ಮಾನವರ ಮೇಲೆ ಪ್ರಾಕೃತಿಕ ಭೂ ಸ್ವರೂಪಗಳ ಪ್ರಭಾವ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೪:೫೦, ೬ ನವೆಂಬರ್ ೨೦೧೭ ರಂತೆ KOER admin (ಚರ್ಚೆ | ಕಾಣಿಕೆಗಳು) ಇವರಿಂದ (Text replacement - "|Flash]]</mm>" to "]]")
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Prakritika vibhagagalu manavara mele prakrutika bhoswarupagala prabhav1.mm

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಮಾನವ ಮತ್ತು ಪರಿಸರದ ಸಂಬಂಧ ಅನಾದಿ ಕಾಲದಿಂದ ಬಂದಿದೆ.ಪರಿಸರವಿಲ್ಲದೆ ಮಾನವನಿಲ್ಲ, ಮಾನವನಿಲ್ಲದೆ ಪರಿಸರವಿಲ್ಲ.ಮಾನವನ ವಾಸಸ್ಥಾನವಾದ ಭೂಮಿ ಅನೇಕ ಗೋಚರ ಮತ್ತು ಅಗೋಚರ ವಸ್ತುಗಳಿಂದ ಕೂಡಿದೆ. ಉದಾ:ನೆಲ,ಜಲ,ಮಣ್ಣು, ಗಾಳಿ,ಸಸ್ಯ, ಉಷ್ಣತೆ ಇತ್ಯಾದಿ. ಈ ಪರಿಸರ ಮಾನವ ಜೀವನದ ಎಲ್ಲಾ ಕ್ಷೇತ್ರಗಳ ಮೇಲೆ ಬೀರುವ ಪ್ರಭಾವದ ಬಗ್ಗೆ ತಿಳಿಸುವುದೇ ಪ್ರಸ್ತುತ ಪರಿಕಲ್ಪನೆಯ ಉದ್ದೇಶವಾಗಿದೆ.

ಪ್ರಮುಖ ಪರಿಕಲ್ಪನೆಗಳು #

ಮಾನವರ ಮೇಲೆ ಪ್ರಾಕೃತಿಕ ವಿಭಾಗಗಳ ಪ್ರಭಾವ

ಕಲಿಕೆಯ ಉದ್ದೇಶಗಳು

೧)ಮಾನವ ಮತ್ತು ಪರಿಸರದ ಸಂಬಂಧದ ಬಗ್ಗೆ ತಿಳಿಸುವುದು. ೨)ಪ್ರಾಕೃತಿಕ ಪರಿಸರ ಮಾನವ ಜೀವನದ ಅನೇಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ.. ಉದಾ:ಉದ್ಯೋಗಗಳ ಆಯ್ಕೆ ,ಆಹಾರ ಪದ್ಧತಿ, ಉಡುಪು ,ಆರೋಗ್ಯ , ಆಚಾರ ವಿಚಾರಗಳು ,ಸಂಪ್ರದಾಯಗಳ ,ಜನಸಂಖ್ಯಾ ಪ್ರಮಾಣ,

  ಅಭಿವೃದ್ಧಿ ಹಾಗೂ ಅನಭಿವೃದ್ಧಿ ಇತ್ಯಾದಿ. ಈ ಅಂಶಗಳ ಬಗ್ಗೆ  ವಿಮರ್ಶಿಸುವುದು.

೩)ಪ್ರಾಕೃತಿಕ ವಿಕೋಪಗಳು ಉಂಟು ಮಾಡುವ ಹಾನಿಯ ಬಗ್ಗೆ ತಿಳಿಸುವುದು.

೪ ) ಈ  ಮೇಲಿನ ಅಂಶಗಳನ್ನು  ಸ್ಥಳೀಯ ಅಂಶಗಳೊಂದಿಗೆ ಸಮೀಕರಿಸಿ ಅರ್ಥೈಸಿಕೊಳ್ಳುವುದು.

೫ )ಮಾನವನಿಗೆ ಪರಿಸರದೊಂದಿಗೆ ಹೊಂದಾಣಿಕೆ ಅಗತ್ಯ ಎಂಬುದನ್ನು ಅರಿಯುವರು.

=ಶಿಕ್ಷಕರ ಟಿಪ್ಪಣಿ

== ಪರಿಸರಕ್ಕೆ ಅನುಗುಣವಾಗಿ ಜೀವಿಗಳು ಮತ್ತು ಮಾನವರು ಸ್ವರೂಪ ,ವರ್ತನೆ ,ಆತ್ಮ ರಕ್ಷಣೆ ಮತ್ತು ಬೆಳವಣಿಗೆಗಳನ್ನು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.

ಉದಾ:೧) ಹಿಮ ಪ್ರದೇಶದ ಪ್ರಾಣಿಗಳಿಗೆ ಹಿಮದಂತೆ  ಶ್ವೇತ ವರ್ಣ ,ಮೈತುಂಬ  ತುಪ್ಪ ಳ 
           ೨)  ಎಸ್ಕಿಮೊ ಜನರ ಉಣ್ಣೆ  ಉಡುಪು ,ತಂಡ್ರಾ ಜನರ ಇಗ್ಲೂ ಗಳು (ಮಂಜಿನ ಮನೆ)
            ೩) ಮರುಭೂಮಿಯಒಂಟೆಗಳ ದೇಹ ರಚನೆ 
            ೪)  ಸಮಭಾಜ ಕ  ವೃತ್ತ  ಪ್ರದೇಶಗಳಲ್ಲಿ  ವಾಸಿಸುವವರ ಕಷ್ಟ ಸಹಿಷ್ಣುತೆ ಹಾಗೂ ಧೈರ್ಯ .ಇತ್ಯಾದಿ.

ಜೊತೆಗೆ ಪ್ರಾಕೃತಿಕ ಪರಿಸರಕ್ಕನುಗುಣವಾಗಿ ಮಾನವರ ಉದ್ಯೋಗಗಳ ಆಯ್ಕೆ ,ಆಹಾರ ಪದ್ಧತಿ, ಉಡುಪು ,ಆರೋಗ್ಯ ,ಜನಾಂಗ ವೈವಿಧ್ಯತೆ, ಆಚಾರ ವಿಚಾರಗಳು ,ಸಂಪ್ರದಾಯಗಳು ,ಅಭಿವೃದ್ಧಿ ಹಾಗೂ ಅನಭಿವೃದ್ಧಿ ಹೇಗೆ ಪರಿವರ್ತನೆಯಾಗುತ್ತವೆ ಎಂಬುದರ ಬಗ್ಗೆ ಚರ್ಚಿಸುವುದು. ==


ಮಾನವರ ಮೇಲೆ ಪ್ರಕೃತಿಯ ಪ್ರಭಾವ

==

ಚಟುವಟಿಕೆಗಳು #

ಮಾನವರ ಮೇಲೆ ಪ್ರಾಕೃತಿಕ ವಿಭಾಗಗಳ ಪ್ರಭಾವ- ಕುರಿತು ಮಾಹಿತಿ ಸಂಗ್ರಹ .

ವಿದ್ಯಾರ್ಥಿಗಳಿಗೆ ಈ ಕೆಳಗಿನ ಅಂಶಗಳ ಬಗ್ಗೆ  ಮಾಹಿತಿ ಸಂಗ್ರ ಹಿಸಲು ಹೇಳುವುದು 

೧) ಸ್ಥಳೀಯ ಜನರ ಪ್ರಮುಖ ಉದ್ಯೋಗಗಳು,ಆಹಾರ ,ಹಬ್ಬ ಹರಿದಿನಗಳು ,ರೂಢಿ ಸಂಪ್ರದಾಯಗಳು.

  • ಅಂದಾಜು ಸಮಯ :೨-೩ ದಿನ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :ಪೆನ್ನು ಮತ್ತು ಪೇಪರ್.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ: ೧)ಮಾಹಿತಿ ಸಂಗ್ರಹ ವಸ್ತು ನಿಷ್ಟ ವಾಗಿರಲಿ,
                      ೨) ನಿಗದಿ ಪಡಿಸಿದ ಗುಂಪುಗಳಲ್ಲಿ ತಮಗೆ ವಹಿಸಿದ ಕ್ಷೇತ್ರದಲ್ಲಿ  ವಿಷಯ ಸಂಗ್ರಹಿಸಿ..
                      ೩) ನಿಗದಿ ಪಡಿಸಿದ ವೇಳೆಯಲ್ಲಿ ಕಾರ್ಯ ನಿರ್ವಹಿಸಿ.
==
 
  • ಬಹುಮಾಧ್ಯಮ ಸಂಪನ್ಮೂಲಗಳು:----------------------
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು: ಊರಿನ ಜನರು ,
  • ಅಂತರ್ಜಾಲದ ಸಹವರ್ತನೆಗಳು : -----------------------
  • ವಿಧಾನ:
 ಊರಿನ  ಜನರ  ಜೊತೆ  ಚರ್ಚಿಸಿ  ಸ್ಥಳೀಯ ವಿಚಾರಗಳನ್ನು  ಸಂಗ್ರಹಿಸುವುದು . 
.*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:

ತಮ್ಮ ಊರಿನ ಜನರ ಆಹಾರ ,ಉದ್ಯೋಗ ,ಹಬ್ಬ ಹರಿದಿನಗಳ ಹಾಗೂ ಸಂಪ್ರದಾಯಗಳ ಬಗ್ಗೆ ಪ್ರಶ್ನೆ ಕೇಳುವುದು .

  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು : ೧) ಊರಿನ ಪ್ರಾಕೃತಿಕ ಸ್ವರೂಪಗಳಿಗೂ ಮತ್ತು ಉದ್ಯೋಗಗಳಿಗೆ ಯಾವ ಸಂಬಂಧವಿದೆ?
                ೨) ವಾತಾವರಣಕ್ಕೂ  ಉಡುಪಿಗೂ ಇರುವ ಸಹ ಸಂಬಂಧವೇನು ?
               ೩)ಮಕರ ಸಂಕ್ರಾಂತಿ ಹಬ್ಬದಲ್ಲಿ ಎಳ್ಳನ್ನು ಏಕೆ ಬಳಸುತ್ತಾರೆ ?

ಚಟುವಟಿಕೆಗಳು #2

ಈ ಕೆಳಗಿನ ವಿಡಿಯೋ ಚಿತ್ರಗಳನ್ನು ವೀಕ್ಷಿಸಿ ,ಜಗತ್ತಿನ ವಿವಿಧ ಸ್ವಾಭಾವಿಕ ಪ್ರದೇಶಗಳು ಮಾನವರ ಮೇಲೆ ಬೀರಿದ ಪರಿಣಾಮಗಳ ಬಗ್ಗೆ ಚರ್ಚಿಸುವುದು.

 ವಿದ್ಯಾರ್ಥಿಗಳನ್ನು  ಐದು ಗುಂಪುಗಳಾಗಿ  ವಿಂಗಡಿಸಿ ,ಪ್ರತಿ  ಗುಂಪಿಗೂ ಒಂದೊಂದು  ಸ್ವಾಭಾವಿಕ ಪ್ರದೇಶದ ಬಗ್ಗೆ ವಿಡಿಯೋ ವೀಕ್ಷಿಸಿ ಟಿಪ್ಪಣಿ ಮಾಡಿಕೊಳ್ಳಲು ಹೇಳುವುದು. ನಂತರ ಗುಂಪುಚರ್ಚೆ ಏರ್ಪಡಿಸುವುದು.
* ಸಮ ಭಾಜಕ ವೃತ್ತ ಪ್ರದೇಶ ,
*ಮಾನ್ಸೂನ್ ಪ್ರದೇಶ ,
*ಮರುಭೂಮಿ ಪ್ರದೇಶ,
*ತಂಡ್ರಾ ಪ್ರದೇಶ ,
*ಮೆಡಿಟರೇನಿಯನ್ ಪ್ರದೇಶ 
ಚರ್ಚೆಯ ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಪ್ರಾದೇಶಿಕ ಲಕ್ಷಣಗಳು, ಆಹಾರ ,ಸಂಪ್ರದಾಯ ,

ವೃತ್ತಿಗಳ ಬಗೆಗಿರುವ ಪೂರ್ವಜ್ಞಾನವನ್ನು ಪ್ರಶ್ನೆಗಳ ಮೂಲಕ ಪರೀಕ್ಷ-ಸುವುದು . ನಂತರ ಕೆಳಗಿನ ಅಂಶಗಳ ಬಗ್ಗೆ ಚರ್ಚಿಸು ವುದು .

  • ಅಂದಾಜು ಸಮಯ :೪೦ ನಿಮಿಷ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ಅಂತರ್ಜಾಲ , ಪ್ರೋಜೆಕ್ಟರ್
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ: ಚರ್ಚೆ ವಿಷಯಾಂತರವಾಗದಿರಲಿ .
  • ಬಹುಮಾಧ್ಯಮ ಸಂಪನ್ಮೂಲಗಳು:ಅಂತರ್ಜಾಲ , ಪ್ರೋಜೆಕ್ಟರ್,ಪ ತ್ರಿಕೆಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು:---------
  • ಅಂತರ್ಜಾಲದ ಸಹವರ್ತನೆಗಳು:ಅಗತ್ಯ
  • ವಿಧಾನ:
*ವಿದ್ಯಾರ್ಥಿಗಳು  ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು  .
*ವಿದ್ಯಾರ್ಥಿಗಳ ಮಂಡನೆಯನ್ನು ಅವಲೋಕಿಸಿ ಶಿಕ್ಷಕರು   ತಮ್ಮ ವಿವರಣೆಯನ್ನು ನೀಡು ವುದರ  ಮೂ  ಲಕ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸುವುದು . 
*ವಿದ್ಯಾರ್ಥಿಗಳು  ಚರ್ಚಿಸಲು  ಅನು ಕೂ ಲವಾಗಲು  ಪ್ರಶ್ನೆಗಳ ಪಟ್ಟಿಯನ್ನು ಒದಗಿಸು ವುದು .

ಅಗತ್ಯವಾದ ಹಿಮ್ಮಾಹಿತಿ ನೀಡು ವುದು.

.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:

೧)ನಿಮ್ಮ ಪ್ರದೇಶದಲ್ಲಿ ಪ್ರಮುಖವಾಗಿ ಕಂಡು ಬರುವ ಉದ್ಯೋಗಗಳಾವುವು ? ೨)ಆ ಉದ್ಯೋಗಗಳನ್ನು ಮಾಡಲು ಕಾರಣವೇನು? ೩)ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ಕಂಡುಬರುವ ಉದ್ಯೋಗಗಳನ್ನು ಹೆಸರಿಸಿ . ೪)ಭಾರತದ ಪ್ರಮುಖ ಉದ್ಯೋಗ ಯಾವುದು ? ೫)ಜಗತ್ತಿನ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳನ್ನು ಹೆಸರಿಸಿ. ೬)ಮರುಭೂಮಿಗಳಲ್ಲಿ ಏಕೆ ಕೃಷಿ ಮಾಡಲು ಸಾಧ್ಯವಿಲ್ಲ ?

  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು:

೧) ಭಾರತದಲ್ಲಿ ಕೃಷಿ ಪ್ರಮುಖವಾಗಿರಲು ಕಾರಣಗಳೇನು ? ೨)ಮಾನ್ಸೂನ್ ಪ್ರದೇಶಗಳಲ್ಲಿ ಜನಸಂಖ್ಯೆ ಏಕೆ ಹೆಚ್ಚಾಗಿದೆ? ೩)ಮರುಭೂಮಿ ಪ್ರದೇಶಗಳಲ್ಲಿ ಜನಸಂಖ್ಯೆ ಕಡಿಮೆಯಾಗಿರುತ್ತದೆ.ಈ ವಾಕ್ಯವನ್ನು ಸ್ಪಷ್ಟೀಕರಿಸಿ. ೪)ಸಮಭಾಜಕ ವೃತ್ತ ಪ್ರದೇಶದ ಜನರು ಏಕೆ ಧೈರ್ಯಶಾಲಿಗಳಾಗಿರುತ್ತಾರೆ ?

ಯೋಜನೆಗಳು

ಪ್ರಪಂಚದ ವಿವಿಧ ಸ್ವಾಭಾವಿಕ ಪ್ರದೇಶಗಳನ್ನು ನಕ್ಷೆಯಲ್ಲಿ ಗುರುತಿಸಿ.ಆ ಪ್ರದೇಶಗಳ ಆರ್ಥಿಕ ,ಸಾಮಾಜಿಕ ,ಭೌಗೋಳಿಕ ಲಕ್ಷಣಗಳ ಬಗ್ಗೆ ಸಂಕ್ಷಿಪ್ತ ವರದಿ ತಯಾರಿಸಿ.

=ಸಮುದಾಯ ಆಧಾರಿತ ಯೋಜನೆಗಳು=

ಹಿಂದಿನ ಕಾಲಕ್ಕೆ ಹೋಲಿಸಿದರೆ ನಿಮ್ಮ ಊರಿನ ಉದ್ಯೋಗ ,ಆಹಾರ ಪದ್ಧತಿ,ವೇಷಭೂಷಣಗಳಲ್ಲಿ ಈಗ ಪರಿವರ್ತನೆ ಕಂಡು ಬರುತ್ತಿದೆಯೆ? ಹೌದೆಂದಲ್ಲಿ ಈ ಕುರಿತು ನಿಮ್ಮ ಊರಿನ ಹಿರಿಯರ ಜೊತೆ ಚರ್ಚಿಸಿ ನಿಮ್ಮ ಅಭಿಪ್ರಾಯ ಬರೆಯಿರಿ.

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ