ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು:  
=ಪರಿಕಲ್ಪನಾ ನಕ್ಷೆ=
 
=ಪರಿಕಲ್ಪನಾ ನಕ್ಷೆ=
 
=ಹಿನ್ನೆಲೆ/ಸಂದರ್ಭ=
 
=ಹಿನ್ನೆಲೆ/ಸಂದರ್ಭ=
 +
'''ಮಾರಿಯ ಗುಡಿಯಲ್ಲಿ ಎಳೆಯರು'''
 +
ಸಂಪದ್ಭರಿತವಾದ ಭರತಖಂಡ. ಅದರಲ್ಲಿ ಪ್ರಸಿದ್ಧವಾದ ಅಯೋಧ್ಯಾದೇಶ. ಅದರ ರಾಜಧಾನಿ ರಾಜಪುರ. ಅದನ್ನು ಆಳುತ್ತಿದ್ದ ದೊರೆ ಮಾರಿದತ್ತ. ಆ ಊರಿನ ದೇವತೆ ಚಂಡಮಾರಿ. ಆಕೆಗೆ ಪ್ರತಿ ಚೈತ್ರ, ಆಶ್ವಯುಜಗಳಲ್ಲಿ ಜಾತ್ರೆ ನಡೆಯುತ್ತಿತ್ತು. ಆಗ ಆಕೆಗೆ ಮನುಷ್ಯರನ್ನೂ ಪ್ರಾಣಿಗಳನ್ನೂ ಬಲಿ ಕೊಡುತ್ತಿದ್ದರು.
 +
ಒಮ್ಮೆ ಚೈತ್ರ ಜಾತ್ರೆ ನಡೆಯಬೇಕಾಗಿತ್ತು. ಜಾತ್ರೆಯ ಪೂಜೆಯಲ್ಲಿ ದೊರೆ ಮಾರಿದತ್ತನಿಗೆ ಬಹಳ ಆಸಕ್ತಿ. ಅವನು ಚಂಡಕರ್ಮ ಎನ್ನುವ ತಳವಾರನನ್ನು ಕರೆದು, ‘ದೇವಿಗೆ ಬಲಿ ಕೊಡಬೇಕು, ಇಬ್ಬರು ಮನುಷ್ಯರನ್ನು ಹಿಡಿದು ಕೊಂಡು ಬಾ’ ಎಂದು ಹೇಳುತ್ತಾನೆ.
 +
ತಳವಾರನು ಹುಡುಕಿ ಹುಡುಕಿ, ದಾರಿಯಲ್ಲಿ ಹೋಗುತ್ತಿದ್ದ ಕಿರು ವಯಸ್ಸಿನ, ಶುಭಲಕ್ಷಣದ ಅಣ್ಣ-ತಂಗಿಯರಿಬ್ಬರನ್ನು ಹಿಡಿದು ತರುತ್ತಾನೆ.
 +
ಆ ಮಕ್ಕಳು ತಮ್ಮ ಗುರು ಸುದತ್ತಾಚಾರ್ಯರ ಅಪ್ಪಣೆಯಂತೆ ಭಿಕ್ಷೆಗೆ ಹೊರಟವರು. ಬಾಲಕನ ಹೆಸರು ಅಭಯರುಚಿ, ಬಾಲಕಿಯ ಹೆಸರು ಅಭಯಮತಿ. ಅವರಿಬ್ಬರೂ ಯಶೋಮತಿ ಎಂಬ ಅರಸನ ಮಕ್ಕಳು. ಅವರು ಚಿಕ್ಕ ವಯಸ್ಸಿನಲ್ಲಿಯೇ ಜೈನದೀಕ್ಷೆ ಪಡೆದಿದ್ದರು. ಬಲಿಕೊಡುತ್ತಾರೆ ಎಂದರೆ ಎಷ್ಟು ಹೆದರಿಕೆ ಆಗಬೇಕು, ಅಲ್ಲವೆ? ದೊಡ್ಡವರೇ ನಡುಗಿ ಅತ್ತು ‘ನಮ್ಮನ್ನು ಉಳಿಸಿ’ ಎಂದು ಬೇಡುವ ಸನ್ನಿವೇಶ. ಆದರೆ ತಳವಾರನು ಆ ಇಬ್ಬರು ಮಕ್ಕಳನ್ನು ಹಿಡಿದು ತರುತ್ತಿದ್ದರೂ ಅವರು ಅಂಜದೆ ಒಬ್ಬರನ್ನೊಬ್ಬರು ಸಮಾಧಾನ ಪಡಿಸುತ್ತಿದ್ದರು. ತಳವಾರ ಅವರನ್ನು ಮಾರಿಗುಡಿಯ ಬಳಿಗೆ ಕರೆತಂದ.
 +
 +
ಆ ಗುಡಿಯಾದರೋ ಯಮಧರ್ಮನ ಅಡಿಗೆಮನೆಯಂತಿತ್ತು. ಬಲಿಕೊಟ್ಟಿದ್ದ ಅನೇಕ ಪ್ರಾಣಿಗಳ ರುಂಡ, ಮುಂಡಗಳು ಚೆಲ್ಲಾಡಿವೆ. ಸಾಯುತ್ತಿರುವ ಪ್ರಾಣಿಗಳು ಅರಚುತ್ತಿವೆ. ನೋಡಿದವರಿಗೆ ಹೆದರಿಕೆಯಿಂದ ಪ್ರಜ್ಞೆ ತಪ್ಪುವಂತಿದೆ. ಆ ಧೀರ ಮಕ್ಕಳು ಅದನ್ನು ನೋಡಿಯೂ ಅಧೀರರಾಗದೆ ಮಾರಿದತ್ತನ ಮುಂದೆ ಹೋಗಿ ನಿಲ್ಲುತ್ತಾರೆ
 +
 +
ಎಂತಹ ಮಕ್ಕಳು! ಯಾರಿವರು?
 +
 +
ಆ ಮಕ್ಕಳ ಲಲಿತಾಕಾರಕ್ಕೂ ಧೈರ್ಯಕ್ಕೂ ಮಾರಿದತ್ತ ಆಶ್ಚರ್ಯಗೊಳ್ಳುತ್ತಾನೆ. ತಲೆ ಕತ್ತರಿಸಿಕೊಳ್ಳುವುದಕ್ಕೆ ಮೊದಲು ದೊರೆಯನ್ನು ಹರಸಬೇಕೆಂದು ಅಲ್ಲಿಯ ಜನರು ಅಭಯರುಚಿ, ಅಭಯಮತಿಯರಿಗೆ ಹೇಳುತ್ತಾರೆ. ಆಗ ಅಭಯರುಚಿ ಮಾರಿದತ್ತನಿಗೆ ‘ನಿರ್ಮಲ ಧರ್ಮದಿಂದ ಭೂಮಿಯನ್ನು ಪಾಲಿಸ” ಎಂದು ಆಶೀರ್ವದಿಸುತ್ತಾನೆ.
 +
 +
ಮೊದಲೇ ಆ ಮಕ್ಕಳ ರೂಪು, ಧೈರ್ಯಕ್ಕೆ ಆಶ್ಚರ್ಯಗೊಂಡಿದ್ದ ಮಾರಿದತ್ತನ ಮನಸ್ಸು ಈ ಮಂಗಳದ ಮಾತುಗಳನ್ನು ಕೇಳುತ್ತಿದ್ದಂತೆಯೇ ಸೋತುಹೋಗುತ್ತದೆ. ಅವನಿಗೆ ಆಶ್ಚರ್ಯ. ’ಇಷ್ಟು ಚಿಕ್ಕ ವಯಸ್ಸಿನವರಿಗೆ ಇಂತಹ ಧೈರ್ಯ ಹೇಗೆ ಬಂದಿತು? ಇಂತಹ ಮನಸ್ಸಿನ ಶಾಂತಿ ಹೇಗೆ ಬಂದಿತು? ಎಂದು ಅವನು ಬೆರಗಾಗುತ್ತಾನೆ. ಆ ಮಕ್ಕಳ ಕೊರಳನ್ನು ಕಡಿಯಲು ಎತ್ತಿದ್ದ ಅವನ ಖಡ್ಗದ ಕೈ ಹಾಗೇ ಕೆಳಕ್ಕೆ ಇಳಿಯುತ್ತದೆ. ಅವರ ವಿಷಯವನ್ನು ತಿಳಿಯಲು ಮನಸ್ಸು ಹಾತೊರೆಯುತ್ತದೆ. ಆಗ ಅವರು ಆ ಮಕ್ಕಳನ್ನು, “ನಿಮ್ಮದು ಯಾವ ಕುಲ? ನೀವು ಯಾರ ಮಕ್ಕಳು? ನೀವು ಎಲ್ಲಿಂದ ಬಂದಿರಿ? ಈ ಚಿಕ್ಕ ವಯಸ್ಸಿನಲ್ಲಿ ಈ ಭಿಕ್ಞಾ ವೃತಿ ಏಕೆ?” ಎಂದು ಒಮ್ಮೆಲೇ ಹಲವಾರು ಪ್ರಶ್ನೆಗಳನ್ನು ಕೇಳುತ್ತಾನೆ. ಆಗ, “ನಮ್ಮ ನಿರ್ಮಲ ಚರಿತ್ರೆ, ಧರ್ಮವಾಗಿ ಬದುಕುವವರಿಗೆ ಮಾತ್ರ ರುಚಿಸುತ್ತದೆ, ಇತರರಿಗೆ ರುಚಿಸದು” ಎಂದು ಅಭಯರುಚಿ ಹೇಳುತ್ತಾನೆ. ಆದರೆ ದೊರೆ ಮತ್ತೊಮ್ಮೆ ಕೈಮುಗಿದು ಆ ಮಕ್ಕಳನ್ನು ಪ್ರಾರ್ಥಿಸುತ್ತಾನೆ. ದಯೆಯಿಂದ ತುಂಬಿದ ಮಾರಿದತ್ತನ ಮನಸ್ಸನ್ನು ಕಂಡು, ಅಭಯರುಚಿ ತಮ್ಮ ಕಥೆಯನ್ನು ಹೇಳಲು ಪ್ರಾರಂಭಿಸುತ್ತಾನೆ.
 +
 
=ಕಲಿಕೋದ್ದೇಶಗಳು=
 
=ಕಲಿಕೋದ್ದೇಶಗಳು=
 
=ಕವಿ ಪರಿಚಯ =
 
=ಕವಿ ಪರಿಚಯ =

ಸಂಚರಣೆ ಪಟ್ಟಿ