ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ- 2015-16 ಬೆಳಗಾವಿ ವಿಭಾಗದ ಕನ್ನಡ ಎಂ ಆರ್ ಪಿ ಕಾರ್ಯಗಾರ-೧ರ ವರದಿಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಕನ್ನಡ ವಿಷಯ ಶಿಕ್ಷಕರ ವೇದಿಕೆ
೨೦೧೫-೨೦೧೬ರ ಎಂ, ಆರ್, ಪಿ, ತರಬೇತಿಯ ವರದಿ
ದಿನಾಂಕ;೦೭/೦೮/೨೦೧೫.
ಸ್ಥಳ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ
ಧಾರವಾಡ.
ವರದಿ ಮಂಡನೆ
ಮಲೆನಾಡ ಜಿಲ್ಲೆ ಶಿವಮೊಗ್ಗ ತಂಡದಿಂದ
ತಂಡದ ಸದಸ್ಯರು:

  1. ಶ್ರೀ ಗಣಪತಿ ಉಪನ್ಯಾಸಕರು ಡಯಟ್ ಶಿವಮೊಗ್ಗ.
  2. ಶ್ರೀ ಶಿವಾನಂದ ಹೆಚ್ ಜೆ ಕನ್ನಡ ಶಿಕ್ಷಕರು ಆನವೇರಿ ಭದ್ರಾವತಿ
  3. ಶ್ರೀ ಗವಿರಂಗಪ್ಪ ಸಿ ಕನ್ನಡ ಶಿಕ್ಷಕರು ಬಾಳೇಮಾರನಹಳ್ಳಿ ಭದ್ರಾವತಿ
  4. ಶ್ರೀ ಗೋಪ ಕನ್ನಡ ಶಿಕ್ಷಕರು ಸಾಗರ ತಾಲ್ಲೂಕು
  5. ಶ್ರೀ ಗಣಪತಿ ಕನ್ನಡ ಶಿಕ್ಷಕರು ಸಾಗರ ತಾಲ್ಲೂಕು.

ವರದಿ

  1. ಈ ದಿನ ವಿಜಯಪುರ ತಂಡದಿಂದ ಪ್ರಮೋದ ರೇ ಮೆಂಚ.ಇವರ ಶಿವನ ಪ್ರಾರ್ಥನೆಯೊಂದಿಗೆ ತರಬೇತಿಯು ಪ್ರಾರಂಭವಾಯಿತು.
  2. ವಿಜಯಪುರ ತಂಡದ ಶ್ರೀ ಬಾಲಿ ರವರು ದಿನಾಂಕ:೦೬/೦೮/೨೦೧೫ ರಂದು ನಡೆದ ತರಬೇತಿಯ ವರದಿಯನ್ನು ತುಂಬಾ ಸುಂದರವಾಗಿ ಮಂಡಿಸಿದರು.

ಪಾಠದ ಚೌಕಟ್ಟು
ಶಿವಮೊಗ್ಗ ತಂಡದಿಂದ ಶಬರಿ
ಗದಗದ ತಂಡದಿಂದ ಎದೆಗೆ ಬಿದ್ದ ಅಕ್ಷರ
ವಿಜಯಪುರ ತಂಡದಿಂದ ವಚನ ಸೌರಭ
ಉತ್ತರ ಕನ್ನಡ ತಂಡದಿಂದ ಹಕ್ಕಿ ಹಾರುತಿದೆ ನೋಡಿದಿರಾ
ಬಳ್ಳಾರಿ ತಂಡದಿಂದ ಕೌರವೇಂದ್ರನ ಕೊಂದೆ ನೀನು
ಈ ಗದ್ಯ ಹಾಗೂ ಪದ್ಯಗಳ ಪಾಠದ ಚೌಕಟ್ಟನ್ನು ಮಂಡಿಸಲಾಯಿತು
. ಎರಡನೇ ಅವಧಿ
ಶ್ರೀ ವೆಂಕಟೇಶ್ ರವರು ಎಲ್ಲಾ ಶಿಭಿರಾರ್ಥಿಗಳಿಗೆ ಯೂಟ್ಯೂಬ್ ನಿಂದ ವೀಡಿಯೋಗಳನ್ನು ಡೌನ್ ಲೋಡ್ ಹಾಗೂ ಅಪ್ ಲೋಡ್ ಮಾಡುವ ಬಗೆಯನ್ನು ಬಹಳ ಅರ್ಥಪೂರ್ಣವಾಗಿ ಎಲ್ಲರ ಮನಮುಟ್ಟುವಂತೆ ವಿವರಿಸಿದರು
ಊಟದ ವಿರಾಮ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡದ ತರಬೇತಿ ಸಂಯೋಜಕರಾದ ಶ್ರೀಮತಿ ಶಂಕ್ರಮ್ಮ ಡವಳಗೀ. ರವರು ಎಲ್ಲರಿಗೂ ಶುಚಿಯಾದ ಮತ್ತು ರುಚಿಯಾದ ಊಟದ ವ್ಯವಸ್ಥೆಯನ್ನು ಮಾಡಿದರು.
ಮೂರನೇ ಅವಧಿ
ಈ ಅವಧಿಯಲ್ಲಿ ಶ್ರೀ ವೆಂಕಟೇಶ್ ರವರು ಒಬಂಟುವನ್ನು ಕಂಪ್ಯೂಟರ್ ಗಳಿಗೆ ಇನ್ ಸ್ಟಾಲ್ ಮಾಡುವ ಬಗೆಯನ್ನು ವಿವರಿಸಿದರು.
ಸಮಾರೋಪ ಸಮಾರಂಭ
ಶ್ರಿ ಗಂಗಪ್ಪ ಪ್ರಾಂಶುಪಾಲರು ಡಯಟ್, ಧಾರವಾಡ. ಇವರ ಅಧ್ಯಕ್ಷತೆಯಲ್ಲಿ ಐದುದಿನಗಳ ಎಂ, ಆರ್, ಪಿ, ತರಬೇತಿಯ ಸಮಾರೋಪ ಸಮಾರಂಭ ಜರುಗಿತು.
ಶ್ರೀಮತಿ ಶಂಕ್ರಮ್ಮ ಢವಳಗೀ ಕಾರ್ಯಕ್ರಮ ನಿರೂಪಿಸಿ,ದರು.
ಶಿಭಿರಾರ್ಥಿಗಳಾದ ಶ್ರೀ ಶಿವಾನಂದ ಹೆಚ್, ಜೆ. ಹಾಗೂ ಶ್ರೀ ಬಾಲಚಂದ್ರ ಗುಣಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು
ರಂಗನಾಥ ವಾಲ್ಮೀಕಿಯವರು ವಂದಿಸಿದರು.
ತದನಂತರ ಸಾಮೂಹಿಕ ಭಾವಚಿತ್ರ ತೆಗೆಸಿ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು
. ವಂದನೆಗಳೊಂದಿಗೆ
ಶ್ರೀ ಶಿವಾನಂದ ಹೆಚ್, ಜೆ.
ಕನ್ನಡ ಭಾಷಾ ಶಿಕ್ಷಕರು
ಸ. ಪ್ರೌ ಶಾಲೆ. ಆನವೇರಿ ಭದ್ರಾವತಿ
ಶಿವಮೊಗ್ಗ. ಜಿಲ್ಲೆ.
'ಕನ್ನಡ ಎಸ್ ಟಿ ಎಫ್ ಎಮ್ ಆರ್ ಪಿ ಎರಡು ಹಂತದ ತರಬೇತಿಯ ವರದಿ
ದಿನಾಂಕ: 03-08-2015 ಮತ್ತು 17-08-2015ರಂದು ನಡೆದ 5 & 3 ದಿನಗಳ ಎಮ್ ಆರ್ ಪಿ ತರಬೇತಿಯು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ ಇಲ್ಲಿ ನಡೆದಿತ್ತು. ತರಬೇತಿಯಲ್ಲಿ ಶಿವಮೊಗ್ಗ ವಿಜಯಪೂರ , ಬಳ್ಳಾರಿ , ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ MRPಗಳಾಗಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಬಸವರಾಜ ಪೂಜಾರ, ಶ್ರೀ ರಂಗನಾಥ ವಾಲ್ಮೀಕಿ, ಶ್ರೀ ಪೈಗಂಬರ ಕಲಾವಂತ, ಶ್ರೀ ಮಂಜುನಾಥ ಮತ್ತು IT For Changeನ ಸಂಪನ್ಮೂಲ ವ್ಯಕ್ತಿಯಾದ ಶ್ರೀ ವೆಂಕಟೇಶ ಭಾಗವಹಿಸಿದ್ದರು.
ತರಬೇತಿಯು ಡಯಟ್‌ನ ಪ್ರಾಚಾರರ್ಯರಾದ ಶ್ರೀ ಆರ್ ಗಂಗಪ್ಪನವರ ಆರಂಭಿಕ ಮಾತುಗಳಿಂದ ಆರಂಭಗೊಂಡಿತು. ಇಲ್ಲಿಯ ತರಬೇತಿಯ ವಿಷಯಗಳನ್ನು ಅರಿತುಕೊಂಡು ನಿಮ್ಮ ಜಿಲ್ಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಿಗೆ ತಿಳಿಸುತ್ತಾ ತರಗತಿಯಲ್ಲಿ ಅಳವಡಿಸಿಕೊಳ್ಳಲು ಸಜ್ಜರಾಗಿರಿ ಎಂಬ ಕಿವಿ ಮಾತನ್ನು ಹೇಳಿದರು. ನೋಡಲ್ ಅಧಿಕಾರಿಗಳಾದ ಶ್ರೀ ಮತಿ ಶಂಕ್ರಮ್ಮ ಢವಳಗಿ ಅವರು ಇಲ್ಲಿಯ ಸಂಪನ್ಮೂಲವನ್ನು ಸದ್ವಿನಿಯೋಗ ಪಡಿಸಿಕೊಳ್ಳುವಂತೆ ತಿಳಿ ಹೇಳಿದರು .
ತರಬೇತಿಯ ಉದ್ದೇಶ ಮತ್ತು ಮಹತ್ವ
ರಾಜ್ಯದ ಪ್ರೌಢಶಾಲೆಗಳಲ್ಲಿ ಕನ್ನಡ ವಿಷಯವನ್ನು ಬೋಧಿಸುತ್ತಿರುವ ಕನ್ನಡ ಭಾಷಾ ಶಿಕ್ಷಕರಿಗೆ ಗಣಕ ಯಂತ್ರದ ಜ್ಞಾನವನ್ನು ನೀಡುವದರ ಜೊತೆಗೆ ಹೊಸ ತಂತ್ರಜ್ಞಾನ ಉಬುಂಟು ಬಳಸಿಕೊಂಡು ತಮ್ಮ ತಮ್ಮ ಪಠ್ಯಕ್ರಮದ ವಿಸಯಗಳನ್ನು ಅಂತರ್‌ ಜಾಲದಿಂದ ಹುಡುಕಿಕೊಂಡು ತರಗತಿಯಲ್ಲಿ ಬಳಸಿಕೊಳ್ಳುವಂತೆ ಪ್ರೇರಣೆ ನೀಡುವುದು. ಅಲ್ಲದೆ ತಮ್ಮ ಸಹೊದ್ಯೋಗಿಗಳಿಂದ ರಚಿಸಲ್ಪಟ್ಟ ಹೊಸ ವಿಷಯಗಳನ್ನು ಅಳವಡಿಕೊಳ್ಳುವದು. ಮತ್ತು ತಾವೇನಾದರು ಹೊಸ ವಿಷಯಗಳನ್ನು ಆವಿಷ್ಕರಿಸಿದ್ದರೆ ಅದನ್ನು ಗುಂಪುಗಳಲ್ಲಿ ಹಂಚಿಕೊಂಡು ತಮ್ಮ ಪಾಠಕ್ಕೆ ಬಳಸಿಕೊಳ್ಳುವಂತೆ ಪ್ರೇರಣೆ ನೀಡುವುದು .
ತರಬೇತಿ ನೀತಿ ನಿಯಮಗಳನ್ನು ವಿವರಿಸುತ್ತಿರುವ ನೋಡಲ್ ಅಧಿಕಾರಿಗಳು, ಶ್ರೀಮತಿ ಶಂಕ್ರಮ್ಮ ಢವಳಗಿ
ಇಲಾಖೆಯು ಸೂಚಿಸಿದ ಪಠ್ಯಕ್ರಮದಂತೆ ಪ್ರತಿದಿನ ಬೆಳಗ್ಗೆ 9:30 ರಿಂದ ಸಾಯಂಕಾಲ 5:30ರವರೆಗೆ ಪಾಠಗಳು ಸಾಗುತ್ತಿದ್ದವು. ಶಿಬಿರಾರ್ಥಿಗಳು ಹೊಸ ವಿಷಯ ಬಂದಾಗ ಉತ್ಸಾಹದಿಂದ ಕಲಿತು ತಮ್ಮ ತಮ್ಮ ಗಣಕಯಂತ್ರಗಳಲ್ಲಿ ಪ್ರಯೋಗಶೀಲರಾಗುತ್ತಿದ್ದರು. .ಶಿಬಿರಾರ್ಥಿಗಳಿಗೆ ಕಂಪ್ಯೂಟರ್ , ಮಹತ್ವ ಬಳಸುವ ವಿಧಾನ , ಹೊಸ ತಂತ್ರಜ್ಞಾನ, ಉಚಿತ ತಂತ್ರಾಂಶ ಹೊಂದಿದ UBUNTU ಪರಿಚಯ , ಅಂತರ್ ಜಾಲ ಬಳಕೆ, Email ಗಳ ಸೃಷ್ಟಿ ಮತ್ತು ಬಳಸುವ ವಿಧಾನ ಅಲ್ಲದೆ UBUNTU ತಂತ್ರಾಂಶದಲ್ಲಿರುವ ಲಿಬ್ರೆ ರೈಟರ್, ಇಂಪ್ರೇಶ್ , ಜಿಂಪ್ ಎಡಿಟರ್, ಕ್ಯಾಲ್ಕ,ಆಡಿಯೋ ಸಿಟಿ, ವೆಬ್ ಬ್ರೌಜರ್, ಚಿತ್ರಗಳ ಸಂಗ್ರಹ, ವಿಡಿಯೋಗಳ ಸಂಗ್ರಹ, ಮುಂತಾದ ವಿಷಯಗಳ ಬಗ್ಗೆ ತಿಳಿಸಿಕೊಡಲಾಯಿತು.
ತರಬೇತಿ ಪಡೆಯುವಲ್ಲಿ, ನೀಡುವಲ್ಲಿ ನಿರತರಾದ ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಬಿರಾರ್ಥಿಗಳು
ಒಟ್ಟಿನಲ್ಲಿ ಎಂಟು ದಿನಗಳ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ತಂತ್ರಾಂಶ ಮತ್ತು ಪಠ್ಯ ಜ್ಞಾನದಲ್ಲಿ ಸಜ್ಜುಗೊಳಿಸಿ ತಮ್ಮ ತಮ್ಮ ಜಿಲ್ಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಿಗೆ ತರಬೇತಿ ನೀಡಲು ಸಜ್ಜುಗೊಳಿಸಲಾಯಿತು.