೭ನೇ ನವೆಂಬರ್ ೨೦೧೪ ಮೂರನೇ ದಿನದ ವರದಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನ ವಿಷಯದ ರಾಜ್ಯ ಮಟ್ಟದ ಕೊಯರ್ ಕಾರ್ಯಾಗಾರ-ನವಂಬರ್ ೨೦೧೪-೧೫ . ರೂರಲ್ ಡೈಟ್, ರಾಜಾಜಿನಗರ,ಬೆಂಗಳೂರು.

 ಈ ಕಾರ್ಯಾಗಾರವು ದಿ:೦೫/೭/೧೪ ರಿಂದ ೦೭/೦೭/೧೪ ರವರೆಗೆ ಆಯೋಜಿಸಲ್ಪಟ್ಟಿತ್ತು.ಮೊದಲ ಎರಡು ದಿನಗಳಲ್ಲಿ ಐ.ಟಿ.ಫಾರ್ಚೇಂಜ್ ನ ನಿರ್ದೇಶಕರಾದ ಶ್ರೀ ಗುರುಮೂರ್ತಿ ಸರ್,ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಕೇಶ್,ಶ್ರೀಮತಿ ರಾಧಾ,ಶ್ರೀ ನಂದೀಶ್ ಇವರು ಕೋಯರ ಕಾರ್ಯಾಗಾರದ ಅಜೆಂಡಾ,ಗೂಗಲ್ ಫೀಚರ್ಸ,ಓ.ಇ.ಆರ್,ಕೃತಿಸ್ವಾಮ್ಯತೆಯ ಅರ್ಥ ಮತ್ತು ಮಹತ್ವದ ಬಗ್ಗೆ ಅಮೂಲ್ಯವಾದ ಮಾರ್ಗದರ್ಶನ ನೀಡಿದರು.
                   ಮೂರನೇ  ದಿನದ ವರದಿ 
ಈ ದಿನ ಕೊಯರ್ ಕಾರ್ಯಾಗಾರವು ಮುಂಜಾನೆ ೯-೩೦ಕ್ಕೆ ಆರಂಭವಾಯಿತು.ಮೊದಲ ಅವಧಿಯಲ್ಲಿ ಶ್ರೀ ಮಂಜುನಾಥ್ ಸರ್ ಇವರು ಹತ್ತನೇ ತರಗತಿಯಲ್ಲಿ ಸಿ.ಸಿ.ಇ ಅನುಷ್ಠಾನ, ಸಿ.ಸಿ.ಇ ದಾಖಲೆಗಳ ಸುಲಭ ನಿರ್ವಹಣೆ,ಅಧ್ಯಾಯಗಳಿಗೆ ಅಂಕ ಹಂಚಿಕೆ ಮಾಡುವ ವಿಧಾನ,ಪ್ರಶ್ನೆ ಪತ್ರಿಕೆಯ ನೀಲಿ ನಕ್ಷೆ,ಉದ್ದಿಷ್ಟಾಧಾರಿತವಾಗಿ ಪ್ರಶ್ನೆಗಳ ರಚನೆ ಮೊದಲಾದವುಗಳ ಕುರಿತು ಸವಿವರವಾಗಿ,ಸ್ಪಷ್ಟವಾಗಿ ಹಾಗೂ ಆಕರ್ಷಕವಾಗಿ ತಿಳಸಿದರು.ಈ ಅವಧಿಯಲ್ಲಿ ಸಿ.ಸಿ.ಇ ಬಗ್ಗೆ,ಎಸ್.ಎಸ್.ಎಲ್.ಸಿ ಪ್ರಶ್ನೆ ಪತ್ರಿಕೆ ,ನೀಲಿನಕ್ಷೆಗಳ ಬಗ್ಗೆ ಇದ್ದ ಹಲವಾರು ಸಂದೇಹಗಳನ್ನು ಶ್ರೀ ಮಂಜುನಾಥ್ ರವರು ಸಮರ್ಪಕವಾಗಿ ಪರಿಹರಿಸಿದರು.
                ಎರಡನೇ ಅವಧಿಯಲ್ಲಿ ಕೊಯರ್ ಸಂಪನ್ಮೂಲ ವ್ಯಕ್ತಿಗಳು ಈ ಮೊದಲೇ ಆಯ್ಕೆ ಮಾಡಿಕೊಂಡ ಅಧ್ಯಾಯಗಳನ್ನು ಕೊಯರ್ ಗೆ ಅಪ್ ಲೋಡ್ ಮಾಡಲು ಶ್ರೀ ವೆಂಕಟೇಶ್,ಶ್ರೀಮತಿ ರಾಧಾ,ಶ್ರೀ ನಂದೀಶ್ ಇವರು ನೀಡಿದ ಸಲಹೆಗಳು ಉಪಯುಕ್ತವಾದವು.

ಮೂರನೇ ಅವಧಿಯಲ್ಲಿ ಸಂಪೂರ್ಣಗೊಂಡ ಸಂಪನ್ಮೂಲಗಳ ಅವಲೋಕನ ಮತ್ತು ಹಿಮ್ಮಾಹಿತಿ ನೀಡಲಾಯಿತು. ನಾಲ್ಕನೇ ಅವಧಿಯಲ್ಲಿ ಕಾರ್ಯಕ್ರಮದ ಬಗ್ಗೆ ಅಭಿಪ್ರಾಯ ಸಂಗ್ರಹ ದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.