet) ಬಗ್ಗೆ ಶ್ರೀ ಭೂಷಣ ಪತ್ತಾರ ಅವರು ಮಾಹಿತಿ ನೀಡಿದರು. ಅದರಲ್ಲಿ ಶಾಲಾ ದಾಖಲೆಗಳನ್ನು ತಯಾರಿಸಲು , ಸಂರಕ್ಷಿಸಲು ಹಾಗೂ ವಿಶ್ಲೇಷಣೆ ಮಾಡಲು ಇದು ಹೇಗೆ ಸಹಾಯಕಾರಿ ಎಂಬುದನ್ನು ಉದಾಹರಣೆಗಳ ಸಮೇತ ತಿಳಿಸಿಕೊಟ್ಟರು. ನಂತರ ಕ್ಯಾ ಲ್ಕನಲ್ಲಿ ಕೆಲಸ ಮಾಡುವುದು, ಫಾರ್ಮುಲಾಗಳನ್ನು ಬಳಸುವುದು , ಪೇಜ ಸೆಟ್ಟಿಂಗ್ ಮತ್ತು ಪ್ರಿಂಟ್ ಮಾಡುವುದರ ಬಗ್ಗೆ ತಿಳಿಸಿ ಕೊಡಲಾಯಿತು. ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ಕ್ಯಾ ಲ್ಕನಲ್ಲಿ ಡಾಟಾ ಎಂಟ್ರಿ ಮಾಡಲು ಹಾಗು ಸರಳ ಫಾರ್ಮುಲಾಗಳನ್ನು ರಚಿಸಲು ಬಿಡಲಾಯಿತು.ಚಹಾ ವಿರಾಮದ ನಂತರ ಶ್ರೀ ಮುತ್ತಣ್ಣ ಅವರು ಗೂಗಲ್ ಗ್ರೂಪ್ಸನಲ್ಲಿ ಮಾಹಿತಿಯನ್ನು ಹೇಗೆ ಹಂಚಿಕೊಳ್ಳಬೇಕೆಂಬುದನ್ನು ತಿಳಿಸಿಕೊಟ್ಟರು.ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ತಮ್ಮ ಮಾಹಿತಿ ಅಥವಾ ಸಂಪನ್ಮೂಲವನ್ನು ಗೂಗಲ್ ಗ್ರೂಪ್‌ಗೆ ಹಾಕಲು ಸಮಯ ನೀಡಲಾಯಿತು.ನಂತರ ಶ್ರೀ ರಾಘವೇಂದ್ರ ಅವರು ಶಿಬಿರಾರ್ಥಿಗಳಿಗೆ ತಮ್ಮ ಡಾಕ್ಯುಮೆಂಟ್‌ಗಳಲ್ಲಿ ಹೈಪರ್‌ಲಿಂಕ್‌ಗಳನ್ನು ರಚಿಸುವುದು ಹೆಗೆ ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.ಊಟದ ವಿರಾಮದ ನಂತರ ಶ್ರೀ ಶ್ರೀನಿವಾಸ ಅವರು HRMS ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. HRMS ನಲ್ಲಿ ಇತ್ತೀಚೆಗೆ ಆಗಿರುವ ಬದಲಾವಣೆಗಳು ಹಾಗೂ ಮಾಹಿತಿಯನ್ನು ಕಡ್ಡಾ ಯವಾಗಿ ಅಪ್‌ಡೇಟ್‌ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.

ಐದನೇ ದಿನದ ವರದಿ

ಐದನೇ ದಿನದ ಪ್ರಾರಂಭವನ್ನು ಶ್ರೀ ಮುತ್ತಣ್ಣ ಅವರು screenshot ಮತ್ತು GIMP ನೊಂದಿಗೆ ಆರಂಭಿಸಿದರು. ಇದರಲ್ಲಿ ಅವರು screenshot ನ ಅನ್ವಯ ಹಾಗೂ GIMP ನಲ್ಲಿ ಫೋಟೊಗಳನ್ನು ಎಡಿಟ್ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.ನಂತರ ಶ್ರೀ ರಾಘವೇಂದ್ರ ಅವರು picasa ನಲ್ಲಿ ಫೋಟೊಗಳನ್ನು ಅಪ್‌ಲೋಡ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.ಚಹಾ ವಿರಾಮದ ನಂತರ ಭೂಷಣ ಪತ್ತಾರ ಅವರು youtube ಬಗ್ಗೆ ಹಾಗೂ ಇದರಲ್ಲಿ ವಿಡಿಯೋಗಳನ್ನು upload ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.ಊಟದ ವಿರಾಮದ ನಂತರ ಶಿಬಿರಾರ್ಥಿಗಳಿಗೆ youtube ಬಗ್ಗೆ ಹಾಗೂ ಇದರಲ್ಲಿ ವಿಡಿಯೋಗಳನ್ನು upload ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ಅಭ್ಯಾಸ ಮಾಡಲು ಬಿಡಲಾಯಿತು.

ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳ ಅನಿಸಿಕೆಗಳನ್ನು ಪಡೆಯಲಾಯಿತು ಮತ್ತು KOER ನಲ್ಲಿ feedback format ನ್ನು ಭರ್ತಿ ಮಾಡಿಸಲಾಯಿತು.

ಇದರೊಂದಿಗೆ 5 ದಿನಗಳ ತರಬೇತಿ ಶಿಬಿರ ಮುಕ್ತಾಯವಾಯಿತು.


HTF 2nd batch Workshop Report 06 to 10 January 2013 - 14

ಮೊದಲನೇ ದಿನದ ವರದಿ

ದಿನಾಂಕ 06/01/2014 ರಂದು ಆರ್.ಎಂ.ಎಸ್.ಎ. ಕಾರ್ಯಕ್ರಮದಡಿಯಲ್ಲಿ ಎರಡ ತಂಡದ HTF ಕಾರ್ಯಾಗಾರವನ್ನು ಪ್ರಾರಂಭಿಸಲಾಯಿತು. ಡಯಟ್ ನ ಹಿರಿಯ ಉಪನ್ಯಾಸಕಿ ಶ್ರೀಮತಿ ಉಮಾದೇವಿ ಸೊನ್ನದ ಅವರು HTF ತರಬೇತಿಯ ಬಗ್ಗೆ ಪ್ರಾಸ್ತಾವಿಕವಾಗಿ ನುಡಿದರು.ನಂತರ ಶಿಬಿರಾರ್ಥಿಗಳ ಪರಿಚಯವನ್ನು ಮಾಡಿಕೊಳ್ಳಲಾಯಿತು.ನಂತರ ಶಿಬಿರಾರ್ಥಿಗಳು ಕನಸಿನ ಶಾಲೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಚಹಾ ವಿರಾಮದ ನಂತರ ಶಿಬಿರಾರ್ಥಿಗಳಿಗೆ HTF ಏಕೆ? ಗುರಿ ಮತ್ತು ಉದ್ದೇಶಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಘವೇಂದ್ರ ರವರು ತಿಳಿಸಿಕೊಟ್ಟರು. ನಂತರ ಶ್ರೀ ಭೂಷಣ ಪತ್ತಾರರವರು ಉಬುಂಟು ಪರಿಚಯ ಹಾಗೂ ಸಾರ್ವಜನಿಕ ತಂತ್ರಾಶದ ಅನುಕೂಲತೆಗಳನ್ನು ಪೋಸ್ಟರ್‌ಗಳ ಮೂಲಕ ವಿವರಿಸಿದರು. ನಂತರ ಶ್ರೀ ಮುತ್ತಣ್ಣ ಅವರು ವೇಗವಾಗಿ ತಪ್ಪುಗಳಾಗದಂತೆ ಟೈಪ್‌ ಮಾಡುವ ಬಗೆ ಹಾಗೂ ಇತರೆ ಟೈಪಿಂಗ್‌ ಕೌಶಲ್ಯಗಳನ್ನು ತಿಳಿಸಿಕೊಟ್ಟರು.ಟಕ್ಸ ಟೈಪಿಂಗ್ ನ್ನು ಹೇಳಿಕೊಟ್ಟು ಎಲ್ಲ ಶಿಬಿರಾರ್ಥಿಗಳಿಗೆ ಟೈಪಿಂಗ್‌ ಅಭ್ಯಾಸ ಮಾಡಲು ಬಿಡಲಾಯಿತು. ಊಟದ ವಿರಾಮದ ನಂತರ ಭೂಷಣ ರವರು ಈಮೇಲ್ ಅಕೌಂಟ್ ರಚಿಸುವುದನ್ನು ತಿಳಿಸಿಕೊಟ್ಟರು. ನಂತರ ಶಿಬಿರಾರ್ಥಿಗಳಿಗೆ ತಮ್ಮ ಈ ಮೇಲ್ ಅಕೌಂಟ್‌ಗಳನ್ನು ರಚಿಸಲು ಬಿಡಲಾಯಿತು.

ಎರಡನೇ ದಿನದ ವರದಿ

ಎರಡನೇ ದಿನವನ್ನು ಶಿಬಿರಾರ್ಥಿಗಳ ಮಾಹಿತಿಯನ್ನು ಗೂಗಲ್ ಡಾಕ್‌ನಲ್ಲಿ ತುಂಬುವುದರೊಂದಿಗೆ ಪ್ರಾರಂಭಿಸಲಾಯಿತು.ನಂತರ ಶಿಕ್ಷಣದ ಗುರಿಗಳು ಹಾಗೂ ಶಾಲಾ ಅಭಿವೃದ್ಧಿ ಅಂಶಗಳ ಬಗ್ಗೆ ಚರ್ಚಿಸುತ್ತಾ ಮೈಂಡ್ ಮ್ಯಾಪ್‌ನ ಅನ್ವಯನ್ನು ಶ್ರೀ ರಾಘವೇಂದ್ರ ಅವರು ತಿಳಿಸಿಕೊಟ್ಟರು.ನಂತರ ಶ್ರೀ ಮುತ್ತಣ್ಣ ಅವರು ಪ್ರಭಾವ ವಲಯ ಹಾಗೂ ಕಾಳಜಿ ವಲಯಗಳ ಬಗ್ಗೆ ಚರ್ಚಿಸಿದರು.ಚಹಾ ವಿರಾಮದ ನಂತರ ಭೂಷಣ ಅವರು ಈ ಮೇಲ್‌ನಲ್ಲಿ ಫೈಲ್ ಅಟ್ಯಾಚ್‌ ಮಾಡುವುದು ಹಾಗೂ ಡೌನ್‌ಲೋಡ್‌ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿದರು. ಊಟದ ವಿರಾಮದ ನಂತರ ಲಿಬ್ರೆ ಅಫಿಸ್, ಲೆಟರ್ ಟೈಪಿಂಗ್ , ಕನ್ನಡ ಟೈಪಿಂಗ್ ಬಗ್ಗೆ ರಾಘವೇಂದ್ರರವರು ತಿಳಿಸಿ ಶಿಬಿರಾರ್ಥಿಗಳನ್ನು ಪ್ರಾಯೋಗಿಕ ಅಭ್ಯಾಸಕ್ಕೆ ಬಿಡಲಾಯಿತು.

ಮೂರನೇ ದಿನದ ವರದಿ

ದಿನಾಂಕ 8/1/2014 ರಂದು ಬೆಳಗಿನ ಅವಧಿಯಲ್ಲಿ ಶ್ರೀ ಮು ತ್ತಣ್ಣ ಅವರು SWOT ಬಗ್ಗೆ ಚರ್ಚೆ ನಡೆಸಿದರು . ಶಾಲೆಗೆ ಸಂಬಂಧಪಟ್ಟಂತೆ ಎದುರಾಗು ವ ಸಮಸ್ಯೆಗಳಿಗೆ ಹೇಗೆ SWOT ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಶಿಬಿರಾರ್ಥಿಗಳೊಂದಿಗೆ ಚರ್ಚಿಸಿದರು .ಚಹಾ ವಿರಾಮದ ನಂತರ ಶ್ರೀ ಭೂಷಣ ಪತ್ತಾರ ಇವರು ಮೈಂಡಮ್ಯಾಪ್‌ನಲ್ಲಿ ಕನ್ನಡವನ್ನು ಹೇಗೆ ಟೈಪ್ ಮಾಡುವುದು ಎಂಬುದನ್ನು ತಿಳಿಸಿಕೊಟ್ಟರು .ಇದಾದ ನಂತರ ಶ್ರೀ ರಾಘವೇಂದ್ರ ಇವರು KOER ಬಗ್ಗೆ ಪರಿಚಯ ಮಾಡಿಕೊಟ್ಟರು . KOER ನಲ್ಲಿ ಮಾಹಿತಿ ಹುಡುಕುವುದು ಮತ್ತು ಹೇಗೆ ಸಂಪನ್ಮೂ ಲವನ್ನು ಅಭಿವೃದ್ದಿಪಡಿಸಬೇಕೆಂಬುದನ್ನು ತಿಳಿಸಿದರು .ಊಟದ ವಿರಾಮದ ನಂತರ ಶಿಬಿರಾರ್ಥಿಗಳಿಗೆ ಅಂತರ್ಜಾಲದ ಮೂಲಕ ಶಾಲಾ ನಾಯಕತ್ವದ ಬಗ್ಗೆ ಸಂಪನ್ಮೂ ಲ ಕ್ರೋಢೀಕರಿಸಲು ಹೇಳಲಾಯಿತು .ಅದರಂತೆ ಶಿಬಿರಾರ್ಥಿಗಳು ಉತ್ಸಾಹದಿಂದ ಅಂತರ್ಜಾಲದಲ್ಲಿ ಮಾಹಿತಿಯನ್ನು ಹುಡುಕಿ ತಮ್ಮ ಫೋಲ್ಡರ್‌ಗಳಲ್ಲಿ ಸಂಗ್ರಹ ಮಾಡಿದರು. ಚಹಾವಿರಾಮದ ನಂತರ ಸಿ.ಸಿ.ಇ. ( CCE) ಬಗ್ಗೆ ವಿಸ್ತಾರವಾಗಿ ಭೂಷಣ ಪತ್ತಾರ ಅವರು ತಿಳಿಸಿಕೊಟ್ಟರು . ಇದರ ಬಗ್ಗೆ ಶಿಬಿರಾರ್ಥಿಗಳೊಂದಿಗೆ ಚರ್ಚಿಸಲಾಯಿತು.

ನಾಲ್ಕನೇ ದಿನದ ವರದಿ

ನಾಲ್ಕನೇ ದಿನ ಬೆಳಗಿನ ಅವಧಿಯಲ್ಲಿ ಲಿಬ್ರೆ ಆಫೀಸ್ ಕ್ಯಾ ಲ್ಕ (spreadsheet) ಬಗ್ಗೆ ಶ್ರೀ ಭೂಷಣ ಪತ್ತಾರ ಅವರು ಮಾಹಿತಿ ನೀಡಿದರು. ಅದರಲ್ಲಿ ಶಾಲಾ ದಾಖಲೆಗಳನ್ನು ತಯಾರಿಸಲು , ಸಂರಕ್ಷಿಸಲು ಹಾಗೂ ವಿಶ್ಲೇಷಣೆ ಮಾಡಲು ಇದು ಹೇಗೆ ಸಹಾಯಕಾರಿ ಎಂಬುದನ್ನು ಉದಾಹರಣೆಗಳ ಸಮೇತ ತಿಳಿಸಿಕೊಟ್ಟರು. ನಂತರ ಕ್ಯಾ ಲ್ಕನಲ್ಲಿ ಕೆಲಸ ಮಾಡುವುದು, ಫಾರ್ಮುಲಾಗಳನ್ನು ಬಳಸುವುದು , ಪೇಜ ಸೆಟ್ಟಿಂಗ್ ಮತ್ತು ಪ್ರಿಂಟ್ ಮಾಡುವುದರ ಬಗ್ಗೆ ತಿಳಿಸಿ ಕೊಡಲಾಯಿತು. ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ಕ್ಯಾ ಲ್ಕನಲ್ಲಿ ಡಾಟಾ ಎಂಟ್ರಿ ಮಾಡಲು ಹಾಗು ಸರಳ ಫಾರ್ಮುಲಾಗಳನ್ನು ರಚಿಸಲು ಬಿಡಲಾಯಿತು.ಚಹಾ ವಿರಾಮದ ನಂತರ ಶ್ರೀ ಮುತ್ತಣ್ಣ ಅವರು ಗೂಗಲ್ ಗ್ರೂಪ್ಸನಲ್ಲಿ ಮಾಹಿತಿಯನ್ನು ಹೇಗೆ ಹಂಚಿಕೊಳ್ಳಬೇಕೆಂಬುದನ್ನು ತಿಳಿಸಿಕೊಟ್ಟರು.ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ತಮ್ಮ ಮಾಹಿತಿ ಅಥವಾ ಸಂಪನ್ಮೂಲವನ್ನು ಗೂಗಲ್ ಗ್ರೂಪ್‌ಗೆ ಹಾಕಲು ಸಮಯ ನೀಡಲಾಯಿತು.ನಂತರ ಶ್ರೀ ರಾಘವೇಂದ್ರ ಅವರು ಶಿಬಿರಾರ್ಥಿಗಳಿಗೆ ತಮ್ಮ ಡಾಕ್ಯುಮೆಂಟ್‌ಗಳಲ್ಲಿ ಹೈಪರ್‌ಲಿಂಕ್‌ಗಳನ್ನು ರಚಿಸುವುದು ಹೆಗೆ ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.ಊಟದ ವಿರಾಮದ ನಂತರ ಶ್ರೀ ಶ್ರೀನಿವಾಸ ಅವರು HRMS ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. HRMS ನಲ್ಲಿ ಇತ್ತೀಚೆಗೆ ಆಗಿರುವ ಬದಲಾವಣೆಗಳು ಹಾಗೂ ಮಾಹಿತಿಯನ್ನು ಕಡ್ಡಾ ಯವಾಗಿ ಅಪ್‌ಡೇಟ್‌ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.

ಐದನೇ ದಿನದ ವರದಿ

ಐದನೇ ದಿನದ ಪ್ರಾರಂಭವನ್ನು ಶ್ರೀ ಮುತ್ತಣ್ಣ ಅವರು screenshot ಮತ್ತು GIMP ನೊಂದಿಗೆ ಆರಂಭಿಸಿದರು. ಇದರಲ್ಲಿ ಅವರು screenshot ನ ಅನ್ವಯ ಹಾಗೂ GIMP ನಲ್ಲಿ ಫೋಟೊಗಳನ್ನು ಎಡಿಟ್ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.ನಂತರ ಶ್ರೀ ರಾಘವೇಂದ್ರ ಅವರು picasa ನಲ್ಲಿ ಫೋಟೊಗಳನ್ನು ಅಪ್‌ಲೋಡ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.ಚಹಾ ವಿರಾಮದ ನಂತರ ಭೂಷಣ ಪತ್ತಾರ ಅವರು youtube ಬಗ್ಗೆ ಹಾಗೂ ಇದರಲ್ಲಿ ವಿಡಿಯೋಗಳನ್ನು upload ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.ಊಟದ ವಿರಾಮದ ನಂತರ ಶಿಬಿರಾರ್ಥಿಗಳಿಗೆ youtube ಬಗ್ಗೆ ಹಾಗೂ ಇದರಲ್ಲಿ ವಿಡಿಯೋಗಳನ್ನು upload ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ಅಭ್ಯಾಸ ಮಾಡಲು ಬಿಡಲಾಯಿತು. ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳ ಅನಿಸಿಕೆಗಳನ್ನು ಪಡೆಯಲಾಯಿತು ಮತ್ತು KOER ನಲ್ಲಿ feedback format ನ್ನು ಭರ್ತಿ ಮಾಡಿಸಲಾಯಿತು.

ಇದಾದ ನಂತರ ಸಮಾರೋಪ ಸಮಾರಂಭವನ್ನು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಬಿರಾರ್ಥಿಗಳು ತಮ್ಮ ಐದು ದಿನಗಳ ಈ ತರಬೇತಿಯ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ನೋಡಲ್ ಅಧಿಕಾರಿಣಿ ಹಾಗೂ ಡಯಟ್‌ನ ಹಿರಿಯ ಉಪನ್ಯಾಸಕಿ ಶ್ರೀಮತಿ ಉಮಾದೇವಿ ಸೊನ್ನದ ಇವರು ತರಬೇತಿ ಪಡೆದ ಎಲ್ಲ ಮುಖ್ಯ ಶಿಕ್ಷಕರಿಗೆ ಶುಭವನ್ನು ಕೋರಿದರು. ಇದರೊಂದಿಗೆ 5 ದಿನಗಳ ತರಬೇತಿ ಶಿಬಿರ ಮುಕ್ತಾಯವಾಯಿತು.

Mathematics

Agenda

If district has prepared new agenda then it can be shared here

See us at the Workshop

Workshop short report

Koppal 1st batch Maths STF 2013-14 Report ಓದಲು ಈ ಲಿಂಕನ್ನು ವೀಕ್ಷಿಸಿ


ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿ-2013-14 ಮುನಿರಾಬಾದ ಡಯಟ ಕೊಪ್ಪಳ ಜಿಲ್ಲೆ ತರಬೇತಿ ದಿನಾಂಕ:19-11-2013 ರಿಂದ 23-11-2013 ತರಬೇತಿಯ ವರದಿ

Photographs - Please click here.


ದಿನಾಂಕ :19-11-2013 ರಂದು ಬೆಳಿಗ್ಗೆ ಸರಿಯಾಗಿ 09.30ಗಂಟೆಗೆ ಡಯಟನ ಪ್ರಾಂಶುಪಾಲರಾದ ಶ್ರೀ.ಶ್ಯಾಮಸುಂದರ ಅವರಿಂದ ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿ ಆರಂಭವಾಯಿತು.. ಈ ಉದ್ಘಾಟನಾ ಸಮಾರಂಭದಲ್ಲಿ ತರಬೇತಿ ನೋಡಲ್ ಅಧಿಕಾರಿಗಳಾದ ಶ್ರೀ.ಬಸವರಾಜ ಪಾರಿ ಹಾಗೂ ಹಿರಿಯ ಉಪನ್ಯಾಸಕರಾದ ಶ್ರೀ.ನಾಗರಾಜ ಮತ್ತು ಕೃಷ್ಣ ನಾಯಕ ಹಾಗೂ ಎಲ್ಲಾ ಸಂಪನ್ಮೂ ಲ ವ್ಯಕ್ತಿ ಗಳು ಶಿಬಿರಾಥಿಗಳು ಉಪಸ್ಥಿತರಿದ್ದರು.. ಈ 5 ದಿನಗಳ ತರಬೇತಿಯು ಈ ಕೆಳಗಿನಂತೆ ಕಾಯ್ರ ವನ್ನು ನಿವFಹಿಸಿತು.

19-11-2013 ರಂದು ಶಿಭಿರಾಥಿFಗಳ ನೊಂದಣಿ ಎಲ್ಲಾ ಶಿಭಿರಾಥಿFಗಳ ಈ -ಮೇಲ್ ರಚಿಸಲಾಯಿತು ಎಲ್ಲಾ ಶಿಭಿರಾಥಿFಗಳನ್ನು maths science google groups ಗೆ ಸೇರಿಸಲಾಯಿತು ನಂತರ agenda ಬಗ್ಗೆ ಚಚಿFಸಲಾಯಿತು. ನಂತರ geogebra, ಬಗ್ಗೆ ತಿಳಿಸಿಕೊಡಲಾಯಿತು .

20-11-2013 ರಂದು mind map ನಲ್ಲಿ concept map ರಚಿಸು ವು ದನ್ನು ತಿಳಿಸಿಕೊಡಲಾಯಿತು. KOER ಬಗ್ಗೆ ತಿಳಿಸಿಕೊಡಲಾಯಿತು. ನಂತರ ಎಲ್ಲಾ ಶಿಭಿರಾಥಿFಗಳ ಮೂ ಲಕ CCE ಬಗ್ಗೆ ಚಚಿFಸಲಾಯಿತು .

21-11-2013 ರಂದು ಸಂಪನ್ಮೂ ಲ ಗ್ರಂಥಾಲಯದ ರಚನೆ ಬಗ್ಗೆ , hyperlink, image save, screen shot ಬಗ್ಗೆ ತಿಳಿಸಿಕೊಡಲಾಯಿತು

22-11-2013 ರಂದು ಸಂಪನ್ಮೂ ಲ ಕೃಢೀಕರಣ ಮಾಡಲಾಯಿತು ಮತ್ತು ಅದನ್ನು ಪ್ರದಶಿFಸಲಾಯಿತು. ನಂತರ Gimp image editor ಬಗ್ಗೆ ವಿವರಿಸಲಾಯಿತು .

23-11-2013 ರಂದು picassa, U-tube ವಿಡಿಯೋ upload ಮಾಡು ವು ದು KOER ನಲ್ಲಿ contribution ಮಾಡು ವುದರ ಬಗ್ಗೆ ತಿಳಿಸಿಕೊಡಲಾಯಿತು ನಂತರ Feed back form ನ್ನು ತುಂಬಿಸಲಾಯಿತು. ಕೊನೆಗೆ group photo ನಂತರ ಕಾಯFಕ್ರಮದ ಮುಕ್ತಾಯ ಸಮಾರಂಭ ನಡೆಸಿ ತರಬೇತಿಯನ್ನು ಮುಕ್ತಾಯ ಗೊಳಿಸಲಾಯಿತು.

ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿ-2013-14 ಮುನಿರಾಬಾದ ಡಯಟ ಕೊಪ್ಪಳ ಜಿಲ್ಲೆ ತರಬೇತಿ ದಿನಾಂಕ:26-11-2013 ರಿಂದ 30-11-2013 ತರಬೇತಿಯ ವರದಿ

Photographs - Please click here.


ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿ -2013-14 ಮು ನಿರಾಬಾದ ಡಯಟ ಕೊಪ್ಪಳ ಜಿಲ್ಲೆ ಎಸ್.ಟಿ.ಎಫ್ ಗಣಿತ ತರಬೇತಿಯ ವರದಿ ದಿನಾಂಕ :26-11-2013 ರಿಂದ 30-11-2013

ಗಣಿತ ವಿಷಯ ಶಿಕ್ಷಕರ ವೇದಿಕೆಯ ತರಬೇತಿಯ 1ನೇ ದಿನದ ವರದಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಡಿಯಲ್ಲಿ ಆಯೋಜಿಸಿರು ವ ತಂತ್ರಜ್ಞಾನ ಆಧಾರಿತ ವಿನೂತನ ಕಾರ್ಯಕ್ರಮವಾದ stf ತರಬೇತಿಯನ್ನು ರಾಜ್ಯಾದ್ಯಂತ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯ 2013-14ನೇ ಸಾಲಿನ ಗಣಿತ ವಿಷಯ ಶಿಕ್ಷಕರ 2ನೇ ಹಂತದ ತರಬೇತಿಯನ್ನು ದಿ:26.11.2013 ರಿಂದ 30.11.2013ರ ವರೆಗೆ ನಿಗದಿಗೊಳಿಸಲಾಗಿದೆ. ಪ್ರಸ್ತುತ ಕಾರ್ಯಕ್ರಮದ ಕೊಪ್ಪಳ ಜಿಲ್ಲೆಯ ರುವಾವಿಗಳಾದ ಶ್ರೀ ಬಸವರಾಜ ಪಾರಿ, ಹಿರಿಯ ಉಪನ್ಯಾಸಕರು, ಡಯಟ್, ಮುನಿರಾಬಾದ್. ಇವರ ಅಧ್ಯಕ್ಷತೆಯಲ್ಲಿ ದಿ: 26.11.2013 ರಂದು ಡಯಟ್, ಮುನಿರಾಬಾದ್ ನಲ್ಲಿ ಮುಖ್ಯ ಅತಿಥಿಗಳಾದ ಶ್ರೀM.B.ಅರಳಿ, BRP, ಕುಷ್ಟಗಿ ಮತ್ತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಹಬೀಬ ಪಾಷಾ, ಶ್ರೀ ಈರೇಶಪ್ಪ ಮತ್ತು ಶ್ರೀ ಸೂಡಿಮಠ ಶಿಕ್ಷಕರು ಇವರ ಉಪಸ್ಥಿತಿಯಲ್ಲಿ ಬೆಳಿಗ್ಗೆ 9.30ಕ್ಕೆ ಉದ್ಘಾಟಿಸಲಾಯಿತು. ನಂತರ ಶ್ರೀ ಬಸವರಾಜ ಪಾರಿ ಅವರು ಅಧ್ಯಕ್ಷೀಯ ಭಾಷಣದಲ್ಲಿ stf ತರಬೇತಿಯ ಗುರಿ ಮತ್ತು ಉದ್ದೇಶಗಳನ್ನು ವಿವರಿಸಿದರು. ಶ್ರೀ ಈರೇಶಪ್ಪ , ಸಂಪನ್ಮೂಲ ವ್ಯಕ್ತಿಗಳು ನಿರೂಪಣೆಯ ಹೊಣೆ ಹೊತ್ತಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ 10.30 ಗಂಟೆಯಿಂದ ನಮ್ಮನ್ನು ವಿಶ್ವಕ್ಕೆ ಸಂಪರ್ಕಿಸುವ ಅಂತರ್ಜಾಲದ ವಿಷಯದೊಮದಿಗೆ ತರಬೇತಿ ಆರಂಭವಾಯಿತು. ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ email ID ತಯರಿಸುವುದನ್ನು ಕಲಿಸಿದ ನಂತರ ನಮ್ಮ imail ID ಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಹಬೀಬಪಾಷಾನವರು ನಮ್ಮ email ID ಗಳನ್ನು stf ಸಮೂಹಕ್ಕೆ ಸೇರಿಸಿದರು. ಮದ್ಯಾಹ್ನದ ಅವಧಿಯಲ್ಲಿ UBUNTU ಸಾಫ್ಟವೇರ್ ನಲ್ಲಿ geogebra ಬಳಕೆಯನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಈರೇಶಪ್ಪ ನವರು ಪ್ರಸ್ತುತಪಡಿಸಿದರು. ದಿನದ ತರಬೇತಿಗೆ ಉಪನ್ಯಾಸ ಮತ್ತು ಪ್ರಾಯೋಗಿಕ ಹಂತಗಳ ಉತ್ತಮ ಮಿಶ್ರಣದೊಂದಿಗೆ ಸಂಜೆ 5.30 ಗಂಟೆಗೆ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು ಗಣಿತ ವಿಷಯ ಶಿಕ್ಷಕರ ವೇದಿಕೆಯ ತರಬೇತಿಯ 2ನೇ ದಿನದ ವರದಿ

ಇಂದು ದಿನಾಂಕ 27/11/2013 ರಂದು ಬೆಳಿಗ್ಗೆ 9:30 ಗಂಟೆಗೆ ತರಬೇತಿಯನ್ನು ಪ್ರಾರಂಭಿಸಲಾಯಿತು . ಪ್ರಾರಂಭದಲ್ಲಿ ಶ್ರೀಯು ತ ವೀರಯ್ಯ ಜಿ ಸೂಡಿಮಠ ಸಂಪನ್ಮೂಲ ಶಿಕ್ಷಕರು KOER ಬಗ್ಗೆ ವಿವರಣೆ ನೀಡಿದರು ಇದರಲ್ಲಿ ರಾಜ್ಯ ,ಅಂತರಾಜ್ಯ ಮತ್ತು ರಾಷ್ಟ್ರೀಯ ಪಠ್ಯ ಪುಸ್ತಕಗಳನ್ನು ಬಳಸಿಕೊಳ್ಳುವುದನ್ನು ತಿಳಿಸಿಕೊಟ್ಟರು ನಂತರ ಇದನ್ನು ಎಲ್ಲರೂ ಪ್ರಾಯೋಗಿಕವಾಗಿ ವೀಕ್ಷಿಸಿದರು. ಚಹಾ ವಿರಾಮದ ನಂತರ ಶ್ರೀ .ಹಬೀಬಪಾಷಾ.ಎಂ ಸಂಪನ್ಮೂಲ ಶಿಕ್ಷಕರು Free Mind ಬಗ್ಗೆ ಮತ್ತು Mind Map ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿ ಒಟ್ಟು ನಮ್ಮನ್ನು 8ಗುಂಪುಗಳಾಗಿ ವಿಂಗಡಿಸಿ ಪ್ರತಿಯೊಂದು ಗುಂಪಿಗೆ ಒಂದೊಂದು ಘಟಕವನ್ನು ಕೊಟ್ಟು ಅದರ Mind Map ತಯಾರಿಸಲು ತಿಳಿಸಿದರು . ಅದೆ ರೀತಿ ಪ್ರತಿ ಯೊಂದು ಗುಂಪಿನವರು ತಮ್ಮ ಕಾರ್ಯದಲ್ಲಿ ತೊಡಗಿ Mind Map ತಯಾರಿಸಿದರು . ಊಟದ ನಂತರ Geogebraದಲ್ಲಿ slider ಬಳಸಿಕೊಂಡು ರೇಖಾಗಣಿತದ ವಿವಿಧ ಆಕೃತಿಗಳನ್ನು ರಚಿಸುವುದನ್ನು ಹಾಗೂ ಅವುಗಳ ವಿಸ್ತೀರ್ಣ ಕಂಡುಹಿಡಿಯುವುದನ್ನು ಶ್ರೀ.ಈರೇಶಪ್ಪ ರವರು ತೋರಿಸಿದರು . ತದನಂತರ ಎಲ್ಲರೂ ಸುಮಾರು 5 ರಿಂದ 6 ಆಕೃತಿಗಳನ್ನು ರಚಿಸಿ ಅವುಗಳಿಗೆ ವಿಸ್ತೀರ್ಣಗಳನ್ನು ಕಂಡುಹಿಡಿದು ತೋರಿಸಿದರು . ಚಹಾ ವಿರಾಮದ ನಂತರ ಶ್ರೀ ಹಬೀಬ ಸಂಪನ್ಮೂಲ ಶಿಕ್ಷಕರು Mathematics stf ಗುಂಪಿಗೆ ಸೇರ್ಪಡೆಯಾಗಿದ್ದನ್ನು ತೋರಿಸಿದರು ಅದನ್ನು ನಾವು Gmail ನಲ್ಲಿ ಖಚಿತ ಪಡಿಸಿಕೊಂಡು ಅದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ ಅದರಲ್ಲಿಯ ಎಲ್ಲ Mail ಗಳನ್ನು ವೀಕ್ಷಿಸಿ ಅವುಗಳಿಗೆ ಪ್ರತ್ಯುತ್ತರ ನೀಡಿದೆವು


ಗಣಿತ ವಿಷಯ ಶಿಕ್ಷಕರ ವೇದಿಕೆಯ ತರಬೇತಿಯ 3ನೇ ದಿನದ ವರದಿ ಇಂದು ದಿನಾಂಕ 28-11-2013 ರಂದು ಬೆಳಗಿನ ಅವಧಿಯಲ್ಲಿ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ. ವಿರೇಶರವರು slider ನ್ನು ಬಳಸಿಕೊಂಡು ವಿವಿಧ ಬಹು ಭು ಜಾಕೃತಿಗಳನ್ನು ರಚಿಸು ವುದನ್ನು ತಿಳಿಸಿಕೊಟ್ಟರು . ಅದೇ ರೀತಿ slider ನ್ನು ಬಳಸಿ ಕೋನದ ವಿಧಗಳನ್ನು ರಚಿಸಲು ತಿಳಿಸಿಕೊಟ್ಟ ರು ನಂತರ ಎಲ್ಲಾ ಶಿಕ್ಷಕರು geogebra practice ಮಾಡಿದರು ನಂತರ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ.ಸೂ ಡಿಮಠರವರು resource document ನ ಅರ್ಥ ಮತ್ತು ಅಗತ್ಯತೆಯನ್ನು ವಿವರಿಸಿ resource document ನ್ನು ರಚಿಸು ವುದನ್ನು ತಿಳಿಸಿಕೊಟ್ಟರು ತರಬೇತಿಗೆ ಆಗಮಿಸಿದ ಶಿಕ್ಷಕರನ್ನು 8 ಗುಂಪುಗಳಾಗಿ ವಿಂಗಡಿಸಿ ಪ್ರತಿ ಗುಂಪಿಗೂ ಒಂದು resource document ನ್ನು ರಚಿಸಲು ತಿಳಿಸಿದರು ಎಲ್ಲಾ ಶಿಕ್ಷಕರು ಒಂದೊಂದು ವಿಷಯವನ್ನು ಆಯ್ಕೆ ಮಾಡಿಕೊಂಡು resource document ನ್ನು ರಚಿಸುವುದರಲ್ಲಿ ತೊಗಡಿದರು ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ.ಹಬೀಬಪಾಷಾ ರವರು resource templet ನಲ್ಲಿ ಮಾಹಿತಿಯನ್ನು ಹೇಗೆ ತುಂಬಬೇಕು ಎನ್ನುವುದನ್ನು ತಿಳಿಕೊಟ್ಟರು web page ಗಳಲ್ಲಿರುವ ಅಗತ್ಯವಾದ ಮಾಹಿತಿಯನ್ನು screen shot ಗಳ ಮೂ ಲಕ copy ಮಾಡು ವುದನ್ನು ತಿಳಿಕೊಟ್ಟರು ಎಲ್ಲಾ ಶಿಕ್ಷಕರು ತಮ್ಮ resource document ತಯಾರಿಸಲು ತಲ್ಲೀನರಾದರು

ಗಣಿತ ವಿಷಯ ಶಿಕ್ಷಕರ ವೇದಿಕೆಯ ತರಬೇತಿಯ 4ನೇ ದಿನದ ವರದಿ ಇಂದು ದಿನಾಂಕ 29-11-2013 ರಂದು ಬೆಳಗಿನ ಅವಧಿಯಲ್ಲಿ ಎಲ್ಲಾ ಶಿಕ್ಷಕರು resource templet ನಲ್ಲಿ ಮಾಹಿತಿಯನ್ನು ತುಂಬಲು internet ಸೌಲಭ್ಯವನ್ನು ಬಳಸಿಕೊಂಡು ವಿವಿಧ web page ಗಳಿಂದ ಮಾಹಿತಿಯನ್ನು ಸಂಗ್ರಹಿಸಲು ತೊಡಗಿದರು hyperlink ಎಂಬ tool ಬಳಿಸಿಕೊಂಡು ತಮ್ಮ ವಿಷಯಕ್ಕೆ


ಅಗತ್ಯವಾದ ಮಾಹಿತಿಯನ್ನು web address ಗಳನ್ನು copy ಮಾಡಿ resource templete ಹಾಕುವುದರಲ್ಲಿ ನಿರತರಾದರು ಮಧ್ಯಾಹ್ನದ ಅವಧಿಯಲ್ಲೂ ಕೂ ಡಾ 8 ಗುಂಪಿನ ಶಿಕ್ಷಕರು internet ನಿಂದ ಮಾಹಿತಿಯನ್ನು ಸಂಗ್ರಹಿಸಿ ತಮ್ಮ resource document ನ್ನು ಪೂ ರ್ಣಗೊಳಿಸಿದರು.. ಸಾಂಯಕಾಲದ ಅವಧಿಯಲ್ಲಿ Gimp image editor ಬಗ್ಗೆ ಶ್ರೀ.ಹಬೀಬಪಾಷಾ ರವರು ತಿಳಿಸಿಕೊಟ್ಟರು. ನಂತರ ಎಲ್ಲಾ ಶಿಕ್ಷಕರು ಅದನ್ನು practice ಮಾಡಿದರು.

ಗಣಿತ ವಿಷಯ ಶಿಕ್ಷಕರ ವೇದಿಕೆಯ ತರಬೇತಿಯ 5ನೇ ದಿನದ ವರದಿ ಇಂದು ದಿನಾಂಕ 30/11/2013ರಂದು ಬೆಳಿಗ್ಗೆ 9.30ಕ್ಕೆ ತರಬೇತಿಯು ಪ್ರಾರಂಭವಾಯಿತು . ಆಗ ಈ ತರಬೇತಿಯ ನೋಡಲ್ ಆಧಿಕಾರಿಗಳಾದ ಆ ಶ್ರೀ ಬಸವರಾಜ ಪಾರಿ ಉಪ ಪ್ರಾಚಾರ್ಯರು DIET ಮು ನಿರಾಬಾದ ಕೊಪ್ಪಳ ರವರು ಆಗಮಿಸಿದರು ನಿಗದಿ ಪಡಿಸಿದ ವೇಳಾ ಪಟ್ಟಿಯಂತೆ ಶ್ರೀ.ಎಂ.ಡಿ.ಯೂ ಸು ಪ ghs ಗಾಣದಾಳ ಶಿಕ್ಷಕರು ಶ್ರೇಢಿಗಳ ಬಗ್ಗೆ ತಮ್ಮ resource document ನ್ನು ಪ್ರಸ್ತು ತ ಪಡಿಸಿದರು ನಂತರ ಉಳಿದ ಶಿಕ್ಷಕರು ಅವರು ತಯಾರಿಸಿದ ಸಂಪನ್ಮೂ ಲದ ಬಗ್ಗೆ ಚರ್ಚೆ ಮಾಡಿದರು ಆಗ ಬಸವರಾಜ ಪಾರಿ ರವರು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದರು ಇದೇ ರೀತಿ ಉಳಿದ ತಂಡದವರು ತಮ್ಮ ಸಾಹಿತ್ಯವನ್ನು ಪ್ರದರ್ಶಿಸಿದರು ಮತ್ತು forum ನಲ್ಲಿ ಹಂಚಿಕೊಂಡು ಹೆಚ್ಚಿನ ಸಲಹೆಗಳನ್ನು ನೀರಿಕ್ಷಿಸಿದರು nನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ.ಹಬೀಬಪಾಷಾ ರವರು open shot video editor, picass ನಲ್ಲಿ photo upload ಮಾಡುವುದನ್ನು ತಿಳಿಸಿಕೊಟ್ಟರು ಕೊನೆಗೆ ಈ ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ.ಬಸವರಾಜ ಪಾರಿ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ.ಹಬೀಬಪಾಷಾ, ಶ್ರೀ.ಈರೇಶಪ್ಪ , ಶ್ರೀ.ಸೂಡಿಮಠ ಹಾಗೂ ರವರಿಗೆ ಶಿಭಿರಾರ್ಥಿಗಳು ಅಭಿನಂದನೆ ಸಲ್ಲಿಸಿ ಈ 5 ದಿನದ ಕಾಯಾರ್ಗಾರವನ್ನು ಮುಕ್ತಾಯಗೊಳಿಸಲಾಯಿತು..

Science

ಕೊಪ್ಪಳ ಜಿಲ್ಲಾ ಡಿಜಿಟಲ್ ರಿಸೋರ್ಸ್ ಕ್ರಿಯೆಶನ್ ತರಬೇತಿ -ವಿಜ್ಞಾನ 2013-14 ಮೊದಲನೇ ಬ್ಯಾಚ್ ತರಬೇತಿ ಅವಧಿ : 03-12-2013 ರಿಂದ 07-12-2013 ರವರೆಗೆ

See us at the Workshop

Workshop short report

ಸ್ಥಳ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಟಿ.ಬಿ.ಪಿ. ಮುನಿರಾಬಾದ್ ,ತಾ.ಜಿ.ಕೊಪ್ಪಳ


ಕೊಪ್ಪಳ ಜಿಲ್ಲಾ ವಿಜ್ಞಾನ ಡಿಜಿಟಲ್ ರಿಸೋರ್ಸ್ ಕ್ರಿಯೆಶನ್ ತರಬೇತಿ - 2013-14 ಮೊದಲನೇ ಬ್ಯಾಚ್ತ ರಬೇತಿ ಅವಧಿ 03-12-2013 ರಿಂದ 07-12-2013 ರವರೆಗೆ'


ಮೊದಲನೇ ದಿನದ ವರದಿ : ದಿನಾಂಕ :03-12-2013 ಸಮಯ:10.00 ಗಂಟೆಗೆ
ದಿನಾಂಕ :03-12-2013 ರಂದು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಟಿ.ಬಿ.ಪಿ.ಮುನಿರಾಬಾದ್ ನಲ್ಲಿ ಸರಿಯಾದ 10.00ಗಂಟೆಗೆ ಎಸ್.ಟಿ.ಎಫ್.ತರಬೇತಿಯ ನೊಡಲ್ ಅಧಿಕಾರಿಗಳು ಹಾಗೂ ಡಯಟ್ ನ ಹಿರಿಯ ಉಪನ್ಯಾಸಕರು ಆದ ಮಾನ್ಯಶ್ರೀ ಬಸವರಾಜ ಪಾರಿಯವರು ಪ್ರೋಜೆಕ್ಟರ್ ಗುಂಡಿ ಒತ್ತುವ ಮೂಲಕ ಮೊದಲನೇ ದಿನದ ಕೊಪ್ಪಳ ಜಿಲ್ಲಾ ಡಿಜಿಟಲ್ ರಿಸೋರ್ಸ್ ಕ್ರಿಯೆಶನ್ ಎಸ್.ಟಿ.ಎಫ್. ತರಬೇತಿಯನ್ನು ಚಾಲನೆಗೊಳಿಸಿ ಈ ತರಬೇತಿಯ ಸದುಪಯೋಗವನ್ನು ಎಲ್ಲಾ ಶಿಕ್ಷಕರು ಪಡೆದು ವೈಯುಕ್ತಿಕ ಅಭಿವೃದ್ಧಿಯ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೆ ಅಂತರ್ಜಾಲದ ಮಾಹಿತಿ.ಕಂಪ್ಯೂಟರ್ ನ್ನು ಬೋಧನಕಾರ್ಯಕ್ಕೆ ಬಳಸಿ ವಿದ್ಯಾರ್ಥಿಗಳ ಪ್ರಗತಿಗೆ ಹೆಚ್ಚು ಶ್ರಮವಹಿಸಿ ಆಧುನಿಕ ವಿಜ್ಞಾನ-ತಂತ್ರಜ್ಞಾನಕ್ಕೆ ಶಿಕ್ಷಕರು ಬದಲಾಗಬೇಕು ಎಂದು ಕರೆ ನೀಡಿದರು.ಡಯಟ್ ನ ಉಳಿದ ಹಿರಿಯ ಉಪನ್ಯಾಸಕರಾದ ಶ್ರೀ ನಾಗರಾಜರವರು ,,ಶ್ರೀ ವಿರುಪಾಕ್ಷಯ್ಯ ರವರು , ಜಿಲ್ಲಾ ಎಸ್.ಟಿ.ಎಫ್.ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮುರಳಿಧರ ಸಿಂಗ್ರಿ , ಶ್ರೀ ರಮೇಶ ಶಿಲ್ಪಿ ಹಾಗೂ ತರಬೇತಿ ಪಡೆಯಲು 30 ಜನ ಸಹಶಿಕ್ಷಕರುಗಳು ಹಾಜರಿದ್ದರು.ಕಾರ್ಯಕ್ರಮವನ್ನು ಶ್ರೀ ರೇವಣಸಿದ್ಧಯ್ಯ ಚೆನ್ನಿನಾಯ್ಕರ್ ನಿರೂಪಿಸಿ ವಂದಿಸಿದರು..
ಬೆಳಗಿನ ಅವಧಿಯಲ್ಲಿ ಶ್ರೀ ಮುರಳಿಧರ ಸಿಂಗ್ರಿಯವರು ತರಬೇತಿಯಲ್ಲಿ ಹಾಜರಿದ್ದ ಎಲ್ಲಾ ಶಿಕ್ಷಕರ ವೈಯುಕ್ತಿಕ ಪರಿಚಯ ಮಾಡಿಕೊಳ್ಳುವುದರ ಜೊತೆಗೆ ಇ-ಮೇಲ್ ಐಡಿಯನ್ನು ರಚಿಸುವ ವಿಧಾನ ಪ್ರೋಜೆಕ್ಟರ್ ಮೂಲಕ ತೋರಿಸಿ ,ಎಲ್ಲಾ ಶಿಕ್ಷಕರು ತಮ್ಮ ತಮ್ಮ ಇ-ಮೇಲ್ ಐಡಿಯನ್ನು ರಚಿಸುವ ಸಾಮರ್ಥ್ಯ ಬೆಳಿಸಿದರು.ಕಲಿಕಾರ್ಥಿಗಳ ಮಾಹಿತಿಯನ್ನು ತುಂಬುವ ವಿಧಾನವನ್ನು ಹಾಗೂ ಕೊಯರ್ ಬಗ್ಗೆ ಮಾಹಿತಿ ಯನ್ನು ಸವಿವರವಾಗಿ ವಿವರಿಸಿದರು.
ಮಧ್ಯಾಹ್ನದ ಅವಧಿಯಲ್ಲಿ ಶ್ರೀ ರಮೇಶ ಶಿಲ್ಪಿ ಯವರು ಪ್ರಸೆಂಟೇಶನ್ ಬಳಸಿ ಇಂಟರ್ ನೆಟ್ ವಿಕಾಸ ,ವಿಕಿಪೀಡಿಯ ,ಕೊಯರ್ ಉದ್ಧೇಶಗಳು ಮತ್ತು ತತ್ವಗಳು ,ಹಿನ್ನಲೆ ಬಗ್ಗೆ ಸವಿವರವಾದ ಮಾಹಿತಿ ನೀಡಿ ಮೆಲ್ ಕಳುಹಿಸುವ ಮತ್ತು ಕೊಯರ್ ಸಂಪೂರ್ಣ ವೀಕ್ಷಣೆ ನೋಡಲು ಹ್ಯಾಂಡ್ಸ್ ಆನ್ ನೀಡಿ 5.30ಗಂಟೆಗೆ ಮೊದಲೇ ದಿನದ ತರಬೇತಿಗೆ ಪೂರ್ಣವಿರಾಮ ನೀಡಿದರು.

ಎರಡನೇ ದಿನದ ವರದಿ : ದಿನಾಂಕ :04-12-2013 ಸಮಯ:10.00 ಗಂಟೆಗೆ
ಬೆಳಿಗಿನ ಅವಧಿಯಲ್ಲಿ ಶ್ರೀ ಮುರಳಿಧರ ಸಿಂಗ್ರಿಯವರು ತರಬೇತಿಯಲ್ಲಿ ಹಾಜರಿದ್ದ ಎಲ್ಲಾ ಶಿಕ್ಷಕರಿಗೆ ಕನ್ನಡ ಟೈಪಿಂಗ್ , ಪೋಲ್ಡರ್ ರಚನೆ, ಇಮೇಜ್ ಡೌನಲೋಡಿಂಗ , ವಿಡಿಯೋ ಡೌನಲೋಡಿಂಗ್ ಮಾಡುವ ವಿಧಾನಗಳನ್ನು ತಿಳಿಸಿ ಪ್ರಾಕ್ಟಿಕಲ್ ತರಗತಿಗೆ (ಹ್ಯಾಂಡ್ಸ ಆನ್ ) ಅವಕಾಶ ನೀಡಲಾಯಿತು.
ಮಧ್ಯಾಹ್ನದ ಅವಧಿಯಲ್ಲಿ ಶ್ರೀ ರಮೇಶ ಶಿಲ್ಪಿ ಯವರು ತಮ್ಮದೇ ಆದ ಎಲಿಮೆಂಟ್ಸ ಮೈಂಡ್ ಮ್ಯಾಪ , ಹಾಗೂ ದಿನ ನಿತ್ಯ ಜೀವನದಲ್ಲಿ ರಸಾಯನಿಕಗಳು ಮೇಲೆ ಕನ್ನಡದಲ್ಲಿ ಮೈಂಡ್ ಮ್ಯಾಪ್ ಮಾಡುವ ವಿಧಾನ ,ಹಂತಗಳನ್ನು ಶಿಬಿರಾರ್ಥಿಗಳಿಗೆ ಪ್ರಾತ್ಯಕ್ಷಿಕೆ ತೋರಿಸಿದರು.ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮುರಳಿಧರ ಸಿಂಗ್ರಿಯವರು ಅವರದೇ ಆದ ಮೈಂಡ್ ಮ್ಯಾಪ ಜೀವ ವಿಕಾಸದ ವಿಷಯದ ಮೇಲೆ ಕೊಯರ್ ನಲ್ಲಿ ಪ್ರಕಟವಾದ ಎಲ್ಲಾ ವಿಷಯಗಳನ್ನು ಸವಿವರವಾಗಿ ತಿಳಿಸಿ ಡಿಜಿಟಲ್ ರಿಸೋರ್ಸ ಕ್ರಿಯೆಶನ್ ಮಾಡುವ ವಿಧಾನಗಳನ್ನು ಸಂಪೂರ್ಣವಾಗಿ ಕೊಯರ್ ನಲ್ಲಿರುವ ಬೆಳಕು ,ಆಹಾರದ ವಿಷಯಗಳನ್ನು ತೋರಿಸಿ ಶಿಬಿರಾರ್ಥಿಗಳಿಗೆ ಮನವರಿಕೆ ಮಾಡಿದ ನಂತರ ಹ್ಯಾಂಡ್ಸ್ ಆನ್ ನೀಡಿ 6.00ಗಂಟೆಗೆ ಎರಡನೇ ದಿನದ ತರಬೇತಿಗೆ ಪೂರ್ಣವಿರಾಮ ನೀಡಿದರು.

ಮೂರನೆ ದಿನದ ವರದಿ : ದಿನಾಂಕ :05-12-2013 ಸಮಯ:10.00 ಗಂಟೆಗೆ
ಸಂಪಸ್ಮೂಲ ವ್ಯಕ್ತಿಗಳಾದ ಶ್ರೀ ರಮೇಶ ಶಿಲ್ಪಿ ಮತ್ತು ಶ್ರೀ ಮುರಳಿಧರ ಸಿಂಗ್ರಿಯವರ ಸಹಾಯದಿಂದ ಮೈಂಡ್ ಮ್ಯಾಪ್ ನ್ನು ತಯಾರಿಸುವಲ್ಲಿ ನಿರತರಾದರು. ಈ ಬೆಳಗಿನ ಅವಧಿಯಲ್ಲಿ ಎಲ್ಲರು ಉತ್ಸಾಹದಿಂದ ತಮ್ಮ ಕಾರ್ಯದಲ್ಲಿ ಬಹಳ ಆಸಕ್ತಿಯಿಂದ ತೊಡಗಿರುವುದು ಕಂಡು ಬಂದಿತು. ಹಾಗೆಯೇ ಎಲ್ಲಾ ಗುಂಪಿನವರು ಮೈಂಡ್ ಮ್ಯಾಪ್ ನ್ನು ತಯಾರಿಸಿ, ಅದಕ್ಕೆ ಸಂಬಂಧಿಸಿದ ಅಂದರೆ, ಕೋಯರ್ (KOER) ತಂತ್ರಜ್ಞಾನದಲ್ಲಿರುವ ಫಾರ್ಮ್ಯಾಟ್ ನ ಹಾಗೆಯೇ ಎಲ್ಲಾ ಅಂಶಗಳನ್ನು ಬೆರಳಚ್ಚು ಮಾಡಿ ಮೈಂಡ್ ಮ್ಯಾಪ್ ನ್ನು ತಯಾರಿಸಿದರು ಆಗ ಸಮಯ ಮಧ್ಯಾಹ್ನ 1:30 ಗಂಟೆ. ಆಗ ಊಟದ ವಿರಾಮ ನೀಡಲಾಯಿತು.
ವಿರಾಮದ ನಂತರ ಮಧ್ಯಾಹ್ನ 2:30 ಗಂಟೆಗೆ ಶ್ರೀ ರಮೇಶ ಶಿಲ್ಪಿ ಯವರು ಗಿಂಪ್ (GIMP) ಟೂಲ್ನ ಸಹಾಯ ದಿಂದ ಫೋಟೋಗಳನ್ನು ಹೇಗೆ ಎಡಿಟ್ ಮಾಡಬೇಕು ಮತ್ತು ಚಿತ್ರಗಳಲ್ಲಿನ ಬರವಣಿಗೆಯ ಭಾಗಗಳನ್ನು ಹೇಗೆ ಬದಲಾಯಿಸುವುದು ಮತ್ತು ಕಂಪ್ಯೂಟರ್ ಪಾಥ್ ಗಳನ್ನು ಬಳಸುವುದರ ಮೂಲಕ ತಾವೆ ಡೌನ್ ಲೋಡ್ ಮಾಡಿದ ಚಿತ್ರದ ಅಳತೆ ಕಡಿಮೆ ಮಾಡಿ ತೋರಿಸಿದರು. ಅದೇ ರೀತಿಯಾಗಿ ನಾಲಿಗೆ ಚಿತ್ರದಲ್ಲಿನ ಭಾಗಗಳನ್ನು ಕನ್ನಡದಲ್ಲಿ ಹೇಗೆ ಬದಲಾಯಿಸುವುದು ಎಂಬುದನ್ನು ವಿಶ್ಲೇಷಿಸಿದರು. ನಂತರ, ಎಲ್ಲರು ಕಂಪ್ಯೂಟರ್ ನಲ್ಲಿ ಅಭ್ಯಾಸ ಮಾಡುತ್ತಾ ಕುಳಿತರು. ಆಗ ಸಮಯ ಅಪರಾಹ್ನ ೩.೩೦ ಗಂಟೆ, ಅಲ್ಪ ವಿರಾಮ ನೀಡಲಾಯಿತು. ನಂತರ ಸಂಪಸ್ಮೂಲ ವ್ಯಕ್ತಿಗಳಾದ ಶ್ರೀ ಮುರಳಿಧರ ಶಿಂಗ್ರಿಯವರು ಕೋಯರ್ ವೆಬ್ ಸೈಟ್ ನ್ನು ಓಪನ್ ಮಾಡಿ ಅನೇಕ ಮಾಹಿತಿಗಳನ್ನು ಪಡೆಯುವುದು ಹೇಗೆ ಎಂದು ವಿಸ್ತಾರವಾಗಿ ವಿವರಿಸಿದರು.

ನಾಲ್ಕನೇ ದಿನದ ವರದಿ : ದಿನಾಂಕ :06-12-2013 ಸಮಯ:10:00 ಗಂಟೆಗೆ
ವಿಜ್ಞಾನ ಮೌಲ್ಯಮಾಪನ ಮಾಡುವ ಬಗೆ ಹೇಗೆ ? ಇನ್ನಿತರ ಪ್ರಮುಖ ಆಂಶಗಳನ್ನು ಕೊಯರ್ ನಲ್ಲಿರುವ Assessment Framework Science - Karnataka Open Educational Resources ಸಂಪನ್ಮೂಲವನ್ನು ಬಳಸಿ ಶಿಬಿರಾರ್ಥಿಗಳಿಗೆ ಮನಮುಟ್ಟವಂತೆ ಸವಿವರವಾಗಿ ಚರ್ಚಿಸುತ್ತಾ ವಿಷಯಗಳನ್ನು ಸ್ಪಷ್ಟಪಡಿಸಿದರು.ಶಿಬಿರಾರ್ಥಿಗಳ ಪ್ರಶ್ನೆಗಳ ಬಾಣಕ್ಕೆ ತತ್ ಕ್ಷಣ ಪ್ರತಿಬಾಣ ಹೂಡಿ ಎಲ್ಲರ ಅಚ್ಚರಿಗೆ ಪಾತ್ರರಾದರು. ಇವೆನ್ನವುಗಳ ಮಧ್ಯ ಮೂಡನಂಬಿಕೆ ಮತ್ತು ಅಂಧ ಆಚರಣೆಗಳ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡುವಾಗ "ನಾಳೆ ಬಾ" ಎಂಬ ವಿಷಯ ಪ್ರಸ್ತಾಪ ಮಾಡಿದ ತಕ್ಷಣ ಶ್ರೀ ಮುರಳಿಧರ ಸಿಂಗ್ರಿ ಸರ್ " ಟೀ ಗೆ ಹೋಗಿ ಬಾ " ಎಂದು ಎಲ್ಲರಿಗೂ ಹೇಳುವ ಮೂಲಕ ಟೀ ಬ್ರೇಕ್ ನೀಡಿದರು.
ಟೀ ವಿರಾಮದ ನಂತರ Assessment Framework Science - Karnataka Open Educational Resources ನ್ನಲಿರುವ ಮೈಂಡ್ ಮ್ಯಾಪ ಬಳಸಿ ವಿಜ್ಞಾನದ ಮೌಲೀಕರಣ ಹೇಗೆ ? ಮತ್ತು ಏಕೆ ? ಮೌಲ್ಯಮಾಪನ ಮಾಡುವ ಬಗೆ , ವಿಧಾನ , ಏನನ್ನು ಮೌಲ್ಯಮಾಪನ ಮಾಡಬೇಕು ? ಎಂಬ ಅನೇಕ ವಿಚಾರ ಹಂದರವನ್ನು ತೆರದಿಟ್ಟ ಶಿಲ್ಪಿ ಸರ್ ರವರು ನಮ್ಮಲ್ಲಿಯ ಅನೇಕ ಪ್ರಶ್ನೆಗಳನ್ನು ಉಂಟಾಗುವಂತೆ ಮಾಡಿ ಅವುಗಳಿಗೆ ತಮ್ಮದೇ ದಾಟಿಯಲ್ಲಿ ಉತ್ತರಿಸಿ , ಇನ್ನು ಕೆಲವೊಂದಷ್ಟನ್ನು ಶಿಬಿರಾರ್ಥಿಗಳ ಆಲೋಚನೆಗೆ ಬಿಟ್ಟು ಸಂಪನ್ಮೂಲ ವ್ಯಕ್ತಿಗಳು ವಿಷಯಾಂತರವಾಗದಂತೆ ನೋಡಿಕೊಂಡು ಜಾಣ್ಮೆ ಮೆರೆದರು. ಅದೇ ಸಮಯದಲ್ಲಿ ಶ್ರೀ ಮುರಳಿಧರ ಸಿಂಗ್ರಿ ರವರು ಸಾಂಪ್ರದಾಯಿಕ ಆಚರೆಣೆಗಳ ಹಿಂದಿರುವ ವೈಜ್ಞಾನಿಕ ವಿಚಾರಗಳನ್ನು ಅರಿತುಕೊಳ್ಳಲು ಸಂಸ್ಥೆಯೊಂದನ್ನು ಸ್ಥಾಪಿಸಿದ್ದು ಅಲ್ಲಿ ತಮ್ಮ ವಿಚಾರಗಳನ್ನು ಚರ್ಚಿಸಿದರೆ ಸೂಕ್ತ ಎಂದು ತಿಳಿಸುವುದರೊಂದಿಗೆ ಅವರ ವಿಜ್ಞಾನದ ಮೇಲಿನ ನಿಜವಾದ ಕಾಳಜಿ ವ್ಯಕ್ತವಾಯಿತು.ಇದೆಲ್ಲಾ ಆಗುವ ವೇಳೆಗೆ ಊಟದ ವಿರಾಮ ನೀಡಲಾಯಿತು.
ಮಧ್ಯಾಹ್ನದ ಅವಧಿಯಲ್ಲಿ ಪ್ರಾಯೋಗಿಕವಾಗಿ ಎಲ್ಲ ಶಿಬಿರಾರ್ಥಿಗಳು ಡಿಜಿಟಲ್ ಸಂಪನ್ಮೂಲ ತಯಾರಿಯಲ್ಲಿ ನಿರಂತರವಾಗಿ ನಿರತರಾಗಿದ್ದರು.ಇಮೇಜ್ ಡೌನಲೋಡಿಂಗ್ , ಮೈಂಡಮ್ಯಾಪ , ವಿಷಯದ ಸಂಪನ್ಮೂಲ ಕ್ರೋಢೀಕರಣ ಇಂಟರನೆಟ್ ಜಾಲತಾಣದಲ್ಲಿ ವಿಷಯ ಸಂಗ್ರಹಿಸುವಲ್ಲಿ ಸುಂದರವಾದ ಡಿಜಟಲ್ ಸಂಪನ್ಮೂಲ ಕ್ರೋಢೀಕರಿಸುವುದು ಅತಿ ಸುಲಭ ಎಂಬಂತೆ ಕಾರ್ಯನಿರತಾಗಿದ್ದರು. ಇದಾದ ನಂತರ ಮತ್ತೆ ಟೀ ವಿರಾಮ.
ಕೊನೆಯ ಅವಧಿಯ ಅಂತ್ಯದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮುನಿರಬಾದ್ ನ ಸಲಹಾ ಸಮಿತಿಯ ಸದಸ್ಯರು ಹಾಗೂ ಕೊಪ್ಪಳ ಜಿಲ್ಲೆಯ ಖ್ಯಾತ ಸಾಹಿತಿ ,ಹೋರಾಟಗಾರರು ಆದ ಶ್ರೀ ಅಲ್ಲಮ ಪ್ರಭು ಬೆಟ್ಟದೂರು ಕನ್ನಡ ಪ್ರಾಧ್ಯಾಪಕರು ಶಿಬಿರಾರ್ಥಿಗಳನ್ನು ಉದ್ಧೇಶಿಸಿ ವಿಜ್ಞಾನವನ್ನು ಜನಸಾಮಾನ್ಯರ ಅಚ್ಚುಮೆಚ್ಚುವಾಗುವಂತೆ ಜನಪ್ರಿಯಗೊಳಿಸುವಲ್ಲಿ , ವಿಜ್ಞಾನದಲ್ಲಿ ಇಂಗ್ಲೀಷ್ ಪದಗಳ ಬಳಕೆ ಬದಲಾಗಿ ಕನ್ನಡ ಪದಗಳನ್ನು ಹೆಚ್ಚು ಬಳಸಿ , ಇಂಗ್ಲೀಷ್ ವಿಷಯದ ವಿಜ್ಞಾನವನ್ನು ಕನ್ನಡಕ್ಕೆ ಭಾಷಾಂತರಿಸಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಮೂಡುವಂತೆ ಮಾಡಬೇಕು ಎಂದು ಕರೆ ನೀಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ವಿಜ್ಞಾನಿಯಾಗಿ ಸೃಷ್ಟಿಯಾಗಬೇಕಾದರೆ ಮಾತೃಭಾಷೆಯಿಂದಲೇ ಮಾತ್ರ ಸಾಧ್ಯ ಅದು ಕನ್ನಡದಲ್ಲಿ.. ಇದಕ್ಕೆ ಎಲ್ಲರ ಸಹಕಾರ ,ಅಭಿಮಾನ ,ತ್ಯಾಗ ಹಾಗೂ ಶ್ರಮ ಅಗತ್ಯವೆಂದು ಪ್ರತಿಪಾದಿಸಿದರು.
ಅವರು ತೆರಳಿದ ನಂತರ ಎಲ್ಲ ಮನಸ್ಸು ಎಸ್.ಟಿ.ಎಫ್. ತರಬೇತಿಯ ವಿಷಯವಾದ ಡಿಜಿಟಲ್ ರಿಸೋರ್ಸ್ ಕ್ರಿಯೆಶನ್ ಡಾಕುಮೆಂಟನಲ್ಲಿ ಹೆಡರ್ , ಪೂಟರ್ , ಪುಟ ಸಂಖ್ಯೆ , ಹಾಗೂ ಚೆಂಜ್ಸ್ ರೆಕಾರ್ಡ್ಡಸ ಬಗ್ಗೆ , ಕಾಮೆಂಟ್ ಹಾಕುವುದು, ರಿವೀವ್ಹ ಮಾಡುವುದು ಹೇಗೆ ಎಂಬುದನ್ನು ಶ್ರೀ ರಮೇಶ ಶಿಲ್ಪಿ ಯವರು ತಿಳಿಸಿದರು. ಇದಾದ ನಂತರ ಪ್ರತಿಯೊಂದು ತಂಡದ ತಮ್ಮ ಪಕ್ಕದ ತಂಡಕ್ಕೆ ತಾವು ಮಾಡಿದ ಡಿಜಿಟಲ್ ಸಂಪನ್ಮೂಲವನ್ನು ರಿವೀವ್ಹ ಮಾಡಬೇಕು ಎಂದು ತಿಳಿಸಿದರು. ಅದರಂತೆ ಅದಲುಬದಲು ಮಾಡಿ ರಿವೀವ್ಹ ಮಾಡಿದರು. ಅಷ್ಟೊತ್ತಿಗೆ 6.00ಗಂಟೆ ಆದಾಗ ನಾಲ್ಕನೇ ದಿನದ ತರಬೇತಿಗೆ ಪೂರ್ಣವಿರಾಮ ನೀಡಿದರು.

ಐದನೇ ದಿನದ ವರದಿ : ದಿನಾಂಕ :07-12-2013 ಸಮಯ:10.00 ಗಂಟೆಗೆ
ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಟಿ.ಬಿ.ಪಿ.ಮುನಿರಾಬಾದ್ ನಲ್ಲಿ ಸರಿಯಾದ 10.00ಗಂಟೆಗೆ ಎಸ್.ಟಿ.ಎಫ್.ತರಬೇತಿಯ ನೊಡಲ್ ಅಧಿಕಾರಿಗಳು ಹಾಗೂ ಡಯಟ್ ನ ಹಿರಿಯ ಉಪನ್ಯಾಸಕರು ಆದ ಮಾನ್ಯಶ್ರೀ ಬಸವರಾಜ ಪಾರಿಯವರು ಆಧ್ಯಕ್ಷತೆಯಲ್ಲಿ ನಾಲ್ಕನೇ ದಿನದ ಕೊಪ್ಪಳ ಜಿಲ್ಲಾ ಡಿಜಿಟಲ್ ರಿಸೋರ್ಸ್ ಕ್ರಿಯೆಶನ್ ಎಸ್.ಟಿ.ಎಫ್. ತರಬೇತಿಯನ್ನು ದಿನಾಂಕ :06-12-2013 4ನೇ ದಿನದ ವರದಿ ವಾಚನವನ್ನು ಶ್ರೀ ಪ್ರವೀಣ ಜಡ್ರಾಮಕುಂಟಿ ಸ.ಪ್ರೌ.ಶಾಲೆ ತುಗ್ಗಡೋಣಿ ತಾ.ಕುಷ್ಟಗಿ ,ಜಿ.ಕೊಪ್ಪಳ ವಾಚಿಸಿದರು.ಮೂರನೇ ದಿನದ ವರದಿ ವಾಚನವನ್ನು ಶ್ರೀ ತಿಮ್ಮಣ್ಣ ಕೋಟುಮಚಗಿ ಶಿಬಿರಾರ್ಥಿಯ ಸಾಹಿತ್ಯಕ ಕವನ ಭಾಷೆ ಶೈಲಿಯನ್ನು ಆಲಿಸಿದ ಎಸ್.ಟ.ಎಫ್.ತರಬೇತಿಯ ನೋಡಲ್ ಆಧಿಕಾರಿಗಳಾದ ಶ್ರೀಬಸವರಾಜ ಪಾರಿಯವರು ಹಾಗೂ ಶಿಬಿರಾರ್ಥಿಗಳನ್ನು ರಂಜಿಸಿತು.
ವರದಿ ವಾಚನದ ನಂತರ ಬೆಳಿಗಿನ ಅವಧಿಯಲ್ಲಿ ಶ್ರೀ ಮುರಳಿಧರ ಸಿಂಗ್ರಿಯವರು ತರಬೇತಿಯಲ್ಲಿ ಹಾಜರಿದ್ದ ಎಲ್ಲಾ ಶಿಕ್ಷಕರಿಗೆ ಡಿಜಿಟಲ್ ರಿಸೋರ್ಸ್ ಕ್ರಿಯೆಶನ್ ಉತ್ತಮವಾದ ಹಾಗೂ ಪೂರ್ಣವಾದ ಸಂಪನ್ಮೂಲವನ್ನು koer@karnatakaeducation.org ಗೆ ಕಳುಹಿಸಲು ಸೂಚಿಸಿದರು. ದಾದ ನಂತರ ಟೀ ಬ್ರೇಕ್. ಟೀ ವಿರಾಮದ ನಂತರ openshot video editor ನಲ್ಲಿ ವಿಡಿಯೋಗಳನ್ನು ಎಡಿಟ್ ಮಾಡುವುದು , ಡೆಸ್ಕಟಾಪ ರೆಕಾರ್ಡ್ ಮಾಡಿ ನಮ್ಮದೇ ಧ್ವನಿಯಲ್ಲಿ ವಿಡಿಯೋ ಗಳನ್ನು ವರ್ಗಕೋಣೆಯಲ್ಲಿ ಬಳಸುವ ವಿಧಾನಗಳನ್ನು ಸವಿವರವಾಗಿ ಮುರಳಿಧರ ಶಿಂಗ್ರಿಯವರು ಪ್ರಾಯೋಗಿಕವಾಗಿ ತೋರಿಸಿದರು. ಇಷ್ಟೋತ್ತಾಗಾಗಲೇ ಉಟದ ಸಮಯವಾಗಿತ್ತು.
ಸೊಗಸಾದ ಸಿಹಿ ಭೋಜನದ ನಂತರ ಪುನಃ ಮಧ್ಯಾಹ್ನದ ಅವಧಿಯ ತರಗತಿಯು ವಿಡಿಯೋ ಎಡಿಂಗ್ ಹ್ಯಾಂಡ್ಸ ಆನ್ ಪ್ರಾರಂಭವಾಯಿತು.ಇದಾದ ನಂತರ ತರಬೇತಿ ಅವಧಿಯ ಕೊನೆಯ ಘಟ್ಟ ಫೀಡ್ ಬ್ಯಾಕ್ ಫಾರ್ಮ್ ತುಂಬಿ ಸಬಮಿಟ್ ಮಾಡುವ ಕಾರ್ಯದಲ್ಲಿ ತರಬೇತಿ ಅನಿಸಿಕೆ , ಅಭಿಪ್ರಾಯಗಳನ್ನು ಮುಕ್ತವಾಗಿ ಕೊಯರ್ ಗೆ ಸಲ್ಲಿಸಿದರು. ಶಿಬಿರಾರ್ಥಿಗಳವನ್ನು ಡಯಟ್ ನ ಆವರಣದ ಮುಂಭಾಗದಲ್ಲಿ ಅಂತಿಮವಾಗಿ ಎಲ್ಲರ ಗ್ರುಪ್ ಫೋಟೋ ಸೆಷನ್ ಕಾರ್ಯ ಕ್ರಮ ನಡೆಯಿತು.
ಶಿಬಿರಾರ್ಥಿಗಳಾದ ಶ್ರೀಶೆಷನಗೌಡ ಪಾಟೀಲರವರು( ಸ.ಶಿ.ಸ.ಪ್ರೌ.ಶಾ.ಮನ್ನೆರಾಳ ,ತಾ.ಕುಷ್ಟಗಿ) ನಾವು ಅನೇಕ ಸಮಸ್ಯೆಗಳ ನಡುವೆಯೂ ನಾವೂ ಉತ್ಸಾಹ ,ಆಸಕ್ತಿ ,ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಈ ತರಬೇತಿಯು ನಮ್ಮನ್ನು ಹುರುದುಂಬಿಸಿದೆ. ಮುಖ್ಯೋಪಾಧ್ಯಾಯರ ಸಹಕಾರ ಪಡೆದು ಉತ್ತಮ ಕಂಪ್ಯೂಟರ್ ಲ್ಯಾಬ ನಿರ್ಮಿಸುಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾದುದು ಎಂದು ಸಲಹೆ ನೀಡಿದರು.
ಕೊನೆಗೆ ಸಭೆಯ ಅದ್ಯಕ್ಷತೆಯನ್ನು ವಹಿಸಿರುವ ಡಯಟ್ ನ ಹಿರಿಯ ಉಪನ್ಯಾಸಕರು ಹಾಗೂ ಎಸ್.ಟಿ.ಎಫ್ ತರಬೇತಿಯ ನೋಡಲ್ ಅಧಿಕಾರಿಗಳಾದ ಮಾನ್ಯಶ್ರೀ ಬಸವರಾಜ ಪಾರಿಯವರು ಮಾತನಾಡಿ ಈ ತರಬೇತಿಯ ಸಂಪೂರ್ಣ ಕಂಪ್ಯೂಟರ್ ಜ್ಞಾನವನ್ನು ಹಾಗೂ ತಮ್ಮದೇ ಆದ ವಿಜ್ಞಾನ ವಿಷಯದ ಡಿಜಿಟಲ್ ರಿಸೋರ್ಸ್ ಕ್ರಿಯೇಶನ್ ಡಿಜಿಟಲ್ ಜ್ಞಾನವನ್ನು ತಮ್ಮ ಶಾಲೆಗೆ ಅನ್ವಯಿಸಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯತ್ ಗೆ , ಗುಣಮಟ್ಟ ಶಿಕ್ಷಣಕ್ಕೆ ಪರಿಶ್ರಮವಹಿಸಿ ಸಾಧಿಸಬೇಕೆಂದು ಕರೆನೀಡಿದರು.
ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಗೆ ಮತ್ತು ಕೊಯರ್ ಗೆ ತಮ್ಮ ಅನುಭವಗಳನ್ನು , ಹೊಸ ಹೊಸ ಬೋಧನಾ ವಿಧಾನಗಳನ್ನು ವಿನಿಮಯ ,ಹಂಚಿಕೆ ಮಾಡಿಕೊಂಡು ನಿರಂತರ ಇ-ಮೇಲ್ ಮೂಲಕ ಸಂಪರ್ಕವಿರಬೇಕು ಎಂದು ಶಿಬಿರಾರ್ಥಿಗಳಿಗೆ ಸೂಚಿಸಿದರು. ಶ್ರೀ ರಾಜೇಂದ್ರ ಬೆಳ್ಳಿ ಸ.ಶಿ. ಸ.ಪ್ರೌ.ಶಾಲೆ ಮುದೆನೂರು ತಾ.ಕುಷ್ಟಗಿ ಇವರು ವಂದಾನರ್ಪಣೆಯನ್ನು ಎಲ್ಲರಿಗೂ ಸಲ್ಲಿಸಿ 5ನೇ ದಿನದ ಯಶಸ್ವಿ ತರಬೇತಿಗೆ ತೆರೆ ಎಳೆದರು.

Social Science

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)

ಜಿಲ್ಲಾ ತರಬೇತಿ ಕೇಂದ್ರ ಮುನಿರಾಬಾದ ತಾ||ಜಿ|| ಕೊಪ್ಪಳ.

ಇಂದು ದಿನಾಂಕ 23/12/13ರಿಂದ ಸಮಾಜ ವಿಜ್ಞಾನ ಶಿಕ್ಷಕರಿಗೆ ಎಸ್,ಟಿ ಎಫ್ ತರಬೇತಿಯನ್ನು ಪ್ರಾರಂಬಿಸಲಾಗಿದೆ ಈ ತರಬೇತಿಯಲ್ಲಿ ಮುಂಜಾನೆ ಪ್ರಾಸ್ತಾವಿಕವಾಗಿ ಮಾತನಾಡಿದ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಭಿಮಣ್ಣ ಸಾವಳಗಿಯವರು ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ನಮ್ಮ ಮಕ್ಕಳಿಗೆ ಆಧುನಿಕ ತಂತ್ರಜ್ಞಾನ ಬಳಸಿ ಭೊದನೆ ಮಾ ಡುವ ದು ಅತ್ಯವಶ್ಯಕವಾಗಿದೆ, ಈನಿಟ್ಟಿನಲ್ಲಿ ಕಂಪ್ಯೂಟರಗಳನ್ನು ಬಳಸಿ ಭೋದಿಸಲು ಎಲ್ಲಾ ಶಿಕ್ಷಕರು ಕಂಪ್ಯೂಟರಬಳಕೆ ತಿಳಿಯುವುದು ಅನಿವಾರ್ಯ ಹಾಗೂ ಅಗತ್ಯ.ಅದಕ್ಕಾಗಿಯೆ ನಿಮಗೆ ಇಂದಿನಿಂದ 5 ದಿನಗಳಕಾಲ ಕಂಪ್ಯೂಟರ ಬಳಸುವುದು ಮೇಲ್ ರಚಿಸುವುದು, ಅಂತರಜಾಲದ ಬಳಕೆ ಮುಂತಾದ ವಿಷಯಗಳನ್ನು ತಿಳಿಸಿಕೊಡಲಾಗುವುದು ಎಂದು ತಿಳಿಸಿದರು. ನಂತರ ಮಾತನಾಡಿದ ನೊಡಲ್ ಅಧಿಕಾರಿಗಳಾದ ಶ್ರೀ ಬಸವರಾಜ ಪಾರಿ ಅವರು ಮಾತನಾಡಿ ಅಧುನಿಕ ಜಗತ್ತಿನಲ್ಲಿ ವಯಸ್ಸಿನ ಯಾವದೆ ತಾರತಮ್ಯವಿಲ್ಲದೆ ಕಂಪ್ಯೂಟರಬಳಸುವುದನ್ನು ಕಲಿಯಬೇಕಾಗಿದೆ ಇಲ್ಲವಾದಲ್ಲಿ ಸುಶಿಕ್ಷಿತ ಅವಿದ್ಯಾವಂತನೆನಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು ಅಲ್ಲದೆ ತರಬೇತಿ ಅವಧಿಯಲ್ಲಿ ಎಲ್ಲರು ಸಮಯ ಪಾಲನೆ ಹಾಗೂ ಕಡ್ಢಾಯ ಹಾಜರಾತಿ ಇರುವುದು ಅವಶ್ಯ ಎಂದು ತಿಳಿಸಿದರು ಇನ್ನೋರ್ವ ಸಂಪನ್ಮೂಲವ್ಯಕ್ತಿ ಶ್ರೀನಿವಾಸ ಮಾತನಾಡಿ ಇ-ಮೇಲ್ ಬಗ್ಗೆ ಹಾಗೂ ಲಿಬ್ರೋ ಆಫೀಸ ಬಗ್ಗೆ ತಿಳಿಸುತ್ತಾ ಕಾರ್ಯಕ್ರಮ ನಿರುಪಿಸಿದರು. ನಂತರ ಶಿಬಿರಾರ್ಥಿಗಳು ಆಸಕ್ತಿಯಿಂದ ಕಂಪ್ಯೂಟರಗಳನ್ನು ಬಳಸುತ್ತಾ ತಮ್ಮ ತಮ್ಮ ಜಿ-ಮೇಲ್ ಐಡಿಗಳನ್ನು ರಚಿಸಿ ಕೊಯರ್ ನಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿ ಕೊಂಡು ತಮ್ಮ ಶಾಲೆಗಳ ಮಾಹಿತಿ ತುಂಬಿ ದರು. ವರದಿ ತಯ್ಯಾರಿಸಿದವರು ಶ್ರೀ ಬಿ.ಎಂ.ಸವದತ್ತಿ.ಸಪ್ರೌಢಶಾ ಹೊರತಟ್ನಾಳ,ತಾಜಿ||ಕೊಪ್ಪಳ. ಶ್ರೀ ಗಂಗಾಧರ ಖಾನಾಪೂರ,ಸಪ್ರೌಢಶಾಲೆ ಹಿರೇಬೊಮ್ಮನಾಳ.ತಾಜಿ|ಕೊಪ್ಪಳ.ಶ್ರೀ ವಿರುಪಾಕ್ಷಪ್ಪ ಮೇಟಿ.ಸಪ್ರೌಢ ಶಾಲೆ ಕರ್ಕಿಹಳ್ಳಿ,ತಾಜಿ|ಕೊಪ್ಪಳ.ಮಾರ್ಗದರ್ಶಿಗಳು ಶ್ರೀಭೀಮಪ್ಪ ಸಾವಳಗಿ ಮತ್ತು ಶ್ರೀನಿವಾಸ ಎಮ್.