ಸಂಕಲ್ಪಗೀತೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

  1. ಮಕ್ಕಳನ್ನು ಪದ್ಯ ಪಾಠಕ್ಕೆ ಹಣಿಗೊಳಿಸುವದು
  2. ಮಕ್ಕಳಿಗೆ ಜೀವನದ ಗುರಿ ತಿಳಿಸುವದು
  3. ದೃಢ ಸಂಕಲ್ಪ ಸಾಮರ್ಥ್ಯ ಬೇಳಸುವದು
  4. ಪದ್ಯವನ್ನು ಮಕ್ಕಳಿಗೆ ಸುಲಭವಾಗಿ ಅರ್ಥೈಸುವದು

ಕಲಿಕೋದ್ದೇಶಗಳು

  1. ಪದ್ಯದಬಗ್ಗೆ ಆಸಕ್ತಿ ಮೂಡಿಸುವದು .
  2. ಪದ್ಯದ ಅರ್ಥವನ್ನು ತಿಳಿಸುವದು.
  3. ಕಠಿಣ ಸನ್ನಿವೇಶವನ್ನು ಎದಿರುಸುವ ಸಾಮರ್ಥ್ಯ ಬೇಳೆಸುವದು
  4. ವ್ಯಾಕರಣ – ಕ್ರೀಯಾಪದ, ವಿಭಕ್ತಿಪ್ರತ್ಯಗಳ ಬಗ್ಗೆ ಬೇಳೆಸುವದು.
  5. ರಾಗಬದ್ದವಾಗಿ ಹಾಡುವ ಕಲೆ ಬೇಳಸುವದು.

ಕವಿ ಪರಿಚಯ

ಜಿ ಎಸ್ ಶಿವರುದ್ರಪ್ಪ -(ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ)(ಫೆಬ್ರುವರಿ ೭,೧೯೨೬ - ಡಿಸೆಂಬರ್ ೨೩, ೨೦೧೩) ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರು. ಜೊತೆಗೆ ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಪ್ರಾಧ್ಯಾಪಕ, ಒಳ್ಳೆಯ ಆಡಳಿತ ಗಾರ. ಕುವೆಂಪು ಅವರ ಮೆಚ್ಚಿನ ಶಿಷ್ಯ. ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾದವರು. ನವೆಂಬರ್ ೧,೨೦೦೬ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಮುಂದಿನ ಲಿಂಕನ್ನು ಕ್ಲಿಕ್ ಮಾಡಿ ನೋಡಿಇಲ್ಲಿ ಕ್ಲಿಕ್ ಮಾಡಿ

ಶಿಕ್ಷಕರಿಗೆ ಟಿಪ್ಪಣಿ

ಹೆಚ್ಚುವರಿ ಸಂಪನ್ಮೂಲ

ಸಾರಾಂಶ

ಕವಿ ಜಿ.ಎಸ್,ಎಸ್ ರವರು ಈ ಪದ್ಯವನ್ನು ಎರಡು ಅರ್ಥದಲ್ಲಿ ಹೆಳುತ್ತಾರೆ. ಒಂದು ಭೌತಿಕ ಅರ್ಥ ಇನ್ನೊಂದು ಬದುಕಿನ ಅರ್ಥ
ಇಂದು ಜಗತ್ತೆಲ್ಲಾ ಅಜ್ಞಾನವೆಂಬ ಕತ್ತಲೆಯಿಂದ ತುಂಬಿದೆ
ಪ್ರೀತಿ ಮಮಕಾರಗಳು ಮಾನವನಿಂದ ದೂರವಾಗಿ ಸ್ವಾರ್ಥ ತುಂಬಿಕೊಂಡಿದೆ
ಈ ಅಜ್ಞಾ ಕತ್ತಲನ್ನು ಓಡಿಸಲು .
ನಾವೀಗ ಪ್ರೀತಿ ಮಮಕಾರಗಳ ದೀಪವನ್ನು ಹಚ್ಚಬೇಕಿದೆ .
ಬದುಕೆನ್ನುವದು ಹಲವಾರು ಸಂಕಷ್ಟಗಳಿಗೆ ಸಿಲುಕಿ ಹೊಯ್ದಾಡುವ ಹಡಗಿನಂತಾಗಿದೆ. ಈ ಹೊಯ್ದಾಡುವ ಬದುಕೆಂಬ ಹಡಗು ಯಾವ ಸಂದರ್ಭದಲ್ಲಿ ಮುಳುಗುತ್ತಿದೇಯೋ ಎಂಬ ಭಯ ಜನರನ್ನು ಕಾಡುತ್ತಿದೆ. ಅದಕ್ಕಾಗಿ ಈ ಬದುಕೆಂಬ ಹಡಗನ್ನು ಬಹಳ ಎಚ್ಚರದಿಂದ ಮುನ್ನಡೆಸಬೇಕಿದೆ.
ಬದುಕಿಗೆ ಜೀವನಾಧಾರವಾದ ಜಲರಾಶಿ ಹಲವಾರು ಕಾರಣಗಳಿಂದ ಕಲುಷಿತಗೊಂಡು ಜನರ ಬದುಕಿಗೆ ವಿಷದ ದ್ರವವಾಗಿ ಪರಿಣಮಿಸಿದೆ. ಈ ವಿಷವನ್ನು ದೂರಮಾಡಲು ಇದರಿಂದಾಗಿ ಬದುಕು ಬರುಡು ಭೂಮಿಯಾಗಿದೆ ಇದನ್ನು ದೂರಮಾಡಲು ನಾವು ಸದ್ಗುಣ ಸದ್ಭಾವ ಹೊಂದಿ ವಸಂತಕಾಲವಾಗೋಣ
ಬದುಕಿನಲ್ಲಿ ನಿರಾಶೆಗೊಂಡು ಜೀವನವನ್ನೆ ತಜಿಸುವ ಹಂತದಲ್ಲಿರುವವರನ್ನು ಎಬ್ಬಿಸಿ ಬೆನ್ನು ತಟ್ಟಿ ಹೊಸಭರವಸೆಯನ್ನು ನಿಡಿ ಅವರ ಬದುಕಿನಲ್ಲಿ ಆಶಾವಾದಿಗಳನ್ನಾಗಿ ಮಾಡೊಣ ಮನುಜ
ಮನುಜ ರ ನಡುವಿರುವ ಮತ ಪಂಥ , ಬಡವ ಶ್ರೀಮಂತ,ಮಾಲಿಕ - ಕಾರ್ಮಿಕ , ಅಧಿಕಾರಿ - ಸೇವಕ ಇಂಥಹ ಅಡ್ಡಗೊಡೆಗಳನ್ನು ಒಡೆದು ಮನುಜ ಮನುಜರ ನಡುವೆ ಬಾಂಧವ್ಯದ ಸೇತುವೆ ಕಟ್ಟೋಣ
ಮತಗಳೆಲ್ಲವೂ ಏಳಿಗೆಗೆ ಪಥ ಎನ್ನುವ ಅರ್ಥೃವನ್ನು ತಿಳದುಕೊಂಡು ಎಚ್ಚರದಿಂದ ಬದುಕೊಣ . ಹಲವಾರು ಜನ ಭಯದ ನೇರಳಿನಲ್ಲಿ ಸಂಶಯದ ಕಂದಕದಲ್ಲಿ ಬದುಕನ್ನು ಸಾಗಿಸುತ್ತಿದ್ದಾರೆ. ಅಂಥವರ ಕಣ್ಣಲ್ಲಿ ಹೊಸಕನಸುಗಳನ್ನು ಬಿತ್ತೋಣ ಎಂದು ಕವಿ ಮಾರ್ಮಿಕವಾಗಿ ಹೇಳಿದ್ದಾರೆ. ಇದನ್ನು ಅರ್ಥಹಿಸಿಕೊಂಡು ಬದುಕು ಸಾಗಿಸುವದು ಇಂದಿನ ಕಾಲದಲ್ಲಿ ಅಗತ್ಯವಾಗಿದೆ.

ಪರಿಕಲ್ಪನೆ ೧

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುಟವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ