"ಸೇತುಬಂಧ ಕಾರ್ಯಕ್ರಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೯ ನೇ ಸಾಲು: ೯ ನೇ ಸಾಲು:
 
===ತರಗತಿಯಲ್ಲಿ ಮಾಡುವ ಚಟುವಟಿಕೆಗಳು===
 
===ತರಗತಿಯಲ್ಲಿ ಮಾಡುವ ಚಟುವಟಿಕೆಗಳು===
 
===ಗುಂಪು-೩ರ ಚಟುವಟಿಕೆಗಳು===
 
===ಗುಂಪು-೩ರ ಚಟುವಟಿಕೆಗಳು===
 +
ಗುಂಪು ೩ ರಲ್ಲಿ ವರ್ಣಾಮಾಲೆಯ ಪರಿಚಯ ಇಲ್ಲದ ಮಕ್ಕಳನ್ನು ನಾವು ನೋಡುತ್ತೇವೆ ಇವರಿಗೆ ನಮ್ಮ ಸಹಾಯ  ಬಹಳ ಬೇಕಾಗಿದೆ ಮತ್ತು ಮುಖ್ಯವಾಗಿ ಇವರಿಗೆ  ಕಲಿಯಲು ಹೆಚ್ಚಿನ ಅವಕಾಶವನ್ನು  ನೀಡಲಾಗುತ್ತಿದೆ ಮತ್ತು  ಇವರಿಗಾಗಿ ಮಾಡಬೇಕಾದ ಚಟುವಟಿಕೆಗಳು. ವರ್ಣಮಾಲೆ ಓದುವುದು ಮತ್ತು ಬರೆಯುವುದು, ಪ್ರತಿ ಹಂತದಲ್ಲಿ ಬರುವ ಅಕ್ಷರಗಳಿಂದ  ಪದಗಳ ರಚನೆ, ಅಕ್ಷರ ಮತ್ತು  ಪದಗಳನ್ನು ಬಿಡಿಸಿ ಬರೆಯುವುದು. ಪ್ರತೀ ಅಕ್ಷರಗಳನ್ನು ಗುರುತಿಸಿ ಪದ ರಚನೆ ಮಾಡುವುದು. ಗುಣಿತಾಕ್ಷರದ ಮತ್ತು ಒತ್ತಕ್ಷರದ  ಪದಗಳು  ಮತ್ತು  ಬಿಡಿಸಿ ಬರೆಯುವುದು.
 +
 
#[http://karnatakaeducation.org.in/KOER/images1/3/3f/ಕನ್ನಡ_ಪರಿಹಾರ_ಬೋಧನೆ_ಚಟುವಟಿಕೆಗಳು_Group_3.odt ಗುಂಪು ೩ ರ ಚಟುವಟಿಕೆಗಳಿಗೆ ಮಾಡುವ ಚಟುವಟಿಕೆಗಳು]
 
#[http://karnatakaeducation.org.in/KOER/images1/3/3f/ಕನ್ನಡ_ಪರಿಹಾರ_ಬೋಧನೆ_ಚಟುವಟಿಕೆಗಳು_Group_3.odt ಗುಂಪು ೩ ರ ಚಟುವಟಿಕೆಗಳಿಗೆ ಮಾಡುವ ಚಟುವಟಿಕೆಗಳು]
 
#[http://karnatakaeducation.org.in/KOER/images1/8/80/KannadaAlphabetChart.pdf ವರ್ಣಮಾಲೆ ಕಾರ್ಡ]
 
#[http://karnatakaeducation.org.in/KOER/images1/8/80/KannadaAlphabetChart.pdf ವರ್ಣಮಾಲೆ ಕಾರ್ಡ]

೧೨:೦೪, ೧೭ ನವೆಂಬರ್ ೨೦೧೪ ನಂತೆ ಪರಿಷ್ಕರಣೆ

ಸೇತುಬಂಧ ಕಾರ್ಯಕ್ರಮ

ಬೆಂಗಳೂರು ದಕ್ಷಿಣ ವಲಯ-೩ ರಲ್ಲಿ ಶಿಕ್ಷಕರ ಕಲಿಕಾ ಸಮುದಾಯದ ಕಾರ್ಯಕ್ರಮದ ಅಡಿಯಲ್ಲಿ ಕನ್ನಡ ಶಿಕ್ಷಕರಿಗೆ ೨ದಿನದ ಕಾರ್ಯಾಗಾರವನ್ನು ಮಾಡಲಾಯಿತು.ಕಾರ್ಯಾಗಾರದಲ್ಲಿ ಶಿಕ್ಷಕರು ತಮ್ಮ ತರಗತಿಯ ಅನುಭವ ಅದರಲ್ಲಿ ತರಗತಿಯಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಅದಕ್ಕೆ ಅವರು ಕಂಡುಕೊಂಡ ಪರಿಹಾರಗಳ ಬಗ್ಗೆ ಚರ್ಚೆ ಮಾಡಲಾಯಿತು. ಮುಖ್ಯವಾಗಿ ಶಿಕ್ಷಕರು ತಾವು ತರಗತಿಯಲ್ಲಿ ಎದುರಿಸುವ ಸಮಸ್ಯೆ ಮಕ್ಕಳು ೮ ನೇ ತರಗತಿಗೆ ಬರುವಾಗ, ೮ನೇ ತರಗತಿಗೆ ಇರಬೇಕಾದ ಸಾಮರ್ಥ್ಯಗಳನ್ನು ಪಡೆದಿರುವುದಿಲ್ಲ, ಆ ಕಾರಣದಿಂದ ಮಕ್ಕಳಿಗೆ ನಾವು ಸೇತುಬಂಧ ಕಾರ್ಯಕ್ರಮವನ್ನು ಒಂದು ತಿಂಗಳ ಕಾರ್ಯಕ್ರಮದ ನಂತರವು ೮ನೇ ತರಗತಿಗೆ ಇರಬೇಕಾದ ಸಾಮರ್ಥ್ಯಗಳನ್ನು ಮಕ್ಕಳು ಪಡೆದಿಲ್ಲದಿರಬುಹುದು, ಅವರಿಗಾಗಿ ಪ್ರತ್ಯೇಕ ತರಗತಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಬೆಂಗಳೂರು ದಕ್ಷಿಣ ವಲಯದ ೩ ಶಿಕ್ಷಕರ ಕಲಿಕಾ ಸಮೂದಾಯದ ೨ ಶಾಲೆಗಳಲ್ಲಿ ಪ್ರತಿವಾರ ಒಂದು ದಿನ ಶಾಲೆಯ ತರಗತಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ.,ಎರಡು ಶಾಲೆಗಳಲ್ಲಿ ೮ ನೇ ತರಗತಿಯನ್ನು ನಿರ್ವಹಿಸುವ ಶಿಕ್ಷಕರಿಗೆ ಆ ತರಗತಿಗೆ ಬೇಕಾದ ಸಂಪನ್ಮೂಲಗಳನ್ನು ಒದಗಿಸಲು ಸಹಾಯ ಮಾಡುಲಾಗುತ್ತಿದೆ. ಅದರಲ್ಲಿ ಮುಖ್ಯವಾಗಿ ಕಂಡು ಬಂದಂತೆ ಕಾರ್ಯಾಗಾರದಲ್ಲಿ ಹಂಚಿಕೊಂಡಂತೆ ಮಕ್ಕಳು ವಿವಿಧ ಕಲಿಕಾ ಮಟ್ಟವನ್ನು ಹೊಂದಿದ್ದಾರೆ, ಎಲ್ಲಾರಿಗೂ ಒಂದೇ ರೀತಿಯಲ್ಲಿ ಬೋಧನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಆಕಾರಣದಿಂದ ಎಲ್ಲಾ ಮಕ್ಕಳ ಸಾಮರ್ಥ್ಯವನ್ನು ತಿಳಿಯಲು ಒಂದು ಪೂರ್ವ ಪರೀಕ್ಷೆಯನ್ನು ಮಾಡಲಾಯಿತು.

ಪೂರ್ವ ಪರೀಕ್ಷೆ ಮಾಡಲು ಬಳಸಿದ ಸಾಮಾಗ್ರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಮೌಲ್ಯಮಾಪನ

ಮಕ್ಕಳ ಸಾಮರ್ಥ್ಯಗಳ ಆಧಾರದ ಮೇಲೆ ಅವರನ್ನು ೩ ಗುಂಪುಗಳಾಗಿ ವಿಂಗಡಣೆ ಮಾಡಿಕೊಳ್ಳಲಾಗಿದೆ, ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರಿಗೆ ಚಟುವಟಿಕೆಗಳನ್ನು ರಚನೆ ಮಾಡಲಾಗುತ್ತದೆ, ಮೊದಲನೆ ಗುಂಪಿನ ಮಕ್ಕಳಿಗೆ ಸೃಜನಶೀಲ ಮತ್ತು ಪಠ್ಯಪುಸ್ತಕಕ್ಕೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ಮಾಡಲಾಗುತ್ತದೆ, ಗುಂಪು ೨ ಕ್ಕೆ ಪಠ್ಯಪುಸ್ತಕದ ಚಟುವಟಿಕೆಗಳನ್ನು ಮಾಡಲಾಗುವುದು ಮತ್ತು ಗುಂಪು ೩ ಮಕ್ಕಳಿಗೆ ವರ್ಣಮಾಲೆ, ಗುಣಿತಾಕ್ಷರ ಮತ್ತು ಒತ್ತಕ್ಷರಗಳ ಕಲಿಕೆಯನ್ನು ಮಾಡಲು ಹೆಚ್ಚು ಒತ್ತುಕೊಡಲಾಗುತ್ತದೆ ಅದಕ್ಕೆ ಸಂಬಂಧಿಸಿದಂತೆ ಅವರಿಗೆ ಪ್ರತ್ಯೇಕವಾದ ಚಟುವಟಿಕೆಗನ್ನು ಮಾಡಲಾಗುತ್ತಿದೆ. ಪರಿಹಾರ ಬೋಧನೆಯ ಟಿಪ್ಪಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತರಗತಿಯಲ್ಲಿ ಮಾಡುವ ಚಟುವಟಿಕೆಗಳು

ಗುಂಪು-೩ರ ಚಟುವಟಿಕೆಗಳು

ಗುಂಪು ೩ ರಲ್ಲಿ ವರ್ಣಾಮಾಲೆಯ ಪರಿಚಯ ಇಲ್ಲದ ಮಕ್ಕಳನ್ನು ನಾವು ನೋಡುತ್ತೇವೆ ಇವರಿಗೆ ನಮ್ಮ ಸಹಾಯ ಬಹಳ ಬೇಕಾಗಿದೆ ಮತ್ತು ಮುಖ್ಯವಾಗಿ ಇವರಿಗೆ ಕಲಿಯಲು ಹೆಚ್ಚಿನ ಅವಕಾಶವನ್ನು ನೀಡಲಾಗುತ್ತಿದೆ ಮತ್ತು ಇವರಿಗಾಗಿ ಮಾಡಬೇಕಾದ ಚಟುವಟಿಕೆಗಳು. ವರ್ಣಮಾಲೆ ಓದುವುದು ಮತ್ತು ಬರೆಯುವುದು, ಪ್ರತಿ ಹಂತದಲ್ಲಿ ಬರುವ ಅಕ್ಷರಗಳಿಂದ ಪದಗಳ ರಚನೆ, ಅಕ್ಷರ ಮತ್ತು ಪದಗಳನ್ನು ಬಿಡಿಸಿ ಬರೆಯುವುದು. ಪ್ರತೀ ಅಕ್ಷರಗಳನ್ನು ಗುರುತಿಸಿ ಪದ ರಚನೆ ಮಾಡುವುದು. ಗುಣಿತಾಕ್ಷರದ ಮತ್ತು ಒತ್ತಕ್ಷರದ ಪದಗಳು ಮತ್ತು ಬಿಡಿಸಿ ಬರೆಯುವುದು.

  1. ಗುಂಪು ೩ ರ ಚಟುವಟಿಕೆಗಳಿಗೆ ಮಾಡುವ ಚಟುವಟಿಕೆಗಳು
  2. ವರ್ಣಮಾಲೆ ಕಾರ್ಡ
  3. ಅಭ್ಯಾಸ ಪತ್ರಿಕೆ
  4. Unnamed.jpgPicture-sequence-5.pngPicture-sequence-9.png

ಗುಂಪು-೨ರ ಚಟುವಟಿಕೆಗಳು

ಗುಂಪು ೨ ರಲ್ಲಿರುವ ಮಕ್ಕಳಿಗೆ ಮುಖ್ಯವಾಗಿ ಪಠ್ಯಪುಸ್ತಕವನ್ನು ಆಧಾರವಾಗಿ ಇಟ್ಟುಕೊಂಡು ಚಟುವಟಿಕೆಗಳನ್ನು ಮಾಡಲಾಗುತ್ತದೆ.

  1. ಪಠ್ಯಪುಸ್ತಕದಲ್ಲಿ ಮಾಡಬಹುದಾದ ಚಟುವಟಿಕೆಗಳು
  2. ಚಿತ್ರಸರಣಿ
  3. ಜೋಡಿಪದಗಳು

ಗುಂಪು-೧ರ ಚಟುವಟಿಕೆಗಳು

ಗುಂಪು ೧ ರಲ್ಲಿರುವ ಮಕ್ಕಳನ್ನು ಗುಂಪು ರಲ್ಲಿರುವ ಮಕ್ಕಳಿಗೆ ಕಲಿಕೆಗೆ ಸಹಾಯ ಮಾಡುವಂತೆ ತಿಳಿಸಬಹುದು ಮತ್ತು ಗುಂಪು ೧ ರಲ್ಲಿರುವ ಮಕ್ಕಳಿಗೆ ಸೃಜನಾತ್ಮಕ ಚಟುವಟಿಕೆಗಳನ್ನು ನೀಡುವುದರಿಂದ ಹೆಚ್ಚು ಕ್ರಿಯಾಶಿಲರಾಗುವಂತೆ ಮಾಡಬಹುದು.

  1. ಗಾದೆಗಳು
  2. ಸಣ್ಣ ಕಥೆಗಳು
  3. ಚಿತ್ರಗಳ ನಡುವಿನ ವ್ಯತ್ಯಾಸ ಗುರುತಿಸಿ