ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
  • ಕನ್ನಡ ಭಾಷಾ ಶಿಕ್ಷಕರ ವೇದಿಕೆ ಕಾರ್ಯಾಗಾರ, ನವೆಂಬರ್ 18-22, 2014. ಮೊದಲನೇ ತಂಡ, ಬೆಂಗಳೂರು ನಗರ ಡಯಟ್'

ಕಾರ್ಯಸೂಚಿ

  1. ಈ ಕಾರ್ಯಾಗಾರದ ಕಾರ್ಯಸೂಚಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಅಭಿಪ್ರಾಯ

ನಿಮ್ಮ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

ಸಂಪನ್ಮೂಲಗಳಯ ಮತ್ತು ಕೈಪಿಡಿಗಳು

ದಿನ 1

  1. ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು
  2. ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು
  3. ಬೇಸಿಕ್_Ubuntu_ಕೈಪಿಡಿ


ದಿನ 2

  1. ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
  2. ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  3. E-mail ಕೈಪಿಡಿಗಾಗಿ ಇಲ್ಲಿ ಒತ್ತಿ
  4. ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ

#ಓದಲು ಲೇಖನಗಳು

ದಿನ 3

  1. ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  2. ಪ್ರೀಮೈಂಡ್ ಕೈಪಿಡಿ

ದಿನ 4

  1. ಕೊಯರ್_ಹಿನ್ನೆಲೆ_ಟಪ್ಪಣಿ
  2. ಸೇತುಬಂಧ ಕಾರ್ಯಕ್ರಮ ಚಟುವಟಿಕೆಗಳು ಮತ್ತು ಸಾಮಗ್ರಿಗಳಿಗಾಗಿ ಇಲ್ಲಿ ನೋಡಿ

ದಿನ 5

  1. ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ

ಆಯ್ಕೆ ಮಾಡಿಕೊಂಡಿರುವ ಪಠ್ಯ ವಿಷಯಗಳು

  • ಬೆಂಗಳೂರು ನಗರ -ಯಮ್ಮನುಡಿಗೇಳ್ ಮತ್ತು ಶಬರಿ
  • ಚಿತ್ರದುರ್ಗ -ಹಕ್ಕಿ ಹಾರುತ್ತಿದೆ ನೋಡಿದಿರಾ ಮತ್ತು ಭಾಗ್ಯಶಿಲ್ಪಿ ವಿಶ್ವೇಶ್ವರಯ್ಯ
  • ಚಿಕ್ಕಬಳ್ಳಾಪುರ -ವ್ಯಾಘ್ರಗೀತೆ ಮತ್ತು ಸಂಕಲ್ಪಗೀತೆ
  • ದಕ್ಷಿಣ ಕನ್ನಡ - ವೃಕ್ಷ ಸಾಕ್ಷಿ , ವಚನ ಸೌರಭ ಮತ್ತು ವೀರಲವ
  • ಉಡುಪಿ -ಎದೆಗೆ ಬಿದ್ದ ಾ ಕ್ಷರ ಮತ್ತು ಕೌರವೇಂದ್ರನ ಕೊಂದೆ ನೀನು

ಜಿಲ್ಲಾ ಅನುಕ್ರಮ ಕಾರ್ಯಗಾರ

  1. ಜಿಲ್ಲಾ ಹಂತದ ಅನುಕ್ರಮ ಕಾರ್ಯಗಾರಗಳ ಪುಟಗಳು

ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ

=See us at the Workshop

ಕಾರ್ಯಾಗಾರದ ವರದಿ

ಮೊದಲನೇ ದಿನದ ವರದಿ

ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ ದಿನಾಂಕ : ೧೮-೧೧-೨೦೧೪ ಮೊದಲನೇ ದಿನದ ವರದಿ
ಕನ್ನಡ ಭಾಷಾ ಶಿಕ್ಷಕರ ವೇದಿಕೆ ಮೊದಲನೇದಿನದ ಕಾರ್ಯಾಗಾರವು ಇಂದು ದಿನಾಂಕ ೧೮-೧೧-೨೦೧೪ ರಂದು ಬೆಂಗಳೂರು ನಗರ ಜಿಲ್ಲೆಯ ರಾಜರಾಜೇಶ್ವರಿ ನಗರ ಡಯಟ್ ನಲ್ಲಿ ಮುಂಜಾನೆ ೯.೩೦ ಕ್ಕೆ ಪ್ರಾರಂಭವಾಯಿತು .ಬೆಂಗಳೂರು ನಗರ,ದಕ್ಷಿಣಕನ್ನಡ, ಉಡುಪಿ,ಚಿಕ್ಕಬಳ್ಳಾಪುರ,ಚಿತ್ರದುರ್ಗ ಜಿಲ್ಲೆಗಳಿಂದ ಆಯ್ದ ವಿಷಯ ಶಿಕ್ಷಕರು ಈ ಕಾರ್ಯಾಗಾರದ ತರಬೇತಿಗೆ ಹಾಜರಾಗಿದ್ದರು.ಕಾರ್ಯಾಗಾರದ ಮೊದಲ ಅವಧಿಯಲ್ಲಿ ಉಪಸ್ಥಿತರಿದ್ದ ಡಿ.ಎಸ್.ಇ.ಆರ್.ಟಿ. ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಮಂಜುನಾಥ್ ರವರು ಈ ಕಾರ್ಯಾಗಾರದ ಉದ್ದೇಶವನ್ನು ಶಿಕ್ಷಕರಿಗೆ ವಿವರಿಸಿದರು .ಕಾರ್ಯಾಗಾರಕ್ಕೆ ಔಪಚಾರಿಕ ಸ್ವಾಗತ ಕೋರಿದ ಐ.ಟಿ.ಫಾರ್.ಚೇಂಜ್.ಕನ್ನಡ ವಿಷಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವೆಂಕಟೇಶರವರು ಕಾರ್ಯಾಗಾರದ ಐದು ದಿನಗಳಲ್ಲಿ ಶಿಕ್ಷಕರು ಪಡೆಯಬಹುದಾದ ಮಾಹಿತಿ ಮತ್ತು ನಿರ್ವಹಿಸಬೇಕಾದ ಕಾರ್ಯಗಳ ಸಂಕ್ಷಿಪ್ತ ಮಾಹಿತಿ ಒದಗಿಸಿದರು. ಎರಡನೇ ಅವಧಿಯಲ್ಲಿ ಐ.ಟಿ.ಫಾರ್. ಚೇಂಜ್ .ನಿರ್ದೇಶಕರಾದ ಶ್ರೀಯುತ ಗುರುಮೂರ್ತಿಯವರು ರಾಜ್ಯದ ಐದು ಜಿಲ್ಲೆಗಳಿಂದ ಆಗಮಿಸಿರುವ ಕನ್ನಡ ವಿಷಯ ಶಿಕ್ಷಕರ ಕಿರು ಪರಿಚಯ ಮಾಡಿಕೊಂಡು ಆನಂತರ ಪ್ರಸ್ತುತ ಕಾರ್ಯಾಗಾರದ ಉದ್ದೇಶ , ಅಂತರ್ಜಾಲದ ಅರ್ಥ,ನಿತ್ಯಜೀವನದಲ್ಲಿ ಅದರ ಮಹತ್ವ ,ತರಗತಿ ಬೋಧನೆಯಲ್ಲಿ ಅದರ ಅಳವಡಿಕೆಯ ಅಗತ್ಯತೆ, ವಿಷಯಶಿಕ್ಷಕರಿಗೆ ಅಂತರ್ಜಾಲದಿಂದ ದೊರೆಯಬಹುದಾದ ಅನುಕೂಲಗಳು ಎಲ್ಲಕ್ಕಿಂತ ಹೆಚ್ಚಾಗಿ ವ್ಯಕ್ತಿ ಸ್ವತಃ ತನ್ನ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಅಂತರ್ಜಾಲವು ಮಾಡುವ ಸಹಾಯ ಮೊದಲಾದ ವಿಷಯಗಳ ಕುರಿತು ಮನಮುಟ್ಟುವಂತೆ ವಿವರಿಸಿದರು . ಕಾರ್ಯಾಗಾರದ ಮೂರನೇ ಅವಧಿಯಲ್ಲಿ ಐ.ಟಿ.ಫಾರ್.ಚೇಂಜ್. ತಂತ್ರಜ್ಞಾನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಕೇಶ್ ರವರುಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು ಮತ್ತು ಸಂಪನ್ಮೂಲ ಹುಡುಕುವುದು ಹೇಗೆ ಎಂಬುದನ್ನು ಪ್ರಾಯೋಗಿಕ ಉದಾಹರಣೆಗಳ ಸಹಿತ ವಿವರಿಸಿದರು. ಈ ಹಂತದಲ್ಲಿ ಎದುರಾಗುವ ಸಮಸ್ಯೆಗಳ ಕುರಿತಾದ ಶಿಕ್ಷಕರ ಎಲ್ಲ ಪ್ರಶ್ನೆಗಳಿಗೆ ಶ್ರೀ ವೆಂಕಟೇಶ್ ಮತ್ತು ಶ್ರೀ ರಾಕೇಶ್ ಉತ್ತರಿಸಿದ್ದು ಸಮರ್ಪಕವಾಗಿತ್ತು.
ಇದರ ನಾಲ್ಕನೇ ಅವಧಿಯಲ್ಲಿ ಕನ್ನಡ ಭಾಷಾ ವಿಷಯ ಸಂಪನ್ಮೂಲ ಹುಡುಕಲು ಸಿಗಬಹುದಾದ ಜಾಲ ತಾಣ ಗಳ ಕಿರು ಮಾಹಿತಿಯನ್ನು ಶ್ರೀ ವೆಂಕಟೇಶ್ ನೀಡಿದ್ದು ಅವುಗಳ ಸಹಾಯದೊಂದಿಗೆ ತರಗತಿ ಬೋಧನೆಗೆ ಬೇಕಾದ ವಿಷಯ ಸಂಪನ್ಮೂಲ ಹುಡುಕುವ ಪ್ರಾಯೋಗಿಕ ಪ್ರಯತ್ನವನ್ನು ಶಿಕ್ಷಕರು ನಡೆಸಿ ತಾವು ಸಂಪಾದಿಸಿದ ಸಂಪನ್ಮೂಲವನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ಪಡೆದರು. ಒಟ್ಟಾರೆಯಾಗಿ ಮೊದಲನೆಯ ದಿನದ ಕಾರ್ಯಾಗಾರ ಉತ್ತಮವಾಗಿತ್ತು.
ಧನ್ಯವಾದಗಳೊಂದಿಗೆ ,
ಮಮತಾ ಭಾಗ್ವತ್
ಸ. ಪ್ರೌ.ಶಾಲೆ ಬೇಗೂರು ಬೆಂಗಳೂರು -೬೮

ಎರಡನೇ ದಿನದ ವರದಿ

ಈ ದಿನದ ತರಬೇತಿಯನ್ನು ಹಿಂದಿನ ದಿನದ ತರಬೇತಿಯ ಅಂಶಗಳನ್ನು ಪುನರ್ಮನನ ಮಾಡುವ ಮುಖಾಂತರ ಪ್ರಾರಂಭಿಸಲಾಯಿತು. ನಂತರ ರಾಧಾ ಇವರು ಅಂತರ್ಜಾಲ ತಾಣದ ವಿಳಾಸವನ್ನು ಲಿಬ್ರೆ ಆಫಿಸ್ ವ್ರೈಟರ್ ನಲ್ಲಿ ಲಿಂಕ್ ಆಗಿ ಉಳಿಸುವ ಬಗೆ ಹೇಗೆ, ಅಂತರ್ಜಾಲ ತಾಣದಲ್ಲಿನ ಚಿತ್ರವೊಂದನ್ನು ಸಂಪಾದಿಸುವುದು ಹೇಗೆ ಮತ್ತು ಹೀಗೆ ಮಾಡಿದ ಪುಟವನ್ನು ಗಣಕ ಯಂತ್ರದ ನಿರ್ಧಿಷ್ಟ ಕಡತವೊಮದರಲ್ಲಿ ಇರಿಸಿ ಉಳಿಸುವ ಬಗೆ, ಸೇವ್ ಆಸ್ ಮಾಡುವ ಬಗೆ ಹೇಗೆ ಎಂಬುದನ್ನು ಸವಿವರವಾಗಿ ತಿಳಿಸಿದರು. ನಂತರ ತರಬೇತಿಯ ಶಿಕ್ಷಕರೆಲ್ಲ ಇದನ್ನು ಪ್ರಾಯೋಗಿಕವಾಗಿ ಮಾಡಿ ವಿಧಾನವನ್ನು ಕಲಿತರು. ತದನಂತರ ಸ್ಕೈಪ್ ಅನ್ವಯಕದ ಮೂಲಕ ಮಂಗಳೂರು ಶಿಕ್ಷರ ಶಿಕ್ಷಣ ಕಾಲೇಜಿನ ಉಪನ್ಯಾಸಕರಾದ ಡಾ. ಕುಮಾರಸ್ವಾಮಿ ಇವರು `ಕನ್ನಡ ಭಾಷಾಕಲಿಕೆಯನ್ನು ಅನುಕೂಲಿಸುವ ಬಗೆ` ಈ ವಿಷಯವಾಗಿ ಮಂಗಳೂರಿನಿಂದಲೇ ನೇರವಾಗಿ ನಮ್ಮೊಂದಿಗೆ ಸಂವಹನ ನಡೆಸಿದರು. ಈ ಸಂವಹನದಲ್ಲಿ ಶಿಕ್ಷಕರೆಲ್ಲ ಕುತೂಹಲದಿಂದ ಪಾಲ್ಗೊಂಡು ಉತ್ತಮ ಅಂಶಗಳನ್ನು ತಿಳಿದುಕೊಂಡರಲ್ಲದೆ ಅನುಮಾನಗಳನ್ನು ಪ್ರಶ್ನೆಗಳನ್ನು ಕೇಳುವ ಮೂಲಕ ಪರಿಹರಿಸಿಕೊಂಡರು.
ನಂತರ ಡಿ.ಎಡ್ ಕನ್ನಡ ಪಠ್ಯದ ಒಂದೊಂದು ಅಂಶಗಳನ್ನು ಜಿಲ್ಲಾವಾರು ವಿಂಗಡಿಸಿ ಆಭ್ಯಸಿಸಲು ಸಮಯ ನಿಡಲಾಯಿತು. ಹಾಗೆ ಟೈಪಿಂಗ್ ನ್ನು ಸ್ವಯಂ ಕಲಿಯಲು ಸಹಾಯವಅಗುವ ಎಜುಬುಂಟುವಿನಲ್ಲಿರುವ ಟಕ್ಸ್ಟ್ ಟೈಪಿಂಗ್ ಅನ್ವಯಕದ ಮೂಲಕ ಟೈಪಿಂಗ್ ಕಲಿಸಲಾಯಿತು. ಇದರಲ್ಲಿ ಕಲಿಕಾರ್ಥಿಗಳು ಉತ್ಸಾಹದಿಂದ ಟೈಪಿಂಗ್ ಅಭ್ಯಾಸ ಮಾಡಿದರು. ನಂತರ ಜಿಮೇಲ್ ತಾಣದಲ್ಲಿ ಮೇಲ್ ಖಾತೆ ತೆರೆಯುವ ವಿಧಾನವನ್ನು ಹಂತ ಹಂತವಾಗಿ ಪ್ರಾತ್ಯಕ್ಷಿಕತೆಯ ಮೂಲಕ ಕಲಿಸಿದರಲ್ಲದೆ. ಇ ಮೇಲ್ ಖಾತೆ ಇಲ್ಲದವರ ಖಾತೆ ತೆರೆದು ಉಪಯೋಗಿಸುವ ವಿಧಾನವನ್ನು ತಿಳಿಸಿದರು. ಮುಂದುವರೆದು ಮೇಲ್ ರಚಿಸಿ ಕಳುಹಿಸುವ ಬಗೆ, ಮೇಲ್ ತೆರೆದು ನೋಡುವ ಬಗೆ ಮುಂತಾದವನ್ನು ತಿಳಿಸಿದರು. ಕಲಿಕಾರ್ಥಿಗಳು ಪರಸ್ಪರ ಮೇಲ್ ಕಳುಹಿಸುವ ಮೂಲಕ ದಿನದ ಕಲಿಕೆಯನ್ನು ಖಾತ್ರಿಗೊಳಿಸಿದರು. ನಾಳೆಗೆ ಡಾ. ಕುಮಾರ ಸ್ವಾಮಿಯವರ ಡಿ.ಎಡ್ ಭಾಷಾ ಕಲಿಕೆಯ ಪಠ್ಯವನ್ನು ಓದಿಕೊಂಡು ಬರುವ ಕಾರ್ಯವನ್ನು ಜಿಲ್ಲಾ ತಂಡಗಳಿಗೆ ನೀಡುವ ಮೂಲಕ ಈ ದಿನದ ತರಬೇತಿ ಕೊನೆಗೊಂಡಿತು.

ವರದಿ ರಚನೆ: ದಕ್ಷಿಣ ಕನ್ನಡ ತಂಡ

ಮೂರನೇ ದಿನದ ವರದಿ

ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ ದಿನಾಂಕ :೨೧-೧೧ ೨೦೧೪

ಡಿ.ಎಸ್.ಇ.ಆರ್.ಟಿ ಯ ಪ್ರಾಯೋಜಕತ್ವದ ಅಡಿಯಲ್ಲಿ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ರಾಜರಾಜೇಶ್ವರಿ ನಗರ, ಬೆಂಗಳೂರು ಇಲ್ಲಿ ನಡೆಯುತ್ತಿರುವ ಕನ್ನಡ ಭಾಷಾ ಶಿಕ್ಷಕರ ವೇದಿಕೆಯ ಮೂರನೇ ದಿನದ ವರದಿಯನ್ನು ನಿಮ್ಮ ಮುಂದಿಡಲು ನಮಗೆ ಸಂತೋಷವೆನಿಸುತ್ತದೆ . ದಿನಾಂಕ ೨೦-೧೧-೨೦೧೪ ಗುರುವಾರದ ಮುಂಜಾನೆ ೯.೩೦ ಕ್ಕೆ ಸರಿಯಾಗಿ ದಕ್ಷಿಣಕನ್ನಡ ಜಿಲ್ಲೆ ತಂಡದ ಪ್ರತಿನಿಧಿಯಾಗಿ ಶ್ರೀ ಶಮಂತ್ ರವರು ಕಾರ್ಯಾಗಾರದ ಎರಡನೇ ದಿನದ ವರದಿಯನ್ನು ಮೃದು ಸಾಮಗ್ರಿ ಬಳಸಿ ಕಾರ್ಯಾಗಾರದ ಶಿಬಿರಾರ್ಥಿಗಳಿಗೆ ತಲುಪುವಂತೆ ಮಂಡಿಸಿದರು. ಆರಂಭದಲ್ಲಿ ಶಿಬಿರಾರ್ಥಿಗಳಿಂದ ಸ್ವರಚಿತ ಕವನಗಳು ವಾಚಿಸಲ್ಪಟ್ಟವು.ಶ್ರೀಯುತ ವೆಂಕಟೇಶ್ , ರಾಕೇಶ್ ಹಾಗೂ ಸೀಮಾರವರು ಮೂರನೇ ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.ಆರಂಭದಲ್ಲಿ ಹಿಂದಿನ ದಿನದ ಹಿಮ್ಮಾಹಿತಿಯನ್ನು ಶಿಬಿರಾರ್ಥಿಗಳಿಂದ ಪಡೆಯಲಾಯಿತು. ಶ್ರೀ ರಾಕೇಶರವರು gmail ಮತ್ತು mailನಿಂದ ಮಾಹಿತಿಗಳನ್ನು ಗುಂಪಾಗಿ ಕಳುಹಿಸುವ ಬಗ್ಗೆ ಉಪಯುಕ್ತ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಿದರು.ತದನಂತರ D.I.E.T.ಮಂಗಳೂರಿನಲ್ಲಿರುವ ಶ್ರೀಕುಮಾರಸ್ವಾಮಿಯವರೊಂದಿಗೆ ಸ್ಕೈಪ್ ಮೂಲಕ ಕನ್ನಡ ಭಾಷಾ ಬೋಧನೆ ಹಾಗೂ ಸಮಸ್ಯೆಗಳ ಕುರಿತು ಮುಖಾಮುಖಿಯಾಗಿ ಸಮಾಲೋಚನೆ ನಡೆಸಲಾಯಿತು.ಸಮೂಹ ಮಾಧ್ಯಮಗಳ ಮೂಲಕ ಆಲೋಚನೆ ಹಾಗೂ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳಲು ಹೇಗೆ ಸುಲಭ ಸಾಧ್ಯ ಎಂಬುದನ್ನು ಮನದಟ್ಟು ಮಾಡಿತು. ಭೋಜನ ವಿರಾಮದ ನಂತರ ಕಾರ್ಯಾಗಾರಕ್ಕೆ ಸರ್ವ ಶಿಕ್ಷಾ ಅಭಿಯಾನ ಬೆಂಗಳೂರು ಇಲ್ಲಿನ ಹಿರಿಯ ಪ್ರೋಗ್ರಾಂ ಅಧಿಕಾರಿ ಶ್ರೀ ಜಯರಾಮ್ ಇವರು ಭೇಟಿ ನೀಡಿದರು .ನಮ್ಮೊಂದಿಗೆ ಪರಸ್ಪರ ಸಂವಾದ ನಡೆಸುತ್ತಾ ಮನುಷ್ಯನ ಮನೋಭಿಲಾಷೆಗಳು ,ಗುರಿಗಳು , ವೃತ್ತಿ ಕೌಶಲ್ಯ ಈ ಕುರಿತು ಪ್ರಚಲಿತ ಉದಾಹರಣೆಗಳೊಂದಿಗೆ ವಿವರಣೆ ನೀಡಿದರು . ಚಹ ವಿರಾಮದ ನಂತರ ಶ್ರೀಯುತ ರಾಕೇಶ್ರವರು google features ಹಾಗೂ iconಗಳ ಬಗ್ಗೆ ಉಪಯುಕ್ತ ಪ್ರಾತ್ಯಕ್ಷಿಕೆ ನೀಡಿದರು ಹಾಗೂ ಸೂಕ್ತ ಮಾಹಿತಿ ನೀಡಿದರು.ಸಂಜೆ 5.40 ಕ್ಕೆ ಸರಿಯಾಗಿ ಮೂರನೇ ದಿನದ ಕಾರ್ಯಾಗಾರ ಮುಕ್ತಾಯವಾಯಿತು. ಮಂಡನೆ ːಉಡುಪಿ ಜಿಲ್ಲಾ ತಂಡದವರುು

ನಾಲ್ಕು ದಿನದ ವರದಿ

ಕನ್ನಡ ಭಾಷಾ ಸಂಪನ್ಮೂಲ ಶಿಕ್ಷಕರಿಗೂ, ಸಂಪನ್ಮೂಲ ಶಿಕ್ಷಕರಿಗೂ,ಇಲಾಖಾ ಅಧಿಕಾರಿಗಳಿಗೂ ಬೆಳಗಿನ ಶುಭೋದಯಗಳು.

ನಾಲ್ಕನೇ ದಿನದ ವರದಿ ರಚನೆಯ ಹೊಣೆ ಹೊತ್ತಿರುವ ಗಂಡುಮೆಟ್ಟಿದ ನಾಡು, ಏಳುಸುತ್ತಿನಕೋಟೆ ಹೊಂದಿರುವ ಚಿತ್ರದುರ್ಗ ಜಿಲ್ಲೆಯ ತಂಡದವರು ದಿನದ ವರದಿ ರಚಿಸಿದ್ದಾರೆ. ಮೊದಲ ಅವಧಿಯಲ್ಲಿ ಈ ದಿನ ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ತರಬೇತಿ ಆರಂಭವಾಯಿತು. ಆರಂಭದಲ್ಲಿ ಹಿಂದಿನ ದಿನದ ವರದಿಯನ್ನು ಮಿಂಚಂಚೆಯಲ್ಲಿ ಓದಲಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ವೆಂಕಟೇಶ್ ರವರು ಹಿಂದಿನ ದಿನ ಸಂಪನ್ಮೂಲ ಶಿಕ್ಷಕರಾದ ಶ್ರೀ ರಾಕೇಶ್ ಇವರು ಗೂಗಲ್ ಸರ್ಚ್ ಇದರಲ್ಲಿ ನೀಡಿದ ವಿವಿಧ ಐಕಾನ್ ಗಳ ಪರಿಚಯ ಮಾಡಿಸಿದ ಯೂ-ಟೂಬ್, ಗೂಗಲ್ ಡ್ರೈವ್, ಗೂಗಲ್ ಮ್ಯಾಪ್, ಗೂಗಲ್ ಕ್ಯಾಲೆಂಡರ್, ಗೂಗಲ್ ನೀವು ಮುಂತಾದ ಐಕಾನ್ ಗಳನ್ನು ನಮಗೆ ವಹಿಸಿದ ಗಣಕಯಂತ್ರಗಳ ಮೂಲಕ ಸ್ವ ಪರಿಚಯ ಮಾಡಿಕೊಂಡೆವು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ರಾಧ ಮತ್ತು ತಾಂತ್ರಿಕ ಪರಿಣತರ ಶ್ರೀ ನಂದೀಶ್ ಸಹಕರಿಸಿದರು. ಈ ಮಧ್ಯೆ ಅಂತರ್ಜಾಲದ ತಾಂತ್ರಿಕ ಸಮಸ್ಯೆಯಿಂದ ಅಕ್ಷರ ಮುದ್ರಿಸುವ ಟೈಪ್ ರೈಟರ್ ಪರಿಚಯಿಸಲು ತಿಳಿಸಿದರು.ಸಮಯೋಚಿತವಾಗಿ ಎಂ.ಆರ್.ಪಿ ಶಿಕ್ಷಕರು ವಚನ, ಶಿಶುಗೀತೆ, ಕವನ, ಲಾವಣಿ ಹಾಡಿ,ಓದಿ ರಂಜಿಸಿದರು. ಮುಂದಿನ ಅವಧಿಯಲ್ಲಿ ಶ್ರೀ ವೆಂಕಟೇಶ್ (KOER) ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಕುರಿತು ಪರಿಚಯ ಮಾಹಿತಿ ನೀಡಿದರು. ಈ ಮಧ್ಯೆ ಚಹಾ ವಿರಾಮದಲ್ಲಿ ಈವರೆಗೆ ನಡೆದ ತರಬೇತಿಯ ವಿಷಯಗಳ ಚರ್ಚೆ ನಡೆಸುತ್ತಾ ಚಹಾ ಕುಡಿದೆವು. ವಿವಿಧ ವಿಷಯ ಗುಂಪುಗಳ ಮಾಹಿತಿ ಹಂಚಿಕೆ ಬಗ್ಗೆ ತಿಳಿಸಿದರು. ಸಮಾಜ ವಿಜ್ಞಾನ ಫೋರಂ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಅಂತರ್ಜಾಲದ ಸಾಹೋದಾರಣೆಗಳೊಂದಿಗೆ ವಿವರಿಸಿದರು. ಶ್ರೀ ವೆಂಕಟೇಶ್ ಅನುಭವಿ ಶಿಕ್ಷಕರಂತೆ ತರಗತಿ ನೈಜತೆಗಳೊಂದಿಗೆ ವಿಷಯ ಮಂಡನೆ ಮಾಡಿದ್ದು ತುಂಬಾ ಆಸಕ್ತಿದಾಯಕವಾಗಿತ್ತು. ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇದರಲ್ಲಿ ಕನ್ನಡ ವಿಷಯಕ್ಕೆ ಪೂರಕವಾಗಿ ೮ನೇ ತರಗತಿಯ "ಪರಿಸರ ಸಮತೋಲನ" ಇದನ್ನು ಭಾಷಾ ಪೋರಂನಲ್ಲಿ ಹೇಗೆ ಪೂರಕ ವಿಷಯಗಳನ್ನು ಭರ್ತಿಮಾಡಬಹುದು, ಪರಿಕಲ್ಪನಾ ನಕ್ಷೆ ಏಕೆ ಮತ್ತು ಹೇಗೆ? ಎಂಬುದರ ಬಗ್ಗೆ ಸುದೀರ್ಘ ಚರ್ಚೆ ನಡೆದು ಪರಿಕಲ್ಪನೆಗಳು ಮಕ್ಕಳ ಕಲಿಕೆ ಮೂಡಲು ಹೆಚ್ಚಿನ ಪೂರಕ ಚಟುವಟಿಕೆಗಳು ಅಗತ್ಯ ಎಂಬುದನ್ನು ಚರ್ಚೆಯಲ್ಲಿ ದೀರ್ಘವಾಗಿ ಚರ್ಚಿಸಲಾಯಿತು.ಚರ್ಚೆ ತುಂಬಾ ವಿಷಯಾಧಾರಿತವಾಗಿತ್ತು. ಭಾಷಾ ಕೌಶಲ್ಯಗಳನ್ನು ಫೋರಂನಲ್ಲಿ ಸೇರಿಸುವ ಬಗ್ಗೆ ಚರ್ಚೆ ನಡೆಯಿತು. ನಂತರದ ಅವಧಿಯಲ್ಲಿ ಶ್ರೀ ರಾಕೇಶ್ ಇಮೇಜ್ ಗಳನ್ನು ಕಾಪಿ ಪೇಸ್ಟ್ ಹೇಗೆ ಮಾಡುವುದು ಎಂಬುದನ್ನು ಸಹೋದಾರಣವಾಗಿ ಇಮೇಜ್ ಸಹಿತ ವಿವರಿಸಿದರು. ಚಹ ಅವದಿಯ ನಂತರ IT for Change Leader Guru Sir KEOR ಬಗ್ಗೆ ಅಗತ್ಯ ಮಾಹಿತಿಗಳನ್ನು ಆಯ್ದ ಶಿಕ್ಷಕರಿಗೆ ಜಿಲ್ಲಾವಾರು ಮಾಡುವ ಬಗ್ಗೆ ತಿಳಿಸಿದರು. ಉಳಿದ ಶಿಕ್ಷಕರಿಗೆ ಇಮೇಜ್ ಕಟ್ ಪೇಸ್ಟ್ ಮಾಡುವುದನ್ನು ಕಲಿಕೆಯಲ್ಲಿ ತೊಡಗಿದರು.ವಿವಿಧ ಲಿಬ್ರೆ ಆಫೀಸ್ ಬಗ್ಗೆ ತಿಳಿಸಿದರು. ತರಬೇತಿ ಉತ್ತಮವಾಗಿತ್ತು

ಧನ್ಯವಾದಗಳೊಂದಿಗೆ
ಚಿತ್ರದುರ್ಗದ ಶಿಕ್ಷಕ ತರಬೇತುದಾರರು
ಇಂದ : ಈಶ್ವರಪ್ಪ ಡಿ
ರೇಣುಕಾರಾಧ್ಯ ಜಿ ಎಸ್
ಗಂಗಾಧರಪ್ಪ ಎಸ್ ಬಿ
ಮಂಜುನಾಥ ಬಿ ಕೆ

ಐದನೇ ದಿನದ ವರದಿ

ಮುಂದಿನ ಕಾರ್ಯಯೋಜನೆಗಳು

ಮುಂದಿನ ೨ನೇ ಹಂತದ ಕಾರ್ಯಾಗಾರಕ್ಕೂ ಮುನ್ನ

  1. ಕಂಪ್ಯೂಟರ್ ನಲ್ಲಿ ಐ.ಸಿ.ಟಿ ಪಾಠಗಳನ್ನು ಪ್ರಾಕ್ಟೀಸ್ ಮಾಡುವುದು (Tux Typing, Ubuntu, LibreOffice, Firefox)
  2. ಅಂತರ್ಜಾಲ ಬಳಕೆ ಮತ್ತು ಕೊಯರ್ ಬಳಕೆ ಮಾಡುವುದು . ಕೊಯರ್ ನಲ್ಲಿನ ಉಪಯುಕ್ತ ವೆಬ್ ತಾಣಗಳಿಗೆ ಬೇಟಿ ನೀಡುವುದು
  3. kannadastf@googlegroups.com ಮೂಲಕ ಪ್ರತಿದಿನ ಇಮೇಲ್ ನೋಡುವುದು ಮತ್ತು ಕಳುಹಿಸುವುದು (Brush your teeth at least once every day)
  4. ಈ ಕೆಳಗಿನ ಡಾಕ್ಯುಮೆಂಟ್ ತಯಾರಿಸಿ ಇಮೇಲ್ ನಲ್ಲಿ ಹಂಚಿಕೊಳ್ಳುವುದು
    1. ಆಯ್ಕೆ ಮಾಡಿಕೊಂಡಿರುವ ವಿಷಯಗಳಿಗೆ ಸಂಪನ್ಮೂಲ ಕ್ರೋಢೀಕರಿಸುವುದು
      1. ಪಠ್ಯ ಸಂಪನ್ಮೂಲ ರಚಿಸುವುದು
      2. ಪೋಟೋಗಳನ್ನು ಸೇರಿಸುವುದು
      3. ಮೊಬೈಲ್ ಮೂಲಕ ಪದ್ಯಗಳನ್ನು ಅಥವಾ ಪಠ್ಯಸಂಭಾಷಣೆಯನ್ನು ರೆಕಾರ್ಡ್ ಮಾಡುವುದು.
    2. ಭಾಷೆಗೆ ಸಂಬಂಧಿಸಿದ ಲೇಖನಗಳನ್ನು ಓದುವುದು
  5. ಸ್ವಂತ ಲ್ಯಾಪ್‌ಟಾಪ್ ಕೊಂಡುಕೊಳ್ಳಲು Buy_a_laptop_or_netbook ವೀಕ್ಷಿಸಿ. I_want_to
  6. ಸ್ಮಾರ್ಟ್ ಪೋನ್ ಕೊಂಡುಕೊಳ್ಳಲು website ಸ್ಮಾರ್ಟ್ ಪೋನ್ ಕೊಂಡುಕೊಳ್ಳಲು ಇಲ್ಲಿ ವೀಕ್ಷಿಸಿ . ಆಂಡ್ರಾಯಿಡ್ ಪೋನ್ ಮೂಲಕ ನೀವು ಇಮೇಲ್ ಮತ್ತು ಇಂಟರ್‌ನೆಟ್ ಬಳಸಬಹುದು
  7. ಆಡಿಯೋ ಮತ್ತು ವೀಡಿಯೋ ಸಂಪನ್ಮೂಲ ರಚನೆ - ಆಯ್ದ ಶಿಕ್ಷಕರ ನೇತೃತ್ವದಲ್ಲಿ ಪ್ರತಿ ಜಿಲ್ಲೆಯಿಂದ
  8. ಜಯರಾಮು ಸರ್ ರವರಿಗೆ ಪತ್ರ ರವಾನೆ
    1. ಕಾರ್ಯಗಾರಕ್ಕೂ ಮುಂಚಿನ ಮನಸ್ಥಿತಿ ಐ.ಸಿ.ಟಿ ಬಗ್ಗೆ
    2. ಕಾರ್ಯಾಗಾರದಲ್ಲಿನ ಕಲಿಕೆ
    3. ಸಂಪನ್ಮೂಲ ವ್ಯಕ್ತಿಯಾಗಿ ಮುಂದಿನ ಯೋಜನೆ
    4. ತರಗತಿ ಶಿಕ್ಷಕನಾಗಿ ಮುಂದಿನ ಯೋಜನೆ

.

    1. ಮುಂದಿನ ಹಂತದ ತರಬೇತಿಗೆ ಬರುವ ಮೊದಲು ಈ ಮೇಲಿನ ಕಾರ್ಯಗಳನ್ನು ಪೂರ್ಣಗೊಳಿಸಿ.

ಸಾರ್ವಜನಿಕ ತಂತ್ರಾಂಶ ಭಿತ್ತಿಚಿತ್ರ