STF 2013-14 Udupi

From Karnataka Open Educational Resources
Jump to navigation Jump to search


Head Teachers

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)


Mathematics

Agenda

If district has prepared new agenda then it can be shared here

See us at the Workshop

Maths 1st batch workshop 2013 - 14

Workshop short report

ಗಣಿತ ವಿಷಯ ಶಿಕ್ಷಕರ ವೇದಿಕೆ (STF) ಕಾರ್ಯಾಗಾರದ ವರದಿ 2013 - 14

ಸ್ಥಳ:ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್) ಉಡುಪಿ

STF ತರಬೇತಿ ತಂಡ : 01

ಶಿಬಿರಾರ್ಥಿಗಳ ಸಂಖ್ಯೆ :25

ವರದಿ ದಿಕ್ಸೂಚಿ :ವರದಿ-1 ವರದಿ-2 ವರದಿ-3 ವರದಿ-4 ವರದಿ-5

ಮೊದಲನೇ ದಿನದ ವರದಿ : 23-12-2013 ಸೋಮವಾರ

ದಿನಾಂಕ: 23-12-2013 ರಂದು ಬೆಳಿಗ್ಗೆ 9:30ಕ್ಕೆ ಶಿಬಿರಾರ್ಥಿಗಳು ಆಗಮಿಸಿದರು. ಶ್ರೀ ಗಣೇಶ್ ಶೆಟ್ಟಿಗಾರ್ ರವರು ಆಗಮಿಸಿರುವ ಶಿಬಿರಾರ್ಥಿಗಳನ್ನು ಸ್ವಾಗತಿಸಿದರು. ಮೊದಲ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣೇಶ್ ಶೆಟ್ಟಿಗಾರ್, ಶ್ರೀ ಉಮೇಶ್ ಹಾಗೂ ಶ್ರೀ ಪ್ರದೀಪ್ ರವರು ಶಿಬಿರಾರ್ಥಿಗಳಿಗೆ ತಮ್ಮ ಇ-ಮೇಲ್ ಚೆಕ್ ಮಾಡಲು ತಿಳಿಸಿದರು. ಇ-ಮೇಲ್ ಐಡಿ ಇಲ್ಲದವರಿಗೆ ಐಡಿ creat ಮಾಡಲು ತಿಳಿಸಿದರು. ನಂತರ participation form ಭರ್ತಿ ಮಾಡಿ send ಮಾಡುವುದನ್ನು ತಿಳಿಸಿಕೊಟ್ಟರು. ನಂತರ ಗಣೇಶ್ ಶೆಟ್ಟಿಗಾರ್ ತರಬೇತಿಯ ಉದ್ದೇಶ ಮತ್ತು KOER ನ ಮಹತ್ವದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ನಂತರ ಶಿಬಿರಾರ್ಥಿಗಳಿಗೆ mind map ತಯಾರಿಸಲು 9ನೇ ತರಗತಿಯ ಪ್ರಸ್ತುತ ಪಠ್ಯಕ್ರಮದ ಅಧ್ಯಾಯಗಳನ್ನು ಹಂಚಲಾಯಿತು

ಶ್ರೀ ಉಮೇಶ್ ಹಾಗೂ ಶ್ರೀ ಪ್ರದೀಪ್ ರವರು ಶಿಬಿರಾರ್ಥಿಗಳಿಗೆ ಅವರ ಮೇಲ್ ಗಳನ್ನು ಪರೀಕ್ಷಿಸಲು ತಿಳಿಸಿದರು. ಅವಶ್ಯವಿರುವ ಮಾಹಿತಿಗಳನ್ನು save ಮಾಡುವುದು, star ಗುರುತಿನಿಂದ ಗುರುತಿಸುವುದು. ಬೇಡವಾದ ಮಾಹಿತಿಗಳನ್ನು delete ಮಾಡುವುದು ಇದನ್ನೆಲ್ಲಾ ತಿಳಿಸಿದರು. ಹಾಗೆಯೇ file attach ಮಾಡಿ ಮೇಲ್ ಕಳುಹಿಸುವುದನ್ನು ತಿಳಿಸಿದರು.

ಶ್ರೀ ಗಣೇಶ್ ಶೆಟ್ಟಿಗಾರ್ ರವರು ತಾವು ತಯಾರಿಸಿದ GeoGebra file ಗಳನ್ನು ಪ್ರಸ್ತುತ ಪಡಿಸಿದರು. ಹಾಗಯೇ ನಮಗೆಲ್ಲರಿಗೂ GeoGebra tool ಅನ್ನು recall ಮಾಡಿಕೊಟ್ಟು , ಅಭ್ಯಾಸ ಮಾಡುವಂತೆ ತಿಳಿಸಿದರು. ಹಾಗಯೇ ನಾವು ತಯಾರಿಸಿದ file ಗಳನ್ನು attach ಮಾಡಿ ಮೇಲ್ ಮಾಡಲು ತಿಳಿಸಿದರು. ಸಮಯ ಸಂಜೆ 5.30ಕ್ಕೆ ಮೊದಲ ದಿನದ ತರಬೇತಿಯು ಮುಕ್ತಾಯವಾಯಿತು.

ಎರಡನೇ ದಿನದ ವರದಿ : 26-12-2013 ಗುರುವಾರ

S.T.F. ತರಭೇತಿಯ ಎರಡನೇ ದಿನವಾದ ಇಂದಿನ ಪೂರ್ವಾಹ್ನದ ಅವಧಿಯನ್ನು 9.30ಕ್ಕೆ ಸಂಪನ್ಮೂಲ ವ್ಯಕ್ತಿಗಳಾದ ಗಣೇಶ ಶೆಟ್ಟಿಗಾರ ಇವರು ಎಲ್ಲರನ್ನೂ ಸ್ವಾಗತಿಸುವ ಮೂಲಕ ಪ್ರಾರಂಭಿಸಿದರು.ಕಂಪ್ಯೂಟರ್‌ faculty ಪ್ರದೀಪ್‌ ಸರ್‌ ಮತ್ತು ಸಂಪನ್ಮೂಲ ವ್ಯಕ್ತಿಗಳಾದ ಉಮೇಶ ಅವರ ಉಪಸ್ಥಿತಿಯಲ್ಲಿ ಪ್ರತಿ ಗುಂಪಿಗೂ ಒಂದೊಂದು ಘಟಕವನ್ನು ನೀಡಿ,ಮೈಡ್‌ ಮ್ಯಾಪ್‌ನ್ನು ರಚಿಸಲಾಯಿತು. ಪಾಠ ಬೋಧನೆಯ ಸಂದರ್ಭದಲ್ಲಿ ಬೇಕಾಗುವ web linkನ್ನು ಹಾಗೂ pictures ನ್ನು libra office ನಲ್ಲಿ paste ಮಾಡುವ ವಿಧಾನವನ್ನು ತಿಳಿದೆವು.ವೆಬ್‌ ಲಿಂಕನ್ನು openಮಾಡುವ ವಿಧಾನ ತಿಳಿದೆವು. page ನ್ನು desktop ನಲ್ಲಿ ಸೇವ್‌ ಮಾಡುವ ವಿಧಾನ ಕಲಿತೆವು.picturesನ್ನು libra officeನಲ್ಲಿ incert ಮಾಡುವ ವಿಧಾನ ತಿಳಿಸಿಕೊಡಲಾಯಿತು.Geogebra ದಲ್ಲಿ ಚತುರ್ಮುಖ ಘನ ಹಾಗೂ ಪೈಥಾಗೋರಸನ ಪ್ರಮೇಯವನ್ನು ರಚಿಸಿ, stf group ಗೆ ಮೇಲ್‌ ಮಾಡಲಾಯಿತು.Geogebratube ನ ಬಳಕೆ,ಸಂಪನ್ಮೂಲಗಳನ್ನು ಹುಡುಕುವ ಬಗೆ ಹಾಗೂ download ಮಾಡಿ save ಮಾಡುವ ವಿಧಾನವನ್ನು ತಿಳಿಸಿಕೊಡಲಾಯಿತು.

ಮೂರನೇ ದಿನದ ವರದಿ : 27-2-2013 ಶುಕ್ರವಾರ

ತರಬೇತಿಯ 3ನೇ ದಿನ ಬೆಳಗ್ಗಿನ ಮೊದಲ ಅವಧಿಯಲ್ಲಿ ಶ್ರೀ ಉಮೇಶ್ ಸರ್ KOER ಕುರಿತಾದ ಮಾಹಿತಿಯನ್ನು ಸವಿವರವಾಗಿ ನೀಡಿದರು.ಈ ಅವಧಿಯಲ್ಲಿ KOER ಎಂದರೇನು?ಅದನ್ನು ತೆರೆದು ಮಾಹಿತಿಯನ್ನು ಪಡೆಯುವ ವಿಧಾನ ಮತ್ತು ನಮ್ಮ ಕೊಡುಗೆಯನ್ನು ನೀಡುವ ವಿಧಾನವನ್ನು ಸವಿಸ್ತಾರವಾಗಿ ತಿಳಿಸಿದರು.ಇವರೊಂದಿಗೆ ಶ್ರೀ ಗಣೇಶ್ ಶೆಟ್ಟಿಗಾರ್ ಹಾಗೂ ಶ್ರೀ ಪ್ರದೀಪ್ ಈ ನಡುವೆ ಶಿಬಿರಾರ್ಥಿಗಳಿಗೆ ಸೂಕ್ತಸಲಹೆ ಸೂಚನೆಗಳನ್ನು ನೀಡುತ್ತಿದ್ದರು.ಎರಡನೇ ಅವಧಿಯಲ್ಲಿ ಶಿಬಿರ ನಿರ್ದೇಶಕರಾದ ಶ್ರೀ ಶಂಕರ ಖಾರ್ವಿಯವರು ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ,ಶಿಕ್ಷಕರಿಗೆ ಪಾಠ ಚಟುವಟಿಕೆಯಲ್ಲಿ KOER ನ ಮಹತ್ವದ ಕುರಿತು ತಿಳಿಸಿದರು.ನಂತರ ಪಾಠ ಚಟುವಟಿಕೆಯಲ್ಲಿ ಸಂಪನ್ಮೂಲಗಳ ಕ್ರೋಢೀಕರಣದ ಹಂತಗಳನ್ನು ಉಮೇಶ್ ಸರ್ ವಿವರಿಸಿದರು.

ಊಟದ ವಿರಾಮದ ನಂತರ ಮಧ್ಯಾಹ್ನದ ಅವಧಿಯಲ್ಲಿ ಶಿಬಿರಾರ್ಥಿಗಳು ತಮ್ಮ ತಂಡದಲ್ಲಿ 9 ನೇ ತರಗತಿಯ ಒಂದೊಂದು ಘಟಕದ ಘಟಕ ರೂಪುರೇಷೆಗಳನ್ನು ಸಿದ್ಧಪಡಿಸಿದರು.5.30ಕ್ಕೆ ಸರಿಯಾಗಿ ಮೂರನೇ ದಿನದ ಅವಧಿಯು ಮುಕ್ತಾಯವಾಯಿತು.

ನಾಲ್ಕನೇ ದಿನದ ವರದಿ : 28-12-2013 ಶನಿವಾರ

ನಾಲ್ಕನೇ ದಿನದ ಮೊದಲನೇ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಗಣೇಶಶೆಟ್ಟಿಗಾರರವರು ಜಿಯೊಜಿಬ್ರಾದಲ್ಲಿ ಕೋನಗಳ ವಿಧಗಳನ್ನು ಯಾವ ರೀತಿಯಲ್ಲಿ ತರಗತಿಯಲ್ಲಿ ಪ್ರಸ್ತುತ ಪಡಿಸುವದೆಂದು ಉದಾಹರಣೆಯೊಂದಿಗೆ ವಿವರಿಸಿದರು.

ಚಹಾದ ವಿರಾಮದ ನಂತರ ಶ್ರೀ ಪ್ರದೀಪರವರು ಇಂಟರನೆಟ್ ಮೂಲಕ ವಿಡಿಯೊವನ್ನು modify ಮಾಡಿ ನಮ್ಮದೇ ಆದ video ಹಾಗೂ audio ಸೇರಿಸುವುದನ್ನು ತಿಳಿಸಿದರು. Sound and video ದಿಂದ Kdenline ನಲ್ಲಿ video ತಂದು video and audio ಭಾಗಗಳನ್ನು ಬೇರ್ಪಡಿಸಿ ವಿಭಿನ್ನ ಟೂಲ್ಗಳ ಮೂಲಕ edit ಮಾಡುವ ವಿಧಾನ ತಿಳಿಸಿದರು.ಬಳಿಕ ಅವರು stellarium ಬಳಸಿ ಗ್ರಹಗಳ ಮಾಹಿತಿ ನೋಡುವುದನ್ನು ತಿಳಿಸಿದರು.

ಮಧ್ಯಾಹ್ನದ ಮೊದಲ ಆವಧಿಯಲ್ಲಿ formula ವನ್ನು geogebra ದಲ್ಲಿ ಯಾವ ರೀತಿ ಬಳಸುವುದು ಎಂಬುದನ್ನು 3 ಚಟುವಟಿಕೆಗಳ ಮೂಲಕ ವಿಸ್ತಾರವಾಗಿ ತಿಳಿಸಿಕೊಟ್ಟರು.

ನಂತರದ ಅವಧಿಯಲ್ಲಿ ಶ್ರೀ ಗಣೇಶ ಶೆಟ್ಟಿಗಾರರವರು CCE records ಅನ್ನು micro soft excel software ಬಳಸಿ ಸರಳವಾಗಿ ನಿಭಾಯಿಸುವುದನ್ನು ತಿಳಿಸಿಕೊಟ್ಟರು.

ಐದನೇ ದಿನದ ವರದಿ : 29-12-2013 ಭಾನುವಾರ

ದಿನಾಂಕ :29-12-2013 ರಂದು 5ನೇ ದಿನದ ತರಬೇತಿಯು ನಡೆಯಿತು. ಪೂರ್ವಾಹ್ನದ ಅವಧಿಯಲ್ಲಿ DIETನ ಉಪ ಪ್ರಾಂಶುಪಾಲರು ಹಾಗೂ ತರಬೇತಿಯ ಮಾರ್ಗದರ್ಶಕರಾದ ಶ್ರೀಯುತ ಶಂಕರ್ ಖಾರ್ವಿ ಯವರನ್ನು ವಿಷಯ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಗಣೇಶ್ ಶೆಟ್ಟಿಗಾರ್ ರವರು ಸ್ವಾಗತಿಸಿದರು.

ಪೂರ್ವಾಹ್ನದ ಮೊದಲ ಅವಧಿಯಲ್ಲಿ ಶ್ರೀಯುತ ಶಂಕರ್ ಖಾರ್ವಿ ಯವರು CCE ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಎಂದರೇನು ? ಏಕೆ ? ಎಂಬುದನ್ನು ಶಿಬಿರಾರ್ಥಿಗಳ ಜೊತೆ ಚರ್ಚಿಸಿ ವಿಷಯ ಮಂಡನೆ ಮಾಡಿದರು. ಶಿಕ್ಷಕರು ತರಗತಿ ಬೋಧನೆಗೆ ಮೊದಲು ಉದ್ದೇಶಗಳ ಬಗ್ಗೆ ಪರಿಣತಿ ಹೊಂದಿರಬೇಕು, ಈ ಉದ್ದೇಶಗಳು ವಿದ್ಯಾರ್ಥಿಗಳಲ್ಲಿ ಎಷ್ಟರ ಮಟ್ಟಿಗೆ ಬದಲಾವಣೆ ತಂದಿರುತ್ತದೆ ಎಂಬುದನ್ನು ತಿಳಿಯಲು ಈ ಮೌಲ್ಯಮಾಪನ ವಿಧಾನವು ಸಹಕಾರಿಯಾಗಿದೆ ಎಂಬುದನ್ನು ಮನದಟ್ಟು ಮಾಡಿದರು.” Education is not learning ;Education is exercise and development of mind.”- Princeton Review. ಹಾಗೂ ನಮ್ಮ ಸಂವಿಧಾನದ ಧ್ಯೇಯ ವಾಕ್ಯಗಳನ್ನು ಉದಾಹರಿಸುತ್ತಾ PPT ಮೂಲಕ ವಿವರಣಾತ್ಮಕ ಉಪನ್ಯಾಸ ನೀಡಿದರು.

ನಂತರದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಉಮೇಶ್ ರವರು Photo upload ಮಾಡಿ email ಮೂಲಕ ಕಳುಹಿಸುವ ಬಗ್ಗೆ ಹಾಗೂ ಶ್ರೀ ಗಣೇಶ್ ಶೆಟ್ಟಿಗಾರ್ ರವರು Hyperlink ನೀಡುವುದರ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಶಿಬಿರಾರ್ಥಿಗಳೆಲ್ಲರೂ ಲವಲವಿಕೆಯಿಂದ ಚಟುವಟಿಕೆಯಲ್ಲಿ ತೊಡಗಿಕೊಂಡರು.

ಅಪರಾಹ್ನದ ಅವಧಿಯಲ್ಲಿ ಶ್ರೀ ಗಣೇಶ್ ಶೆಟ್ಟಿಗಾರ್ ರವರು Document ನಲ್ಲಿ Video upload ಮಾಡುವ ವಿಧಾನವನ್ನು ವಿವರಿಸಿದರು.ಶಿಬಿರಾರ್ಥಿಗಳ ಗುಂಪು ಛಾಯಾಚಿತ್ರವನ್ನು ತೆಗೆದ ನಂತರ ಸಮಾರೋಪ ಸಮಾರಂಭ ವನ್ನು ಏರ್ಪಡಿಸಲಾಯಿತು. ಅಧ್ಯಕ್ಷತೆಯನ್ನು DIETನ ಉಪ ಪ್ರಾಂಶುಪಾಲರು ಹಾಗೂ ತರಬೇತಿಯ ಮಾರ್ಗದರ್ಶಕರಾದ ಶ್ರೀಯುತ ಶಂಕರ್ ಖಾರ್ವಿ ಯವರು ವಹಿಸಿದರು. ಶಿಬಿರಾರ್ಥಿಗಳು ತಮ್ಮ ತೃಪ್ತಿಕರ ಅನಿಸಿಕೆ ವ್ಯಕ್ತಪಡಿಸುವುದರೊಂದಿಗೆ ತರಬೇತಿ ಕಾರ್ಯಾಗಾರವು ಯಶಸ್ವಿ ಯಾಗಿ ಮುಕ್ತಾಯವಾಯಿತು.

Science

              • SCIENCE STF ....1 st BATCH TRAINING-2013*******

“ ಡಿಸೆಂಬರ್ ತಿಂಗಳಲ್ಲಿ ಈ ಟ್ರೈನಿಂಗ್ ಗಳು ಯಾಕಾದ್ರೂ ಬರು ತ್ವಪ್ಪಾ .......... ? ಇದರಿಂದ ಏನಾದ್ರೂ ಉಪಯೋಗ ಉಂಟಾ ....?.....ಎಂಬ ಗೊಣಗಾಟದೊಂದಿಗೆ ಉಡು ಪಿ ಡಯಟ್ ನಲ್ಲಿ ಆರಂಭವಾದ 5 ದಿನಗಳ ವಿಜ್ಞಾನ ಶಿಕ್ಷಕರ STF ತರಬೇತಿಯ ಇಣು ಕು ನೋಟ ಹಾಗೂ ಅನಿಸಿಕೆಗಳು ......... ,

ಎಸ್ ಟಿ ಎಫ್ ತರಬೇತಿಯು ದಿನಾಂಕ: 09-12-13 ರಿಂದ 14-12-13 ೩ರ ವರೆಗೆ ನಡೆಯಿತು. 5 ದಿನಗಳ ತರಬೇತಿಯ ಮಧ್ಯದಲ್ಲಿ 11-12-13 ರಂ ದು ಮೈಸೂರಿನ ಅರಸು ಮನೆತನದ ಕೊನೆಯ ಕೊಂಡಿಯಾದ ಶ್ರೀ ಶ್ರೀಕಂಠದತದತ್ತ ಒಡೆಯರ್ ರವರು ದೈವಾಧೀನರಾದ್ದರಿಂದ ಒಂದು ದಿನದ ರಜೆಯ ನಿಮಿತ್ತ ಆರು ದಿನಗಳ ಸಮಯ ಹಿಡಿಯಿತು.

ಆರಂಭದ ಕ್ಷಣ

.......... ಮೊದಲ ದಿನ ದಿನಾಂಕ 09-12-13 ರಂದು ನೋಡಲ್ ಅಧಿಕಾರಿಯಾದ ಶ್ರೀ ಶಂಕರ್ ಖಾರ್ವಿಯವರು ಶಿಬಿರಾರ್ಥಿಗಳನ್ನು ಸ್ವಾಗತಿಸಿದ ನಂತರ ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಸನ್ನಕುಮಾರ್ ಶೆಟ್ಟಿ, ಶ್ರೀ ಗುರುಪ್ರಸಾದ್, ಶ್ರೀ ಗಿರೀಶ್ ಹಾಗೂ ತಾಂತ್ರಿಕ ಸಹಾಯಕರಾದ ಶ್ರೀ ಪ್ರದೀಪ್ ಶೆಟ್ಟಿಯವರ ಸಹಯೋಗದೊಂದಿಗೆ ತರಬೇತಿಯು ಆರಂಭಗೊಂಡಿತು.

ಮೊದಲ ದಿನ

........ ದಂದು koer karnatakaeducation.org.com ಗೆ ಹೋಗಿ ಜಿಲ್ಲಾ ತರಬೇತಿಯ agenda ನೋಡಿ ಶಿಬಿರಾರ್ಥಿಗಳ ಮೊದಲ ದಿನದ participants form ನ್ನು ತುಂಬಿದೆವು . ಪ್ರತಿಯೊಬ್ಬರು ತಮ್ಮ email-id ಗಳನ್ನು ವೀಕ್ಷಿಸಿದರು ,ಇಲ್ಲದವರು ಹೊಸ email-id ಯನ್ನು ರಚಿಸಿದರು . ಚಹಾ ವಿರಾಮದ ನಂತರ ಯುಟ್ಯೂಬ್ ನಿಂದ ವಿಡಿಯೋಗಳನ್ನು ಡೌನ್ ಲೋಡ್ ಮಾಡಲು ಕಲಿತೆವು . ಪಠ್ಯಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡೆವು . ಅಪರಾಹ್ನ ಮೈಂಡ್ ಮ್ಯಾಪ್ ಮಾಡಲು ಅಗತ್ಯವಾದ ೯ನೇ ತರಗತಿಯ ಘಟಕವನ್ನು ಆಯ್ಕೆ ಮಾಡಿ ವಿಡಿಯೋ ಅಥವಾ ಇಮೇಜಿನಿಂದ ನಕ್ಷೆಗೆ ಹೈಪರ್ಲಿಂಕ್ ಮಾಡುವುದನ್ನು ಅರಿತೆವು .

ಎರಡನೇ ದಿನ

......ದ ತರಬೇತಿಯನ್ನು Free mind tool ಬಳಸಿ ತಾವು ಆಯ್ಕೆ ಮಾಡಿದ topic ಗೆ mind map ರಚಿಸಿ ,ವಿವಿಧ ಪರಿಕಲ್ಪನಾ ನಕ್ಷೆಯನ್ನು ರಚಿಸಿ ಅವುಗಳಿಗೆ hyperlink ಮಾಡಿದನ್ನು ಕಲಿತೆವು . ಅಪರಾಹ್ನದ ವೇಳೆಯಲ್ಲಿ ವಿವಿಧ ಛಾಯಾಚಿತ್ರಗಳನ್ನು GIMP image editor Tool ಬಳಸಿ ,ಅದರ ಗಾತ್ರ, ಅಳತೆ ಯನ್ನು ಮತ್ತು crop ಮಾಡುವ ವಿಧಾನಗಳನ್ನು ತಿಳಿದು ಅದರ ಉಪಯೋಗಗಳ ಕುರಿತು ಚರ್ಚಿಸಲಾಯಿತು .

ಮೂರನೇ ದಿನ

KOER website ನ್ನು ತೆರದು ಅಲ್ಲಿರುವ ವಿಷಯಗಳ ಜೋಡಣಾ ವಿಧಾನಕ್ಕೆ ಅನುಗುಣವಾಗಿ ,ಹಿಂದಿನ ದಿನ ರಚಿಸಿದ ಪರಿಕಲ್ಪನೆ ನಕ್ಷೆಗಳಿಗೆ ಅನುಗುಣವಾಗಿ ಶಿಕ್ಷಕರ ಟಿಪ್ಪಣಿ, ಅಗತ್ಯವಾದ ಚಟುವಟಿಕೆಗಳು, ಯೋಜನೆಗಳು, ಇತ್ಯಾದಿಗಳನ್ನು ಸಮರ್ಪಕವಾಗಿ ನಮ್ಮಿಂದ ಮಾಡಿಸಲಾಯಿತು . ಅಪರಾಹ್ನ ಪ್ರತಿಯೊಂದು ಗುಂಪಿನವರು ತಾವು ಮಾಡಿದ ಸಂಪನ್ಮೂಲದ ಪಟ್ಟಿಯನ್ನು ಪ್ರೊಜೆಕ್ಟ ಮೂಲಕ ಪ್ರದರ್ಶಿಸಿ ಪರಸ್ಪರ ಚರ್ಚಿಸಿದೆವು .

ನಾಲ್ಕನೇ ದಿನ

......ದಂದು Open Shot Video Editor Tool ಬಳಸಿ ಸಂಪನ್ಮೂಲ ವಿಡಿಯೋವನ್ನು ಮೊಡಿಫೈ ಮಾಡಿ ನಮ್ಮದೇ ಆದ video ಹಾಗೂ audio ಸೇರಿಸುವುದನ್ನು ಕಲಿತೆವು . sound & videoದ Kdenlive ನಲ್ಲಿ ವಿಡಿಯೋ ತಂದು, ವಿಡಿಯೋ ಮತ್ತು ಆಡಿಯೋ ಭಾಗಗಳನ್ನು ಬೇರ್ಪಡಿಸಿ, ವಿಭಿನ್ನ ಟೂಲ್ ಗಳ ಮೂಲಕ ಎಡಿಟ್ ಮಾಡಿದೆವು. ಅಪರಾಹ್ನ ಶ್ರೀ ಶಂಕರ್ ಖಾರ್ವಿಯವರು CCE ಯ ಕುರಿತು power point presentation ಮಾಡಿ, CCE ವಿಧಾನವನ್ನು ಶಾಲೆಗಳಲ್ಲಿ ಅನುಷ್ಟಾನಗೊಳಸಿರುವ ಶಿಕ್ಷಕರಿಂದ ಹಿಮ್ಮಾಹಿತಿ , ಅನುಭವಗಳನ್ನು ಪಡೆದು ಸಮಸ್ಯೆ ಹಾಗೂ ಸಂಶಯಗಳನ್ನು ಪರಿಹರಿಸಿದರು .

ಐದನೇ ದಿನ

...... ದಲ್ಲಿ ಸಂಪನ್ಮೂಲದ ತಾಳೆಪಟ್ಟಿಗೆ header ಮತ್ತು footer ಉಪಯೋಗಿಸಿ ಸಂಪನ್ಮೂಲ ವಿಷಯ, ರಚಿಸಿದವರ ಹೆಸರು ಹಾಗೂ ಪುಟ ಸಂಖ್ಯೆಯನ್ನು ಹಾಕಿದೆವು. ನಂತರ ತಾಳೆಪಟ್ಟಿಗೆ format ನ್ನು ಉಪಯೋಗಿಸಿ heading ಮತ್ತು numbering ಮಾಡಿ ಒಂದು ಅರ್ಥಪೂರ್ಣ ಪರಿವಿಡಿ ರಚಿತವಾಯಿತು. ಈ ಕಲಿಕೆಯಿಂದ ನಮಗೆ ಶಾಲೆಯಲ್ಲಿ ಪ್ರಶ್ನೆ ಪತ್ರಿಕೆ ರಚನೆಗೆ ಸಹಾಯವಾಗುತ್ತದೆ. ಅಪರಾಹ್ನ Picasa tool ಬಳಸಿ ಛಾಯಾಚಿತ್ರಗಳನ್ನು upload ಮಾಡುವ ವಿಧಾನ ಮತ್ತು ಅದರ link ನ್ನು email-id ಗೆ copy - paste ಮಾಡಿ ಇತರರೊಂದಿಗೆ ಹಂಚಿಕೊಳ್ಳುವ ವಿಧಾನವನ್ನು ಪ್ರಸನ್ನಕುಮಾರ್ ಶೆಟ್ಟಿ,ಯವರು ತಿಳಿಸಿದರು .
ನಂತರ video ಗಳನ್ನು youtube ಗೆ upload ಮಾಡುವ ವಿಧಾನವನ್ನು ಗುರುಪ್ರಸಾದ್ ರವರು ತಾವು ರಚಿಸಿದ THE SUN video ವನ್ನು youtube ಗೆ upload ಮಾಡಿ ಅದರ link ನ್ನು email-id ಗೆ copy - paste ಮಾಡಿ ಇತರರೊಂದಿಗೆ ಹಂಚಿಕೊಳ್ಳುವ ವಿಧಾನವನ್ನು ತಿಳಿಸಿದರು .ನಂತರ ತರಬೇತಿ ತಂಡದ` group photo ತೆಗೆದು ಸಮಾರೋಪದೊಂದಿಗೆ ತರಬೇತಿಯನ್ನು ಮುಗಿಸಲಾಯಿತು.........

        • ಸು ಚೇತಾ, ವೀಣಾ ಮತ್ತು ಪ್ರತಿಮಾ****

The STF training for science teacher of udupi district was really amazing. Yes! It made us to look the teaching learning process in a different perspective. In the training we came to know about many subjects like openshot video, zimp editor,hyperlinking the documents,linking photos and videos etc, which improved our knowledge &skills.The most amazing thing we have learnt is the openshot video technique,with this we can edit the video &add our own voice to that.This will made our teaching very effective and easy.So we need not have to worry about the completion of syllabus.one more thing we learnt is the zimp editor,using this we can shape the pictures as we wish.It will help us in many cases.So we can say that the things we learnt in the training will definitely strengthen our teaching if we use it in the classroom.Overall the training was very informative.Thanks for the training.we expect manymore trainings like this in future days.

        • Nalini Bhat & Prema****

ಸಂಪನ್ಮೂಲ ವ್ಯಕ್ತಿಗಳ ಪರವಾಗಿ ಕಿರು ಅನಿಸಿಕೆ .....

.....ಬೈಂದೂರು ,ಬ್ರಹ್ಮಾವರ, ಉಡುಪಿ ವಲಯಗಳ ICT Phase-II ಶಾಲೆಗಳ ಒಟ್ಟು ೩೦ STF ವಿಜ್ಞಾನ ಶಿಕ್ಷಕರು ಈ ಸಾಲಿನ ಮೊದಲ ಬ್ಯಾಚ್ ನ ೫ ದಿನಗಳ ತರಬೇತಿಯನ್ನು ಉಡುಪಿ ಜಿಲ್ಲೆಯ DIET ಸಂಸ್ಥೆಯ ಸುಸಜ್ಜಿತ computer lab ನಲ್ಲಿ ಪಡೆದರು . ಈ ತರಬೇತಿಯು DIET ಸಂಸ್ಥೆಯ ಉಪಪ್ರಾಂಶುಪಾಲರು ಹಾಗೂ STF ಜಿಲ್ಲಾ ನೋಡಲ್ ಅಧಿಕಾರಿಗಳಾದ ಶ್ರೀ ಶಂಕರ್ ಖಾರ್ವಿ ಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮೂಡಿ ಬಂದಿತು.

  • ಕಳೆದ ಸಾಲಿನ ತರಬೇತಿಗೆ ಹೋಲಿಸಿದರೆ , ಈ ಸಾಲಿನ ತರಬೇತಿಗೆ ಬಂದ ಅದೇ ಶಿಕ್ಷಕರ computer aided science teaching ಕುರಿತಾದ ಮನೋಭಾವನೆಯು ಧನಾತ್ಮಕವಾಗಿರುವುದು ಗಮನಾರ್ಹ . ಶಾಲಾ computer ಗಳ ಸ್ಥಿತಿ ಅಯೋಮಯವಾಗಿದ್ದರೂ , ಅದನ್ನು ಬದಿಗಿಟ್ಟು ತಮ್ಮದೇ ಆದ LAPTOP ಖರೀದಿಸಿ , OBUNTU instal ಮಾಡಿ ವಿವಿಧ Tool ಗಳನ್ನು ಬಳಸುವ ಆಸಕ್ತಿ ತೋರುತ್ತಿರುವುದು ಕಂಡುಬಂದಿದೆ.
  • ಇಡೀ ೫ ದಿನಗಳ ತರಬೇತಿಯ agenda ದ ಪ್ರತೀ ಅಂಶಗಳ ಕಲಿಕೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ರೀತಿ , ನಾವು ರಾಜ್ಯ ಮಟ್ಟದಲ್ಲಿ ಪಡೆದ ತರಬೇತಿ ಹಾಗೂ ನಮ್ಮ ಸಂಪನ್ಮೂಲ ಕಡಿಮೆಯೇ ಅನಿಸುತಿತ್ತು . ಅಷ್ಟರ ಮಟ್ಟಿಗೆ ನಮ್ಮ ಸಂಪನ್ಮೂಲ ಶಿಕ್ಷಕರ ತಂಡವನ್ನು ತರಬೇತಿ ಶಿಕ್ಷಕರು ಬಳಸಿಕೊಂಡರು .
  • ತರಬೇತಿಯ ಅವಧಿಯಲ್ಲಿ ಅನೇಕ ಶಿಕ್ಷಕರು ಹೊಸ LAPTOP ಖರೀದಿಸಿ ತಂದದ್ದು, ಈಗಾಗಲೇ ತಮ್ಮಲ್ಲಿರುವ LAPTOP ಗಳಿಗೆ OBUNTU instal ಮಾಡಲು ಹಾತೊರೆಯುತಿದ್ದ ರೀತಿ ನೋಡುತಿದ್ದರೆ ..... OBUNTU ಬಗ್ಗೆ ಮೂಗು ಮುರಿಯುವ ಈ ಹಿಂದಿನ ಭಾವನೆ ತೊಲಗಿ , ಅದು teacher's friendly software ಆಗುತ್ತಿರುವುದು ಸಂತಸ ತಂದಿದೆ . ಶಿಕ್ಷಕರು ತಂದ ಎಲ್ಲಾ LAPTOP ಗಳಿಗೆ OBUNTU instalation ಮಾಡಿದ ಪ್ರಸನ್ನಕುಮಾರ್ ಶೆಟ್ಟಿ, ಹಾಗೂ ಪ್ರದೀಪ್ ಶೆಟ್ಟಿ ಕಾರ್ಯ ಶ್ಲಾಘನೀಯ .
  • ಕೊನೆಯ ದಿನದ ಸಮಾರೋಪದ .......ತರಬೇತಿ ಶಿಕ್ಷಕರ ಅನಿಸಿಕೆಯಲ್ಲಿ , ಸ.ಪ್ರೌ ಶಾಲೆಯ ಶಿಕ್ಷಕ ಸದಾನಂದ ಶೆಟ್ಟಿ ಯವರು ಮಾರ್ಮಿಕವಾಗಿ ಶಿಕ್ಷಕರಿಗೆ computer aided science teaching ನ ಇಂದಿನ ಅಗತ್ಯ ಹಾಗೂ ಇತರ ಹೊಸ ಶಿಕ್ಷಕರಿಗೂ ಈ ತರಬೇತಿಯ ವಿಸ್ತರಣೆಯ ಬೇಡಿಕೆಯನ್ನು ಮಂಡಿಸಿದರು .
  • ಶಿಕ್ಷಕರ ಬೇಡಿಕೆಗೆ ಅನುಗುಣವಾಗಿ ಸ್ವಂತ computer ಖರೀದಿಗೆ ಇರುವ ಇಲಾಖಾ ಸುತ್ತೋಲೆಯ ಪ್ರತಿಯನ್ನು ಸಂಗ್ರಹಿಸಿ ಸಮಾರೋಪದಂದು ಶಿಕ್ಷಕರಿಗೆ ನೀಡಿದ ಶ್ರೀ ಶಂಕರ್ ಖಾರ್ವಿಯವರ ಕಾಳಜಿಯನ್ನು ಪ್ರಂಶಸಿಸಲೇಬೇಕು.MRP ಯಾಗಿ ಭಾಗವಹಿಸಿದ್ದ ನಾನು , ನನಗೆ ಸಮರ್ಪಕವಾಗಿ ತಿಳಿದಿರದ ವಿಚಾರಗಳನ್ನು ಇತರ MRP ಶಿಕ್ಷಕ ರುಗಳಾದ ಗಿರೀಶ್ ಕುಮಾರ್ , ಪ್ರಸನ್ನಕುಮಾರ್ ಶೆಟ್ಟಿ, ಹಾಗೂ ಪ್ರದೀಪ್ ರವರಿಂದ ತಿಳಿಯಲು ಸಹಕಾರಿಯಾಯಿತು .
        • ಗು ರು ಪ್ರಸಾದ್ ಹೆಚ್,MRP

Video of the training


video creation:GURUPRASAD H (MRP)

STF 2nd BATCH TRAINING -2013

ಮೊದಲನೇ ದಿನದ ವರದಿ...

ದಿನಾಂಕ 30/12/13 ರ STF ವಿಜ್ಞಾನ ತರಬೇತಿ ಕಾರ್ಯಾಗಾರದ ವರದಿ. ದಿನಾಂಕ 30/12/13 ರ STF ವಿಜ್ಞಾನ ತರಬೇತಿ ಕಾರ್ಯಾಗಾರವು ೯.೪೫ಕ್ಕೆ ಸರಿಯಾಗಿ ಡಯಟ್ ಉಡುಪಿ ಇಲ್ಲಿ ಆರಂಭವಾಯಿತು.ತರಬೇತಿ ಕಾರ್ಯಾಗಾರವನ್ನು ಇದರ ನೋಡಲ್ ಅಧಿಕಾರಿಯವರಾದ ಶ್ರೀ ಶಂಕರ್ ಖಾರ್ವಿ ಇವರು ಉದ್ಘಾಟಿಸಿದರು. ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತರಬೇತಿಯ ಉದ್ದೇಶ ,ಶಿಕ್ಷಕರು ತಮ್ಮ ತರಗತಿಗಳಲ್ಲಿ ಪರಿಣಾಮಕಾರಿಯಾಗಿ KOER ನ್ನು ಹೇಗೆ ಬಳಸಿಕೊಳ್ಳ ಬಹುದು.,ಈ ತರಬೇತಿಯು ಯಾವ ಎಲ್ಲಾ ವಿಷಯಗಳನ್ನು ಒಳಗೊಂಡಿರುತ್ತದೆ,ಎಂಬುದನ್ನು ವಿವರವಾಗಿ ತಿಳಿಸಿದರು.ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಿರೀಶ್ ಹಾಗೂ ಶ್ರೀ ಗುರುಪ್ರಸಾದ್ ಇವರು ಶಿಬಿರಾರ್ಥಿ ಶಿಕ್ಷಕರಿಗೆ Internet open ಮಾಡುವ ವಿಧಾನ ನಂತರ KOER ನ ವೆಬ್ ಲೋಗ್ ಆನ್ ಮಾಡಿ ತರಬೇತಿ ಸಂಪನ್ಮೂಲ Formate ನ್ನು ತುಂಬುವ ಮೂಲಕ ಶಿಬಿರಕ್ಕೆ ತಮ್ಮ ಹಾಜರಾತಿಯನ್ನು ದಾಖಲಿಸಿಕೊಂಡರು. ಇದರ ಜೊತೆಗೆ TA ಬಿಲ್ಲನ್ನು ತುಂಬಲು ಸೂಚಿಸಿದರು. ನಂತರ ಈ ಮೇಲ್ ನ್ನು open ಮಾಡುವುದು, compose ಮಾಡುವುದು. ಶಿಬಿರಾರ್ಥಿಗಳು ಪರಸ್ಪರ ಈ ಮೇಲಗ ಗಳನ್ನು ಕಳುಹಿಸಿ ಕೊಡುವ ವಿಷಯವನ್ನು ತಿಳಿಸಿ ಕೊಟ್ಟರು. ಊಟದ ವಿರಾಮದ ನ೦ ತರ ಅಂತರ್ಜಾಲವನ್ನು ಬಳಸುವ ರೀತಿ ತಿಳಿಸಿ ಕೊಟ್ಟರು. ಅಂತರ್ಜಾಲದಿಂದ ಪಾಠಕ್ಕೆ ಬೇಕಾದ ಫೋಟೋ ವೀಡಿಯೋಗಳನ್ನು ನಕಲು ಮಾಡುವ ವಿಧಾನವನ್ನು ಶ್ರೀ ಗುರುಪ್ರಸಾದ್ ಇವರು ತಿಳಿಸಿ ಕೊಟ್ಟರು ಈ ಹಂತದಲ್ಲಿ ಶಿಬಿರಾರ್ಥಿಗಳನ್ನು ವಿವಿಧ ಗುಂಪುಗಳಾಗಿ ಮಾಡಿ ಪಾಠದ ವಿಷಯಗಳನ್ನು ಹಂಚಿಕೊಟ್ಟರು.ಪಾಠಕ್ಕೆ ತಕ್ಕಂತೆ ಫೂಟೋ copy ಮಾಡುವ ಹಾಗೂ mind map(ಪರಿಕಲ್ಪನಾ ನಕ್ಷೆ )ಮಾಡುವ ರೀತಿಯನ್ನು ಕಲಿತೆವು. ಚಹಾ ವಿರಾಮದ ನಂತರ ಮೂರು ಪರಿಕಲ್ಪನಾ ನಕ್ಷೆ ತಯಾರಿಸ ಬೇಕೆಂದು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಿರೀಶ್ ಹಾಗೂ ಶ್ರೀ ಗುರುಪ್ರಸಾದ್ ಇವರು ತಿಳಿಸಿದ್ದರು. ಅಂತೆಯೇ ಶಿಕ್ಷಕರು ಮೂರು ಪರಿಕಲ್ಪನಾ ನಕ್ಷೆ ತಯಾರಿಸಿ ತಮ್ಮ folder ರಲ್ಲಿ ಸೇವ್ ಮಾಡಿ 5.30pm ಗೆ 30/12/13 ರ ತರಬೇತಿ ಮುಗಿಸಿದೆವು.

            • ವರದಿ :- ಶ್ರೀಮತಿ ಇ , ಸಹ ಶಿಕ್ಷಕಿ ಸರಕಾರಿ ಪ್ರೌಢ ಶಾಲೆ ಹೊಸ್ಮಾರು, ಕಾರ್ಕಳ ತಾಲೂಕು.

ಎರಡನೇ ದಿನದ ವರದಿ

ದಿನಾಂಕ:31/12/2013 ರಂದು ಬೆಳಿಗ್ಗೆ 9.45 ಕ್ಕೆ ಎರಡನೇ ದಿನದ ತರಬೇತಿಗೆ MRP ಯವರಾದ ಶ್ರೀಯುತ ಪ್ರಸನ್ನಕುಮಾರ್ ಶೆಟ್ಟಿಯವರು ಎಲ್ಲರನ್ನು ಸ್ವಾಗತಿಸಿದರು.ನಂತರ ಎಲ್ಲ ಶಿಕ್ಷಕರೂ mail chek ಮಾಡಿ ,stf udupi group ಗೆ ಮೊದಲ ದಿನದ ವರದಿ mail ಮಾಡಿದರು. ತದನಂತರ MRP ಯವರಾದ ಗುರುಪ್ರಸಾದ್ ರವರು koer ವೆಬ್ ಸೈಟ್ ನಲ್ಲಿ ಸಿದ್ಧಪಡಿಸಲಾಗಿರುವ ವಿಜ್ಞಾನದ ಪಾಠಗಳನ್ನು ಮಾದರಿಯಾಗಿರಿಸಿಕೊಂಡು ಅದರ ಹಾಗೆಯೇ ನಮ್ಮ ನಮ್ಮ TOPIC ಸಿದ್ಧಪಡಿಸಲು ತಿಳಿಸಿದರು. ನಂತರ ಪ್ರದೀಪ್ ಸರ್ ರವರು mindmap ನ್ನು ಆಕರ್ಷಕವಾಗಿ ಮಾಡಲು ಕೆಲವು ತಂತ್ರಗಳನ್ನು ತಿಳಿಸಿದರು.. ತದನಂತರ ನಾವು mindmap ಆಕರ್ಷಣೀಯವಾಗಿ ಸಿದ್ದಪಡಿಸಿದೆವು. ನಂತರ ಎಲ್ಲ ಶಿಕ್ಷಕರೂ ಮಾದರಿ ಪಾಠಗಳನ್ನು ಸಿದ್ಧಪಡಿಸಿದೆವು .ಅದನ್ನು ನಂತರ ಎಲ್ಲರಿಗೂ present ಮಾಡಲಾಯಿತು. ಚಹಾ ವಿರಾಮದ ನಂತರ GIMP photo editor ನಲ್ಲಿ ಫೋಟೋಗಳನ್ನು edit ಮಾಡುವುದನ್ನು ಗುರುಪ್ರಸಾದ್ ಸರ್ ಮತ್ತು ಪ್ರಸನ್ನ ಕುಮಾರ್ ಸರ್ ತಿಳಿಸಿ ,ಅದರ ಉಪಯುಕ್ತತೆಯ ಬಗ್ಗೆ ನಮ್ಮೊಂದಿಗೆ ಚರ್ಚಿಸಿದರು .ನಂತರ ನಾವು ವಿವಿಧ ಫೋಟೋಗಳನ್ನು edit ಮಾಡಿದೆವು.ನಂತರ ಎರಡನೇ ದಿನದ ವರದಿ ತಯಾರಿಸಿ ತೆರಳಿದೆವು.

            • ಪ್ರತಿಭಾ ಅಡಿಗ ,ಸ.ಪ್ರೌ.ಶಾಲೆ , ಕಾಳಾವರ ,ಕುಂದಾಪುರ ತಾ ||

ಮೂರನೇ ದಿನದ ವರದಿ

ಹೊಸ ವರ್ಷಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಾ 1/1/2014ರಂದು ೯.೪೫ಕ್ಕೆ ಸರಿಯಾಗಿ ಡಯಟ್ ನ ಉಪನ್ಯಾಸಕರಾದ ಶ್ರೀ ರಂಗಧಾಮಪ್ಪ ಇವರು ಪಾಠವನ್ನು ಹೇಗೆ ಪರಿಣಾಮಕಾರಿಯಾಗಿ ಮಾಡಬಹುದು ಎಂಬುದರ ಕುರಿತು ಸವಿವರವಾಗಿ ತಿಳಿಸಿದರು. .ಅನಂತರ ಸರಕಾರಿ ಪ್ರೌಢಶಾಲೆ,ಕಾಳಾವರದ ಶಿಕ್ಷಕಿಯಾದ ಶ್ರೀಮತಿ ಪ್ರತಿಭಾ ರವರು ಎರಡನೇ ದಿನದ ವರದಿ ವಾಚಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗುರುಪ್ರಸಾದ್ ರವರು Koer website ನಲ್ಲಿ ವಿವಿಧ ವಿಷಯಗಳನ್ನು ಒಪನ್ ಮಾಡಿ ಒಂದೊಂದಾಗಿ ನೋಡಲು ತಿಳಿಸಿದರು.ಮತ್ತು Libra office writerನಲ್ಲಿ hyperlink ಬಳಸಿ ವಿಷಯಗಳಿಗೆ ಚಿತ್ರ ,ವಿಡಿಯೋ ಹಾಕುವ ತಂತ್ರವನ್ನು ತಿಳಿಸಿಕೊಟ್ಟರು.. ಚಹಾ ವಿರಾಮದ ನಂತರ ಘಂಟೆ ೧೨ ಕ್ಕೆ ಶ್ರೀ ರಂಗಧಾಮಪ್ಪರವರು ನಿರಂತರ ವ್ಯಾಪಕ ಮೌಲ್ಯಮಾಪನ ಎಂದರೇನು ?,ಅದನ್ನು ಶಾಲೆಯಲ್ಲಿ ಹೇಗೆ ಅಳವಡಿಸುವುದು ,ವಿವಿಧ ಉದಾಹರಣೆಗಳು,ಚಟುವಟಿಕೆಗಳ ಮೂಲಕ ಅರ್ಥಪೂ ರ್ಣವಾಗಿ CCE ಬಗ್ಗೆ ವಿವರಣೆ ನೀಡಿದರು.. ಊಟದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗುರುಪ್ರಸಾದ್ ಮತ್ತು ಗಿರೀಶ್ ರವರು open shot video editer ತಂತ್ರದ ಮೂಲಕ ವಿಡಿಯೋಗಳಿಗೆ ನಮ್ಮದೇ ಧ್ವನಿಯನ್ನು ಅಳವಡಿಸಿಕೊಳ್ಳುವುದು ಮತ್ತು ಬೇರೆ ಬೇರೆ TOOL ಗಳನ್ನು install ಮಾಡು ವುದು ಮತ್ತು ವಿಡಿಯೋ download ಮಾಡುವುದು ಮತ್ತು easy youtube video downloader installಮಾಡು ವುದರ ಬಗ್ಗೆ ವಿವರಣೆ ನೀಡಿದರು. ನಂತರ sound recording ಮಾಡುವ ತಂತ್ರಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿದರು.

            • ಬಾಲಚಂದ್ರ ಹೆಬ್ಬಾರ್ ಸ. ಪ್ರೌ. ಶಾಲೆ, ಬಿಜಾಡಿ

4ನೇ ದಿನದ ವರದಿ

ನಾಲ್ಕನೇ ದಿನದ ತರಬೇತಿಯು 9.30ಕ್ಕೆ ಪ್ರಾರಂಭವಾಯಿತು ,ಮೂರನೇ ದಿನದ ವರದಿಯನ್ನು ಬಾಲಚಂದ್ರ ಹೆಬ್ಬಾರ್ ಓದಿದರು .ನಂತರ ವಿವಿಧ ಪೈಲ್ ನಲ್ಲಿ ಬದಲಾಣೆ ಮಾಡುವುದು, ಪರಿಕಲ್ಪನೆ ,ಮೈಂಡ್ ಮ್ಯಾ ಪ್ ಗಳಿಗೆ ಪರಿವಿಡಿ ತಯಾರಿ ,ಕ್ರಮಸಂ ಖ್ಯೆ ನೀಡುವುದು, header, footer,bullets,numbers ಸೇರಿಸುವುದು ಇತ್ಯಾದಿ ಬದಲಾವಣೆಗಳನ್ನು ನಾವು ತಯಾರಿಸಿದ ಸಂಪನ್ಮೂಲಗಳಿಗೆ ಮಾಡಲಾಯಿತು. ದಿನವಿಡೀ ಪ್ರತಿಯೊಬ್ಬರೂ ತಾವು ತಯಾರಿಸಿದ ಸಂಪನ್ಮೂಲಗಳನ್ನು ಶ್ರೀ.ರಂಗದಾಮಪ್ಪ ,ಇವರ ಉಪಸ್ಥಿ ಯಲ್ಲಿ ಮಂಡನೆ ಮಾಡಿದರು ಮತ್ತು ಅವುಗಳ ನ್ಯೂನತೆಗಳ ಕುರಿತು ಚರ್ಚಿಸಲಾಯಿತು .

        • ಶಂಕರ ಕುಲಾಲ ,ಸ.ಪ್ರೌ.ಶಾಲೆ, ಬೇಳೂರು.

5ನೇ ದಿನದ ವರದಿ

5 ನೇ ಹಾಗೂ ಕೊನೆಯ ದಿನದ ತರಬೇತಿಯು ಪೂರ್ವಾಹ್ನ ೯:೩೦ ಕ್ಕೆ ಪ್ರಾರಂಭವಾಯಿತು. ಸ.ಪ.ಪೂ ಕಾಲೇಜಿನ ಶಿಕ್ಷಕರಾದ ಶ್ರೀ ಚಂದ್ರ ಕುಲಾಲರವರು ೪ನೇ ದಿನದ ವರದಿ ಓದಿದರು. ಗುರುಪ್ರಸಾದ್ ಸರ್, youtube ಗೆ video ಗಳನ್ನು upload ಮಾಡುವ ,ಅದರ ಲಿಂಕ್ ನ್ನು ಇ-ಮೇಲ್ ಗೆ ಪೇಸ್ಟ್ ಮಾಡಿ ಕಳುಹಿಸುವ ವಿಧಾನವನ್ನು ಹೇಳಿದರು. ಕನ್ನಡ ಟೈಪ್ ಮಾಡುವ exercise ನೀಡಿದರು . picasa ಬಳಸಿ photo ಗಳನ್ನು upload ಮಾಡಿ ಅದರ ಲಿಂಕ್ ನ್ನು ಇ-ಮೇಲ್ ಗೆ ಪೇಸ್ಟ್ ಮಾಡಿ ಕಳುಹಿಸುವ ವಿಧಾನವನ್ನು ಪ್ರದೀಪ್ ಹಂತ ಹಂತ ವಾಗಿ ಹೇಳಿದರು. ಫೈಲ್ ಗಳನ್ನು ಪಿ.ಡಿ ಎಫ್. ಮಾಡುವುದನ್ನು ಹೇಳಿಕೊಟ್ಟರು.ವಿವಿಧ ಫೈಲ್ ಗಳಿರುವ ಫೋಲ್ಡರ್ ಗಳನ್ನು ZIP ಫೈಲ್ ರೂಪದಲ್ಲಿ ಪರಿವರ್ತಿಸಿ ಕಳುಹಿಸುವ ವಿಧಾನವನ್ನು ತಿಳಿಸಿದರು .ಎಲ್ಲರೂ ತಾವು ತಯಾರಿಸಿದ ಸಂಪನ್ಮೂಲಗಳನ್ನು ZIP ಫೈಲ್ ರೂಪದಲ್ಲಿ ಪರಿವರ್ತಿಸಿ ವಿವಿಧ ಇ-ಮೇಲ್ ಗಳಿಗೆ ಕಳುಹಿಸಲಾಯಿತು. ೫:೩೦ಕ್ಕೆ ೫ ದಿನಗಳ ತರಬೇತಿ ಯ ಅನಿಸಿಕೆಯನ್ನು ಹಂಚಿಕೊಳ್ಳುವುದರೊಂದಿಗ ಮುಕ್ತಾಯವಾಯಿತು.

                • ರಜನಿ ಹೆಗ್ಡೆ , ಸ.ಪ್ರೌ.ಶಾ ,ಕಂಡ್ಲೂರು.

ಸಮಾರೋಪ ಮತ್ತು ಅನಿಸಿಕೆಗಳು

Video of the training


video creation:GURUPRASAD H (MRP)

Social Science

Agenda

If district has prepared new agenda then it can be shared here ಮೊದಲ ದಿನ- ಹಿನ್ನೋಟ -stf ತರಬೇತಿ, ಶಾಲೆಯಲ್ಲಿ ಸಂಪನ್ಮೂಲಗಳ ಬಳಕೆ ಬಗ್ಗೆ ಹಿಮ್ಮಾಹಿತಿ. ಕನ್ನಡ ಟೈಪಿಂಗ್ 5ನೇ ದಿನ-Kdenlive, Sound Record,೯ನೇ ತರಗತಿ ಹೊಸಪಠ್ಯದ ಬಗ್ಗೆ ಚರ್ಚೆ.

See us at the Workshop

1 ನೇ ದಿನ



2ನೇ ದಿನ


3 ನೇ ದಿ ನ


4ನೇ&5ದಿನ




Social Science Stf 2nd Batch December 2013

1 Day




2nd Day


3rd Day December-18/2013


4th Day December-19/12/2013


5th Day December-20/12/2013

Workshop short report

ಸಮಾಜ ವಿಜ್ಞಾನ stf ತರಬೇತಿ ಉಡುಪಿ ಮೊದಲ ಹಂತ-ದಿನಾಂಕ:02/12/2013-06/12/2013

1ನೇ ದಿನ

ಸಮಾಜ ವಿಜ್ಞಾನ S T F ತರಬೇತಿ ಮೊದಲ ದಿನದ ವರದಿ ಡಯಟ್, ಉಡುಪಿ- 576101 ಸಮಾಜ ವಿಜ್ಞಾನ ಶಿಕ್ಷಕರಿಗೆ ೨ ನೇ ಹಂತದ S T F ತರಬೇತಿಯನ್ನು ದಿನಾಂಕ 02-12-2013 ರಿಂದ 06-12-2013 ರ ವರೆಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಡುಪಿ ಇಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 02-12-2013 ರಂದು ಬೆಳಗ್ಗೆ 9.30 ಗೆ ಸರಿಯಾಗಿ ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ರಂಗಧಾಮಪ್ಪ ಇವರು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಇಂದಿನ ಬದಲಾಗುತ್ತಿರುವ ಪ್ರಪಂಚದಲ್ಲಿ ಶಿಕ್ಷಕರು ಕೂಡ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದು ಸೂಚಿಸಿದರು. ಶ್ರೀಮತಿ ಶಾಲಿನಿ ಮೇಡಮ್ ಅವರ ಸುಶ್ರಾವ್ಯ ಕಂಠದಲ್ಲಿ ಪ್ರಾರ್ಥನೆಯು ಮೂಡಿ ಬಂತು. ಸಂಪನ್ಮೂಲ ವ್ಯಕ್ತಿ ಶ್ರೀ ಪ್ರಶಾಂತ ಜತ್ತನ್ನ ಅವರು ಇಡೀ ದಿನದ ಕಾರ್ಯಕ್ರಮದ ಪಕ್ಷಿನೋಟ ನೀಡಿದರು.. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರದೀಪ್ ಮತ್ತು ಶ್ರೀ ಮಹಾಬಲೇಶ್ವರ ಭಾಗವತ್ ಅವರು ಇ- ಮೇಲ್ ಐಡಿಯನ್ನು ಸೃಷ್ಟಿಸುವುದು ಹಾಗೂ ಇ- ಮೇಲ್ ಕಳುಹಿಸುವುದನ್ನು ಶಿಕ್ಷಕರಿಂದ ಪ್ರಾಯೋಗಿಕವಾಗಿ ಮಾಡಿಸುವುದರ ಮೂಲಕ ತಿಳಿಸಿಕೊಟ್ಟರು. ಜೊತೆಗೆ ಶ್ರೀ ರಂಗಧಾಮಪ್ಪ ಇವರು ಉತ್ಸಾಹದಿಂದ ಶಿಕ್ಷಕರಿಗೆ ಸಹಕಾರ ನೀಡುತ್ತಿದ್ದರು. ಇದು ಶಿಕ್ಷಕರಲ್ಲಿ ಇನ್ನಷ್ಟು ಉತ್ಸಾಹವನ್ನು ತುಂಬುತಿತ್ತು. ಅಲ್ಲದೇ ಕನ್ನಡ ಟೈಪಿಂಗ್ ಕೂಡ ಪ್ರಾಯೋಗಿಕವಾಗಿ ಮಾಡಿ ಕಲಿತುಕೊಂಡೆವು. ಅಂತರಜಾಲದ ಬಗ್ಗೆ , ಚಿತ್ರಗಳು ಮತ್ತು ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ಮತ್ತು ಸೇವ್ ಮಾಡುವುದನ್ನು ತಿಳಿಸಿಕೊಟ್ಟರು. ಇದರಿಂದ ನಮಗೆ ತರಗತಿ ಪಾಠಕ್ಕೆ ಅಗತ್ಯವಾದ ಮಾಹಿತಿಗಳನ್ನು ಅಂತರ್ಜಾಲದಿಂದ ಪಡೆದುಕೊಳ್ಳಲು ಸಹಾಯವಾಗುತ್ತದೆ. AKSHATHA KINI P ASSISTANT TEACHER GOVERNMENT HIGH SCHOOL KOODABETTU-MALA KARKALA TALUK UDUPI DISTRICT Mobile:9343146469


2ನೇ ದಿನ

ಸಮಾಜ ವಿಜ್ಞಾನ ಎಸ್. ಟಿ. ಎಫ್ .ತರಬೇತಿಯ ಎರಡನೆ ದಿನದ ವರದಿ.ದಿನಾಂಕ 03/12/2013 ಇಂದಿನ ದಿನದ ನಮ್ಮ ತರಬೇತಿ ಕಾರ್ಯಕ್ರಮವು ಶ್ರೀಮತಿ ವಿನಯ ,ಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ಎಣ್ಣೆಹೊಳೆ ಕಾರ್ಕಳ ಇವರ ಚಿಂತನೆಯೊಂದಿಗೆ ಆರಂಭವಾಯಿತು. ನಂತರ ನಿನ್ನೆ ದಿನದ ವರದಿಯನ್ನು ಶ್ರೀಮತಿ ಅಕ್ಷತಾ ರವರು ವಾಚಿಸಿದರು. ಇವತ್ತಿನ ತರಬೇತಿ ಕಾರ್ಯಕ್ರಮ ದಲ್ಲಿ ಡಯಟ್ ಹಿರಿಯ ಉಪನ್ಯಾಸಕರು& ನಮ್ಮ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀಯುತ ರಂಗಧಾಮಪ್ಪ ಸರ್ ರವರು ಕಂಪ್ಯೂಟರಿನಲ್ಲಿ ನಮ್ಮ ಕಲಿಕೆಯ ವೇಗ ಕಡಿಮೆಯಾಗಿರುವುದಕ್ಕೆ ಕಾರಣ ಕಂಪ್ಯೂಟರಿನ ಬಳಕೆ ನಾವು ಕಡಿಮೆಮಾಡಿರುವುದು ಎಂಬುದನ್ನು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಪ್ರಶಾಂತ ಸರ್ ರವರು ಕೊಯರ್ ನ ಅರ್ಥ, ಉದ್ದೇಶಗಳು, ಯೋಜನೆಯ ಮುಖ್ಯ ತತ್ವಗಳು, ಕೊಯರ್ ನ ಮೊದಲ ವರ್ಷದ ಕಾರ್ಯಗಳು, ಸಂಪನ್ಮೂಲಗಳ ಸ್ವರೂಪ ಮತ್ತು ನಿರ್ಮಾಣ ಇವುಗಳ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿಯನ್ನು ನೀಡಿದರು.ನಂತರ ಕೊಯರ್ ನಲ್ಲಿ ನಿನ್ನೆ ದಿನದ ತರಬೇತಿಯ ಫೋಟೊಗಳನ್ನು ಅಫ್ ಲೋಡ ಮಾಡಿರುವುದನ್ನು ತೋರಿಸಲಾಯಿತು. ಭಾಗವತ್ ಸರ್ ರವರು ಕೊಯರ್ ನಲ್ಲಿ School Wiki , ಜಿಲ್ಲೆಯ ಶಾಲೆಯ ಶಾಲೆಯ ಮಾಹಿತಿಯನ್ನು , ಅಫ್ ಲೋಡ ಮಾಡುವುದರ ಕುರಿತು ಮಾಹಿತಿ ನೀಡಿದರು.ನಂತರ ಸಂಪನ್ಮೂಲಗಳಿಗೆ ಹೈಪರ್ ಲಿಂಕ್ ಮಾಡುವ ವಿಧಾನವನ್ನು ತಿಳಿಸಿದರು. ಶಿಬಿರಾರ್ಥಿಗಳಿಂದ ಹೈಪರ ಲಿಂಕ್ ನಲ್ಲಿ ಪ್ರಾಕ್ಟಿಸ್ ಮಾಡಲು ತಿಳಿಸಿದರು. ನಂತರ ಪ್ರದೀಪ ಸರ್ ರವರು ಲಿಂಕ್ ಮಾಡುವಾಗ ಶಾರ್ಟ ಕಟ್ ವಿಧಾನಗಳಾದ ಕಂಟ್ರೋಲ್ ಸಿ,ಕಂಟ್ರೋಲ್ ವಿ ಇವುಗಳ ಮಾಹಿತಿಯನ್ನು ನೀಡಿದರು. ಅದನ್ನು ಎಲ್ಲರಿಂದ ಪ್ರಾಯೋಗಿಕವಾಗಿ ಮಾಡಿಸಿದರು.ತದನಂತರ ಒಂದೊಂದು ವಿಷಯದ ಬಗ್ಗೆ ಮಾಹಿತಿಯನ್ನು ಹೈಪರ್ ಲಿಂಕ್ ನಲ್ಲಿ ಅಳವಡಿಸಿ ಅದನ್ನು ರಂಗಧಾಮಪ್ಪ ಸರ್ ರವರಿಗೆ Email ಮಾಡಲಾಯಿತು. ತದನಂತರ ಪ್ರತಿಯೊಂದು ಗುಂಪಿಗೆ ಸಂಪನ್ಮೂಲ ರಚನೆ ಮಾಡಲು ಪೂರ್ವಭಾವಿಯಾಗಿ ಒಂದೊಂದು ವಿಷಯವನ್ನು ನೀಡಿದರು. ಮಧ್ಯಾಹ್ನದ ಅವಧಿಯಲ್ಲಿ ಭಾಗವತ್ ಸರ್ ರವರು ಕೊಯರ್ ಗಾಗಿ ಸಂಪನ್ಮೂಲ ರಚನೆ ಮಾಡುವ ವಿವಿಧ ಹಂತಗಳನ್ನು ಅರ್ಥವತ್ತಾಗಿ ತಿಳಿಸಿದರು. ನಂತರ ಅವರು ತಯಾರಿಸಿದ ಅಮೇರಿಕಾ ಕ್ರಾಂತಿಗಳು ಎಂಬ ಪಾಠದ ಬಗ್ಗೆ ಮಾಡಿದ ಸಂಪನ್ಮೂಲ ರಚನೆಯನ್ನು ಹಂತ ಹಂತವಾಗಿ ತೋರಿಸಿದರು. ನಂತರ ನಮ್ಮ ಆಯ್ಕೆಯ ವಿಷಯಕ್ಕೆ ಸಂಬಂಧಿಸಿದಂತೆ ಸಂಪನ್ಮೂಲ ರಚಿಸಲು ಪೂರಕವಾಗಿ ಮೈಂಡ ಮ್ಯಾಫ್ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ನಮ್ಮಿಂದ ಮಾಡಿಸಿದರು. ವರದಿ ಜ್ಯೋತಿ ನಾಯಕ್ ಸಹಶಿಕ್ಷಕಿ ಸರಕಾರಿ ಪದವಿಪೂರ್ವ ಕಾಲೇಜು ಗೋಳಿಯಂಗಡಿ ಬ್ರಹ್ಮಾವರ ವಲಯ, ಉಡುಪಿ ಜಿಲ್ಲೆ.


3ನೇ ದಿನ

ಉಡುಪಿ ಸಮಾಜ ವಿಜ್ಞಾನ ಕೊಯರ್ ತರಬೇತಿದಿನಾಂಕ- 04/12/2013ರಂದು ನಡೆದ STF ತರಬೇತಿಯ 3ನೇ ದಿನದ ವರದಿ ಇಂದಿನ ದಿನ ತರಬೇತಿಯ ಶಿಬಿರಾರ್ಥಿಗಳಿಗೆ ತರಬೇತಿ ನೋಡಲ್ ಅಧಿಕಾರಿಗಳಾದ ಶ್ರೀ ರಂಗಧಾಮಪ್ಪ ಸರ್ ಇವರು ಆತ್ಮೀಯವಾಗಿ ಸ್ವಾಗತ ಕೋರಿಕೊಂಡು ತರಬೇತಿ ದಿನಕ್ಕೆ ಚಾಲನೆ ನೀಡಿದರು.ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ಜತ್ತನ್ ಹಾಗೂ ಶ್ರೀ ಮಹಾಬಲೇಶ್ವರ್ ಭಾಗವತ್ ಸರ್ ಉಪಸ್ಥಿತಿ ಇದ್ದರು.ಆರಂಭದಲ್ಲಿ ಶ್ರೀಮತಿ ಭಾರತಿ ಪ್ರಭು ಸ.ಪ.ಪೂ.ಕಾಲೆಜು ಉಡುಪಿ ಇವರು ಶೈಕ್ಷಣಿಕ ಚಿಂತನೆಯನ್ನು ನಿರ್ವಹಿಸಿದರು.ಸ್ವಾರಸ್ಯಕರ ಕತೆಯ ಮೂಲಕ ಚಿಂತನವನ್ನು ರಸವತ್ತಾಗಿ ಪ್ರಸ್ತುತ ಪಡಿಸಿದರು. ನಂತರ ೨ನೇ ದಿನದ ವರದಿಯನ್ನು ಶ್ರೀಮತಿ ಜ್ಯೋತಿ ಮೇಡಮ್ ಸ.ಪ್ರೌ.ಶಾ. ಗೋಳಿಯಂಗಡಿ ಇವರು ಕೊಯರನಲ್ಲಿ ದಾಖಲಿಸಿದ ವರದಿಯನ್ನು ವಾಚಿಸಿದರು.ಪೂರ್ವ ದಿನದ ವರದಿಯು ಮತ್ತೋಮ್ಮೆ ಶಿಭಿರಾರ್ಥಿಗಳನ್ನು ಹಿಂದಿನ ದಿನದ ಕಲಿಕೆಗಳನ್ನು ನೆನಪಿಸುವಂತೆ ಮಾಡಿತು.ನಂತರ ನೋಡಲ್ ಅಧಿಕಾರಿಯವರಾದ ಶ್ರೀರಂಗದಾಮಪ್ಪ ಸರ್ 3ನೇದಿನದ ಅಧಿವೇಶನವನ್ನು ಪ್ರಾರಂಭಿಸಿದರು.ಬೆಳಗಿನ ದಿನದ ಮೊದಲ ಅಧಿವೇಶನವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮಹಾಬಲೇಶ್ವರ್ ಭಾಗ್ವತ್ ಸರ್ ಇವರು ಘಟಕ ರೂಪುರೇಷೆ ಮೈಂಡ್ ಮ್ಯಾಪ್ ತಯಾರಿಸುವ ಬಗ್ಗೆ ತಿಳಿಸಿದರು. ಪ್ರತಿ ತಂಡದವರಿಗೆ ಮಾರ್ಗದರ್ಶನ ನೀಡಿದರು.ಪ್ರತಿ ತಂಡದ ಶಿಬಿರಾರ್ಥಿಗಳು ತಾವು ತೆಗೆದುಕೊಂಡ 9ನೇ ತರಗತಿಯ ಪಾಠಕ್ಕೆ ಸಂಬಂಧಿಸಿದಂತೆ ಒಂದು ವಿಷಯದಲ್ಲಿ ಮನೋನಕ್ಷೆ ಸಿದ್ದ ಪಡಿಸಿ ಸಂಪನ್ಮೂಲ ವ್ಯಕ್ತಿಯರಿಗೆ Mail ಕಳುಹಿಸಲಾಯಿತು. ಮನೋನಕ್ಷೆ ತಯಾರಿಕೆ ಹಂತ ಹಾಗೂ ಲಿಂಕ್ ಗಳನ್ನು ಹೈಪರ್ ಲಿಂಕ್ ಮೂಲಕ ಸಂಪರ್ಕಪಡೆಯುವ ಬಗ್ಗೆ ಶಿಭಿರಾರ್ಥಿಗಳಿಗೆ ತಿಳಿಸಿ ಆ ಮೂಲಕ ಶಿಭಿರಾರ್ಥಿಗಳಿಂದ ಮಾಡಿಸಲಾಯಿತು. ಬೆಳಗಿನ ಚಹ ವಿರಾಮದ ನಂತರ ದಿನದ ಎರಡನೆ ಅಧಿವೇಶನದಲ್ಲಿ ಒಂದು ಪಾಠ ತಯಾರಿಕೆ ಹಂತಗಳಾದ ಮನೋನಕ್ಷೆ, ಪಠ್ಯ ಪುಸ್ತಕ, ಮತ್ತಷ್ಟು ಮಾಹಿತಿ,ಕಲಿಕಾಉದ್ದೇಶಗಳು,ಪರಿಕಲ್ಪನೆ,ಬೋಧನೆಯ ರೂಪುರೇಷೆ,ಟಿಪ್ಪಣಿಗಳು,ಚಟುವಟಿಕೆ,ಯೋಜನೆ ಹಾಗೂ ಯೋಜನಾ ಕಾರ್ಯ ಸಿದ್ಧಪಡಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮಹಬಲೇಶ್ವರ್ ಭಾಗವತ್ ಸರ್ ಶಿಭಿರಾರ್ಥಿಗಳಿಗೆ ಸರಳವಾಗಿ ತಿಳಿಸಿದರು. ಇವರಿಗೆ ಪ್ರಶಾಂತ ಸರ್ ಸಹಕರಿಸಿ ಮತ್ತಷ್ಟು ಮಾಹಿತಿ ತಿಳಿಸಿದರು.ಬೆಳಗಿನ ಎರಡನೇ ಅಧಿವೇಶನದ ನಂತರ ಊಟದ ವಿರಾಮ ನೀಡಲಾಯಿತು.ಸರಳವಾದ ಬೋಜನವನ್ನು ಸವಿದ ಶಿಭಿರಾರ್ಥಿಗಳು ಆಸಕ್ತಿಯಿಂದ ದಿನದ ಮದ್ಯಾಹ್ನದ ಮೂರನೆ ಅವಧಿಗೆ ಸಿದ್ಧರಾದೆವು. ಬೆಳಗಿನ ಅವಧಿಯಲ್ಲಿ ಹಂಚಿದ ಪಾಠಕ್ಕೆ ಸಂಬಂಧಿಸಿದಂತೆ ಸಂಪನ್ಮೂಲವನ್ನು ಕ್ರೋಢೀಕರಣ ಮಾಡುವಲ್ಲಿ ನಾವು ಸಿದ್ಧರಾದೆವು.ಪ್ರತಿ ಹಂತದಲ್ಲಿಯೂ ಮಾಹಿತಿಯನ್ನು ಹಂತ ಹಂತವಾಗಿ ರೂಪಿಸಿಕೊಂಡು ಅಗತ್ಯಕ್ಕೆ ತಕ್ಕಂತೆ ಅಂತರ್ಜಾಲ ತಾಣದ ಸಹಕಾರ ಪಡೆಯುತ್ತ ಶಿಭಿರಾರ್ಥಿಗಳು ಮನೋನಕ್ಷೆ ಸಹಿತ ಪಾಠ ಯೋಜನೆ ಸಿದ್ಧ ಪಡಿಸಿದರು.ಪಾಠಕ್ಕೆ ಸಂಬಂಧಿಸಿದಂತೆ ಫೋಟೊಗಳನ್ನುಫೋಲ್ಡರ್ ನಲ್ಲಿ ಹಾಕಿಕೊಂಡು ಪಿಕಾಸಾದಲ್ಲಿ ಅಪ್ಲೋಡ್ ಮಾಡಿ ಫೋಟೋಲಿಂಕ್ ಬಳಸುವ ಬಗ್ಗೆ ಪ್ರಶಾಂತ್ ಸರ್ ವಿವರ ನೀಡಿದರು.ಇತರ ಸಂಪನ್ಮೂಲ ಶಿಕ್ಷಕರು ನಮಗೆ ಸಹಕರಿಸಿದರು.ಮದ್ಯಾಹ್ನದ ಚಹ ವಿರಾಮದ ನಂತರ ಮನೋನಕ್ಷೆ ತಯಾರಿಸಿ ಸಿದ್ಧ ಪಡಿಸಿದ ಭಕ್ತಿ ಪಂಥ,ರಾಷ್ಟ್ರೀಯ ಭಾವೈಕ್ಯತೆ,ಮತಪ್ರವರ್ತಕರು,ವಿಷಯಕ್ಕೆ ಸಂಬಂಧಿಸಿದಂತೆ ಶಿಭಿರಾರ್ಥಿಗಳು ಸಾಮೂಹಿಕ ಚರ್ಚೆ ಮೂಲಕ ಸಾಕಷ್ಟು ವಿಷಯಗಳನ್ನು ಸೇರಿಸುವ ಮೂಲಕ ಇನ್ನಷ್ಟು ಮನದಟ್ಟಾಯಿತು. ಯೋಜನಾಧಿಕಾರಿ ರಂಗಧಾಮಪ್ಪ ಸರ್ ವಿಷಯದ ಕುರಿತು ಮತ್ತಷ್ಟು ಮಾಹಿತಿ ನೀಡಿದರು.ನಂತರ ಶಿಭಿರದ ಯೋಜನಾಧಿಕಾರಿಗಳು ದಿನದಲ್ಲಿ ನಡೆದ ವಿಷಯದ ಬಗ್ಗೆ ಮತ್ತೊಮ್ಮೆ ಅವಲೋಕನಕ್ಕೆ ವೇದಿಕೆ ಕಲ್ಪಿಸಿದರು. ದಿನದ ತರಬೇತಿಯನ್ನು ಮುಕ್ತಾಯಗೊಳಿಸುವ ಮೂಲಕ ಸಾಕಷ್ಟು ವಿಷಯಗಳನ್ನು ತಿಳಿದು ಕೊಂಡೆವು .ಜೈಹಿಂದ್, ಜೈ ಕರ್ನಾಟಕ ವರದಿಗಾರರು, ಶ್ರೀಮತಿ ಯಶೋದ,ಸಹಶಿಕ್ಷಕರು, ಸ.ಪ್ರೌ.ಶಾ.ಕಾಳಾವರ. ಶ್ರೀ ಹೆರಿಯ, ಸಹಶಿಕ್ಷಕರು, ಸ.ಪ್ರೌ.ಶಾ.ವಡ್ಡರ್ಸೆ ಶ್ರೀಮತಿ ಬಾಬಿ. ಸಹಶಿಕ್ಷಕರು, ಸ.ಪ್ರೌ.ಶಾ.ಹಾಲಾಡಿ


4ನೇ ದಿನ

ಡಯೆಟ್ ಉಡುಪಿ ಇಲ್ಲಿ ನಡೆದ STF ಸಮಾಜ ವಿಜ್ಞಾನ ತರಬೇತಿಯ 4ನೆಯ ದಿನದ ವರದಿ ಡಯೆಟ್ ಉಡುಪಿ ಇಲ್ಲಿ ನಡೆಯುತ್ತಿರುವ STF ಸಮಾಜವಿಜ್ಞಾನ ತರಬೇತಿಯ 4ನೆಯ ದಿನದ ತರಬೇತಿಯು ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ಎಲ್ಲರನ್ನೂ ಸ್ವಾಗತಿಸುವುದರೊಂದಿಗೆ ಆರಂಭವಾಯಿತು. ಶ್ರೀಮತಿ ಶಾಲಿನಿ B.S ಸ.ಪ್ರೌ.ಶಾಲೆ ಕಲ್ಯ ಇವರು ನಮ್ಮಲ್ಲಿರುವ Egoಗೆ ಸಂಬಂಧಿಸಿದ ವಿಚಾರವನ್ನೊಳಗೊಂಡ ಚಿಂತನವನ್ನು ನಡೆಸಿಕೊಟ್ಟರು. ಶ್ರೀಯುತ ಹಿರಿಯಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ವಡ್ಡರ್ಸೆ ಇವರು ಹಿಂದಿನ ದಿನದ ತರಬೇತಿಯ ವರದಿಯನ್ನು ಮಂಡಿಸಿದರು. ಆ ವರದಿಯ ಬಗ್ಗೆ ಚರ್ಚೆ ನಡೆಸಲಾಯಿತು. ತರಬೇತಿಯ ನೋಡಲ್ ಅಧಿಕಾರಿಯಾಗಿರುವ ಡಯೆಟ್ ಹಿರಿಯಉಪನ್ಯಾಸಕರಾದ ಶ್ರೀಯುತ ರಂಗಧಾಮಪ್ಪ ಸರ್,ವರದಿಯನ್ನುಇನ್ನಷ್ಟು ಉತ್ತಮವಾಗಿ ತಯಾರಿಸುವ ಬಗ್ಗೆ ಸಲಹೆ ನೀಡಿದರು. ಬೆಳಿಗ್ಗೆಯ ತರಬೇತಿಯ ಮೊದಲ ಅವಧಿಯಲ್ಲಿ ಹಿಂದಿನ ದಿನದ ಸಂಪನ್ಮೂಲ ರಚನೆಗೆ ಸಂಬಂಧಿಸಿದ ಚರ್ಚೆಯು ಮುಂದುವರಿಯಿತು. ಭಕ್ತಿ ಪಂಥದ ಬಗ್ಗೆ ಸಪನ್ಮೂಲ ರಚನೆಯಲ್ಲಿ ಸಿದ್ಧಪಡಿಸಿದ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.ಈ ಚರ್ಚೆಯಲ್ಲಿ ನೋಡಲ್ ಅಧಿಕಾರಿ ಶ್ರೀಯುತ ರಂಗಧಾಮಪ್ಪ ಸರ್ ಕಲಿಕಾ ಉದ್ಧೇಶಗಳಿಗೂ , ಚಟುವಟಿಕೆಗಳಿಗೂ ಸಂಬಂಧ ಇರಬೇಕಾದ ಅಗತ್ಯತೆ ಬಗ್ಗೆ ತಿಳಿಸಿದರು ಹಾಗೂ ಚಟುವಟಿಕೆಗಳ ಹಂತಗಳ ಬಗ್ಗೆ ಚರ್ಚಿಸಲಾಯಿತು. ನಮ್ಮ ಸಂಪನ್ಮೂಲವನ್ನು ಸಲಹೆಗಳನ್ನಾದರಿಸಿ ಇನ್ನಷ್ಟು ಉತ್ತಮಗೊಳಿಸುವ ಪ್ರಯತ್ನ ಮಾಡಲಾಯಿತು.ಸಂಪನ್ಮೂಲ ವ್ಯಕ್ತಿ ಶ್ರೀಯುತ ಮಹಾಬಲೇಶ್ವರ್ ಭಾಗವತ್ ಸರ್ ಸಂಪನ್ಮೂಲವನ್ನು ಕೊಯೆರ್ ಗೆ ಸೇರಿಸುವ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕರಾದ ಶ್ರೀಯುತ ವೆಂಕಟೇಶ್ ನಾಯಕ್ ಭೇಟಿ ನೀಡಿದರು. ಶ್ರೀಯುತ ಮಹಾಬಲೇಶ್ವರ್ ಭಾಗ್ವತ್ ಅವರು ವಿಷಯ ಪರಿವೀಕ್ಷಕರಿಗೆ ತರಬೇತಿಯ ಬಗ್ಗೆ ಸ್ಥೂಲವಾಗಿ ತಿಳಿಸಿದರು. ಬೆಳಗ್ಗಿನ ಲಘು ಉಪಹಾರದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಮಹಾಬಲೇಶ್ವರ್ ಭಾಗ್ವತ್ ಸರ್ ಪೋಟೋದ ಗಾತ್ರವನ್ನು ಚಿಕ್ಕದಾಗಿಸುವುದು, edit ಮಾಡುವುದು ಮತ್ತು Ubuntu software centre, Interenetನಲ್ಲಿ Thunder bird mail ಬಗ್ಗೆ ತಿಳಿಸಿದರು.ಅದರ ಬಗ್ಗೆ ಪ್ರಾಯೋಗಿಕವಾಗಿ ಸಾಕಷ್ಟು ತಿಳಿದುಕೊಳ್ಳಲು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಮಹಾಬಲೇಶ್ವರ್ ಭಾಗ್ವತ್ ಮತ್ತು ಶ್ರೀಯುತ ಪ್ರಶಾಂತ್ ಮಾರ್ಗದರ್ಶನ ನೀಡಿದರು. ಮಧ್ಯಾಹ್ನದ ಊಟದ ನಂತರದ ಮೊದಲ ಅವಧಿಯಲ್ಲಿ ಶಿಬಿರಾರ್ಥಿಗಳು ರೂಪಿಸಿದ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿದ ಇನ್ನಷ್ಟು ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.ಚಟುವಟಿಕೆಗಳು ಜ್ಞಾನ ಮತ್ತು ಜ್ಞಾನದ ರಚನೆ ಮತ್ತು ಪುನರ್ ರಚನೆ ಗೆ ಸಹಾಯಕವಾಗುವ ಬಗ್ಗೆ ವಿವರವಾಗಿ ತಿಳಿಸಲಾಯಿತು.ಆ ನಂತರ ಸಿದ್ಧಪಡಿಸಿದ ಶ್ರಮ ಮತ್ತು ಉದ್ಯೋಗದ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಪರಿಕಲ್ಪನೆಗಳು,ಉದ್ದೇಶಗಳು ಮತ್ತು ಚಟುವಟಿಕೆಗಳ ಬಗ್ಗೆ ವಿಸ್ತಾರವಾದ ಚರ್ಚೆ ಮಾಡಲಾಯಿತು.ನೋಡಲ್ ಅಧಿಕಾರಿ ಶ್ರೀಯುತ ರಂಗಧಾಮಪ್ಪ ಸರ್ ತಮ್ಮ ಉಪಯುಕ್ತ ಸಲಹೆಗಳನ್ನು ನೀಡಿದರು.ಇದೇ ರೀತಿ 'ಕುಟುಂಬ',ಪ್ರಾಕೃತಿಕ ವಿಭಾಗಗಳು'climate,soil, Natural vegetation and animals of Karnataka ಪಾಠಗಳಿಗೆ ಸಂಬಂಧಿಸಿದಂತೆ ಸಿದ್ಧ ಪಡಿಸಿದ ಸಂಪನ್ಮೂಲಗಳ ಬಗ್ಗೆ ಚರ್ಚಿಸಲಾಯಿತು. ಮಧ್ಯಾಹ್ನದ ಚಹಾ ವಿರಾಮದ ನಂತರ ನೋಡಲ್ ಅಧಿಕಾರಿ ಶ್ರೀಯುತ ರಂಗಧಾಮಪ್ಪ ಸರ್ CCE ಬಗ್ಗೆ ಚರ್ಚೆ ಆರಂಭಿಸಿದರು. CCE ಯ ಉದ್ದೇಶಗಳು, ಅದನ್ನು ಸರಿಯಾಗಿ ಅಳವಡಿಸಿಕೊಳ್ಳುವ ಬಗ್ಗೆ ,ಕೃತಿ ಸಂಪುಟ ದ ರೂಪುರೇಷೆ ಅದು ಒಳಗೊಂಡಿರಬೇಕಾದ ಅಂಶಗಳ ಬಗ್ಗೆ, spreadsheet ತಯಾರಿಸಿ ಅದನ್ನು ಬಳಸಿಕೊಳ್ಳುವುದರ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಮೊಘಲರು ಪಾಠವನ್ನು ಉದಾಹರಣೆಯಾಗಿ ತೆಗೆದುಕೊಂಡು ,ಅಲ್ಲಿ cceಯನ್ನು ಗಮನದಲ್ಲಿರಿಸಿಕೊಂಡು ಅಳವಡಿಸಿಕೊಳ್ಳಬಹುದಾದ ಚಟುವಟಿಕೆಗಳು,ಮೌಲ್ಯಮಾಪನ ವಿಧಾನದಬಗ್ಗೆ ಸಾಕಷ್ಟು ಮಾಹಿತಿ ನೀಡಿದರು.ತದನಂತರ ಸಂಪನ್ಮೂಲ ವ್ಯಕ್ತಿ ಮಹಾಬಲೇಶ್ವರ ಭಾಗ್ವತ್ ರವರು you tube ನಿಂದ ವೀಡಿಯೋವನ್ನು download ಮಾಡಿಕೊಳ್ಳುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು.ಇದರೊಂದಿಗೆ STF ತರಬೇತಿಯ ಮೂರನೆಯ ದಿನದ ತರಬೇತಿಯು ಸಂಪನ್ನಗೊಂಡಿತು. ವರದಿಗಾರರು. ಶೇಖರಬೋವಿ ಸಹಶಿಕ್ಷಕರು ಬಾಲಕಿಯರ ಸ.ಪ.ಪೂ ಕಾಲೇಜು ಉಡುಪಿ ಶ್ರೀಮತಿ ಭಾರತಿ ಎಸ್. ಸ.ಪ.ಪೂ ಕಾಲೇಜು ಉಡುಪಿ ಶ್ರೀ ರತ್ನಾಕರ್ ಸ.ಫ್ರೌ. ಶಾಲೆ ಬಿಜೂರು .


5ನೇ ದಿನದ ತರಬೇತಿ

ಸಮಾಜ ವಿಜ್ಞಾನ ಎಸ್ ಟಿ ಎಫ್ ತರಬೇತಿಡಯಟ್, ಉಡುಪಿ, ದಿನಾಂಕ:06-12-2013 ಈ ದಿನದ ತರಬೇತಿಯು ಶ್ರೀಮತಿ ವಿಮಲ, ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಬೆಳಪು, ಉಡುಪಿ ಇವರ ಚಿಂತನ ಕಾರ್ಯಕ್ರಮದೊಂದಿಗೆ ಆರಂಭವಾಯಿತು. ನಾವು ನಕಾರಾತ್ಮಕ ಯೋಚನೆಗಳ ಬದಲು ಸಕಾರತ್ಮಕವಾಗಿ ಯೋಚನೆ ಮಾಡಿದರೆ ಫಲಿತಾಂಶ ಕೂಡ ಸಕಾರಾತ್ಮಕವಾಗಿರುತ್ತದೆ. ಮಕ್ಕಳನ್ನು ಒಬ್ಬರೊಂದಿಗೆ ಇನ್ನೊಬ್ಬರನ್ನು ಹೋಲಿಕೆ ಮಾಡಿದಾಗ ಕೂಡ ಕೀಳರಿಮೆ ಭಾವನೆ ಬೆಳೆಯುತ್ತದೆ. ಹಾಗಾಗಿ ಮಕ್ಕಳನ್ನು ಪ್ರೋತ್ಸಾಹಿಸಬೇಕೇ ಹೊರತು ಹೋಲಿಕೆ ಮಾಡಬಾರದು ಎಂಬ ವಿಚಾರಗಳು ಚಿಂತನೆಯಲ್ಲಿ ಮೂಡಿ ಬಂತು. ಶ್ರೀ ಶೇಖರ ಭೋವಿ, ಸಹಶಿಕ್ಷಕರು, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಉಡುಪಿ ಇವರು ನಾಲ್ಕನೇ ದಿನದ ಸವಿವರ ವರದಿಯನ್ನು ವಾಚಿಸಿದರು. ಮೊದಲ ಅವಧಿಯಲ್ಲಿ ಹಿಂದಿನ ದಿನಗಳಲ್ಲಿ ತಯಾರಿಸಿದ ಸಂಪನ್ಮೂಲಗಳಿಗೆ ಅಂತಿಮ ರೂಪುರೇಷೆ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಭಾಗ್ವತ್ ಹಾಗೂ ಶ್ರೀಯುತ ಪ್ರದೀಪ ರವರು ಶಿಬಿರಾರ್ಥಿಗಳಿಗೆ ಸಹಕರಿಸಿದರು. ಅಲ್ಪಕಾಲದ ಚಹಾ ವಿರಾಮದ ನಂತರ ನಮ್ಮ ಸಂಪನ್ಮೂಲವನ್ನು ಕೋಯರ್ ಗೆ ಮತ್ತು ಎಸ್ ಟಿ ಎಫ್ ಸಮಾಜ ವಿಜ್ಞಾನ ಗ್ರೂಪ್ ಗೆ ಮತ್ತು ತರಬೇತಿಯ ನೋಡಲ್ ಅಧಿಕಾರಿಯಾಗಿರುವ ಶ್ರೀಯುತ ಶ್ರೀರಂಗಧಾಮಪ್ಪ ಸರ್ ಅವರಿಗೆ ಮೇಲ್ ಮಾಡುವುದನ್ನು ನಮ್ಮಿಂದ ಪ್ರಾಯೋಗಿಕವಾಗಿ ಮಾಡಿಸಲಾಯಿತು. ಶ್ರೀಯುತ ಶ್ರೀರಂಗಧಾಮಪ್ಪ ಸರ್ ಇವರು ನಾವು ಕಳುಹಿಸಿದ ಮೇಲ್ ಗಳನ್ನು ಪರಿಶೀಲಿಸಿದರು. ಸಂಪನ್ಮೂಲ ವ್ಯಕ್ತಿಗಳು ಮೇಲ್ ಗಳಿಗೆ ವಿವಿಧ ಫೈಲ್ ಗಳನ್ನು ಅಟೇಚ್ಮೆಂಟ್ ಮತ್ತು ಗೂಗಲ್ ಡ್ರೈವ್ ನ ಮೂಲಕ ಅಟೇಚ್ ಮಾಡುವುದನ್ನು ಮತ್ತು ಮೇಲ್ ನಲ್ಲಿರುವ ಅಟೇಚ್ಮೆಂಟ್ ಗಳನ್ನು ಡೌನ್ ಲೋಡ್ ಮಾಡುವುದನ್ನು ಕಲಿಸಲಾಯಿತು. ನಂತರ ಕೊಯರ್ ನಲ್ಲಿರುವ ವಿವಿಧ ವಿಷಯಗಳನ್ನು ತೋರಿಸುತ್ತಾ ಮತ್ತಷ್ಟು ತಿಳಿದುಕೊಳ್ಳಲು ಆಸಕ್ತಿ ಮೂಡಿಸಿದರು. ಕೊಯರ್ ಗೆ ಸಂಪನ್ಮೂಲಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಮಾಹಿತಿ ನೀಡಿದರು. ಮಧ್ಯಾಹ್ನದ ಊಟದ ವಿರಾಮದ ನಂತರ Youtube ನಲ್ಲಿ ವೀಡಿಯೋಗಳನ್ನು ಸರ್ಚ್ ಮಾಡಿ ಅದನ್ನು ನೋಡುವುದು ಮತ್ತು ಡೌನ್ ಲೋಡ್ ಮಾಡುವುದರ ಬಗ್ಗೆ ತಿಳಿಸಿಕೊಟ್ಟರು. ವಿಡಿಯೋಗಳನ್ನು edit ಮಾಡುವುದನ್ನು ಪ್ರಾಯೋಗಿಕವಾಗಿ ಮಾಡಿಸಿದರು. ವಿಡಿಯೋಗಳಲ್ಲಿ ನಮಗೆ ಬೇಕಾದಷ್ಟನ್ನೇ ಬಳಸಿಕೊಳ್ಳುವ ಬಗ್ಗೆ, ಎರಡು ವಿಡಿಯೋಗಳನ್ನು ಸೇರಿಸುವ ಬಗ್ಗೆ , ಆಡಿಯೋ ವಿಡಿಯೋಗಳನ್ನು ಬೇರ್ಪಡಿಸುವ ಬಗ್ಗೆ ಇತ್ಯಾದಿಗಳ ಬಗ್ಗೆ ತಿಳಿಸಲಾಯಿತು. ಸೌಂಡ್ ರೆಕಾರ್ಡ್ ಮಾಡುವ ಬಗ್ಗೆ ಮತ್ತು ಅದನ್ನು ಬಳಸುವ ಬಗ್ಗೆ ತಿಳಿಸಿಕೊಟ್ಟರು. ಶ್ರೀಯುತ ಶ್ರೀರಂಗಧಾಮಪ್ಪ ಸರ್ ಅವರ ಧ್ವನಿಯನ್ನು ರೆಕಾರ್ಡ್ ಮಾಡಿ ಪರೀಕ್ಷಿಸುವುದರ ಮೂಲಕ ನಮಗೆ ತಿಳಿಸಿಕೊಡಲಾಯಿತು. ರೆಕಾರ್ಡ್ ಮಾಡಿದ ಧ್ವನಿಯನ್ನು ಬೇರೆ ವಿಡಿಯೋಗಳಿಗೆ ಹಿನ್ನೆಲೆ ಯಾಗಿ ಕೊಡುವುದನ್ನು ಕೂಡ ಶ್ರೀಯುತ ಪ್ರದೀಪ್ ಸರ್ ಅವರು ಚೆನ್ನಾಗಿ ವಿವರಿಸಿದರು. ಚಹಾ ವಿರಾಮದ ನಂತರ ಕಾರ್ಯಾಗಾರದ ಬಗೆಗಿನ ಅಭಿಪ್ರಾಯ ದಾಖಲಿಸಲು ಎಲ್ಲಾ ಶಿಬಿರಾರ್ಥಿಗಳಿಗೂ ಸೂಚಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ಈ ಕಾರ್ಯವನ್ನು ಪೂರ್ಣಗೊಳಿಸಲಾಯಿತು. ತದನಂತರ ಯಾದಗಿರಿ ತಂಡದೊಂದಿಗೆ G-TALK ಮಾಡಲಾಯಿತು. ೯ ನೇ ತರಗತಿಯ ಹೊಸ ಪಠ್ಯಪುಸ್ತಕದ ಕುರಿತು ಶಿಕ್ಷಕರ ನಿರೀಕ್ಷೆಗಳನ್ನು ಚರ್ಚಿಸಲಾಯಿತು. ಸಮಸ್ಯೆಗಳನ್ನು ಮತ್ತು ಉತ್ತಮ ಅಂಶಗಳನ್ನು ಪಟ್ಟಿ ಮಾಡಿ ಕೊಯರ್ ಗೆ ಅಪ್ಲೋಡ್ ಮಾಡಲಾಯಿತು. ಕೊನೆಯಲ್ಲಿ ನಡೆದ ಸರಳ ಸಮಾರೋಪ ಸಮಾರಂಭದಲ್ಲಿ ಶ್ರೀಯುತ ಜಯಪ್ರಕಾಶ್ ನಾಯಕ್, ಸರ್ಕಾರಿ ಪ್ರೌಢಶಾಲೆ, ತೆಂಕನಿಡಿಯೂರು ಮತ್ತು ಸರ್ಕಾರಿ ಪ್ರೌಢಶಾಲೆ, ಕಾಳಾವರದ ಶಿಕ್ಷಕಿ ಶ್ರೀಮತಿ ಯಶೋದಾ ಅವರು ಅನಿಸಿಕೆಯನ್ನು ಹಂಚಿಕೊಂಡರು. ಸಂಪನ್ಮೂಲ ವ್ಯಕ್ತಿ ಶ್ರೀಯುತ ಮಹಾಬಲೇಶ್ವರ ಭಾಗ್ವತ್ ಶಿಬಿರಾರ್ಥಿಗಳು ಕಂಪ್ಯೂಟರ್ ನಲ್ಲಿ ಅನ್ವೇಷಣಾ ಮನೋಭಾವನೆಯನ್ನು ಬೆಳೆಸಿಕೊಂಡರೆ ನಾವು ಮುಂದುವರೆಯಲು ಸಾಧ್ಯ ಎಂಬ ಸಲಹೆ ನೀಡಿದರು&ವೇದಿಕೆ ಜೊತೆ ನಿತ್ಯ ಸಂಪರ್ಕದಲ್ಲಿರಲು&ಕೊಯರ್ ಸಂಪನ್ಮೂಲದ ಹಂಚಿಕೆ ಬಗ್ಗೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಶ್ರೀಯುತ ಪ್ರದೀಪ್ ಸರ್ ಅವರು ಅಂತರ್ಜಾಲವನ್ನು ಹೆಚ್ಚು ಹೆಚ್ಚು ಬಳಕೆ ಮಾಡುವಂತೆ ತಿಳಿಹೇಳಿದರು. ನೋಡಲ್ ಅಧಿಕಾರಿಯಾಗಿರುವ ಶ್ರೀಯುತ ಶ್ರೀರಂಗಧಾಮಪ್ಪ ಸರ್ ಅವರು ಕೊಯರ್ ಗೆ ಮತ್ತಷ್ಟು ಸಂಪನ್ಮೂಲಗಳನ್ನು ಅಪ್ಲೋಡ್ ಮಾಡಲು ಕರೆ ನೀಡಿದರು. ಈ ದಿನ ಕಲಿತ ಎಲ್ಲಾ ವಿಚಾರಗಳನ್ನು ಮತ್ತೊಮ್ಮೆ ನೆನಪಿಸಿಕೊಂಡು ಈ ದಿನದ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು. "ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು" ಎಂಬಂತೆ ನಮ್ಮ ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಿಂದ ಬೋಧನೆ ಆಕರ್ಷಕವಾಗುವುದರ ಜೊತೆಗೆ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂಬ ಆಶಯದೊಂದಿಗೆ ವರದಿಯನ್ನು ಮುಕ್ತಾಯಗೊಳಿಸುತ್ತಿದ್ದೇವೆ. ವರದಿಗಾರರು: ಅಕ್ಷತಾ ಕಿಣಿ ಪಿ, ಸರ್ಕಾರಿ ಪ್ರೌಢಶಾಲೆ, ಕೂಡಬೆಟ್ಟು- ಮಾಳ, ಕಾರ್ಕಳ ತಾ. ಅಖಿಲಾ ಶೆಟ್ಟಿ ರಾಧಾ ನಾಯಕ್ ಸರ್ಕಾರಿ ಪ್ರೌಢಶಾಲೆ, ಎಣ್ಣೆಹೊಳೆ- ಕಾರ್ಕಳ ತಾ. ವೀಣಾ ಆರ್.ಎನ್ ಸರ್ಕಾರಿ ಪ್ರೌಢಶಾಲೆ, ಹೊಸ್ಮಾರು , ಕಾರ್ಕಳ ತಾ.


ಸಮಾಜ ವಿಜ್ಞಾನ stf ತರಬೇತಿ ಹಂತ;02

1 ನೇ ದಿನ,ದಿನಾಂಕ:16/12/2013

ಉಡುಪಿ ಜಿಲ್ಲೆಯ ಸಮಾಜವಿಜ್ಞಾನ ಶಿಕ್ಷಕರ ಎರಡನೆಯ ತಂಡದ STF ತರಬೇತಿಯ ಮೊದಲ ದಿನದ ವರದಿ. ಉಡುಪಿ ಜಿಲ್ಲೆಯ ಸಮಾಜವಿಜ್ಞಾನ ಶಿಕ್ಷಕರ ಎರಡನೆಯ ತಂಡದ STF ತರಬೇತಿಯನ್ನು ದಿನಾಂಕ 16.12.2013 ರಿಂದ 20/12/2013 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಮೊದಲ ದಿನದ ತರಬೇತಿಯ ವರದಿಯನ್ನು ತಮ್ಮ ಮುಂದಿಡಲು ಸಂತೋಷಪಡುತ್ತೇನೆ.ಪೂರ್ವಾಹ್ನ 9.30ಕ್ಕೆ ಸರಿಯಾಗಿ ಸರಕಾರಿ ಪದವಿಪೂರ್ವ ಕಾಲೇಜು ಹೊಸಂಗಡಿಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿಯವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ತರಬೇತಿ ಆರಂಭಗೊಂಡಿತು.ಎಲ್ಲರನ್ನು ತರಬೇತಿಗೆ ಆತ್ಮೀಯವಾಗಿ ಸ್ವಾಗತಿಸಿಕೊಂಡ ತರಬೇತಿಯ ಸಂಯೋಜಕರಾದ ಡಯಟ್ ಹಿರಿಯ ಉಪನ್ಯಾಸಕ ಶ್ರೀರಂಗಧಾಮಪ್ಪರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ತರಬೇತಿಯ ಧ್ಯೇಯೋದ್ದೇಶಗಳನ್ನು ಶಿಬಿರಾರ್ಥಿಗಳ ಮುಂದಿಟ್ಟರು.ಸಮಯಪಾಲನೆ, ಸ್ವಚ್ಛತೆ, ಕರ್ತವ್ಯಪಾಲನೆಗಳ ಕುರಿತು ಸಾಮಾನ್ಯ ಸೂಚನೆಗಳನ್ನು ನೀಡಿದರು.ಸಂಪನ್ಮೂಲವ್ಯಕ್ತಿ ಶ್ರೀ ಮಹಾಬಲೇಶ್ವರ ಭಾಗ್ವತ್ ಕಾರ್ಯಕ್ರಮ ನಿರ್ವಹಿಸಿದ್ದು ಸಂಪನ್ಮೂಲವ್ಯಕ್ತಿಗಳಾದ ಶ್ರೀ ಸದಾನಂದ್ ಬೈಂದೂರು,ಶ್ರೀ ಪ್ರದೀಪ್ ಉಪಸ್ಥಿತರಿದ್ದರು. ಮೊದಲ ಅವಧಿಯಲ್ಲಿ ಶಿಬಿರಾರ್ಥಿಗಳ ಪರಿಚಯದ ಬಳಿಕ ಇಮೇಲ್ ID ಖಾತೆ ತೆರೆಯಲು,ನೋಡಲು, mail ಮಾಡಲು, ತರಬೇತಿ ನೀಡಲಾಯಿತು.ನಂತರ ಪ್ರತಿಯೊಬ್ಬ ಕಲಿಕಾರ್ಥಿಯ ವಿವರಗಳನ್ನು (google form)ನಲ್ಲಿkoerನಲ್ಲಿ ದಾಖಲಿಸಲಾಯಿತು.ಚಹಾ ವಿರಾಮದ ಬಳಿಕ ಎರಡನೆಯ ಅವಧಿಯ ಪ್ರಾರಂಭ.ಈ ಅವಧಿಯಲ್ಲಿ ರಂಗಧಾಮಪ್ಪ ಸರ್ ರವರು ಎಸ್.ಟಿ.ಎಫ್.ನ ಮಹತ್ವದ ಕುರಿತಾಗಿ ವಿವರಿಸುತ್ತಾ, ತಂತ್ರಜ್ಞಾನ ಬಳಕೆಯ ಕೌಶಲವನ್ನು ಹೆಚ್ಚಿಸುವಲ್ಲಿ ,ಮಾಹಿತಿ ಸಂಗ್ರಹಿಸುವ ಸಾಮರ್ಥವನ್ನು ಬೆಳೆಸುವಲ್ಲಿ,ಸಮಾಜವಿಜ್ಞಾನ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ,ಶಿಕ್ಷಕರ ವೃತ್ತಿಪರತೆಯನ್ನು ಹೆಚ್ಚಿಸಿ ಶಿಕ್ಷಕರನ್ನು ಕ್ರಿಯಾಶೀಲರನ್ನಾಗಿಸುವಲ್ಲಿ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಎಸ್.ಟಿ.ಎಫ್ ನ ಪ್ರಾಮುಖ್ಯತೆ ಹಾಗೂ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು, ಕಲಿಕೆಯನ್ನು ತರಗತಿಯ ಆಚೆಗೂ ವಿಸ್ತರಿಸುವುದು,ಮಕ್ಕಳನ್ನು ಕಂಠಪಾಠದಿಂದ ಮುಕ್ತಗೊಳಿಸುವುದು ಇತ್ಯಾದಿ ಎನ್.ಸಿ.ಎಫ್.೨೦೦೫ ರ ಗುರಿಗಳನ್ನು ಈಡೇರಿಸುವಲ್ಲಿ STFನ ಅಗತ್ಯತೆಗಳನ್ನು ಮನದಟ್ಟು ಮಾಡಿದರು. ಈ ತರಬೇತಿ ಕೇವಲ ಕಂಪ್ಯೂಟರ್ ಸಾಕ್ಷರತೆಗಾಗಿ ಅಲ್ಲ ,ಕೌಶಲಗಳಿಸಲು .ಆದ್ದರಿಂದ ಎಲ್ಲರೂ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕೆಂಬ ಕಿವಿಮಾತನ್ನು ಹೇಳಿದರು.ಎಡುಬುಂಟುವನ್ನು ಪರಿಚಯಿಸುತ್ತಾ ಇದು ವೈರಸ್ ಮುಕ್ತ, ಉಚಿತ,೩೦೦೦ಕ್ಕಿಂತಲೂ ಹೆಚ್ಚುAplication ಗಳನ್ನು ಹೊಂದಿದೆ,ಹೊಸಹೊಸ operating systemಗಳನ್ನುಸೇರಿಸಿಕೊಳ್ಳುತ್ತಿದೆ,ಪ್ರಪಂಚದ ಎಲ್ಲಾ ಕಡೆ ಮತ್ತು ವೇಗವಾಗಿ ಬಳಕೆಮಾಡಬಹುದಾದ ವೈಶಿಷ್ಟ್ಯತೆ ಹೊಂದಿದೆ ಎಂದರು.ನಂತರದ ಅವಧಿಯಲ್ಲಿ ಮಹಾಬಲೇಶ್ವರ ಭಾಗ್ವತ್ ಇಂಗ್ಲಿಷ್ ,ಕನ್ನಡ ಟೈಪಿಂಗ್ ಮಾಡುವ ವಿಧಾನ ಹಾಗೂ ಹಂತಗಳನ್ನು ತಿಳಿಸಿಕೊಟ್ಟರು.Folder create ಮಾಡುವುದು,ಹೆಸರಿಸುವುದು,file save ಮಾಡುವುದು,save as ,desktop ಅಥವಾ placesನಲ್ಲಿ save ಮಾಡುವುದು, ಕನ್ನಡ ಟೈಪಿಂಗ್ ನಲ್ಲಿ ಅಕ್ಷರಗಳ ಬಳಕೆಗಾಗಿ KOER ನ ಸಹಾಯ ಪಡೆಯುವುದು ಇತ್ಯಾದಿಗಳನ್ನು ತಿಳಿದುಕೊಳ್ಳಲಾಯಿತು.ಊಟದ ವಿರಾಮದ ಬಳಿಕ ಟೈಪಿಂಗ್ ಮಾಡುವ ಕ್ರಮ,document save ಮಾಡುವುದು , Internetಗೆ ಪ್ರವೇಶ ಮಾಡುವುದು,Inbox ನಲ್ಲಿ ನ message ,file, photo, ಚಿತ್ರಗಳನ್ನು ನೋಡುವುದು, ,reply ಮಾಡುವುದು,forward ಮಾಡುವುದು,compose ಮಾಡುವುದು , compose ನಲ್ಲಿ ವಿಳಾಸ set ಮಾಡುವುದು,ಬದಲಾಯಿಸುವುದು,sign out ಮಾಡುವುದು ಇತ್ಯಾದಿಗಳ ಕುರಿತು ಶ್ರೀ ಪ್ರದೀಪ್ ರವರು ಮಾಹಿತಿ ನೀಡಿದರು,ಕಲಿಕೆ ದೃಢ ಪಟ್ಟ ಬಳಿಕ ಚಹಾ ವಿರಾಮ.ತದನಂತರ ಅಂತರ್ಜಾಲದಲ್ಲಿ ಸಂಪನ್ಮೂಲಗಳನ್ನು, ಚಿತ್ರಗಳನ್ನು ಹುಡುಕುವುದು ಮತ್ತು download ಮಾಡುವುದು,save ಮಾಡುವುದು,copyಮಾಡಿ ಬೇಕಾದ ದಾಖಲೆಗಳೊಂದಿಗೆ ಚಿತ್ರಗಳನ್ನು paste ಮಾಡುವುದು ಇತ್ಯಾದಿಗಳನ್ನು ಕಲಿಯಲಾಯಿತು.ಒಟ್ಟಿನಲ್ಲಿ ಹೇಳುವುದಾದರೆ ಸಂಪನ್ಮೂಲ ವ್ಯಕ್ತಿಗಳೆಲ್ಲರೂ ಸೇರಿ ಕಲಿಕಾರ್ಥಿಗಳತ್ತ ವಯಕ್ತಿಕ ಗಮನ ನೀಡಿ ಕಲಿಸುತ್ತಿರುವ ಈ ತರಬೇತಿಯಲ್ಲಿ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ತೊಡಗಿಸಿ ಕೊಂಡಿರುವುದು ತರಬೇತಿಯ ಅನಿವಾರ್ಯತೆ ಹಾಗೂ ಸಫಲತೆಗೆ ಸಾಕ್ಷಿಯಾಗಿತ್ತು.ವರದಿ:ಶಾಲಿನಿ ಎನ್. ಶೆಟ್ಟಿ ,ಸ.ಸಂ.ಪ್ರೌ.ಶಾಲೆ, ಅಜ್ಜರಕಾಡು.ಉಡುಪಿ'


2 ನೇ ದಿನ,ದಿನಾಂಕ:17/12/2013 ಉಡುಪಿ ಜಿಲ್ಲಾ ಸಮಾಜವಿಜ್ಞಾನ ಶಿಕ್ಷಕರ ಎರಡನೇ ತಂಡದ ಎಸ್.ಟಿ.ಎಫ್ ತರಬೇತಿಯ ಎರಡನೇಯ ದಿನದ ವರದಿ ದಿನಾಂಕ:17/12/2013 ಎಸ್.ಟಿ.ಎಫ್ ತರಬೇತಿಯ ಸಂಯೋಜಕರು,ಡಯಟ್ ನ ಹಿರಿಯ ಉಪನ್ಯಾಸಕರು ಆಗಿರುವ ಶ್ರೀಯುತ ರಂಗಧಾಮಪ್ಪರವರಿಂದ ಸ್ವಾಗತದೊಂದಿಗೆ ಎರಡನೇ ದಿನದ ತರಬೇತಿ ಪ್ರಾರಂಭಗೊಂಡಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಸದಾನಂದ ಬೈಂದೂರರವರ ಚಿಂತನ ಡಾ.ಸುಕುಮಾರ ಗೌಡರವರ ಲೇಖನ ಮಗು ಶಿಕ್ಷಕರಿಗೆ ಬರೆದಂತ "ಗುರುವಿಗೊಂದು ಮನವಿ" ಆಧರಿಸಿದ್ದು ಎಲ್ಲರನ್ನು ಚಿಂತನೆಗೆ ಹಚ್ಚಿತು. ತದನಂತರದಲ್ಲಿ ಶಿಕ್ಷಕಿ ಶ್ರೀಮತಿ ಶಾಲಿನಿ ಶೆಟ್ಟಿ ಯವರು ಮೊದಲನೆ ದಿನದ ತರಬೇತಿಯ ಸಮಗ್ರ ಮಾಹಿತಿಯನ್ನು ಚಾಚು ತಪ್ಪದೆ ವರದಿ ರೂಪದಲ್ಲಿ ಮಂಡಿಸಿದರು. ವರದಿಯ ನಂತರದಲ್ಲಿ ಶ್ರೀ ರಂಗಧಾಮಪ್ಪ ಸರ್ ರವರು ಮನೋನಕ್ಷೆ ತಯಾರಿ ಹಾಗೂ ನಾಲ್ಕಾರು ಮನೋನಕ್ಷೆಗಳನ್ನು ಹೈಪರ್ ಲಿಂಕ್ ಮಾಡುವುದಕ್ಕಾಗಿ ಶಿಕ್ಷಕರನ್ನು ಹತ್ತು ಗುಂಪುಗಳನ್ನಾಗಿ ಮಾಡಿ ೮ನೇ ತರಗತಿಯ ಸಮಾಜವಿಜ್ಞಾನದ ೧೦ ಪಾಠಗಳನ್ನು ಹಂಚಿಕೆ ಮಾಡಿದರು.ಸಂಪನ್ಮೂಲ ಶಿಕ್ಷಕರಾದ ಶ್ರೀ ಮಹಾಬಲೇಶ್ವರ ಭಾಗವತರವರು ಸ್ಥಳೀಯ ಸರಕಾರ ಪಾಠವನ್ನು ತೆಗೆದುಕೊಂಡು ಹಲವು ಮನೋನಕ್ಷೆಗಳನ್ನು ತಯಾರಿಸಿ ಹೈಪರ್ ಲಿಂಕ್ ಮಾಡಿ,ನಾವೂ ಕೂಡ ಮಾಡುವಂತೆ ಮಾಡಿಸಿದರು. ಎಲ್ಲಾ ಶಿಕ್ಷಕರು ತಾವು ಮಾಡಿದ ಸ್ಥಳೀಯ ಸರ್ಕಾರದ ಮನೋನಕ್ಷೆಗಳನ್ನು ಶ್ರೀರಂಗಧಾಮಪ್ಪ ಸರ್ ರವರಿಗೆ ಮೇಲ್ ಮಾಡಿದರು.ಚಹ ವಿರಾಮದ ನಂತರ ಅದೇ ಪಾಠಕ್ಕೆ ಸಂಬಂಧಪಟ್ಟ ಹಾಗೆ ನಾಲ್ಕಾರು ಮನೋನಕ್ಷೆಗಳನ್ನು ತಯಾರಿಸಿ ಹೈಪರ್ಲಿಂಕ್ ಮಾಡುವ ಬಗ್ಗೆ ಹಾಗು ಲಿಂಕ್ ತೆಗೆಯುವ ವಿಧಾನವನ್ನು ತಿಳಿಸಿಕೊಟ್ಟರು.ಭೋಜನ ವಿರಾಮದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸದಾನಂದರವರು ಕೋಯರ್ ಅಂದರೆ ಕರ್ನಾಟಕ ಮುಕ್ತ ವಿಷಯ ಸಂಪನ್ಮೂಲಗಳು ಇದರ ಬಗ್ಗೆ ವಿವರಣಾತ್ಮಕವಾದ ಮಾಹಿತಿಯನ್ನು ತಿಳಿಸಿಕೊಟ್ಟರು.ಕೊಯರ್ ನಲ್ಲಿರುವ ವಿಷಯಸಂಪನ್ಮೂಲಗಳನ್ನು ಶಿಕ್ಷಕರು ಬೋಧನೆಯಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟರು.ಶಿಕ್ಷಕರು ಕೊಯರ್ ನಲ್ಲಿ ಬೇರೆ ಬೇರೆ ರಾಜ್ಯಗಳ ಪಠ್ಯವಿಷಯಗಳನ್ನು, ೮ ಹಾಗು ೯ನೇ ತರಗತಿಯ ಪಾಠಗಳ ಬಗೆಗಿರುವ ಮಾಹಿತಿಯ ಹುಡುಕಾಟ ನಡೆಸಿದರು. ಮಧ್ಯಾಹ್ನದ ಚಹ ವಿರಾಮದ ನಂತರದಲ್ಲಿ ಶಿಕ್ಷಕರು ಫ್ರಿಮೈಂಡ್ ನಲ್ಲಿ ಕನ್ನಡ ಟೈಪಿಂಗ್ ಮಾಡುವುದನ್ನುನ ಕಲಿತು, ಆರಿಸಿಕೊಂಡಂತ ಪಾಠವಿಷಯಗಳ ಕುರಿತು ಮನೋನಕ್ಷೆಗಳನ್ನು ತಯಾರಿಸುವಲ್ಲಿನ ತಲ್ಲೀನತೆಯು ಎರಡನೇಯ ದಿನದ ತರಬೇತಿಯ ಸಫಲತೆಯನ್ನು ಸೂಚ್ಯವಾಗಿ ತಿಳಿಸಿತ್ತು. ವರದಿ ಶ್ರೀಮತಿ ಜ್ಯೋತಿ,ಸಹಶಿಕ್ಷಕಿ ಸ.ಪ.ಪೂ.ಕಾಲೇಜು,ಶಂಕರನಾರಾಯಣ.ಕುಂದಾಪುರ


'3ನೇ ದಿನ,ದಿನಾಂಕ:18/12/2013' ಉಡುಪಿ ಜಿಲ್ಲಾ ಸಮಾಜವಿಜ್ಞಾನ ಶಿಕ್ಷಕರ ಎರಡನೇ ತಂಡದ ಎಸ್.ಟಿ.ಎಫ್ ತರಬೇತಿಯ ಮೂರನೇ ಶುಭದಿನದ ಕಾರ್ಯಾಗಾರಕ್ಕೆ ನಮ್ಮ ಎಲ್ಲ ಶಿಬಿರಾರ್ಥಿಗಳನ್ನು ಪ್ರೀತಿಪೂರ್ವಕವಾಗಿ ಸಂಪನ್ಮೂಲ ವ್ಯಕ್ತಿಗಳಾದ ಮಹಾಬಲೇಶ್ವರ ಭಾಗ್ವತ್ ಸ್ವಾಗತಿಸಿಕೊಂಡರು. ತದನಂತರ ಮುಂಜಾನೆ ಚಿಂತನೆಗೆ ಹಚ್ಚಿಸುವ ಚಿಂತನೆಯನ್ನು ಶ್ರೀ ವಿನಾಯಕ ನಾಯಕ್ ಸ.ಪ್ರೌ.ಶಾಲೆ ರೆಂಜಾಳ ಮಂಡಿಸಿದರು.ಚಿಂತನೆಯಲ್ಲಿ ಅಂತರಾಷ್ಟ್ರಿಯತೆಗಾಗಿ ಶಿಕ್ಷಣ ವಿಷಯವನ್ನು ಎತ್ತಿಕೊಂಡು ಯುದ್ಧಗಳು ಮನುಷ್ಯರ ಮನಸ್ಸಿನಲ್ಲಿ ಪ್ರಾರಂಭವಾಗುವುದರಿಂದ ಶಾಂತಿಯ ರಕ್ಷಣೆಯು ಮನುಷ್ಯರ ಮನಸ್ಸಿನಲ್ಲಿಯೇ ರಚನೆಯಾಗಬೇಕು ಎನ್ನುವ UNSCEO ದ ಹೇಳಿಕೆಯನ್ನು ಪ್ರಸ್ತಾವಿಸಿ ಸಂಕುಚಿತ ರಾಷ್ಟ್ರೀಯತೆ ಅವಶ್ಯಕವೇ ಎನ್ನುವ ಪ್ರಶ್ನೆಯನ್ನು ನಮ್ಮ ಮುಂದೆ ಮಂಡಿಸಿ ಅಂತರಾಷ್ಡ್ರೀಯ ತಿಳುವಳಿಕೆ ಅವಶ್ಯಕ ಎನ್ನುವುದನ್ನು ತಿಳಿಸಿದರು.ತದನಂತರ ಶ್ರೀಮತಿ ಜ್ಯೋತಿ ಸ.ಶಿ.ಸ.ಪ.ಪೂ.ಕಾಲೇಜು ಶಂಕರನಾರಾಯಣ ಇವರು ದಿನಾಂಕ 17/12/2013ರ ಸಮಗ್ರವಾದ ವರದಿಯನ್ನು ಮಂಡಿಸಿದರು. ನಂತರ ಭಾಗ್ವತ್ ಇವರು karnataka education.org.in ಬಗ್ಗೆ ಮಾಹಿತಿ ನೀಡುತ್ತಾ ಇದು ನಮ್ಮ ನೆಚ್ಚಿನ ಮನೆಯಾಗಬೇಕು koer ನಮ್ಮ ನೆಚ್ಚಿನ ಸಂಪನ್ಮೂಲ ಕ್ಷೇತ್ರವಾಗಬೇಕು. karnataka education.org.in ಇದು ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದರಲ್ಲಿ home page ನಲ್ಲಿರುವ ಪ್ರತಿಯೊಂದು ವಿಷಯದ ಬಗ್ಗೆ ಮಾಹಿತಿ ನೀಡಿದರು.koer -resource-ವಿಷಯದ ಮಾಹಿತಿ , programme-ಇಲಾಖೆಯ ಕಾರ್ಯಕ್ರಮಗಳು teachers opinion -ಶಿಕ್ಷಕರ ಅನಿಸಿಕೆ ,ಜೊತೆಗೆ dietwiki,schoolwiki,blogs,forums,circulers,media ಇದರ ಬಗ್ಗೆ ಮಾಹಿತಿ ನೀಡಿದರು.NCF-2005ರ ಪ್ರಕಾರ ಶಿಕ್ಷಕರು ಅನುಕೂಲಿಸುವವರು, ಕಾರಣ ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಲು koer ನ ಅಗತ್ಯತೆ ಬಗ್ಗೆ & koer ವಿಶೇಷತೆ ತಿಳಿಸಿ ಇದರಲ್ಲಿ ಅನೇಕ ರೀತಿಯ ಸಂಪನ್ಮೂಲಗಳನ್ನ್ನು ಒಂದೇ ವೇದಿಕೆಯಲ್ಲಿ ಸಿಗುತ್ತದೆ ಎನ್ನುವುದನ್ನು ಪ್ರಾಯೋಗಿಕವಾಗಿ ತಿಳಿಸಿದರು.ತದನಂತರ ನಾವು ರಚಿಸುವ ಸಂಪನ್ಮೂಲ ಸಾಹಿತ್ಯಕ್ಕೆ ಸಹಾಯಕವಾಗಲು koer ಬಳಸಿ ವಿಜಯನಗರ &ಬಹಮನಿ ಸಾಮ್ರಾಜ್ಯದ ಉದಾಹರಣೆ ನೀಡಿದರು.ಸಾಹಿತ್ಯ ರಚನೆಯ ಎಲ್ಲಾ ಹಂತಗಳನ್ನು ವಿವರವಾಗಿ ತಿಳಿಸಿ ಅದರಲ್ಲಿ ಸಮುದಾಯ ಯೋಜನೆಯಲ್ಲಿ, ಸಮುದಾಯದ ಜೊತೆ ಮಗು ಸೇರಿ ಸೇರಿಕೊಂಡು ಹೇಗೆ ಯೋಜನೆಯನ್ನು ತಯಾರಿಸಬಹುದು ಎನ್ನುವುದನ್ನು ಉದಾಹರಣೆ ಸಹಿತ ವಿವರಿಸಿದರು. ಜೊತೆಗೆ ನಮ್ಮ ಸಾಹಿತ್ಯ ರಚನೆಗೆ ಪೂರಕವಾಗಿ ಕ್ರಾಂತಿಗಳು &ಸಮಾನತೆ ಅಧ್ಯಾಯದ ಉದಾಹರಣೆ ನೀಡಿದರು.ತದನಂತರ hyperlink ವಿವರವಾದ ಮಾಹಿತಿ ನೀಡಿದರು.hyperlink ಉದಾಹರಣೆಯಾಗಿ ಕಲ್ಯಾಣಿ ಚಾಲುಕ್ಯರ ಮಾಹಿತಿಯನ್ನು ಆಯ್ಕೆ ಮಾಡಿಕೊಂಡು ವೆಬ್ ಲಿಂಕ್ ಮಾಹಿತಿ ನೀಡಿದರು.ತದನಂತರ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.ಟೀ ವಿರಾಮದ ನಂತರ ಸದಾನಂದ ಬೈಂದೂರು ಸಾಹಿತ್ಯ ರಚನೆಗೆ ಸಂಬಂದಿಸಿದಂತೆ ಮತ್ತಷ್ಟು ಮಾಹಿತಿಯನ್ನು koer ಬಳಸಿ ನೀಡಿದರು ಜೊತೆಗೆ ಕೇರಳದ ಪಠ್ಯಪುಸ್ತಕ/ಅಲ್ಲಿಯ ಮೌಲ್ಯಮಾಪನದ ಕುರಿತು ಮಾಹಿತಿ ಒದಗಿಸಿದರು.ತದನಂತರ ಎಲ್ಲಾ ಶಿಬಿರಾರ್ಥಿಗಳು ಸಾಹಿತ್ಯ ರಚನೆಯಲ್ಲಿ ಗಾಢವಾಗಿ ತೊಡಗಿಕೊಂಡರು.ಊಟದವಿರಾಮದ ನಂತರ ಶಿಬಿರಾರ್ಥಿಗಳು ಮತ್ತಷ್ಟು ಸಂಪನ್ಮೂಲವನ್ನು ರಚಿಸಿದರು.ನಂತರ ಭಾಗ್ವತ್&ಸದಾನಂದಬೈಂದೂರು Zimpಮೂಲಕphoto ಹಿಗ್ಗಿಸುವುದು,ಕುಗ್ಗಿಸುವುದು,ಬದಲಾಯಿಸುವುದು,ಬಣ್ಣಬದಲಾಯಿಸುವುದು ಹೇಗೆ ಎನ್ನುವುದನ್ನು ತಿಳಿಸಿದರು.ಅದಕ್ಕೆ ಒಬ್ಬರು ಶಿಬಿರಾರ್ಥಿ ಶಿಕ್ಷಕರ ಭಾವಚಿತ್ರವನ್ನು ಮಾದರಿಯನ್ನು ತೆಗೆದುಕೊಳ್ಳಲಾಯಿತು.ತದನಂತರ ನಮ್ಮ ಸಾಹಿತ್ಯಕ್ಕೆ ಪೂರಕವಾಗಿ ಬದಲಾಯಿಸಿದ photo ಗಳನ್ನುಡಯಟ್ ನೋಡಲ್ಅಧಿಕಾರಿ ಶ್ರೀರಂಗಧಾಮಪ್ಪ ಸರ್ mailಗೆ ಶಿಬಿರಾರ್ಥಿಗಳು ಕಳುಹಿಸಿದರು.ಟೀ ವಿರಾಮದ ನಂತರ ಶ್ರೀ ರಂಗಧಾಮಪ್ಪ ಸರ್ ಸಿ.ಸಿ.ಇ ಬಗ್ಗೆ ಶಿಬಿರಾರ್ಥಿಗಳ ಜೊತೆ ಚರ್ಚಿಸುವುದರ ಮೂಲಕ CCE ಮಾಹಿತಿ ನೀಡಿದರು.ನಿರಂತರ ಮೌಲ್ಯಮಾಪನ ಎಂದರೆ ಕಲಿಕೆ &ಬೆಳವಣಿಗೆ ಒಟ್ಟಿಗೆ ಸಾಗುವ ಪ್ರಕ್ರಿಯೆ.ವ್ಯಾಪಕ ಮೌಲ್ಯಮಾಪನ ಎಂದರೆ ಮಗುವಿನ ದೈಹಿಕ,ಬೌದ್ಧಿಕ,ಮಾನವಿಕ,ಇತ್ಯಾದಿಗಳ ಬೆಳವಣಿಗೆ ಎಂದು ತಿಳಿಸಿದರು.ಶಿಭಿರಾರ್ಥಿಗಳು ರಚಿಸುವ ಸಂಪನ್ಮೂಲದಲ್ಲಿ ಬರುವ ಚಟುವಟಿಕೆಗಳು CCE ಆಧಾರಿತವಾಗಿರುವುದರ ಬಗ್ಗೆ ತಿಳಿಸಿದರು.ಚಟುವಟಕೆಗಳು ಜ್ಞಾನ &ತೊಡಗಿಸಿಕೊಳ್ಳುವಿಕೆ ಒಳಗೊಂಡಿರುತ್ತದೆ ಎಂಬುದನ್ನು ತಿಳಿಸಿದರು. ವಿವಿಧ ಮಾದರಿ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು.ಒಟ್ಟಾರೆ ಮೂರನೆ ದಿನದ ಕಾರ್ಯಾಗಾರ ನಮ್ಮನ್ನು ಸಂಪದ್ಭರಿತ ಶಿಕ್ಷಕರನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಿದೆ. ವರದಿ ಶ್ರೀ ಉದಯ ಕುಮಾರ ಶೆಟ್ಟಿ ಸ.ಶಿ. ಸ.ಪೌ.ಶಾಲೆ ಆಲೂರು, ಬೈಂದೂರು ವಲಯಉಡುಪಿ ಜಿಲ್ಲೆ


4ನೇ ದಿನ ದಿನಾಂಕ:19/12/2013' ಸಮಾಜ ವಿಜ್ಞಾನ ಪಾಠ ವಿಷಯವನ್ನು ಗಣಕ ಯಂತ್ರದ ಸಹಾಯದಿಂದ ಬೋಧಿಸುವ ಕುರಿತು ತರಬೇತಿ ಕಾಯ೯ಕ್ರಮದ ನಾಲ್ಕನೇ ದಿನದ ವರದಿ ಮಂಡಿಸಲು ಬಯಸುತ್ತೇನೆ."ಮುಖವನ್ನು ನೋಡಲು ಕನ್ನಡಿ ಎಷ್ಟು ಮುಖ್ಯವೋ,ಹಿಂದಿನ ಕಾರ್ಯದ ಪಕ್ಷಿನೋಟಕ್ಕಾಗಿ ವರದಿಯು ಅಷ್ಟೇ ಮುಖ್ಯ"- ಎಂದು ಬಲ್ಲವರು ಹೇಳುತ್ತಾರೆ. ಆ ನಿಟ್ಟಿನಲ್ಲಿ ನನ್ನ ಕಿರುಪ್ರಯತ್ನ ಸಾಗಿದೆ.ಪೂರ್ವಾಹ್ನ 9.3೦ಕ್ಕೆ ಉಡುಪಿಯ ಡಯಟ್ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಶಿಕ್ಷಕ ವೃಂದದವರು ಸೇರಿದೆವು.ಡಯಟ್ ಹಿರಿಯ ಉಪನ್ಯಾಸಕರಾದ ಶ್ರೀ ರಂಗಧಾಮಪ್ಪರವರು,ಸಂಪನ್ಮೂಲವ್ಯಕ್ತಿಗಳಾದ ಶ್ರೀಮಹಾಬಲೇಶ್ವರ ಭಾಗ್ವತ್ ಹಾಗೂ ಶ್ರೀಸದಾನಂದ್ ಬೈಂದೂರ್ ಇವರು ಹಾಜರಿದ್ದರು.ಪ್ರಾರಂಭದಲ್ಲಿ ಸ.ಪ.ಪೂ.ಕಾಲೇಜು ಹಾಲಾಡಿ ಇಲ್ಲಿನ ಸಹಶಿಕ್ಷಕಿ ಶ್ರೀಮತಿ ಶ್ರೀಲತ ರವರು"ಚಿಂತನ"ಕಾರ್ಯನಡೆಸಿದರು.ಇದರಲ್ಲಿ ಅವರು"ಭಾರತದ ಭವಿತವ್ಯವು ವರ್ಗಕೋಣೆಯಲ್ಲಿ ರೂಪಿತವಾಗುತ್ತದೆ"-ಎಂಬ ಶೀರ್ಷಿಕೆಯಡಿಯಲ್ಲಿ ೧೯೬೪ ರ ಕೊಠಾರಿ ಆಯೋಗ ಶಿಕ್ಷಣ ಕ್ಷೇತ್ರದಲ್ಲಿ ತಿಳಿಸಿದ ವಿಷಯ,ಆಳವಡಿಸಿದ ರೀತಿಯನ್ನು ತಿಳಿಸಿದರು.ಹಿಟ್ಲರ ನೀತಿಯನ್ನು ತಿಳಿಸುತ್ತಾ, ಬಿ.ಇಡಿ ಅಧ್ಯಯನದ ಸಮಯದಲ್ಲಿ ಉಪನ್ಯಾಸಕರಾದ ಶ್ರೀಸೂರ್ಯನಾರಾಯಣ ಇವರುTeachers are Social Engineers”ಆಗಬೇಕೆಂದು ಹೇಳುತಿದ್ದರು,ಈ ರೀತಿ ನಾವು ಗಣಕ ಯಂತ್ರದ ಸಹಾಯದಿಂದ ಪ್ರಯತ್ನಿಸುವ ಎಂದು ತಿಳಿಸಿದರು. ಸ.ಪ್ರೌಢ.ಶಾಲೆ.ಆಲೂರು ಬೈಂದೂರು ವಲಯ ,ಇಲ್ಲಿನ ಸಹ ಶಿಕ್ಷಕರಾದ ಶ್ರೀ ಉದಯ ಶೆಟ್ಟಿ ಯವರು ನಿನ್ನೆಯ ತರಬೇತಿ ಕುರಿತು ವರದಿಯನ್ನು ಮಂಡಿಸಿದರು.ನಂತರ ಶ್ರೀರಂಗಧಾಮಪ್ಪರವರು c.c.e.ಬೋಧನೆಯ ವಿಧಾನ,ಅದರಅಗತ್ಯತೆಯ ಕುರಿತು ತಿಳಿಸಿದರು.ಹಿಂದಿನ ಬೋಧನಾ ಕ್ರಮದಲ್ಲಿ ವಿದ್ಯಾರ್ಥಿಗಳ ಆಲೋಚನೆಗಳು ಏಕಮಖವಾಗಿ ಸಾಗುತ್ತಿತ್ತು..ಆದರೆ c.c.e. ಮೂಲಕ ಬೋಧಿಸಿದಾಗ ವಿದ್ಯಾರ್ಥಿಗಳ ಆಲೋಚನೆಗಳು ಬಹುಮುಖವಾಗಿ ಸಾಗುತ್ತದೆ ಎಂದರು. ಅದಕ್ಕೆ ಉದಾಹರಣೆ ಸಹಿತ ವಿಷಯ ತಿಳಿಸಿದರು.ಅಲ್ಲದೆ R.T.I.ಕಾನೂನಿನ ಬಗ್ಗೆ ಮಾಹಿತಿ ನೀಡಿ ನಮ್ಮ ಭವಿಷ್ಯದಲ್ಲಿ ನಾವು ಹೇಗೆ ಬೋಧಿಸಬೇಕೆಂಬ ಕಿವಿ ಮಾತನ್ನು ಹೇಳಿದರು. ಶ್ರೀ ಮಹಾಬಲೇಶ್ವರ ಭಾಗ್ವತ್ ರವರು ಒಬಂಟುವಿನಲ್ಲಿ Without Internet ನಲ್ಲಿ ಸಮಾಜ ವಿಜ್ಞಾನ ವಿಷಯಕ್ಕೆ ಉಪಯೋಗಿಸುವ Tools ಗಳ ಬಗ್ಗೆ ತಿಳಿಸಿದರು.ಮುಖ್ಯವಾಗಿ ಮೂರು Toolsಗಳಿವೆ.ಅವು ಯಾವುವೆಂದರೆ;1.Kgeograpy 2.Marble 3.Stellarium ಎಂಬುದನ್ನು ತಿಳಿಸಿ ನಂತರ Kgeography&Marbleಇವುಗಳ ಬಳಕೆಯನ್ನು ಎಲ್ಲರೂ ಪ್ರಾಯೋಗಿಕವಾಗಿ ನಡೆಸುವಂತೆ ಮಾಡಿದರು. ಸಂಪನ್ಮೂಲ ವ್ಯಕ್ತಿಗಳು ಸಹಕರಿಸಿದರು.ಉಪಾಹಾರದ ನಂತರ ಶ್ರೀ ಸದಾನಂದ ಸರ್ ರವರು ಪಾಠ ಯೋಜನೆ ರಚನಾ ಸಮಯದಲ್ಲಿ ಚಟುವಟಿಕೆಗಳ ಬಗ್ಗೆ ಬರೆಯುವಾಗ ಅನುಸರಿಸಬೇಕಾದ ಹಂತಗಳನ್ನು ವಿವರಿಸಿದರು. ಶಿಬಿರಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. ಅಂತೆಯೆ ಅಕ್ಷಾಂಶಗಳು,ರೇಖಾಂಶಗಳ ನೈಜ ಕಲ್ಪನೆಯನ್ನು ಕಂಪ್ಯೂ ಟರ್ ಹಾಗು ಪ್ರಾಜೆಕ್ಟರ್ ಮೂಲಕ ವಿದ್ಯಾರ್ಥಿಗಳಿಗೆ ಹೇಗೆ ತಿಳಿಸಬಹುದು ಎಂಬುದನ್ನು ಶಿಬಿರಾರ್ಥಿ ಶಿಕ್ಷಕರಾದ ಶ್ರೀವಿನಾಯಕ ನಾಯಕ ರೆಂಜಾಳ ರವರು ತಿಳಿಸದರು..ಬಳಿಕ ೯ನೇ ತರಗತಿಯ ಪಾಠ ಪುಸ್ತಕದಲ್ಲಿಯ ಕರ್ನಾಟಕ ರಾಜ್ಯದ ಅಕ್ಷಾಂಶ ,ರೇಖಾಂಶ,ದ ಮುದ್ರಣದ ದೋಷಗಳ ಬಗ್ಗೆ ಶ್ರೀಮತಿ ಜಯ ತಂತ್ರಿಯವರು ಕೇಳಿದ ಪ್ರಶ್ನೆಯನ್ನು ಶ್ರೀ ಮಹಾಬಲೇಶ್ವರರು ತಿಳಿಸಿದಾಗ ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಬಿರಾರ್ಥಿಗಳ ಸಹಿತ ಚರ್ಚಿಸಿ, ಒಮ್ಮತದ ಅಭಿಪ್ರಾಯಕ್ಕೆ ಬಂದೆವು.ಅಪರಾಹ್ನದ ನಂತರ ನಮ್ಮ ಸಂಪನ್ಮೂಲ ಸಾಹಿತ್ಯ ತಯಾರಿಯನ್ನು ನಡೆಸಿದೆವು.ಬಳಿಕ ಶ್ರೀಉದಯ ಶೆಟ್ಟಿ, , ಕರುಣಾಕರ ಶೆಟ್ಟಿ,,ವಿನಾಯಕ ನಾಯಕ್ ರವರ ಗುಂಪಿನಿಂದ ಉದಯ ಶೆಟ್ಟಿ, ಯವರು ಪ್ರಜಾಪ್ರಭುತ್ವ ಪಾಠ ಯೋಜನೆಯನ್ನು ಪ್ರೊಜೆಜೆಕ್ಟರ್ ಮೂಲಕ ತೋರಿಸಿ ಉತ್ತಮವಾಗಿ ವಿವರಿಸಿದರು.ಸಂಜೆಯ ಉಪಹಾರದ ನಂತರ ಶ್ರೀಪ್ರದೀಪ್ ರವರು Stellerium ಉಪಯೋಗಿಸಿ ಗ್ರಹ,ಆಕಾಶಕಾಯ,ಗ್ರಹಣದ ಸಮಯ,ಯಾವ ಸ್ಥಳದಲ್ಲಿ ಹೇಗೆ ಕಾಣುತ್ತದೆ.ಎಂಬುದನ್ನು ಪ್ರೋಜೆಕ್ಟರ್ ಮೂಲಕ ಉತ್ತಮವಾಗಿ ವಿವರಿಸಿದರು.ನಂತರ ನಾವೆಲ್ಲ ಪ್ರಾಯೋಗಿಕವಾಗಿ Stallerium ಬಳಸುವುದನ್ನು ಅಭ್ಯಾಸ ಮಾಡಿದೆವು.ಒಟ್ಟಿನಲ್ಲಿ ಈ ತರಬೇತಿ ಕಾರ್ಯವು ಬೋಧನಾ ವಿಧಾನವನ್ನು ಉತ್ತಮಗೊಳಿಸುವುದಲ್ಲದೆ. ,ವಿದ್ಯಾರ್ಥಿಗಳಿಗೆ ಪಾಠ ವಿಷಯವನ್ನು ಚಿತ್ರ ಸಹಿತವಾಗಿ ಮನದಟ್ಟು ಮಾಡಲು ಸುಲಭವಾಗುವುದು. "ಓರ್ವ ಶಿಕ್ಷಕ ,ಒಂದು ಪೆನ್ನು ,ಒಂದು ಪುಸ್ತಕ “-ಇಡೀ ಜಗತ್ತನ್ನೇ ಬದಲಾಯಿಸಬಹುದು- ಎಂಬ ಗಾದೆ ಮಾತಿತ್ತು. ಆದರೆ ಇಂತಹ ತರಬೇತಿಯಿಂದ ಅದನ್ನು ಹೀಗೆ ಬದಲಾಯಿಸಬಹುದು. ಓರ್ವ ಶಿಕ್ಷಕ, ಅಂತರ್ಜಾಲದ ಸಹಿತ ಗಣಕ ಯಂತ್ರದ ಮೂಲಕ ,ವೈಜ್ಞಾನಿಕ ಆಧಾರಿತ ಶಿಕ್ಷಣ ನೀಡಿ , ವಿದ್ಯಾರ್ಥಿಗಳನ್ನು ಸಂಪನ್ನ ಭಾವಿ ಪ್ರಜೆಗಳಾಗಿ ಬೆಳೆಸಬಹುದು -ಎಂಬ ಮನದಾಳದ ಮಾತಿನೊಂದಿಗೆ ನನ್ನ ವರದಿಗೆ ಪೂರ್ಣವಿರಾಮ ನೀಡುತ್ತೇನೆ. “ಸಹೃದಯಿ,ತಾಳ್ಮೆಯೊಂದಿಗೆ ನಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಾ ,ತರಬೇತಿ ಬೇಸರಿಸದಂತೆ ಮಾಡಿರುವ ಸಂಪನ್ಮೂಲ ವ್ಯಕ್ತಿಗಳಿಗೆ ನನ್ನ ಕೃತಜ್ಞತೆಗಳು . ವರದಿ-ಶ್ರೀಮತಿ ಜಯಾ ತಂತ್ರಿ. ಸ.ಶಿ.ಸರಕಾರಿ ಪ್ರೌಢಶಾಲೆ ಉದ್ಯಾವರ.ಉಡುಪಿ.


೫ನೇ ದಿನದ ತರಬೇತಿಯ ವರದಿ(ದಿನಾಂಕ ೨೦-೧೨-೨೦೧೩)

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್ ), ಉಡುಪಿ ಇಲ್ಲಿ ನಡೆಯುತ್ತಿರುವ ೨ನೇ ಹಂತದ ಎಸ್.ಟಿ.ಎಫ್. ತರಬೇತಿಯು ಕೊನೆಯ ಹಂತಕ್ಕೆ ಬಂದಿದ್ದು, ೫ನೇ ದಿನದ ತರಬೇತಿಯ ವರದಿಯನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.ದಿನದ ಆರಂಭದಲ್ಲಿ ಶ್ರೀ ಮಹಾಬಲೇಶ್ವರ ಭಾಗ್ವತ್ ರು ಶಿಬಿರಾರ್ಥಿಗಳಿಗೆ ಸ್ವಾಗತ ಕೋರಿದರು. ಸಹಶಿಕ್ಷಕರಾದ ಶ್ರೀರಾಜೇಶ್ ಬಂಗೇರ ಅವರು ಚಿಂತನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ೪ನೇ ದಿನದ ತರಬೇತಿಯ ಸವಿವರವಾದ ವರದಿಯನ್ನು ಶ್ರೀಮತಿ ಜಯಾ ತಂತ್ರಿಯವರು ವಾಚಿಸಿದರು. ನಂತರ ಶ್ರೀ ರಂಗಧಾಮಪ್ಪ, ಡಯಟ್ ನ ಹಿರಿಯ ಉಪನ್ಯಾಸಕರು ೯ನೇ ತರಗತಿಯ ಪಠ್ಯಪುಸ್ತಕದ ಕುರಿತು, ಬೋಧನೆಯ ಕುರಿತು ಶಿಕ್ಷಕರಿಗಿರಬಹುದಾದ ಸಂದೇಹಗಳನ್ನು ಕುರಿತು ಚರ್ಚಿಸಿದರು. ಬ್ರಹ್ಮಾವರ ಬಿ. ಆರ್. ಸಿ. ಕೇಂದ್ರದ ಶ್ರೀ ರಾಜೀವ ಶೆಟ್ಟಿ ಯವರು ಭೂಗೋಳಕ್ಕೆ ಸಂಬಂಧಿಸಿದ ಚಿತ್ರಗಳು, ವಿವರಣೆಗಳನ್ನು ಸಂಗ್ರಹಿಸುವ ಹವ್ಯಾಸ ಇಟ್ಟುಕೊಂಡಿದ್ದು, ಅದನ್ನು ಶ್ಲಾಘಿಸುತ್ತಾ ನಮಗೂ ಕೂಡ ಇಂತಹ ಹವ್ಯಾಸ ಬೆಳೆಸಿಕೊಳ್ಳುವಂತೆ ಸೂಚಿಸಿದರು. ಶಾಲಾ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸುವಲ್ಲಿ ಸಮಾಜ ವಿಜ್ಞಾನ ಶಿಕ್ಷಕನ ಪಾತ್ರ ಹಾಗೂ ಶಾಲಾ ಪ್ರವಾಸದ ಹಂತದಲ್ಲೂ ಕೂಡ ಸಮಾಜ ವಿಜ್ಞಾನ ಬೋಧನೆ ಮಾಡಲು ಅವಕಾಶವಿದೆ ಎಂದು ತಿಳಿಸಿದರು. ನಂತರ ಶಿಕ್ಷಕರಿಗೆ ತಮಗೆ ಕೊಟ್ಟಿರುವ ಸಂಪನ್ಮೂಲ ಸಂಗ್ರಹ ಣೆ ಕಾರ್ಯವನ್ನು ಪೂರ್ತಿಗೊಳಿಸಲು ಸಮಯ ನೀಡಲಾಯಿತು. ಸುಮಾರು ೧೧.೩೦ಕ್ಕೆ ಚಹಾ ಮತ್ತು ತಿಂಡಿ ತಿಂದೆವು.ಪುನ: ೧೧.೪೫ಕ್ಕೆ ಸಂಪನ್ಮೂಲ ಸಂಗ್ರಹಣೆಯ ಪ್ರಸ್ತುತಿ ಆರಂಭವಾಯಿತು. ಮೊದಲಿಗೆ ನಮ್ಮ ತಂಡದಿಂದ ದ್ವಾರಸಮುದ್ರದ ಹೊಯ್ಸಳರ ಬಗ್ಗೆ ಪ್ರಸ್ತುತಿ ನಡೆಯಿತು. ಇದರಲ್ಲಿ ಪ್ರತಿಯೊಂದು ಅಂಶದ ಬಗ್ಗೆ ಚರ್ಚೆ ನಡೆಸಲಾಯಿತು. ಕಲಿಕೆಯ ಉದ್ದೇಶಗಳು, ಯೋಜನೆಗಳನ್ನು ನೀಡುವುದರ ಬಗ್ಗೆ ಚರ್ಚಿಸಿ ಒಂದಷ್ಟು ತಿದ್ದುಪಡಿಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಯ್ತು. ಆಮೇಲೆ ಶ್ರೀ ರಂಗಧಾಮಪ್ಪ ಸರ್ ನಮ್ಮ ಸಂಪನ್ಮೂಲಗಳಿಗೆ ವೆಬ್ ಲಿಂಕ್ ಅಳವಡಿಸುವುದರ ಬಗ್ಗೆ ತಿಳಿಸಿ, ನಮ್ಮಿಂದ ಪ್ರಾಯೋಗಿಕವಾಗಿ ಮಾಡಿಸಿದರು. ಸುಮಾರು ೧.೪೫ರ ಹೊತ್ತಿಗೆ ಮಧ್ಯಾಹ್ನದ ಭೋಜನ ಮುಗಿಸಿದೆವು.ಊಟ ಮುಗಿಸಿ ಸುಮಾರು ೨.೧೦ ರ ಹೊತ್ತಿಗೆ ಎಲ್ಲರೂ ಕಂಪ್ಯೂ ಟರ್ ಲ್ಯಾಬಿನಲ್ಲಿ ಸೇರಿದೆವು. ಮೊದಲಿಗೆ ಸಂಪನ್ಮೂಲ ವ್ಯಕ್ತಿಗಳು ಪಿಕಾಸಾ Apps ಮೂಲಕ photo upload ಮಾಡುವುದು, share ಮಾಡಿಕೊಳ್ಳುವುದನ್ನು ಪ್ರಾಯೋಗಿಕವಾಗಿ ಮಾಡಿಸಿದರು. ಜೊತೆಗೆ ಸಂಬಂಧಿಸಿದ ಸಂಪನ್ಮೂಲಕ್ಕೆ link ಮಾಡುವುದನ್ನು ಮಾಡಿಸಿದರು. ಎಲ್ಲಾ ಗುಂಪುಗಳು ತಯಾರು ಮಾಡಿದ ಸಂಪನ್ಮೂಲಗಳನ್ನು socialsciencestf@googlegroups.com ಗೆ mail ಮಾಡಲು ತಿಳಿಸಿದರು.ಚಹಾ ವಿರಾಮದ ನಂತರ ಶ್ರೀ ಪ್ರದೀಪ್ ಶೆಟ್ಟಿ ಮತ್ತು ಶ್ರೀ ಮಹಾಬಲೇಶ್ವರ ಭಾಗವತರು&ಸದಾನಂದ ಸರ್ , video editing / mixing ಮಾಡುವುದನ್ನು ತಿಳಿಸಿಕೊಟ್ಟರು. Video clippingಗಳನ್ನು ಪ್ಲೇ ಮಾಡುವುದು, video ಮತ್ತು audioಗಳನ್ನು ಪ್ರತ್ಯೇಕಗೊಳಿಸುವುದು, cut ಮಾಡುವುದು, ವೀಡಿಯೋಗಳಿಗೆ ಬೇರೆ ಬೇರೆ ಧ್ವನಿಗಳನ್ನು ನೀಡುವುದನ್ನು ತಿಳಿಸಿದರು ಮತ್ತು ಶಿಕ್ಷಕರಿಂದ ಮಾಡಿಸಿದರು. ಈ ವೀಡಿಯೋ ಕ್ಲಿಪ್ ಗಳನ್ನು ಸಮಾಜ ವಿಜ್ಞಾನ ಪಾಠದಲ್ಲಿ ಹೇಗೆ ಬಳಸಬಹುದೆಂಬುದನ್ನು ಚರ್ಚಿಸಿದರು.ನಂತರ ವಿಡಿಯೊಗಳನ್ನು ಸೇರಿಸಿ ಒಂದು ಫೈಲ್ ಮಾಡುವುದು, ಒಬುಂಟು ಸಾಫ್ಟ್ ವೇರ್ ಬಳಸಿ ಅಂತರ್ಜಾಲದಲ್ಲಿ video download ಮಾಡುವುದನ್ನು ತೋರಿಸಿದರು. ಕೊನೆಯದಾಗಿ social science STF District Cascade Workshop Feedback Formನ್ನು ತುಂಬಲು ಶಿಬಿರಾರ್ಥಿಗಳಿಗೆ ಸಮಯ ನೀಡಿದರು. ಹೀಗೆ ೨ನೇ ಹಂತದ ಎಸ್.ಟಿ.ಎಫ್. ತರಬೇತಿಯು ಯಶಸ್ವಿಯಾಗಿ ಮುಕ್ತಾಯವಾಯಿತು. ವರದಿ: ಶ್ರೀಮತಿ ಅಮೃತಕಲಾ, ಸ.ಶಿ., ಸರಕಾರಿ ಪ್ರೌಢಶಾಲೆ, ಬೇಳೂರು, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ.